13 - Ar-Ra'd ()

|

(1) ಅಲಿಫ್ ಲಾಮ್ ಮೀಮ್ ರಾ. ಇವು ದೈವಿಕಗ್ರಂಥದ ಸೂಕ್ತಿಗಳಾಗಿವೆ ಮತ್ತು ನಿಮ್ಮೆಡೆಗೆ ನಿಮ್ಮ ಪ್ರಭುವಿನ ಕಡೆಯಿಂದ ಅವತೀರ್ಣಗೊಳಿಸಿದ್ದೇಲ್ಲವೂ ಸತ್ಯವಾಗಿದೆ. ಆದರೆ ಅಧಿಕÀ ಜನರು ವಿಶ್ವಾಸವಿಡುವುದಿಲ್ಲ.

(2) ಅಲ್ಲಾಹನೆಂದರೆ ನೀವು ನೋಡುವಂತಹ ಸ್ತಂಭಗಳಿಲ್ಲದ ಆಕಾಶಗಳನ್ನು ಮೇಲಕ್ಕೇರಿಸಿದವನು. ಅನಂತರ ಅವನು ವಿಶ್ವಸಿಂಹಾಸನದ ಮೇಲೆ ಆರೋಢನಾದನು. ಅವನೇ ಸೂರ್ಯ ಮತ್ತು ಚಂದ್ರನನ್ನು ಒಂದು ನಿಯಮಕ್ಕೆ ಅಧೀನಗೊಳಿಸಿದನು. ಪ್ರತಿಯೊಂದು ಸಹ ಒಂದು ನಿರ್ದಿಷÀ್ಟ ಅವಧಿಯ ತನಕ ಸಂಚರಿಸುತ್ತಿವೆ. ಅವನೇ ಪ್ರತಿಯೊಂದು ಕಾರ್ಯವನ್ನು ನಿಯಂತ್ರಿಸುತ್ತಾನೆ. ನೀವು ನಿಮ್ಮ ಪ್ರಭುವಿನ ಭೇಟಿಯನ್ನು ದೃಢವಾಗಿ ನಂಬಲೆAದು ತನ್ನ ದೃಷ್ಟಾಂತಗಳನ್ನು ಸ್ಪಷÀ್ಟವಾಗಿ ವಿವರಿಸುತ್ತಾನೆ.

(3) ಅವನೇ ಭೂಮಿಯನ್ನು ವಿಸ್ತಾರಗೊಳಿಸಿದನು ಮತ್ತು ಅದರಲ್ಲಿ ಪರ್ವತಗಳನ್ನು ನದಿಗಳನ್ನು ಉಂಟುಮಾಡಿದನು ಮತ್ತು ಅವನೇ ಪ್ರತಿಯೊಂದು ಬಗೆಯ ಫಲಗಳಲ್ಲಿ ಎರಡು ಜೋಡಿಗಳನ್ನು ಉಂಟುಮಾಡಿದನು. ಅವನು ರಾತ್ರಿಯನ್ನು ಹಗಲಿನ ಮೇಲೆ ಆಚ್ಛಾದಿಸುತ್ತಾನೆ. ನಿಶ್ಚಯವಾಗಿಯೂ ಇದರಲ್ಲಿ ಯೋಚಿಸುವ ಜನರಿಗೆ ಅನೇಕ ದೃಷ್ಟಾಂತಗಳಿವೆ.

(4) ಮತ್ತು ಭೂಮಿಯಲ್ಲಿ ಒಂದಕ್ಕೊAದು ಅಂಟಿಕೊAಡಿರುವ ವಿಭಿನ್ನ ಭೂ ಭಾಗಗಳಿವೆ, ದ್ರಾಕ್ಷಿ ತೋಟಗಳಿವೆ, ಮತ್ತು ಕೃಷಿ ಹೊಲಗಳಿವೆ, ಖರ್ಜೂರದ ಮರಗಳಿವೆ ಮತ್ತು ಅವುಗಳಲ್ಲಿ ಕೆಲವು ಕವಲೊಡೆದ ಮತ್ತು ಇನ್ನು ಕೆಲವು ಕವಲೊಡೆಯದ ಮರಗಳಿವೆ. ಎಲ್ಲವೂ ಒಂದೇ ನೀರಿನಿಂದ ಉಣಿಸಲಾಗುತ್ತವೆ. ಹಾಗು ನಾವು ಕೆಲವನ್ನು ಕೆಲವುಗಳ ಮೇಲೆ ರುಚಿಯಲ್ಲಿ ಶ್ರೇಷ್ಠಗೊಳಿಸುತ್ತೇವೆ. ಖಂಡಿತವಾಗಿಯೂ ಇದರಲ್ಲಿ ವಿವೇಚಿಸುವವರಿಗೆ ಹಲವಾರು ದೃಷ್ಟಾಂತಗಳಿವೆ.

(5) ಇನ್ನು ನೀವು ಆಶ್ಚರ್ಯಪಡುವುದಾದರೆ ವಾಸ್ತವದಲ್ಲಿ ಅವರ ಈ ಮಾತು ಆಶ್ಚರ್ಯಕರವಾಗಿದೆ. "ನಾವು ಮಣ್ಣಾಗಿ ಬಿಟ್ಟ ಬಳಿಕವೂ ನಮ್ಮನ್ನು ಹೊಸದಾಗಿ ಸೃಷ್ಟಿಸಲಾಗುವುದೇ?" ಅವರೇ ತಮ್ಮ ಪ್ರಭುವಿನ ನಿಷÉÃಧ ಕೈಗೊಂಡವರು ಮತ್ತು ಅವರ ಕೊರಳಲ್ಲಿ ಕಡಗಗಳಿರುವವು ಅವರೇ ನರಕವಾಸಿಗಳು. ಅದರಲ್ಲಿ ಅವರು ಶಾಶ್ವತವಾಗಿರುವರು.

(6) ಅವರು (ಸತ್ಯ ನಿಷÉÃಧಿಗಳು) ನಿಮ್ಮಲ್ಲಿ ಒಳಿತಿಗಿಂತ ಮೊದಲೇ ಕೇಡಿಗಾಗಿ ಆತುರಪಟ್ಟುಕೊಳ್ಳುತ್ತಿದ್ದಾರೆ. ನಿಜವಾಗಿಯೂ ಅವರಿಗಿಂತ ಮುಂಚೆ ಇಂತಹವರಿಗೆ ಪಾಠ ಕಲಿಸುವ ಶಿಕ್ಷೆಗಳು ಗತಿಸಿಹೋಗಿವೆ, ನಿಸ್ಸಂಶಯವಾಗಿಯೂ ನಿಮ್ಮ ಪ್ರಭು ಜನರು ಅತಿಕ್ರಮವೆಸಗಿದಾಗಲೂ ಕ್ಷಮೆಯನ್ನು ನೀಡುವವನಾಗಿದ್ದಾನೆ. ನಿಶ್ಚಯವಾಗಿಯೂ ನಿಮ್ಮ ಪ್ರಭು ಅತ್ಯುಗ್ರ ಯಾತನೆಯನ್ನು ಕೊಡುವವನಾಗಿದ್ದಾನೆ.

(7) ಸತ್ಯನಿಷÉÃಧಿಗಳು ಹೇಳುತ್ತಾರೆ; ಅವನ ಮೇಲೆ ಅವನ ಪ್ರಭುವಿನ ಕಡೆಯಿಂದ ಯಾವುದೇ ದೃಷ್ಟಾಂತ ಏಕೆ ಇಳಿಸಲಾಗಿಲ್ಲ ? ವಾಸ್ತವದಲ್ಲಿ ನೀವು ಕೇವಲ ಮುನ್ನೆಚ್ಚರಿಕೆ ನೀಡುವವರಾಗಿರುವಿರಿ ಮತ್ತು ಪ್ರತಿಯೊಂದು ಜನಾಂಗಕ್ಕೂ ಒಬ್ಬ ಮಾರ್ಗದರ್ಶಕನಿದ್ದಾನೆ.

(8) ಪ್ರತಿಯೊಬ್ಬ ಹೆಣ್ಣು ಧರಿಸುವ ಗರ್ಭವನ್ನು ಮತ್ತು ಗರ್ಭಾಶಯಗಳಲ್ಲಾಗುವ ವೃದ್ಧಿಕ್ಷಯಗಳನ್ನು ಅಲ್ಲಾಹನು ಅರಿಯುತ್ತಾನೆ. ಮತ್ತು ಪ್ರತಿಯೊಂದು ವಸ್ತುವು ಅವನ ಬಳಿ ಪ್ರಮಾಣಬದ್ಧವಾಗಿದೆ.

(9) ಗೋಚರ ಮತ್ತು ಅಗೋಚರದ ಜ್ಞಾನಿಯವನು, ಅವನು ಮಹಾನನು, ಉನ್ನತನಾಗಿದ್ದಾನೆ,

(10) ನಿಮ್ಮ ಪೈಕಿ ತನ್ನ ಮಾತನ್ನು ರಹಸ್ಯವಾಗಿಟ್ಟವನು, ಅದನ್ನು ಬಹಿರಂಗಗೊಳಿಸಿದವನು, ರಾತ್ರಿಯಲ್ಲಿ ಅಡಗಿ ಕೊಂಡವನು ಮತ್ತು ಹಗಲಿನಲ್ಲಿ ಸಂಚರಿಸುವವನು ಜ್ಞಾನದ ಮಟ್ಟಿಗೆ ಎಲ್ಲರೂ ಅಲ್ಲಾಹನಿಗೆ ಸಮಾನರಾಗಿದ್ದಾರೆ.

(11) ಪ್ರತಿಯೊಬ್ಬ ಮನುಷÀ್ಯನ ಹಿಂದೆಯೂ ಮುಂದೆಯೂ ಅವನ ಕಾವಲುಗಾರರಾಗಿ ಮಲಕ್‌ಗಳಿದ್ದಾರೆ. ಅವರು ಅಲ್ಲಾಹನ ಆದೇಶದಂತೆ ಅವನ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ವಾಸ್ತವದಲ್ಲಿ ಯಾವುದೇ ಜನತೆಯು ಸ್ವತಃ ತಮ್ಮ ಸ್ಥಿತಿಯನ್ನು ಬದಲಾಯಿಸುವವರೆಗೆ ಅಲ್ಲಾಹನು ಅವರ ಸ್ಥಿತಿಯನ್ನು ಬದಲಾಯಿಸುವುದಿಲ್ಲ ಮತ್ತು ಅಲ್ಲಾಹನು ಯಾವುದೇ ಜನತೆಗೆ (ಅವರ ದುಷÀ್ಕರ್ಮಗಳ ನಿಮಿತ್ತ) ಶಿಕ್ಷೆ ನೀಡಲು ಇಚ್ಛಿಸಿದರೆ ಅದನ್ನು ಯಾರಿಂದಲೂ ತಡೆಯಲಾಗದು ಮತ್ತು ಅವನ ಹೊರತು ಅವರಿಗೆ ಯಾವೊಬ್ಬ ಕಾರ್ಯಸಾಧಕನೂ ಇಲ್ಲ.

(12) ಅವನೇ ನಿಮಗೆ ಭಯ ಪಡಿಸಲು ಮತ್ತು ನಿರೀಕ್ಷೆ ಹೊಂದಲು ಮಿಂಚನ್ನು ತೋರಿಸುವವನು ಮತ್ತು ಅವನೇ ಘನೀಕೃತ ಮೇಘಗಳನ್ನು ನಿರ್ಮಿಸುವವನು.

(13) ಮತ್ತು ಗುಡುಗು ಅವನನ್ನು ಸ್ತುತಿಸುವುದರೊಂದಿಗೆ ಅವರ ಕೀರ್ತನೆಯನ್ನು ಮಾಡುತ್ತದೆ ಮತ್ತು ಮಲಕ್‌ಗಳು ಸಹ ಅವನ ಭಯದ ನಿಮಿತ್ತ ಸ್ತುತಿಸುತ್ತಾರೆ ಅವನೇ ಸಿಡಿಲು ಮಿಂಚುಗಳನ್ನು ಕಳುಹಿಸಿ ತಾನಿಚ್ಛಿಸಿದವರವರಿಗೆ ಎರಗಿಸುತ್ತಾನೆ. ನಿಷÉÃಧಿಗಳು ಅಲ್ಲಾಹನ ವಿಷÀಯದಲ್ಲಿ ತರ್ಕಿಸುತ್ತಿದ್ದಾರೆ ಮತ್ತು ಅವನು ಕಠಿಣವಾಗಿ ದಂಡಿಸುವನಾಗಿರುವನು.

(14) ಅವನನ್ನೇ ಪ್ರಾರ್ಥಿಸುವುದು ಸತ್ಯವಾಗಿದೆ ಅವರು ಅವನನ್ನು ಬಿಟ್ಟು ಕರೆದು ಪ್ರಾರ್ಥಿಸುತ್ತಿರುವರು ಯಾವುದಕ್ಕೂ ಉತ್ತರ ನೀಡಲಾರರು. ಅವರ ಸ್ಥಿತಿ ಒಬ್ಬ ವ್ಯಕ್ತಿ ಬಾಯಿಗೆ ನೀರು ತಲುಪಲೆಂದು ತನ್ನೆರಡು ಕೈಗಳನ್ನು ನೀರಿನ ಕಡೆಗೆ ಚಾಚಿಕೊಂಡವನAತೆ ವಸ್ತುತಃ ಆ ನೀರು ಅವನ ಬಾಯಿಗೆ (ತನ್ನಷÀ್ಟಕ್ಕೆ ತಾನೇ) ಎಂದೂ ತಲುಪಲಾರದು, ಮತ್ತು ಆ ಸತ್ಯ ನಿಷÉÃಧಿಗಳ ಪ್ರಾರ್ಥನೆಗಳೆಲ್ಲವೂ ವ್ಯರ್ಥವಲ್ಲದೆ ಇನ್ನೇನೂ ಅಲ್ಲ.

(15) ಭೂಮಿ ಆಕಾಶಗಳಲ್ಲಿ ಇರುವ ಸಕಲ ಸೃಷ್ಟಿಗಳು ಇಚ್ಛಾಪೂರ್ವಕವಾಗಿಯೂ ಅನಿವಾರ್ಯವಾಗಿಯೂ ಅಲ್ಲಾಹನಿಗೆ ಸಾಷ್ಟಾಂಗವೆರಗುತ್ತಿವೆ ಮತ್ತು ಮುಂಜಾನೆಯಲ್ಲೂ, ಸಂಜೆಯಲ್ಲೂ ಅವರ ನೆರಳುಗಳು ಸಹ ಬಾಗುತ್ತಿವೆ

(16) ಪ್ರಶ್ನಿಸಿರಿ; ಆಕಾಶಗಳ ಮತ್ತು ಭೂಮಿಯ ಪ್ರಭು ಯಾರು ? ಉತ್ತರಿಸಿರಿ; " ಅಲ್ಲಾಹನು" . ಹೇಳಿರಿ; ಹಾಗಿದ್ದು ನೀವು ಅವನ ಹೊರತು ಸ್ವತಃ ತಮ್ಮ ಲಾಭ ಮತ್ತು ಹಾನಿಯ ಅಧಿಕಾರ ಹೊಂದಿಲ್ಲದವರನ್ನು ರಕ್ಷಕ ಮಿತ್ರರನ್ನಾಗಿ ನಿಶ್ಚಯಿಸಿಕೊಂಡಿರುವಿರಾ ? ಹೇಳಿರಿ: ಕುರುಡನೂ ಮತ್ತು ದೃಷ್ಟಿಯುಳ್ಳವನೂ ಸಮಾನರೇ? ಅಥವಾ ಕತ್ತಲು ಮತ್ತು ಬೆಳಕು ಸಮಾನವೇ? ಅಥವಾ ಅವರು ಅಲ್ಲಾಹನಿಗೆ ಯಾರನ್ನು ಸಹಭಾಗಿಗಳನ್ನಾಗಿ ನಿಶ್ಚಯಿಸಿರುವರು ಅವರು ಅಲ್ಲಾಹನ ಹಾಗೆ ಸೃಷ್ಟಿಗಳನ್ನು ಉಂಟುಮಾಡಿದ್ದಾರೆಯೇ? ಹೀಗೆ ಆ ಸೃಷ್ಟಿಯು ಅವರ ದೃಷ್ಟಿಯಲ್ಲಿ (ಗುರುತಿಸಲು) ಸದೃಶ್ಯವಾಗಿ ಬಿಟ್ಟಿದೆಯೇ? ಹೇಳಿರಿ ಪ್ರತಿಯೊಂದರ ಸೃಷ್ಟಿಕರ್ತನು ಅಲ್ಲಾಹನೇ ಆಗಿದ್ದಾನೆ ಮತ್ತು ಅವನು ಏಕೈಕನೂ ಪ್ರಚಂಡನೂ ಆಗಿದ್ದಾನೆ.

(17) ಅವನೇ ಆಕಾಶದಿಂದ ನೀರನ್ನು ಸುರಿಸಿದನು. ಅನಂತರ ಹಳ್ಳಕೊಳ್ಳಗಳು ತಮ್ಮ ತಮ್ಮ ಪ್ರಮಾಣದಲ್ಲಿ ತುಂಬಿ ಹರಿದವು, ಹಾಗೆಯೇ ಪ್ರವಾಹವು ತೇಲುತ್ತಿರುವ ನೊರೆಯನ್ನು ಹೊತ್ತೊಯ್ಯಿತು ಮತ್ತು ಇದೇ ತರಹದ ನೊರೆಯು ಆಭರಣ ಅಥವಾ ಉಪಕರಣವನ್ನು ಮಾಡಲಿಕ್ಕಾಗಿ ಬೆಂಕಿಯಲ್ಲಿ ಕರಗಿಸುವ ಲೋಹದಿಂದಲೂ ಏಳುತ್ತದೆ, ಇದೇ ಪ್ರಕಾರ ಅಲ್ಲಾಹನು ಸತ್ಯಾಸತ್ಯತೆಗಳ ಉಪಮೆಯನ್ನು ನೀಡುತ್ತಾನೆ. ಇನ್ನು ನೊರೆಯಾದರೂ ಆರಿಹೋಗುತ್ತದೆ. ಆದರೆ ಜನರಿಗೆ ಉಪಯುಕ್ತವಾದದ್ದು ಭೂಮಿಯಲ್ಲಿ ತಂಗಿ ಕೊಳ್ಳುತ್ತದೆ. ಹೀಗೆ ಅಲ್ಲಾಹನು ಉಪಮೆಗಳನ್ನು ವಿವರಿಸಿ ಹೇಳುತ್ತಾನೆ.

(18) ತಮ್ಮ ಪ್ರಭುವಿನ ಕರೆಗೆ ಓಗೊಟ್ಟವರಿಗೆ ಸ್ವರ್ಗವಿದೆ ಮತ್ತು ಅವನ ಕರೆಗೆ ಓಗೊಡದವರ ಬಳಿ ಭೂಮಿಯಲ್ಲಿರುವುದೆಲ್ಲವೂ ಇದ್ದರೂ ಮತ್ತು ಅದರ ಜೊತೆಯಲ್ಲಿ ಅದರಷÉ್ಟÃ ಬೇರೆಯೂ ಇರುತ್ತಿದ್ದರು ಅವೆಲ್ಲವನ್ನು ಪ್ರಾಯಶ್ಚಿತವಾಗಿ ಕೊಟ್ಟುಬಿಡುತ್ತಿದ್ದರು. ಅವರಿಗೆ ಕೆಟ್ಟ ರೀತಿಯ ವಿಚಾರಣೆ ಇದೆ. ಅವರ ನೆಲೆಯೂ ನರಕವಾಗಿರುತ್ತದೆ ಮತ್ತು ಅದು ಅತ್ಯಂತ ನಿಕೃಷÀ್ಟ ತಾಣವಾಗಿದೆ.

(19) ನಿಮ್ಮೆಡೆಗೆ ನಿಮ್ಮ ಪ್ರಭುವಿನ ಕಡೆಯಿಂದ ಅವತೀರ್ಣವಾಗಿರುವುದು ಸತ್ಯವೆಂದು ಅರಿಯುವವನು ಒಬ್ಬ ಅಂಧನAತೆ ಆಗುವನೇ ? ನಿಶ್ಚಯವಾಗಿಯೂ ಬುದ್ಧಿವಂತರೇ ಉಪದೇಶ ಸ್ವೀಕರಿಸುತ್ತಾರೆ.

(20) ಅವರು ಅಲ್ಲಾಹನೊಂದಿಗೆ ಮಾಡಿದ ಕರಾರನ್ನು ಪೂರ್ಣಗೊಳಿಸುತ್ತಾರೆ ಮತ್ತು ಅವರು ಕರಾರನ್ನು ಮುರಿಯುವುದಿಲ್ಲ.

(21) ಅಲ್ಲಾಹನು (ಯಾವ ಸಂಬAಧಗಳನ್ನು) ಕೂಡಿಸಲು ಆದೇಶಿರುವ ಆ ಸಂಬAಧವನ್ನು ಕೂಡಿಸುತ್ತಾರೆ ಮತ್ತು ತಮ್ಮ ಪ್ರಭುವನ್ನು ಭಯಪಡುತ್ತಾರೆ ಹಾಗೂ ಕೆಟ್ಟ ರೀತಿಯ ವಿಚಾರಣೆಯಿಂದ ಹೆದರುತ್ತಾರೆ.

(22) ಮತ್ತು ಅವರು ತಮ್ಮ ಪ್ರಭುವಿನ ಸಂತೃಪ್ತಿಯನ್ನು ಬಯಸಿ ಸಹನೆ ವಹಿಸುತ್ತಾರೆ, ನಮಾಜನ್ನು ಸಂಸ್ಥಾಪಿಸುತ್ತಾರೆ, ನಾವು ಅವರಿಗೆ ದಯಪಾಲಿಸಿದವುಗಳಿಂದ ಖರ್ಚು ಮಾಡುತ್ತಾರೆ, ಮತ್ತು ಕೆಡುಕನ್ನು ಒಳಿತಿನಿಂದ ತಡೆಯುತ್ತಾರೆ. ಅಂತಹವರಿಗೆ ಪರಲೋಕದ ಅತ್ಯುತ್ತಮ ಭವನವಿದೆ,

(23) ದರೆ ಶಾಶ್ವತ ವಾಸಕ್ಕಿರುವ ಸ್ವರ್ಗೋದ್ಯಾನಗಳಿವೆ, ಅವರು ಹಾಗೂ ಅವರ ಪೂರ್ವಜರು ಅವರ ಸಂಗಾತಿಗಳ ಮತ್ತು ಅವರ ಸಂತತಿಗಳ ಪೈಕಿ ಸಜ್ಜನರಾದವರು ಅವುಗಳಲ್ಲಿ ಪ್ರವೇಶಿಸುವರು, ಅವರ ಬಳಿಗೆ ಮಲಕ್‌ಗಳು ಎಲ್ಲಾ ದ್ವಾರಗಳಿಂದಲೂ ಬರುವರು,

(24) ಹೇಳುವರು; ನೀವು ಸಹನೆವಹಿಸಿದುದರ ಫಲವಾಗಿ ನಿಮ್ಮ ಮೇಲೆ ಶಾಂತಿ ಇರಲಿ ಅಗೋ ಪರಲೋಕ ಭವನವು ಅದೆಷÀÄ್ಟ ಉತ್ತಮವಾಗಿದೆ.

(25) ಇನ್ನು ಯಾರು ಅಲ್ಲಾಹನೊಂದಿಗೆ ಮಾಡಲಾದ ಕರಾರನ್ನು ಅದು ಸದೃಡವಾದ ಬಳಿಕ ಉಲ್ಲಂಘಿಸುತ್ತಾರೋ ಮತ್ತು ಅಲ್ಲಾಹನು (ಯಾವ ಸಂಬAಧಗಳನ್ನು) ಕೂಡಿಸಲು ಆದೇಶಿಸಿರುವನೋ ಅದನ್ನು ಮುರಿದು ಹಾಕುತ್ತಾರೋ ಮತ್ತು ಭೂಮಿಯಲ್ಲಿ ಕ್ಷೆÆÃಭೆ ಹರಡುತ್ತಾರೋ ಅವರಿಗೆ ಶಾಪವಿದೆ, ಹಾಗೂ ಅವರಿಗೆ ನಿಕೃಷÀ್ಟ ತಾಣವಿದೆ.

(26) ಅಲ್ಲಾಹನು ತಾನಿಚ್ಛಿಸಿದವರಿಗೆ ಜೀವನಾಧಾರವನ್ನು ವಿಶಾಲಗೊಳಿಸುತ್ತಾನೆ ಮತ್ತು ಸಂಕುಚಿತಗೊಳಿಸುತ್ತಾನೆ. ಅವರು ಈ ಇಹಲೋಕದ ಜೀವನದಲ್ಲಿ ತಲ್ಲೀನರಾಗಿದ್ದಾರೆ. ವಸ್ತುತಃ ಇಹಲೋಕ ಜೀವನವು ಪರಲೋಕದ ಮುಂದೆ ತಾತ್ಕಾಲಿಕ ಸುಖಾನುಭವ ಮಾತ್ರವಾಗಿದೆ.

(27) ಸತ್ಯ ನಿಷÉÃಧಿಗಳು ಹೇಳುತ್ತಾರೆ; ಮುಹಮ್ಮದ್‌ರವರ ಮೇಲೆ ಅವನ ಪ್ರಭುವಿನ ಕಡೆಯಿಂದ ಯಾವುದಾದರೂ ದೃಷ್ಟಾಂತ ಏಕೆ ಇಳಿಸಲಾಗಿಲ್ಲ ? ಉತ್ತರಿಸಿರಿ; ಖಂಡಿತವಾಗಿಯೂ ಅಲ್ಲಾಹನು ತಾನಿಚ್ಛಿಸಿದವರಿಗೆ ಮಾರ್ಗ ಭ್ರಷÀ್ಟಗೊಳಿಸುತ್ತಾನೆ ಮತ್ತು ಅವನೆಡೆಗೆ ಮರಳುವವರಿಗೆ ಮಾರ್ಗದರ್ಶನ ಮಾಡುತ್ತಾನೆ.

(28) ಇಂತಹವರೇ ಸತ್ಯ ವಿಶ್ವಾಸವಿಟ್ಟವರು ಮತ್ತು ಅಲ್ಲಾಹನ ಸ್ಮರಣೆಯಿಂದ ಮನಶಾಂತಿ ಪಡೆಯುವವರಾಗಿದ್ದಾರೆ. ತಿಳಿದುಕೊಳ್ಳಿರಿ; ಅಲ್ಲಾಹನ ಸ್ಮರಣೆಯಿಂದಲೇ ಹೃದಯಗಳಿಗೆ ಶಾಂತಿ ದೊರಕುತ್ತದೆ.

(29) ಸತ್ಯವಿಶ್ವಾಸವನ್ನಿರಿಸಿ ಸತ್ಕರ್ಮಗಳನ್ನು ಕೈಗೊಳ್ಳುವವರಿಗೆ ಶುಭವಾರ್ತೆ ಇದೆ ಮತ್ತು ಉತ್ತಮ ತಾಣವಿದೆ.

(30) ಇದೇ ಪ್ರಕಾರ ನಾವು ನಿಮ್ಮನ್ನು ಒಂದು ಸಮುದಾಯಕ್ಕೆ ಸಂದೇಶವಾಹಕರನ್ನಾಗಿ ಕಳುಹಿಸಿರುತ್ತೇವೆ. ಇದಕ್ಕೆ ಮೊದಲು ಹಲವಾರು ಸಮುದಾಯಗಳು ಗತಿಸಿ ಹೋಗಿವೆ. ಇದು ನಾವು ನಿಮ್ಮೆಡೆಗೆ ಅವತೀರ್ಣಗೊಳಿಸಿದ ದಿವ್ಯ ಸಂದೇಶವನ್ನು ಅವರಿಗೆ ನೀವು ಓದಿ ಹೇಳಲೆಂದಾಗಿದೆ. ಅವರಾದರೂ ಪರಮ ದಯಾಮಯ ಅಲ್ಲಾಹನನ್ನು ನಿರಾಕರಿಸುವವರಾಗಿದ್ದಾರೆ. ಹೇಳಿರಿ; ಅವನೇ ನನ್ನ ಪ್ರಭು. ಅವನ ಹೊರತು ಬೇರೆ ಆರಾಧ್ಯನಿಲ್ಲ. ಅವನ ಮೇಲೆಯೇ ನಾನು ಭರವಸೆಯನ್ನಿಟ್ಟಿರುವೆನು ಮತ್ತು ಅವನೆಡೆಗೆ ಪಶ್ಚಾತ್ತಾಪದಿಂದ ಮರಳಲಿಕ್ಕಿದೆ.

(31) ಕುರ್‌ಆನಿನ ಮೂಲಕ ಪರ್ವತಗಳನ್ನು ಚಲಿಸುವಂತೆಯು ಅಥವಾ ಭೂಮಿಯನ್ನು ಸೀಳಿಬಿಡುವಂತೆಯೂ ಅಥವಾ ಮೃತರೊಂದಿಗೆ ಮಾತನಾಡುವಂತೆ ಮಾಡಲಾಗುತ್ತಿದ್ದರೂ ಅವರು ಸತ್ಯ ವಿಶ್ವಾಸ ಸ್ವೀಕರಿಸುತ್ತಿರಲಿಲ್ಲ ವಾಸ್ತವವೇನೆಂದರೆ ಕಾರ್ಯವೆಲ್ಲವು ಅಲ್ಲಾಹನ ವಶದಲ್ಲಿರುವುದು. ಅಲ್ಲಾಹನು ಇಚ್ಛಿಸುವುದಾದರೆ ಸರ್ವರಿಗೂ ಸನ್ಮಾರ್ಗ ನೀಡುತ್ತಿದ್ದನೆಂದು ಸತ್ಯವಿಶ್ವಾಸಿಗಳು ತಿಳಿಯಲಿಲ್ಲವೆ ? ಸತ್ಯ ನಿಷÉÃಧಿಗಳಿಗೆ ತಮ್ಮ ನಿಷÉÃಧದ ಫಲವಾಗಿ ಯಾವುದಾದರೂ ವಿಪತ್ತು ಬಾಧಿಸುತ್ತಲೇ ಇರುವುದು ಅಥವಾ ಅದು ಅಲ್ಲಾಹನ ವಾಗ್ದಾನ ಬರುವತನಕ ಅವರ ಮನೆಗಳ ಸಮೀಪದಲ್ಲೇ ಎರಗುತ್ತಲೇ ಇರುವುದು ನಿಶ್ಚಯವಾಗಿಯೂ ಅಲ್ಲಾಹನು ವಾಗ್ದಾನವನ್ನು ಉಲ್ಲಂಘಿಸುವುದಿಲ್ಲ.

(32) ನಿಜವಾಗಿಯೂ ನಿಮಗಿಂತ ಮುಂಚೆಯೂ ಸಂದೇಶವಾಹಕರು ಪರಿಹಾಸ್ಯಕ್ಕೊಳಗಾಗಿದ್ದಾರೆ ಆದರೆ ನಾನು ಸತ್ಯ ನಿಷÉÃಧಿಸಿದವರಿಗೆ ಕಾಲಾವಕಾಶ ಕೊಟ್ಟಿದ್ದೇನೆ. ಅನಂತರ ಅವರನ್ನು ಹಿಡಿದು ಬಿಟ್ಟೆನು ಆಗ ನನ್ನ ಶಿಕ್ಷೆ ಹೇಗಿತ್ತು ?

(33) ಪ್ರತಿಯೊಬ್ಬ ವ್ಯಕ್ತಿಯ ಸಂಪಾದನೆಯ ಮೇಲೆ ಮೇಲ್ವಿಚಾರಣೆ ಮಾಡುವ ಅಲ್ಲಾಹನಿಗೆ ಅವರು ಸಹಭಾಗಿಗಳನ್ನು ನಿಶ್ಚಯಿಸಿಕೊಂಡಿದ್ದಾರೆಯೇ? ಹೇಳಿರಿ; ಒಮ್ಮೆ ಅವುಗಳ ಹೆಸರುಗಳನ್ನಾದರೂ ತಿಳಿಸಿರಿ. ಅಥವಾ ನೀವು ಅಲ್ಲಾಹನಿಗೆ ಅವನು ಭೂಮಿಯಲ್ಲಿ ಅರಿತೇ ಇಲ್ಲದುದನ್ನು ತಿಳಿಸಿಕೊಡುತ್ತಿರುವಿರಾ ? ಅಥವಾ ನೀವು ಬಾಹ್ಯಾ ಮಾತುಗಳನ್ನು ಹೇಳಿಬಿಡುತ್ತೀರಾ? ವಾಸ್ತವ ವಿಚಾರವೇನೆಂದರೆ ಸತ್ಯ ನಿಷÉÃಧಿಸುವವರಿಗೆ ಅವರ ಕುತಂತ್ರಗಳನ್ನು ಸುಂದರವಾಗಿಸಲಾಗಿದೆ. ಮತ್ತು ಅವರು ನೈಜ ಮಾರ್ಗದಿಂದ ತಡೆಯಲಾಗಿದ್ದಾರೆ ಮತ್ತು ಯಾರನ್ನು ಅಲ್ಲಾಹನು ದಾರಿತಪ್ಪಿಸುವನೋ ಅವನಿಗಾರು ಮಾರ್ಗದರ್ಶಕನಿಲ್ಲ.

(34) ಅವರಿಗೆ ಇಹಲೋಕದ ಜೀವನದಲ್ಲಿ ಯಾತನೆ ಇದೆ ಮತ್ತು ಪರಲೋಕದ ಯಾತನೆಯು ಅತ್ಯಂತ ಕಠಿಣವಾಗಿರುತ್ತದೆ, ಮತ್ತು ಅಲ್ಲಾಹನಿಂದ ಅವರನ್ನು ರಕ್ಷಿಸುವವನು ಯಾರು ಇರಲಾರನು.

(35) ಭಯಭಕ್ತಿಯುಳ್ಳವರಿಗೆ ವಾಗ್ದಾನ ಮಾಡಲಾಗಿರುವ ಸ್ವರ್ಗೋದ್ಯಾನದ ಸ್ವರೂಪ ಹೀಗಿದೆ; ಅದರ ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವವು. ಅದರ ಫಲಗಳು ಶಾಶ್ವತವಾದುದು ಮತ್ತು ಅದರ ನೆರಳು ಕೂಡ, ಇದುವೇ ಭಯ-ಭಕ್ತಿಯುಳ್ಳವರ ಪರ್ಯಾವಸಾನವಾಗಿದೆ ಮತ್ತು ಸತ್ಯನಿಷÉÃಧಿಗಳ ಪರ್ಯಾವಸಾನವು ನರಕಾಗ್ನಿಯಾಗಿದೆ.

(36) ಯಾರಿಗೆ ನಾವು ಮೊದಲು ಗ್ರಂಥವನ್ನು ನೀಡಿರುವೆವೋ ಅವರು ನಿಮಗೆ ನಾವು ಅವತೀರ್ಣ ಗೊಳಿಸಿರುವ ಗ್ರಂಥದಿAದ ಸಂತುಷ್ಟರಾಗಿದ್ದಾರೆ. ಮತ್ತು ಅವರ (ಯಹೂದರು ಮತ್ತು ಕ್ರೈಸ್ತರು) ಇತರ ಗುಂಪುಗಳು ಅದರಲ್ಲಿರುವ ಕೆಲವು ವಿಚಾರಗಳ ನಿಷÉÃಧಿಗಳಾಗಿದ್ದಾರೆ, ಹೇಳಿರಿ; ನನಗಂತೂ ಅಲ್ಲಾಹನನ್ನು ಆರಾಧಿಸಲು ಮತ್ತು ಅವನೊಂದಿಗೆ ಸಹಭಾಗಿಯನ್ನು ನಿಶ್ಚಯಿಸದಿರಲು ಆದೇಶ ನೀಡಲಾಗಿದೆ, ಅವನೆಡೆಗೇ ನಾನು ಕರೆಯುತ್ತಿದ್ದೇನೆ ಮತ್ತು ಅವನೆಡೆಗೇ ಮರಳಬೇಕಾಗಿದೆ,

(37) ಇದೇ ಪ್ರಕಾರ ನಾವು ಈ ಕುರ್‌ಆನನ್ನು ಅರಬೀ ಭಾಷÉಯಲ್ಲಿರುವ ನಿಯಮ ಶಾಸನವನ್ನಾಗಿ ಅವತೀರ್ಣಗೊಳಿರುತ್ತೇವೆ, ಇನ್ನೇನಾದರೂ ನಿಮಗೆ ಜ್ಞಾನವು ಬಂದ ಬಳಿಕ ಅವರ ಇಚ್ಛೆಗಳನ್ನು ನೀವು ಅನುಸರಿಸಿದರೆ ಅಲ್ಲಾಹನ ಎದುರು ನಿಮಗೆ ರಕ್ಷಕಮಿತ್ರನಾಗಲಿ, ಕಾಪಾಡುವವನಾಗಲಿ ಯಾರೂ ಇರಲಾರರು.

(38) ಓ ಮುಹಮ್ಮದರೇ ನಿಮಗಿಂತ ಮುಂಚೆಯೂ ನಾವು ಅನೇಕ ಸಂದೇಶವಾಹಕರನ್ನು ಕಳುಹಿಸಿರುತ್ತೇವೆ, ನಾವು ಅವರಿಗೆ ಪತ್ನಿಯರನ್ನು ಸಂತಾನವನ್ನು ನೀಡಿದ್ದೆವು ಮತ್ತು ಯಾವ ಸಂದೇಶವಾಹಕನು ಅಲ್ಲಾಹನ ಅಪ್ಪಣೆಯ ವಿನಃ ಯಾವೊಂದು ದೃಷ್ಟಾಂತವನ್ನು ತರಲಾರನು. ಪ್ರತಿಯೊಂದು ನಿರ್ದಿಷÀ್ಟ ಅವಧಿಗೂ ಒಂದು ದಾಖಲೆ ಇದೆ.

(39) ಅಲ್ಲಾಹನು ತಾನಿಚ್ಛಿಸಿದ್ದನ್ನು ಅಳಿಸುವನು ತಾನಿಚ್ಛಿಸಿದ್ದನ್ನು ಸ್ಥಿರಗೊಳಿಸುವನು ಮತ್ತು ಅವನ ಬಳಿಯೇ ಮೂಲ ಗ್ರಂಥವಿದೆ.

(40) ಮತ್ತು ನಾನು ಅವರಿಗೆ ಮುನ್ನೆಚ್ಚರಿಕೆ ನೀಡುತ್ತಿರುವವುಗಳಿಂದ ಕೆಲವು ಸಂಗತಿಗಳನ್ನು ನಿಮಗೆ ತೋರಿಸಬಹುದು ಅಥವಾ ಅದು ಪ್ರಕಟವಾಗುವುದಕ್ಕೆ ಮುಂಚೆ ನಿಮಗೆ ಮರಣ ಕೊಡಬಹುದು, ಮತ್ತು ಸಂದೇಶ ತಲುಪಿಸುವುದೇ ನಿಮ್ಮ ಮೇಲಿನ ಹೊಣೆಯಾಗಿದೆ ವಿಚಾರಣೆ ನಡೆಸುವುದು ನಮ್ಮ ಮೇಲಿನ ಹೊಣೆಯಾಗಿದೆ.

(41) ನಾವು ಭೂಮಿಯನ್ನು ಅದರ ಅಂಚುಗಳಿAದ ಕಿರಿದಾಗಿಸುತ್ತಿರುವುದನ್ನು ಅವರು ನೋಡುವುದಿಲ್ಲವೇ? ಮತ್ತು ಅಲ್ಲಾಹನೇ ತೀರ್ಮಾನಿಸುತ್ತಾನೆ; ಅವನ ತೀರ್ಮಾನಗಳನ್ನು ಬದಲಾಯಿಸುವವನಾರಿಲ್ಲ ಅವನು ಅತಿ ಶೀಘ್ರವಾಗಿ ವಿಚಾರಣೆ ನಡೆಸುವವನಾಗಿದ್ದಾನೆ.

(42) ಅವರ ಮುಂಚಿನವರು ಸಹ ಕುತಂತ್ರಗಳನ್ನು ಹೂಡಿದ್ದರು. ಆದರೆ ತಂತ್ರವೆಲ್ಲವೂ ಅಲ್ಲಾಹನಿಗೆ ಇರುವವು, ಪ್ರತಿಯೊಬ್ಬ ವ್ಯಕ್ತಿಯು ಸಂಪಾದಿಸಿದ್ದನ್ನು ಅಲ್ಲಾಹನು ಅರಿಯುತ್ತಾನೆ. ಸದ್ಯದಲ್ಲೇ ಸತ್ಯನಿಷÉÃಧಿಗಳು ಪರಲೋಕದ ಭವನ ಯಾರಿಗಿದೆಯೆಂದು ತಿಳಿಯುವರು.

(43) ಓ ಮುಹಮ್ಮದರೇ ನೀವು ಅಲ್ಲಾಹನ ಸಂದೇಶವಾಹಕರಲ್ಲವೆAದು ಸತ್ಯನಿಷÉÃಧಿಗಳು ಹೇಳುತ್ತಾರೆ, ಹೇಳಿರಿ ನನ್ನ ಮತ್ತು ನಿಮ್ಮ ನಡುವೆ ಸಾಕ್ಷಿಯಾಗಿ ಅಲ್ಲಾಹನೇ ಸಾಕು, ಮತ್ತು ಯಾರ ಬಳಿ ಗ್ರಂಥದ ಜ್ಞಾನವಿದೆಯೋ ಅವರ ಸಾಕ್ಷ್ಯ ಸಾಕು.