(1) ಸರ್ವಸ್ತುತಿಯು ಅಲ್ಲಾಹನಿಗೆ ಮೀಸಲು. ಅವನು ತನ್ನ ದಾಸನ ಮೇಲೆ ಗ್ರಂಥವನ್ನು (ಕುರ್ಆನನ್ನು) ಅವತೀರ್ಣಗೊಳಿಸಿದನು ಮತ್ತು ಅದರಲ್ಲಿ ಯಾವ ವಕ್ರತೆಯನ್ನೂ ಇರಿಸಿಲ್ಲ.
(2) ಋಜುವಾದ ಗ್ರಂಥವಿದು; ಅವನ ಕಡೆಯಿಂದ ಕಠಿಣ ಯಾತನೆಯ ಕುರಿತು ಎಚ್ಚರಿಸಲಿಕ್ಕಾಗಿ ಹಾಗೂ ಸತ್ಯ ವಿಶ್ವಾಸವನ್ನಿರಿಸಿ, ಸತ್ಕರ್ಮಗಳನ್ನೆಸಗುವವರಿಗೆ ಉತ್ತಮವಾದ ಪ್ರತಿಫಲವಿದೆಯೆಂದು ಸುವಾರ್ತೆ ನೀಡಲಿಕ್ಕಾಗಿದೆ.
(3) ಅವರು ಅದರಲ್ಲಿ ಶಾಶ್ವತವಾಗಿರುವರು.
(4) ಮತ್ತು ಇದು ಅಲ್ಲಾಹನು ಸಂತಾನವನ್ನು ಹೊಂದಿದ್ದಾನೆAದು ಹೇಳುವವರಿಗೂ ಎಚ್ಚರಿಕೆ ನೀಡಲಿಕ್ಕಾಗಿದೆ.
(5) ಮತ್ತು ಇದು ಅಲ್ಲಾಹನು ಸಂತಾನವನ್ನು ಹೊಂದಿದ್ದಾನೆAದು ಹೇಳುವವರಿಗೂ ಎಚ್ಚರಿಕೆ ನೀಡಲಿಕ್ಕಾಗಿದೆ.
(6) (ಓ ಪೈಗಂಬರರೇ) ಅವರು ಈ ಕುರ್ಆನಿನಲ್ಲಿ ವಿಶ್ವಾಸವಿರಿಸಲಿಲ್ಲವೆಂದು ಅವರ ಹಿಂದೆ ಬಿದ್ದು ಇದೇ ಕೊರಗಿನಲ್ಲಿ ನೀವು ಸ್ವತಃ ನಿಮ್ಮನೇ ನಾಶ ಮಾಡಿಬಿಡಬಹುದು.
(7) ನಿಶ್ಚಯವಾಗಿ ಅವರ ಪೈಕಿ ಉತ್ತಮ ಕಾರ್ಯವನ್ನೆಸಗುವವರು ಯಾರೆಂದು ಪರೀಕ್ಷಿಸಲಿಕ್ಕಾಗಿ ನಾವು ಭೂಮಿಯ ಮೇಲಿರುವುದೆಲ್ಲವನ್ನು ಅದಕ್ಕೆ ಅಲಂಕಾರವನ್ನಾಗಿ ಮಾಡಿರುತ್ತೇವೆ.
(8) ಕೊನೆಗೆ ಖಂಡಿತವಾಗಿಯು ನಾವು ಭೂಮಿಯ ಮೇಲಿರುವುದೆಲ್ಲವನ್ನು ಒಂದು ಸಮತಟ್ಟಾದ ಬರಡು ಬಯಲನ್ನಾಗಿ ಮಾಡುವವರಿದ್ದೇವೆ.
(9) (ಓ ಪೈಗಂಬರರೇ) ಗುಹಾ ವಾಸಿಗಳು ಮತ್ತು ಶಿಲಾಲೇಖನದವರು ನಮ್ಮ ದೃಷ್ಟಾಂತಗಳ ಪೈಕಿ ಒಂದು ಅದ್ಭುತವೆಂದು ನೀವು ಭಾವಿಸಿರುವಿರಾ?
(10) ಆ ಕೆಲವು ಯುವಕರು ಗುಹೆಯೊಳಗೆ ಆಶ್ರಯ ಪಡೆದಾಗ ಪ್ರಾರ್ಥಿಸಿದರು: ಓ ನಮ್ಮ ಪ್ರಭು, ನೀನು ನಿನ್ನ ವತಿಯಿಂದ ನಮಗೆ ಕರುಣೆಯನ್ನು ದಯಪಾಲಿಸು ಮತ್ತು ನಮ್ಮ ವಿಚಾರದಲ್ಲಿ ನೀನು ನಮಗೆ ಮಾರ್ಗದರ್ಶನವನ್ನು ಮಾಡು.
(11) ಆಗ ನಾವು ಅವರ ಕಿವಿ ತಟ್ಟಿ ಆ ಗುಹೆಯಲ್ಲಿ ಅನೇಕ ವರ್ಷಗಳವರೆಗೆ ಮಲಗಿಸಿಬಟ್ಟೆವು.
(12) ಅನಂತರ ಎರಡು ಗುಂಪುಗಳಲ್ಲಿ ಯಾವುದು ತನ್ನ ಗುಹವಾಸಾದ ಕಾಲವನ್ನು ಉತ್ತಮವಾಗಿ ಗಣಿಸುತ್ತದೆಯೆಂದು ತಿಳಿಯಲಿಕ್ಕಾಗಿ ನಾವು ಅವರನ್ನು ಪುನಃ ಎಬ್ಬಿಸಿದೆವು.
(13) ನಾವು ನಿಮಗೆ ಅವರ ನೈಜವೃತ್ತಾಂತವನ್ನು ವಿವರಿಸಿ ಕೊಡುತ್ತಿರುವೆವು. ಅವರು ತಮ್ಮ ಪ್ರಭುವಿನಲ್ಲಿ ವಿಶ್ವಾಸವಿರಿಸಿದ್ದ ಕೆಲವು ಯುವಕರಾಗಿದ್ದರು. ಮತ್ತು ನಾವು ಅವರಿಗೆ ಸನ್ಮಾರ್ಗವನ್ನು ಹೆಚ್ಚಿಸಿಕೊಟ್ಟೆವು.
(14) ಅವರು ಎದ್ದು ನಿಂತಾಗ ನಾವು ಅವರ ಹೃದಯಗಳನ್ನು ದೃಢಪಡಿಸಿದೆವು. ಆಗ ಅವರೆಂದರು: ನಮ್ಮ ಪ್ರಭುವು ಆಕಾಶಗಳ ಮತ್ತು ಭೂಮಿಯ ಒಡೆಯನಾಗಿದ್ದಾನೆ. ಅವನ ಹೊರತು ಇನ್ನಾವ ಆರಾಧ್ಯನನ್ನು ಖಂಡಿತ ನಾವು ಪ್ರಾರ್ಥಿಸಲಾರೆವು. ಹಾಗೇನಾದರೂ ಮಾಡಿದರೆ ನಾವು ಅತ್ಯಂತ ತಪ್ಪು ಮಾತನ್ನು ಹೇಳಿದಂತಾಗುವುದು.
(15) ಈ ನಮ್ಮ ಜನಾಂಗದವರು ಅಲ್ಲಾಹನ ಹೊರತು ಹಲವು ಆರಾಧ್ಯರನ್ನು ನಿಶ್ಚಯಿಸಿಕೊಂಡಿದ್ದಾರೆ. ಅವರು ಆರಾಧ್ಯರೆಂಬುದರ ಬಗ್ಗೆ ಯಾವುದಾದರೂ ಸ್ಪಷ್ಟವಾದ ಆಧಾರವನ್ನೇಕೆ ತರುತ್ತಿಲ್ಲ? ಇನ್ನು ಅಲ್ಲಾಹನ ಮೇಲೆ ಸುಳ್ಳು ಹೊರಿಸಿದವನಿಗಿಂತ ದೊಡ್ಡ ಅಕ್ರಮಿ ಇನ್ನಾರಿದ್ದಾನೆ?
(16) ಅವರನ್ನೂ, ಮತ್ತು ಅವರು ಅಲ್ಲಾಹನ ಹೊರತು ಆರಾಧಿಸುತ್ತಿರುವ ವಸ್ತಗಳನ್ನೂ ನೀವು ತೊರೆದಿರುವುದರಿಂದ ಇನ್ನು ಆ ಗುಹೆಯೊಳಗೆ ಆಶ್ರಯ ಪಡೆಯಿರಿ. ನಿಮ್ಮ ಪ್ರಭುವು ನಿಮ್ಮ ಮೇಲೆ ತನ್ನ ಕಾರಣ್ಯವನ್ನು ವಿಸ್ತಾರಗೊಳಿಸುವನು ಮತ್ತು ನಿಮ್ಮ ಕಾರ್ಯದಲ್ಲಿ ಅನುಕೂಲತೆಯನ್ನು ಒದಗಿಸಿಕೊಡುವನು.
(17) ಸೂರ್ಯ ಉದಯಿಸುವಾಗ ಅವರ ಗುಹೆಯಿಂದ ಬಲ ಪಾರ್ಶ್ವಕ್ಕೆ ಸರಿಯುತ್ತಿರುವುದಾಗಿ ಮತ್ತು ಅಸ್ತಮಿಸುವಾಗ ಅದು ಅವರ ಎಡಪಾರ್ಶ್ವಕ್ಕೆ ಹಾದು ಹೋಗುತ್ತಿರುವುದಾಗಿಯೂ ನೀವು ಕಾಣುವಿರಿ ಮತ್ತು ಅವರು ಆ ಗುಹೆಯ ವಿಶಾಲ ಜಾಗದಲ್ಲಿದ್ದರು. ಇದು ಅಲ್ಲಾಹನ ದೃಷ್ಟಾಂತಗಳಲ್ಲೊAದು. ಅಲ್ಲಾಹನು ಯಾರನ್ನು ಸನ್ಮಾರ್ಗದಲ್ಲಿ ಮುನ್ನಡೆಸುತ್ತಾನೋ ಅವನೇ ಸನ್ಮಾರ್ಗದಲ್ಲಿರುವನು ಮತ್ತು ಅವನು ಯಾರನ್ನು ದಾರಿಗೆಡಿಸುತ್ತನೋ ಅವನಿಗೆ ಯಾವುದೇ ಮಾರ್ಗದರ್ಶಕ ಮತ್ತು ಆಪ್ತಮಿತ್ರನನ್ನು ನೀವು ಕಾಣಲಾರಿರಿ.
(18) ನೀವು ಅವರನ್ನು ಎಚ್ಚರವಿದ್ದಾರೆಂದು ಭಾವಿಸುವಿರಿ. ವಸ್ತುತಃ ಅವರು ನಿದ್ರೆಯಲ್ಲಿದ್ದರು. ಸ್ವತಃ ನಾವೇ ಅವರನ್ನು ಬಲಪಾರ್ಶ್ವಕ್ಕೂ ಎಡಪಾರ್ಶ್ವಕ್ಕೂ ಹೊರಳಿಸುತ್ತಿದ್ದೆವು. ಅವರ ನಾಯಿಯು ಸಹ ಹೊಸ್ತಿಲಲ್ಲಿ ತನ್ನೆರಡು ಮುಂಗಾಲುಗಳನ್ನು ಚಾಚಿ ಕುಳಿತಿತ್ತು. ಇನ್ನು ನೀವೇನಾದರು ಅವರನ್ನು ಇಣುಕಿ ನೋಡಲು ಬಯಸುತ್ತಿದ್ದರೆ ಖಂಡಿತ ಅವರಿಂದ ತಿರುಗಿ ಓಟಕ್ಕಿಳಿಯುತ್ತಿದ್ದಿರಿ ಮತ್ತು ಅವರ ಭಯದಿಂದ ನಿಮ್ಮಲ್ಲಿ ಭೀತಿ ತುಂಬಿ ಬಿಡುತ್ತಿತ್ತು.
(19) (ಹೇಗೆ ಮಲಗಿಸಿದ್ದೆವೊ) ಅದೇ ಪ್ರಕಾರ ಅವರು ಪರಸ್ಪರ ವಿಚಾರಿಸಿಕೊಳ್ಳಲೆಂದು ನಾವು ಅವರನ್ನು ನಿದ್ರೆಯಿಂದ ಎಬ್ಬಿಸಿದೆವು. ಹೇಳುವವನೊಬ್ಬನು ಹೇಳಿದನು: ನೀವು ಎಷ್ಟು ಹೊತ್ತು ತಂಗಿದ್ದಿರಿ? ಅವರು ಉತ್ತರಿಸಿದರು: ನಾವು ಒಂದು ದಿನ ಅಥವಾ ದಿನದ ಒಂದು ಅಂಶ. ಇನ್ನು ಕೆಲವರು ಹೇಳಿದರು. ನೀವು ತಂಗಿದ್ದ ಕಾಲಾವಧಿಯ ಕುರಿತು ನಿಮ್ಮ ಪ್ರಭುವೇ ಚೆನ್ನಾಗಿ ಬಲ್ಲನು. ಇನ್ನು ನಿಮ್ಮಲ್ಲೊಬ್ಬನನ್ನು ಈ ಬೆಳ್ಳಿ ನಾಣ್ಯದೊಂದಿಗೆ ಪಟ್ಟಣದೆಡೆಗೆ ಕಳುಹಿಸಿರಿ. ಅವನು ಯಾವ ಆಹಾರವು ಶುದ್ಧವೆಂಬುದನ್ನು ಪರಿಶೋಧಿಸಿ ಅನಂತರ ಅವನು ಅದರಿಂದಲೇ ನಿಮಗೆ ಆಹಾರವನ್ನು ತರಲಿ ಮತ್ತು ಜಾಗ್ರತೆ, ಸ್ವಲ್ಪ ಸೌಮ್ಯತೆಯನ್ನುಪಾಲಿಸಲಿ ಮತ್ತು ಅವನು ಯಾರಿಗೂ ನಿಮ್ಮ ಸುಳಿವನ್ನು ನೀಡದಿರಲಿ.
(20) ಅವರು ನಿಮ್ಮ ಮೇಲೆ ನಿಯಂತ್ರಣ ಸಾಧಿಸಿದರೆ ನಿಮ್ಮನ್ನು ಕಲ್ಲೆಸೆದು ಕೊಲ್ಲುವರು ಇಲ್ಲವೇ ನಿಮ್ಮನ್ನು ತಮ್ಮ ಧರ್ಮಕ್ಕೆ (ಬಲವಂತವಾಗಿ) ಮರಳಿಸುವರು ಹಾಗೇನಾದರೂ ಆದರೆ ನೀವೆಂದಿಗೂ ಯಶಸ್ಸು ಪಡೆಯಲಾರಿರಿ.
(21) ನಾವು ಇದೇ ಪ್ರಕಾರ ಜನರಿಗೆ ಅವರ ಸ್ಥಿತಿಯನ್ನು ತಿಳಿಸಿಕೊಟ್ಟೆವು. ಇದು ಅಲ್ಲಾಹನ ವಾಗ್ದಾನವು ಸತ್ಯವಾಗಿದೆಯೆಂದು ಮತ್ತು ಪುನರುತ್ಥಾನದ ದಿನದಲ್ಲಿ ಯಾವುದೇ ಸಂಶಯವಿಲ್ಲವೆAದು ಅವರು ಅರಿತುಕೊಳ್ಳಲೆಂದಾಗಿತ್ತು. ಇದು ಅವರು (ಆನಾಡಿನವರು) ತಮ್ಮ ವಿಚಾರದಲ್ಲಿ ಪರಸ್ಪರರ ನಡುವೆ ತರ್ಕಿಸುತ್ತಿದ್ದ ಸಂದರ್ಭದಲ್ಲಾಗಿತ್ತು. (ಗುಹಾವಾಸದವರ ಮರಣದ ನಂತರ) ಕೆಲವರೆಂದರು: ನೀವು ಅವರ ಗುಹೆಯ ಮೇಲೆ ಒಂದು ಕಟ್ಟಡವನ್ನು ನಿರ್ಮಿಸಿರಿ. ಅವರ ಸ್ಥಿತಿಯನ್ನು ಅವರ ಪ್ರಭುವೇ ಚೆನ್ನಾಗಿ ಬಲ್ಲನು ಅವರ ವಿಚಾರದಲ್ಲಿ ಮೇಲುಗೈ ಸಾಧಿಸಿದವರೆಂದರು: ನಾವಂತು ಅವರ ಹತ್ತಿರದಲ್ಲೇ ಮಸೀದಿಯೊಂದನ್ನು ನಿರ್ಮಿಸುತ್ತೇವೆ.
(22) ಕೆಲವರು ಹೇಳುತ್ತಾರೆ: ಗುಹಾ ವಾಸಿಗಳು ಮೂವರಿದ್ದರು ಮತ್ತು ನಾಲ್ಕನೆಯದು ಅವರ ನಾಯಿಯಾಗಿತ್ತು. ಇನ್ನು ಕೆಲವರು ಹೇಳುತ್ತಾರೆ: ಐವರಿದ್ದರು ಮತ್ತು ಆರನೆಯದು ಅವರ ನಾಯಿಯಾಗಿತ್ತು. ಅವರು ಅದೃಶ್ಯ ವಿಷಯದಲ್ಲಿ (ಕಾಲ್ಪನಿಕ) ಊಹೆಯನ್ನು ತಾಳುತ್ತಿದ್ದಾರಷ್ಟೆ. ಕೆಲವರಂತು ಹೇಳುತ್ತಾರೆ: ಅವರು ಏಳು ಮಂದಿಯಿದ್ದು, ಮತ್ತು ಎಂಟನೆಯದು ಅವರ ನಾಯಿಯಾಗಿತ್ತು. ಹೇಳಿ: ನನ್ನ ಪ್ರಭುವೇ ಅವರ ಸಂಖ್ಯೆಯನ್ನು ಚೆನ್ನಾಗಿ ಬಲ್ಲನು. ಅವರ ಬಗ್ಗೆ ಅತ್ಯಲ್ಪ ಮಂದಿಯೇ ತಿಳಿದಿರುತ್ತಾರೆ. ಇನ್ನು ನೀವು ಅವರೊಂದಿಗೆ ಸ್ಪಷ್ಟ ವಿಚಾರದ ಹೊರತು ವಾದಿಸಬೇಡಿರಿ ಮತ್ತು ಅವರ ಪೈಕಿ ಯಾರಲ್ಲೂ ಅವರ ಬಗ್ಗೆ ವಿಚಾರಿಸುವುದು ಬೇಡ.
(23) (ಓ ಪೈಗಂಬರರೇ) ನೀವೆಂದಿಗೂ ಯಾವುದೇ ಕಾರ್ಯದ ಬಗ್ಗೆ ನಾನದನ್ನು ನಾಳೆ ಖಂಡಿತ ಮಾಡುವೆನೆಂದು. ಹೇಳಬೇಡಿರಿ.
(24) ಆದರೆ ಜೊತೆಗೇ ಇನ್ಶಾಅಲ್ಲಾಹ್ ಹೇಳಿ (ಅಲ್ಲಾಹನು ಇಚ್ಛಿಸುವುದರ ಹೊರತು) ಇನ್ನು ನೀವು ಮರೆತಾಗ ನಿಮ್ಮ ಪ್ರಭುವನ್ನು ಸ್ಮರಿಸಿರಿ ಮತ್ತು ನನ್ನ ಪ್ರಭುವು ಇದಕ್ಕಿಂತಲೂ ಹೆಚ್ಚು ಸನ್ಮಾರ್ಗಕ್ಕೆ ಹತ್ತಿರವಿರುವ ದಾರಿಯನ್ನು ತೋರಿಸಿಕೊಡುವನೆಂದು ಹೇಳಿರಿ.
(25) ಅವರು ತಮ್ಮ ಗುಹೆಯಲ್ಲಿ ಮುನ್ನೂರು ವರ್ಷಗಳ ಕಾಲ ತಂಗಿದ್ದರು. ಚಂದ್ರಮಾನ ಗಣನೆಯ ಪ್ರಕಾರ ಇನ್ನೂ ಒಂಬತ್ತು ವರ್ಷ ಹೆಚ್ಚುತ್ತದೆ.
(26) ಹೇಳಿರಿ: ಅವರು ಎಷ್ಟು ಕಾಲ ವಾಸಿಸಿದ್ದರೆಂದು ಅಲ್ಲಾಹನೇ ಚೆನ್ನಾಗಿ ಬಲ್ಲನು. ಆಕಾಶಗಳ ಮತ್ತು ಭೂಮಿಯ ಅಗೋಚರ ಜ್ಞಾನವು ಅವನಿಗೆ ಮಾತ್ರವಿದೆ. ಅವನು ಅತ್ಯಂತ ಚೆನ್ನಾಗಿ ನೋಡುವವನು, ಕೇಳುವವನು ಆಗಿರುವನು. ಅವರಿಗೆ ಅಲ್ಲಾಹನ ಹೊರತು ಯಾವೊಬ್ಬ ರಕ್ಷಕ ಮಿತ್ರನಿಲ್ಲ. ಹಾಗೂ ಅವನು ತನ್ನ ಆಜ್ಞಾಧಿಕಾರದಲ್ಲಿ ಯಾರನ್ನೂ ಸಹಭಾಗಿಯನ್ನಾಗಿ ನಿಶ್ಚಯಿಸಿರುವುದಿಲ್ಲ.
(27) (ಓ ಪೈಗಂಬರರೇ) ನೀವು ನಿಮ್ಮ ಪ್ರಭುವಿನ ಗ್ರಂಥದಿAದ ನಿಮ್ಮಡೆಗೆ ಅವತೀರ್ಣಗೊಂಡಿರುವುದನ್ನು ಓದಿ ತಿಳಿಸಿರಿ. ಅವನ ವಚನಗಳನ್ನು ಬದಲಾಯಿಸುವವನಾರಿಲ್ಲ. ಖಂಡಿತವಾಗಿಯೂ ನೀವು ಅವನ ಹೊರತು ಯಾವುದೇ ಆಶ್ರಯ ದಾಣವನ್ನು ಪಡೆಲಾರಿರಿ.
(28) ತಮ್ಮ ಪ್ರಭುವಿನ ಸಂತೃಪ್ತಿಯನ್ನು ಬಯಸಿ ಸಂಜೆ, ಮುಂಜಾನೆಗಳಲ್ಲಿ ಪ್ರಾರ್ಥಿಸುವವರೊಂದಿಗೆ ನೀವು ಸಹವಾಸವನ್ನಿರಿಸಿರಿ. ಜಾಗ್ರತೆ! ನೀವು ಐಹಿಕ ಜೀವನದ ವೈಭವವನ್ನು ಆಶಿಸುತ್ತಾ ಅವರಿಂದ ನಿಮ್ಮ ಕಣ್ಣುಗಳನ್ನು ತಿರುಗಿಸದಿರಿ. ನೋಡಿ! ನಾವು ಯಾರ ಹೃದಯವನ್ನು ನಮ್ಮ ಸ್ಮರಣೆಯಿಂದ ಅಲಕ್ಷö್ಯಗೊಳಿಸಿದ್ದೇವೆಯೋ, ಯಾರು ತನ್ನ ಸ್ವೇಚ್ಛೆಯನ್ನು ಹಿಂಬಾಲಿಸುತ್ತಿರುವನೋ ಯಾರ ಕಾರ್ಯವು ಮಿತಿಮೀರಿ ಬಿಟ್ಟಿದೆಯೋ ಅಂತಹವನನ್ನು ನೀವು ಅನುಸರಿಸದಿರಿ.
(29) ಹೇಳಿರಿ: ಇದು ನಿಮ್ಮ ಪ್ರಭುವಿನ ಕಡೆಯಿಂದಾಗಿರುವ ಸತ್ಯವಾಗಿರುತ್ತದೆ ಇನ್ನು ಬಯಸಿದವರು ವಿಶ್ವಾಸವಿಡಲಿ ಮತ್ತು ಬೇಡದವರು ನಿಷೇಧಿಸಲಿ. ನಿಜವಾಗಿಯು ನಾವು ಅಕ್ರಮಿಗಳಿಗೆ ನರಕಾಗ್ನಿಯನ್ನು ಸಿದ್ಧಪಡಿಸಿದ್ದೇವೆ ಅದರ ಗುಡಾರಗಳು ಅವರನ್ನು ಆವರಿಸುವುದು. ಇನ್ನು ಅವರು ನೀರಿನ ಸಹಾಯ ಬೇಡಿದರೆ ಕರಗಿಸಿದ ಲೋಹದಂತಿರುವ ನೀರನ್ನು ಅವರಿಗೆ ಕುಡಿಸಲಾಗುವುದು. ಅದು ಮುಖವನ್ನು ಸುಟ್ಟು ಬಿಡುವುದು. ಆ ಪಾನೀಯ ಅದೆಷ್ಟು ಕೆಟ್ಟದು! ಮತ್ತು ಆ ವಿಶ್ರಾಂತಿಯ ತಾಣ (ನರಕ) ಎಷ್ಟು ಕೆಟ್ಟದು!
(30) ನಿಶ್ಚಯವಾಗಿಯು ಯಾರು ಸತ್ಯವಿಶ್ವಾಸವನ್ನಿರಿಸಿ, ಸತ್ಕರ್ಮಗಳನ್ನೆಸಗಿದರೋ ಖಂಡಿತವಾಗಿಯು ನಾವು ಆ ಸತ್ಕರ್ಮಿಗಳ ಪ್ರತಿಫಲವನ್ನು ವ್ಯರ್ಥಗೊಳಿಸುವುದಿಲ್ಲ.
(31) ಅವರಿಗೆ ಶಾಶ್ವತವಾದ ಸ್ವರ್ಗೋದ್ಯಾನಗಳಿರುವುವು. ಅವರ ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವುವು ಅವರು ಅಲ್ಲಿ ಚಿನ್ನದ ಕಂಕಣಗಳನ್ನು ತೊಡಿಸಲಾಗುವರು ಮತ್ತು ಅವರು ಹಸಿರು ಬಣ್ಣದ ತೆಳು ರೇಷ್ಮೆಯ ಹಾಗೂ ದಪ್ಪ ರೇಷ್ಮೆಯ ಉಡುಪುಗಳನ್ನು ಧರಿಸುವರು. ಅಲ್ಲಿ ಅವರು ಪೀಠಗಳ ಮೇಲೆ ದಿಂಬುಗಳನ್ನಿಟ್ಟು ಒರಗಿರುವರು. ಅದೆಷ್ಟು ಉತ್ತಮ ಪ್ರತಿಫಲವು! ಮತ್ತು ಅದೆಷ್ಟು ಉತ್ತಮ ವಿಶ್ರಾಂತಿ ಧಾಮ!
(32) ಅವರಿಗೆ ಆ ಇಬ್ಬರು ವ್ಯಕ್ತಿಗಳ ಉಪಮೆಯನ್ನು ಹೇಳಿರಿ: ಅವರಲ್ಲೊಬ್ಬನಿಗೆ ನಾವು ದ್ರಾಕ್ಷೆಗಳ ಎರಡು ತೋಟಗಳನ್ನು ಕೊಟ್ಟಿದ್ದೆವು ಮತ್ತು ಅವುಗಳನ್ನು ಖರ್ಜೂರ ಮರಗಳಿಂದ ಸುತ್ತುವರಿದಿದ್ದೆವು ಹಾಗೂ ಅವುಗಳರೆಡರ ನಡುವೆ ಕೃಷಿಯನ್ನು ಉಂಟು ಮಾಡಿದ್ದೆವು.
(33) ಆ ಎರಡು ತೋಟಗಳೂ ಹೇರಳ ಫಲ ನೀಡಿದವು ಮತ್ತು ಅದರಲ್ಲಿ ಯಾವುದೇ ರೀತಿಯ ಕೊರತೆಯನ್ನು ಮಾಡಲಿಲ್ಲ ಆ ತೊಟಗಳ ಮಧ್ಯೆ ನಾವು ಕಾಲುವೆಯೊಂದನ್ನು ಹರಿಸಿದೆವು.
(34) ಅವನಿಗೆ ತುಂಬಾ ಫಲ ಸಿಕ್ಕಿತು. ಒಂದು ದಿನ ಅವನು ಮಾತಿಗಿಳಿಯುತ್ತಾ ತನ್ನ ಸಂಗಡಿಗನೊAದಿಗೆ ಹೇಳಿದನು: ನಾನು ನಿನಗಿಂತಲೂ ಅಧಿಕ ಸಿರಿವಂತನು ಮತ್ತು ಜನ ಬಲದಲ್ಲೂ ಹೆಚ್ಚು ಸದೃಢನು.
(35) ಮತ್ತು ಅವನು ತನಗೇ ಅನ್ಯಾಯವೆಸಗುತ್ತಾ ತನ್ನ ತೋಟದೊಳಗೆ ಪ್ರವೇಶಿಸಿದನು ಮತ್ತು ಹೇಳಿದನು. ಇವು ಎಂದಾದರೂ ನಾಶವಾಗುವುದೆಂದು ನಾನು ಭಾವಿಸುವುದಿಲ್ಲ.
(36) ಮತ್ತು ಪ್ರಳಯ ಬರಲಿದೆಯೆಂದೂ ನಾನು ಭಾವಿಸುವುದಿಲ್ಲ ಇನ್ನು ನನ್ನನ್ನು ನನ್ನ ಪ್ರಭುವಿನೆಡೆಗೆ ಮರಲಿಸಲಾದರೂ ಇದಕ್ಕಿಂತ ಹೆಚ್ಚು ಉತ್ತಮವಾದುದನ್ನು ಪಡೆಯುವೆನು.
(37) ಅವನ ಸಂಗಡಿಗನು ಅವನೊಂದಿಗೆ ಮಾತನಾಡುತ್ತಾ ಹೇಳಿದನು: ನಿನ್ನನ್ನು ಮಣ್ಣಿನಿಂದ, ನಂತರ ವೀರ್ಯಾಣುವಿನಿಂದ ಸೃಷ್ಟಿಸಿ ಆ ಬಳಿಕ ನಿನ್ನನ್ನು ಒಬ್ಬ ಪರಿಪೂರ್ಣ ಮನುಷ್ಯನಾಗಿ ಮಾಡಿದವನನ್ನು ಧಿಕ್ಕರಿಸುತ್ತಿರುವೆಯಾ?
(38) ಆದರೆ ನನ್ನ ಮಾತೇ ಬೇರೆ, ನನ್ನ ಪ್ರಭುವು ಆ ಅಲ್ಲಾಹನೇ ಆಗಿದ್ದಾನೆ. ಮತ್ತು ನಾನು ನನ್ನ ಪ್ರಭುವಿನೊಂದಿಗೆ ಯಾರನ್ನೂ ಸಹಭಾಗಿಯನ್ನಾಗಿ ಮಾಡುವುದಿಲ್ಲ.
(39) ನೀನು ನಿನ್ನ ತೋಟದಲ್ಲಿ ಪ್ರವೇಶಿಸಿದಿದಾಗ “ಅಲ್ಲಾಹನು ಇಚ್ಛಿಸಿರುವುದೇ ಆಗುತ್ತದೆ ಅಲ್ಲಾಹನ ಹೊರತು ಇನ್ನಾವ ಶಕ್ತಿಯೂ ಇಲ್ಲ” ಎಂದು ಯಾಕೆ ಹೇಳಲಿಲ್ಲ? ಸಂಪತ್ತಿನಲ್ಲೂ, ಸಂತಾನದಲ್ಲೂ ನೀನು ನನ್ನನ್ನು ನಿನಗಿಂತ ಕೀಳಾಗಿ ಕಾಣುವುದಾದರೆ.
(40) ನನ್ನ ಪ್ರಭುವು ನಿನ್ನ ತೋಟಕ್ಕಿಂತಲೂ ಉತ್ತಮವಾದುದನ್ನು ನನಗೆ ಕೊಡಬಹುದು ಮತ್ತು ನಿನ್ನ ತೋಟದ ಮೇಲೆ ಆಕಾಶದಿಂದ ಯಾವುದಾದರೂ ವಿಪತ್ತೊಂದು ಕಳುಹಿಸಿ ಅದನ್ನು ಸಮತಟ್ಟು ಪ್ರದೇಶವನ್ನಾಗಿ ಮಾಡಿಬಿಡಬಹುದು.
(41) ಅಥವಾ ಅದರ ನೀರು ಬತ್ತಿ ಹೋಗಿ ಅದನ್ನು ಪಡೆಯಲು ನಿನಗೆ ಸಾಧ್ಯವಾಗದಿರಬಹುದು.
(42) ಕೊನೆಗೆ ಅವನ ಫಲಗಳು ನಾಶವಾದವು. ತೋಟವು ಚಪ್ಪರದೊಂದಿಗೆ ನೆಲಕಚ್ಚಿತು. ತಾನು ಅದಕ್ಕಾಗಿ ಖರ್ಚು ಮಾಡಿದ ಬಗ್ಗೆ ತನ್ನ ಕೈಗಳನ್ನು ಹಿಸುಕುತ್ತಾ ಅಯ್ಯೋ! ನಾನು ನನ್ನ ಪ್ರಭುವಿನೊಂದಿಗೆ ಯಾರನ್ನೂ ಸಹಭಾಗಿಯನ್ನಾಗಿ ಮಾಡದಿರುತ್ತಿದಿದ್ದರೆ ಎಂದು ಹೇಳತೊಡಗಿದನು.
(43) ಅವನನ್ನು (ಆಗ) ಅಲ್ಲಾಹನಿಂದ ರಕ್ಷಿಸುವಂತಹ ಯಾವುದೇ ಜನಕೂಟವು ಇರಲಿಲ್ಲ ಮತ್ತು ಸ್ವತಃ ಅವನೇ ಪ್ರತೀಕಾರ ತೀರಿಸುವವನೂ ಆಗಲಿಲ್ಲ.
(44) ಅಲ್ಲಿ ಸರ್ವಾಧಿಕಾರವು ಸತ್ಯಪೂರ್ಣನಾದ ಅಲ್ಲಾಹನಿಗೇ ಇರುವುದು. ಅವನು ಪ್ರತಿಫಲ ಕೊಡುವುದರಲ್ಲೂ ಫಲಿತಾಂಶ ನೀಡುವುದರಲ್ಲೂ ಅತ್ಯುತ್ತಮನಾಗಿದ್ದಾನೆ ಎಂದು ತಿಳಿದುಕೊಂಡನು.
(45) (ಓ ಪೈಗಂಬರರೇ) ಅವರಿಗೆ ಲೌಕಿಕ ಜೀವನದ ಉಪಮೆಯನ್ನು ವಿವರಿಸಿಕೊಡಿ. ಅದು ಆಕಾಶದಿಂದ ನಾವು ಸುರಿಸುವಂತಹ ಒಂದು ಮಳೆಯಂತೆ. ಅದರ ಮೂಲಕ ಭೂಮಿಯ ಬೆಳೆಗಳು ದಟ್ಟವಾದವು. ಪರಿಣಾಮವಾಗಿ ಅವು (ಒಣಗಿ) ಗಾಳಿಯು ಹಾರಿಸುತ್ತಾ ಹೋಗುವ ಹೊಟ್ಟಾಗಿ ಬಿಡುತ್ತದೆ. ಅಲ್ಲಾಹನು ಪ್ರತಿಯೊಂದು ವಸ್ತುವಿನ ಮೇಲೂ ಸಾಮರ್ಥ್ಯವುಳ್ಳವನಾಗಿದ್ದಾನೆ.
(46) ಸೊತ್ತು ಸಂತಾನಗಳು ಐಹಿಕ ಜೀವನದ ಅಲಂಕಾರವಾಗಿದೆ ಮತ್ತು ಬಾಕಿಯುಳಿಯುವ ಸತ್ಕರ್ಮಗಳೇ ನಿಮ್ಮ ಪ್ರಭುವಿನ ಬಳಿ ಪ್ರತಿಫಲದ ದೃಷ್ಟಿಯಿಂದ ಹಾಗೂ ನಿರೀಕ್ಷೆಯಿಡುವ ದೃಷ್ಟಿಯಿಂದ ಅತ್ಯುತ್ತಮವಾಗಿದೆ.
(47) ನಾವು ಪರ್ವತಗಳನ್ನು ಚಲಾಯಿಸುವ ದಿನದಂದು ನೀವು ಭೂಮಿಯನ್ನು ಸಮತಟ್ಟಾದ ಮೈದಾನದಂತೆ ಕಾಣುವಿರಿ ಮತ್ತು ನಾವು ಸಕಲ ಜನರನ್ನು ಒಟ್ಟುಗೂಡಿಸುವೆವು. ಅವರ ಪೈಕಿ ಯಾರನ್ನೂ ಬಿಡಲಾರೆವು.
(48) ಮತ್ತು ಸಕಲರೂ ನಿಮ್ಮ ಪ್ರಭುವಿನ ಮುಂದೆ ಸಾಲು ಸಾಲಾಗಿ ಹಾಜರುಗೊಳಿಸಲಾಗುವರು. ಖಂಡಿತವಾಗಿಯು ಮೊದಲ ಬಾರಿಗೆ ನಾವು ನಿಮ್ಮನ್ನು ಸೃಷ್ಟಿಸಿದಂತೆಯೇ ನೀವು ನಮ್ಮ ಬಳಿಗೆ ಬಂದಿರುವಿರಿ. ಆದರೆ ನೀವಂತು ನಾವು ನಿಮಗೆ ಪುನರುತ್ಥಾನದ ಯಾವ ವಾಗ್ದಾನವನ್ನೂ ನಿಶ್ಚಯಿಸಿಲ್ಲವೆಂದು ಭಾವಿಸಿದ್ದಿರಿ.
(49) ಮತ್ತು ಕರ್ಮ ಗ್ರಂಥವನ್ನು ಮುಂದಿಡಲಾಗುವುದು. ಆಗ ನೀವು ಅಪರಾಧಿಗಳನ್ನು ಅದರಲ್ಲಿರುವುದರ ನಿಮಿತ್ತ ಭಯಭೀತರಾಗುತ್ತಿರುವುದನ್ನು ಕಾಣುವಿರಿ. ಅವರು ಹೇಳುತ್ತಿರುವರು: ಅಯ್ಯೋ, ನಮ್ಮ ದುರ್ಗತಿಯೇ, ಇದೆಂತಹ ಗ್ರಂಥ! ಚಿಕ್ಕದಿರಲಿ, ದೊಡ್ಡದಿರಲಿ ಯಾವೊಂದನ್ನೂ ಇದು ದಾಖಲಿಸದೆ ಬಿಟ್ಟಿಲ್ಲವಲ್ಲ. ಅವರು ಮಾಡಿದ್ದನ್ನೆಲ್ಲಾ ಅದರಲ್ಲಿ ಕಾಣುವರು ಮತ್ತು ನಿಮ್ಮ ಪ್ರಭವು ಯಾರ ಮೇಲೂ ಅನ್ಯಾಯ ಮಾಡುವುದಿಲ್ಲ.
(50) ನಾವು ಮಲಕ್ಗಳಿಗೆ: ಆದಮರಿಗೆ ಸಾಷ್ಟಾಂಗವೆರಗಿರಿ ಎಂದು ಹೇಳಿದ ಸಂದರ್ಭವನ್ನು ಸ್ಮರಿಸಿರಿ ಅವರೆಲ್ಲರೂ ಸಾಷ್ಟಾಂಗವೆರಗಿದರು. ಇಬ್ಲೀಸ್ನ ಹೊರತು ಅವನು ಯಕ್ಷಗಳಲ್ಲಾಗಿದ್ದನು. ಆದ್ದರಿಂದ ಅವನು ತನ್ನ ಪ್ರಭುವಿನ ಆದೇಶವನ್ನು ಧಿಕ್ಕರಿಸಿದನು. ಹಾಗಿದ್ದೂ ನೀವು ಅವನನ್ನೂ, ಅವನ ಸಂತಾನವನ್ನೂ ನನ್ನನ್ನು ಬಿಟ್ಟು ನಿಮ್ಮ ಆಪ್ತಮಿತ್ರರನ್ನಾಗಿ ಮಾಡಿಕೊಳ್ಳುತ್ತಿರುವಿರಾ? ವಸ್ತುತಃ ಅವರು ನಿಮಗೆ ಶತ್ರುಗಳಾಗಿರುತ್ತಾರೆ. ಇಂತಹ ಅಕ್ರಮಿಗಳು ಅಲ್ಲಾಹನೆದುರು ಸ್ವೀಕರಿಸುತ್ತಿರುವ ಬದಲಿಯು ಅದೆಷ್ಟು ಕೆಟ್ಟದು!.
(51) ನಾನು ಆಕಾಶಗಳ ಮತ್ತು ಭೂಮಿಯ ಸೃಷ್ಟಿಯ ಸಂದರ್ಭದಲ್ಲಾಗಲೀ, ಸ್ವತಃ ಅವರದೇ ಸೃಷ್ಟಿಯ ಸಂದರ್ಭದಲ್ಲಾಗಲೀ ಅವರನ್ನು ಸಾಕ್ಷಿಗಳನ್ನಾಗಿ ಮಾಡಿಕೊಂಡಿರಲಿಲ್ಲ. ಮತ್ತು ದಾರಿಗೆಡಿಸುವವರನ್ನು ನಾನು ನನ್ನ ಸಹಾಯಕನನ್ನಾಗಿ ಮಾಡಿಕೊಳ್ಳುವವನೂ ಅಲ್ಲ.
(52) ನೀವು (ಬಹುದೇವಾರಾಧಕರು) ನನ್ನ ಸಹಭಾಗಿಗಳೆಂದು ಭಾವಿಸಿಕೊಂಡಿದ್ದವರನ್ನು ಕರೆಯಿರಿ ಎಂದು ಅಲ್ಲಾಹನು ಹೇಳುವ ದಿನ. ಕಾರಣ ಅವರು ಅವರನ್ನು (ದೇವತೆಗಳನ್ನು) ಕರೆಯುವರು ಆದರೆ ಅವರು ಅವರ ಕರೆಗೆ ಓಗೊಡಲಾರರು. ಆಗ ನಾವು (ಅಲ್ಲಾಹ್) ಅವರ ನಡುವೆ ವಿನಾಶ ಪಾತವನ್ನು ಉಂಟು ಮಾಡಿ ಬಿಡುವೆವು.
(53) ನೀವು (ಬಹುದೇವಾರಾಧಕರು) ನನ್ನ ಸಹಭಾಗಿಗಳೆಂದು ಭಾವಿಸಿಕೊಂಡಿದ್ದವರನ್ನು ಕರೆಯಿರಿ ಎಂದು ಅಲ್ಲಾಹನು ಹೇಳುವ ದಿನ. ಕಾರಣ ಅವರು ಅವರನ್ನು (ದೇವತೆಗಳನ್ನು) ಕರೆಯುವರು ಆದರೆ ಅವರು ಅವರ ಕರೆಗೆ ಓಗೊಡಲಾರರು. ಆಗ ನಾವು (ಅಲ್ಲಾಹ್) ಅವರ ನಡುವೆ ವಿನಾಶ ಪಾತವನ್ನು ಉಂಟು ಮಾಡಿ ಬಿಡುವೆವು.
(54) ನಾವು ಈ ಕುರ್ಆನಿನಲ್ಲಿ ಜನರಿಗಾಗಿ ಪ್ರತಿಯೊಂದು ತರಹದ ಉಪಮೆಗಳನ್ನು ವಿವರಿಸಿಕೊಟ್ಟಿದ್ದೇವೆ ಮತ್ತು ಮನುಷ್ಯನು ಬಹಳ ಜಗಳಗಂಟನಾಗಿದ್ದಾನೆ.
(55) ಜನರ ಬಳಿಗೆ ಸನ್ಮಾರ್ಗ ಬಂದ ಬಳಿಕ ವಿಶ್ವಾಸವಿಡುವುದರಿಂದ ಮತ್ತು ಅವರ ಪ್ರಭುವಿನಿಂದ ಕ್ಷಮೆ ಯಾಚನೆ ಮಾಡುವುದರಿಂದ ಅವರನ್ನು ತಡೆದದ್ದು, ಪೂರ್ವಜರಿಗೆ ಸಂಭವಿಸಿದ್ದು, ತಮಗೂ ಸಂಭವಿಸಲಿ ಅಥವಾ ಶಿಕ್ಷೆಯು ಅವರ ಮುಂದೆಯೇ ಬಂದೆರಗಲಿ ಎಂಬುದೇ ಆಗಿತ್ತು.
(56) ನಾವು ಸಂದೇಶವಾಹಕರನ್ನು ಕೇವಲ ಸುವಾರ್ತೆ ನೀಡುವವರಾಗಿಯೂ, ಎಚ್ಚರಿಕೆ ಕೊಡುವವರಾಗಿಯೂ ಕಳುಹಿಸಿರುತ್ತೇವೆ. ಸತ್ಯ ನಿಷೇಧಿಗಳು ಮಿಥ್ಯದ ಬಲದಲ್ಲಿ ವಾಗ್ವಾದ ಮಾಡುತ್ತಾರೆ ಮತ್ತು ತನ್ಮೂಲಕ ಸತ್ಯವನ್ನು ಅಳಿಸಿ ಹಾಕಲು (ಇಚ್ಛಿಸುತ್ತಾರೆ) ಮಾತ್ರವಲ್ಲದೆ ಅವರು ನನ್ನ ದೃಷ್ಟಾಂತಗಳನ್ನು, ನೀವು ಎಚ್ಚರಿಕೆ ನೀಡಲಾಗಿರುವುದನ್ನು ತಮಾಷೆಯ ವಸ್ತುವನ್ನಾಗಿ ಮಾಡಿಕೊಂಡರು.
(57) ತನ್ನ ಪ್ರÀಭುವಿನ ಸೂಕ್ತಿಗಳ ಮೂಲಕ ಉಪದೇಶ ನೀಡಲಾದಾಗಲೂ ಅದರಿಂದ ವಿಮುಖನಾಗಿ ತನ್ನ ಕೈಗಳು ಗೈದ ಕರ್ಮಗಳನ್ನು ಮರೆತು ಬಿಟ್ಟವನಿಗಿಂತ ದೊಡ್ಡ ಅಕ್ರಮಿ ಇನ್ನಾರಿದ್ದಾನೆ ನಿಸ್ಸಂಶಯವಾಗಿಯು ಅವರು ಅದನ್ನು ಗ್ರಹಿಸಲು (ಸಾಧ್ಯವಾಗದಂತೆ) ನಾವು ಅವರ ಹೃದಯಗಳ ಮೇಲೆ ಪರದೆಯನ್ನು ಹಾಕಿಬಿಟ್ಟರುತ್ತೇವೆ ಮತ್ತು ಅವರ ಕಿವಿಗಳೊಳಗೆ ಕಿವುಡುತನವಿದೆ. ನೀವು ಅವರನ್ನು ಸನ್ಮಾರ್ಗಕ್ಕೆ ಕರೆದರೂ ಅವರು ಎಂದಿಗೂ ಸನ್ಮಾರ್ಗ ಪಡೆಯಲಾರರು.
(58) ನಿಮ್ಮ ಪ್ರಭುವು ಮಹಾ ಕ್ಷಮಾಶೀಲನು, ಕರುಣಾನಿಧಿಯು ಆಗಿದ್ದಾನೆ. ಅವನೇನಾದರೂ ಅವರನ್ನು ಅವರ ಕರ್ಮಗಳ ನಿಮಿತ್ತ ಹಿಡಿದಿದ್ದರೆ ನಿಸ್ಸಂದೇಹವಾಗಿಯು ಅವರಿಗೆ ಶೀಘ್ರವೇ ಶಿಕ್ಷೆಯನ್ನು ನೀಡಿ ಬಿಡುತ್ತಿದ್ದನು. ಆದರೆ ಅವರಿಗೆ ವಾಗ್ದಾತ್ತ ಸಮಯವೊಂದು ನಿಶ್ಚಿತವಿದೆ. ಅದನ್ನು ತಪ್ಪಿಸಿ ಪಾರಾಗುವ ಯಾವುದೇ ಮಾರ್ಗವನ್ನು ಅವರು ಪಡೆಯಲಾರರು.
(59) ಆ ನಾಡಿನವರು ಅಕ್ರಮವೆಸಗಿದಾಗ ನಾವು ಅವರನ್ನು ನಾಶಗೊಳಿಸಿರುವೆವು ಮತ್ತು ಅವರ ನಾಶಕ್ಕೆಂದು ಒಂದು ನಿರ್ದಿಷ್ಟ ಸಮಯವನ್ನು ನಿಶ್ಚಯಿಸಿದ್ದೆವು.
(60) ಮೂಸ ತನ್ನ ಯುವಕನೊಡನೆ (ಯುಷಾ ಬಿನ್ ನೂನ್) ಹೇಳಿದ ಸಂದರ್ಭ: ನಾನು ಎರಡು ಸಮುದ್ರಗಳ ಸಂಗಮ ಸ್ಥಾನವನ್ನು ತಲುಪುವವರೆಗೆ ಸಂಚರಿಸುತ್ತಲೇ ಇರುವೆನು; ಅನ್ಯಥಾ ನಾನು ದೀರ್ಘ ಕಾಲದವರೆಗೆ ನಡೆಯುತ್ತಲೇ ಇರುವೆನು.
(61) ಅವರಿಬ್ಬರೂ ಆ ಸಮುದ್ರಗಳ ಸಂಗಮ ಸ್ಥಾನವನ್ನು ತಲುಪಿದಾಗ ತಮ್ಮ ಮೀನನ್ನು ಮರೆತು ಬಿಟ್ಟರು. ಅದು ಸಮುದ್ರದಲ್ಲಿ ಸುರಂಗದAತೆ ತನ್ನ ಮಾರ್ಗವನ್ನು ಮಾಡಿಕೊಂಡಿತು.
(62) ಅವರಿಬ್ಬರು ಅಲ್ಲಿಂದ ದಾಟಿ ಮುಂದೆ ಹೋದಾಗ ಮೂಸಾ ತನ್ನ ಯುವಕನಿಗೆ ಕೇಳಿದರು: ನೀನು ನಮ್ಮ ಬೆಳಗ್ಗಿನ ಉಪಹಾರವನ್ನು ತಾ ನಮಗಂತು ನಮ್ಮ ಪ್ರಯಾಣದ ಕಾರಣ ತುಂಬಾ ಆಯಾಸ ಉಂಟಾಗಿದೆ.
(63) ಅವನು ಉತ್ತರಿಸಿದನು: ಅಗೋ ನೀವು ಕಂಡಿರಾ? ನಾವು ಆ ಬಂಡೆಗಲ್ಲಿಗೆ ಒರಗಿ ವಿಶ್ರಾಂತಿ ಪಡೆದಿದ್ದ ಸಂದರ್ಭ. ಅಲ್ಲೇ ನಾನು ಮೀನನ್ನು ಮರೆತು ಬಿಟ್ಟಿದ್ದೆನು. ವಾಸ್ತವದಲ್ಲಿ ಅದನ್ನು ನಾನು ತಮಗೆ ನೆನಪಿಸುವುದರಿಂದ ಶೈತಾನನು ನನ್ನನ್ನು ಮರೆಯುವಂತೆ ಮಾಡಿದನು ಮತ್ತು ಆ ಮೀನು ಸಮುದ್ರದಲ್ಲಿ ಅದ್ಭುತಕರವಾಗಿ ತನ್ನ ಮಾರ್ಗವನ್ನು ಮಾಡಿಕೊಂಡಿತು.
(64) ಮೂಸ ಹೇಳಿದರು: ನಾವು ಹುಡುಕುತ್ತಿದ್ದ ಸ್ಥಳ ಅದುವೇ ಆಗಿದೆ. ಅಂತೂ ಅವರಿಬ್ಬರೂ ತಮ್ಮ ಹೆಜ್ಜೆಗಳನ್ನು ಗುರುತಿಸುತ್ತಾ ಮರಳಿ ಹೋದರು.
(65) ಆಗ ಅವರಿಬ್ಬರೂ ನಮ್ಮ ದಾಸರ ಪೈಕಿ ಒಬ್ಬ ದಾಸನನ್ನು (ಖಿಜರ್ರವರನ್ನು) ಕಂಡರು. ನಾವು ಅವನಿಗೆ ನಮ್ಮ ಬಳಿಯ ಅನುಗ್ರಹವನ್ನು ದಯಪಾಲಿಸಿದ್ದೆವು ಹಾಗೂ ನಮ್ಮ ವತಿಯಿಂದ ವಿಶೇಷ ಜ್ಞಾನವನ್ನು ಕಲಿಸಿ ಕೊಟ್ಟಿದ್ದೆವು.
(66) ಅವರೊಂದಿಗೆ ಮೂಸಾ ಹೇಳಿದರು: ನಿಮಗೆ ಕಲಿಸಿಕೊಡಲಾಗಿರುವ ಸನ್ಮಾರ್ಗ ಜ್ಞಾನದಿಂದ ನೀವು ನನಗೆ ಕಲಿಸಿ ಕೊಡಲೆಂದು ನಾನು ನಿಮ್ಮ ಜೊತೆ ಬರಲೇ?
(67) ಆಗ ಅವರು ಹೇಳಿದರು: ನೀವು ನನ್ನ ಜೊತೆ ಸಹನೆಯಿಂದಿರಲು ಖಂಡಿತ ಸಾಧ್ಯವಿಲ್ಲ.
(68) ಮತ್ತು ನಿಮಗೆ ಅರಿವಿಲ್ಲದಂತಹ ವಿಷಯದ ಬಗ್ಗೆ ನೀವು ಹೇಗೆ ತಾನೇ ಸಹನೆ ವಹಿಸುವಿರಿ?
(69) ಮೂಸಾ ಉತ್ತರಿಸಿದರು: ಅಲ್ಲಾಹನು ಇಚ್ಛಿಸಿದರೆ ನೀವು ನನ್ನನ್ನು ಸಹನಾಶೀಲನಾಗಿ ಕಾಣುವಿರಿ ಹಾಗೂ ಯಾವ ವಿಷಯದಲ್ಲೂ ನಿಮ್ಮನ್ನು ನಾನು ಧಿಕ್ಕರಿಸದಿರುವೆನು.
(70) ಅವರು ಹೇಳಿದರು: ನೀವು ನನ್ನ ಜೊತೆ ಬರುವುದಾದರೆ; ನೀವು ಯಾವುದೇ ವಿಷಯದ ಕುರಿತು ನಾನೇ ನಿಮಗೆ ಅದನ್ನು ಹೇಳುವ ತನಕ ಕೇಳಬಾರದು.
(71) ಅನಂತರ ಅವರಿಬ್ಬರೂ ಮುಂದೆ ಸಾಗಿದರು. ಕೊನೆಗೆ ಅವರಿಬ್ಬರೂ ಒಂದು ಹಡಗಿನಲ್ಲಿ ಹತ್ತಿದರು. ಅಗ ಅವರು ಅದರೊಳಗೆ ತೂತು ಮಾಡಿದರು. ಮೂಸಾ ಹೇಳಿದರು: ಹಡಗಿನ ಜನರನ್ನು ಮುಳುಗಿಸಲೆಂದು ನೀವು ಇದರೊಳಗೆ ತೂತು ಮಾಡಿರುವಿರಾ? ಇದಂತು ನೀವು ಮಹಾ (ಅಪಾಯಕಾರಿ) ಸಂಗತಿಯನ್ನು ಉಂಟು ಮಾಡಿರುವಿರಿ.
(72) ಅವರು ಉತ್ತರಿಸಿದರು: ನೀವು ನನ್ನ ಜೊತೆ ಸಹೆಯಿಂದಿರಲು ಖಂಡಿತ ಸಾಧ್ಯವಿಲ್ಲವೆಂದು ನಾನು ನಿಮಗೆ ಮೊದಲೇ ಹೇಳಿರಲಿಲ್ಲವೆ?
(73) ಮೂಸಾ ಹೇಳಿದರು: ನಾನು ಮರೆತು ಹೇಳಿದ್ದಕ್ಕಾಗಿ ನೀವು ನನ್ನನ್ನು ಹಿಡಿಯಬೇಡಿರಿ ಮತ್ತು ನನ್ನ ವಿಷಯದಲ್ಲಿ ಕಠೋರವಾಗಿ ವರ್ತಿಸಬೇಡಿರಿ.
(74) ಅನಂತರ ಅವರಿಬ್ಬರೂ ಮುಂದೆ ಸಾಗಿದರು. ಕೊನೆಗೆ ಒಬ್ಬ ಬಾಲಕನನ್ನು ಭೇಟಿಯಾದಾಗ ಅವರು ಅವನನ್ನು ಕೊಂದು ಹಾಕಿದರು. ಮೂಸಾ ಹೇಳಿದರು: ಮುಗ್ಧ ಜೀವವೊಂದನ್ನು ನೀವು ಕೊಂದು ಹಾಕಿದಿರಾ? ವಸ್ತುತಃ ಅವನು ಯಾರನ್ನೂ ಕೊಂದಿರಲಿಲ್ಲ. ನಿಸ್ಸಂದೇಹವಾಗಿಯೂ ನೀವು ಅತ್ಯಂತ ನೀಚ ಕೃತ್ಯವನ್ನೆಸಗಿದ್ದೀರಿ.
(75) ಅವರು ಹೇಳಿದರು: ನಿಮಗೆ ನನ್ನ ಜೊತೆ ಸಹನೆವಹಿಸಲು ಸಾಧ್ಯವಿಲ್ಲವೆಂದು ನಾನು ನಿಮಗೆ ಹೇಳಿರಲಿಲ್ಲವೇ?
(76) ಆಗ ಮೂಸಾ ವಿನಂತಿಸಿದರು: ಇನ್ನು ನಾನು ಇದರ ನಂತರ ನಿಮ್ಮಿಂದ ಯಾವುದೇ ವಿಷಯದ ಬಗ್ಗೆ ಪ್ರಶ್ನಿಸಿದರೆ ನೀವು ನನ್ನನ್ನು ಸಂಗಡವಿರಿಸಬೇಡಿರಿ. ನಿಶ್ಚಯವಾಗಿಯು ಈಗಂತೂ ನೀವು ನನ್ನ ಬಳಿಯ ಅಂತಿಮ ನೆಪಕ್ಕೆ ತಲುಪಿರುವಿರಿ.
(77) ಅನಂತರ ಅವರಿಬ್ಬರೂ ಮುಂದೆ ಸಾಗಿದರು. ಕೊನೆಗೆ ಅವರು ಒಂದು ಗ್ರಾಮದ ನಿವಾಸಿಗಳೆಡೆಗೆ ಬಂದು ಅವರಿಂದ ಊಟ ಕೇಳಿದರು. ಆಗ ಅವರು ಅವರ ಅತಿಥ್ಯ ವಹಿಸಲು ನಿರಾಕರಿಸಿದರು. ಅವರಿಬ್ಬರೂ ಅಲ್ಲಿ ಕುಸಿದು ಬೀಳುವ ಸ್ಥಿತಿಯಲ್ಲಿದ್ದ ಗೋಡೆಯೊಂದನ್ನು ಕಂಡರು. ಆಗ ಅವರು ಅದನ್ನು ದುರಸ್ಥಿ ಮಾಡಿದರು. ಮೂಸಾ ಹೇಳಿದರು: ನೀವು ಇಚ್ಛಿಸಿರುತ್ತಿದ್ದರೆ ಈ ಕಾರ್ಯದ ಪ್ರತಿಫಲ ಪಡೆಯಬಹುದಿತ್ತು.
(78) ಅವರು ಹೇಳಿದರು: ಇದು ನನ್ನ ಮತ್ತು ನಿಮ್ಮ ನಡುವಿನ ಅಗಲುವಿಕೆಯ ಸಮಯವಾಗಿದೆ. ನಿಮಗೆ ಸಹನೆ ವಹಿಸಲಾಗದಂತಹ ವಿಷಯಗಳ ವಾಸ್ತವಿಕತೆಯನ್ನು ನಾನೀಗ ನಿಮಗೆ ತಿಳಿಸಿಕೊಡುವೆನು.
(79) ಆ ಹಡಗು ಸಮುದ್ರದಲ್ಲಿ ದುಡಿಯುತ್ತಿದ್ದಂತಹ ಕೆಲವು ಬಡ ಜನರದ್ದಾಗಿತ್ತು. ನಾನು ಅದರಲ್ಲಿ ದೋಷವನ್ನುಂಟು ಮಾಡಲು ಇಚ್ಛಿಸಿದೆನು. ಏಕೆಂದರೆ ಅವರ ಪ್ರದೇಶದ ನಂತರ ಎಲ್ಲಾ ಉತ್ತಮ ಹಡಗುಗಳನ್ನು ಅಕ್ರಮವಾಗಿ ವಶಪಡಿಸಿ ಕೊಳ್ಳಿತ್ತಿದ್ದ ಒಬ್ಬ ರಾಜನಿದ್ದನು.
(80) ಮತ್ತು ಆ ಬಾಲಕ, ಅವನ ತಂದೆ-ತಾಯಿಗಳು ಸತ್ಯವಿಶ್ವಾಸಿಗಳಾಗಿದ್ದರು. ಆದರೆ ಅವನು ದೊಡ್ಡವನಾಗಿ ಅವರಿಬ್ಬರನ್ನೂ ತನ್ನ ಅತಿಕ್ರಮ ಮತ್ತು ಸತ್ಯನಿಷೇಧಕ್ಕೆ ದೂಡಿಬಿಡಬಹುದೆಂದು ನಾವು ಭಯಪಟ್ಟೆವು.
(81) ಆದ್ದರಿಂದ ಅವರಿಗೆ ಅವರ ಪ್ರಭುವು ಅವನ ಬದಲಿಗೆ ಅವನಿಗಿಂತ ಉತ್ತಮ ಪರಿಶುದ್ಧತೆ ಮತ್ತು ಹೆಚ್ಚು ಕರುಣೆಯುಳ್ಳ ಮಗನನ್ನು ಕರುಣಿಸಲೆಂದು ನಾವು ಬಯಸಿದೆವು.
(82) ಆ ಗೋಡೆ, ಪಟ್ಟಣದ ಇಬ್ಬರು ಅನಾಥ ಬಾಲಕರದ್ದಾಗಿತ್ತು. ಅವರಿಗಾಗಿ ನಿಧಿಯು ಆ ಗೋಡಯ ಅಡಿಯಲ್ಲಿ ಹೂತಿಡಲಾಗಿತ್ತು ಮತ್ತು ಅವರ ತಂದೆಯು ಒಬ್ಬ ಸಜ್ಜನ ವ್ಯಕ್ತಿಯಾಗಿದ್ದರು. ನಿಮ್ಮ ಪ್ರಭುವು ಅವರಿಬ್ಬರೂ ತಮ್ಮ ಯೌವ್ವನಕ್ಕೆ ತಲುಪಿ ತಮ್ಮ ನಿಧಿಯನ್ನು ಹೊರತೆಗೆಯಲೆಂದು ಬಯಸಿದನು. ಇದು ನಿಮ್ಮ ಪ್ರಭುವಿನ ಕೃಪೆಯಾಗಿತ್ತು, ಮತ್ತು ಇದನ್ನು ನಾನು ನನ್ನ ಅಭಿಪ್ರಾಯದ ಮೇರೆಗೆ ಮಾಡಿರುವುದಿಲ್ಲ. ನಿಮಗೆ ಸಹನೆ ವಹಿಸಲಾಗದಂತಹ ವಿಚಾರಗಳ ವಾಸ್ತವಿಕತೆಯು ಇದಾಗಿದೆ.
(83) ಓ ಪೈಗಂಬರರೇ, ಅವರು ನಿಮ್ಮೊಡನೆ ‘ಜುಲ್ಖರ್ನೈನ್'ನ ಬಗ್ಗೆ ಕೇಳುತ್ತಾರೆ. ಸಧ್ಯವೇ, ನಾನು ನಿಮಗೆ ಆತನ ಕೆಲವು ವಿಷಯಗಳನ್ನು ಓದಿ ತಿಳಿಸುವೆನು ಎಂದು ಹೇಳಿರಿ.
(84) ನಿಶ್ಚಯವಾಗಿಯು, ನಾವು ಅವನಿಗೆ ಭೂಮಿಯಲ್ಲಿ ಅಧಿಪತ್ಯವನ್ನು ನೀಡಿದ್ದೆವು ಮತ್ತು ಅವನಿಗೆ ಎಲ್ಲಾ ರೀತಿಯ ಸಾಧನಾನುಕೂಲಗಳನ್ನು ಕೊಟ್ಟಿದ್ದೆವು.
(85) ಅವರು ತಮ್ಮ ಎಲ್ಲಾ ಸಾಧನಾನುಕೂಲತೆಗಳೊಂದಿಗೆ ಮಾರ್ಗವೊಂದರಲ್ಲಿ ಹೊರಟರು.
(86) ಕೊನೆಗೆ ಅವರು ಸೂರ್ಯಾಸ್ತಮಯ ಪ್ರದೇಶಕ್ಕೆ ತಲುಪಿದರು ಮತ್ತು ಅದನ್ನವರು ಕಪ್ಪು ಹುದುಲಿನ ಚಿಲುಮೆಯಲ್ಲಿ ಮುಳುಗುತ್ತಿರುವುದಾಗಿ ಕಂಡರು. (ಅವರಿಗೆ ಭಾಸವಾಯಿತು) ಅಲ್ಲಿ ಅವರು ಒಂದು ಜನಾಂಗವನ್ನು ಕಂಡರು. ಆಗ ನಾವು ಹೇಳಿದೆವು: ಓ ಜುಲ್ಖರ್ನೈನ್, ಒಂದೋ ನೀವು ಅವರನ್ನು ಶಿಕ್ಷಿಸಬಹುದು ಇಲ್ಲವೇ ಅವರ ವಿಚಾರದಲ್ಲಿ ಉತ್ತಮ ನಿಲುವನ್ನು ತಾಳಬಹುದು.
(87) ಅವರು ಹೇಳಿದರು: ಅಕ್ರಮವೆಸಗಿದವನಿಗೆ ಸದ್ಯವೇ ನಾವು ಶಿಕ್ಷಿಸುವೆವು. ತರುವಾಯ ಅವನು ತನ್ನ ಪ್ರಭುವಿನೆಡೆಗೆ ಮರಳಿಸಲಾಗುವನು.ಅವನ ಪ್ರಭು ಅವನಿಗೆ ಕಠಿಣ ಯಾತನೆಯನ್ನು ಕೊಡುವನು.
(88) ಆದರೆ ಯಾರು ವಿಶ್ವಾಸವನ್ನಿರಿಸಿ ಸತ್ಕರ್ಮವನ್ನು ಮಾಡಿದನೋ ಅವನಿಗೆ ಉತ್ತಮ ಪ್ರತಿಫಲವಿದೆ.ಮತ್ತು ನಾವು ಅವನಿಗೆ ನಮ್ಮ ಕಾರ್ಯದಲ್ಲಿ ಸರಳವಾಗಿರುವುದನ್ನೇ ಆದೇಶಿಸುವೆವು.
(89) ತರುವಾಯ ಅವರು ಇನ್ನೊಂದು ಮಾರ್ಗದಲ್ಲಿ ಸಾಗಿದರು.
(90) ಕೊನೆಗೆ ಅವರು ಸೂರ್ಯೋದಯದ ಪ್ರದೇಶಕ್ಕೆ ತಲುಪಿದಾಗ ಅದನ್ನು ಅವರು ಒಂದು ಸಮುದಾಯದ ಮೇಲೆ ಉದಯಿಸುತ್ತಿರುವುದಾಗಿ ಕಂಡರು. ನಾವು ಅವರಿಗೆ ಅದರ ಬಿಸಿಲಿನಿಂದ ರಕ್ಷಣೆ ಹೊಂದುವ ಯಾವುದೇ ಮರೆಯನ್ನೂ ಮಾಡಿರಲಿಲ್ಲ.
(91) ಘಟನೆಯು ಹೀಗೆ ಇದೆ ಮತ್ತು ನಿಶ್ಚಯವಾಗಿಯು ಅವರ ಬಳಿಯಿರುವ ಸಕಲ ವಿಷಯಗಳ ಬಗ್ಗೆ ನಮಗೆ ಅರಿವಿದೆ.
(92) ನಂತರ ಅವರು ಮತ್ತೊಂದು ಮಾರ್ಗವನ್ನು ಹಿಡಿದು ಹೊರಟರು.
(93) ಕೊನೆಗೆ ಅವರು ಎರಡು ಪರ್ವತಗಳ ಮಧ್ಯೆ ತಲುಪಿದಾಗ ಅಲ್ಲಿ ಅವುಗಳೆರಡರ ಹೊರತು ಮತ್ತೊಂದು ಜನಾಂಗವನ್ನು ಕಂಡರು. ಅವರು ಮಾತನ್ನು ಗ್ರಹಿಸಿಕೊಳ್ಳುತ್ತಿರಲಿಲ್ಲ.
(94) ಅವರು ಹೇಳಿದರು: ಓ ಜುಲ್ಖರ್ನೈನ್! ಯಾಜೂಜ್ ಮಾಜೂಜ್ ಈ ಪ್ರದೇಶದಲ್ಲಿ ಕ್ಷೆÆÃಭೆ ಹರಡು ವವರಾಗಿದ್ದಾರೆ.ನೀವು ನಮ್ಮ ಮತ್ತು ಅವರ ನಡುವೆ ತಡೆಗೋಡಯೊಂದನ್ನು ನಿರ್ಮಾಣ ಮಾಡುವ (ಶರತ್ತಿನ) ಮೇಲೆ ನಾವು ನಿಮಗಾಗಿ ತೆರಿಗೆ ಮೊತ್ತವನ್ನು ನಿಶ್ಚಯಿಸಿ ಕೊಡಬೇಕೆ?
(95) ಅವರು ಹೇಳಿದರು: ಓ ಜುಲ್ಖರ್ನೈನ್! ಯಾಜೂಜ್ ಮಾಜೂಜ್ ಈ ಪ್ರದೇಶದಲ್ಲಿ ಕ್ಷೆÆÃಭೆ ಹರಡು ವವರಾಗಿದ್ದಾರೆ.ನೀವು ನಮ್ಮ ಮತ್ತು ಅವರ ನಡುವೆ ತಡೆಗೋಡಯೊಂದನ್ನು ನಿರ್ಮಾಣ ಮಾಡುವ (ಶರತ್ತಿನ) ಮೇಲೆ ನಾವು ನಿಮಗಾಗಿ ತೆರಿಗೆ ಮೊತ್ತವನ್ನು ನಿಶ್ಚಯಿಸಿ ಕೊಡಬೇಕೆ?
(96) ನೀವು ನನಗೆ ಕಬ್ಬಿಣದ ಗಟ್ಟಿಗಳನ್ನು ತಂದು ಕೊಡಿರಿ. ಕೊನೆಗೆ ಅವರು ಆ ಎರಡು ಬೆಟ್ಟಗಳ ನಡುವೆ ಗೋಡೆಯನ್ನು ಸಮತಟ್ಟಾಗಿಸಿ: ನೀವು ಬೆಂಕಿಯನ್ನು ಉರಿಸಿರಿ ಎಂದರು. ಕೊನೆಗೆ ಕಬ್ಬಿಣದ ಗಟ್ಟಿಗಳನ್ನು ಕೆಂಡವನ್ನಾಗಿ ಮಾಡಿದಾಗ ನೀವು ಕರಗಿಸಿದ ತಾಮ್ರವನ್ನು ತನ್ನಿರಿ ನಾನು ಅದನ್ನು ಅದರ ಮೇಲೆ ಎರೆಯುವೆನು ಎಂದರು.
(97) ಕೊನೆಗೆ ಯಾಜೂಜ್, ಮಾಜೂಜರಿಗೆ ಅದರ ಮೇಲೇರಿ ಬರಲು ಸಾಧ್ಯವಾಗಲಿಲ್ಲ ಮತ್ತು ಅವರು ಅದಕ್ಕೆ ಕನ್ನ ಕೊರೆಯಲೂ ಅಸಮರ್ಥರಾದರು.
(98) ಜುಲ್ಖರ್ನೈನ್ ಹೇಳಿದರು: ಈ ತಡೆ ನನ್ನ ಪ್ರಭುವಿನ ಕಾರುಣ್ಯವಾಗಿದೆ. ಆದರೆ ನನ್ನ ಪ್ರಭುವಿನ ವಾಗ್ದಾನವು ಬಂದು ಬಿಟ್ಟರೆ ಅದನ್ನು ಅವನು ಪುಡಿಗಟ್ಟಿಬಿಡುವನು ಮತ್ತು ನನ್ನ ಪ್ರಭುವಿನ ವಾಗ್ದಾನವು ಸತ್ಯವಾಗಿದೆ.
(99) ನಾವು ಆ ದಿನ ಅವರನ್ನು ಅಲೆಗಳಂತೆ ಪರಸ್ಪರ ಕೆಲವರು ಇನ್ನು ಕೆಲವರಲ್ಲಿ ಬೆರೆತುಕೊಳ್ಳಲು ಬಿಟ್ಟು ಬಿಡುವೆವು ಮತ್ತು ಕಹಳೆ ಊದಲಾಗವುದು. ಆಗ ನಾವು ಅವರೆಲ್ಲರನ್ನು ಒಟ್ಟುಗೂಡಿಸುವೆವು.
(100) ಆ ದಿನ ನಾವು ನರಕವನ್ನು ಸತ್ಯನಿಷೇಧಿಗಳ ಕಣ್ಣೆದುರಿಗೆ ತಂದು ನಿಲ್ಲಿಸುವೆವು.
(101) ಅವರ ಕಣ್ಣುಗಳ ಮೇಲೆ ಇಹಲೋಕದಲ್ಲಿ ನನ್ನ ಸ್ಮರಣೆಯಿಂದ ಅಲಕ್ಷö್ಯತೆಯ ಪರದೆ ಬಿದ್ದಿತ್ತು ಮತ್ತು ಅವರು ಆಲಿಸಲಿಕ್ಕೂ ಅಸಮರ್ಥರಾಗಿದ್ದರು.
(102) ಸತ್ಯನಿಷೇಧಿಗಳು ನನ್ನನ್ನು ಬಿಟ್ಟು ನನ್ನ ದಾಸರನ್ನು ರಕ್ಷಕ ಮಿತ್ರರನ್ನಾಗಿ ಮಾಡಿಕೊಳ್ಳಬಹುದೆಂದು ಭಾವಿಸಿದ್ದಾರೆಯೇ? ಖಂಡಿತವಾಗಿಯೂ ನಾವು ಆ ಸತ್ಯನಿಷೇಧಿಗಳ ಅತಿಥ್ಯಕ್ಕಾಗಿ ನರಕವನ್ನು ಸಿದ್ಧಗೊಳಿಸಿದ್ದೇವೆ.
(103) (ಓ ಪೈಗಂಬರರೇ) ಹೇಳಿರಿ: ನಾನು ನಿಮಗೆ ಕರ್ಮ ಫಲಗಳಲ್ಲಿ ಅತ್ಯಧಿಕ ನಷ್ಟ ಹೊಂದಿದವರಾರೆAದು ತಿಳಿಸಿ ಕೊಡಲೇ?
(104) ಇಹಲೋಕ ಜೀವನದಲ್ಲಿ ಅವರ ಪರಿಶ್ರಮವೆಲ್ಲಾ ವ್ಯರ್ಥವಾಯಿತು. ವಸ್ತುತಃ ಅವರು ತಾವು ಅತ್ಯುತ್ತಮ ಕಾರ್ಯವನ್ನು ಮಾಡುತ್ತಿದ್ದೇವೆ ಎಂಬ ಭ್ರಮೆಯಲ್ಲಿದ್ದರು.
(105) ಅವರೇ ತಮ್ಮ ಪ್ರಭುವಿನ ದೃಷ್ಟಾಂತಗಳನ್ನು, ಅವನ ಭೇಟಿಯನ್ನು ನಿರಾಕರಿಸಿದವರು ಆದ್ದರಿಂದ ಅವರ ಕರ್ಮಗಳು ನಿಷ್ಫಲವಾದವು. ಹಾಗೆಯೇ ನಾವು ಪ್ರಳಯದಿನದಂದು ಅವರಿಗೆ ಯಾವುದೇ ತೂಕವನ್ನು ಕೊಡುವುದಿಲ್ಲ.
(106) ಇದು ಅವರು ಸತ್ಯನಿಷೇಧಿಸಿದ್ದಕ್ಕಾಗಿ ಹಾಗೂ ನನ್ನ ದೃಷ್ಟಾಂತಗಳನ್ನು, ನನ್ನ ಸಂದೇಶವಾಹಕರನ್ನು ಪರಿಹಾಸ್ಯ ಮಾಡಿದ್ದಕ್ಕಾಗಿ ಅವರ ಪ್ರತಿಫಲ ನರಕವಾಗಿದೆ.
(107) ನಿಶ್ಚಯವಾಗಿಯು ಸತ್ಯ ವಿಶ್ವಾಸವನ್ನಿರಿಸಿ ಸತ್ಕರ್ಮಗಳನ್ನು ಕೈಗೊಂಡವರಿಗೆ ಫಿರ್ದೌಸ್ ಸ್ವರ್ಗೋದ್ಯಾನಗಳ ಅತಿಥ್ಯವಿರುವುದು.
(108) ಅಲ್ಲವರು ಶಾಶ್ವತವಾಗಿರುವರು. ಅದನ್ನು ಬಿಟ್ಟು ಬೇರೆಡೆಗೆ ಹೋಗಲು ಅವರೆಂದು ಬಯಸಲಾರರು.
(109) ಹೇಳಿರಿ: ನನ್ನ ಪ್ರಭುವಿನ ವಚನಗಳನ್ನು ಬರೆಯಲು ಸಮುದ್ರವು ಶಾಯಿಯಾದರೂ ನನ್ನ ಪ್ರಭುವಿನ ವಚನಗಳು ಮುಗಿಯುವ ಮೊದಲೇ ಅದು ಮುಗಿದು ಬಿಡುವುದು ಮಾತ್ರವಲ್ಲ ಮತ್ತಷ್ಟೇ ಸಮುದ್ರವನ್ನು ತಂದರು ಅದೂ ಸಾಕಾಗದು.
(110) ಹೇಳಿರಿ: ನಾನು ನಿಮ್ಮಂತಹ ಒಬ್ಬ ಮನುಷ್ಯನಾಗಿದ್ದೇನೆ. ನಿಮ್ಮೆಲ್ಲರ ಆರಾಧ್ಯನು ಕೇವಲ ಏಕೈಕ ಆರಾಧ್ಯನಾಗಿದ್ದಾನೆ ಎಂದು ನನ್ನೆಡೆಗೆ ಸಂದೇಶ ನೀಡಲಾಗುತ್ತಿದೆ. ಆದ್ದರಿಂದ ಯಾರಿಗೆ ತನ್ನ ಪ್ರಭುವಿನ ಭೇಟಿಯ ನಿರೀಕ್ಷೆಯಿದೆಯೋ ಅವನು ಸತ್ಕರ್ಮಗಳನ್ನು ಮಾಡಲಿ ಹಾಗೂ ತನ್ನ ಪ್ರಭುವಿನ ಆರಾಧನೆಯಲ್ಲಿ ಯಾರನ್ನೂ ಸಹಭಾಗಿಯನ್ನಾಗಿ ನಿಶ್ಚಯಿಸದಿರಲಿ.