ಧಾರ್ಮಿಕ ಗ್ರಂಥಗಳಲ್ಲಿ ಉಲ್ಲೇಖಗೊಂಡಿರುವ ಏಕದೆವತ್ವ ಹಾಗೂ ಪ್ರವಾದಿತ್ವವನ್ನು ತುಲನಾತ್ಮಕವಾಗಿ ಮುಂದಿಡಲು ಹಾಗೂ ಈ ವಿಷಯದಲ್ಲಿ ಅವುಗಳ ನಿಲುವನ್ನು ಸ್ಪಷ್ಟಗೊಳಿಸಲು ಉಪನ್ಯಾಸಕ ಪ್ರಯತ್ನಿಸಿದ್ದಾರೆ. ಇಸ್ಲಾಂ ಮಾತ್ರವೇ ಸತ್ಯವೆಂಬುದಕ್ಕೆ ಅವರು ಪುರಾವೆಗಳನ್ನು ಸಮರ್ಪಿಸುತ್ತಾರೆ ಹಾಗೂ ಇದರ ಮೂಲಕ ಮಾತ್ರ ವ್ಯಕ್ತಿ ಮತ್ತು ಸಮಾಜ ರಕ್ಷಣೆ ಹೊಂದಲು ಸಾಧ್ಯ.
ಇಲ್ಮ್ ಕಲಿಯುವವರು ಮತ್ತು ಸಜ್ಜನರು ಸೇರಿದಂತೆ ಪಜ್ರ್ ನಮಾಝನ್ನು ಜಮಾಅತ್ ಆಗಿ ನಿರ್ವಹಿಸಲು ಆಸಕ್ತಿ ತೋರಿಸದವರಿಗೆ ತಾವು ಹೇಳುವ ಮಾರ್ಗದರ್ಶಕ ಮಾತೇನು ಎಂಬ ಪ್ರಶ್ನೆಗೆ ಶೈಖ್ ನೀಡುವ ಉತ್ತರವನ್ನು ಈ ವೀಡಿಯೋ ಒಳಗೊಂಡಿದೆ.
ಶಫಾಅತ್ ಸಿಗಲು ನಾವು ಯಾರ ಹತ್ತಿರ ಬೇಡಬೇಕು ? ಮುಅಜಿಝತ್ ಅಲ್ಲಾಹನು ಅವನ ಪ್ರವಾದಿಗಳಿಗೆ ಬೆಂಬಲ ನೀಡಲಿಕ್ಕಾಗಿ ಪ್ರಕಟವಾಗುವ ಅದ್ಭುತ ಕಾರ್ಯಗಳಾಗಿವೆ. ಆದರೆ ಪುಣ್ಯವಂತರಾದ ಮಹಾನ್ ವ್ಯಕ್ತಿಗಳಿಗೆ ಆದರದ ರೂಪದಲ್ಲಿ ಅಲ್ಲಾಹು ನೀಡುವಾಗ ಅದು ಕರಾಮತ್ ಎಂದು ಕರೆಯಲಾಗುತ್ತದೆ. ಕರಾಮತ್ ಎಂಬುದು ಅದು ಯಾರಿಗೆ ಪ್ರಕಟವಾಯಿತೋ ಅವರು ರಹಸ್ಯವಾಗಿಡಬೇಕಾದ ಸಂಗತಿಯಾಗಿದೆ. ಸಹಾಬಿಗಳಿಗೆ ಕರಾಮತ್ ನೀಡಿದ್ದರೂ ಕೂಡಾ ಅದು ನಮಗೆ ಅವರೊಂದಿಗೆ ಪ್ರಾರ್ಥಿಸುವುದಕ್ಕೆ ಪುರಾವೆಯಲ್ಲ . ಅಲ್ಲಾಹನು ಎಲ್ಲಿದ್ದಾನೆ ? ಮುಂತಾದ ವಿಷಯಗಳನ್ನು ಕುರ್ ಆನ್ ಮತ್ತು ಹದೀಸ್ ಗಳ ಆಧಾರದಲ್ಲಿ ವಿವರಿಸುವ ಭಾಷಣ.
ಪ್ರಸ್ತುತ ಉಪನ್ಯಾಸದಲ್ಲಿ ಸನ್ಮಾರ್ಗದ ಬಗ್ಗೆ ಮಾತನಾಡುವ ಉಪನ್ಯಾಸಕರು ಅದನ್ನು ಜತನದಿಂದ ಕಾಪಾಡಿಕೊಳ್ಳುವಂತೆ ಉಪದೇಶಿಸುತ್ತಾರೆ. ಇದನ್ನು ಕುಟುಂಬ ಮಹಿಮೆಯಿಂದಲೂ ಸಂಪತ್ತಿನಿಂದಲೂ ಪಡೆಯಲಿಕ್ಕೆ ಆಗುವುದಿಲ್ಲ. ಇದನ್ನು ಪಡೆದರೆ ಮಾತ್ರ ಸ್ವರ್ಗಕ್ಕೆ ಹೋಗಬಹುದು ಎಂದು ಉದಾಹರಣೆಗಳ ಮೂಲಕ ಖುರ್ ಆನ್ ಮತ್ತು ಸುನ್ನತ್ ನ ಪುರಾವೆಗಳ ಮೂಲಕ ಸಮರ್ಥಿಸುತ್ತಾರೆ.
ಕುರ್ ಆನ್ ನಲ್ಲಿರುವ ಅನೇಕ ವೈಜ್ಞಾನಿಕ ಸತ್ಯ ಸಂಗತಿಗಳನ್ನು ಆಧುನಿಕ ವಿಜ್ಞಾನವು ದೃಢೀಕರಿಸಿದೆ ಮತ್ತು ಈ ಸತ್ಯ ಸಂಗತಿಗಳು ಮುಹಮ್ಮದ್(ಸ)ರಿಗೆ ಸೃಷಿಕರ್ತನಾದ ಅಲ್ಲಾಹನಿಂದ ಮಾತ್ರ ಲಭ್ಯವಾಗಿರಲು ಸಾಧ್ಯವೆಂದು ಆಧುನಿಕ ವಿಜ್ಞಾನಿಗಳು ಒಪ್ಪಿಕೊಳ್ಳುವುದನ್ನು ಈ ವೀಡಿಯೋ ವಿವರಿಸುತ್ತದೆ.
ಅಲ್ಲಾಹನ ಬಳಿ ಅತ್ಯುತ್ತಮನಾದ ವ್ಯಕ್ತಿ ಯಾರು ? ಮಾತಾಪಿತರೊಂದಿಗೆ ಹೇಗೆ ವರ್ತಿಸಬೇಕು ಅನಾಥರ ಪರಿಪಾಲನೆಯ ಕುರಿತು ಮತ್ತು ಪುರಾಣಗಳಲ್ಲಿಯ ಏಕ ದೈವತ್ವದ ಪ್ರಸ್ತಾಪ , ಇಸ್ಲಾಮಿನಲ್ಲಿ ಸಹೋದರತೆ ಹಾಗೂ ಬಾಂಧವ್ಯ ಬೆಳೆಸುವ ವಿವಿಧ ವಿಷಯಗಳ ಕುರಿತ ಭಾಷಣ.
ಈ ದೃಶ್ಯ ವಸ್ತುವಿನಲ್ಲಿ ಒಬ್ಬ ಹಿಂದೂ ಸಹೋದರ ತಾನು ಸತ್ಯದ ಮಾರ್ಗದ ಅನ್ವೇಷಣೆಗೆ ಹಾಗೂ ಇಸ್ಲಾಮಿನ ಕುರಿತು ಅಧ್ಯಯನ ನಡೆಸಲು ಕಾರಣವಾದ ಮತ್ತು ಇಸ್ಲಾಂ ಸ್ವೀಕಾರ ಮಾಡಿದ ಕಥೆಯು ಒಳಗೊಂಡಿದೆ. ಮುಂದೆ ಅವರು ಇಸ್ಲಾಮೀ ಪ್ರಬೋಧಕನಾಗಿ ಬಿಟ್ಟರು.