(1) ಓ ಜನರೇ, ನೀವು ನಿಮ್ಮ ಪ್ರಭುವಿನ ಯಾತನೆಯಿಂದ, ಭಯಪಡಿರಿ. ನಿಸ್ಸಂದೇಹವಾಗಿಯೂ ಪ್ರಳಯದ ಅಂತ್ಯ ಘಳಿಗೆಯ ಕಂಪನವು ಒಂದು ಭಯಂಕರ ಸಂಗತಿಯಾಗಿದೆ.
(2) ಅದನ್ನು ನೀವು ಕಾಣುವ ದಿನ ಪ್ರತಿಯೊಬ್ಬ ಹಾಲುಣಿಸುವವಳು ತಾನು ಹಾಲುಣಿಸುವ ಮಗುವನ್ನು ಮರೆತುಬಿಡುವಳು ಮತ್ತು ಪ್ರತಿಯೊಬ್ಬ ಗರ್ಭಿಣಿಯ ಗರ್ಭ ಪಾತವಾಗಿ ಬಿಡುವುದು ಮತ್ತು ನೀವು ಜನರನ್ನು ಅಮಲೇರಿದವರನ್ನಾಗಿ ಕಾಣುವಿರಿ ವಾಸ್ತವದಲ್ಲಿ ಅವರು ಅಮಲೇರಿದವರಲ್ಲ. ಆದರೆ ಅಲ್ಲಾಹನ ಯಾತನೆಯು ಅತ್ಯಂತ ಕಠೋರವಾಗಿರುತ್ತದೆ.
(3) ಅದನ್ನು ನೀವು ಕಾಣುವ ದಿನ ಪ್ರತಿಯೊಬ್ಬ ಹಾಲುಣಿಸುವವಳು ತಾನು ಹಾಲುಣಿಸುವ ಮಗುವನ್ನು ಮರೆತುಬಿಡುವಳು ಮತ್ತು ಪ್ರತಿಯೊಬ್ಬ ಗರ್ಭಿಣಿಯ ಗರ್ಭ ಪಾತವಾಗಿ ಬಿಡುವುದು ಮತ್ತು ನೀವು ಜನರನ್ನು ಅಮಲೇರಿದವರನ್ನಾಗಿ ಕಾಣುವಿರಿ ವಾಸ್ತವದಲ್ಲಿ ಅವರು ಅಮಲೇರಿದವರಲ್ಲ. ಆದರೆ ಅಲ್ಲಾಹನ ಯಾತನೆಯು ಅತ್ಯಂತ ಕಠೋರವಾಗಿರುತ್ತದೆ.
(4) ಯಾರು ಆ ಶೈತಾನನ್ನು ಆಪ್ತನನ್ನಾಗಿ ಮಾಡುತ್ತಾನೋ ಅವನು ಅವನನ್ನು ದಾರಿಗೆಡಿಸುತ್ತಾನೆ ಮತ್ತು ಅವನನ್ನು ನರಕ ಯಾತನೆಯೆಡೆಗೆ ಮುನ್ನಡೆಸುತ್ತಾನೆ ಎಂದು ಅವನ (ಶೈತಾನನ) ಅದೃಷ್ಟದಲ್ಲೇ ಬರೆಯಲಾಗಿದೆ.
(5) ಓ ಜನರೇ, ನಿಮಗೆ ಪುನರುತ್ಥಾನದ ಬಗ್ಗೆ ಸಂದೇಹವಿದ್ದರೆ ಚಿಂತಿಸಿ ನೋಡಿರಿ: ನಾವು ನಿಮ್ಮನ್ನು ಮಣ್ಣಿನಿಂದ, ಆ ಬಳಿಕ ವೀರ್ಯದಿಂದ, ನಂತರ ರಕ್ತ ಪಿಂಡದಿAದ, ತರುವಾಯ ರೂಪವಿರುವ, ಸ್ವರೂಪವಿಲ್ಲದ ಮಾಂಸ ಪಿಂಡದಿAದ ಸೃಷ್ಟಿಸಿರುತ್ತೇವೆ. (ಇದೆಕೆಂದರೆ) ವಸ್ತುಸ್ಥಿತಿಯನ್ನು ವಿವರಿಸಲಿಕ್ಕಾಗಿ ನಾವಿದನ್ನು ನಿಮಗೆ (ನಮ್ಮ ಸಾಮರ್ಥ್ಯವನ್ನು) ತಿಳಿಸುತ್ತಿದ್ದೇವೆ ಮತ್ತು ನಾವು ಇಚ್ಛಿಸಿದವರನ್ನು ಗರ್ಭಾಶಯಗಳಲ್ಲಿ ಒಂದು ನಿರ್ಧಿಷ್ಟಾವಧಿಯವರೆಗೆ ನೆಲೆಗೊಳಿಸುತ್ತೇವೆ. ತರುವಾಯ ನಿಮ್ಮನ್ನು ಶಿಶುವಿನ ರೂಪದಲ್ಲಿ ಹೊರ ತರುತ್ತೇವೆ. ಇದು ಆ ಬಳಿಕ ನೀವು ನಿಮ್ಮ ಪರಿಪೂರ್ಣ ಯವ್ವನಕ್ಕೆ ತಲುಪಲೆಂದಾಗಿರುತ್ತದೆ. ನಿಮ್ಮ ಪೈಕಿ ಕೆಲವರು ಮೊದಲೇ ಮರಣ ಹೊಂದುವವರಿದ್ದಾರೆ ಮತ್ತು ಕೆಲವರು ಒಂದು ವಸ್ತುವಿನ ಜ್ಞಾನ ಪಡೆದ ನಂತರ ಅರಿವಿಲ್ಲದಾಗುವಷ್ಟು ಮುಪ್ಪಿನ ಪ್ರಾಯಕ್ಕೆ ಮರಳಿಸಲ್ಪಡುವವರೂ ಇದ್ದಾರೆ ಮತ್ತು ನೀವು ಭೂಮಿಯನ್ನು ಒಣಗಿ ಬಂಜರು ಆಗಿರುವುದಾಗಿ ಕಾಣುತ್ತೀರಿ. ಇನ್ನು ನಾವು ಅದರ ಮೇಲೆ ಮಳೆಯನ್ನು ಸುರಿಸಿದಾಗ ಅದು ಗರಿಗೆದರಿ ಮೊಳೆಯುತ್ತದೆ ಮತ್ತು ಸಕಲ ವಿಧದ ಮನ ಮೋಹಕ ಬೆಳೆಯನ್ನು ಬೆಳೆಯುತ್ತದೆ.
(6) ಇದೇಕೆಂದರೆ ನಿಶ್ಚಯವಾಗಿಯೂ ಅಲ್ಲಾಹನೇ ಪರಮ ಸತ್ಯ ಮತ್ತು ಅವನೇ ಮೃತರನ್ನು ಜೀವಂತಗೊಳಿಸುತ್ತಾನೆ ಮತ್ತು ಅವನು ಪ್ರತಿಯೊಂದು ವಸ್ತುವಿನ ಮೇಲೆ ಸರ್ವ ಸಮರ್ಥನಾಗಿದ್ದಾನೆ.
(7) ಪ್ರಳಯ ಸಮಯವು ಖಂಡಿತ ಬರಲಿದೆ. ಅದರಲ್ಲಿ ಯಾವುದೇ ಸಂಶಯವಿಲ್ಲ. ಮತ್ತು ನಿಶ್ಚಯವಾಗಿಯೂ ಅಲ್ಲಾಹನು ಸಮಾಧಿಯಲ್ಲಿರುವವರನ್ನು ಪುನಃ ಎಬ್ಬಿಸುವನು.
(8) ಜನರ ಪೈಕಿ ಕೆಲವರು ಅಲ್ಲಾಹನ ವಿಚಾರದಲ್ಲಿ ಯಾವುದೇ ಜ್ಞಾನ, ಮಾರ್ಗದರ್ಶನ, ಮತ್ತು ಪ್ರಕಾಶಮಯ ಗ್ರಂಥವಿಲ್ಲದೇ ತರ್ಕ ಮಾಡುವವರೂ ಇದ್ದಾರೆ.
(9) ಜನರ ಪೈಕಿ ಕೆಲವರು ಅಲ್ಲಾಹನ ವಿಚಾರದಲ್ಲಿ ಯಾವುದೇ ಜ್ಞಾನ, ಮಾರ್ಗದರ್ಶನ, ಮತ್ತು ಪ್ರಕಾಶಮಯ ಗ್ರಂಥವಿಲ್ಲದೇ ತರ್ಕ ಮಾಡುವವರೂ ಇದ್ದಾರೆ.
(10) ಇದು ನಿನ್ನ ಕೈಗಳು ಮೊದಲೇ ಮಾಡಿರುವ ಕರ್ಮಗಳ ಫಲವಾಗಿದೆ ಮತ್ತು ನಿಶ್ಚಯವಾಗಿಯೂ ಅಲ್ಲಾಹನು ತನ್ನ ದಾಸರ ಮೇಲೆ ಅಕ್ರಮವೆಸುಗುವವನಲ್ಲ.
(11) ಜನರಲ್ಲಿ ಕೆಲವರು ಅಂಚಿನಲ್ಲಿ ನಿಂತು ಅಲ್ಲಾಹನನ್ನು ಆರಾಧಿಸುವವರಾಗಿದ್ದಾರೆ. ಅವರಿಗೆ ಒಳಿತೇನಾದರೂ ಸಿಕ್ಕಿದರೆ ಆಸಕ್ತಿ ತೋರಿಸುತ್ತಾರೆ ಇನ್ನು ಯಾವುದಾದರೂ ವಿಪತ್ತು ಬಾಧಿಸಿದರೆ ಕೂಡಲೇ ವಿಮುಖರಾಗಿಬಿಡುತ್ತಾರೆ. ಅವರು ಇಹಪರ ಲೋಕಗಳನ್ನು ನಷ್ಟ ಮಾಡಿಕೊಂಡವರಾಗಿದ್ದಾರೆ. ನಿಜವಾಗಿಯು ಇದುವೇ ಸ್ಪಷ್ಟ ನಷ್ಟ.
(12) ಅವನು ಅಲ್ಲಾಹನ ಹೊರತು ತಮಗೆ ಹಾನಿಯನ್ನಾಗಲೀ, ಲಾಭವನ್ನಾಗಲೀ ಮಾಡದ ವಸ್ತುಗಳನ್ನು ಕರೆದು ಬೇಡುತ್ತಾನೆ. ಇದುವೇ ಅತಿವಿದೂರದ ಮಾರ್ಗಭ್ರಷ್ಟತೆಯಾಗಿದೆ.
(13) ಯಾರ ಹಾನಿಯು ಅವರ ಲಾಭಕ್ಕಿಂತ ಹತ್ತಿರವಿದೆಯೋ ಅಂತಹವನನ್ನು ಅವನು ಕರೆದು ಬೇಡುತ್ತಾನೆ. ವಾಸ್ತವದಲ್ಲಿ ಅವನು ಅದೆಷ್ಟು ಕೆಟ್ಟ ರಕ್ಷಕನು! ಮತ್ತು ಅದೆಷ್ಟು ಕೆಟ್ಟ ಸಂಗಾತಿ!
(14) ಸತ್ಯವಿಶ್ವಾಸಿವಿರಿಸಿ, ಸತ್ಕರ್ಮಗಳನ್ನು ಕೈಗೊಂಡವರನ್ನು ನಿಶ್ಚಯವಾಗಿಯು ಅಲ್ಲಾಹನು ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳಲ್ಲಿ ಪ್ರವೇಶಿಸುವನು. ಖಂಡಿತವಾಗಿಯೂ ಅಲ್ಲಾಹನು ತಾನಿಚ್ಛಿಸಿದ್ದನ್ನು ಮಾಡುತ್ತಾನೆ.
(15) ಅಲ್ಲಾಹನು ತನ್ನ ಸಂದೇಶವಾಹಕರಿಗೆ ಇಹಪರ ಲೋಕದಲ್ಲಿ ಸಹಾಯ ಮಾಡಲಾರನೆಂದು ಯಾರು ಭಾವಿಸುತ್ತಿದ್ದನೋ ಅವನು ಒಂದು ಹಗ್ಗವನ್ನು ಎತ್ತರಕ್ಕೆ ಕಟ್ಟಿಕೊಂಡು (ತನ್ನ ಕೊರಳಿಗೆ ಉರುಳಾಗಿಸಿ ತನ್ನ ಕತ್ತನ್ನು ಹಿಸುಕಿಕೊಳ್ಳಲಿ) ಆ ಬಳಿಕ ಅವನು ತನ್ನ ಯೋಜನೆಗಳು ತನಗೆ ಅಸಹನೆ ಹುಟ್ಟಿಸುತ್ತಿದ್ದಂತಹ ವಿಚಾರವನ್ನು ನೀಗಿಸುವುದೇ ನೋಡಲಿ.
(16) ಇದೇ ಪ್ರಕಾರ ನಾವು ಈ ಕುರ್ಆನನ್ನು ಸುಸ್ಪಷ್ಟವಾದ ಸೂಕ್ತಿಗಳೊಂದಿಗೆ ಅವತೀರ್ಣಗೊಳಿಸಿರುತ್ತೇವೆ. ನಿಶ್ಚಯವಾಗಿಯು ಅಲ್ಲಾಹನು ತಾನಿಚ್ಛಿಸಿದವರನ್ನು ಸನ್ಮಾರ್ಗದಲ್ಲಿ ಮುನ್ನಡೆಸುತ್ತಾನೆ.
(17) ಇದೇ ಪ್ರಕಾರ ನಾವು ಈ ಕುರ್ಆನನ್ನು ಸುಸ್ಪಷ್ಟವಾದ ಸೂಕ್ತಿಗಳೊಂದಿಗೆ ಅವತೀರ್ಣಗೊಳಿಸಿರುತ್ತೇವೆ. ನಿಶ್ಚಯವಾಗಿಯು ಅಲ್ಲಾಹನು ತಾನಿಚ್ಛಿಸಿದವರನ್ನು ಸನ್ಮಾರ್ಗದಲ್ಲಿ ಮುನ್ನಡೆಸುತ್ತಾನೆ.
(18) ಭೂಮಿ ಆಕಾಶಗಳಲ್ಲಿರುವವರು, ಸೂರ್ಯ, ಚಂದ್ರ, ನಕ್ಷತ್ರಗಳು, ಪರ್ವತಗಳು, ಮರಗಳು, ಜೀವಿಗಳು ಮತ್ತು ಬಹುತೇಕ ಜನರು ಅಲ್ಲಾಹನ ಮುಂದೆ ಸಾಷ್ಟಾಂಗವೆರಗುತ್ತಿರುವುದನ್ನು ನೀವು ಕಾಣುವುದಿಲ್ಲವೇ? ಮತ್ತು ಅಲ್ಲಾಹನ ಶಿಕ್ಷೆಗೆ ಅರ್ಹರಾದವರು ಅನೇಕರಿದ್ದಾರೆ. ಅಲ್ಲಾಹನು ಯಾರನ್ನು ಅಪಮಾನಿಸುತ್ತಾನೋ ಅವನಿಗೆ ಗೌರವ ನೀಡುವವರಾರಿಲ್ಲ. ಖಂಡಿತವಾಗಿಯೂ ಅಲ್ಲಾಹನು ತಾನಿಚ್ಛಿಸಿದ್ದನ್ನು ಮಾಡುತ್ತಾನೆ.
(19) ತಮ್ಮ ಪ್ರಭುವಿನ ವಿಚಾರದಲ್ಲಿ ವಾಗ್ವಾದ ನಡೆಸುತ್ತಿದ್ದ ಎರಡು ಪಂಗಡಗಳಿವು. ಆದ್ದರಿಂದ ಸತ್ಯ ನಿಷೇಧಿಸಿದವರಿಗೆ ಅಗ್ನಿಯ ವಸ್ತçವನ್ನು ತಯಾರಿಸಿಡಲಾಗಿದೆ. ಅವರ ತಲೆಗಳ ಮೇಲಿಂದ ತೀವ್ರವಾಗಿ ಕುದಿಯುವ ನೀರನ್ನು ಸುರಿಸಲಾಗವುದು.
(20) ಅದರಿಂದ ಅವರ ಹೊಟ್ಟೆಯೊಳಗಿರುವುದೆಲ್ಲವೂ ಮತ್ತು ಚರ್ಮಗಳೂ ಕರಗಿ ಬಿಡುವುದು.
(21) ಮತ್ತು ಅವರ ದಂಡನೆಗಾಗಿ ಕಬ್ಬಿಣದ ಗದೆಗಳಿವೆ.
(22) ಮತ್ತು ಅವರ ದಂಡನೆಗಾಗಿ ಕಬ್ಬಿಣದ ಗದೆಗಳಿವೆ.
(23) ಸತ್ಯವಿಶ್ವಾಸವಿರಿಸಿ, ಸತ್ಕರ್ಮಗಳನ್ನು ಕೈಗೊಂಡವರನ್ನು ಅಲ್ಲಾಹನು ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳಲ್ಲಿ ಪ್ರವೇಶಿಸುವನು. ಅಲ್ಲಿ ಅವರಿಗೆ ಚಿನ್ನದ ಕಂಕಣಗಳನ್ನು, ಮುತ್ತುಗಳನ್ನು ತೊಡಿಸಲಾಗುವುದು ಮತ್ತು ಅಲ್ಲಿ ಅವರ ಉಡುಪು ರೇಶ್ಮೆಯದ್ದಾಗಿರುವುದು.
(24) ಐಹಿಕ ಜೀವನದಲ್ಲಿ ಅವರನ್ನು ಪವಿತ್ರ ವಚನದೆಡೆಗೆ (ಸಾಕ್ಷಿ ವಚನ) ಮುನ್ನಡೆಸಲಾಗಿದೆ ಮತ್ತು ಅವರನ್ನು ಸ್ತುತ್ಯರ್ಹನಾದ ಅಲ್ಲಾಹನ ಮಾರ್ಗದೆಡೆಗೆ ಮುನ್ನಡೆಸಲಾಗಿತ್ತು.
(25) ಯಾರು ಸತ್ಯನಿಷೇಧಿಸಿದರೊ ಮತ್ತು ಅಲ್ಲಾಹನ ಮಾರ್ಗದಿಂದ ತಡೆಯುತ್ತಾರೋ ಮತ್ತು ಅಲ್ಲಿನ ನಿವಾಸಿಗಳಿಗೂ ಹಾಗೂ ಹೊರ ನಾಡಿನವರಿಗೂ ನಾವು ಸಮಾನ ಹಕ್ಕುನ್ನು ನೀಡಿರುವ. ಮಸ್ಜಿದುಲ್ ಹರಾಮ್ನಿಂದ ತಡೆಯುತ್ತಾರೋ ಮತ್ತು ಅಲ್ಲಿ ಯಾರು ಅನ್ಯಾಯದೊಂದಿಗೆ ಅತಿರೇಕವನ್ನು ಬಯಸುತ್ತಾನೋ ಅವನಿಗೆ ನಾವು ವೇದನಾಜನಕ ಯಾತನೆಯನ್ನು ಸವಿಯುವಂತೆ ಮಾಡುವೆವು.
(26) ನಾವು ಇಬ್ರಾಹೀಮರಿಗೆ ಕಾಬಾಲಯದ ಸ್ಥಾನವನ್ನು ನಿಶ್ಚಯಿಸಿಕೊಟ್ಟ ಸಂದರ್ಭವನ್ನು ಸ್ಮರಿಸಿರಿ. ನೀವು ನನ್ನೊಂದಿಗೆ ಯಾರನ್ನೂ ಸಹಭಾಗಿಯನ್ನಾಗಿ ಮಾಡಬೇಡಿರಿ ಮತ್ತು ಪ್ರದಕ್ಷಿಣೆ ಹಾಕುವವರಿಗೆ, ನಮಾಝ್ ನಿರ್ವಹಿಸುವವರಿಗೆ, ಬಾಗುವವರಿಗೆ, ಸಾಷ್ಟಾಂಗ ಮಾಡುವವರಿಗೆ ನನ್ನ ಭವನವನ್ನು ಶುಚಿಯಾಗಿರಿಸಿರಿ.
(27) ಹಜ್ಜ್ಗಾಗಿ ನೀವು ಜನರಿಗೆ ಕರೆ ನೀಡಿರಿ. ಅವರು ಪಾದಚಾರಿಗಳಾಗಿಯೂ, ಬಳಲಿದ ಒಂಟೆಗಳ ಮೇಲೂ ದೂರದ ಎಲ್ಲಾ ಮಾರ್ಗದಿಂದಲೂ ನಿಮ್ಮ ಬಳಿಗೆ ಬರುವರು.
(28) ಅವರು ತಮ್ಮ ಪ್ರಯೋಜನಗಳನ್ನು ಪಡೆಯಲಿಕ್ಕಾಗಿ ಬರಲಿ ಮತ್ತು ಅವರಿಗೆ ದಯಪಾಲಿಸಿದ ಜಾನುವಾರುಗಳ ಮೇಲೆ ನಿರ್ಧಿಷ್ಟ ದಿನಗಳಲ್ಲಿ ಅಲ್ಲಾಹನ ನಾಮವನ್ನುಚ್ಚರಿಸಲಿ. ಅದರಿಂದ ನೀವೂ ತಿನ್ನಿರಿ ಹಾಗೂ ಕಡುಬಡವರಿಗೂ ತಿನ್ನಿಸಿರಿ.
(29) ತರುವಾಯ ಅವರು ತಮ್ಮ ಮಾಲಿನ್ಯಗಳನ್ನು ನೀಗಿಸಲಿ ಮತ್ತು ತಮ್ಮ ಪುರಾತನ ಭವನ ಕಾಬಾದ ಪ್ರದಕ್ಷಿಣೆ ಮಾಡಲಿ.
(30) ಇದು ಹಜ್ಜ್ನ ವಿಷಯವಾಗಿದೆ ಮತ್ತು ಯಾರು ಅಲ್ಲಾಹನು ಪಾವನಗೊಳಿಸಿದವುಗಳನ್ನು ಗೌರವಿಸುವನೋ ಅವನ ಪಾಲಿಗೆ ಅವನ ಪ್ರಭುವಿನ ಬಳಿ ಅತ್ಯುತ್ತಮವಾದುದು ಇದೆ ಮತ್ತು ಜಾನುವಾರುಗಳನ್ನು ನಿಮಗೆ ಧರ್ಮಸಮ್ಮತಗೊಳಿಸಲಾಗಿದೆ ಆದರೆ ನಿಮಗೆ ಓದಿ ಹೇಳಲಾದವುಗಳ ಹೊರತು ಹಾಗೆಯೇ ನೀವು ವಿಗ್ರಹಗಳ ಮಾಲಿನ್ಯದಿಂದ ದೂರವಿರಿ ಮತ್ತು ಸುಳ್ಳು ಮಾತನ್ನು ತೊರೆದು ಬಿಡರಿ.
(31) ಅಲ್ಲಾಹನಿಗೆ ಏಕನಿಷ್ಠರಾಗಿ ಅವನೊಂದಿಗೆ ಯಾರನ್ನೂ ಸಹಭಾಗಿಯನ್ನಾಗಿ ಮಾಡದಿರಿ. ಅಲ್ಲಾಹನೊಂದಿಗೆ ಸಹಭಬಾಗಿಯನ್ನು ನಿಶ್ಚಯಿಸುವವನು ಆಕಾಶದಿಂದ ಕೆಳಗೆ ಬಿದ್ದಂತಿರುವನು. ಅವನನ್ನು ಪಕ್ಷಿಗಳು ಹೆಕ್ಕಿಕೊಂಡು ಹೋಗುವುವು. ಇಲ್ಲವೇ ಬೀಸುಗಾಳಿಯು ಅವನನ್ನು ದೂರ ಸ್ಥಳಕ್ಕೆ ಎಸೆದು ಬಿಡುವುದು.
(32) ಇದು ವಾಸ್ತವಿಕತೆಯಾಗಿದೆ. ಇನ್ನು ಯಾರು ಅಲ್ಲಾಹನ ಲಾಂಛನಗಳಿಗೆ ಗೌರವ ನೀಡುತ್ತಾನೋ ಖಂಡಿತವಾಗಿಯೂ ಅದು ಅವನ ಹೃದಯದ ಭಯಭಕ್ತಿಯಿಂದಾಗಿರುತ್ತದೆ.
(33) ನಿಮಗೆ ಆ ಜಾನುವಾರುಗಳಲ್ಲಿ ಒಂದು ನಿಶ್ಚಿತಾವಧಿಯವರೆಗೆ ಪ್ರಯೋಜನಗಳಿವೆ. ಅನಂತರ ಅವುಗಳ ಬಲಿದಾನದ ಸ್ಥಳವು ಪುರಾತನ ಭವನವಾಗಿದೆ.
(34) ಪ್ರತಿಯೊಂದು ಜನಾಂಗಕ್ಕೂ ನಾವು ಬಲಿ ಕರ್ಮವನ್ನು ನಿಶ್ಚಯಿಸಿಕೊಟ್ಟಿರುತ್ತೇವೆ. ಇದು ಅವರು ತಮಗೆ ಅಲ್ಲಾಹನು ದಯಪಾಲಿಸಿದ ಜಾನುವಾರುಗಳ ಮೇಲೆ ಅಲ್ಲಾಹನ ನಾಮವನ್ನು ಉಚ್ಛರಿಸಲೆಂದಾಗಿದೆ. ನಿಮ್ಮೆಲ್ಲರ ಆರಾಧ್ಯನು ಏಕೈಕ ಆರಾಧ್ಯನಾಗಿದ್ದಾನೆ. ಆದ್ದರಿಂದ ನೀವು ಅವನಿಗೇ ವಿಧೇಯರಾಗಿರಿ ಮತ್ತು ದೈನ್ಯರಾದವರಿಗೆ (ಓ ಪೈಗಂಬರರೇ) ನೀವು ಶುಭವಾರ್ತೆಯನ್ನೀಡಿರಿ.
(35) ಅವರ ಮುಂದೆ ಅಲ್ಲಾಹನ ಸ್ಮರಣೆಯನ್ನು ಮಾಡಲಾದಾಗ ಅವರ ಹೃದಯಗಳು ಕಂಪಿಸುತ್ತವೆ. ಮತ್ತು ಅವರಿಗೆ ಬಾಧಿಸಿದ ಸಂಕಷ್ಟಗಳ ಮೇಲೆ ಸಹನೆ ವಹಿಸುತ್ತಾರೆ ಮತ್ತು ನಮಾಝನ್ನು ಸಂಸ್ಥಾಪಿಸುತ್ತಾರೆ. ಹಾಗೂ ನಾವು ಅವರಿಗೆ ನೀಡಿದ ಸಂಪತ್ತಿನಿAದ ಖರ್ಚು ಮಾಡುವವರೂ ಆಗಿದ್ದಾರೆ.
(36) ಬಲಿದಾನದ ಒಂಟೆಗಳನ್ನು ನಾವು ನಿಮಗೆ ಅಲ್ಲಾಹನ ಲಾಂಛನಗಳಾಗಿ ಮಾಡಿರುತ್ತೇವೆ. ಅವುಗಳಲ್ಲಿ ನಿಮಗೆ ಒಳಿತಿದೆ. ಆದ್ದರಿಂದ ನೀವು ಅವುಗಳನ್ನು ಸಾಲಾಗಿ ನಿಲ್ಲಿಸಿ ಅವುಗಳ ಮೇಲೆ ಅಲ್ಲಾಹನ ನಾಮವನ್ನುಚ್ಛರಿಸಿರಿ ಹಾಗೆಯೇ ಅವುಗಳ ಪಾರ್ಶ್ವಗಳು ನೆಲಕ್ಕೊರಗಿದರೆ ಅವುಗಳನ್ನು ತಿನ್ನಿರಿ ಮತ್ತು ಯಾಚಿಸುವವನಿಗೂ, ಯಾಚಿಸದ ಬಡವನಿಗೂ, ತಿನ್ನಿಸಿರಿ.ಇದೇ ಪ್ರಕಾರ ನಾವು ಜಾನುವಾರುಗಳನ್ನು ನಿಮಗೆ ಅಧೀನಗೊಳಿಸಿರುತ್ತೇವೆ. ಇದು ನೀವು ಕೃತಜ್ಞತೆ ತೋರಲೆಂದಾಗಿದೆ.
(37) ಅವುಗಳ ಮಾಂಸವಾಗಲೀ, ರಕ್ತವಾಗಲೀ ಅಲ್ಲಾಹನಿಗೆ ತಲುಪುವುದಿಲ್ಲ. ಆದರೆ ಅವನಿಗೆ ನಿಮ್ಮ ಹೃದಯದ ಭಯಭಕ್ತಿಯು ತಲುಪುವುದು. ಇದೇ ಪ್ರಕಾರ ಅಲ್ಲಾಹನು ಆ ಜಾನುವಾರುಗಳನ್ನು ನಿಮಗೆ ಅಧೀನಗೊಳಿಸಿರುತ್ತಾನೆ. ಇದು ನಿಮ್ಮನ್ನು ಅವನು ಸನ್ಮಾರ್ಗದಲ್ಲಿ ಮುನ್ನಡೆಸಿರುವುದಕ್ಕೋಸ್ಕರ ನೀವು ಅವನ ಮಹಾನತೆಯನ್ನು ಕೊಂಡಾಡಲೆAದಾಗಿದೆ ಮತ್ತು ಒಳಿತಿನ ಪಾಲಕರಿಗೆ ನೀವು ಸುವಾರ್ತೆಯನ್ನು ನೀಡಿರಿ.
(38) ನಿಶ್ಚಯವಾಗಿಯು ಅಲ್ಲಾಹನು ಸತ್ಯವಿಶ್ವಾಸಿಗಳನ್ನು ಶತ್ರುಗಳಿಂದ ರಕ್ಷಿಸುತ್ತಾನೆ ಮತ್ತು ವಿಶ್ವಾಸಘಾತುಕ ಅವಿಶ್ವಾಸಿಯನ್ನು ಅಲ್ಲಾಹನು ಎಂದಿಗೂ ಮೆಚ್ಚಲಾರನು.
(39) ಯಾವ ಸತ್ಯವಿಶ್ವಾಸಿಗಳ ವಿರುದ್ಧ ಯುದ್ಧ ಮಾಡಲಾಗುತ್ತಿದೆಯೋ ಅವರಿಗೂ ಪ್ರತಿ ಯುದ್ಧಕ್ಕೆ ಅನುಮತಿ ನೀಡಲಾಗಿದೆ. ಏಕೆಂದರೆ ಅವರು ಮರ್ದಿತರಾಗಿದ್ದಾರೆ. ನಿಸ್ಸಂಶಯವಾಗಿಯು ಅಲ್ಲಾಹನು ಅವರ ಸಹಾಯಕ್ಕೆ ಸಮರ್ಥನಿರುವನು.
(40) ಯಾವ ಸತ್ಯವಿಶ್ವಾಸಿಗಳ ವಿರುದ್ಧ ಯುದ್ಧ ಮಾಡಲಾಗುತ್ತಿದೆಯೋ ಅವರಿಗೂ ಪ್ರತಿ ಯುದ್ಧಕ್ಕೆ ಅನುಮತಿ ನೀಡಲಾಗಿದೆ. ಏಕೆಂದರೆ ಅವರು ಮರ್ದಿತರಾಗಿದ್ದಾರೆ. ನಿಸ್ಸಂಶಯವಾಗಿಯು ಅಲ್ಲಾಹನು ಅವರ ಸಹಾಯಕ್ಕೆ ಸಮರ್ಥನಿರುವನು.
(41) ಅವರಿಗೆ ನಾವು ಭೂಮಿಯಲ್ಲಿ ಅಧಿಕಾರವನ್ನು ಕೊಟ್ಟರೆ ಅವರು ನಮಾಝ್ ಸಂಸ್ಥಾಪಿಸುತ್ತಾರೆ ಝಕಾತ್ ನೀಡುತ್ತಾರೆ ಒಳಿತನ ಆದೇಶ ನೀಡುತ್ತಾರೆ ಮತ್ತು ಕೆಡುಕಿನಿಂದ ತಡೆಯುತ್ತಾರೆ. ಸರ್ವ ಕಾರ್ಯಗಳ ಅಂತಿಮ ಪರಿಣಾಮವು ಅಲ್ಲಾಹನ ನಿಯಂತ್ರಣದಲ್ಲಿದೆ.
(42) (ಓ ಪೈಗಂಬರರೇ) ಇವರು ನಿಮ್ಮನ್ನು ಸುಳ್ಳಾಗಿಸುವುದಾದರೆ ಇವರಿಗಿಂತ ಮೊದಲು ನೂಹರವರ ಜನಾಂಗವು, ಆದ್ ಮತ್ತು ಸಮೂದ್ ಜನಾಂಗವೂ ಸುಳ್ಳಾಗಿಸಿದೆ.
(43) ಮತ್ತು ಇಬ್ರಾಹೀಮರವರ ಜನಾಂಗವೂ, ಲೂತರವರ ಜನಾಂಗವೂ ಸಹ
(44) ಮತ್ತು ಮದ್ಯನ್ನ ಜನರು ಸಹ ತಮ್ಮ ಪೈಗಂಬರರನ್ನು ಸುಳ್ಳಾಗಿಸಿದ್ದರು. ಮೂಸಾರವರೂ ಸಹ ಸುಳ್ಳಾಗಿಸಲ್ಪಟ್ಟರು. ಆಗ ನಾನು ಸತ್ಯನಿಷೇಧಿಗಳಿಗೆ ಒಂದಿಷ್ಟು ಅವಕಾಶವನ್ನು ನೀಡಿ, ನಂತರ ಅವರನ್ನು ಹಿಡಿದುಬಿಟ್ಟೆನು. ಆಮೇಲೆ ನನ್ನ ಶಿಕ್ಷೆಯು ಹೇಗಿತ್ತು ಎಂಬದನ್ನು ನೋಡಿರಿ.
(45) ಅದೆಷ್ಟೋ ದೌರ್ಜನ್ಯವೆಸಗುತ್ತಿದ್ದ ನಾಡುಗಳನ್ನು ನಾವು ನಾಶ ಮಾಡಿದೆವು ಅವು ತಮ್ಮ ಛಾವಣಿಗಳ ಮೇಲೆ ಬುಡಮೇಲಾಗಿ ಬಿದ್ದಿವೆ ಮತ್ತು ಎಷ್ಟೋ ಬಾವಿಗಳು ಹಾಗೂ ಅದೆಷ್ಟೋ ಸುಭದ್ರ ಅರಮನೆಗಳೂ ಪಾಳು ಬಿದ್ದಿವೆ.
(46) ಅವರ ಹೃದಯಗಳು ಈ ವಿಚಾರಗಳನ್ನು ಗ್ರಹಿಸಿಕೊಳ್ಳುವಂತಾಗಲು ಅಥವಾ ಕಿವಿಗಳು ಕೇಳಿಸಿಕೊಳ್ಳುವಂತಾಗಲು ಅವರು ಭೂಮಿಯಲ್ಲಿ ಸಂಚರಿಸುವುದಿಲ್ಲವೇ? ಕೇವಲ ದೃಷ್ಟಿಗಳು ಮಾತ್ರ ಕುರುಡಾಗವುದಿಲ್ಲ. ಆದರೆ ಎದೆಗಳೊಳಗೆ ಇರುವಂತಹ ಹೃದಯಗಳು ಸಹ ಕುರುಡಾಗುತ್ತವೆ.
(47) ಅವರು ಯಾತನೆಗೆ ಆತುರಪಟ್ಟುಕೊಳ್ಳುತ್ತಿದ್ದಾರೆ. ಆದರೆ ಅಲ್ಲಾಹನು ತನ್ನ ವಾಗ್ದನವನ್ನೆಂದೂ ಉಲ್ಲಂಘಿಸುವುದಿಲ್ಲ. ವಾಸ್ತವದಲ್ಲಿ ನಿಮ್ಮ ಪ್ರಭುವಿನ ಬಳಿ ಒಂದು ದಿನವೆಂದರೆ ನೀವು ಎಣಿಸುವ ಒಂದು ಸಾವಿರ ವರ್ಷಗಳದ್ದಾಗಿರುತ್ತದೆ.
(48) ಅದೆಷ್ಟೋ ಅಕ್ರಮಿ ನಾಡುಗಳಿಗೆ ನಾನು ಕಾಲಾವಕಾಶವನ್ನು ನೀಡಿದೆನು. ಅನಂತರ ನಾನು ಅವರನ್ನು ಹಿಡಿದುಬಿಟ್ಟೆನು ಮತ್ತು ನನ್ನೆಡೆಗೇ ಮರಳುವಿಕೆಯಿರುವುದು.
(49) (ಓ ಪೈಗಂಬರರೇ) ಹೇಳಿರಿ: ಓ ಜನರೇ, ನಾನು ನಿಮಗೆ ಬಹಿರಂಗವಾಗಿ ಮುನ್ನೆಚ್ಚರಿಕೆ ನೀಡುವವನು ಮಾತ್ರವಾಗಿದ್ದೇನೆ.
(50) ಯಾರು ಸತ್ಯವಿಶ್ವಾಸವಿರಿಸಿ, ಸತ್ಕರ್ಮಗಳನ್ನು ಕೈಗೊಂಡಿರುವರೋ ಅವರಿಗೆ ಕ್ಷಮೆಯೂ, ಗೌರವಪೂರ್ಣ ಜೀವನಾಧಾರವು ಇರುವುದು.
(51) ನಮ್ಮ ದೃಷ್ಟಾಂತಗಳನ್ನು ಸೋಲಿಸುವ ಪ್ರಯತ್ನದಲ್ಲಿರುವವರು ನರಕವಾಸಿಗಳಾಗಿರುವರು.
(52) ನಾವು ನಿಮಗಿಂತ ಮೊದಲು ಯಾವೊಬ್ಬ ಸಂದೇಶವಾಹಕನನ್ನಾಗಲಿ, ಪ್ರವಾದಿಯನ್ನಾಗಲೀ ಕಳುಹಿಸಿರುತ್ತೇವೆಯೋ ಅವನು ಏನೇ ಉದ್ದೇಶಿಸಿದರೂ ಅವನ ಉದ್ದೇಶ ಮಾರ್ಗದಲ್ಲಿ ಶೈತಾನನು ದುಷ್ಪೆçÃರಣೆಗಳನ್ನು ಹಾಕಿದನು. ಆದರೆ ಅಲ್ಲಾಹನು ಶೈತಾನನ ದುಷ್ಪೆçÃರಣೆಗಳನ್ನು ನೀಗಿಸುತ್ತಾನೆ. ಮತ್ತು ತನ್ನ ವಚನಗಳನ್ನು ಸದೃಢಗೊಳಿಸುತ್ತಾನೆ. ಅಲ್ಲಾಹನು ಸರ್ವಜ್ಞನು, ಯುಕ್ತಿಪೂರ್ಣನು ಆಗಿರುವನು.
(53) ಇದೇಕೆಂದರೆ ಅಲ್ಲಾಹನು ಶೈತಾನನ ದುಷ್ಪೆçÃರಣೆಗಳನ್ನು ಹೃದಯಗಳಲ್ಲಿ ರೋಗವಿರುವವರಿಗೂ ಮತ್ತು ಕಠಿಣ ಹೃದಯವಂತರಿಗೂ ಪರೀಕ್ಷಾ ಸಾಧನವನ್ನಾಗಿ ಮಾಡಲೆಂದಾಗಿದೆ ಮತ್ತು ನಿಸ್ಸಂದೇಹವಾಗಿಯೂ ಅಕ್ರಮಿಗಳು ವಿರೋಧದಲ್ಲಿ ಬಹುದೂರ ಸರಿದಿದ್ದಾರೆ.
(54) ಮತ್ತು ಜ್ಞಾನ ಪಡೆದವರು ಇದು ನಿಮ್ಮ ಪ್ರಭುವಿನ ಕಡೆಯ ಸತ್ಯವೇ ಆಗಿದೆಯೆಂದು ದೃಢವಾಗಿ ತಿಳಿಯಲೆಂದಾಗಿದೆ. ಆ ಬಳಿಕ ಅವರು ಅದರಲ್ಲಿ ವಿಶ್ವಾಸವಿಡಲಿ ಮತ್ತು ಅವರ ಹೃದಯಗಳು ಅದಕ್ಕೆ ಶರಣಾಗಲಿ. ನಿಶ್ಚಯವಾಗಿಯು ಅಲ್ಲಾಹನು ಸತ್ಯವಿಶ್ವಾಸವಿರಿಸಿದವರಿಗೆ ಋಜುವಾದ ಮಾರ್ಗದೆಡೆಗೆ ಮುನ್ನಡೆಸುತ್ತಾನೆ.
(55) ಸತ್ಯನಿಷೇಧಿಸಿದವರು ದಿವ್ಯವಾಣಿಯ ಕುರಿತು ಸದಾ ಸಂದೇಹದಲ್ಲೇ ಇರುವರು. ಕೊನೆಗೆ ಅವರ ಮೇಲೆ ಅಂತ್ಯ ಗಳಿಗೆಯು ಹಠಾತ್ತನೆ ಬಂದುಬಿಡುವುದು ಅಥವಾ ಅಶುಭದಿನದ ಯಾತನೆಯು ಅವರ ಬಳಿ ಬಂದು ಬಿಡುವುದು.
(56) ಆ ದಿನ ಕೇವಲ ಅಲ್ಲಾಹನ ಅಧಿಪತ್ಯವಿರುವುದು. ಅವನೇ ಅವರ ನಡುವೆ ತೀರ್ಪು ನೀಡುವನು.ಸತ್ಯವಿಶ್ವಾಸವಿರಿಸಿದವರು, ಸತ್ಕರ್ಮಗಳನ್ನು ಕೈಗೊಂಡವರು ಅನುಗ್ರಹಪೂರ್ಣ ಸ್ವಗೋದ್ಯಾನಗಳಲ್ಲಿರುವರು.
(57) ಇನ್ನು ಯಾರು ಸತ್ಯನಿಷೇಧಿಸಿ ನಮ್ಮ ಸೂಕ್ತಿಗಳನ್ನು ಸುಳ್ಳಾಗಿಸಿದರೋ ಅವರಿಗೆ ಅಪಮಾನಕರ ಶಿಕ್ಷೆಯಿರುವುದು.
(58) ಯಾರು ಅಲ್ಲಾಹನ ಮಾರ್ಗದಲ್ಲಿ ವಲಸೆ ಹೋಗಿ ಅನಂತರ ಕೊಲ್ಲಲ್ಪಟ್ಟರೋ ಅಥವ ಸಹಜ ಮರಣ ಹೊಂದಿದರೋ ಅವರಿಗೆ ಅಲ್ಲಾಹನು ಅತ್ಯುತ್ತಮವಾಗಿರುವ ಜೀವನಾಧಾರವನ್ನು ದಯಪಾಲಿಸುತ್ತಾನೆ. ಮತ್ತು ನಿಸ್ಸಂಶಯವಾಗಿಯೂ ಅವನು ಜೀವನಾಧಾರ ನೀಡುವವರಲ್ಲಿ ಅತ್ಯುತ್ತಮನಾಗಿರುವನು.
(59) ಅವರು ಸಂತುಷ್ಟರಾಗುವAತಹ ಸ್ಥಳಕ್ಕೆ ಅವರನ್ನು ತಲುಪಿಸುವನು. ನಿಸ್ಸಂದೇಹವಾಗಿಯೂ ಅಲ್ಲಾಹನು ಮಹಾಜ್ಞಾನಿಯೂ ಹಾಗೂ ಸಹನಾಶೀಲನಾಗಿರುವನು.
(60) ಇದು ಅವರ ಅಂತಿಮ ಪರಿಣಾಮವಾಯಿತು. ಒಬ್ಬನು ಹಿಂಸೆಗೊಳಗಾದಷ್ಟೇ ಪ್ರತಿಕಾರ ಪಡೆದರೆ ಆ ಬಳಿಕ ಅವನ ಮೇಲೆ ಪುನಃ ಅತಿಕ್ರಮ ನಡೆದರೆ ಖಂಡಿತವಾಗಿಯು ಅಲ್ಲಾಹನು ಅವನಿಗೆ ಸಹಾಯ ನೀಡುತ್ತಾನೆ. ನಿಸ್ಸಂಶಯವಾಗಿಯೂ ಅಲ್ಲಾಹನು ಪಾಪಗಳನ್ನು ಮನ್ನಿಸುವವನು, ಕ್ಷಮಾಶೀಲನು ಆಗಿರುವನು.
(61) ಇದೇಕೆಂದರೆ ಅಲ್ಲಾಹನು ರಾತ್ರಿಯನ್ನು ಹಗಲಿನೊಳಗೆ ಹಾಗೂ ಹಗಲನ್ನು ರಾತ್ರಿಯೊಳಗೆ ಪ್ರವೇಶಿಸುತ್ತಾನೆ ಮತ್ತು ವಾಸ್ತವದಲ್ಲಿ ಅಲ್ಲಾಹನು ಸರ್ವವನ್ನಾಲಿಸುವವನು, ಚೆನ್ನಾಗಿ ನೋಡುವವನು ಆಗಿದ್ದಾನೆ.
(62) ಇದೇಕೆಂದರೆ ವಾಸ್ತವದಲ್ಲಿ ಅಲ್ಲಾಹನೇ ಸತ್ಯ ಮತ್ತು ಅವನ ಹೊರತು ಅವರು ಕರೆದು ಬೇಡುತ್ತಿರುವ ವಸ್ತುಗಳು ಮಿಥ್ಯವಾಗಿರುವುದು. ನಿಶ್ಚಯವಾಗಿಯೂ ಅಲ್ಲಾಹನು ಉನ್ನತನು, ಮಹಾನನು ಆಗಿದ್ದಾನೆ.
(63) ಅಲ್ಲಾಹನು ಆಕಾಶದಿಂದ ನೀರನ್ನು ಸುರಿಸಿ, ಅನಂತರ ಭೂಮಿಯು ಹಚ್ಚಹಸಿರಾಗಿರುವುದನ್ನು ನೀವು ನೋಡಲಿಲ್ಲವೇ? ನಿಸ್ಸಂಶಯವಾಗಿಯೂ ಅಲ್ಲಾಹನು ಸೂಕ್ಷö್ಮಗ್ರಹಿಯು, ವಿವರ ಪೂರ್ಣನೂ ಆಗಿದ್ದಾನೆ.
(64) ಭೂಮಿ, ಆಕಾಶಗಳಲ್ಲಿರುವುದೆಲ್ಲವೂ ಅವನದ್ದಾಗಿದೆ. ನಿಶ್ಚಯವಾಗಿಯೂ ಅಲ್ಲಾಹನೇ ನಿರಪೇಕ್ಷಕನು ಸ್ತುತ್ಯರ್ಹನು ಆಗಿದ್ದಾನೆ.
(65) ನಿಶ್ಚಯವಾಗಿಯು ಅಲ್ಲಾಹನು ಭೂಮಿಯಲ್ಲಿರುವುದನ್ನು ಮತ್ತು ಅವನ ಅಪ್ಪಣೆಯಿಂದ ಸಮುದ್ರದಲ್ಲಿ ಸಂಚರಿಸುವ ಹಡಗನ್ನು ನಿಮಗೆ ಅಧೀನಗೊಳಿಸಿದ್ದಾನೆಂದು ನೀವು ನೋಡಲಿಲ್ಲವೇ? ಮತ್ತು ಅವನ ಅನುಮತಿಯ ವಿನಃ ಆಕಾಶವು ಭೂಮಿಯ ಮೇಲೆ ಬೀಳದಂತೆ ಅವನೇ ಆಧರಿಸಿದ್ದಾನೆ ವಾಸ್ತವದಲ್ಲಿ ಅಲ್ಲಾಹನು ಜನರ ಕುರಿತು ಕೃಪಾಳುವು, ಕರುಣಾಮಯಿಯು ಆಗಿದ್ದಾನೆ.
(66) ಅವನೇ ನಿಮಗೆ ಜೀವ ನೀಡಿದನು. ನಂತರ ನಿಮ್ಮನ್ನು ಮರಣಗೊಳಿಸುತ್ತಾನೆ. ಅನಂತರ ನಿಮ್ಮನ್ನು (ಪುನಃ) ಜೀವಂತಗೊಳಿಸುವನು. ವಾಸ್ತವದಲ್ಲಿ ಮನುಷ್ಯನು ಕೃತಘ್ನನಾಗಿದ್ದಾನೆ.
(67) ಪ್ರತಿಯೊಂದು ಸಮುದಾಯಕ್ಕೂ ನಾವು ಆರಾಧನ ಕ್ರಮವನ್ನು ನಿಶ್ಚಯಿಸಿದ್ದೇವು ಅವರು ಅದನ್ನು ಪಾಲಿಸುತ್ತಿದ್ದರು. ಇನ್ನು ಇವರು ನಿಮ್ಮೊಂದಿಗೆ ಈ ವಿಚಾರದಲ್ಲಿ ತರ್ಕ ಮಾಡದಿರಲಿ ಮತ್ತು ನೀವು ನಿಮ್ಮ ಪ್ರಭುವಿನ ಕಡೆಗೆ ಕರೆಯಿರಿ. ನಿಸ್ಸಂಶಯವಾಗಿಯೂ ನೀವು ಋಜುವಾದ ಮಾರ್ಗದಲ್ಲಿದ್ದೀರಿ.
(68) ಮತ್ತು ಅವರೇನಾದರೂ ನಿಮ್ಮೊಡನೆ ಜಗಳವಾಡಿದರೆ ಹೇಳಿರಿ: ನೀವು ಮಾಡುತ್ತಿರುವುದೆಲ್ಲವನ್ನು ಅಲ್ಲಾಹನು ಚೆನ್ನಾಗಿ ಬಲ್ಲನು.
(69) ನಿಸ್ಸಂಶಯವಾಗಿಯೂ ಅಲ್ಲಾಹನು ಪುನರುತ್ಥಾನ ದಿನದಂದು ನೀವು ಭಿನ್ನಾಭಿಪ್ರಾಯ ಹೊಂದಿದ ಸಕಲ ವಿಷಯಗಳ ಬಗ್ಗೆ ನಿಮ್ಮ ನಡುವೆ ತೀರ್ಮಾನ ಮಾಡಲಿದ್ದಾನೆ.
(70) ಭೂಮಿ, ಆಕಾಶಗಳಲ್ಲಿರುವ ಸಕಲ ಸಂಗತಿಗಳನ್ನು ಅಲ್ಲಾಹನು ಬಲ್ಲನೆಂದು ನೀವು ಅರಿತಿಲ್ಲವೇ? ಖಂಡಿತವಾಗಿ ಇವೆಲ್ಲವೂ ಒಂದು ದಾಖಲಿಸಲ್ಪಟ್ಟ ಗ್ರಂಥದಲ್ಲಿದೆ. ನಿಶ್ಚಯವಾಗಿಯು ಈ ಕಾರ್ಯವು ಅಲ್ಲಾಹನ ಪಾಲಿಗೆ ಸುಲಭವಾಗಿದೆ.
(71) ಅವರು ಅಲ್ಲಾಹನನ್ನು ಬಿಟ್ಟು ಅವನು ಅದರ ಬಗ್ಗೆ ಯಾವುದೇ ಪುರಾವೆಯನ್ನು ಇಳಿಸದ ಹಾಗೂ ಅದರ ಕುರಿತು ಸ್ವತಃ ಅವರಿಗೂ ಯಾವ ಜ್ಞಾನವಿಲ್ಲದ ವಸ್ತುಗಳನ್ನು ಆರಾಧಿಸುತ್ತಾರೆ. ಮತ್ತು ಅಕ್ರಮಿಗಳಿಗೆ ಯಾವ ಸಹಾಯಕನೂ ಇರಲಾರನು.
(72) ಅವರ ಮುಂದೆ ನಮ್ಮ ಸುಸ್ಪಷ್ಟವಾದ ಸೂಕ್ತಿಗಳನ್ನು ಓದಿ ಹೇಳಲಾದಾಗ ನೀವು ಸತ್ಯನಿಷೇಧಿಗಳ ಮುಖಗಳು ವಿಕಾರಗೊಳ್ಳುತ್ತಿರುವುದನ್ನು ಕಾಣುವಿರಿ. ಅವರು ನಮ್ಮ ಸೂಕ್ತಿಗಳನ್ನು ಓದಿ ಹೇಳುವವರ ಮೇಲೆ ಮುಗಿಬೀಳಬಹುದು. ಹೇಳಿರಿ: ನಾನು ನಿಮಗೆ ಇದಕ್ಕಿಂತಲೂ ಅತ್ಯಂತ ಕೆಟ್ಟದ್ದಾಗಿರುವುದನ್ನು ತಿಳಿಸಿ ಕೊಡಲೇ? ಅದೇ ನರಕಾಗ್ನಿ! ಅಲ್ಲಾಹನು ಸತ್ಯನಿಷೇಧಿಸಿದವರಿಗೆ ಅದರ ವಾಗ್ದಾನವನ್ನು ಮಾಡಿದ್ದಾನೆ ಮತ್ತು ಅದು ಮರಳುವ ಕೆಟ್ಟ ತಾಣವಾಗಿದೆ.
(73) ಓ ಜನರೇ, ಒಂದು ಉಪಮೆಯನ್ನು ಕೊಡಲಾಗುತ್ತಿದೆ. ಗಮನವಿಟ್ಟು ಕೇಳಿರಿ. ನೀವು ಅಲ್ಲಾಹನನ್ನು ಬಿಟ್ಟು ಯಾರನ್ನು ಕರೆದು ಬೆಡುತ್ತಿರುವಿರೋ ನಿಜವಾಗಿಯೂ ಅವರು ಒಂದು ನೊಣವನ್ನೂ ಸಹ ಸೃಷ್ಟಿಸಲಾರರು. ಅವರೆಲ್ಲರೂ ಅದಕ್ಕೋಸ್ಕರ ಒಟ್ಟು ಸೇರಿದರೂ ಸರಿಯೇ. ಅಷ್ಟೇಕೆ! ನೊಣವು ಅವರಿಂದ ಏನನ್ನಾದರೂ ಕಸಿದು ಕೊಂಡು ಹೋದರೆ ಅವರು ಅದನ್ನು ಅದರಿಂದ ಹಿಂದಕ್ಕೆ ಪಡೆಯಲೂ ಅಶಕ್ತರು. ಬೇಡುವವನೂ ದುರ್ಬಲನು, ಯಾರಿಂದ ಬೇಡಲಾಗುತ್ತಿದೆಯೋ ಅವನೂ ದುರ್ಬಲನು!
(74) ಅವರು ಅಲ್ಲಾಹನ ಮಹತ್ವವನ್ನು ಅರಿತುಕೊಳ್ಳಬೇಕಾದ ರೀತಿಯಲ್ಲಿ ಅರಿತುಕೊಳ್ಳಲೇ ಇಲ್ಲ. ನಿಶ್ಚಯವಾಗಿಯೂ ಅಲ್ಲಾಹನು ಮಹಾ ಶಕ್ತಿವಂತನೂ, ಪ್ರಚಂಡನೂ ಆಗಿದ್ದಾನೆ.
(75) ಅಲ್ಲಾಹನು ಮಲಕ್ಗಳಿಂದಲೂ, ಮನುಷ್ಯರಿಂದಲೂ ಸಂದೇಶವಾಹಕರನ್ನು ಆಯ್ದುಕೊಳ್ಳುತ್ತಾನೆ. ನಿಸ್ಸಂದೇಹವಾಗಿಯು ಅಲ್ಲಾಹನು ಸರ್ವವನ್ನು ಆಲಿಸುವವನು, ಸರ್ವವನ್ನು ನೋಡುವವನು ಆಗಿದ್ದಾನೆ.
(76) ಜನರ ಮುಂದಿರುವುದನ್ನು ಹಿಂದಿರುವುದನ್ನು ಅವನು ಬಲ್ಲನು.ಮತ್ತು ಕಾರ್ಯಗಳೆಲ್ಲವೂ ಅಲ್ಲಾಹನೆಡೆಗೆ ಮರಳಿಸಲ್ಪಡುತ್ತವೆ.
(77) ಓ ಸತ್ಯವಿಶ್ಚಾಸಿಗಳೇ, ನೀವು ಬಾಗಿರಿ, ಸಾಷ್ಟಾಂಗವೆರಗಿರಿ ಮತ್ತು ನಿಮ್ಮ ಪ್ರಭುವನ್ನು ಆರಾಧಿಸಿರಿ ಹಾಗೂ ಒಳಿತನ್ನು ಮಾಡಿರಿ. ನೀವು ಯಶಸ್ಸು ಪಡೆಯಬಹುದು.
(78) ನೀವು ಅಲ್ಲಾಹನ ಮಾರ್ಗದಲ್ಲಿ ಹೋರಾಡಬೇಕಾದ ರೀತಿಯಲ್ಲಿ ಹೋರಾಡಿರಿ! ಅವನು ನಿಮ್ಮನ್ನು ಆಯ್ಕೆ ಮಾಡಿದ್ದಾನೆ ಮತ್ತು ಅವನು ನಿಮ್ಮ ಮೇಲೆ ಧರ್ಮವಿಷಯದಲ್ಲಿ ಯಾವುದೇ ಇಕ್ಕಟ್ಟನ್ನುಂಟು ಮಾಡಿಲ್ಲ. ನಿಮ್ಮ ತಂದೆ ಇಬ್ರಾಹೀಮ್ರ ಧರ್ಮವನ್ನು ಸಂಸ್ಥಾಪಿಸಿರಿ. ಈ ಕುರ್ಆನ್ಗಿಂತ ಮೊದಲು (ಬಂದ ಗ್ರಂಥಗಳಲ್ಲೂ), ಇದರಲ್ಲೂ ಅವನು ನಿಮ್ಮ ಹೆಸರನ್ನು ಮುಸ್ಲಿಮ್ ಎಂದಿಟ್ಟಿರುತ್ತಾನೆ. ಇದು ಸಂದೇಶವಾಹಕರು ನಿಮ್ಮ ಮೇಲೆ ಸಾಕ್ಷಿಯಾಗಲೆಂದು, ನೀವು ಸಕಲ ಜನರ ಮೇಲೆ ಸಾಕ್ಷಿಗಳಾಗಲೆಂದಾಗಿದೆ. ಹಾಗೆಯೇ ನೀವು ನಮಾಝ್ ಸಂಸ್ಥಾಪಿಸಿರಿ ಹಾಗೂ ಝಕಾತ್ ನೀಡಿರಿ ಮತ್ತು ಅಲ್ಲಾಹನ ಪಾಶವನ್ನು ಭದ್ರವಾಗಿ ಹಿಡಿದುಕೊಳ್ಳಿರಿ. ಅವನೇ ನಿಮ್ಮ ರಕ್ಷಕ ಮಿತ್ರನಾಗಿದ್ದಾನೆ. ಅವನು ಅದೆಷ್ಟು ಉತ್ತಮನು ಹಾಗೂ ಅದೆಷ್ಟು ಉತ್ತಮ ಸಹಾಯಕನು!.