14 - Ibrahim ()

|

(1) ಅಲಿಫ್ ಲಾಮ್ ರಾ ಇದು ಒಂದು ಗ್ರಂಥ. ನೀವು ಜನರನ್ನು ಅವರ ಪ್ರಭುವಿನ ಆಜ್ಞೆಯಿಂದ ಅಂಧಕಾರಗಳಿAದ ಪ್ರಕಾಶದೆಡೆಗೆ ಹೊರತರಲಿಕ್ಕಾಗಿ ನಾವು ಇದನ್ನು ನಿಮ್ಮೆಡೆಗೆ ಅವತೀರ್ಣಗೊಳಿಸಿದ್ದೇವೆ, ಪ್ರಚಂಡನೂ, ಸ್ತುತ್ಯಾರ್ಹನೂ ಆದ ಅಲ್ಲಾಹನ ಮಾರ್ಗದೆಡೆಗೆ ನಡೆಸಬೇಕೆಂದು.

(2) ಆಕಾಶಗಳ ಮತ್ತು ಭೂಮಿಯಲ್ಲಿರುವ ಸಕಲವೂ ಅಲ್ಲಾಹನದ್ದಾಗಿದೆ ಮತ್ತು ಸತ್ಯ ನಿಷÉÃಧಿಗಳಿಗೆ ಅತ್ಯಂತ ಕಠಿಣ ವಿನಾಶಕಾರಿ ಶಿಕ್ಷೆಯಿದೆ,

(3) ಅವರು ಪರಲೋಕದ ಬದಲಿಗೆ ಐಹಿಕ ಜೀವನವನ್ನು ಇಷÀ್ಟಪಡುತ್ತಾರೆ ಅಲ್ಲಾಹನ ಮಾರ್ಗದಿಂದ ಜನರನ್ನು ತಡೆಯುತ್ತಾರೆ ಮತ್ತು ಅದರಲ್ಲಿ ವಕ್ರತೆಯುಂಟಾಗಲು ಬಯಸುತ್ತಾರೆ. ಅವರು ಪಥಭ್ರಷÀ್ಟತೆಯಲ್ಲಿ ದೂರ ಸಾಗಿದ್ದಾರೆ.

(4) ನಾವು ಪ್ರತಿಯೊಬ್ಬ ಪೈಗಂಬರರನ್ನು ಅವರ ಜನಾಂಗದ ಭಾಷÉಯಲ್ಲೇ ಕಳುಹಿಸಿರುತ್ತೇವೆ. ಅವರು (ಆ ಸಂದೇಶವನ್ನು) ಅವರ ಮುಂದೆ ಸ್ಪಷÀ್ಟವಾಗಿ ವಿವರಿಸಿಕೊಡಲೆಂದು. ಇನ್ನು ಅಲ್ಲಾಹನು ತಾನಿಚ್ಛಿಸಿದವರನ್ನು ಮಾರ್ಗ ಭ್ರಷÀ್ಟಗೊಳಿಸುತ್ತಾನೆ ಮತ್ತು ತಾನಿಚ್ಛಿಸಿದವರಿಗೆ ಸನ್ಮಾರ್ಗವನ್ನು ತೋರಿಸುತ್ತಾನೆ ಮತ್ತು ಅವನು ಪ್ರಚಂಡನೂ ಯುಕ್ತಿಪೂರ್ಣನೂ ಆಗಿರುವನು.

(5) ನಾವು ಮೂಸರವರನ್ನು ನೀವು ನಿಮ್ಮ ಜನಾಂಗವನ್ನು ಅಂಧಕಾರಗಳಿAದ ಪ್ರಕಾಶದೆಡೆಗೆ ಹೊರತನ್ನಿರಿ ಮತ್ತು ಅವರಿಗೆ ಅಲ್ಲಾಹನ ದಿನಗಳನ್ನು (ಹಿಂದೆ ನಡೆದಿರುವ ಮಹಾ ಘಟನೆಗಳನ್ನು) ನೆನಪಿಸಿಕೊಡಿರಿ ಎಂದು ನಮ್ಮ ದೃಷ್ಟಾಂತಗಳೊAದಿಗೆ ಕಳುಹಿಸಿದೆವು. ಇದರಲ್ಲಿ ಸಹನಶೀಲ ಹಾಗೂ ಕೃತಜ್ಞರಾದ ಪ್ರತಿಯೊಬ್ಬರಿಗೆ ನಿದರ್ಶನಗಳಿವೆ.

(6) ಮೂಸ ತಮ್ಮ ಜನಾಂಗದೊಡನೆ ಹೇಳಿದ ಸಂದರ್ಭವನ್ನು ಸ್ಮರಿಸಿರಿ; ಅಲ್ಲಾಹನು ನಿಮ್ಮನ್ನು ಫಿರ್‌ಔನಿನ ಪರಿವಾರದಿಂದ ರಕ್ಷಿಸಿ ನಿಮ್ಮ ಮೇಲೆ ಮಾಡಿದ ಅನುಗ್ರಹಗಳನ್ನು ಸ್ಮರಿಸಿರಿ. ಅವರು ನಿಮಗೆ ಮಹಾ ಹಿಂಸೆ ಕೊಡುತ್ತಿದ್ದರು. ನಿಮ್ಮ ಗಂಡು ಸಂತತಿಗಳನ್ನು ಕೊಂದು ನಿಮ್ಮ ಹೆಣ್ಣು ಸಂತತಿಗಳನ್ನು ಜೀವಂತವಾಗಿ ಬಿಡುತ್ತಿದ್ದರು, ಮತ್ತು ನಿಮಗೆ ಅದರಲ್ಲಿ ನಿಮ್ಮ ಪ್ರಭುವಿನ ಕಡೆಯಿಂದ ಮಹಾ ಪರೀಕ್ಷೆಯಿತ್ತು.

(7) ಇನ್ನು ನೀವು ಕೃತಜ್ಞತೆ ತೋರಿದರೆ ನಿಸ್ಸಂಶಯವಾಗಿಯೂ ನಾನು ನಿಮಗೆ ಅಧಿಕ ನೀಡುವೆನು ಮತ್ತು ನೀವು ಕೃತಘ್ನತೆ ತೋರಿದರೆ ಖಂಡಿತವಾಗಿ ನನ್ನ ಶಿಕ್ಷೆ ಕಠಿಣವಾಗಿದೆ ಎಂದು ನಿಮ್ಮ ಪ್ರಭು ಎಚ್ಚರಿಸಿದ ಸಂದರ್ಭವನ್ನು ಸ್ಮರಿಸಿರಿ.

(8) ಮೂಸ ಹೇಳಿದರು; ನೀವು ಮತ್ತು ಭೂಮಿಯಲ್ಲಿರುವ ಸಕಲರೂ ಅಲ್ಲಾಹನಿಗೆ ಕೃತಘ್ನತೆ ತೋರಿದರೂ ಅಲ್ಲಾಹನು ನಿರಪೇಕ್ಷನೂ, ಸ್ತುತ್ಯಾರ್ಹನು ಆಗಿರುವನು.

(9) ನಿಮಗಿಂತ ಮುಂಚೆ ಗತಿಸಿದಂತಹ ನೂಹರ ಜನಾಂಗ, ಆದ್ ಮತ್ತು ಸಮೂದರ ಮತ್ತು ಅಲ್ಲಾಹನ ಹೊರತು ಇನ್ಯಾರು ಅರಿಯದ ಅವರ ನಂತರದ ಹಲವಾರು ಜನಾಂಗಗಳ ಸುದ್ದಿಗಳು ನಿಮಗೆ ತಲುಪಲಿಲ್ಲವೇ? ಅವರೆಡೆಗೆ ಅವರ ಸಂದೇಶವಾಹಕರು ಸ್ಪಷÀ್ಟ ಪ್ರಮಾಣಗಳನ್ನು ತಂದರು. ಆದರೆ ಅವರು ತಮ್ಮ ಕೈಗಳನ್ನು ತಮ್ಮ ಬಾಯೊಳಗೆ ತೂರಿಸಿಕೊಂಡು ಸ್ಪಷÀ್ಟವಾಗಿ ಹೇಳಿಬಿಟ್ಟರು; ಯಾವ ಸಂದೇಶದೊAದಿಗೆ ನಿಮ್ಮನ್ನು ಕಳುಹಿಸಲಾಗಿದೆಯೋ ನಾವು ಅದನ್ನು ನಿರಾಕರಿಸುವವರಾಗಿದ್ದೇವೆ, ಹಾಗೂ ನೀವು ಯಾವುದರ ಕಡೆಗೆ ನಮ್ಮನ್ನು ಕರೆಯುತ್ತಿರುವಿರೋ ಅದರಲ್ಲಿ ನಾವು ಗಂಭೀರ ಸಂದೇಹವನ್ನು ಹೊಂದಿದ್ದೇವೆ.

(10) ಅವರ ಸಂದೇಶವಾಹಕರು ಹೇಳಿದರು ಆಕಾಶಗಳ ಮತ್ತು ಭೂಮಿಯ ಸೃಷ್ಟಿಕರ್ತನಾದ ಅಲ್ಲಾಹನ ಕುರಿತು ನೀವು ಸಂದೇಹ ಪಡುತ್ತಿರುವಿರಾ? ಅವನು ನಿಮ್ಮ ಪಾಪಗಳನ್ನು ಕ್ಷಮಿಸಿಬಿಡಲೆಂದು ಹಾಗೂ ನಿಮಗೆ ಒಂದು ನಿರ್ದಿಷÀ್ಟ ಅವಧಿಯವರೆಗೆ ಕಾಲಾವಕಾಶ ಕೊಡಲೆಂದು ನಿಮ್ಮನ್ನು ಕರೆಯುತ್ತಿದ್ದಾನೆ. ಅವರು ಹೇಳಿದರು: ನೀವು ನಮ್ಮಂತಹ ಮನುಷÀ್ಯರೇ ಆಗಿರುವಿರಿ. ನಮ್ಮ ಪೂರ್ವಜರು ಆರಾಧಿಸುತ್ತಿದ್ದವುಗಳಿಂದ ನಮ್ಮನ್ನು ತಡೆಯಲು ನೀವು ಬಯಸುತ್ತಿರುವಿರಾ ? ಹಾಗಾದರೆ ನಮ್ಮ ಮುಂದೆ (ಸತ್ಯತೆಯ ಬಗ್ಗೆ) ಯಾವುದಾದರೂ ಸುಸ್ಪಷÀ್ಟ ಆಧಾರವನ್ನು (ಪವಾಡವನ್ನು) ತನ್ನಿರಿ.

(11) ಅವರಿಗೆ ಅವರ ಸಂದೇಶವಾಹಕರು ಹೇಳಿದರು; ನಾವು ನಿಮ್ಮಂತಹ ಮನುಷÀ್ಯರೇ ಆಗಿದ್ದೇವೆ ಎಂಬುದು ನಿಜ. ಆದರೆ ಅಲ್ಲಾಹನು ತನ್ನ ದಾಸರ ಪೈಕಿ ತಾನಿಚ್ಛಿಸಿದವರನ್ನು (ದೌತ್ಯ ಕಾರ್ಯಕ್ಕೆ ಆಯ್ದುಕೊಂಡು) ಅನುಗ್ರಹಿಸುತ್ತಾನೆ, ಅಲ್ಲಾಹನ ಅಪ್ಪಣೆಯ ವಿನಃ ನಿಮ್ಮ ಬಳಿಗೆ ಯಾವ ಆಧಾರ ಪ್ರಮಾಣವನ್ನು ತಂದುಕೊಡುವುದು ನಮ್ಮ ಅಧಿಕಾರದಲ್ಲಿಲ,್ಲ ಮತ್ತು ಸತ್ಯ ವಿಶ್ವಾಸಿಗಳು ಅಲ್ಲಾಹನ ಮೇಲೆಯೇ ಭರವಸೆಯನ್ನಿರಿಸಲಿ.

(12) ನಾವು ಅಲ್ಲಾಹನ ಮೇಲೆಯೇ ಭರವಸೆಯನ್ನೇಕೆ ಇಡಬಾರದು ? ವಸ್ತುತಃ ಅವನು ನಮಗೆ ನಮ್ಮ ಮಾರ್ಗಗಳನ್ನು ತೋರಿರುವನು ನೀವು ನಮಗೆ ಕೊಡುತ್ತಿರುವ ಹಿಂಸೆಗಳನ್ನು ಖಂಡಿತ ನಾವು ಸಹಿಸುವೆವು ಮತ್ತು ಭರವಸೆಯನ್ನಿರಿಸುವವರು ಅಲ್ಲಾಹನ ಮೇಲೆಯೇ ಭರವಸೆಯನ್ನಿರಿಸಲಿ.

(13) ಸತ್ಯ ನಿಷÉÃಧಿಸಿದವರು ತಮ್ಮ ಸಂದೇಶವಾಹಕರಿಗೆ ಹೇಳಿದರು; ನೀವು ನಮ್ಮ ಧರ್ಮಕ್ಕೆ ಮರಳದಿದ್ದರೆ ನಾವು ನಿಮ್ಮನ್ನು ನಮ್ಮ ನಾಡಿನಿಂದ ಗಡಿಪಾರು ಮಾಡುವೆವು, ಆಗ ಅವರ ಪ್ರಭು ಅವರೆಡೆಗೆ ಸಂದೇಶ ನೀಡಿದನು. ಖಂಡಿತವಾಗಿಯೂ ನಾವು ಅಕ್ರಮಿಗಳನ್ನೇ ನಾಶಗೊಳಿಸುವೆವು

(14) ಮತ್ತು ಅವರ ನಂತರ ನಾವು ನಿಮ್ಮನ್ನು ಭೂಮಿಯಲ್ಲಿ ನೆಲೆಗೊಳಿಸುವೆವು. ಇದು ನನ್ನ ಬಳಿ ನಡೆಯಲಿರುವ ವಿಚಾರಣೆ ಮತ್ತು ನನ್ನ ಎಚ್ಚರಿಕೆಯಿಂದ ಭಯಪಟ್ಟವನಿಗೆ ಇರುವ ಅನುಗ್ರಹವಾಗಿದೆ.

(15) ಸತ್ಯನಿಷÉÃಧಿಗಳು ಸ್ವತಃ ತೀರ್ಪನ್ನು ಬೇಡಿದರು ಪರಿಣಾಮವಾಗಿ ಪ್ರತಿಯೊಬ್ಬ ಹಠಮಾರಿಯಾದ ದುರಹಂಕಾರಿ ಪರಾಜಿತನಾದನು.

(16) ಅವನ ಮುಂದೆ ನರಕವು ಇದೆ ಅಲ್ಲಿ ಅವನಿಗೆ ರಕ್ತಮಿಶ್ರಿತ ಕೀವಿನ ನೀರನ್ನು ಕುಡಿಸಲಾಗುವುದು.

(17) ಅವನು ಅದನ್ನು ಗುಟುಕು ಗುಟುಕಾಗಿ ಕುಡಿಯಲು ಯತ್ನಿಸುವನು. ಆದರೂ ಅದನ್ನು ಗಂಟಲಿನಿAದ ಇಳಿಸಲು ಸಾಧ್ಯವಾಗದು, ಮತ್ತು ಅವನಿಗೆ ಎಲ್ಲಾ ಕಡೆಯಿಂದಲೂ ಮರಣವು ಬಂದುಬಿಡುವುದು, ಆದರೆ ಅವನು ಸಾಯಲಾರ. ಅನಂತರ ಅದರ ಹಿಂದೆಯೇ ಕಠಿಣ ಯಾತನೆಯು ಸಹ ಇರುವುದು.

(18) ತಮ್ಮ ಪ್ರಭುವನ್ನು ನಿಷÉÃಧಿಸಿದವರ ಕರ್ಮಗಳ ಉದಾಹರಣೆಯು ಬೂದಿಯಂತೆ. ಒಂದು ಬಿರುಗಾಳಿಯ ದಿನ ಚಂಡಮಾರುತವು ಅದನ್ನು ಹಾರಿಸಿತು. ಅವರು ತಮ್ಮ ಸಂಪಾದನೆಯ ಯಾವ ಪ್ರತಿಫಲವನ್ನು ಪಡೆಯಲು ಸಾಮರ್ಥ್ಯ ಹೊಂದಲಾರರು. ಇದುವೇ ಅತಿ ವಿದೂರ ಪಥಭ್ರಷÀ್ಟತೆಯಾಗಿದೆ.

(19) ಅಲ್ಲಾಹನು ಆಕಾಶಗಳನ್ನು ಮತ್ತು ಭೂಮಿಯನ್ನು ಅತ್ಯುತ್ತಮ ಯೋಜನೆಯೊಂದಿಗೆ ಸೃಷ್ಟಿಸಿರುತ್ತಾನೆ ಎಂದು ನೀವು ನೋಡಿಲ್ಲವೇ? ಅವನಿಚ್ಛಿಸಿದರೆ ನಿಮ್ಮನ್ನು ಅಳಿಸಿ ಒಂದು ಹೊಸ ಸೃಷ್ಟಿಯನ್ನು ತರಬಲ್ಲನು.

(20) ಇದು ಅಲ್ಲಾಹನ ಮೇಲೆ ಒಂದಿಷÀÄ್ಟ ಕಷÀ್ಟಕರ ಕಾರ್ಯವಲ್ಲ.

(21) ಸಕಲರೂ ಅಲ್ಲಾಹನ ಮುಂದೆ ಹಾಜರಾಗುವರು. ಆಗ ದುರ್ಬಲರು ಅಹಂಕಾರಿಗಳಾಗಿದ್ದವರೊAದಿಗೆ ಹೇಳುವರು; ನಾವಂತೂ ನಿಮ್ಮ ಅನುಯಾಯಿಗಳಾಗಿದ್ದೆವು ಆದ್ದರಿಂದ ಅಲ್ಲಾಹನ ಯಾತನೆಯಿಂದ ರಕ್ಷಿಸಲಿಕ್ಕಾಗಿ ನೀವು ಏನಾದರೂ ಮಾಡಬಲ್ಲಿರಾ? ಅವರು ಉತ್ತರ ನೀಡುವವರು; ಅಲ್ಲಾಹನು ನಮ್ಮನ್ನು ಸನ್ಮಾರ್ಗಕ್ಕೆ ಮುನ್ನಡೆಸುತ್ತಿದ್ದರೆ ಖಂಡಿತ ನಾವು ನಿಮಗೆ ಮಾರ್ಗದರ್ಶನ ನೀಡುತ್ತಿದ್ದೆವು. ಇನ್ನು ನಾವು ಕೂಗಾಡಿದರು ಅಥವ ಸಹನೆ ವಹಿಸಿದರೂ ಸಮಾನವಾಗಿದೆ. ನಮಗೆ ಪಾರಾಗುವ ಯಾವುದೇ ಮಾರ್ಗವಿಲ್ಲ.

(22) ಕಾರ್ಯವು ತೀರ್ಮಾನಿಸಲ್ಪಟ್ಟಾಗ ಶೈತಾನನು ಹೇಳುವನು; ಖಂಡಿತ ಅಲ್ಲಾಹನು ನಿಮಗೆ ಸತ್ಯವಾದ ವಾಗ್ದಾನವನ್ನು ಮಾಡಿದ್ದನು. ಮತ್ತು ನಾನು ನಿಮಗೆ ವಾಗ್ದಾನಗಳನ್ನು ಮಾಡಿದ್ದೆನು. ಆದರೆ ಅದನ್ನು ಉಲ್ಲಂಘಿಸಿಬಿಟ್ಟಿರುವೆನು. ನಿಮ್ಮ ಮೇಲೆ ನನ್ನ ಯಾವುದೇ ಒತ್ತಡ ಇರಲಿಲ.್ಲ ಹೌದು ನಾನು ನಿಮ್ಮನ್ನು ಕರೆದೆನು ಮತ್ತೆ ನೀವು ನನ್ನ ಕರೆಗೆ ಓಗೊಟ್ಟಿರಿ. ಆದ್ದರಿಂದ ನೀವು ನನ್ನನ್ನು ಆಕ್ಷೇಪಿಸಬೇಡಿರಿ. ಸ್ವತಃ ನಿಮ್ಮನ್ನೇ ಆಕ್ಷೇಪಿಸಿಕೊಳ್ಳಿರಿ ನಾನೂ ನಿಮಗೆ ನೆರವು ನೀಡಲಾರೆ. ಇದಕ್ಕೆ ಮೊದಲು ನೀವು ನನ್ನನ್ನು ಅಲ್ಲಾಹನ ಸಹಭಾಗಿಯನ್ನಾಗಿ ನಿಶ್ಚಯಿಸಿದ್ದನ್ನು ನಾನು ನಿರಾಕರಿಸುತ್ತೇನೆ. ಖಂಡಿತವಾಗಿಯೂ ಅಕ್ರಮಿಗಳಿಗೆ ವೇದನಾಜನಕ ಯಾತನೆ ಇರುವುದು.

(23) ಸತ್ಯ ವಿಶ್ವಾಸವನ್ನಿರಿಸಿ ಸತ್ಕರ್ಮಗಳನ್ನು ಎಸಗುವವರು ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳೊಳಗೆ ಪ್ರವೇಶಿಸಲಾಗುವರು. ಅಲ್ಲಿ ಅವರು ಅವರ ಪ್ರಭುವಿನ ಅಪ್ಪಣೆಯಿಂದ ಸದಾ ವಾಸಿಸುವರು. ಅಲ್ಲಿ ಅವರ ಸ್ವಾಗತ ಕೋರುವಿಕೆಯು ಸಲಾಮ್(ಶಾಂತಿ) ಎಂದಾಗಿರುವುದು.

(24) ಅಲ್ಲಾಹನು ಪವಿತ್ರ ವಚನದ ಉಪಮೆಯನ್ನು ಹೇಗೆ ಕೊಟ್ಟಿರುವನೆಂದು ನೀವು ನೋಡಿಲ್ಲವೆ? ಒಂದು ಉತ್ತಮವಾದ ಮರದಂತೆ; ಅದರ ಬೇರುಗಳು ಬಲಿಷÀ್ಠವಾಗಿವೆ ಮತ್ತು ಅದರ ಕೊಂಬೆಗಳು ಆಕಾಶಕ್ಕೇರಿವೆ.

(25) ಅದು ತನ್ನ ಪ್ರಭುವಿನ ಅಪ್ಪಣೆಯಿಂದ, ಸದಾಕಾಲ ತನ್ನ ಫಲವನ್ನು ನೀಡುತ್ತಿರುತ್ತದೆ. ಮತ್ತು ಜನರು ಉಪದೇಶ ಸ್ವೀಕರಿಸಲೆಂದು ಅಲ್ಲಾಹನು ಅವರಿಗಾಗಿ ಉಪಮೆಗಳನ್ನು ವಿವರಿಸುತ್ತಾನೆ.

(26) ಅಶುದ್ಧ ವಚನದ ಉಪಮೆಯು ಒಂದು ಕೆಟ್ಟ ಮರದಂತಿದೆ. ಅದು ಭೂಮಿಯ ಮೇಲ್ಭಾಗದಿಂದಲೇ ಕಿತ್ತೆಸೆಯಲ್ಪಡುತ್ತದೆ. ಅದಕ್ಕೆ ಸ್ಥಿರತೆಯೆಂಬುದೇ ಇರುವುದಿಲ್ಲ.

(27) ಅಲ್ಲಾಹನು ಸತ್ಯ ವಿಶ್ವಾಸವಿರಿಸಿದವರನ್ನು ಸ್ಥಿರವಾದ ವಚನದ ಮೂಲಕ ಈ ಇಹಲೋಕ ಜೀವನದಲ್ಲೂ ಮತ್ತು ಪರಲೋಕದಲ್ಲೂ ಸದೃಢಗೊಳಿಸುತ್ತಾನೆ ಮತ್ತು ಅಲ್ಲಾಹನು ಅಕ್ರಮಿಗಳನ್ನು ದಾರಿಗೆಡಿಸುತ್ತಾನೆ ಹಾಗೂ ಅಲ್ಲಾಹನು ತಾನಿಚ್ಛಿಸುವುದನ್ನು ಮಾಡುತ್ತಾನೆ..

(28) ಅಲ್ಲಾಹನ ಅನುಗ್ರಹದ ಬದಲಿಗೆ ಕೃತಘ್ನತೆಯನ್ನು ತೋರಿದವರೂ ಮತ್ತು ತಮ್ಮ ಜನಾಂಗವನ್ನು ವಿನಾಶದ ಭವನಕ್ಕೆ ತಲುಪಿಸಿದವರನ್ನು ನೀವು ನೋಡಿಲ್ಲವೆ ?

(29) ಅರ್ಥಾತ್ ನರಕಕ್ಕೆ ಅದರಲ್ಲಿ ಅವರು ಪ್ರವೇಶಿಸುವರು, ಅದು ಅತೀ ನಿಕೃಷÀ್ಟ ತಾಣ.

(30) ಜನರನ್ನು ಅಲ್ಲಾಹನ ಮಾರ್ಗದಿಂದ ತಪ್ಪಿಸಲಿಕ್ಕಾಗಿ ಅವರು ಅಲ್ಲಾಹನಿಗೆ ಸಹಭಾಗಿಗಳನ್ನು ಮಾಡಿಕೊಂಡರು. ಹೇಳಿರಿ; ನೀವು ಸುಖಭೋಗಗಳನ್ನು ಸವಿಯಿರಿ ನಿಮ್ಮ ತಲುಪುದಾಣವಂತೂ ನರಕವೇ ಆಗಿದೆ.

(31) ಓ ಪೈಗಂಬರರೇ ನನ್ನ ಸತ್ಯವಿಶ್ವಾಸಿ ದಾಸರಿಗೆ ಹೇಳಿರಿ; ಅವರು ನಮಾಜ್ ಸಂಸ್ಥಾಪಿಸಲಿ ಮತ್ತು ಯಾವುದೇ ವ್ಯವಹಾರವಾಗಲೀ ಮಿತ್ರತ್ವವಾಗಲಿ ಪ್ರಯೋಜನಕ್ಕೆ ಬಾರದ ದಿನವೂ ಬರುವುದಕ್ಕೆ ಮುಂಚೆಯೇ ನಾವು ಅವರಿಗೆ ದಯಪಾಲಿಸಿರುವವುಗಳಿಂದ ರಹಸ್ಯವಾಗಿಯೂ ಬಹಿರಂಗವಾಗಿಯೂ ಖರ್ಚು ಮಾಡಲಿ.

(32) ಅಲ್ಲಾಹನೆಂದರೆ ಆಕಾಶ-ಭೂಮಿಗಳನ್ನು ಸೃಷ್ಟಿಸಿದವನು ಮತ್ತು ಆಕಾಶದಿಂದ ಮಳೆಯನ್ನು ಸುರಿಸಿ ಅದರ ಮೂಲಕ ನಿಮ್ಮ ಜೀವನಾಧಾರಕ್ಕಾಗಿ ಫಲ ಬೆಳೆಗಳನ್ನು ಹೊರತಂದವನು ಮತ್ತು ಅವನು ತನ್ನ ಆದೇಶದಿಂದ ನಿಮಗಾಗಿ ಹಡಗನ್ನು ಸಮುದ್ರದಲ್ಲಿ ಚಲಿಸುತ್ತಿರುವಂತೆ ಅಧೀನಗೊಳಿಸಿದನು ಮತ್ತು ಅವನೇ ನಿಮಗಾಗಿ ನದಿಗಳನ್ನು ಅಧೀನಗೊಳಿಸಿದನು

(33) ಅವನೇ ನಿಮಗೆ ಸೂರ್ಯನನ್ನೂ, ಚಂದ್ರನನ್ನೂ ನಿರಂತರವಾಗಿ ಚಲಿಸುತ್ತಿರುವಂತೆ ಅಧೀನಗೊಳಿಸಿದನು ಹಾಗೂ ರಾತ್ರಿ ಹಗಲನ್ನೂ ನಿಮಗಾಗಿ ಅಧೀನಗೊಳಿಸಿದನು.

(34) ನೀವು ಅವನಿಂದ ಬೇಡಿದ್ದನ್ನೆಲ್ಲಾ ಅವನು ನಿಮಗೆ ನೀಡಿರುವನು ಇನ್ನು ನೀವು ಅಲ್ಲಾಹನ ಅನುಗ್ರಹಗಳನ್ನು ಎಣಿಕೆ ಮಾಡಲು ಬಯಸಿದರೆ ಅವುಗಳನ್ನು ನೀವು ಎಣಿಸಲಾರಿರಿ. ನಿಜವಾಗಿಯೂ ಮನುಷÀ್ಯನು ಮಹಾ ಅಕ್ರಮಿಯೂ ಕೃತಘ್ನನೂ ಆಗಿದ್ದಾನೆ.

(35) ಇಬ್ರಾಹೀಮರು ಪ್ರಾರ್ಥಿಸಿದ ಸಂದರ್ಭವನ್ನು ಸ್ಮರಿಸಿರಿ; ಓ ನನ್ನ ಪ್ರಭುವೇ ನೀನು ಈ ನಾಡನ್ನು (ಮಕ್ಕಾಃ) ಶಾಂತಿಯ ಬೀಡನ್ನಾಗಿ ಮಾಡು ಮತ್ತು ನನ್ನನ್ನು ನನ್ನ ಮಕ್ಕಳನ್ನು ವಿಗ್ರಹಾರಾಧನೆಯಿಂದ ರಕ್ಷಿಸು.

(36) ಓ ನನ್ನ ಪ್ರಭುವೇ ಈ ವಿಗ್ರಹಗಳು ಅನೇಕ ಜನರನ್ನು ದಾರಿಗೆಡಿಸಿಬಿಟ್ಟಿವೆ ಆದ್ದರಿಂದ ಯಾರು ನನ್ನನ್ನು ಅನುಸರಿಸುವವರೋ ಅವರು ನನ್ನವರು ಮತ್ತು ಯಾರು ನನ್ನನ್ನು ಧಿಕ್ಕÀರಿಸುವರೋ ಅವರು, (ಅವರ ವಿಷಯ ನಿನ್ನ ಮೇಲಿದೆ) ನಿಶ್ಚಯವಾಗಿಯೂ ನೀನು ಮಹಾ ಕ್ಷಮಾಶೀಲನೂ, ಕರುಣಾನಿಧಿಯೂ ಆಗಿರುವೆ.

(37) ನಮ್ಮ ಪ್ರಭುವೇ, ನಾನು ನನ್ನ ಸಂತತಿಗಳಲ್ಲಿ ಕೆಲವರನ್ನು ಒಂದು ನಿರ್ಜಲ ನಿಷ್ಫಲ ಬಂಜರು ಕಣಿವೆಯಲ್ಲಿ ನಿನ್ನ ಪವಿತ್ರ ಭವನದ ಸಮೀಪ ನೆಲೆಸಿರುವೆನು. ನಮ್ಮ ಪ್ರಭುವೇ ಇದು ಅವರು ನಮಾಜ್ ಸಂಸ್ಥಾಪಿಸಲೆAದಾಗಿದೆ. ಆದ್ದರಿಂದ ನೀನು ಕೆಲವು ಜನರ ಹೃದಯಗಳನ್ನು ಅವರೆಡೆಗೆ ಒಲಿಯುವಂತೆ ಮಾಡು, ಮತ್ತು ಅವರಿಗೆ ಫಲಗಳ ಅನ್ನಾಹಾರವನ್ನು ದಯಪಾಲಿಸು. ಅವರು ಕೃತಜ್ಞತೆ ತೋರಬಹುದು.

(38) ನಮ್ಮ ಪ್ರಭುವೇ ನಾವು ರಹಸ್ಯವಾಗಿಡುವುದನ್ನು ಬಹಿರಂಗಗೊಳಿಸುವುದನ್ನು ನೀನು ಚೆನ್ನಾಗಿ ಬಲ್ಲೆ, ಮತ್ತು ಭೂಮಿ ಆಕಾಶದ ಯಾವೊಂದು ವಸ್ತುವೂ ಅಲ್ಲಾಹನಿಂದ ಅಡಗಿರುವುದಿಲ್ಲ.

(39) ನನಗೆ ವೃದ್ಧಾಪ್ಯದಲ್ಲಿ ಇಸ್ಮಾಯೀಲ್ ಮತ್ತು ಇಸ್‌ಹಾಕರನ್ನು ದಯಪಾಲಿಸಿದ ಅಲ್ಲಾಹನಿಗೇ ಸರ್ವಸ್ತುತಿ. ನಿಶ್ಚಯವಾಗಿಯೂ ನನ್ನ ಪ್ರಭು ಪ್ರಾರ್ಥನೆಯನ್ನು ಚೆನ್ನಾಗಿ ಆಲಿಸುವನಾಗಿರುತ್ತಾನೆ.

(40) ನನಗೆ ವೃದ್ಧಾಪ್ಯದಲ್ಲಿ ಇಸ್ಮಾಯೀಲ್ ಮತ್ತು ಇಸ್‌ಹಾಕರನ್ನು ದಯಪಾಲಿಸಿದ ಅಲ್ಲಾಹನಿಗೇ ಸರ್ವಸ್ತುತಿ. ನಿಶ್ಚಯವಾಗಿಯೂ ನನ್ನ ಪ್ರಭು ಪ್ರಾರ್ಥನೆಯನ್ನು ಚೆನ್ನಾಗಿ ಆಲಿಸುವನಾಗಿರುತ್ತಾನೆ.

(41) ಓ ನಮ್ಮ ಪ್ರಭುವೇ ವಿಚಾರಣೆ ನಡೆಯುವ ದಿನ ನನ್ನನ್ನು ನನ್ನ ಮಾತಾ-ಪಿತರನ್ನು ಮತ್ತು ಸತ್ಯವಿಶ್ವಾಸಿಗಳನ್ನು ಕ್ಷಮಿಸಿಬಿಡು.

(42) ಅಕ್ರಮಿಗಳು ಮಾಡುತ್ತಿರುವ ಕೃತ್ಯಗಳ ಕುರಿತು ಅಲ್ಲಾಹನು ಅಲಕ್ಷö್ಯನೆಂದು ತಿಳಿಯಬೇಡಿ ಅವನಂತೂ ಅವರಿಗೆ ಕಣ್ಣುಗಳನ್ನು ದಿಟ್ಟಿಸುತ್ತಲೇ ಇರುವ ದಿನದವರೆಗೆ ಕಾಲಾವಕಾಶ ನೀಡಿರುತ್ತಾನೆ.

(43) ಅವರು ತಮ್ಮ ಭೀತಿಯಿಂದ ತಲೆಗಳನ್ನು ಎತ್ತಿ ಓಡುತ್ತಿರುವವರು. ಅವರ ದೃಷ್ಟಿಗಳು ಸ್ವತಃ ಅವರಿಗೂ ಮರಳಿ ಬರಲಾರವು ಮತ್ತು ಅವರ ಹೃದಯಗಳು ಬೋಧಶೂನ್ಯರಾಗಿ ಬಿಡುವವು.

(44) ಶಿಕ್ಷೆಯು ಬರಲಿರುವ ಆ ದಿನದ ಬಗ್ಗೆ ನೀವು ಜನರಿಗೆ ಎಚ್ಚರಿಸಿರಿ ಮತ್ತು ಅಕ್ರಮಿಗಳು ಹೇಳುವರು; ನಮ್ಮ ಪ್ರಭುವೇ ನಮಗೆ ಸ್ವಲ್ಪ ಕಾಲಾವಕಾಶವನ್ನಾದರೂ ನೀಡು. ನಾವು ನಿನ್ನ ಕರೆಗೆ ಓಗೊಡುವೆವು, ಮತ್ತೆ ನಿನ್ನ ಸಂದೇಶವಾಹಕರನ್ನು ಅನುಸರಿಸುವೆವು. ಅಂದು ಅವರೊಂದಿಗೆ ಹೇಳಲಾಗುವುದು ಇದಕ್ಕಿಂತ ಮೊದಲು ನೀವು ನಮಗೆ ಅಳಿಗಾಲವೇ ಇಲ್ಲವೆಂದು ಶಪಥಗಳನ್ನು ಹಾಕುತ್ತಿರಲಿಲ್ಲವೇ?

(45) ಮತ್ತು ನೀವು ತಮ್ಮ ಮೇಲೆ ತಾವೇ ಅಕ್ರಮವೆಸಗಿದವರ ವಸತಿಗಳಲ್ಲಿ ನೆಲೆಸಿರಲಿಲ್ಲವೇ, ಹಾಗೂ ನಾವು ಅವರೊಂದಿಗೆ ಯಾವ ರೀತಿ ವರ್ತಿಸಿದೆವು ಎಂದು ನಿಮಗೆ ಸ್ಪಷÀ್ಟವಾಗಿದೆ. ನಾವು ನಿಮಗಾಗಿ ಹಲವಾರು ಉಪಮೆಗಳನ್ನು ನೀಡಿದ್ದೆವು.

(46) ಅವರು ತಮ್ಮ ಎಲ್ಲಾ ಕುತಂತ್ರಗಳನ್ನು ಪ್ರಯೋಗಿಸಿದರು ಅವರ ಕುತಂತ್ರಗಳ ಪ್ರತಿತಂತ್ರ ಅಲ್ಲಾಹನ ಬಳಿ ಇದೆ ಮತ್ತು ಅವರ ಕುತಂತ್ರಗಳು ಪರ್ವತಗಳನ್ನೇ ಸರಿಸಿಬಿಡುವಷÀÄ್ಟ ಘೋರವಾಗಿದ್ದರೂ ಸರಿಯೇ.

(47) ನೀವು ಎಂದೂ ಅಲ್ಲಾಹನು ತನ್ನ ಸಂದೇಶವಾಹಕರೊAದಿಗೆ ಮಾಡಿದ ವಾಗ್ದಾನವನ್ನು ಉಲ್ಲಂಘಿಸುವವನೆAದು ಭಾವಿಸಬೇಡಿರಿ, ವಾಸ್ತವದಲ್ಲಿ ಅಲ್ಲಾಹನು ಮಹಾ ಪ್ರಚಂಡನು ಪ್ರತೀಕಾರ ಪಡೆಯುವವನು ಆಗಿರುವನು.

(48) ಅಂದು ಭೂಮಿಯನ್ನು ಬೇರೊಂದು ಭೂಮಿಯಿಂದ ಬದಲಾಯಿಸಲಾಗುವುದು ಮತ್ತು ಆಕಾಶಗಳನ್ನು ಸಹ, ಮತ್ತು ಎಲ್ಲರೂ ಏಕೈಕ ಪ್ರಚಂಡನೂ ಆದ ಅಲ್ಲಾಹನ ಮುಂದೆ ಹಾಜರಾಗುವರು.

(49) ಆ ದಿನ ಅಪರಾಧಿಗಳು ಸಂಕೋಲೆಗಳಲ್ಲಿ ಬಂಧಿತರಾಗಿರುವುದನ್ನು ನೀವು ಕಾಣುವಿರಿ.

(50) ಅವರ ಉಡುಪುಗಳು ಗಂಧಕದ್ದಾಗಿರುವವು ಮತ್ತು ಅಗ್ನಿಯು ಅವರ ಮುಖಗಳ ಮೇಲೆ ಆವರಿಸಿಕೊಂಡಿರುವುದು.

(51) ಇದು ಅಲ್ಲಾಹನು ಪ್ರತಿಯೊಬ್ಬ ವ್ಯಕ್ತಿಗೂ ಅವನು ಸಂಪಾದಿಸಿದ ಕರ್ಮಗಳ ಪ್ರತಿಫಲವನ್ನು ನೀಡಲೆಂದಾಗಿದೆ ನಿಸ್ಸಂಶಯವಾಗಿಯೂ ಅಲ್ಲಾಹನು ಅತಿಶೀಘ್ರವಾಗಿ ವಿಚಾರಣೆ ನಡೆಸುವನಾಗಿದ್ದಾನೆ,

(52) ಈ ಕುರ್‌ಆನ್ ಸಕಲ ಜನರಿಗೆ ತಲುಪಿಸಬೇಕಾದ ಒಂದು ಸಂದೇಶವಾಗಿದೆ. ಇದರ ಮೂಲಕ ಅವರಿಗೆ ಎಚ್ಚರಿಕೆ ನೀಡಲಿಕ್ಕಾಗಿ ಮತ್ತು ಅವನು ಏಕೈಕ ಆರಾಧ್ಯನೆಂದು ಅವರು ತಿಳಿಯಲಿಕ್ಕಾಗಿ ಬುದ್ಧಿಜೀವಿಗಳು ಉಪದೇಶ ಪಡೆಯಲಿಕ್ಕಾಗಿ ಕಳಿಸಲ್ಪಟ್ಟಿರುತ್ತದೆ.