24 - An-Noor ()

|

(1) ಇದು ನಾವು ಅವತೀರ್ಣಗೊಳಿಸಿರುವ ಮತ್ತು ಕಡ್ಡಾಯಗೊಳಿಸಿರುವ ಒಂದು ಅಧ್ಯಾಯವಾಗಿದೆ ಮತ್ತು ನೀವು ಸ್ಮರಿಸಿಕೊಳ್ಳಲೆಂದು ನಾವಿದರಲ್ಲಿ ಸುಸ್ಪಷ್ಟವಾದ (ನಿಯಮ)ಗಳನ್ನು ಇಳಿಸಿರುತ್ತೇವೆ.

(2) ವ್ಯಭಿಚಾರಣಿ ಹಾಗೂ ವ್ಯಭಿಚಾರಿಗಳಿಬ್ಬರಲ್ಲಿ (ಅವಿವಾಹಿತ) ಪ್ರತಿಯೊಬ್ಬರಿಗೂ ನೂರು ಚಾಟಿಯೇಟುಗಳನ್ನು ಕೊಡಿರಿ ಮತ್ತು ನೀವು ಅಲ್ಲಾಹನಲ್ಲೂ, ಅಂತ್ಯ ದಿನದಲ್ಲೂ ವಿಶ್ವಾಸಿವಿರಿಸುವವರಾಗಿದ್ದರೆ ಅಲ್ಲಾಹನ ನಿಯಮವನ್ನು ಜಾರಿಗೊಳಿಸುವಾಗ ಅವರ ಮೇಲೆ ನಿಮಗೆ ಎಂದಿಗೂ ಕನಿಕರವುಂಟಾಗ ಕೂಡದು. ಅವರ ಶಿಕ್ಷೆಯ ಸಂದರ್ಭದಲ್ಲಿ ಸತ್ಯವಿಶ್ವಾಸಿಗಳ ಒಂದು ಸಮೂಹವು ಉಪಸ್ಥಿತವಿರಿಲಿ.

(3) ವ್ಯಾಭಿಚಾರಿಯು ವ್ಯಭಿಚಾರಿಣಿ ಅಥವಾ ಬಹುದೇವಾರಾಧಕಿಯ ಹೊರತು ಇನ್ನಾರನ್ನೂ ವಿವಾಹವಾಗಲಾರನು. ಮತ್ತು ವ್ಯಭಿಚಾರಿಣಿಯು ವ್ಯಭಿಚಾರಿ ಅಥವಾ ಬಹುದೇವಾರಾಧಕನ ಹೊರತು ಇನ್ನಾರನ್ನೂ ವಿವಾಹವಾಗಲಾರಳು ಮತ್ತು ಇದು ಸತ್ಯ ವಿಶ್ವಾಸಿಗಳ ಮೇಲೆ ನಿಷಿದ್ಧಗೊಳಿಸಲಾಗಿದೆ.

(4) ಯಾರು ಸುಶೀಲೆ ಸ್ತಿçÃಯರ ಮೇಲೆ ವ್ಯಭಿಚಾರದ ಆರೋಪ ಹೊರಿಸುವರೋ ಆ ಬಳಿಕ ನಾಲ್ಕು ಸಾಕ್ಷಿಗಳನ್ನು ತರಲಾರರೋ ಅಂತವರಿಗೆ ನೀವು ಎಂಬತ್ತು ಚಾಟಿಯೇಟು ಕೊಡಿರಿ ಮತ್ತು ಎಂದಿಗೂ ಅವರ ಸಾಕ್ಷö್ಯವನ್ನು ಸ್ವೀಕರಿಸಬೇಡಿರಿ. ಅವರು ಆಜ್ಞೋಲ್ಲಂಘಕ ಜನರಾಗಿದ್ದಾರೆ.

(5) ಆದರೆ ಪಶ್ಚಾತ್ತಾಪ ಪಟ್ಟು ಸುಧಾರಣೆ ಮಾಡಿಕೊಂಡವರ ಹೊರತು ನಿಶ್ಚಯವಾಗಿಯೂ ಅಲ್ಲಾಹನು ಕ್ಷಮಾಶೀಲನು ಕರುಣಾನಿಧಿಯು ಆಗಿರುತ್ತಾನೆ.

(6) ಯಾರು ತಮ್ಮ ಪತ್ನಿಯರ ಮೇಲೆ ವ್ಯಭಿಚಾರದ ಆರೋಪ ಹೊರಿಸುತ್ತಾರೋ ಹಾಗೂ ಅವರಿಗೆ ಸ್ವತಃ ತಮ್ಮ ಹೊರತು ಇನ್ನಾರೂ ಸಾಕ್ಷಿಗಳಿರದಿದ್ದರೆ ಅಂತಹವರಲ್ಲಿ ಪ್ರತಿಯೊಬ್ಬನ ಪುರಾವೆಯೇನೆಂದರೆ ಅಲ್ಲಾಹನ ಮೇಲೆ ನಾಲ್ಕು ಬಾರಿ ಆಣೆ ಹಾಕಿ ನಾನು ಸತ್ಯವಂತನಾಗಿರುವೆನೆAದು ಹೇಳಬೇಕಾಗಿರುತ್ತದೆ.

(7) ಐದನೆಯ ಬಾರಿ ನಾನು ಸುಳ್ಳುನಾಗಿದ್ದರೆ ನನ್ನ ಮೇಲೆ ಅಲ್ಲಾಹನ ಶಾಪವಿರಲಿ ಎಂದು ಹೇಳಬೇಕು.

(8) ಆಕೆಯನ್ನು ಶಿಕ್ಷೆಯಿಂದ ತಪ್ಪಿಸುವ ಕ್ರಮವೇನೆಂದರೆ ಆಕೆಯು ನಾಲ್ಕು ಬಾರಿ ಅಲ್ಲಾಹನ ಮೇಲೆ ಆಣೆ ಹಾಕಿ ನಿಜವಾಗಿಯೂ ಅವನು (ಪತಿಯು) ಸುಳ್ಳಾರೋಪಿಯೆಂದು ಹೇಳಬೇಕು.

(9) ಐದನೆಯ ಬಾರಿ ಅವನು ಸತ್ಯವಂತರಲ್ಲಾಗಿದ್ದರೆ ತನ್ನ ಮೇಲೆ ಖಂಡಿತ ಅಲ್ಲಾಹನ ಶಾಪವಿರಲಿ ಎಂದು ಹೇಳಬೇಕು.

(10) ಅಲ್ಲಾಹನ ಅನುಗ್ರಹವೂ ಮತ್ತು ಅವನ ಕರುಣೆಯೂ ನಿಮ್ಮ ಮೇಲೆ ಇಲ್ಲದಿರುತ್ತಿದ್ದರೆ (ನಿಮ್ಮ ಮೇಲೆ ವಿಪತ್ತು ಎರಗಿಬಿಡುತ್ತಿತ್ತು.) ಮತ್ತು ಖಂಡಿತವಾಗಿಯೂ ಅಲ್ಲಾಹನು ಪಶ್ಚಾತ್ತಾಪ ಸ್ವೀಕರಿಸುವವನು, ಯುಕ್ತಿಪೂರ್ಣನು ಆಗಿದ್ದಾನೆ.

(11) ಈ ಮಹಾ ಸುಳ್ಳಾರೋಪವನ್ನು ಹೊರಿಸಿದವರು ನಿಮ್ಮ ಪೈಕಿಯ ಒಂದು ಕೂಟದವರಾಗಿದ್ದಾರೆ. ನೀವು ಅದನ್ನು ನಿಮ್ಮ ಪಾಲಿಗೆ ಕೆಟ್ಟದೆಂದು ಭಾವಿಸದಿರಿ. ಬದಲಾಗಿ!ಅದು ನಿಮ್ಮ ಪಾಲಿಗೆ ಹಿತಕರವಾಗಿರುತ್ತದೆ.ಅವರ ಪೈಕಿ ಪ್ರತಿಯೊಬ್ಬರಿಗೂ ತಾನು ಗಳಿಸಿದಷ್ಟು ಪಾಪವಿರುವುದು ಮತ್ತು ಅದರ ಮುಖ್ಯ ಪಾತ್ರ ವಹಿಸಿಕೊಂಡವನಿಗೆ ಅತ್ಯಂತ ದೊಡ್ಡ ಯಾತನೆಯಿರುವುದು.

(12) ನೀವಿದನ್ನು ಕೇಳಿದಾಗ ಸತ್ಯವಿಶ್ವಾಸಿ ಸ್ತಿçà ಪುರುಷರು ತಮ್ಮ ಕುರಿತು ಉತ್ತಮ ಭಾವನೆಯನ್ನು ಏಕೆ ಹೊಂದಲಿಲ್ಲ? ಮತ್ತು ಇದೊಂದು ಸುಸ್ಪಷ್ಟ ಸುಳ್ಳಾರೋಪವಾಗಿದೆಯೆಂದು ಯಾಕೆ ಹೇಳಲಿಲ್ಲ?

(13) ಅವರು ಈ ವಿಚಾರದಲ್ಲಿ ನಾಲ್ಕು ಸಾಕ್ಷಿಗಳನ್ನು ಏಕೆ ತರಲಿಲ್ಲ? ಮತ್ತು ಅವರು ಸಾಕ್ಷಿಗಳನ್ನು ತರದಿದ್ದ ಕಾರಣ ಅವರೇ ಅಲ್ಲಾಹನ ಬಳಿ ಸುಳ್ಳುಗಾರರಾಗಿದ್ದಾರೆ.

(14) ಅಲ್ಲಾಹನ ಅನುಗ್ರಹ ಮತ್ತು ಅವನ ಕೃಪೆಯು ನಿಮಗೆ ಇಹಲೋಕದಲ್ಲೂ, ಪರಲೋಕದಲ್ಲೂ ಇಲ್ಲದಿರುತ್ತಿದ್ದರೆ ನೀವು ಯಾವ ವಿಚಾರದ ಚರ್ಚೆಯಲ್ಲಿ ತೊಡಗಿದ್ದೀರೋ ಅದರ ನಿಮಿತ್ತ ಖಂಡಿತ ನಿಮಗೆ ಮಹಾಯಾತನೆಯೊಂದು ಬಾಧಿಸುತ್ತಿತ್ತು.

(15) ನೀವು ನಿಮ್ಮ ನಾಲಗೆಗಳ ಮೂಲಕ ಅದನ್ನು ಸಾಗಿಸುತ್ತಿದ್ದಾಗ ಹಾಗೂ ನಿಮಗೆ ಜ್ಞಾನವಿಲ್ಲದ ವಿಚಾರವನ್ನು ನಿಮ್ಮ ಬಾಯಿಯಿಂದ ಹೇಳಿಕೊಳ್ಳುತ್ತಿದ್ದಾಗ. ನೀವು ಅದನ್ನು ಕ್ಷÄಲ್ಲಕವೆಂದು ಭಾವಿಸಿಕೊಂಡಿದ್ದಿರಿ. ಆದರೆ ಅದು ಅಲ್ಲಾಹನ ಬಳಿ ಮಹಾ ಗಂಭೀರ ವಿಷಯವಾಗಿತ್ತು.

(16) ನೀವು ಇದನ್ನು ಕೇಳಿದಾಗ “ನಮಗೆ ಇಂತಹ ವಿಚಾರವನ್ನು ಹೇಳುವುದು ಭೂಷಣವಲ್ಲ”. ಅಲ್ಲಾಹನೇ, ನೀನು ಪಾವನನು. ಇದೊಂದು ಘೋರ ಅಪವಾದವಾಗಿದೆಯೆಂದು ಯಾಕೆ ಹೇಳಲಿಲ್ಲ?

(17) ಸತ್ಯವಿಶ್ವಾಸಿಗಳಾಗಿದ್ದರೆ ಪುನಃ ಎಂದೂ ನೀವು ಇಂತಹ ಕಾರ್ಯವೆಸಗಬಾರದೆಂದು ಅಲ್ಲಾಹನು ನಿಮಗೆ ಉಪದೇಶ ನೀಡುತ್ತಾನೆ.

(18) ಅಲ್ಲಾಹನು ತನ್ನ ಸೂಕ್ತಿಗಳನ್ನು ನಿಮಗೆ ಸ್ಪಷ್ಟವಾಗಿ ವಿವರಿಸಿಕೊಡುತ್ತಾನೆ ಮತ್ತು ಅಲ್ಲಾಹನು ಸರ್ವಜ್ಞನು, ಯುಕ್ತಿಪೂರ್ಣನು ಆಗಿದ್ದಾನೆ.

(19) ಸತ್ಯವಿಶ್ವಾಸಿಗಳ ನಡುವೆ ಅಶ್ಲೀಲತೆಯನ್ನು ಹರಡಲು ಬಯಸುವವರಿಗೆ ಇಹಲೋಕದಲ್ಲೂ, ಪರಲೋಕದಲ್ಲೂ ವೇದನಾಜನಕ ಯಾತನೆಯಿದೆ ಮತ್ತು ಅಲ್ಲಾಹನು ಅರಿಯುತ್ತಾನೆ. ನೀವು ಅರಿಯುವುದಿಲ್ಲ.

(20) ನಿಮ್ಮ ಮೇಲೆ ಅಲ್ಲಾಹನ ಅನುಗ್ರಹ ಮತ್ತು ಅವನ ಕರುಣೆಯು ಇಲ್ಲದಿರುತ್ತಿದ್ದರೆ ಹಾಗೂ ಅಲ್ಲಾಹನು ಕೃಪಾಳುವು ಕರುಣಾನಿಧಿಯು ಆಗಿಲ್ಲದಿರುತ್ತಿದ್ದರೆ (ನಿಮ್ಮ ಮೇಲೆ ಶಿಕ್ಷೆ ಎರಗಿಬಿಡುತ್ತಿತ್ತು).

(21) ಓ ಸತ್ಯವಿಶ್ವಾಸಿಗಳೇ, ನೀವು ಶೈತಾನನ ಹೆಜ್ಜೆಗಳನ್ನು ಅನುಸರಿಸಬೇಡಿರಿ ಮತ್ತು ಯಾರು ಶೈತಾನನ ಹೆಜ್ಜೆಗಳನ್ನು ಅನುಸರಿಸುತ್ತಾನೋ ಖಂಡಿತವಾಗಿಯೂ ಅವನು ನಿರ್ಲಜ್ಜೆ ಮತ್ತು ದುಷ್ಕೃತ್ಯಗಳ ಆದೇಶವನ್ನೀಡುತ್ತಾನೆ ಮತ್ತು ಅಲ್ಲಾಹನ ಅನುಗ್ರಹವು, ಅವನ ಕಾರುಣ್ಯವು ನಿಮ್ಮ ಮೇಲೆ ಇಲ್ಲದಿರುತ್ತಿದ್ದರೆ ನಿಮ್ಮ ಪೈಕಿ ಯಾವೊಬ್ಬನೂ ಪರಿಶುದ್ಧನಾಗುತ್ತಿರಲಿಲ್ಲ. ಆದರೆ ಅಲ್ಲಾಹನು ತಾನಿಚ್ಛಿಸಿದವರನ್ನು ಪರಿಶುದ್ಧಗೊಳಿಸುತ್ತಾನೆ ಮತ್ತು ಅಲ್ಲಾಹನು ಸರ್ವವನ್ನಾಲಿಸುವವನೂ, ಚನ್ನಾಗಿ ಅರಿಯುವವನೂ ಆಗಿದ್ದಾನೆ.

(22) ನಿಮ್ಮಲ್ಲಿ ಶ್ರೇಷ್ಠರು ಮತ್ತು ಐಶ್ವರ್ಯವಂತರು ತಮ್ಮ ಆಪ್ತಸಂಬAಧಿಕರಿಗೆ, ನಿರ್ಗತಿಕರಿಗೆ ಮತ್ತು ಅಲ್ಲಾಹನ ಮಾರ್ಗದಲ್ಲಿ ವಲಸೆ ಹೋದವರಿಗೆ ದಾನ ಧರ್ಮ ನೀಡುವುದಿಲ್ಲವೆಂದು ಶಪಥ ಹಾಕದಿರಲಿ. ಅವರು ಕ್ಷಮೆ ನೀಡಲಿ ಹಾಗೂ ಮನ್ನಿಸಲಿ. ನಿಮಗೆ ಅಲ್ಲಾಹನು ಕ್ಷಮೆ ನೀಡಬೇಕೆಂದು ನೀವು ಆಶಿಸುವುದಿಲ್ಲವೇ? ಅಲ್ಲಾಹನು ಕ್ಷಮಾಶೀಲನು, ಕರುಣಾನಿಧಿಯು ಆಗಿದ್ದಾನೆ.

(23) ಖಂಡಿತವಾಗಿಯು ಸುಶೀಲೆಯರೂ, ಮುಗ್ಧರೂ ಆದ ಸತ್ಯವಿಶ್ವಾಸಿನಿ ಸ್ತಿçÃಯರ ಮೇಲೆ ಅಪವಾದ ಹೊರಿಸುವವರು ಇಹಲೋಕದಲ್ಲೂ, ಪರಲೋಕದಲ್ಲೂ ಶಪಿಸಲ್ಪಟ್ಟಿದ್ದಾರೆ ಹಾಗೂ ಅವರಿಗೆ ಘೋರ ಯಾತನೆಯಿದೆ.

(24) ಅಂದು ಅವರ ಕರ್ಮಗಳ ಬಗ್ಗೆ ಅವರ ನಾಲಿಗೆಗಳು, ಅವರ ಕೈಗಳು, ಅವರ ಕಾಲುಗಳು ಅವರ ವಿರುದ್ಧ ಸಾಕ್ಷö್ಯ ನೀಡಲಿವೆ.

(25) ಅಂದು ಅಲ್ಲಾಹನು ಅವರಿಗೆ ನ್ಯಾಯಯುಕ್ತ ಪ್ರತಿಫಲವನ್ನು ಸಂಪೂರ್ಣವಾಗಿ ನೀಡುವನು ಮತ್ತು ಅಲ್ಲಾಹನೇ ಸತ್ಯವೆಂದು ಮತ್ತು ಸತ್ಯವನ್ನು ಬಹಿರಂಗಗೊಳಿಸುವವನೆAದೂ ಅವರು ಮನಗಾಣುವರು.

(26) ನಡತೆಗೆಟ್ಟ ಸ್ತಿçÃಯರು ನಡತೆಗೆಟ್ಟ ಪುರುಷರಿಗೆ. ನಡತೆಗೆಟ್ಟ ಪುರುಷರು ನಡತೆಗೆಟ್ಟ ಸ್ತಿçÃಯರಿಗೆ ಯೋಗ್ಯವಾಗಿರುವರು ಮತ್ತು ಸುಶೀಲೆ ಸ್ತಿçÃಯರು ಸುಶೀಲ ಪುರುಷರಿಗೆ. ಸುಶೀಲ ಪುರುಷರು ಸುಶೀಲೆ ಸ್ತಿçÃಯರಿಗೆ ಯೋಗ್ಯವಾಗಿರುವರು. ಜನರು ಅವರ ಬಗ್ಗೆ ಆಡುವ ಅಸಂಬದ್ಧ ಆರೋಪಗಳಿಂದ ಅವರು ದೋಷಮುಕ್ತರು. ಅವರಿಗೆ ಕ್ಷಮೆಯು ಹಾಗೂ ಗೌರವಪೂರ್ಣ ಜೀವನಾಧಾರವು ಇರುವುದು.

(27) ಓ ಸತ್ಯವಿಶ್ವಾಸಿಗಳೇ, ನೀವು ನಿಮ್ಮ ಮನೆಗಳ ಹೊರತು ಇತರರ ಮನೆಗಳಿಗೆ ಅವರ ಅನುಮತಿ ಪಡೆಯುವ ಹಾಗೂ ಮನೆಯವರಿಗೆ ಸಲಾಮ್ ಹೇಳುವ ತನಕ ಪ್ರವೇಶಿಸಬೇಡಿರಿ. ಇದು ನಿಮ್ಮ ಪಾಲಿಗೆ ಉತ್ತಮವಾಗಿದೆ.ಇದು ನೀವು ಉಪದೇಶ ಪಡೆಯಬಹುದೆಂದಾಗಿದೆ.

(28) ನಿಮಗೆ ಅಲ್ಲಿ ಯಾರೂ ಕಾಣದಿದ್ದರೆ ಅನುಮತಿ ಸಿಗುವ ತನಕ ನೀವು ಅದರೊಳಗೆ ಪ್ರವೇಶಿಸಬೇಡಿರಿ ಇನ್ನೂ ಮರಳಿ ಹೋಗಿರಿ ಎಂದು ನಿಮ್ಮೊಂದಿಗೆ ಹೇಳಲಾದರೆ, ನೀವು ಮರಳಿ ಬಿಡಿರಿ. ಇದು ನಿಮ್ಮ ಪಾಲಿಗೆ ಅತ್ಯಂತ ಶುದ್ಧವಾದುದು ಮತ್ತು ಅಲ್ಲಾಹನು ನೀವು ಮಾಡುತ್ತಿರುವುದನ್ನು ಚೆನ್ನಾಗಿ ಬಲ್ಲನು.

(29) ಇನ್ನು ಜನ ವಾಸವಿಲ್ಲದ ಮನೆಗಳಲ್ಲಿ ನಿಮಗೆ ಉಪಯೋಗವಾಗುವಂತಹ ವಸ್ತುಗಳಿದ್ದರೆ ನೀವು ಪ್ರವೇಶಿಸುವುದರಿಂದ ನಿಮ್ಮ ಮೇಲೆ ಯಾವುದೇ ದೋಷವಿರುವುದಿಲ್ಲ ಮತ್ತು ಅಲ್ಲಾಹನು ನೀವು ಬಹಿರಂಗಗೊಳಿಸುವುದನ್ನು, ಬಚ್ಚಿಡುವುದನ್ನು ಚೆನ್ನಾಗಿ ಬಲ್ಲನು.

(30) ಓ ಸಂದೇಶವಾಹಕರೇ! ಸತ್ಯವಿಶ್ವಾಸಿ ಪುರುಷರಿಗೆ ಹೇಳಿರಿ: ಅವರು ತಮ್ಮ ದೃಷ್ಟಿಗಳನ್ನು ತಗ್ಗಿಸಿಕೊಳ್ಳಲಿ ಮತ್ತು ತಮ್ಮ ಗುಪ್ತಾಂಗಗಳನ್ನು ಸುರಕ್ಷಿತವಾಗಿರಿಸಲಿ. ಇದು ಅವರ ಪಾಲಿಗೆ ಶುದ್ಧವಾದುದು.ಅಲ್ಲಾಹನು ಅವರು ಮಾಡುತ್ತಿರುವುದರ ಕುರಿತು ಚೆನ್ನಾಗಿ ಬಲ್ಲನು.

(31) ಸತ್ಯವಿಶ್ವಾಸಿ ಸ್ತಿçÃಯರಿಗೆ ಹೇಳಿರಿ: ಅವರು ತಮ್ಮ ದೃಷ್ಟಿಗಳನ್ನು ತಗ್ಗಿಸಿಕೊಳ್ಳಲಿ ಮತ್ತು ತಮ್ಮ ಗುಪ್ತಾಂಗಗಳನ್ನು ಸುರಕ್ಷಿತವಾಗಿರಿಸಲಿ. ಮತ್ತು ತಮ್ಮ ಶಿರೋವಸ್ತçಗಳನ್ನು ತಮ್ಮ ಎದೆಗಳ ಮೇಲೆ ಎಳೆದುಕೊಂಡಿರಲಿ ಮತ್ತು ತಮ್ಮ ಅಲಂಕಾರವನ್ನು ಯಾರ ಮುಂದೆಯೂ ಪ್ರಕಟಗೊಳಿಸದಿರಲಿ. ಆದರೆ ಸ್ವಯಂ ಪ್ರಕಟವಾಗುವಂತಹವುಗಳ ಹೊರತು ತಮ್ಮ ಪತಿಯರ, ಅಥವಾ ತಮ್ಮ ಪಿತರ ಅಥವಾ ಪತಿಯರ ಪಿತರ ಅಥವಾ ತಮ್ಮ ಪುತ್ರರ ಅಥವಾ ತಮ್ಮ ಪತಿಯರ ಪುತ್ರರ ಅಥವಾ ತಮ್ಮ ಸಹೋದರರ ಅಥವಾ ತಮ್ಮ ಸಹೋದರ ಪುತ್ರರ ಅಥವಾ ತಮ್ಮ ಸಹೋದರಿ ಪುತ್ರರ ಅಥವಾ ತಮ್ಮ ಸಹವಾಸದ ಸ್ತಿçÃಯರ ಅಥವಾ ಗುಲಾಮರ ಅಥವಾ ಕಾಮಾಪೇಕ್ಷೇಯಿಲ್ಲ ದಂತಹ ಪುರುಷ ಸೇವಕರ ಅಥವಾ ಸ್ತಿçÃಯರ ರಹಸ್ಯ ಸಂಗತಿಗಳ ಕುರಿತು ಆಸಕ್ತಿ ಹುಟ್ಟದ ಬಾಲಕರ ಹೊರತು, ತಮ್ಮ ಗುಪ್ತ ಅಲಂಕಾರವು ಗಮನಕ್ಕೆ ಬರುವಂತೆ ಅವರು ತಮ್ಮ ಪಾದಗಳನ್ನು ನೆಲಕ್ಕೆ ಬಡಿಯದಿರಲಿ. ಓ ಸತ್ಯವಿಶ್ವಾಸಿಗಳೇ, ನೀವೆಲ್ಲರೂ ಅಲ್ಲಾಹನೆಡೆಗೆ ಪಶ್ಚಾತ್ತಾಪದೊಂದಿಗೆ ಮರಳಿರಿ. ಇದು ನೀವು ಯಶಸ್ಸು ಪಡೆಯಲೆಂದಾಗಿದೆ.

(32) ನಿಮ್ಮಲ್ಲಿ ಅವಿವಾಹಿತರಾಗಿರುವ ಸ್ತಿçÃ-ಪುರುಷರಿಗೂ ಮತ್ತು ನಿಮ್ಮ ಪೈಕಿ ಸಜ್ಜನರಾಗಿರುವ ದಾಸ ದಾಸಿಯರಿಗೂ ವಿವಾಹ ಮಾಡಿಕೊಡಿರಿ. ಇನ್ನು ಅವರು ನಿರ್ಗತಿಕರಾಗಿದ್ದರೆ ಅಲ್ಲಾಹನು ಅವರನ್ನು ತನ್ನ ಅನುಗ್ರಹದಿಂದ ಸಂಪನ್ನಗೊಳಿಸುವನು ಮತ್ತು ಅಲ್ಲಾಹನು ಅತಿ ವಿಶಾಲನು, ಸರ್ವಜ್ಞಾನಿಯು ಆಗಿರುವನು.

(33) ಮತ್ತು ವಿವಾಹ ಅನುಕೂಲತೆ ಪಡೆಯದವರು ಅಲ್ಲಾಹನು ತನ್ನ ಅನುಗ್ರಹದಿಂದ ಅವರನ್ನು ಸಂಪನ್ನಗೊಳಿಸುವ ತನಕ ತಮ್ಮ ಚಾರಿತ್ರö್ಯವನ್ನು ಕಾಪಾಡಿಕೊಳ್ಳಲಿ ಮತ್ತು ನಿಮ್ಮ ಗುಲಾಮರ ಪೈಕಿ ಯಾರಾದರೂ ವಿಮೋಚನೆಯ ಬರವಣಿಗೆಯನ್ನು ಬಯಸಿದರೆ ಅವರಲ್ಲಿ ನೀವು ಒಳಿತೇನಾದರೂ ಕಂಡಲ್ಲಿ ಅವರಿಗಾಗಿ ಬರವಣಿಗೆಯನ್ನು ನಿಶ್ಚಯಿಸಿ ಕೊಡಿರಿ. ಮತ್ತು ಅಲ್ಲಾಹನು ನಿಮಗೆ ದಯಪಾಲಿಸಿದಂತಹ ಸಂಪತ್ತಿನಿAದ ನೀವು ಅವರಿಗೂ ಕೊಡಿರಿ ಮತ್ತು ನಿಮ್ಮ ಗುಲಾಮ ಸ್ತಿçÃಯರು ಸುಶೀಲತೆಯನ್ನು ಬಯಸಿದರೆ ನೀವು ಐಹಿಕ ಜೀವನದ ಲಾಭಕ್ಕಾಗಿ ನೀಚ ಕೃತ್ಯವೆಸಗಲು ಅವರನ್ನು ಬಲವಂತ ಮಾಡದಿರಿ ಮತ್ತು ಯಾರಾದರೂ ಅವರನ್ನು ಬಲವಂತ ಮಾಡಿದರೆ, ಬಲವಂತದ ಬಳಿಕ ಅವರ ಪಾಲಿಗೆ ನಿಶ್ಚಯವಾಗಿಯೂ ಅಲ್ಲಾಹನು ಕ್ಷಮಾಶೀಲನು, ಕರುಣಾನಿಧಿಯು ಆಗಿರುವನು.

(34) ನಿಶ್ಚಯವಾಗಿಯೂ ನಾವು ನಿಮ್ಮೆಡೆಗೆ ಸುಸ್ಪಷ್ಟ ಸೂಕ್ತಿಗಳನ್ನು, ನಿಮಗಿಂತ ಮೊದಲು ಗತಿಸಿದವರ ವೃತ್ತಾಂತಗಳನ್ನು, ಭಯಭಕ್ತಿವುಳ್ಳವರಿಗೆ ಉಪದೇಶವನ್ನು ಅವತೀರ್ಣಗೊಳಿಸಿರುತ್ತೇವೆ.

(35) ಅಲ್ಲಾಹನು ಭೂಮಿ ಆಕಾಶಗಳ ಪ್ರಕಾಶವಾಗಿರುವನು. ಅವನ ಪ್ರಕಾಶದ ಉಪಮೆಯು ಒಂದು ಗೋಡೆಗೂಡಿನಂತೆ: ಅದರಲ್ಲಿ ದೀಪವಿದೆ ಮತ್ತು ದೀಪವು ಗಾಜಿನ ಬುರುಡೆಯೊಳಗಿದ್ದು ಮತ್ತು ಗಾಜು ಒಂದು ಮಿನುಗುತ್ತಿರುವ ಪ್ರಕಾಶಮಯ ನಕ್ಷತ್ರದಂತಿದೆ. ಆ ದೀಪವು ಪೂರ್ವಾತ್ಯವೂ, ಪಶ್ಚಿಮಾತ್ಯವೂ ಅಲ್ಲದ ಒಂದು ಅನುಗ್ರಹಪೂರ್ಣ ಝೈತೂನ್ ಮರದ ಎಣ್ಣೆಯಿಂದ ಉರಿಸಲಾಗುವಂತಹದು. ಅದರ ಎಣ್ಣೆಯು ಬೆಂಕಿ ಸ್ಪರ್ಶಿಸದಿದ್ದರೂ ತಾನೇ ಪ್ರಜ್ವಲಿಸುತ್ತದೆ. ಪ್ರಕಾಶದ ಮೇಲೆ ಪ್ರಕಾಶವಿದೆ. ಅಲ್ಲಾಹನು ತಾನಿಚ್ಛಿಸಿದವರನ್ನು ತನ್ನ ಪ್ರಕಾಶದೆಡೆಗೆ ಮುನ್ನಡೆಸುತ್ತಾನೆ ಮತ್ತು ಅವನು ಜನರಿಗೆ ಉಪಮೆಗಳನ್ನು ವಿವರಿಸುತ್ತಾನೆ ಹಾಗೂ ಅಲ್ಲಾಹನು ಸಕಲ ವಸ್ತುಗಳನ್ನು ಚೆನ್ನಾಗಿ ಬಲ್ಲನು.

(36) ಆ ಭವನಗಳಲ್ಲಿ (ಮಸೀದಿಗಳಲ್ಲಿ) ಅವುಗಳನ್ನು ಉನ್ನತ ಗೊಳಿಸಲು, ಅವುಗಲ್ಲಿ ತನ್ನ ನಾಮಸ್ಮರಣೆ ಮಾಡಲು ಅಲ್ಲಾಹನು ಆದೇಶಿಸಿರುವನು. ಅವುಗಳಲ್ಲಿ ಇಂತಹ ಜನರು ಅಲ್ಲಾಹನ ಪಾವಿತ್ರö್ಯವನ್ನು ಸಂಜೆ ಮುಂಜಾನೆಯಲ್ಲೂ, ಸ್ತುತಿಸುತ್ತಾರೆ.

(37) (ಹೀಗೆ ಸ್ತುತಿಸುವ) ಜನರಿಗೆ ಯಾವ ವ್ಯಾಪಾರವಾಗಲೀ, ಕ್ರಯವಿಕ್ರಯವಾಗಲೀ, ಅಲ್ಲಾಹನ ಸ್ಮರಣೆಯಿಂದಲೂ ನಮಾಝ್ ಸಂಸ್ಥಾಪಿಸುವುದರಿAದಲೂ, ಝಕಾತ್ ನೀಡುವುದರಿಂದಲೂ ಅಲಕ್ಷö್ಯಗೊಳಿಸು ವುದಿಲ್ಲ. ಹೃದಯಗಳು, ದೃಷ್ಟಿಗಳು ಪಲ್ಲಟಗೊಳ್ಳುವ (ಪ್ರಳಯ) ದಿನವನ್ನು ಅವರು ಭಯಪಡುತ್ತಾರೆ.

(38) ಇದು ಅಲ್ಲಾಹನು ಅವರ ಉತ್ತಮ ಕರ್ಮಗಳಿಗೆ ಅತ್ಯುತ್ತಮವಾದ ಪ್ರತಿಫಲ ನೀಡಲೆಂದು ಮತ್ತು ತನ್ನ ಅನುಗ್ರದಿಂದ ಇನ್ನಷ್ಟು ಹೆಚ್ಚು ನೀಡಲೆಂದಾಗಿದೆ. ಅಲ್ಲಾಹನು ತಾನಿಚ್ಛಿಸಿದವರಿಗೆ ಲೆಕ್ಕಾತೀತ ಜೀವನಾಧಾರವನ್ನು ನೀಡುತ್ತಾನೆ.

(39) ಸತ್ಯನಿಷೇಧಿಸಿದವರ ಕರ್ಮಗಳು ಮರುಭೂಮಿಯಲ್ಲಿರುವ ಮರಿಚಿಕೆಯಂತೆ, ಬಾಯಾರಿದ ವ್ಯಕ್ತಿಯು ಅದನ್ನು ನೀರೆಂದು ಭಾವಿಸುತ್ತಾನೆ. ಆದರೆ ಅವನು ಅದರೆಡೆಗೆ ತಲುಪಿದಾಗ ಅಲ್ಲಿ ಏನೇನೂ ಕಾಣುವುದಿಲ್ಲ. ಆಗ ಅವನು ಅಲ್ಲಾಹನನ್ನು ತನ್ನ ಬಳಿ ಕಾಣುವನು. ಅಲ್ಲಾಹನು ಅವನ ಲೆಕ್ಕವನ್ನು ಪರಿಪೂರ್ಣವಾಗಿ ನೀಡಿ ಬಿಡುವನು. ಅಲ್ಲಾಹನು ಅತೀ ಶೀಘ್ರವಾಗಿ ಲೆಕ್ಕವಿಚಾರಣೆ ನಡೆಸುವವನಾಗಿದ್ದಾನೆ.

(40) ಅಥವಾ (ಅವರ ಕರ್ಮಗಳು) ಆಳವಾದ ಸಾಗರದ ಅಂಧಕಾರಗಳAತಿದೆ. ಅದರ ಮೇಲೆ ಅಲೆಯು ಆವರಿಸಿದೆ. ಅದರ ಮೇಲೆ ಇನ್ನೊಂದು ಅಲೆಯಿದ್ದು ಅದರ ಮೇಲೆ ಮೋಡವು ಕವಿದಿದೆ. ಅಂಧಕಾರದ ಮೇಲೆ ಅಂಧಕಾರ ಕವಿದಿದೆ. ಅವನು ತನ್ನ ಕೈಯನ್ನು ಚಾಚಿದರೂ ಅದನ್ನವನು ಕಾಣಲಾರ ಯಾರಿಗೆ ಅಲ್ಲಾಹನು ಪ್ರಕಾಶವನ್ನು ನೀಡುವುದಿಲ್ಲವೋ ಅವನಿಗೆ ಯಾವ ಪ್ರಕಾಶವಿರುವುದಿಲ್ಲ.

(41) ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಸಕಲವೂ ಮತ್ತು ರೆಕ್ಕೆಗಳನ್ನು ಹರಡಿಸಿಕೊಂಡು ಹಾರುತ್ತಿರುವ ಹಕ್ಕಿಗಳೂ ಅಲ್ಲಾಹನ ಪಾವಿತ್ರö್ಯವನ್ನು ಕೊಂಡಾಡುತ್ತಿರುವುದನ್ನು ನೀವು ಕಾಣಲಿಲ್ಲವೇ?ಪ್ರತಿಯೊಂದೂ ತನ್ನ ಪ್ರಾರ್ಥನೆ ಹಾಗೂ ಕೀರ್ತನೆಯನ್ನು ಅರಿತಿದೆ. ಅಲ್ಲಾಹನು ಅವರು ಮಾಡುತ್ತಿರುವುದರ ಕುರಿತು ಚೆನ್ನಾಗಿ ಬಲ್ಲನು.

(42) ಆಕಾಶಗಳ ಮತ್ತು ಭೂಮಿಯ ಅಧಿಪತ್ಯವು ಅಲ್ಲಾಹನದ್ದಾಗಿದೆ. ಮತ್ತು ಅಲ್ಲಾಹನೆಡೆಗೇ ಮರಳುವಿಕೆಯಿದೆ.

(43) ಅಲ್ಲಾಹನು ಮೋಡಗಳನ್ನು ಮೆಲ್ಲಮೆಲ್ಲನೆ ಚಲಾಯಿಸುವುದನ್ನು ನೀವು ನೋಡಲಿಲ್ಲವೇ? ಆನಂತರ ಅವುಗಳನ್ನು ಒಟ್ಟುಗೂಡಿಸುತ್ತಾನೆ. ಆ ಬಳಿಕ ಅವುಗಳನ್ನು ಒಂದರ ಮೇಲೋಂದರAತೆ ಸೇರಿಸಿಡುತ್ತಾನೆ. ಅನಂತರ ನೀವು ಅದರೆಡೆಯಿಂದ ಮಳೆ ಸುರಿಯುವುದನ್ನು ಕಾಣುತ್ತೀರಿ. ಅವನೇ ಆಕಾಶದಿಂದ ಆಲಿಕಲ್ಲುಗಳ ಬೆಟ್ಟದಿಂದ ಆಲಿಕಲ್ಲುಗಳನ್ನು ಸುರಿಸಿ ಅದರ ಮೂಲಕ ತಾನಿಚ್ಛಿಸಿದವರಿಗೆ ಹಾನಿಯನ್ನುಂಟು ಮಾಡುತ್ತಾನೆ ಮತ್ತು ತಾನಿಚ್ಛಿಸಿದವರಿಂದ ಹಾನಿಯನ್ನು ದೂರ ಸರಿಸಿ ಬಿಡುತ್ತಾನೆ. ಮೋಡಗಳಿಂದ ಹೊರಬರುವ ಮಿಂಚಿನ ಹೊಳಪು ದೃಷ್ಟಿಗಳನ್ನು ಕೊರೈಸುವಂತಿದೆ.

(44) ಅಲ್ಲಾಹನೇ ರಾತ್ರಿ, ಹಗಲನ್ನು ಬದಲಾಯಿಸುತ್ತಿರುತ್ತಾನೆ. ನಿಶ್ಚಯವಾಗಿಯೂ ಇದರಲ್ಲಿ ದೃಷ್ಟಿಯುಳ್ಳವರಿಗೆ ಮಹಾ ಪಾಠವಿದೆ.

(45) ಅಲ್ಲಾಹನು ಪ್ರತಿಯೊಂದು ಜೀವಿಯನ್ನು ನೀರಿನಿಂದ ಸೃಷ್ಟಿಸಿರುತ್ತಾನೆ. ಹಾಗೆಯೇ ಅವುಗಳ ಪೈಕಿ ಕೆಲವು ತಮ್ಮ ಹೊಟ್ಟೆಯ ಆಧಾರದ ಮೇಲೆ ಚಲಿಸಿದರೆ ಇನ್ನೂ ಕೆಲವು ಎರಡು ಕಾಲುಗಳಲ್ಲಿ ನಡೆಯುತ್ತವೆ ಮತ್ತು ಕೆಲವು ನಾಲ್ಕು ಕಾಲುಗಳಲ್ಲಿ ನಡೆಯುತ್ತವೆ. ಅಲ್ಲಾಹನು ತಾನಿಚ್ಛಿಸುವುದನ್ನು ಸೃಷ್ಟಿಸುತ್ತಾನೆ. ನಿಸ್ಸಂಶಯವಾಗಿಯು ಅಲ್ಲಾಹನು ಎಲ್ಲಾ ವಸ್ತುಗಳ ಮೇಲೂ ಸಾಮರ್ಥ್ಯವುಳ್ಳವನಾಗಿದ್ದಾನೆ.

(46) ನಿಸ್ಸಂದೇಹವಾಗಿಯೂ ನಾವು ಸತ್ಯವನ್ನು ಸ್ಪಷ್ಟವಾಗಿ ತಿಳಿಸುವ ಸೂಕ್ತಿಗಳನ್ನು ಅವತೀರ್ಣಗೊಳಿಸಿದ್ದೇವೆ ಮತ್ತು ಅಲ್ಲಾಹನು ತಾನಿಚ್ಛಿಸಿದವರನ್ನು ಋಜುವಾದ ಮಾರ್ಗದೆಡೆಗೆ ಮುನ್ನಡೆಸುತ್ತಾನೆ.

(47) “ನಾವು ಅಲ್ಲಾಹನಲ್ಲೂ, ಸಂದೇಶವಾಹಕರಲ್ಲೂ ವಿಶ್ವಾಸಿವಿರಿಸಿದೆವು ಮತ್ತು ಅವರನ್ನು ಅನುಸರಿಸಿದೆವು ಎಂದು ಅವರು (ಕಪಟಿಗಳು) ಹೇಳುತ್ತಾರೆ”. “ಬಳಿಕ ಅವರ ಪೈಕಿ ಒಂದು ಗುಂಪು ತಿರುಗಿ ಬಿಡುತ್ತದೆ ಮತ್ತು ಇಂಥವರು ಖಂಡಿತ ಸತ್ಯವಿಶ್ವಾಸಿಗಳಲ್ಲ”.

(48) ಅವರ ನಡುವೆ ತೀರ್ಪು ನೀಡಲಿಕ್ಕಾಗಿ ಅವರನ್ನು ಅಲ್ಲಾಹನೆಡೆಗೂ, ಅವನ ಸಂದೇಶವಾಹಕರೆಡೆಗೂ ಕರೆಯಲಾದರೆ ಕೂಡಲೇ ಅವರ ಪೈಕಿ ಒಂದು ಗುಂಪು ವಿಮುಖವಾಗಿಬಿಡುತ್ತದೆ.

(49) ಅವರಿಗೇನಾದರೂ ಹಕ್ಕು ಲಭಿಸುವುದಿದ್ದರೆ ಅವರೆಡೆಗೆ ವಿಧೇಯರಾಗಿ ಬರುತ್ತಾರೆ.

(50) ಅವರ ಹೃದಯಗಳಲ್ಲಿ ಕಾಪಟ್ಯದ ರೋಗಿವಿದೆಯೇ? ಅಥವಾ ಅವರು ನಿಮ್ಮ ಪ್ರವಾದಿತ್ವದ ಕುರಿತು ಸಂದೇಹದಲ್ಲಿದ್ದಾರೆಯೇ?ಅಥವಾ ಅಲ್ಲಾಹನು ಹಾಗೂ ಅವನ ಸಂದೇಶವಾಹಕರು ಅವರ ಹಕ್ಕನ್ನು ಕಸಿದುಬಿಡಬಹುದೆಂಬ ಆಶಂಕೆಯಲ್ಲಿದ್ದಾರೆಯೇ?

(51) ಸತ್ಯವಿಶ್ವಾಸಿಗಳ ನಡುವೆ ತೀರ್ಮಾನವೇನಾದರೂ ಮಾಡಲೆಂದು ಅವರನ್ನು ಅಲ್ಲಾಹನ ಹಾಗೂ ಅವನ ಸಂದೇಶವಾಹಕರ ಕಡೆಗೆ ಕರೆಯಾದರೆ “ನಾವು ಆಲಿಸಿದೆವು ಹಾಗೂ ಆಜ್ಞಾನುಸರಣೆ ಮಾಡಿದೆವು” ಎಂಬುದೇ ಅವರ ಮಾತಾಗಿರುತ್ತದೆ. ಅಂತಹವರು ಯಶಸ್ಸು ಪಡೆಯುವವರಾಗಿದ್ದಾರೆ.

(52) ಯಾರು ಅಲ್ಲಾಹನನ್ನು, ಭಯಪಟ್ಟು ಅವನ ಆಜ್ಞೋಲ್ಲಂಘನೆಯಿAದ ರಕ್ಷಿಸಿಕೊಳ್ಳುತ್ತಾನೋ ಅಂತಹವರು ಯಶಸ್ಸು ಹೊಂದುವವರಾಗಿದ್ದಾರೆ.

(53) ನೀವು ಆದೇಶ ನೀಡಿದ ಕೂಡಲೇ ನಾವು ಹೊರಟು ಬಿಡುತ್ತೇವೆಂದು ಅವರು (ಕಪಟವಿಶ್ವಾಸಿಗಳು) ಅಲ್ಲಾಹನ ಮೇಲೆ ದೃಢ ಆಣೆ ಹಾಕಿ ಹೇಳುತ್ತಾರೆ. ಹೇಳಿರಿ: ನೀವು ಕೇವಲ ಆಣೆ ಹಾಕಬೇಡಿರಿ. (ನಿಮ್ಮ) ಆಜ್ಞಾನುಸರಣೆಯು ಗೊತ್ತಿದೆ. ನೀವು ಮಾಡುತ್ತಿರುವುದರ ಬಗ್ಗೆ ಅಲ್ಲಾಹನು ಚೆನ್ನಾಗಿ ಬಲ್ಲನು.

(54) ಹೇಳಿರಿ: ನೀವು ಅಲ್ಲಾಹನನ್ನು ಮತ್ತು ಸಂದೇಶವಾಹಕರನ್ನು ಅನುಸರಿಸಿರಿ. ಇನ್ನು ನೀವು ವಿಮುಖರಾದರೆ ಸಂದೇಶವನ್ನು ತಲುಪಿಸುವುದು ಸಂದೇಶವಾಹಕರ ಕರ್ತವ್ಯವಾಗಿದೆ ಮತ್ತು ಅದನ್ನು ಸ್ವೀಕರಿಸುವುದು ನಿಮ್ಮ ಮೇಲಿರುವ ಹೊಣೆಯಾಗಿದೆ. ಸಂದೇಶವಾಹಕರ ಅನುಸರಣೆಯಲ್ಲೇ ನಿಮಗೆ ಸನ್ಮಾರ್ಗ ಲಭಿಸುತ್ತದೆ. ಮತ್ತು ಸಂದೇಶವಾಹಕರ ಮೇಲೆ ಸ್ಪಷ್ಟವಾಗಿ ಆದೇಶಗಳನ್ನು ತಲುಪಿಸುವುದರ ಹೊರತು ಬೇರೆ ಜವಾಬ್ದಾರಿಯಿಲ್ಲ.

(55) ನಿಮ್ಮ ಪೈಕಿ ಸತ್ಯವಿಶ್ವಾಸವಿರಿಸಿ, ಸತ್ಕರ್ಮ ಕೈಗೊಂಡವರಿಗೆ ಅವರ ಮುಂಚಿನವರನ್ನು ಭೂಮಿಯಲ್ಲಿ ಪ್ರತಿನಿಧಿಗಳನ್ನಾಗಿ ಮಾಡಿದಂತೆಯೇ ಖಂಡಿತ ಅವರನ್ನೂ ಭೂಮಿಯಲ್ಲಿ ಪ್ರತಿನಿಧಿಗಳನ್ನಾಗಿ ಮಾಡುವನೆಂದು ಮತ್ತು ನಿಶ್ಚಯವಾಗಿಯೂ ಅವರಿಗೆ ಸಂತೃಪ್ತಿ ಹೊಂದಿರುವAತಹ ಧರ್ಮವನ್ನು ಸಧೃಢವಾಗಿ ಸ್ಥಾಪಿಸಿಕೊಡುವನೆಂದು ಮತ್ತು ಅವರ ಭಯಭೀತಿಯನ್ನು ಶಾಂತಿಯನ್ನಾಗಿ ಮಾರ್ಪಡಿಸುವನು ಎಂದು ಅಲ್ಲಾಹನು ವಾಗ್ದಾನ ಮಾಡಿರುವನು. ಅವರು ನನ್ನನ್ನೇ ಆರಾಧಿಸಲಿ ಮತ್ತು ನನ್ನೊಂದಿಗೆ ಯಾರನ್ನೂ ಸಹಭಾಗಿಯನ್ನಾಗಿ ನಿಶ್ಚಯಿಸದಿರಲಿ ಇದರ ನಂತರವೂ ಯಾರಾದರೂ ಕೃತಘ್ನತೆ ಹಾಗೂ ಸತ್ಯನಿಷೇಧ ತೋರಿದರೆ ನಿಶ್ಚಯವಾಗಿಯೂ ಅವರು ಕರ್ಮ ಭ್ರಷ್ಟರಾಗಿದ್ದಾರೆ.

(56) (ಓ ಸತ್ಯವಿಶ್ವಾಸಿಗಳೇ) ನೀವು ನಮಾಝ್ ಸಂಸ್ಥಾಪಿಸಿರಿ. ಝಕಾತ್ ನೀಡಿರಿ ಮತ್ತು ಸಂದೇಶವಾಹಕರ ಆಜ್ಞಾನುಸರಣೆ ಮಾಡಿರಿ. ನಿಮ್ಮ ಮೇಲೆ ಕರುಣೆ ತೋರಬಹುದು.

(57) (ಓ ಪೈಗಂಬರರೇ) ಸತ್ಯನಿಷೇಧಿಸಿದವರು ಭೂಮಿಯಲ್ಲಿ ನಮ್ಮನ್ನು ಸೋಲಿಸುವವರೆಂದು ನೀವು ಎಂದೂ ಭಾವಿಸಬೇಡಿರಿ ಮತ್ತು ಅವರ ನೈಜತಾಣವಂತು ನರಕಾಗ್ನಿಯಾಗಿದೆ. ಮತ್ತು ಅದು ಅದೆಷ್ಟೋ ನಿಕೃಷ್ಟ ತಾಣವಾಗಿದೆ.

(58) ಓ ಸತ್ಯವಿಶ್ವಾಸಿಗಳೇ, ನಿಮ್ಮ ಅಧೀನದಲ್ಲಿರುವ ಗುಲಾಮರು ಮತ್ತು ಯೌವ್ವನಕ್ಕೆ ತಲುಪದ ನಿಮ್ಮ ಮಕ್ಕಳು ಮೂರು ಸಮಯಗಳಲ್ಲಿ (ನಿಮ್ಮ ಬಳಿ ಬರಲು) ನಿಮ್ಮೊಂದಿಗೆ ಅನುಮತಿಯನ್ನು ಪಡೆಯುವುದು ಅನಿವಾರ್ಯವಾಗಿದೆ. ಫಜ್ರ್ ನಮಾಝಿನ ಮೊದಲು ಮತ್ತು ಝೊಹರ್ ಸಮಯದಲ್ಲಿ ನೀವು ನಿಮ್ಮ ಉಡುಪನ್ನು ಕಳಚಿಡುವ ಸಂದರ್ಭದಲ್ಲಿ ಹಾಗೂ ಇಶಾ ನಮಾಝ್‌ನ ಬಳಿಕ. ಈ ಮೂರೂ ನಿಮ್ಮ ಖಾಸಗಿ ವೇಳೆಗಳಾಗಿವೆ. ಇವುಗಳ ನಂತರದ ವೇಳೆಗಳಲ್ಲಿ ನಿಮ್ಮ ಮೇಲಾಗಲೀ, ಅವರ ಮೇಲಾಗಲೀ ಯಾವ ದೋಷವು ಇರುವುದಿಲ್ಲ. ನೀವೆಲ್ಲರೂ ಪರಸ್ಪರ ಒಬ್ಬರು ಇನ್ನೊಬ್ಬರ ಬಳಿ ಹೆಚ್ಚಾಗಿ ತಿರುಗಾಡುವವರಾಗಿರುತ್ತೀರಿ. ಇದೇ ಪ್ರಕಾರ ಅಲ್ಲಾಹನು ತನ್ನ ನಿಯಮಗಳನ್ನು ನಿಮಗೆ ಸ್ಪಷ್ಟವಾಗಿ ವಿವರಿಸಿಕೊಡುತ್ತಾನೆ ಮತ್ತು ಅಲ್ಲಾಹನು ಸರ್ವಜ್ಞಾನಿಯೂ, ಯುಕ್ತಿಪೂರ್ಣನೂ ಆಗಿರುತ್ತಾನೆ.

(59) ನಿಮ್ಮ ಮಕ್ಕಳು ಯೌವ್ವನಾವಸ್ಥೆಗೆ ತಲುಪಿದರೆ ಅವರ ಹಿರಿಯರು ಅನುಮತಿ ಪಡೆಯುವ ಹಾಗೆಯೇ ಅವರು ಸಹ ಅನುಮತಿ ಪಡೆದುಕೊಂಡು ಬರಲಿ. ಇದೇ ಪ್ರಕಾರ ಅಲ್ಲಾಹನು ನಿಮಗೆ ತನ್ನ ನಿಯಮಗಳನ್ನು ವಿವರಿಸಿ ಕೊಡುತ್ತಾನೆ ಮತ್ತು ಅಲ್ಲಾಹನು ಸರ್ವಜ್ಞಾನಿಯೂ, ಯುಕ್ತಿಪೂರ್ಣನೂ ಆಗಿರುತ್ತಾನೆ.

(60) ವಿವಾಹದ ನಿರೀಕ್ಷೆಯನ್ನಿಟ್ಟುಕೊಳ್ಳದ ವೃದ್ಧ ಸ್ತಿçÃಯರು ತಮ್ಮ ಮುಸುಕುಗಳನ್ನು ಕಳಚಿಡುವುದರಿಂದ ದೋಷವೇನೂ ಇಲ್ಲ. ಆದರೆ ತಮ್ಮ ಕೃತಕ ಶೃಂಗಾರವನ್ನು ಪ್ರಕಟಿಸುವವರಾಗಿರಬಾರದು. ಆದರೆ ಅವರೂ ಸಹ ಸೂಕ್ಷö್ಮತೆಯನ್ನು ಪಾಲಿಸಿದರೆ ಅವರ ಪಾಲಿಗೆ ಅತ್ಯುತ್ತಮವಾಗಿರುತ್ತದೆ. ಅಲ್ಲಾಹನು ಸರ್ವವನ್ನಾಲಿಸುವವನು, ಸರ್ವಜ್ಞಾನಿಯು ಆಗಿರುವನು.

(61) ಅಂಧನ ಮೇಲೆ, ಕುಂಟನ ಮೇಲೆ, ರೋಗಿಯ ಮೇಲೆ, ಸ್ವತಃ ನಿಮ್ಮ ಮೇಲೆ (ಯಾವ) ದೋಷವಿರುವುದಿಲ್ಲ; ನೀವು ನಿಮ್ಮ ತಂದೆ ತಾತಂದಿರ ಮನೆಗಳಲ್ಲಿ ಅಥವಾ ನಿಮ್ಮ ತಾಯಂದಿರ ಮನೆಗಳಲ್ಲಿ ಅಥವಾ ನಿಮ್ಮ ಸಹೋದರರ ಮನೆಗಳಲ್ಲಿ ಅಥವಾ ನಿಮ್ಮ ಸಹೋದರಿಯರ ಮನೆಗಳಲ್ಲಿ ಅಥವಾ ನಿಮ್ಮ ಚಿಕ್ಕಪ್ಪಂದಿರ (ಪಿತೃ ಸಹೋದರ) ಮನೆಗಳಲ್ಲಿ ಅಥವಾ ನಿಮ್ಮ ಸೋದರತ್ತೆಯರ (ಪಿತೃ ಸಹೋದರಿಯರ) ಮನೆಗಳಲ್ಲಿ ಅಥವಾ ನಿಮ್ಮ ಮಾಮಂದಿರ (ಮಾತೃ ಸಹೋದರರ) ಮನೆಗಳಲ್ಲಿ ಅಥವಾ ನಿಮ್ಮ ಚಿಕ್ಕಮ್ಮರ (ಮಾತೃ ಸಹೋದರಿಯರ) ಮನೆಗಳಲ್ಲಿ ಅಥವಾ ಬೀಗದ ಕೈಗಳು ನಿಮ್ಮ ಸ್ವಾಧೀನದಲ್ಲಿರುವ ಮನೆಗಳಲ್ಲಿ ಅಥವಾ ನಿಮ್ಮ ಸ್ನೇಹಿತರ ಮನೆಗಳಲ್ಲಿ ತಿನ್ನುವುದರಿಂದ ದೋಷವಿಲ್ಲ. ನೀವು ಎಲ್ಲರೂ ಒಟ್ಟಿಗೆ ಕುಳಿತುಕೊಂಡು ಅಥವಾ ಪತ್ಯೇಕವಾಗಿ ತಿನ್ನುವುದರಿಂದಲೂ ನಿಮ್ಮ ಮೇಲೆ ತಪ್ಪೇನೂ ಇಲ್ಲ. ಹಾಗೆಯೇ ನೀವು ಮನೆಗಳನ್ನು ಪ್ರವೇಶಿಸುವಾಗ ಅಲ್ಲಾಹನ ಕಡೆಯಿಂದಿರುವ ಸಮೃದ್ಧಪೂರ್ಣವೂ ಪವಿತ್ರವೂ ಆದ ಶುಭ ಕೋರಿಕೆ ಎಂಬAತೆ ನಿಮ್ಮ ಮನೆಯವರ ಮೇಲೆ ಸಲಾಮ್ ಹೇಳರಿ. ಇದೇ ಪ್ರಕಾರ ಅಲ್ಲಾಹನು ನಿಮಗೆ ತನ್ನ ನಿಯಮಗಳನ್ನು ವಿವರಿಸಿ ಕೊಡುತ್ತಾನೆ. ಇದು ನೀವು ವಿವೇಚಿಸಿಕೊಳ್ಳಲೆಂದಾಗಿರುತ್ತದೆ.

(62) ಅಲ್ಲಾಹನಲ್ಲಿ ಮತ್ತು ಅವನ ಸಂದೇಶವಾಹಕರಲ್ಲಿ ವಿಶ್ವಾಸವಿರಿಸಿದವರೇ ಸತ್ಯವಿಶ್ವಾಸಿಗಳಾಗಿರುತ್ತಾರೆ. ಅವರು ಯಾವುದಾದರೂ ಸಾಮೂಹಿಕ ಕಾರ್ಯದಲ್ಲಿ ಪೈಗಂಬರರ ಜೊತೆಯಲ್ಲಿದ್ದರೆ ತಮ್ಮಿಂದ ಅನುಮತಿ ಪಡೆಯದೆ ಅವರು ಹೊರ ಹೋಗುವುದಿಲ್ಲ. ಇಂತಹ ಸಂದರ್ಭಗಳಲ್ಲಿ ನಿಮ್ಮಿಂದ ಅನುಮತಿ ಪಡೆಯುವವರೇ ಅಲ್ಲಾಹನಲ್ಲೂ, ಅವರ ಸಂದೇಶವಾಹಕರಲ್ಲೂ ವಿಶ್ವಾಸವಿರಿಸಿದವರಾಗಿದ್ದಾರೆ. ಹಾಗೆಯೇ ಇವರು ತಮ್ಮ ಯಾವುದಾದರೂ ಕಾರ್ಯಕ್ಕೆ ನಿಮ್ಮಿಂದ ಅನುಮತಿಯನ್ನು ಕೇಳಿದರೆ ಅವರ ಪೈಕಿ ತಾನಿಚ್ಛಿಸಿದವರಿಗೆ ಅನುಮತಿ ನೀಡಿರಿ ಮತ್ತು ಅವರಿಗಾಗಿ ಅಲ್ಲಾಹನಲ್ಲಿ ಕ್ಷಮೆ ಯಾಚಿಸಿರಿ. ನಿಸ್ಸಂಶಯವಾಗಿಯೂ ಅಲ್ಲಾಹನು ಕ್ಷಮಾಶೀಲನು, ಕರುಣಾನಿಧಿಯು ಆಗಿದ್ದಾನೆ.

(63) (ಓ ಸತ್ಯವಿಶ್ವಾಸಿಗಳೇ) ನೀವು ಪರಸ್ಪರ ಒಬ್ಬರನ್ನೊಬ್ಬರು ಕರೆಯುವಂತೆ ಅಲ್ಲಾಹನ ಪೈಗಂಬರರನ್ನು ಕರೆಯಬೇಡಿರಿ. ಅಲ್ಲಾಹನು ನಿಮ್ಮ ಪೈಕಿ ಕಣ್ಣು ತಪ್ಪಿಸಿಕೊಂಡು ರಹಸ್ಯವಾಗಿ ಹೊರಗೋಗುವವರನ್ನು ಅರಿಯುತ್ತಾನೆ. ಯಾರು ಸಂದೇಶವಾಹಕರ ಆದೇಶವನ್ನು ಧಿಕ್ಕರಿಸುತ್ತಾರೋ ಅವರಿಗೆ ಯಾವುದಾದರೂ ಮಹಾ ವಿಪತ್ತು ಬಂದರೆಗಬಹುದು ಅಥವಾ ಅವರಿಗೆ ವೇದನಾಜನಕ ಯಾತನೆಯು ತಲುಪಬಹುದು ಎಂಬ ಎಚ್ಚರವಿರಿಲಿ.

(64) ತಿಳಿದುಕೊಳ್ಳಿರಿ! ಭೂಮಿ ಆಕಾಶಗಳಲ್ಲಿರುವುದೆಲ್ಲವೂ ಅಲ್ಲಾಹನದ್ದೇ ಆಗಿದೆ. ನೀವು ಯಾವ ಸ್ಥಿತಿಯಲ್ಲಿ ಇರುವಿರೆಂಬುದನ್ನು ಅಲ್ಲಾಹನು ಚೆನ್ನಾಗಿ ಅರಿತಿದ್ದಾನೆ ಮತ್ತು ಅವರೆಲ್ಲರನ್ನೂ ಅವನೆಡೆಗೆ ಮರಳಿಸಲಾಗುವ ದಿನದಂದು ಅವನು ಅವರು ಮಾಡುತ್ತಿದ್ದುದನ್ನು ಅವರಿಗೆ ತಿಳಿಸಿಕೊಡುವನು. ಮತ್ತು ಅಲ್ಲಾಹನು ಸಕಲ ಸಂಗತಿಗಳ ಜ್ಞಾನವುಳ್ಳವನಾಗಿದ್ದಾನೆ.