38 - Saad ()

|

(1) ಸ್ವಾದ್, ಉಪದೇಶಗಳನ್ನೊಳಗೊಂಡ ಕುರ್‌ಆನಿನಾಣೆ.

(2) ಆದರೆ, ಸತ್ಯನಿಷೇಧಿಗಳು ದುರಹಂಕಾರದಲ್ಲಿ ಮತ್ತು ವಿರೋಧದಲ್ಲಿ ತಲ್ಲೀನರಾಗಿರುವರು.

(3) ಇವರಿಗಿಂತ ಮೊದಲು ಅದೆಷ್ಟೊ ಜನಾಂಗಗಳನ್ನು ನಾವು ನಾಶ ಮಾಡಿರುತ್ತೇವೆ. ವಸ್ತುತಃ ಅವರು ಮೊರೆಯಿಟ್ಟಿದ್ದರು. ಆದರೆ ಅದು ರಕ್ಷಣೆಯ ಸಂದರ್ಭವಾಗಿರಲಿಲ್ಲ.

(4) ಮತ್ತು ಇವರಿಂದಲೇ ಆದ ಒಬ್ಬ ಮುನ್ನೆಚ್ಚರಿಕೆಗಾರನು ಇವರ ಬಳಿ ಬಂದಿರುವನೆAದು ಇವರು ಆಶ್ಚರ್ಯಪಡುತ್ತಾರೆ. ಹಾಗೂ ಸತ್ಯನಿಷೇಧಿಗಳು ಇವನೊಬ್ಬ ಮಹಾ ಜಾದುಗಾರನೂ, ಸುಳ್ಳುಗಾರನೂ ಆಗಿದ್ದಾನೆಂದು ಹೇಳುತ್ತಾರೆ.

(5) ಇವನು ಎಲ್ಲಾ ದೇವರುಗಳ ಸ್ಥಾನದಲ್ಲಿ ಒಂದೇ ಆರಾಧ್ಯನನ್ನಾಗಿ ಮಾಡಿಬಿಟ್ಟಿರುವನೇ? ನಿಜವಾಗಿಯು ಇದೊಂದು ವಿಚಿತ್ರ ಸಂಗತಿಯಾಗಿದೆ.

(6) ಮತ್ತು ಅವರ ಮುಖಂಡರು ಹೀಗೆ ಹೇಳುತ್ತಾ ನಡೆದರು: ನಡೆಯಿರಿ ಹಾಗೂ ನಿಮ್ಮ ಆರಾಧ್ಯರ ಆರಾಧನೆಯಲ್ಲೇ ಸ್ಥಿರವಾಗಿರಿ ನಿಜವಾಗಿಯು ಇದು ಉದ್ದೇಶಪೂರ್ವಕವಾಗಿ ಮಾಡಲಾಗುತ್ತಿರುವ ಸಂಗತಿಯಾಗಿದೆ.

(7) ನಾವು ಇತರ ಧರ್ಮಗಳಲ್ಲಿ ಇಂತಹ ಮಾತನ್ನು ಕೇಳಲಿಲ್ಲ. ಇದು ಕೃತಕ ಸೃಷ್ಟಿಯಾಗಿದೆ.

(8) ಏನೂ ನಮ್ಮ ನಡುವೆ ಕೇವಲ ಇವನ ಮೇಲೆಯೇ ಬೋಧನೆಯು ಅವತೀರ್ಣಗೊಂಡಿತೇ? ವಾಸ್ತವದಲ್ಲಿ ನಮ್ಮ ವಾಣಿಯಕುರಿತು ಇವರು ಸಂದೇಹದಲ್ಲಿದ್ದಾರೆ ಅಲ್ಲ! ವಾಸ್ತವದಲ್ಲಿ ಇವರು ಇಷ್ಟರವರೆಗೆ ನನ್ನ ಯಾತನೆಯನ್ನು ಸವಿದಿಲ್ಲ.

(9) ಅಥವಾ ಪ್ರಚಂಡನೂ, ಮಹಾದಾನಶೀಲನೂ ಆದ ನಿಮ್ಮ ಪ್ರಭುವಿನ ಕಾರುಣ್ಯದ ಭಂಡಾರಗಳೇನಾದರೂ ಇವರ ಬಳಿ ಇವೆಯೇ ?

(10) ಅಥವಾ ಅವರಿಗೆ ಆಕಾಶಗಳ, ಭೂಮಿಯ ಹಾಗೂ ಅವೆರಡರ ಮಧ್ಯೆಯಿರುವುದರ ಅಧಿಪತ್ಯ ಇದೆಯೇ ? ಹಾಗಿದ್ದರೆ ಅವರು ಆ ಮಾರ್ಗಗಳ ಮೂಲಕ (ಆಕಾಶಗಳ ಉನ್ನತಕ್ಕೆ) ಏರಿ ಹೋಗಲಿ.

(11) ಇದು ಸೋತ ಸÉÊನ್ಯಗಳ ಪÉÊಕಿ ಒಂದು ಚಿಕ್ಕ ಸÉÊನ್ಯವಾಗಿದ್ದು ಸೋಲಿಸಲ್ಪಡಲಿದೆ.

(12) ಇವರಿಗಿಂತ ಮೊದಲು ನೂಹರ ಜನಾಂಗ, ಆದ್ ಹಾಗೂ ಮೊಳೆಗಳವನಾದ ಫಿರ್‌ಔನ್ ಸುಳ್ಳಾಗಿಸಿದ್ದರು.

(13) ಮತ್ತು ಸಮೂದರ, ಲೂತರ ಜನಾಂಗ ಹಾಗೂ ಐಕಾ ನಿವಾಸಿಗಳೂ ಸುಳ್ಳಾಗಿಸಿದ್ದರು. ಇವು (ಮಹಾ) ಪಡೆಗಳಾಗಿದ್ದವು.

(14) ಇವರ ಪÉÊಕಿ ಪ್ರತಿಯೊಬ್ಬರೂ ಸಂದೇಶವಾಹಕರನ್ನು ಸುಳ್ಳಾಗಿಸಿದ್ದರು. ಆಗ ನನ್ನ ಶಿಕÉ್ಷಯು ಅವರ ಮೇಲೆ ಸ್ಧಿರವಾಗಿಬಿಟ್ಟಿತು.

(15) ಅವರು ಒಂದು ಘೋರ ಆರ್ಭಟವನ್ನು ನಿರೀಕ್ಷಿಸುತ್ತಿದ್ದಾರೆ. ಅದಕ್ಕೆ ಕಾಲಾವಕಾಶ ಇರದು.

(16) ಮತ್ತು ಅವರು ಹೇಳುತ್ತಾರೆ: ನಮ್ಮ ಪ್ರಭು, ವಿಚಾರಣಾ ದಿನಕ್ಕೆ ಮೊದಲೇ ನಮಗೆ ನಮ್ಮ ಶಿಕ್ಷೆಯ ಪಾಲನ್ನು ನೀಡಿಬಿಡು.

(17) ಓ ಪ್ರವಾದಿ, ನೀವು ಇವರ ಮಾತುಗಳ ಮೇಲೆ ಸಹನೆ ವಹಿಸಿರಿ ಹಾಗೂ ಮಹಾ ಬಲಿಷ್ಠರಾಗಿದ್ದ ನಮ್ಮ ದಾಸ ದಾವೂದರನ್ನು ಸ್ಮರಿಸಿರಿ. ನಿಜವಾಗಿಯು ಅವರು ಅತ್ಯಧಿಕ (ಅಲ್ಲಾಹನೆಡೆಗೆ) ಪಶ್ಚಾತಾಪ ಪಟ್ಟು ಮರಳುವವರಾಗಿದ್ದರು.

(18) ಅವರೊಂದಿಗೆ ಸಂಜೆ ಮುಂಜಾನೆಯಲ್ಲಿ ಪಾವಿತ್ರö್ಯವನ್ನು ಸ್ತುತಿಸಲಿಕ್ಕಾಗಿ ನಾವು ಪರ್ವತಗಳನ್ನು ನಿಯಂತ್ರಿಸಿ ಕೊಟ್ಟಿದ್ದೆವು.

(19) ಮತ್ತು ಪಕ್ಷಿಗಳೂ ಅವರ ಸುತ್ತಲೂ ಒಟ್ಟಾಗಿ ಸೇರುತ್ತಿದ್ದವು ಮತ್ತು ಅವೆಲ್ಲವೂ ಅವರಿಗೆ ವಿಧೇಯವಾಗಿದ್ದವು.

(20) ಮತ್ತು ನಾವು ಅವರ ಸಾಮ್ರಾಜ್ಯವನ್ನು ಬಲಪಡಿಸಿದ್ದೆವು ಹಾಗೂ ಅವರಿಗೆ ಸುಜ್ಞಾನವನ್ನು ನಿರ್ಣಾಯಕವಾಗಿ ಮಾತನಾಡುವ ಸಾಮರ್ಥ್ಯವನ್ನು ದಯಪಾಲಿಸಿದ್ದೆವು.

(21) ಗೋಡೆಯನ್ನೇರಿ ಅವರ ಆರಾಧನಾ ಕೊಠಡಿಗೆ ಬಂದAತಹ ಆ ವ್ಯಾಜ್ಯಗಾರರ ಸುದ್ದಿಯು ನಿಮಗೆ ತಲುಪಿದೆಯೇ ?

(22) ಅವರು ದಾವೂದರ ಬಳಿಗೆ ಬಂದಾಗ ದಾವೂದರು ಅವರನ್ನು ಕಂಡು ಭಯಪಟ್ಟರು. ಆಗ ಅವರು ಹೇಳಿದರು: ಹೆದರಬೇಡಿರಿ. ನಾವು ಎರಡು ಕಕ್ಷಿದಾರರಾಗಿದ್ದೇವೆ. ನಮ್ಮಲ್ಲಿ ಒಬ್ಬನು ಇನ್ನೊಬ್ಬನ ಮೇಲೆ ಅತಿಕ್ರಮತೋರಿದ್ದಾನೆ. ಇನ್ನು ನೀವು ನ್ಯಾಯದೊಂದಿಗೆ ನಮ್ಮ ನಡುವೆ ತೀರ್ಮಾನ ಮಾಡಿರಿ ಮತ್ತು ಅನ್ಯಾಯ ಮಾಡಬೇಡಿರಿ ಮತ್ತು ನಮ್ಮನ್ನು ನೇರ ಮಾರ್ಗಕ್ಕೆ ಮುನ್ನಡೆಸಿರಿ.

(23) (ಕೇಳಿರಿ) ಇವನು ನನ್ನ ಸಹೋದರನು. ಇವನ ಬಳಿ ತೊಂಬತ್ತೊAಬತ್ತು ಕುರಿಗಳಿವೆ ಮತ್ತು ನನ್ನ ಬಳಿ ಒಂದೇ ಒಂದು ಕುರಿ ಇದೆ. ಆದರೆ ಇವನು ನಿನ್ನ ಈ ಒಂದನ್ನು ಸಹ ನನಗೆ ಒಪ್ಪಿಸಿ ಬಿಡು ಎಂದು ನನ್ನೊಂದಿಗೆ ಹೇಳುತ್ತಾನೆ ಮತ್ತು ಇವನು ವಾಗ್ವಾದದಲ್ಲಿ ನನ್ನನ್ನು ಸೋಲಿಸಿದ್ದಾನೆ.

(24) ಅವರು (ದಾವೂದ್) ಹೇಳಿದರು: ಇವನು ತನ್ನ ಕುರಿಗಳೊಂದಿಗೆ ನಿನ್ನ ಕುರಿಯನ್ನು ಸೇರಿಸಿಕೊಳ್ಳಲು ಕೇಳಿರುವುದು ನಿಸ್ಸಂಶಯವಾಗಿಯು ನಿನ್ನ ಮೇಲೆ ಮಾಡಿದ ಅಕ್ರಮವಾಗಿದೆ ಮತ್ತು ಹೆಚ್ಚಿನ ಭಾಗಸ್ಥರು ಪರಸ್ಪರ ಒಬ್ಬರನ್ನೊಬ್ಬರ ಮೇಲೆ ಅತಿಕ್ರಮವೆಸಗುತ್ತಾರೆ. ಆದರೆ ಸತ್ಯವಿಶ್ವಾಸವಿಟ್ಟವರು ಹಾಗೂ ಸತ್ಕರ್ಮಗಳನ್ನು ಕÉÊಗೊಂಡವರ ಹೊರತು. ಇಂತಹವರು ಬಹಳ ವಿರಳರಾಗಿದ್ದಾರೆ ಮತ್ತÄ ದಾವೂದರು ನಾವು ಅವರನ್ನು ಪರೀಕ್ಷೆಗೊಳಪಡಿಸಿ ದೆವೆಂದು ತಿಳಿದರು. ಕೊಡಲೇ ತನ್ನ ಪ್ರಭುವಿನಲ್ಲಿ ಕ್ಷೆಮೆಯಾಚಿಸಿದರು ಹಾಗೂ ದÉÊನ್ಯತೆಯನ್ನು ತೋರುತ್ತಾ ಸಾಷ್ಟಾಂಗವೆರಗಿದರು ಮತ್ತು ಪಶ್ಚಾತ್ತಾಪ ಪಟ್ಟು ಮರಳಿದರು.

(25) ಆಗ ನಾವು ಅವರ ಪ್ರಮಾದವನ್ನು ಕ್ಷಮಿಸಿದೆವು ಮತ್ತು ಖಂಡಿತವಾಗಿಯು ಅವರಿಗಾಗಿ ನಮ್ಮ ಬಳಿ ನಿಕಟ ಸ್ಥಾನ ಮತ್ತು ಅತ್ಯುತ್ತಮ ನೆಲೆಯಿದೆ.

(26) ಓ ದಾವೂದ್! ನಾವು ನಿಮ್ಮನ್ನು ಈ ಭೂಮಿಯಲ್ಲಿ ಪ್ರತಿನಿಧಿಯನ್ನಾಗಿ ನಿಶ್ಚಯಿಸಿರುತ್ತೇವೆ. ಆದ್ದರಿಂದ ನೀವು ಜನರ ನಡುವೆ ನ್ಯಾಯದೊಂದಿಗೆ ತೀರ್ಪು ನೀಡಿರಿ ಹಾಗೂ ಸ್ವೇಚ್ಛೆಯನ್ನು ಅನುಸರಿಸದಿರಿ. ಇಲ್ಲ ವಾದಲ್ಲಿ ಅದು ನಿಮ್ಮನ್ನು ಅಲ್ಲಾಹನ ಮಾರ್ಗದಿಂದ ತಪ್ಪಿಸಿ ಬಿಡುವುದು. ನಿಜವಾಗಿಯು ಯಾರು ಅಲ್ಲಾಹನ ಮಾರ್ಗದಿಂದ ತಪ್ಪಿ ಹೋಗುತ್ತಾರೋ ಅವರಿಗೆ ಅತ್ಯುಗ್ರ ಶಿಕ್ಷೆಯಿರುವುದು. ಇದು ಅವರು ವಿಚಾರಣಾ ದಿನವನ್ನು ಮರೆತು ಬಿಟ್ಟಿದ್ದುದರ ನಿಮಿತ್ತವಾಗಿದೆ.

(27) ಮತ್ತು ನಾವು ಆಕಾಶವನ್ನು, ಭೂಮಿಯನ್ನು ಮತ್ತು ಅವುಗಳ ನಡುವೆಯಿರುವುದನ್ನು ವ್ಯರ್ಥವಾಗಿ ಸೃಷ್ಟಿಸಿರುವುದಿಲ್ಲ. ಇದಂತು ಸತ್ಯ ನಿಷೇಧಿಗಳ ಭ್ರಮೆಯಾಗಿದೆ. ಆದ್ದರಿಂದ ಸತ್ಯನಿಷೇಧಿಗಳಿಗೆ ನರಕಾಗ್ನಿಯ ವಿನಾಶವಿದೆ.

(28) ಸತ್ಯವಿಶ್ವಾಸವಿರಿಸಿ ಸತ್ಕರ್ಮಗಳನ್ನು ಕÉÊಗೊಂಡವರನ್ನು ಭೂಮಿಯಲ್ಲಿ (ಸದಾ) ಕ್ಷೆÆÃಭೆ ಹರಡುತ್ತಿರುವವರ ಹಾಗೆ ನಾವು ಮಾಡುವೆವೇ? ಅಥವಾ ಭಯಭಕ್ತಿಯು ಳ್ಳವರನ್ನು ದುರಾಚಾರಿಗಳಂತೆ ಮಾಡುವೆವೇ ?

(29) ಇದು ಒಂದು ಸಮೃದ್ಧಿಯುಳ್ಳ ಗ್ರಂಥ, ಜನರು ಇದರ ಸೂಕ್ತಿಗಳ ಕುರಿತು ಚಿಂತಿಸಲೆAದೂ, ಬುದ್ಧಿಜೀವಿಗಳು ಉಪದೇಶ ಪಡೆದುಕೊಳ್ಳಲೆಂದೂ ನಾವಿದನ್ನು ನಿಮ್ಮಡೆಗೆ ಅವತೀರ್ಣಗೊಳಿಸಿರುತ್ತೇವೆ.

(30) ಮತ್ತು ನಾವು ದಾವೂದರಿಗೆ ಸುಲೈಮಾನರನ್ನು ಕರುಣಿಸಿದೆವು. ಅವರು ಅತ್ಯುತ್ತಮ ದಾಸರಾಗಿದ್ದರು ಮತ್ತು ಅತ್ಯಧಿಕವಾಗಿ ಪಶ್ಚಾತ್ತಾಪ ಪಟ್ಟು ಮರಳುವವರಾಗಿದ್ದರು.

(31) ಅತಿವೇಗವಾಗಿ ಓಡುವ ಉತ್ತಮ ಕುದುರೆಗಳನ್ನು ಒಮ್ಮೆ ಅವರ ಮುಂದೆ ಸಾಯಂಕಾಲದ ಹೊತ್ತಲ್ಲಿ ಪ್ರದರ್ಶಿಸಲಾದ ಸಂದರ್ಭ.

(32) ಆಗ ಅವರು ಹೇಳತೊಡಗಿದರು: ನಾನು ನನ್ನ ಪ್ರಭುವಿನ ಸ್ಮರಣೆಗಿಂತ ಈ ಸಂಪತ್ತನ್ನು ಹೆಚ್ಚು ಪ್ರೀತಿಸಿದೆನು. ಕೊನೆಗೆ (ಸೂರ್ಯ) ಮರೆಯಾಯಿತು.

(33) ನೀವು ಅವು(ಆ ಕುದುರೆ)ಗಳನ್ನು ಪುನಃ ನನ್ನ ಮುಂದೆ ತನ್ನಿರಿ. ಬಳಿಕ ಅವರು ಅವುಗಳ ಮೀನಖಂಡಗಳನ್ನು ಮತ್ತು ಕೊರಳುಗಳನ್ನು ಸವರಲುತೊಡಗಿದರು.

(34) ಮತ್ತು ನಾವು ಸುಲೈಮಾನರನ್ನು ಪರೀಕ್ಷಿಸಿದೆವು ಹಾಗೂ ಅವರ ಸಿಂಹಾಸನದ ಮೇಲೆ ಒಂದು ದೇಹವನ್ನು ಹಾಕಿದೆವು. ತರುವಾಯ ಅವರು ಪಶ್ಚಾತ್ತಾಪ ಪಟ್ಟು ಮರಳಿದರು.

(35) ಅವರು ಪ್ರಾರ್ಥಿಸಿದರು: ನನ್ನ ಪ್ರಭು, ನನ್ನನ್ನು ಕ್ಷಮಿಸು ಮತ್ತು ನನ್ನ ನಂತರ ಯಾರಿಗೂ ನೀಡಿರದಂತಹ ಅಧಿಪತ್ಯವನ್ನು ನನಗೆ ಕರುಣಿಸು. ನಿಶ್ಚಯವಾಗಿಯು ನೀನು ಮಹಾ ಉದಾರಿಯಾಗಿರುವೆ.

(36) ಆಗ ನಾವು ಅವರಿಗೆ ಗಾಳಿಯನ್ನು ನಿಯಂತ್ರಿಸಿಕೊಟ್ಟೆವು. ಅದು ಅವರ ಆದೇಶದಂತೆ ಅವರು ಇಚ್ಛಿಸಿದೆಡೆಗೆ ಮೃದುವಾಗಿ ಬೀಸುತ್ತಿತ್ತು.

(37) ಮತ್ತು ಸರ್ವ ವಿಧದ ಕಟ್ಟಡ ನಿರ್ಮಾಣಗಾರರನ್ನು ಮುಳುಗುಗಾರ ಜಿನ್ನ್ಗಳನ್ನು (ಅವರ ಅಧೀನಕ್ಕೆ ಕೊಟ್ಟೆವು)

(38) ಮತ್ತು ಸಂಕೋಲೆಗಳಲ್ಲಿ ಬಂಧಿತರಾಗಿರುವ ಇತರ ಜಿನ್ನ್ಗಳನ್ನೂ ಸಹ.

(39) ಇದು ನಮ್ಮ ಉಡುಗೊರೆಯಾಗಿದೆ. ಆದುದರಿಂದ ನೀವು ಇಚ್ಛಿಸಿದವರಿಗೆ ಉಪಕಾರ ಮಾಡಿ ಇಲ್ಲವೇ ತಡೆದಿರಿಸಿಕೊಳ್ಳಿ. ಯಾವುದೇ ಲೆಕ್ಕವಿಚಾರಣೆಯಿರಲಾರದು.

(40) ಮತ್ತು ಖಂಡಿತವಾಗಿಯು ಅವರಿಗೆ ನಮ್ಮ ಬಳಿ ಸಾಮಿಪ್ಯವು ಮತ್ತು ಅತ್ಯುತ್ತಮ ತಾಣವಿದೆ.

(41) ಮತ್ತು ನಮ್ಮ ದಾಸ ಅಯ್ಯೂಬರ ಪ್ರಸ್ತಾಪವನ್ನು ಮಾಡಿರಿ. ಶÉÊತಾನನು ನನಗೆ ಕಷ್ಟ ಹಾಗೂ ಹಿಂಸೆಯಲ್ಲಿ ಸಿಲುಕಿಸಿರುವನು ಎಂದು ಅವರು ತಮ್ಮ ಪ್ರಭುವನ್ನು ಕರೆದು ಬೇಡಿದ ಸಂದರ್ಭ.

(42) ನೀವು ತಮ್ಮ ಕಾಲನ್ನು ನೆಲಕ್ಕೆ ಬಡಿಯಿರಿ. ಇದು ಸ್ನಾನ ಮಾಡುವಂತಹ ತಂಪು ಹಾಗೂ ಕುಡಿಯುವ ನೀರಾಗಿದೆ.

(43) ಮತ್ತು ನಾವು ನಮ್ಮ ಕಡೆಯ ವಿಶೇಷ ಕಾರುಣ್ಯದಿಂದ ಅವರಿಗೆ ಅವರÀ ಮನೆಯವರನ್ನು ಮತ್ತು ಅವರ ಜೊತೆಯಲ್ಲಿ ಅವರಷ್ಟೇ ಮಂದಿಯನ್ನೂ ನೀಡಿದೆವು. ಇದು ಬುದ್ಧಿಜೀವಿಗಳಿಗೆ ಉದ್ಭೋದೆಯಾಗಲೆಂದಾಗಿದೆ.

(44) ಮತ್ತು ನೀವು ನಿಮ್ಮ ಕÉÊಯಲ್ಲಿ ಹುಲ್ಲು ಕಡ್ಡಿಗಳ ಪೊರಕೆಯೊಂದನ್ನು ತೆಗೆದುಕೊಂಡು ಅದರಿಂದ ಹೊಡೆಯಿರಿ ಹಾಗೂ ಪ್ರತಿಜ್ಞೆಯನ್ನು ಉಲ್ಲಂಘಿಸಬೇಡಿ. ನಿಜವಾಗಿಯು ನಾವು ಅಯ್ಯೂಬರನ್ನು ಸಹನಾಶೀಲರನ್ನಾಗಿ ಕಂಡೆವು. ಅವರು ಅತ್ಯುತ್ತಮ ದಾಸರು ಮತ್ತು ತಮ್ಮ ಪ್ರಭುವಿನೆಡೆಗೆ ಹೆಚ್ಚು ಮರಳುವವರಾಗಿದ್ದರು.

(45) ನೀವು ನಮ್ಮ ದಾಸರಾದ ಇಬ್ರಾಹೀಮ್, ಇಸ್‌ಹಾಕ್, ಯಅಕೂಬರನ್ನೂ ಸ್ಮರಿಸಿರಿ. ಅವರು ಕರ್ಮ ಶಕ್ತಿಯುಳ್ಳವರೂ, ದೂರದೃಷ್ಟಿ ಹೊಂದಿದವರೂ ಆಗಿದ್ದರು.

(46) ನಾವು ಅವರನ್ನು ಒಂದು ವಿಶಿಷ್ಟ ಗುಣದಿಂದಾಗಿ ಉತ್ಕೃಷ್ಟಗೊಳಿಸಿದೆವು. ಅದು ಪರಲೋಕದ ಸ್ಮರಣೆಯಾಗಿತ್ತು.

(47) ನಿಶ್ಚಯವಾಗಿಯೂ ಅವರು ನಮ್ಮ ಬಳಿ ಆಯ್ಕೆ ಮಾಡಲಾದ ಅತ್ಯುತ್ತಮ ಜನರಾಗಿದ್ದರು.

(48) ಇಸ್ಮಾಯೀಲ್, ಯಸ್‌ಅ ಹಾಗೂ ದುಲ್‌ಕಿಫಲ್‌ರನ್ನು ಸ್ಮರಿಸಿರಿ. ಅವರಲ್ಲಿ ಪ್ರತಿಯೊಬ್ಬರೂ ಸತ್ಕರ್ಮಿಗಳಾಗಿದ್ದರು.

(49) ಇದೊಂದು ಬೋಧನೆಯಾಗಿದೆ. ನಿಶ್ಚಯವಾಗಿಯೂ ಭಯಭಕ್ತಿಯುಳ್ಳವರಿಗೆ ಮರಳಲು ಅತ್ಯುತ್ತಮ ನೆಲೆಯಿದೆ.

(50) (ಅಂದರೆ) ಶಾಶ್ವತವಾದ ಸ್ವರ್ಗೋದ್ಯಾನಗಳು: ಅವುಗಳ ದ್ವಾರಗಳನ್ನು ಅವರಿಗಾಗಿ ತೆರೆದಿಡಲಾಗಿದೆ.

(51) ಅವರು ದಿಂಬುಗಳಿಗೆ ಒರಗಿ ಕುಳಿತುಕೊಂಡು ವಿಧವಿಧದ ಹಣ್ಣುಹಂಪಲು ಹಾಗೂ ಪಾನೀಯಗಳನ್ನು ತರಿಸುತ್ತಿರುವರು.

(52) ಮತ್ತು ಅವರ ಬಳಿ ದೃಷ್ಟಿ ತಗ್ಗಿಸಿರುವ ಸಮವಯಸ್ಕರಾದ ಅಪ್ಸರೆಗಳಿರುವರು.

(53) ಇವು ವಿಚಾರಣೆಯ ದಿನಕ್ಕಾಗಿ ನಿಮಗೆ ವಾಗ್ದಾನ ನೀಡಲಾಗುತ್ತಿರುವ ವಸ್ತುಗಳಾಗಿವೆ.

(54) ಖಂಡಿತವಾಗಿಯೂ ಇದು ನಮ್ಮ( ಕಡೆಯ ವಿಶೇಷ) ಜೀವನಾಧಾರವಾಗಿದೆ. ಇದಕ್ಕೆ ಎಂದಿಗೂ ಅಂತ್ಯವಿಲ್ಲ.

(55) ಇದಂತು (ಧರ್ಮನಿಷ್ಠರ) ಪ್ರತಿಫಲವಾಯಿತು. ನಿಶ್ಚಯವಾಗಿಯು ಅತಿಕ್ರಮಿಗಳಿಗೆ ಕೆಟ್ಟತಾಣವಿರುವುದು.

(56) ಅದು ನರಕವಾಗಿದೆ ಅವರು ಅದರಲ್ಲಿ ಪ್ರವೇಶಿಸುವರು ಮತ್ತು ಅದೆಷ್ಟು ನಿಕೃಷ್ಟ ನೆಲೆಯಾಗಿರುವುದು.

(57) ( ಮಲಕ್‌ಗಳು ಹೇಳುವರು) ಇದು ಅತ್ಯುಷ್ಣ ಜಲ ಹಾಗೂ ಕೀವು ಆಗಿದೆ. ಆದ್ದರಿಂದ ಅವರು ಅದನ್ನು ಸವಿಯಲಿ.

(58) ಇದೇ ರೀತಿಯ ಇತರೇ ಶಿಕ್ಷೆಗಳಿರುವವು.

(59) (ಮಲಕ್‌ಗಳು ಸತ್ಯನಿಷೇಧಿಗಳಿಗೆÀ ಹೇಳುವರು) ಇದು ನಿಮ್ಮೊಂದಿಗೆ ನರಕದಲ್ಲಿ ಪ್ರವೇಶಿಸಲಿರುವ ಒಂದು ತುಕ್ಕಡಿಯಾಗಿದೆ. (ಆಗ ನಾಯಕರು) ಅವರಿಗೆಯಾವ ಸ್ವಾಗತವೂ ಇಲ್ಲ. ಇವರು ನರಕಾಗ್ನಿಯನ್ನು ಪ್ರವೇಶಿಸುವವರಾಗಿರುವರು ಎಂದು ಹೇಳುವರು.

(60) (ಆಗ ಅವರ ಅನುಯಾಯಿಗಳು) ಹೇಳುವರು: ಹಾಗಲ್ಲ! ನಿಮಗೂ ಯಾವ ಸ್ವಾಗತವಿಲ್ಲ. ನೀವೇ ಇದನ್ನು ಮೊದಲು ನಮ್ಮ ಮುಂದೆ ತಂದಿಟ್ಟಿರುವಿರಿ. ಹಾಗೆಯೇ ಅದೆಷ್ಟು ಕೆಟ್ಟ ವಾಸಸ್ಥಾನವಾಗಿದೆ.

(61) ಅವರೆನ್ನುವರು: ನಮ್ಮ ಪ್ರಭು, ಯಾರು ನಮಗೆ ಈ ಶಿಕ್ಷಗೆ ಗುರಿಪಡಿಸಿದರೂ ಅವರಿಗೆ ನರಕಾಗ್ನಿಯ ಇಮ್ಮಡಿ ಯಾತನೆಯನ್ನು ನಿಶ್ಚಯಿಸಿಬಿಡು.

(62) ಮತ್ತು ಅವರು ಹೇಳುವರು: ನಮಗೇನಾಗಿದೇ ನಾವು ಕೆಟ್ಟವರೆಂದು ಭಾವಿಸುತ್ತಿದ್ದಂತಹ ಜನರು ನಮಗೆ ಕಾಣಿಸುತ್ತಿಲ್ಲವಲ್ಲ !

(63) ನಾವು ಅವರನ್ನು ವಿನಃಕಾರಣ ಪರಿಹಾಸ್ಯ ಮಾಡುತ್ತಿದ್ದೆವೋ? ಅಥವಾ ಅವರನ್ನು ಗ್ರಹಿಸಲು ನಮ್ಮ ಕಣ್ಣುಗಳು ವಿಫಲವಾಗಿವೆಯೋ ?

(64) ನರಕವಾಸಿಗಳು ಮಾಡುವ ಈ ವಾಗ್ವಾದವು ಖಂಡಿತವಾಗಿಯು ಸತ್ಯವಾಗಿದೆ.

(65) ಹೇಳಿರಿ: ಓ ಪ್ರವಾದಿಯರೇ, ನಾನು ಕೇವಲ ಒಬ್ಬ ಮುನ್ನೆಚ್ಚರಿಕೆಗಾರನಾಗಿ ರುವೆನು, ಏಕÉÊಕನೂ, ಸರ್ವಾಧಿಪತಿಯು ಆದ ಅಲ್ಲಾಹನ ಹೊರತು ಅನ್ಯ ಆರಾಧ್ಯನಿಲ್ಲ.

(66) ಅವನು ಆಕಾಶಗಳ ಮತ್ತು ಭೂಮಿಯ ಹಾಗೂ ಅವೆರಡರ ನಡುವಿನ ಪ್ರಭುವಾಗಿದ್ದಾನೆ. ಅವನು ಪ್ರಚಂಡನೂ, ಕ್ಷಮಾಶೀಲನೂ ಆಗಿರುವನು.

(67) ಹೇಳಿರಿ: ಇದು ಗಂಭೀರ ವಾರ್ತೆಯಾಗಿದೆ.

(68) ಅದರಿಂದ ನೀವು ವಿಮುಖರಾಗುತ್ತಿರುವಿರಿ.

(69) ಮಹೋನ್ನತ ಮಲಕ್‌ಗಳು ಪರಸ್ಪರ ತರ್ಕ ಮಾಡುತ್ತಿದ್ದುದರ ಬಗ್ಗೆ ನನಗೆ ಯಾವುದೇ ಜ್ಞಾನವಿಲ್ಲ.

(70) ನಾನು ಸುಸ್ಪಷ್ಟವಾಗಿ ಮುನ್ನೆಚ್ಚರಿಕೆ ನೀಡುವವನಾಗಿದ್ದೇನೆಂದು ಮಾತ್ರ ನನ್ನೆಡೆಗೆ ದಿವ್ಯ ಸಂದೇಶ ಮಾಡಲಾಗುತ್ತಿದೆ.

(71) ನಿಮ್ಮ ಪ್ರಭುವು ಮಲಕ್‌ಗಳೊಂದಿಗೆ ಹೇಳಿದ ಸಂದರ್ಭವನ್ನು ಸ್ಮರಿಸಿರಿ ಖಂಡಿತವಾಗಿಯು ನಾನು ಆವೆಮಣ್ಣಿನಿಂದ ಒಬ್ಬ ಮಾನವನನ್ನು ಸೃಷ್ಟಿಸುವವನಿ ದ್ದೇನೆ.

(72) ಹಾಗೆಯೇ ನಾನು ಅವನನ್ನು ಪರಿಪೂರ್ಣಗೊಳಿಸಿದಾಗ ಹಾಗೂ ಅವನಲ್ಲಿ ನನ್ನ ಆತ್ಮವನ್ನು ಊದಿದಾಗ ನೀವೆಲ್ಲರೂ ಅವನ ಮುಂದೆ ಸಾಷ್ಟಾಂಗವೆರಗಿರಿ.

(73) ಆಗ ಮಲಕ್‌ಗಳೆಲ್ಲರೂ ಒಟ್ಟಾಗಿ ಸಾಷ್ಟಾಂಗವೆರಗಿದರು.

(74) ಆದರೆ ಇಬ್‌ಲೀಸನ ಹೊರತು ಅವನು ಅಹಂಭಾವ ತೋರಿದನು ಮತ್ತು ಅವನು ಸತ್ಯನಿಷೇಧಿಗಳಲ್ಲಾಗಿದ್ದನು.

(75) ಅಲ್ಲಾಹನು ಹೇಳಿದನು: ಓ ಇಬ್‌ಲೀಸ್, ನಾನು ನನ್ನೆರಡು ಕÉÊಗಳಿಂದ ಸೃಷ್ಟಿಸಿದಂತವನಿಗೆ ನೀನು ಸಾಷ್ಟಾಂಗವೆರಗುವುದರಿAದ ನಿನ್ನನ್ನು ತಡೆದುದ್ದಾದರೂ ಏನು? ನೀನು ದರ್ಪತೋರಿದೆಯಾ ? ಇಲ್ಲವೇ ನೀನು ಉನ್ನತ ಮಟ್ಟದವರಲ್ಲಿ ಸೇರಿರುವೆಯಾ ?

(76) ಇಬ್‌ಲೀಸ್ ಉತ್ತರಿಸಿದನು: ನಾನು ಅವನಿಗಿಂತ ಉತ್ತಮನು. ನೀನು ನನ್ನನ್ನು ಅಗ್ನಿಯಿಂದ ಸೃಷ್ಟಿಸಿರುವೆ ಹಾಗೂ ಅವನನ್ನು ಆವೆಮಣ್ಣಿನಿಂದ ಸೃಷ್ಟಿಸಿರುವೆ.

(77) ಹೇಳಲಾಯಿತು: ನೀನು ಇಲ್ಲಿಂದ ತೊಲಗು ಖಂಡಿತವಾಗಿಯು ನೀನು ತಿರಸ್ಕೃತನಾಗಿರುವೆ.

(78) ನಿಶ್ಚಯವಾಗಿಯು ನಿರ್ಣಾಯಕ ದಿನದವರೆಗೂ ನಿನ್ನ ಮೇಲೆ ನನ್ನ ಶಾಪವಿರುವುದು.

(79) ಅವನು ಹೇಳಿದನು: ನನ್ನ ಪ್ರಭುವೇ, ಜನರು ಪುನಃ ಎಬ್ಬಸಲಾಗುವ ದಿನದವರೆಗೆ ನನಗೆ ಕಾಲಾವಕಾಶ ನೀಡು.

(80) ಅಲ್ಲಾಹನು ಹೇಳಿದನು: ನೀನು ಕಾಲಾವಕಾಶ ನೀಡಲಾದವರಲ್ಲಾಗಿರುವೆ.

(81) ನಿಶ್ಚಿತ ಸಮಯವು ಬರುವ ದಿನದವರೆಗೆ

(82) ಆಗ ಅವನು ಹೇಳಿದನು: ನಿನ್ನ ಪ್ರತಾಪದಾಣೆ, ನಾನು ಅವರೆಲ್ಲರನ್ನೂ ಖಂಡಿತ ದಾರಿಗೆಡಿಸುವೆನು.

(83) ಆದರೆ ಅವರಲ್ಲಿ ನಿನ್ನ ನಿಷ್ಠಾವಂತದಾಸರ ಹೊರತು.

(84) ಅಲ್ಲಾಹನು ಹೇಳಿದನು: ಇದು ಸತ್ಯವಾಗಿದೆ ಮತ್ತು ನಾನು ಸತ್ಯವನ್ನೇ ಹೇಳುತ್ತೇನೆ.

(85) ಖಂಡಿತವಾಗಿಯು ನಾನು ನಿನ್ನಿಂದಲೂ ಮತ್ತು ನಿನ್ನನ್ನು ಅನುಸರಿಸುವ ಸಕಲರಿಂದಲೂ ನರಕವನ್ನು ತುಂಬಿ ಬಿಡುವೆನು.

(86) ಹೇಳಿರಿ ಓ ಪ್ರವಾದಿಯವರೇ, ಇದಕ್ಕಾಗಿ (ಸತ್ಯ ಪ್ರಚಾರಕ್ಕಾಗಿ)ನಾನು ನಿಮ್ಮಿಂದಯಾವುದೇ ಪ್ರತಿಫಲವನ್ನು ಬೇಡುತ್ತಿಲ್ಲ. ನಾನು ಕೃತಕರಚನೆಗಾರರಲ್ಲೂ ಸೇರಿಲ್ಲ.

(87) ಇದು ಸರ್ವಲೋಕದವರಿಗೆ ಒಂದು ಉಪದೇಶವಾಗಿದೆ.

(88) ಒಂದು ಕಾಲಾವಧಿಯ ನಂತರ ನೀವು ಇದರ ವಾಸ್ತವಿಕತೆಯನ್ನು ಖಂಡಿತ ತಿಳಿಯಲಿರುವಿರಿ.