(1) ಕಾಫ್, ಹಾ, ಯಾ, ಐನ್, ಸ್ವಾದ್
(2) ಇದು ನಿಮ್ಮ ಪ್ರಭು ತನ್ನ ದಾಸರಾದ ಝಕರಿಯ್ಯಾರಿಗೆ ತೋರಿದ ಕಾರುಣ್ಯದ ಪ್ರಸ್ತಾಪವಾಗಿದೆ.
(3) ಅವರು ತನ್ನ ಪ್ರಭುವನ್ನು ರಹಸ್ಯವಾಗಿ ಕೂಗಿ ಪ್ರಾರ್ಥಿಸಿದ ಸಂದರ್ಭ.
(4) ಓ ನನ್ನ ಪ್ರಭುವೇ, ನಿಜವಾಗಿಯೂ ನನ್ನ ಎಲುಬುಗಳು ದುರ್ಬಲಗೊಂಡಿವೆ ಮತ್ತು ತಲೆಯು ವೃದ್ಧಾಪ್ಯದಿಂದ ನೆರೆತು ಹೊಳೆಯುತ್ತಿದೆ. ಮತ್ತು ಓ ಪ್ರಭು, ನಾನೆಂದೂ ನಿನ್ನೊಡನೆ ಪ್ರಾರ್ಥಿಸಿ ನಿರಾಶನಾಗಿಲ್ಲ.
(5) ನನಗೆ ನನ್ನ ಬಳಿಕ ನನ್ನ ಸಂಬAಧಿಕರ ಕುರಿತು ಭಯವಿದೆ. ನನ್ನ ಪತ್ನಿಯು ಸಹ ಬಂಜೆಯಾಗಿದ್ದಾಳೆ. ಆದ್ದರಿಂದ ನೀನು ನಿನ್ನ ವತಿಯಿಂದ ನನಗೆ ಉತ್ತರಾಧಿಕಾರಿಯನ್ನು ಕರುಣಿಸು.
(6) ಅವನು ನನ್ನ ವಾರೀಸುದಾರನೂ, ಯಾಕೂಬರವರ ಸಂತತಿಗಳ ಉತ್ತರಾಧಿಕಾರಿಯೂ ಆಗಿರಲಿ ಮತ್ತು ಓ ನನ್ನ ಪ್ರಭುವೇ, ಅವನನ್ನು ನೀನು ಪ್ರೀತಿ ಪಾತ್ರನನ್ನಾಗಿ ಮಾಡು.
(7) ಓ ಝಕರಿಯ್ಯಾ! ನಾವು ನಿನಗೆ ಒಬ್ಬ ಪುತ್ರನ ಶುಭವಾರ್ತೆಯನ್ನು ನೀಡುತ್ತಿದ್ದೇವೆ. ಅವನ ಹೆಸರು “ಯಾಹ್ಯಾ” ಎಂದಾಗಿರುತ್ತದೆ. ಇದಕ್ಕೆ ಮೊದಲು ನಾವು ಈ ಹೆಸರಿರುವ ಯಾರನ್ನೂ ಸೃಷ್ಟಿಸಿಲ್ಲ.
(8) ಝಕರಿಯ್ಯಾ ಹೇಳಿದರು: ಓ ನನ್ನ ಪ್ರಭು! ನನ್ನ ಪತ್ನಿಯು ಬಂಜೆಯಾಗಿದ್ದು ಹಾಗು ನಾನು ವೃದ್ಧಾಪ್ಯದ ಅತ್ಯಂತ ದುರ್ಬಲ ಸ್ಥಿತಿಗೆ ತಲುಪಿರುವಾಗ ನನಗೆ ಮಗುವಾಗುವುದಾದರೂ ಹೇಗೆ?
(9) (ಅಲ್ಲಾಹ್À): ಹೇಳಿದನು ಹಾಗೆಯೇ ಆಗುವುದು. ನಿಮ್ಮ ಪ್ರಭು ಇದು ನನ್ನ ಪಾಲಿಗೆ ಬಹಳ ಸುಲಭವಾಗಿದೆ. ಮತ್ತು ಸ್ವತಃ ನೀನು ಏನೂ ಆಗಿರದಂತಹ ಸಂದರ್ಭದಲ್ಲಿ ನಾನು ನಿನ್ನನ್ನು ಸೃಷ್ಟಿಸಿದ್ದೇನೆಂದು ಹೇಳಿದನು.
(10) ಝಕರಿಯ್ಯಾ ಪ್ರಾರ್ಥಿಸಿದರು. ಓ ನನ್ನ ಪ್ರಭುವೇ, ನನಗೆ ಯಾವುದಾದರೂ ಸಂಕೇತವನ್ನು ನಿಶ್ಚಯಿಸು. ಹೇಳಲಾಯಿತು: ನೀನು ಆರೋಗ್ಯವಂತನಾಗಿದ್ದರು ಸಹ ಜನರೊಂದಿಗೆ ಮೂರು ರಾತ್ರಿಗಳವರೆಗೆ ಮಾತನಾಡಲಾಗ ದಿರುವುದೇ ನಿನಗಿರುವ ಸಂಕೇತವಾಗಿದೆ.
(11) ತರುವಾಯ ಝಕರಿಯ್ಯಾ ತಮ್ಮ ಪ್ರರ್ಥನಾ ಕೋಣೆಯಿಂದ ತಮ್ಮ ಜನಾಂಗದ ಬಳಿಗೆ ಬಂದರು. ನೀವು ಸಂಜೆ ಮುಂಜಾನೆಯ ಸಮಯದಲ್ಲಿ (ಅಲ್ಲಾಹನ) ಪಾವಿತ್ರö್ಯ ಸ್ತುತಿಸುತ್ತಿರಿ ಎಂದು ಸನ್ನೆ ಮೂಲಕ ಸೂಚಿಸಿದರು.
(12) ಅಲ್ಲಾಹನು ಹೇಳಿದನು: ಓ ಯಹ್ಯಾ, “ನೀನು ಗ್ರಂಥವನ್ನು ಸದೃಢತೆಯಿಂದ ಹಿಡಿದುಕೋ” ಮತ್ತು ನಾವು ಅವನಿಗೆ ಬಾಲ್ಯದಲ್ಲೇ ಸುಜ್ಞಾನವನ್ನು ದಯಪಾಲಿಸಿದ್ದೆವು.
(13) ಮತ್ತು ನಮ್ಮ ಬಳಿಯಿಂದ ದಯೆ-ವಾತ್ಸಲ್ಯ ಮತ್ತು ಪಾವಿತ್ರö್ಯವನ್ನು ನೀಡಿದ್ದೆವು. ಅವರು ಭಯ ಭಕ್ತಿಯುಳ್ಳ ವ್ಯಕ್ತಿಯಾಗಿದ್ದರು.
(14) ಮತ್ತು ಅವರು ತಮ್ಮ ಮಾತಾಪಿತರೊಂದಿಗೆ ಸೌಜನ್ಯಪೂರ್ಣವಾಗಿ ವರ್ತಿಸುವವರಾಗಿದ್ದರು. ಅವರು ದುಷ್ಟರು ಧಿಕ್ಕಾರಿಯು ಆಗಿರಲಿಲ್ಲ.
(15) ಅವರು ಜನಿಸಿದ ದಿನವೂ, ಮರಣ ಹೊಂದುವ ದಿನವೂ ಹಾಗೂ ಅವರು ಜೀವಂತ ಎಬ್ಬಿಸಲಾಗುವ ದಿನವೂ ಅವರ ಮೇಲೆ ಶಾಂತಿಯಿರುವುದು.
(16) (ಓ ಪೈಗಂಬರರೇ) ನೀವು ಈ ಗ್ರಂಥದಲ್ಲಿ ಮರ್ಯಮರ ವಿಷಯವನ್ನು ಪ್ರಸ್ತಾಪಿಸಿರಿ. ಅವರು ತನ್ನ ಜನರಿಂದ ಅಗಲಿ ಪೂರ್ವ ದಿಕ್ಕಿನೆಡೆಗೆ ಹೋದ ಸಂದರ್ಭ ಸ್ಮರಿಸಿರಿ.
(17) ಮತ್ತು ಆಕೆ ಅವರಿಂದ ಮರೆಯಾಗಿ ಒಂದು ತೆರೆಯನ್ನು ಮಾಡಿಕೊಂಡಳು. ಅನಂತರ ನಾವು ಅವಳ ಬಳಿಗೆ ನಮ್ಮ ಪವಿತ್ರಾತ್ಮ (ಜಿಬ್ರೀಲ್ನನ್ನು) ಕಳುಹಿಸಿಕೊಟ್ಟೆವು ಅವನು ಆಕೆಯ ಮುಂದೆ ಪರಿಪೂರ್ಣ ಮಾನವ ರೂಪದಲ್ಲಿ ಪ್ರತ್ಯಕ್ಷವಾದನು.
(18) ಮರ್ಯಮ್ ಹೇಳಿದರು: ನೀನು ಅಲ್ಲಾಹನ ಭಯಭಕ್ತಿಯನ್ನು ಹೊಂದಿದವನಾಗಿದ್ದರೆ ನಿನ್ನಿಂದ ನಾನು ಪರಮ ದಯಾಮಯನ ಅಭಯವನ್ನು ಯಾಚಿಸುತ್ತೇನೆ.
(19) ಅವನು (ಪವಿತ್ರಾತ್ಮ) ಉತ್ತರಿಸಿದನು: ನಾನಂತು ನಿನ್ನ ಪ್ರಭುವಿನ ನಿಯೋಗಿತ ದೂತನಾಗಿದ್ದೇನೆ. ನಿನಗೆ ಪರಿಶುದ್ಧನಾದ ಒಬ್ಬ ಬಾಲಕನನ್ನು ನೀಡಲೆಂದು ಬಂದಿರುವೆನು.
(20) ಮರ್ಯಮ್ ಹೇಳಿದರು: ನನಗೆ ಮಗುವಾಗುವುದಾದರೂ ಹೇಗೆ? ನನ್ನನ್ನು ಯಾವೊಬ್ಬ ಮನುಷ್ಯನು ಸ್ಪರ್ಷಿಸಿರುವುದಿಲ್ಲ ಹಾಗೂ ನಾನು ನಡತೆಗೆಟ್ಟವಳೂ ಅಲ್ಲ.
(21) ಅವನು (ಜಿಬ್ರೀಲ್) ಹೇಳಿದನು: ಹಾಗೆಯೇ ಆಗುವುದು ನಿಮ್ಮ ಪ್ರಭು ಹೇಳುತ್ತಾನೆ. 'ಇದು ನನಗೆ ಅತಿ ಸುಲಭವಾಗಿದೆ. ನಾನು ಅವನನ್ನು ಜನರಿಗೆ ಒಂದು ನಿದರ್ಶನವನ್ನಾಗಿಯೂ, ನಮ್ಮ ಕಡೆಯ ವಿಶೇಷ ಕಾರುಣ್ಯವನ್ನಾಗಿಯೂ ಮಾಡಲಿದ್ದೇವೆ'.ಇದು ನಿಶ್ಚಿತ ಸಂಗತಿಯಾಗಿದೆ.
(22) ಮರ್ಯಮರು ಗರ್ಭಿಣಿಯಾದರು. ಇದೇ ಸ್ಥಿತಿಯಲ್ಲಿ ಅವರು ದೂರವಾದ ಪ್ರದೇಶಕ್ಕೆ ಹೋದರು.
(23) ಅನಂತರ ಅವರನ್ನು ಪ್ರಸವವೇದನೆಯು ಒಂದು ಖರ್ಜೂರದ ಮರದ ಬೊಡ್ಡೆಯ ಕೆಳಗೆ ತಂದು ಬಿಟ್ಟಿತು. ಅವರೆಂದರು: ಅಯ್ಯೋ! ನಾನು ಇದಕ್ಕೆ ಮೊದಲೇ ಮರಣ ಹೊಂದಿರುತ್ತಿದ್ದರೆ! ಹಾಗೂ ನಾನು ಜನರ ನೆನಪಿನಿಂದಲೂ ವಿಸ್ಮರಣೀಯ ವಸ್ತುವಾಗಿರುತ್ತಿದ್ದರೆ!(ಚೆನ್ನಾಗಿತ್ತು).
(24) ಅಷ್ಟರಲ್ಲಿ ಜಿಬ್ರೀಲನು ಮರದಡಿಯಿಂದ ಕೂಗಿ ಹೇಳಿದನು: “ನೀನು ದುಃಖಿಸಬೇಡ; ನಿನ್ನ ಪ್ರಭುವು ನಿನ್ನ ತಳಭಾಗದಲ್ಲಿ ಚಿಲುಮೆಯೊಂದನ್ನು ಹರಿಸಿರುವನು”
(25) ಮತ್ತು ನೀನು ನಿನ್ನೆಡೆಗೆ ಆ ಖರ್ಜೂರ ಮರದ ಬೊಡ್ಡೆಯನ್ನು ಅಲುಗಾಡಿಸು. ಅದು ನಿನ್ನ ಮೇಲೆ ತಾಜಾ ಖರ್ಜೂರ ಹಣ್ಣನ್ನು ಉದುರಿಸುವುದು.
(26) ಇನ್ನು ನೀನು ತಿನ್ನು-ಕುಡಿ ಮತ್ತು ಕಣ್ಣುಗಳನ್ನು ತಂಪಾಗಿಸು. ಇನ್ನು ಯಾರಾದರೊಬ್ಬ ಮನುಷ್ಯನನ್ನು ಕಂಡರೆ (ಸನ್ನೆಯಿಂದ) ಹೇಳಿಬಿಡು: ನಾನು ಪರಮ ದಯಮಯನಾದ ಅಲ್ಲಾಹನ ಹೆಸರಲ್ಲಿ ಮೌನವ್ರತದ ಹರಕೆ ಹೊತ್ತಿರುತ್ತೇನೆ. ನಾನಿಂದು ಯಾರೊಂದಿಗೂ ಮಾತಾನಾಡಲಾರೆ.
(27) ಆಮೇಲೆ ಮರ್ಯಮ್ ಆ ಮಗುವನ್ನು ಎತ್ತಿಕೊಂಡು ತನ್ನ ಜನಾಂಗದೆಡೆಗೆ ಬಂದರು. ಅವರೆಲ್ಲರು ಹೇಳಿದರು: ಓ ಮರ್ಯಮ್, ನೀನು ತುಂಬಾ ಕೆಟ್ಟ ಕೆಲಸ ಮಾಡಿರುವೆ.
(28) ಓ ಹಾರೂನನ ಸಹೋದರಿ, ನಿನ್ನ ತಂದೆ ಕೆಟ್ಟ ಮನುಷ್ಯನಾಗಿರಲಿಲ್ಲ, ನಿನ್ನ ತಾಯಿಯು ನಡತೆಗೆಟ್ಟವಳಾಗಿರಲಿಲ್ಲ.
(29) ಮರ್ಯಮರು ತನ್ನ ಮಗುವಿನೆಡೆಗೆ ಸನ್ನೆ ಮಾಡಿದರು: ಅವರೆಲ್ಲರೂ ಹೇಳಿದರು: ತೊಟ್ಟಿಲಲ್ಲಿರುವ ಮಗುವಿನೊಂದಿಗೆ ನಾವು ಮಾತನಾಡುವುದಾದರು ಹೇಗೆ?
(30) ಆಗ ಮಗು ಸ್ವತಃ ಹೇಳಿತು: ನಾನು ಅಲ್ಲಾಹನ ದಾಸನಾಗಿರುವೆನು ನನಗೆ ಅವನು ಗ್ರಂಥವನ್ನು ದಯಪಾಲಿಸಿರುವನು ಮತ್ತು ನನ್ನನ್ನು ತನ್ನ ಸಂದೇಶವಾಹಕರನ್ನಾಗಿ ಮಾಡಿರುವನು.
(31) ಮತ್ತು ನಾನೆಲ್ಲೇ ಇರಲಿ ಅವನು ನನ್ನನ್ನು ಅನುಗ್ರಹೀತನನ್ನಾಗಿ ಮಾಡಿರುತ್ತಾನೆ. ಮತ್ತು ನಾನು ಬದುಕಿರುವವರೆಗೆ ಅವನು ನನಗೆ ನಮಾಝ್ ಮತ್ತು ಝಕಾತಿನ ಆದೇಶ ನೀಡಿರುವನು.
(32) ಮತ್ತು ನನ್ನನ್ನು ನನ್ನ ತಾಯಿಯ ಸೇವೆ, ಹಾಗು ಸೌಜನ್ಯ ವರ್ತನೆ ಮಾಡುವವನಾಗಿ ಮಾಡಿರುತ್ತಾನೆ. ಮತ್ತು ಅವನು ನನ್ನನ್ನು ದುಷ್ಟನನ್ನಾಗಿಯು ಮತ್ತು ಹತಭಾಗ್ಯನನ್ನಾಗಿಯು ಮಾಡಿರುವುದಿಲ್ಲ.
(33) ನಾನು ಜನಿಸಿದ ದಿನವೂ, ಮರಣ ಹೊಂದುವ ದಿನವೂ ಮತ್ತು ನಾನು ಪುನಃ ಜೀವಂತ ಎಬ್ಬಿಸಲಾಗುವ ದಿನವೂ ನನ್ನ ಮೇಲೆ ಶಾಂತಿಯಿರುವುದು.
(34) ಇದುವೇ ಮರ್ಯಮರ ಪುತ್ರರ ಈಸಾರವರ ಘಟನೆ. ಇದುವೇ ಅವರು ಸಂದೇಹ ಗ್ರಸ್ತರಾಗಿರುವ ಸತ್ಯ ವಿಚಾರವಾಗಿದೆ.
(35) ಯಾರನ್ನೂ ಮಗನನ್ನಾಗಿ ಮಾಡಿಕೊಳ್ಳುವುದು ಅಲ್ಲಾಹನಿಗೆ ಶೋಭಿಸುವುದಿಲ್ಲ. ಅವನು ಪರಮ ಪಾವನನು. ಅವನು ಯಾವುದೇ ಕಾರ್ಯವನ್ನು ನಿರ್ಧರಿಸಿದಾಗ ಅದರೊಂದಿಗೆ ಆಗು ಎಂದು ಮಾತ್ರವೇ ಹೇಳುತ್ತಾನೆ. ಆಗಲೇ ಅದು ಆಗಿಬಿಡುತ್ತದೆ.
(36) (ಈಸಾ ಹೇಳುವರು) ನನ್ನ ಮತ್ತು ನಿಮ್ಮೆಲ್ಲರ ಪ್ರಭು ಅಲ್ಲಾಹನಾಗಿದ್ದಾನೆ. ಆದುದರಿಂದ ನೀವೆಲ್ಲರೂ ಅವನನ್ನೇ ಆರಾಧಿಸಿರಿ. ಇದುವೇ ಸನ್ಮಾರ್ಗವಾಗಿದೆ.
(37) ಆದರೆ ಗ್ರಂಥದವರ ವಿವಿಧ ಪಂಗಡಗಳು ಪರಸ್ಪರ ಭಿನ್ನತೆಯನ್ನು ತೋರಿದವು ಸತ್ಯನಿಷೇಧಿಗಳಿಗೆ ಅವರು ಹಾಜರಾಗುವ ದಿನದಂದು ಮಹಾವಿನಾಶವಿದೆ.
(38) ಅವರು ನಮ್ಮ ಮುಂದೆ ಹಾಜರುಗೊಳಿಸಲಾಗುವ ದಿನ ಅವರು ಚೆನ್ನಾಗಿ ಕೇಳುವರು ಮತ್ತು ಚೆನ್ನಾಗಿ ನೋಡುವರಾಗಿರುವರು ಆದರೆ ಇಂದು ಈ ಅಕ್ರಮಿಗಳು ಸ್ಪಷ್ಟವಾದ ಮಾರ್ಗಭ್ರಷ್ಟತೆಯಲ್ಲಿದ್ದಾರೆ.
(39) (ಓ ಪೈಗಂಬರರೇ)ನೀವು ಅವರಿಗೆ ವ್ಯಥೆ ಪಡುವ ದಿನದ ಎಚ್ಚರಿಕೆಯನ್ನು ನೀಡಿರಿ. ಆಗ ಸಂಗತಿಗಳ ವಿಷಯ ತೀರ್ಮಾನ ಮಾಡಲಾಗುವುದು. ಆದರೆ ಅವರು ಅಲಕ್ಷö್ಯತೆಯಲ್ಲಿದ್ದಾರೆ ಮತ್ತು ಅವರು ವಿಶ್ವಾಸವಿಡುವುದಿಲ್ಲ.
(40) ನಿಶ್ಚಯವಾಗಿಯೂ ಈ ಭೂಮಿ ಮತ್ತು ಅದರ ಮೇಲಿರುವ ಸಕಲರ ವಾರೀಸುದಾರರು ನಾವೇ ಆಗಿದ್ದೇವೆ ಮತ್ತು ಅವರೆಲ್ಲರೂ ನಮ್ಮೆಡೆಗೇ ಮರಳಿಸಲಾಗುವರು.
(41) ನೀವು ಈ ಗ್ರಂಥದಲ್ಲಿ ಇಬ್ರಾಹೀಮರ ವಿಷಯವನ್ನು ಪ್ರಸ್ತಾಪಿಸಿರಿ. ನಿಸ್ಸಂಶಯವಾಗಿಯೂ ಅವರು ಮಹಾ ಸತ್ಯಸಂಧ ಪೈಗಂಬರ್ ಆಗಿದ್ದರು.
(42) ಅವರು ತಮ್ಮ ತಂದೆಗೆ ಹೇಳಿದ ಸಂದರ್ಭವನ್ನು ಸ್ಮರಿಸಿರಿ. ಓ ನನ್ನ ಪ್ರಿಯ ತಂದೆಯೇ, ಕೇಳಲಾಗದ, ನೋಡಲಾಗದ ಮತ್ತು ನಿಮಗೆ ಒಂದಿಷ್ಟೂ ಪ್ರಯೋಜನವನ್ನು ನೀಡಲಾಗದ ವಸ್ತುವನ್ನು ನೀವೇಕೆ ಆರಾಧಿಸುತ್ತಿದ್ದೀರಿ.
(43) ಓ ನನ್ನ ಪ್ರಿಯ ತಂದೆಯೇ ನಿಮಗೆ ಬಂದಿರದAತಹ ಜ್ಞಾನ ನನಗೆ ಬಂದಿದೆ. ಆದ್ದರಿಂದ ನೀವು ನನ್ನನ್ನು ಅನುಸರಿಸಿರಿ.ನಾನು ನಿಮಗೆ ಅತ್ಯಂತ ನೇರಮಾರ್ಗದೆಡೆಗೆ ಮುನ್ನಡೆಸುವೆನು.
(44) ಓ ನನ್ನ ಪ್ರಿಯ ತಂದೆಯೆ, ನೀವು ಶೈತಾನನನ್ನು ಆರಾಧಿಸಬೇಡಿರಿ. ಶೈತಾನನು ಪರಮ ದಯಾಮಯನಾದ ಅಲ್ಲಾಹನ ಧಿಕ್ಕಾರಿಯಾಗಿದ್ದಾನೆ.
(45) ಓ ನನ್ನ ಪ್ರಿಯ ತಂದೆಯೇ, ಪರಮದಯಾಮಯನಾದ ಅಲ್ಲಾಹನಿಂದ ಯಾವುದದರೊಂದು ಯಾತನೆಯು ನಿಮಗೆ ತಗಲಿ ನೀವು ಶೈತಾನನ ಮಿತ್ರರಾಗಿ ಬಿಡುವಿರೆಂದು ನಾನು ಭಯಪಡುತ್ತೇನೆ.
(46) ಅವನು (ತಂದೆ) ಉತ್ತರಿಸಿದನು: ಓ ಇಬ್ರಾಹೀಮ್, ನೀನು ನನ್ನ ಆರಾಧ್ಯರಿಂದ ವಿಮುಖನಾದೆಯಾ? ಕೇಳು, ನೀನು ಈ ನಿಲುವನ್ನು ತೊರೆಯದಿದ್ದರೆ ನಾನು ನಿನ್ನನ್ನು ಕಲ್ಲೆಸೆದು ಕೊಂದುಬಿಡುತ್ತೇನೆ. ಹೋಗು, ನೀನು ಒಂದು ದೀರ್ಘ ಕಾಲ ನನ್ನಿಂದ ದೂರವಾಗು.
(47) ಇಬ್ರಾಹೀಮ್ ಹೇಳಿದರು: ನಿಮ್ಮ ಮೇಲೆ ಶಾಂತಿಯಿರಲಿ. ನಾನು ನಿಮಗಾಗಿ ನನ್ನ ಪ್ರಭುವಿನಲ್ಲಿ ಕ್ಷಮೆಯಾಚಿಸುತ್ತಲಿರುವೆನು. ಅವನು ನನ್ನ ಮೇಲೆ ತುಂಬಾ ಕೃಪೆಯುಳ್ಳವನಾಗಿದ್ದಾನೆ.
(48) ನಾನು ನಿಮ್ಮನ್ನು ಮತ್ತು ನೀವು ಅಲ್ಲಾಹನ ಹೊರತು ಕರೆದು ಪ್ರಾರ್ಥಿಸುತ್ತಿರುವುಗಳಿಂದ ಬಿಟ್ಟಗಲಿ ಹೋಗುತ್ತೇನೆ. ನಾನು ನನ್ನ ಪ್ರಭುವನ್ನು ಪ್ರಾರ್ಥಿಸಿ ನಿರಾಶನಾಗಲಾರೆ ಎಂದು ನಂಬಿದ್ದೇನೆ.
(49) ಇಬ್ರಾಹೀಮ್ರವರು ಅವರೆಲ್ಲರನ್ನು ಮತ್ತು ಅವರು ಅಲ್ಲಾಹನ ಹೊರತು ಆರಾಧಿಸುತ್ತಿದ್ದಂತಹ ಸಕಲ ಅರಾಧ್ಯರನ್ನು ಬಿಟ್ಟಗಲಿದಾಗ ನಾವು ಅವರಿಗೆ ಇಸ್ಹಾಕ್ ಮತ್ತು ಯಾಕೂಬ್ರನ್ನು ದಯಪಾಲಿಸಿದೆವು ಮತ್ತು ನಾವು ಅವರೆಲ್ಲರನ್ನು ಪ್ರವಾದಿಯನ್ನಾಗಿ ಮಾಡಿದೆವು.
(50) ಮತ್ತು ನಾವು ಅವರಿಗೆ ನಮ್ಮ ಕೃಪೆಯನ್ನು ದಯಪಾಲಿಸಿದೆವು ಮತ್ತು ಅವರ ಕೀರ್ತಿಯನ್ನು ಉನ್ನತಗೊಳಿಸಿದೆವು.
(51) (ಓ ಪೈಗಂಬರರೇ) ನೀವು ಈ ಗ್ರಂಥದಲ್ಲಿ ಮೂಸಾರವರ ವಿಷಯವನ್ನು ಪ್ರಸ್ತಾಪಿಸಿರಿ. ನಿಶ್ಚಯವಾಗಿಯೂ ಅವರು ಆಯ್ದ ವ್ಯಕ್ತಿಯಾಗಿ ಮತ್ತು ಸಂದೇಶÀವಾಹಕರೂ ಹಾಗೂ ಪೈಗಂಬರರಾಗಿದ್ದರು.
(52) ನಾವು ಅವರನ್ನು ತೂರ್ ಪರ್ವತದ ಬಲಗಡೆಯಿಂದ ಕೂಗಿ ಕರೆದೆವು ಹಾಗೂ ರಹಸ್ಯ ಸಂಭಾಷಣೆಯ ಮೂಲಕ ನಾವು ಅವರಿಗೆ ಸಾಮೀಪ್ಯ ನೀಡಿದೆವು.
(53) ಮತ್ತು ನಮ್ಮ ಕೃಪೆಯಿಂದ ಅವರ ಸಹೋದರ ಹಾರೂನರನ್ನು ಪೈಗಂಬರರನ್ನಾಗಿ ಮಾಡಿ ಅವರಿಗೆ ನೆರವು ನೀಡಿದೆವು.
(54) ನೀವು ಈ ಗ್ರಂಥದಲ್ಲಿ ಇಸ್ಮಾಯೀಲ್ರವರ ವೃತ್ತಾಂತವನ್ನು ಪ್ರಸ್ತಾಪಿಸಿರಿ. ಅವರು ವಚನ ಪಾಲಕರಾಗಿದ್ದರು ಮತ್ತು ಪೈಗಂಬರರು ಹಾಗೂ ರಸೂಲರು ಆಗಿದ್ದರು.
(55) ಅವರು ತಮ್ಮ ಮನೆಯವರಿಗೆ ನಮಾಝ್ ಹಗೂ ಝಕಾತ್ನ ಆದೇಶ ನೀಡುತ್ತಿದ್ದರು ಮತ್ತು ಅವರು ತಮ್ಮ ಪ್ರಭುವಿನ ಸಂತೃಪ್ತಿಗೆ ಪಾತ್ರರಾಗಿದ್ದರು.
(56) ನೀವು ಈ ಗ್ರಂಥದಲ್ಲಿ ಇದ್ರೀಸ್ರವರ ಕುರಿತು ಪ್ರಸ್ತಾಪಿಸಿರಿ, ಅವರು ಮಹಾ ಸತ್ಯಸಂಧ ಪೈಗಂಬರರಾಗಿದ್ದರು.
(57) ಮತ್ತು ನಾವು ಅವರನ್ನು ಉನ್ನತ ಸ್ಥಾನಕ್ಕೇರಿಸಿದೆವು.
(58) ಅವರೆಲ್ಲರೂ ಅಲ್ಲಾಹನು ಅನುಗ್ರಹಿಸಿದ ಪೈಗಂಬರರÀ ಪೈಕಿಯಾಗಿದ್ದಾರೆ. ಆದಮರ ಸಂತಾನದಿAದಲೂ ನಾವು ನೂಹರ ಜೊತೆ ಹಡಗಿನಲ್ಲಿ ಸಾಗಿಸಿದವರ ಸಂತಾನದಿAದಲೂ ಇಬ್ರಾಹೀಮರ ಮತ್ತು ಯಾಕೂಬರ ಸಂತಾನದಿAದಲೂ ನಾವು ಸನ್ಮಾರ್ಗ ದರ್ಶನ ಮಾಡಿ ಆಯ್ಕೆ ಮಾಡಿದವರಲ್ಲಾಗಿದ್ದಾರೆ. ಅವರ ಮುಂದೆ ಪರಮ ದಯಾಮಯನಾದ ಅಲ್ಲಾಹನ ಸೂಕ್ತಿಗಳನ್ನು ಓದಿ ಹೇಳಲಾದಾಗ ಅವರು ಅಳುತ್ತಾ ಸಾಷ್ಟಾಂಗವೆರಗುತ್ತಾ ನೆಲದ ಮೇಲೆ ಬೀಳುವರು.
(59) ತರುವಾಯ ಅವರ ನಂತರ ಅಯೋಗ್ಯರು ಉತ್ತರಾಧಿಕಾರಿಗಳಾದರು. ಅವರು ನಮಾಝ್ ವ್ಯರ್ಥಗೊಳಿಸಿದರು ಮತ್ತು ಸ್ವೇಚ್ಛೆಗಳನ್ನು ಅನುಸರಿಸಿದರು.ಸದ್ಯದಲ್ಲೇ ಅವರು ತಮ್ಮ ಪಥಭ್ರಷ್ಟತೆಯ ದುಷ್ಪರಿಣಾಮವನ್ನು ಕಾಣಲಿರುವರು.
(60) . ಆದರೆ ಪಶ್ಚಾತ್ತಾಪ ಪಟ್ಟು ಸತ್ಯವಿಶ್ವಾಸವಿರಿಸಿ, ಸತ್ಕರ್ಮಗಳನ್ನು ಕೈಗೊಂಡವರ ಹೊರತು. ಅವರು ಸ್ವರ್ಗದಲ್ಲಿ ಪ್ರವೇಶಿಸುವರು.ಮತ್ತು ಅವರು ಒಂದಿಷ್ಟೂ ಅನ್ಯಾಯಕ್ಕೊಳಗಾಗಲಾರರು.
(61) ಪರಮ ದಯಾಮಯನು ತನ್ನ ದಾಸರಿಗೆ ಪರೋಕ್ಷವಾಗಿ ಮಾಡಿರುವ ಶಾಶ್ವತ ಸ್ವರ್ಗೋದ್ಯಾನಗಳಿವೆ ಎಂಬ ವಾಗ್ದಾನವಾಗಿದೆ. ನಿಸ್ಸಂಶಯವಾಗಿಯೂ ಅವನ ವಾಗ್ದಾನವು ಪೂರ್ಣಗೊಂಡೇ ತೀರುವುದು.
(62) ಅವರು ಅದರಲ್ಲಿ ಶಾಂತಿಯ ಹೊರತು ಇನ್ನಾವುದೇ ವ್ಯರ್ಥ ಮಾತುಗಳನ್ನು ಕೇಳಲಾರರು. ಮತ್ತು ಅವರಿಗೆ ಅಲ್ಲಿ ಅವರ ಆಹಾರವು ಸಂಜೆ-ಮುAಜಾನೆಯಲ್ಲಿ ಸಿಗುತ್ತಲಿರುವುದು.
(63) ಇದುವೇ ಆ ಸ್ವರ್ಗೋದ್ಯಾನ. ನಾವು ನಮ್ಮ ದಾಸರ ಪೈಕಿ ಭಯಭಕ್ತಿಯುಳ್ಳವರನ್ನು ಇದರ ವಾರಿಸುದಾರರನ್ನಾಗಿ ಮಾಡುವೆವು.
(64) (ಓ ಪೈಗಂಬರರೇ) ನಾವು (ಮಲಕ್ಗಳು) ನಿಮ್ಮ ಪ್ರಭುವಿನ ಅಪ್ಪಣೆಯಿಲ್ಲದೆ ಇಳಿದು (ಭೂಮಿಗೆ) ಬರಲಾರೆವು. ನಮ್ಮ ಮುಂದಿರುವ ಮತ್ತು ನಮ್ಮ ಹಿಂದಿರುವ ಹಾಗೂ ಅವರೆಡರ ನಡುವೆಯಿರುವ ಸಕಲ ವಸ್ತುಗಳು ಅವನ (ಅಲ್ಲಾಹನ) ಒಡೆತನದಲ್ಲಿದೆ. ನಿಮ್ಮ ಪ್ರಭು ಮರೆಯುವವನಲ್ಲ.
(65) ಅವನೇ ಆಕಾಶಗಳ ಮತ್ತು ಭೂಮಿಯ ಹಾಗೂ ಅವರೆಡರ ನಡುವೆಯಿರುವ ಸಕಲ ವಸ್ತುಗಳ ಪ್ರಭು. ಆದ್ದರಿಂದ ನೀವು ಅವನನ್ನೇ ಆರಾಧಿಸಿರಿ ಮತ್ತು ಅವನ ಆರಾಧನೆಯಲ್ಲಿ ಸ್ಥಿರವಾಗಿರಿ. ಗುಣನಾಮಗಳಲ್ಲಿ ಅವನಿಗೆ ಸರಿಸಾಟಿಯಾದ ಮತ್ತೊಬ್ಬನು ಇರುವುದಾಗಿ ನೀವು ಬಲ್ಲಿರಾ?
(66) ಮರಣ ಹೊಂದಿದ ಬಳಿಕ ನಾನು ಜೀವಂತವಾಗಿ ಹೊರ ತರಲ್ಪಡುವನೇ? ಎಂದು ಮಾನವನು ಕೇಳುತ್ತಾನೆ.
(67) ಮನುಷ್ಯನು ಇದಕ್ಕೆ ಮೊದಲು ಏನೂ ಇಲ್ಲದಿದ್ದಾಗ ನಾವು ಅವನನ್ನು ಸೃಷ್ಟಿಸಿದ್ದೇವೆಂಬುದನ್ನು ನೆನಪಿಸಿಕೊಳ್ಳುವುದಿಲ್ಲವೇ?
(68) ನಿಮ್ಮ ಪ್ರಭುವಿನಾಣೆ! ಖಂಡಿತವಾಗಿಯು ನಾವು ಸತ್ಯನಿಷೇಧಿಗಳನ್ನು ಹಾಗೂ ಶೈತಾನರನ್ನು ಒಟ್ಟು ಸೇರಿಸಿ ತದನಂತರ ಅವರೆಲ್ಲರನ್ನೂ ನರಕದ ಸುತ್ತಮುತ್ತಲೂ ಮೊಣಕಾಲೂರಿದ ಸ್ಥಿತಿಯಲ್ಲಿ ಹಾಜರುಗೊಳಿಸಲಿದ್ದೇವೆ.
(69) ಅನಂತರ ನಾವು ಎಲ್ಲಾ ಗುಂಪುಗಳಿAದಲೂ ಪರಮ ದಯಾಮಯನಾದ ಅಲ್ಲಾಹನ ವಿರುದ್ಧ ಅತ್ಯಧಿಕ ಧಿಕ್ಕಾರ ತೋರಿದವರನ್ನು ಖಂಡಿತವಾಗಿ ಎಳೆದು ಬೇರ್ಪಡಿಸುವೆವು.
(70) ತರುವಾಯ ನರಕಾಗ್ನಿಯಲ್ಲಿ ಪ್ರವೇಶಿಸಲು ಅತ್ಯಂತ ಅರ್ಹರು ಯಾರೆಂಬುದನ್ನು ನಾವು ಚೆನ್ನಾಗಿ ಬಲ್ಲೆವು.
(71) ನಿಮ್ಮ ಪೈಕಿ ನರಕವನ್ನು ಹಾದು ಹೋಗದವರು ಯಾರು ಇಲ್ಲ ಇದು ನಿಮ್ಮ ಪ್ರಭುವಿನ ಮೇಲೆ ಹೊಣೆಯಾಗಿರುವ ನಿರ್ಧರಿತ ಸಂಗತಿಯಾಗಿದೆ.
(72) ನಂತರ ನಾವು ಭಯ ಭಕ್ತಿಯನ್ನಿರಿಸಿಕೊಂಡವರನ್ನು ರಕ್ಷಿಸುವೆವು ಹಾಗೂ ಅಕ್ರಮಿಗಳನ್ನು ಮೊಣಕಾಲೂರಿದ ಸ್ಥಿತಿಯಲ್ಲಿ ಅದರಲ್ಲೇ ಬಿಟ್ಟು ಬಿಡುವೆವು.
(73) ಅವರ ಮುಂದೆ ನಮ್ಮ ಸ್ಪಷ್ಟ ಸೂಕ್ತಿಗಳನ್ನು ಓದಿ ಹೇಳಲಾದಾಗ ಸತ್ಯನಿಷೇಧಿಗಳು ಸತ್ಯವಿಶ್ವಾಸಿಗಳೊಂದಿಗೆ ನಮ್ಮೆರಡು ಗುಂಪುಗಳಲ್ಲಿ ಯಾರ ಸ್ಥಾನವು ಉನ್ನತವಾಗಿದೆ ಹಾಗೂ ಯಾರ ಸಭೆಯು ವೈಭವಪೂರ್ಣವಾಗಿದೆ ಎಂದು ಕೇಳುತ್ತಾರೆ.
(74) (ವಸ್ತುತಃ) ಇವರಿಗಿಂತ ಮೊದಲು ಸುಖ ಸವಲತ್ತುಗಳಲ್ಲೂ, ಆಡಂಬರಗಳಲ್ಲೂ ಇವರಿಗಿಂತ ಉನ್ನತರಾಗಿದ್ದ ಅದೆಷ್ಟೋ ಜನಾಂಗಗಳನ್ನು ನಾವು ನಾಶ ಮಾಡಿರುತ್ತೇವೆ.
(75) (ಇವರೊಡನೆ) ಹೇಳಿರಿ: ಯಾರು ಪಥಭ್ರಷ್ಟತೆಯಲ್ಲಿರುತ್ತಾರೋ ಅವರೊಡನೆ ಮಾಡಲಾಗುತ್ತಿರುವ ವಾಗ್ದಾನ ಅವರು ಕಾಣುವ ತನಕ. ಅವರಿಗೆ ಪರಮ ದಯಾಮಯನು ದೀರ್ಘ ಕಾಲಾವಕಾಶವನ್ನು ನೀಡುತ್ತಾನೆ. ಅದು ಯಾತನೆಯಾಗಿರಲಿ ಅಥವಾ ಅಂತ್ಯಕಾಲವಾಗಿರಲಿ ಆಗ ಅವರು ಯಾರು ನಿಕೃಷ್ಟ ಸ್ಥಾನದವರು ಹಾಗೂ ಯಾರ ಸಂಖ್ಯಾ ಬಲವು ಅತ್ಯಂತ ದುರ್ಬಲ ಎಂಬುದನ್ನು ಅರಿತುಕೊಳ್ಳುವರು.
(76) ಸನ್ಮಾರ್ಗ ಪಡೆದವರಿಗೆ ಅಲ್ಲಾಹನು ಸನ್ಮಾರ್ಗವನ್ನು ಹೆಚ್ಚಿಸಿಕೊಡುತ್ತಾನೆ ಮತ್ತು ಬಾಕಿಯುಳಿಯುವ ಸತ್ಕರ್ಮಗಳೇ ನಿಮ್ಮ ಪ್ರಭುವಿನ ಬಳಿ ಪ್ರತಿಫಲದ ದೃಷ್ಟಿಯಿಂದ ಉತ್ತಮವೂ ಹಾಗೂ ಪರಿಣಾಮದ ದೃಷ್ಟಿಯಿಂದ ಅತ್ಯುತ್ತಮವೂ ಆಗಿದೆ.
(77) ನಮ್ಮ ಸೂಕ್ತಿಗಳನ್ನು ನಿರಾಕರಿಸಿದ ಮತ್ತು ತನಗೆ ಖಂಡಿತ ಸೊತ್ತು ಸಂತಾನಗಳನ್ನು ನೀಡಲಾಗುವುದೆಂದು ಹೇಳಿದ ವ್ಯಕ್ತಿಯನ್ನು ನೀವು ಕಂಡಿರಾ?
(78) ಅವನಿಗೆ ಅಗೋಚರ ಜ್ಞಾನದ ಸುಳಿವು ಸಿಕ್ಕಿದೆಯೇ? ಅಥವಾ ಪರಮ ದಯಾಮಯನಾದ ಅಲ್ಲಾಹನ ಬಳಿ ಒಪ್ಪಂದವೊAದನ್ನು ಮಾಡಿಕೊಂಡಿರುವನೇ?
(79) ಹಾಗಲ್ಲಾ! ಅವನು ಹೇಳುತ್ತಿರವುದನ್ನು ನಾವು ಬರೆದಿಡಲಿದ್ದೇವೆ ಮತ್ತು ನಾವು ಅವನಿಗೆ ಯಾತನೆಯನ್ನು ಇನ್ನಷ್ಟು ಹೆಚ್ಚಿಸುವೆವು.
(80) ಅವನು ಹೇಳುತ್ತಿರುವ ಸೊತ್ತು ಸಂತಾನವನ್ನು ನಾವು ಹಿಂತೆಗೆದುಕೊಳ್ಳುವೆವು.ಮತ್ತು ಅವನು ನಮ್ಮ ಬಳಿ ಒಬ್ಬಂಟಿಯಾಗಿ ಬರಲಿದ್ದಾನೆ.
(81) ಅವರು ತಮಗೆ ಪ್ರತಿಷ್ಠೆಯ ವಸ್ತುವಾಗಲೆಂದು ಅಲ್ಲಾಹನ ಹೊರತು ಇತರರನ್ನು ಆರಾಧ್ಯರನ್ನಾಗಿ ಮಾಡಿ ಕೊಂಡಿದ್ದಾರೆ.
(82) ಹಾಗಲ್ಲ! ಅವರಂತು ಇವರ ಆರಾಧನೆಯನ್ನು ನಿರಾಕರಿಸುವರು ಮತ್ತು ಇವರ ವಿರೋಧಿಗಳಾಗುವರು.
(83) ನಾವು ಸತ್ಯನಿಷೇಧಿಗಳ ಮೇಲೆ ಶೈತಾನರನ್ನು ಅವರ ಹಿಂದೆ ಹಚ್ಚಿಬಿಡಲಾಗಿರುವುದನ್ನು ನೀವು ಕಂಡಿಲ್ಲವೇ?ಅವರು ಇವರನ್ನು ಸತ್ಯದ ವಿರುದ್ಧ ಪ್ರಚೋದಿಸುತ್ತಿದ್ದಾರೆ.
(84) ಆದ್ದರಿಂದ ನೀವು ಅವರ ಬಗ್ಗೆ ಆತುರ ಪಡಬೇಡಿ ಖಂಡಿತವಾಗಿಯು ನಾವು ಅವರ ದಿನಗಳನ್ನು ಎಣಿಸುತ್ತಿದ್ದೇವೆ.
(85) ಅಂದು ನಾವು ಭಯಭಕ್ತಿಯುಳ್ಳವರನ್ನು ಪರಮ ದಯಾಮಯನಾದ ಅಲ್ಲಾಹನ ಕಡೆಗೆ ಅತಿಥಿಗಳಾಗಿ ಒಟ್ಟುಸೇರಿಸುವೆವು.
(86) ಹಾಗೂ ನಾವು ಅಪರಾಧಿಗಳನ್ನು ತೀವ್ರದಾಹದ ಸ್ಥಿತಿಯಲ್ಲಿ ನರಕದೆಡೆಗೆ ಅಟ್ಟುತ್ತಾ ಹೋಗುವೆವು.
(87) ಪರಮ ದಯಾಮಯನಾದ ಅಲ್ಲಾಹನ ಬಳಿ ಕರಾರನ್ನು ಪಡೆದುಕೊಂಡವನ ಹೊರತು ಅವರು ಯಾರು ಶಿಫಾರಸ್ಸಿನ ಅಧಿಕಾರವನ್ನು ಹೊಂದಿರುವುದಿಲ್ಲ.
(88) ಪರಮ ದಯಾಮಯನಾದ ಅಲ್ಲಾಹನು ಪುತ್ರನನ್ನು ಹೊಂದಿದಾನೆAದು ಅವರು ಹೇಳುತ್ತಾರೆ.
(89) ಖಂಡಿತವಾಗಿಯು ನೀವು ಅತ್ಯಂತ ಘೋರ ಮಾತನ್ನಾಡಿರುವಿರಿ.
(90) ಆಕಾಶಗಳು ಈ ಮಾತಿನ ನಿಮಿತ್ತ ಸಿಡಿದು ಬೀಳುವ, ಭೂಮಿಯು ಬಿರಿಯುವ, ಪರ್ವತಗಳು ಧ್ವಂಸಗೊಳ್ಳುವ ಸಮಯ ಸಮೀಪದಲ್ಲಿದೆ.
(91) ಏಕೆಂದರೆ ಅವರು ಪರಮ ದಯಾಮಯನಿಗೆ ಪುತ್ರನಿರುವನೆಂದು ವಾದಿಸುತ್ತಾರೆ.
(92) ಪುತ್ರನನ್ನು ನಿಶ್ಚಯಿಸಿಕೊಳ್ಳುವುದು ಪರಮ ದಯಾಮಯನಿಗೆ ಶೋಭಿಸುವುದಿಲ್ಲ.
(93) ಭೂಮಿ ಆಕಾಶಗಳಲ್ಲಿರುವವರೆಲ್ಲರೂ ಅಲ್ಲಾಹನ ದಾಸರಾಗಿ ಹಾಜರಾಗುವವರಾಗಿದ್ದಾರೆ.
(94) ವಾಸ್ತವದಲ್ಲಿ ಅವನು ಅವರೆಲ್ಲರನ್ನು ಆವರಿಸಿರುತ್ತಾನೆ ಮತ್ತು ಎಲ್ಲರನ್ನು ಎಣಿಸಿಯೂ ಇಟ್ಟಿರುವನು.
(95) ಪುನರುತ್ಥಾನ ದಿನದಂದು ಅವರೆಲ್ಲರೂ ಅವನಲ್ಲಿಗೆ ಒಬ್ಬಂಟಿಗರಾಗಿ ಹಾಜರಾಗುವರು.
(96) ನಿಸ್ಸಂಶಯವಾಗಿಯು ಸತ್ಯವಿಶ್ವಾಸಿವಿರಿಸಿ, ಸತ್ಕರ್ಮಗಳನ್ನು ಕೈಗೊಂಡಿರುವರಿಗಾಗಿ ಪರಮ ದಯಾಮಯನಾದ ಅಲ್ಲಾಹನು (ಜನರ ಹೃದಯಗಳಲ್ಲಿ) ಪ್ರೀತಿಯನ್ನುಂಟು ಮಾಡಲಿರುವನು.
(97) ನೀವು ಈ ಕುರ್ಆನಿನ ಮೂಲಕ ಭಯಭಕ್ತಿಯುಳ್ಳವರಿಗೆ ಶುಭವಾರ್ತೆ ನೀಡಲೆಂದೂ, ಜಗಳಗಂಟ ಜನಾಂಗಕ್ಕೆ ಎಚ್ಚರಿಕೆ ನೀಡಲೆಂದೂ ನಾವು ಇದನ್ನು ನಿಮ್ಮ ಭಾಷೆಯಲ್ಲಿ ಸರಳಗೊಳಿಸಿರುತ್ತೇವೆ.
(98) ಮತ್ತು ನಾವು ಇವರಿಗಿಂತ ಮೊದಲು ಅದೆಷ್ಟೋ ಸಮುದಾಯಗಳನ್ನು ನಾಶಪಡಿಸಿರುತ್ತೇವೆ. ನೀವು ಅವರ ಪೈಕಿ ಯಾರನ್ನಾದರೂ ಕಾಣುತ್ತಿರುವಿರಾ? ಅಥವಾ ಅವರ ಮೆಲುಧ್ವನಿಯಾದರೂ ನಿಮ್ಮ ಕಿವಿಗೆ ಬೀಳುತ್ತಿದೆಯೇ?