(1) ಓ ಸತ್ಯವಿಶ್ವಾಸಿಗಳೇ, ನೀವು ಅಲ್ಲಾಹನನ್ನು ಮತ್ತು ಅವನ ಸಂದೇಶವಾಹಕರನ್ನು ಮೀರಿ ನಡೆಯಬೇಡಿರಿ ಮತ್ತು ಅಲ್ಲಾಹನನ್ನು ಭಯಪಡುತ್ತಿರಿ. ನಿಶ್ಚಯವಾಗಿಯು ಅಲ್ಲಾಹನು ಸರ್ವವನ್ನಾಲಿಸುವವನೂ, ಸರ್ವಜ್ಞನೂ ಆಗಿದ್ದಾನೆ.
(2) ಓ ಸತ್ಯವಿಶ್ವಾಸಿಗಳೇ, ನಿಮ್ಮ ಧ್ವನಿಗಳನ್ನು ಪೈಗಂಬರ್ರವರ ಧ್ವನಿಗಿಂತ ಮೇಲೇರಿಸ ಬೇಡಿರಿ, ಪರಸ್ಪರರೊಂದಿಗೆ ನೀವು ಉಚ್ಛಸ್ವರದಲ್ಲಿ ಮಾತಾಡುವಂತೆ ಅವರೊಂದಿಗೂ ಉಚ್ಛಸ್ವರದಲ್ಲಿ ಮಾತನಾಡಬೇಡಿರಿ, ನಿಮಗೆ ಅರಿವಿಲ್ಲದೆಯೇ ನಿಮ್ಮ ಕರ್ಮಗಳು ನಿಷ್ಫಲವಾಗಬಹುದು.
(3) ನಿಸ್ಸಂಶಯವಾಗಿಯು ಅಲ್ಲಾಹನ ಸಂದೇಶವಾಹಕರ ಸನ್ನಿಧಿಯಲ್ಲಿ ತಮ್ಮ ಧ್ವನಿಗಳನ್ನು ತಗ್ಗಿಸುವವರ ಹೃದಯಗಳನ್ನು ಅಲ್ಲಾಹನು ಭಯಭಕ್ತಿಗಾಗಿ ಪರೀಕ್ಷಿಸಿದ್ದಾನೆ. ಅವರಿಗೆ ಕ್ಷಮೆಯೂ, ಮಹಾ ಪ್ರತಿಫಲವೂ ಇದೆ.
(4) ಸಂದೇಶವಾಹಕರೇ ತಮ್ಮನ್ನು ಕೋಣೆಗಳ ಹೊರಗಿನಿಂದ ಕೂಗಿಕರೆಯುವವರಲ್ಲಿ ಹೆಚ್ಚಿನವರು ಅವಿವೇಕಿಗಳಾಗಿದ್ದಾರೆ.
(5) ನೀವು ಅವರ ಬಳಿ ಹೊರಟು ಬರುವತನಕ ಅವರು ತಾಳ್ಮೆ ವಹಿಸಿದ್ದರೆ ಅದುವೇ ಅವರಿಗೆ ಅತ್ಯುತ್ತಮವಾಗಿತ್ತು, ಅಲ್ಲಾಹನು ಕ್ಷಮಾಶೀಲನೂ, ಕರುಣಾನಿಧಿಯೂ ಆಗಿದ್ದಾನೆ.
(6) ಓ ಸತ್ಯವಿಶ್ವಾಸಿಗಳೇ, ನಿಮ್ಮ ಬಳಿ ದುಷ್ಟನೂಬ್ಬನು ಯಾವುದಾದರು ಸುದ್ದಿಯನ್ನು ತಂದರೆ ನೀವು ಚೆನ್ನಾಗಿ ಪರಿಶೀಲಿಸಿರಿ, ನೀವು ಒಂದು ಜನತೆಗೆ ಅಜ್ಞಾನದಿಂದ ಹಾನಿಯನ್ನುಂಟು ಮಾಡಿ, ಆ ಬಳಿಕ ನೀವು ಮಾಡಿದ ಕೃತ್ಯಕ್ಕೆ ಖೇದ ಪಡಬೇಕಾದೀತು.
(7) ನಿಮ್ಮ ನಡುವೆ ಅಲ್ಲಾಹನ ಸಂದೇಶವಾಹಕರು ಇದ್ದಾರೆಂಬುದನ್ನು ಅರಿತುಕೊಳ್ಳಿ. ಹೆಚ್ಚಿನ ವಿಚಾರಗಳಲ್ಲಿ ಅವರು ನಿಮ್ಮನ್ನು ಅನುಸರಿಸುತ್ತಿದ್ದರೆ ನೀವು ಸಂಕಷ್ಟಕ್ಕೀಡಾಗುತ್ತಿದ್ದಿರಿ. ಆದರೆ ಅಲ್ಲಾಹನು ಸತ್ಯವಿಶ್ವಾಸವನ್ನು ನಿಮಗೆ ಪ್ರಿಯಗೊಳಿಸಿದನು ಹಾಗು ಅದನ್ನು ನಿಮ್ಮ ಹೃದಯಗಳಲ್ಲಿ ಅಲಂಕರಿಸಿದನು ಮತ್ತು ಸತ್ಯನಿಷೇಧವನ್ನು, ದುರಾಚಾರವನ್ನು ಮತ್ತು ಆಜ್ಞೋಲ್ಲಂಘನೆಯನ್ನು ನಿಮ್ಮ ದೃಷ್ಟಿಯಲ್ಲಿ ಅಪ್ರಿಯವನ್ನಾಗಿ ಮಾಡಿದನು, ಅಂತಹವರೇ ಸನ್ಮಾರ್ಗ ಪ್ರಾಪ್ತರು.
(8) ಇದು ಅಲ್ಲಾಹನ ಅನುಗ್ರಹ ಮತ್ತು ಉಪಕಾರವಾಗಿದೆ, ಅಲ್ಲಾಹನು ಸರ್ವಜ್ಞಾನಿಯು ಯುಕ್ತಿ ಪೂರ್ಣನೂ ಆಗಿದ್ದಾನೆ.
(9) ಸತ್ಯವಿಶ್ವಾಸಿಗಳ ಎರಡು ತಂಡಗಳು ಪರಸ್ಪರ ಜಗಳವಾಡಿದರೆ ನೀವು ಅವರಿಬ್ಬರ ನಡುವೆ ಸಂಧಾನ ಮಾಡಿರಿ, ಬಳಿಕ ಅವುಗಳಲ್ಲೊಂದು ಗುಂಪು ಇನ್ನೊಂದು ಗುಂಪಿನ ಮೇಲೆ ಅತಿಕ್ರಮತೋರಿದರೆ ನೀವು ಅತಿಕ್ರಮ ತೋರುತ್ತಿರುವ ಗುಂಪಿನೊAದಿಗೆ ಅದು ಅಲ್ಲಾಹನ ಆಜ್ಞೆಯೆಡೆಗೆ ಮರಳಿ ಬರುವವರೆಗೆ ಹೋರಾಡಿರಿ, ಇನ್ನುಅದು ಮರಳಿ ಬಂದರೆ ಅವರ ನಡುವೆ ನ್ಯಾಯದೊಂದಿಗೆ ಸಂಧಾನ ಮಾಡಿರಿ, ಹಾಗು ನ್ಯಾಯನೀತಿ ಪಾಲಿಸಿರಿ, ನಿಸ್ಸಂಶಯವಾಗಿಯು ಅಲ್ಲಾಹನು ನ್ಯಾಯ ಪಾಲಿಸುವವರನ್ನು ಇಷ್ಟಪಡುತ್ತಾನೆ.
(10) ನಿಶ್ಚಯವಾಗಿಯು ಸತ್ಯವಿಶ್ವಾಸಿಗಳು ಪರಸ್ಪರ ಸಹೋದರರಾಗಿದ್ದಾರೆ, ಆದ್ದರಿಂದ ನಿಮ್ಮ ಸಹೋದರರ ನಡುವೆ ಸಂಧಾನ ಮಾಡಿರಿ ಮತ್ತು ಅಲ್ಲಾಹನನ್ನು ಭಯಪಡಿರಿ, ಇದು ನಿಮ್ಮ ಮೇಲೆ ಕರುಣೆತೋರಲೆಂದಾಗಿದೆ.
(11) ಓ ಸತ್ಯವಿಶ್ವಾಸಿಗಳೇ, ಪುರುಷರುಇತರ ಪುರುಷರನ್ನು ಪರಿಹಾಸ್ಯ ಮಾಡದಿರಲಿ, ಅವರು ಇವರಿಗಿಂತ ಉತ್ತಮವಾಗಿರಬಹುದು, ಸ್ತಿçÃಯರು ಇತರ ಸ್ತಿçÃಯರನ್ನು ಪರಿಹಾಸ್ಯ ಮಾಡದಿರಲಿ. ಅವರು ಇವರಿಗಿಂತ ಉತ್ತಮರಾಗಿರಬಹುದು, ನೀವು ಪರಸ್ಪರರನ್ನು ಹೀಯಾಳಿಸದಿರಿ ಮತ್ತು ಪರಸ್ಪರ ಅಡ್ಡ ಹೆಸರುಗಳಿಂದ ಕರೆಯದಿರಿ. ಏಕೆಂದರೆ ಸತ್ಯವಿಶ್ವಾಸ ಹೊಂದಿದ ಬಳಿಕ ದುರಾಚಾರವು ಕೆಟ್ಟದ್ದಾಗಿದೆ, ಇದರಿಂದ ಪಶ್ಚಾತ್ತಾಪ ಪಟ್ಟು ಮರಳದವರೇ ಅಕ್ರಮಿಗಳಾಗಿರುತ್ತಾರೆ.
(12) ಓ ಸತ್ಯವಿಶ್ವಾಸಿಗಳೇ ಹೆಚ್ಚಿನ ಸಂಶಯಗಳಿAದ ದೂರವಿರಿ, ನಿಶ್ಚಯವಾಗಿಯು ಕೆಲವು ಸಂಶಯಗಳು ಪಾಪಗಳಾಗಿವೆ ಮತ್ತು ಪರಸ್ಪರ ಗೂಡಾಚಾರಿಕೆ ಮಾಡದಿರಿ. ನಿಮ್ಮಲ್ಲಿ ಯಾರೂ ಪರದೋಷಣೆ ಮಾಡಬಾರದು. ನಿಮ್ಮಲ್ಲಿ ಯಾರಾದರೂ ತನ್ನ ಮೃತ ಸಹೋದರನ ಮಾಂಸ ತಿನ್ನುವುದನ್ನು ಇಷ್ಟಪಡುವನೇ ? ನೀವು ಅದನ್ನು ಅಸಹ್ಯಪಡುವಿರಿ. ಆದ್ದರಿಂದ ಅಲ್ಲಾಹನನ್ನು ಭಯಪಡಿರಿ, ನಿಸ್ಸಂದೇಹವಾಗಿಯೂ ಅಲ್ಲಾಹನು ಪಶ್ಚಾತಾಪ ಸ್ವೀಕರಿಸುವವನೂ ಕರುಣಾಮಯಿಯೂ ಆಗಿದ್ದಾನೆ.
(13) ಓ ಜನರೇ ನಾವು ನಿಮ್ಮನ್ನು ಓರ್ವ ಪುರುಷ ಮತ್ತು ಸ್ತಿçÃಯಿಂದ ಸೃಷ್ಟಿಸಿರುತ್ತೇವೆ, ನೀವು ಪರಸ್ಪರ ಗುರುತಿಸುವ ಸಲುವಾಗಿ ನಾವು ನಿಮ್ಮನ್ನು ಪಂಗಡಗಳಾಗಿಯೂ ಗೋತ್ರಗಳಾಗಿಯೂ ನಿಶ್ಚಯಿಸಿರುತ್ತೇವೆ. ನಿಮ್ಮಲ್ಲಿ ಹೆಚ್ಚು ಭಯಭಕ್ತಿಯುಳ್ಳವನೇ ಅಲ್ಲಾಹನ ಬಳಿ ಹೆಚ್ಚು ಗೌರವಾನ್ವಿತನಾಗಿದ್ದಾನೆ, ನಿಜವಾಗಿಯೂ ಅಲ್ಲಾಹನು ಸರ್ವಜ್ಞಾನಿಯು ಯುಕ್ತಿಪೂರ್ಣನೂ ಆಗಿದ್ದಾನೆ.
(14) ಗ್ರಾಮೀಣ ಅರಬರು ನಾವು ಸತ್ಯವಿಶ್ವಾಸವಿರಿಸಿದೆವು ಎನ್ನುತ್ತಾರೆ, ಹೇಳಿರಿ ವಾಸ್ತವದಲ್ಲಿ ನೀವು ಸತ್ಯವಿಶ್ವಾಸವಿರಿಸಿಲ್ಲ, ಆದರೆ ನೀವು ನಾವು ವಿಧೇಯರಾದೆವು ಎಂದು ಹೇಳಿರಿ. ವಸ್ತುತಃ ಇದುವರೆಗೂ ನಿಮ್ಮ ಹೃದಯಗಳಲ್ಲಿ ಸತ್ಯವಿಶ್ವಾಸವು ಪ್ರವೇಶಿಸಿಲ್ಲ, ನೀವು ಅಲ್ಲಾಹ್ ಮತ್ತು ಅವನ ಸಂದೇಶವಾಹಕರನ್ನು ಅನುಸರಿಸಿದರೆ ಅವನು ನಿಮ್ಮ ಸತ್ಕರ್ಮಗಳಿಂದ ಅಲ್ಪವನ್ನು ಕಡಿತಗೊಳಿಸಲಾರನು, ಖಂಡಿತವಾಗಿಯು ಅಲ್ಲಾಹನು ಕ್ಷಮಾಶೀಲನೂ, ಕರುಣಾನಿಧಿಯೂ ಆಗಿದ್ದಾನೆ.
(15) ಅಲ್ಲಾಹನಲ್ಲೂ ಅವನ ಸಂದೇಶವಾಹಕರಲ್ಲೂ ವಿಶ್ವಾಸವಿರಿಸಿ, ಆ ಬಳಿಕ ಸಂದೇಹಕ್ಕೊಳಗಾಗದವರು ಮತ್ತು ತಮ್ಮ ತನುಮನ ಧನಗಳಿಂದ ಅಲ್ಲಾಹನ ಮಾರ್ಗದಲ್ಲಿ ಹೋರಾಡುವವರೇ ಸತ್ಯವಿಶ್ವಾಸಿಗಳು ಮತ್ತು ಅವರೇ ಸತ್ಯವಂತರು.
(16) ಹೇಳಿರಿ; ನೀವು ನಿಮ್ಮ ಧರ್ಮದ ಬಗ್ಗೆ ಅಲ್ಲಾಹನಿಗೇ ತಿಳಿಸಿಕೊಡುತ್ತಿರುವಿರಾ ? ಅಲ್ಲಾಹನಂತು ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಸಕಲ ವಸ್ತುಗಳನ್ನು ಅರಿಯುವವನು ಮತ್ತು ಅಲ್ಲಾಹನು ಸಕಲ ಸಂಗತಿಗಳನ್ನು ಚೆನ್ನಾಗಿ ಬಲ್ಲನು.
(17) ಅವರು ಇಸ್ಲಾಮ್ ಧರ್ಮ ಸ್ವೀಕರಿಸಿದ್ದನ್ನು ನಿಮ್ಮ ಮೇಲೆ ಮಾಡಿದ ಉಪಕಾರವೆಂಬAತೆ ತೋರಿಸುತ್ತಿದ್ದಾರೆ, ಹೇಳಿರಿ; ನೀವು ಇಸ್ಲಾಮ್ ಸ್ವೀಕರಿಸಿದ್ದನ್ನು ನನ್ನ ಮೇಲೆ ಮಾಡಿದ ಉಪಕಾರವಾಗಿ ತೋರಿಸಬೇಡಿರಿ, ವಾಸ್ತವದಲ್ಲಿ ನೀವು ಸತ್ಯವಂತರಾಗಿದ್ದರೆ ನಿಮ್ಮನ್ನು ಸತ್ಯವಿಶ್ವಾಸದಕಡೆಗೆ ಮಾರ್ಗದರ್ಶನ ಮಾಡುವ ಮೂಲಕ ಅಲ್ಲಾಹನು ನಿಮ್ಮ ಮೇಲೆ ಉಪಕಾರ ಮಾಡಿದ್ದಾನೆ.
(18) ನಿಸ್ಸಂಶಯವಾಗಿಯು ಆಕಾಶಗಳ ಹಾಗು ಭೂಮಿಯ ಅಗೋಚರ ಜ್ಞಾನವನ್ನು ಅಲ್ಲಾಹನು ಚೆನ್ನಾಗಿ ಬಲ್ಲನು ಮತ್ತು ನೀವು ಮಾಡುತ್ತಿರುವುದನ್ನು ಅಲ್ಲಾಹನು ಸೂಕ್ಷö್ಮವಾಗಿ ನೋಡುತ್ತಿದ್ದಾನೆ.