ಯಾರು ಅಲ್ಲಾಹನನ್ನು ರಬ್ಬ್ ಆಗಿ, ಇಸ್ಲಾಮನ್ನು ದೀನ್ ಆಗಿ ಮತ್ತು ಮುಹಮ್ಮದ್(ಸ)ರವರನ್ನು ಪ್ರವಾದಿಯಾಗಿ ತೃಪ್ತಿಪಡುತ್ತಾನೋ ಅವನು ಈಮಾನಿನ ರುಚಿಯನ್ನು ಆಸ್ವಾದಿಸುತ್ತಾನೆ ಎಂಬುದರ ವಿವರಣೆ
ಈ ಲೇಖನವು ಮನುಷ್ಯ ಜೀವದ ಪ್ರಾಮುಖ್ಯತೆ, ಇಸ್ಲಾಮಿನ ಯುದ್ಧ ನೀತಿ, ಜಿಹಾದಿನ ಬಗ್ಗೆಯಿರುವ ತಪ್ಪುಕಲ್ಪನೆಗಳು, ಸಹಿಷ್ಣುತೆಯ ಇಸ್ಲಾಮೀ ಚರಿತ್ರೆ, ಇಸ್ಲಾಮಿನಲ್ಲಿರುವ ವಿಶ್ವಭಾತ್ರತ್ವ ಮೊದಲಾದವುಗಳ ಬಗ್ಗೆ ವಿವರಿಸುತ್ತಾ ಮತ್ತು ಒಬ್ಬ ನಿರಪರಾಧಿಯನ್ನು ಅನ್ಯಾಯವಾಗಿ ಕೊಲ್ಲುವುದು ಸಂಪೂರ್ಣ ಮನುಕುಲವನ್ನು ಕೊಲ್ಲುವುದಕ್ಕೆ ಸಮಾನವಾಗಿದೆಯೆಂಬ ಇಸ್ಲಾಮೀ ತತ್ವವನ್ನು ಎತ್ತಿ ತೋರಿಸುತ್ತಾ ಇಸ್ಲಾಮಿಗೂ ಭಯೋತ್ಪಾದನೆಗೂ ಯಾವುದೇ ಸಂಬಂಧವಿಲ್ಲವೆಂದು ಆಧಾರ ಸಹಿತ ವಿವರಿಸುತ್ತದೆ.
ಲೇಖಕರು ಈ ಕೃತಿಯಲ್ಲಿ ವಿಧಿಯ ವಾಸ್ತವಿಕತೆಯ ಬಗ್ಗೆ ವಿವರಿಸುತ್ತಾ ವಿಧಿಯನ್ನು ಹಳಿಯುವುದು ಅಲ್ಲಾಹನನ್ನು ಹಳಿಯುದಕ್ಕೆ ಸಮ ಎನ್ನುತ್ತಾರೆ. ಕಾರಣ ವಿಧಿಯನ್ನು ನಿರ್ಣಯಿಸುವವನು ಅಲ್ಲಾಹು. ಈ ಜಗತ್ತಿನಲ್ಲಿ ಅವನ ಇಚ್ಛೆ ಮತ್ತು ಅರಿವಿನ ವಿನಾಃ ಏನೂ ಸಂಭವಿಸುವುದಿಲ್ಲ. ಒಳಿತು ಮತ್ತು ಕೆಡುಕು ಎಲ್ಲವೂ ಅಲ್ಲಾಹನ ನಿರ್ಣಯ ಪ್ರಕಾರವೇ ಉಂಟಾಗುತ್ತದೆ. ಪ್ರತಿಯೊಂದರಲ್ಲೂ ಅವನಿಗೆ ಯುಕ್ತಿಯಿದೆ. ಆ ಯುಕ್ತಿಯೇನೆಂದು ತಿಳಿಯಲು ಕೆಲವೊಮ್ಮೆ ನಮಗೆ ಸಾಧ್ಯವಾಗಲಾರದು. ಆದುದರಿಂದಲೇ ವಿಧಿಯನ್ನು ಹಳಿಯುವುದನ್ನು ಇಸ್ಲಾಂ ವಿರೋಧಿಸುತ್ತದೆ.
ಪ್ರವಾದಿ(ಸ)ರಿಗೆ ಸಿಹ್ರ್ ಮಾಡಲಾದ ಘಟನೆಯ ಬಗ್ಗೆ ಉಲಮಾಗಳಿಗಿರುವ ಭಿನ್ನಾಭಿಪ್ರಾಯಗಳು ಮತ್ತು ಪ್ರವಾದಿ(ಸ)ರಿಗೆ ಸಿಹ್ರ್ ಬಾಧಿಸಿಲ್ಲ, ಅದು ಕಟ್ಟುಕಥೆಯಾಗಿದೆಯೆಂದು ಹೇಳುವವರಿಗಿರುವ ಉತ್ತರವನ್ನು ಈ ಲೇಖನವು ಒಳಗೊಂಡಿದೆ.
ಸಲಫಿಯ್ಯತ್ ಎಂದರೇನು? ಸಲಫಿಯ್ಯತ್ ಎಂಬುದು ಒಂದು ವಿಶೇಷ ಪಂಗಡವೇ? ಗುಂಪುಗಾರಿಕೆ ಮಾಡುವುದು ಮತ್ತು ತಮಗೆ ವಿರುದ್ಧವಾಗಿ ಅಭಿಪ್ರಾಯ ಹೊಂದುವವರನ್ನೆಲ್ಲ ಪಥಭ್ರಷ್ಟರೆಂದು ಸಾರುವುದು ಸಲಫಿಯ್ಯತ್ ಆಗಿದೆಯೇ?
ಉಲಮಾಗಳು ಭಿನ್ನಾಭಿಪ್ರಾಯ ಹೊಂದಿರುವ ವಿಷಯಗಳಲ್ಲಿ ಮುಸ್ಲಿಮನೊಬ್ಬನ ನಿಲುವು ಏನಾಗಿರಬೇಕು ಎಂಬ ಮಧ್ಯಮ ಮಾರ್ಗವನ್ನು ಮತ್ತು ಸತ್ಯವನ್ನು ಅರಸುವ ತವಕದಲ್ಲಿ -ದೇಹೇಚ್ಛೆಯನ್ನು ಅನುಸರಿಸಿಯಲ್ಲ- ಇಜ್ತಿಹಾದ್ ಮಾಡಿ ಬಿದ್ ಅತ್ ನಲ್ಲಿ ಬಿದ್ದ ವ್ಯಕ್ತಿಯನ್ನು ನೂತನವಾದಿಯೆಂದು ಕರೆಯಬಾರದು ಎಂಬ ತತ್ವವನ್ನು ಈ ಲೇಖನವು ವಿವರಿಸುತ್ತದೆ.