25 - Al-Furqaan ()

|

(1) ಸರ್ವಲೋಕಕ್ಕೂ ಮುನ್ನೆಚ್ಚರಿಕೆ ನೀಡಲಿಕ್ಕಾಗಿ ತನ್ನ ದಾಸನ ಮೇಲೆ ಫುರ್ಕಾನ್ (ಸತ್ಯಾಸತ್ಯಗಳ ಮಾನದಂಡ) ಅನ್ನು ಅವತೀರ್ಣಗೊಳಿಸಿದವನು ಮಹಾಮಂಗಳಮಯನು.

(2) ಅಲ್ಲಾಹನಿಗೇ ಭೂಮಿ ಆಕಾಶಗಳ ಆಧಿಪತ್ಯವಿದೆ. ಅವನು ಯಾರನ್ನೂ ಪುತ್ರನನ್ನಾಗಿ ಮಾಡಿಕೊಂಡಿಲ್ಲ. ಅಧಿಪತ್ಯದಲ್ಲಿ ಅವನಿಗೆ ಯಾವ ಸಹಭಾಗಿಯೂ ಇಲ್ಲ ಮತ್ತು ಅವನು ಸಕಲ ವಸ್ತಗಳನ್ನೂ ಸೃಷ್ಟಿಸಿ ಒಂದು ಸರಿಯಾದ ಕ್ರಮದಲ್ಲಿರಿಸಿದನು.

(3) ಅವರು ಅಲ್ಲಾಹನ ಹೊರತು ಇತರರನ್ನುಆರಾಧ್ಯರನ್ನಾಗಿ ಮಾಡಿಕೊಂಡಿದ್ದಾರೆ. ವಸ್ತುತಃ ಅವರು ಏನನ್ನೂ ಸೃಷ್ಟಿಸಿಲ್ಲ, ಸ್ವತಃ ಅವರೇ ಸೃಷ್ಟಿಗಳು. ಮತ್ತು ಅವರು ತಮಗೂ ಯಾವುದೇ ಲಾಭ ಅಥವಾ ಹಾನಿಯ ಅಧಿಕಾರ ಹೊಂದಿಲ್ಲ ಮತ್ತು ಅವರು ಮರಣವನ್ನಾಗಲೀ, ಜೀವನವನ್ನಾಗಲೀ, ಪುನರುತ್ಥಾನಗೊಳಿಸುವುದನ್ನಾಗಲೀ ತಮ್ಮ ಅಧಿನದಲ್ಲಿ ಹೊಂದಿಲ್ಲ.

(4) ಸತ್ಯ ನಿಷೇಧಿಗಳು ಹೇಳಿದರು: ಈ ಕುರ್‌ಆನಂತು ಅವನು ಸ್ವತಃ ರಚಿಸಿರುವಂತಹ ಒಂದು ಸುಳ್ಳಾಗಿದೆ ಮತ್ತು ಇದಕ್ಕೆ ಇತರ ಜನರು ಅವನ ಸಹಾಯ ಮಾಡಿರುತ್ತಾರೆ. ವಾಸ್ತವದಲ್ಲಿ ಸತ್ಯನಿಷೇಧಿಗಳು ಮಹಾ ಅನ್ಯಾಯ ಮತ್ತು ಅಪ್ಪಟ ಸುಳ್ಳಿಗೆ ಇಳಿದಿದ್ದಾರೆ.

(5) ಮತ್ತು ಅವರು ಹೇಳಿದರು: ಇವು ಪೂರ್ವಿಕರ ಕಟ್ಟು ಕಥೆಗಳಾಗಿವೆ. ಇವುಗಳನ್ನು ಅವನು ಬರೆಸಿರುತ್ತಾನೆ. ಸಂಜೆ ಮುಂಜಾನೆಯಲ್ಲಿ ಇದನ್ನು ಅವನ ಮುಂದೆ ಓದಿ ಹೇಳಲಾಗುತ್ತವೆ.

(6) ಹೇಳಿರಿ: ಇದನ್ನು ಆಕಾಶಗಳ ಮತ್ತು ಭೂಮಿಯ ರಹಸ್ಯವನ್ನು ಬಲ್ಲವನೇ ಅವತೀರ್ಣಗೊಳಿಸಿದ್ದಾನೆ. ನಿಸ್ಸಂಶಯವಾಗಿಯು ಅವನು ಮಹಾ ಕ್ಷಮಾಶೀಲನು, ಕರುಣಾನಿಧಿಯು ಆಗಿರುತ್ತಾನೆ.

(7) ಮತ್ತು ಅವರು (ಸತ್ಯನಿಷೇಧಿಗಳು) ಹೇಳಿದರು: “ಇವನು ಎಂತಹ ಸಂದೇಶವಾಹಕ? ಇವನು ಆಹಾರ ಸೇವಿಸುತ್ತಾನೆ. ಹಾಗೂ ಪೇಟೆಗಳಲ್ಲಿ ನಡೆದಾಡುತ್ತಾನೆ! ಮತ್ತು ಇವನ ಜೊತೆ ಮುನ್ನೆಚ್ಚರಿಕೆ ನೀಡುವ ದೇವದೂತನನ್ನು ಏಕೆ ಕಳುಹಿಸಲಾಗಿಲ್ಲ”.

(8) ಅಥವಾ ಇವನೆಡೆಗೆ ಒಂದು ನಿಧಿಯನ್ನು ಇಳಿಸಬಹುದಿತ್ತಲ್ಲ! ಅಥವಾ ಇವನಿಗೆ ಯಾವುದಾದರೂ ಒಂದು ತೋಟವಿದ್ದು ಅದರಿಂದ ಇವನು ತಿನ್ನಬಹುದಿತ್ತಲ್ಲ ಮತ್ತು ಅಕ್ರಮಿಗಳು ಹೀಗೂ ಹೇಳಿದರು: ನೀವು ಮಾಟ ಬಾಧೆಗೊಳಗಾದಂತಹ ವ್ಯಕ್ತಿಯನ್ನು ಅನುಸರಿಸುತ್ತಿರುವಿರಿ.

(9) (ಓ ಪೈಗಂಬರರೇ) ನೋಡಿರಿ: ಅವರು ನಿಮ್ಮ ಕುರಿತು ಎಂತೆAತಹ ಉಪಮೆಗಳನ್ನು ಕೊಡುತ್ತಾರೆ. ಸ್ವತಃ ಅವರೇ ದಾರಿತಪ್ಪಿದವರಾಗಿದ್ದಾರೆ ಮತ್ತು ಅವರು ಸನ್ಮಾರ್ಗಕ್ಕೆ ಬರಲು ಸಾಧ್ಯವಿಲ್ಲ.

(10) (ಓ ಪೈಗಂಬರರೇ) ನೋಡಿರಿ: ಅವರು ನಿಮ್ಮ ಕುರಿತು ಎಂತೆAತಹ ಉಪಮೆಗಳನ್ನು ಕೊಡುತ್ತಾರೆ. ಸ್ವತಃ ಅವರೇ ದಾರಿತಪ್ಪಿದವರಾಗಿದ್ದಾರೆ ಮತ್ತು ಅವರು ಸನ್ಮಾರ್ಗಕ್ಕೆ ಬರಲು ಸಾಧ್ಯವಿಲ್ಲ.

(11) ವಾಸ್ತವದಲ್ಲಿ ಅವರು ಅಂತ್ಯ ದಿನವನ್ನು ಸುಳ್ಳಾಗಿಸಿದ್ದಾರೆ ಮತ್ತು ನಾವು ಅಂತ್ಯ ದಿನವನ್ನು ಸುಳ್ಳಾಗಿಸಿದವರಿಗೆ ಧಗಧಗಿಸುವ ನರಕಾಗ್ನಿಯನ್ನು ಸಿದ್ಧಗೊಳಿಸಿದ್ದೇವೆ.

(12) ಅದು ಅವರನ್ನು ದೂರದಿಂದಲೇ ಕಾಣುವಾಗ ಅವರು ಅದರ ಉಗ್ರ ಕೋಪವನ್ನು, ಅರ್ಭಟವನ್ನು ಕೇಳುವರು.

(13) ಮತು ್ತಅವರು ಬಂಧಿಸಲ್ಪಟ್ಟು ನರಕದ ಇಕ್ಕಟ್ಟಿನ ಸ್ಥಳವೊಂದರಲ್ಲಿ ಎಸೆಯಲ್ಲಪಟ್ಟರೆ ಅಲ್ಲಿ ಅವರು ತಮಗೆ ವಿನಾಶವನ್ನು ಕೂಗಿ ಕರೆಯುವರು.

(14) (ಅವರೊಂದಿಗೆ ಹೇಳಲಾಗುವುದು:) ನೀವಿಂದು ಒಂದು ವಿನಾಶವನ್ನಲ್ಲ ಅನೇಕ ವಿನಾಶಗಳನ್ನು ಕೂಗಿ ಕರೆಯಿರಿ.

(15) ಹೇಳರಿ: ನಿಮಗೆ ಇದು ಉತ್ತಮವೋ ಅಥವಾ ಭಯಭಕ್ತಿವುಳ್ಳವರಿಗೆ ವಾಗ್ದಾನ ನೀಡಲಾಗುತ್ತಿರುವ ಆ ಶಾಶ್ವತ ಸ್ವರ್ಗೋದ್ಯಾನವೋ? ಅದು ಅವರ ಪಾಲಿಗೆ ಪ್ರತಿಫಲವೂ ಮತ್ತು ಅವರು ಮರಳುವ ನೈಜತಾಣವೂ ಆಗಿದೆ.

(16) ಅವರಿಗೆ ಅದರಲ್ಲಿ ಅವರಿಚ್ಛಿಸುವುದೆಲ್ಲವೂ ಇರುವುದು. ಅಲ್ಲಿ ಅವರು ಶಾಶ್ವತವಾಗಿರುವರು. ಇದು ನಿಮ್ಮ ಪ್ರಭುವಿನ ಮೇಲೆ ಹೊಣೆಯಾಗಿರುವ, ಒಂದು ವಾಗ್ದಾನವಾಗಿದೆ.

(17) ಅವನು ಅವರನ್ನು, ಮತ್ತು ಅಲ್ಲಾಹನ ಹೊರತು ಅವರು ಆರಾಧಿಸುತ್ತಿದ್ದ ವಸ್ತುಗಳನ್ನು ಒಟ್ಟು ಸೇರಿಸುವ ದಿನದಂದು ಕೇಳುವನು: ನನ್ನ ಈ ದಾಸರನ್ನು ದಾರಿ ತಪ್ಪಿಸಿದ್ದು ನೀವೋ?

(18) ಅವರು ಉತ್ತರಿಸುವರು: ನೀನು ಪರಮ ಪಾವನನಾಗಿರುವೆ. ನಾವು ನಿನ್ನ ಹೊರತು ಇತರರನ್ನು ರಕ್ಷಕ ಮಿತ್ರರನ್ನಾಗಿ ಮಾಡಿಕೊಳ್ಳುವುದು ನಮಗೆ ಭೂಷಣವಾಗಿರಲಿಲ್ಲ. ವಾಸ್ತವ ವಿಚಾವೇನೆಂದರೆ ನೀನು ಅವರಿಗೂ, ಅವರ ಪೂರ್ವಿಕರಿಗೂ ಸುಖಾನುಕೂಲತೆಯನ್ನು ನೀಡಿದ್ದೆ ಕೊನೆಗೆ ಅವರು ಉದ್ಬೋಧೆಯನ್ನೇ ಮರೆತು ಬಿಟ್ಟರು ಮತ್ತು ಅವರು ನಾಶ ಹೊಂದುವ ಜನರಾಗಿದ್ದರು.

(19) ನೀವು ಹೇಳುತ್ತಿರುವುದನ್ನು ಅವರು (ಮಿಥ್ಯಾರಾಧ್ಯರು) ಸುಳ್ಳಾಗಿಸಿ ಬಿಟ್ಟಿದ್ದಾರೆ. ಇನ್ನು ಯಾತನೆಯನ್ನು ಸವಿಸಲಿಕ್ಕಾಗಲೀ, ಮತ್ತು ಸಹಾಯ ಮಾಡಲಿಕ್ಕಾಗಲೀ, ನೀವು ಅಶಕ್ತರು ಮತ್ತು ನಿಮ್ಮ ಪೈಕಿ ಅಕ್ರಮವನ್ನು ಮಾಡಿದವನಿಗೆ ನಾವು ಮಹಾ ಯಾತನೆಯನ್ನು ಸವಿಯುವಂತೆ ಮಾಡುವೆವು.

(20) ನಾವು ನಿಮಗಿಂತ ಮೊದಲು ಕಳುಹಿಸಿರುವ ಸಂದೇಶವಾಹಕರೆಲ್ಲರೂ ಆಹಾರವನ್ನು ಸೇವಿಸುತ್ತಿದ್ದರು ಮತ್ತು ಪೇಟೆಗಳಲ್ಲೂ ನಡೆದಾಡುತ್ತಿದ್ದರು. ಮತ್ತು ನಾವು ನಿಮ್ಮಲ್ಲಿ ಕೆಲವರನ್ನು ಇನ್ನೂ ಕೆಲವರ ಪಾಲಿಗೆ ಪರೀಕ್ಷೆಯ ಸಾಧನವನ್ನಾಗಿ ಮಾಡಿರುತ್ತೇವೆ. ನೀವು ಸಹನೆ ವಹಿಸುವಿರಾ? ನಿಮ್ಮ ಪ್ರಭುವು ಸರ್ವರನ್ನೂ ವೀಕ್ಷಿಸುವವನಾಗಿದ್ದಾನೆ.

(21) ನಮ್ಮ ಭೇಟಿಯ ನಿರೀಕ್ಷೆಯಿಲ್ಲದವರು ಹೇಳುತ್ತಾರೆ: ನಮ್ಮ ಮೇಲೆ ಮಲಕ್‌ಗಳನ್ನು ಏಕೆ ಇಳಿಸಲಾಗಿಲ್ಲಾ? ಅಥವಾ ನಾವು ನಮ್ಮ ಪ್ರಭುವನ್ನು ನಮ್ಮ ಕಣ್ಣಾರೆ ನೋಡುವುದಿಲ್ಲವೇಕೆ? ನಿಜವಾಗಿಯೂ ಅವರು ಅಹಂಭಾವಿಗಳಾಗಿದ್ದಾರೆ ಮತ್ತು ಮಹಾ ಅತಿಕ್ರಮವನ್ನುತೋರಿದ್ದಾರೆ.

(22) ಅವರು ಮಲಕ್‌ಗಳÀನ್ನು ಕಾಣುವ ದಿನದಂದು ಅಪರಾಧಿಗಳಿಗೆ ಯಾವುದೇ ರೀತಿಯ ಸಂತೋಷದ ಸುದ್ಧಿ ಇರಲಾರದು. ಅವರು ಹೇಳುವರು: ನಿಮ್ಮ ಮೇಲೆ ಸ್ವರ್ಗವು ಖಡಾಖಂಡಿತವಾಗಿ ನಿಷಿದ್ಧಗೊಳಿಸಲಾಗಿದೆ.

(23) ಅವರು ಮಾಡಿರುವ ಎಲ್ಲಾ ಕರ್ಮಗಳೆಡೆಗೆ ನಾವು ಗಮನಹರಿಸುವೆವು. ಅನಂತರ ಅವುಗಳನ್ನು ಧೂಳಿನಂತೆ ಹರಡಿ ಬಿಡುವೆವು.

(24) ಅಂದು ಸ್ವರ್ಗವಾಗಸಿಗಳ ತಾಣವು ಉತ್ತಮವಾಗಿರುವುದು ಮತ್ತು ವಿಶ್ರಾಂತಿ ಗೃಹವೂ ಅತ್ಯುತ್ತಮ ವಾಗಿರುವುದು.

(25) ಅಂದು ಆಕಾಶವು ಮೋಡದೊಂದಿಗೆ ಸೀಳಿ ಹೋಗುವುದು ಮತ್ತು ಮಲಕ್‌ಗಳು ನಿರಂತರರಾಗಿ ಇಳಿಸಲಾಗುವರು.

(26) ನಿಜವಾಗಿಯೂ ಆ ದಿನ ಅಧಿಪತ್ಯವು ಪರಮದಯಾಮಯನದ್ದೇ ಆಗಿರುವುದು ಮತ್ತು ಅದು ಸತ್ಯನಿಷೇಧಿಗಳ ಪಾಲಿಗೆ ಮಹಾ ಸಂಕಷ್ಟಭರಿತ ದಿನವಾಗಿರುವುದು.

(27) ಅಂದು ಅಕ್ರಮಿಯು ತನ್ನ ಬೆರಳುಗಳನ್ನು ಕಚ್ಚುತ್ತಾ ಹೇಳುವನು: ಅಯ್ಯೋ! ನಾವು ಸಂದೇಶವಾಹಕ(ಸ)ರ ಮಾರ್ಗವನ್ನು ಸ್ವೀಕರಿಸಿರುತ್ತಿದ್ದರೆ!

(28) ಅಂದು ಅಕ್ರಮಿಯು ತನ್ನ ಬೆರಳುಗಳನ್ನು ಕಚ್ಚುತ್ತಾ ಹೇಳುವನು: ಅಯ್ಯೋ! ನಾವು ಸಂದೇಶವಾಹಕ(ಸ)ರ ಮಾರ್ಗವನ್ನು ಸ್ವೀಕರಿಸಿರುತ್ತಿದ್ದರೆ!

(29) ಉದ್ಭೋಧೆಯು ನನ್ನ ಬಳಿಗೆ ಬಂದ ನಂತರವೂ ಅವನು ಅದರಿಂದ ನನ್ನನ್ನು ದಾರಿ ತಪ್ಪಿಸಿದನು ಮತ್ತು ಶೈತಾನನು ಮನುಷ್ಯನ ಪಾಲಿಗೆ ದ್ರೋಹ ಮಾಡುವವನಾಗಿದ್ದಾನೆ.

(30) ಸಂದೇಶವಾಹಕರು ಹೇಳುವರು: ಓ ನನ್ನ ಪ್ರಭುವೇ, ನಿಸ್ಸಂಶಯವಾಗಿಯೂ ನನ್ನ ಸಮುದಾಯದವರು ಈ ಕುರ್‌ಆನನ್ನು ತೊರೆದು ಬಿಟ್ಟಿದ್ದರು.

(31) ಇದೇ ಪ್ರಕಾರ ನಾವು ಪ್ರತಿಯೊಬ್ಬ ಪೈಗಂಬರರಿಗೆ ಅಪರಾಧಿಗಳ ಪೈಕಿ ಶತ್ರುವನ್ನು ಮಾಡಿದ್ದೇವೆ. ಮತ್ತು ಮಾರ್ಗದರ್ಶಕನಾಗಿಯೂ, ಸಹಾಯಕನಾಗಿಯೂ ನಿಮ್ಮ ಪ್ರಭುವೇ ಸಾಕು.

(32) ಸತ್ಯನಿಷೇಧಿಸಿದವರು ಇವನ ಮೇಲೆ ಸಂಪೂರ್ಣ ಕುರ್‌ಆನ್ ಒಂದೇ ಸಲ ಏಕೆ ಅವತೀರ್ಣಗೊಳಿಸಲಾಗಿಲ್ಲ? ಎಂದು ಕೇಳುತ್ತಾರೆ. ಏಕೆಂದರೆ ಇದರ ಮೂಲಕ ನಾವು ನಿಮ್ಮ ಹೃದಯವನ್ನು ಸ್ಥಿರವಾಗಿಸಲೆಂದಾಗಿದೆ. ಆದುದರಿಂದ ನಾವು ಅದನ್ನು ಸಾವಕಾಶವಾಗಿ ಓದಿಕೊಡುತ್ತಿದ್ದೇವೆ.

(33) ಅವರು ಸತ್ಯವನ್ನು ವಿರೋಧಿಸಲು ಯಾವ ಉಪಮೆಯನ್ನು ತಂದರೂ ನಾವು ಅದರ ಸಮರ್ಪಕವಾದ ಉತ್ತರ ಹಾಗೂ ಉನ್ನತ ವಿವರಣೆ ನಿಮಗೆ ತಿಳಿಸಿಕೊಡದೆ ಇರಲಾರೆವು.

(34) ಅವರು ಅಧೋಮುಖರಾಗಿ ನರಕದೆಡೆಗೆ ಒಟ್ಟು ಸೇರಿಸಲಾಗುವರು. ಅವರೇ ಅತ್ಯಂತ ನಿಕೃಷ್ಟ ಮಟ್ಟದವರು ಮತ್ತು ಭ್ರಷ್ಟ ಮಾರ್ಗದವರಾಗಿದ್ದಾರೆ.

(35) ನಿಸ್ಸಂಶಯವಾಗಿಯೂ ನಾವು ಮೂಸಾರವರಿಗೆ ಗ್ರಂಥವನ್ನು ನೀಡಿದೆವು. ಮತ್ತು ನಾವು ಅವರ ಜೊತೆ ಅವರ ಸಹೋದರ ಹಾರೂನರನ್ನು ಅವರ ಸಹಾಯಕನಾಗಿ ನಿಶ್ಚಯಿಸಿದೆವು.

(36) ಮತ್ತು ಹೇಳಿದೆವು: ನೀವಿಬ್ಬರೂ ನಮ್ಮ ದೃಷ್ಟಾಂತಗಳನ್ನು ಸುಳ್ಳಾಗಿಸಿದ ಜನಾಂಗದೆಡೆಗೆ ಹೋಗಿರಿ. ಅನಂತರ ನಾವು ಅವರನ್ನು ಸಂಪೂರ್ಣವಾಗಿ ನಾಶಗೊಳಿಸಿದೆವು.

(37) ನೂಹರವರ ಜನಾಂಗವು ಸಂದೇಶವಾಹಕರನ್ನು ಸುಳ್ಳಾಗಿಸಿದಾಗ ನಾವು ಅವರನ್ನು ಮುಳುಗಿಸಿಬಿಟ್ಟೆವು ಮತ್ತು ಅವರನ್ನು ಜನರಿಗೆ ಒಂದು ನಿದರ್ಶನವನ್ನಾಗಿ ಮಾಡಿದೆವು ಮತ್ತು ನಾವು ಅಕ್ರಮಿಗಳಿಗೆ ವೇದನಾಜನಕ ಯಾತನೆಯನ್ನು ಸಿದ್ಧಗೊಳಿಸಿಟ್ಟಿರುತ್ತೇವೆ.

(38) ಇದೇ ರೀತಿ ಆದ್, ಸಮೂದ್ ಜನಾಂಗವನ್ನು, ರಸ್ ಜನಾಂಗವನ್ನು ಮತ್ತು ಅವುಗಳ ನಡುವಿನ ಅನೇಕ ಜನಾಂಗಗಳನ್ನೂ (ನಾಶಪಡಿಸಿರುವೆವು).

(39) ನಾವು ಪ್ರತಿಯೊಂದು (ಜನಾಂಗಕ್ಕೂ) ಉಪಮೆಗಳನ್ನು ವಿವರಿಸಿ ಕೊಟ್ಟಿದ್ದೆವು. ಅನಂತರ (ನಿರಾಕರಿಸಿದುದರ ನಿಮಿತ್ತ) ಪ್ರತಿಯೊಂದನ್ನೂ ಸಂಪೂರ್ಣವಾಗಿ ನಾಶಗೊಳಿಸಿದೆವು.

(40) ಇವರು (ಸತ್ಯ ನಿಷೇಧಿಗಳು) ವಿನಾಶಕಾರಿ ಮಳೆಯು ವರ್ಷಿಸಲಾದಂತಹ ನಾಡಿನಿಂದ ಹಾದು ಹೋಗಿದ್ದಾರೆ. ಹಾಗಿದ್ದೂ ಇವರು ಅದನ್ನು ನೋಡುವುದಿಲ್ಲವೇ? ವಾಸ್ತವದಲ್ಲಿ ಇವರಿಗೆ ಮರಣಾನಂತರ ಪುನರುತ್ಥಾನಗೊಳ್ಳು ವುದರ ನಿರೀಕ್ಷೆಯೇ ಇಲ್ಲ.

(41) ಅವರು ನಿಮ್ಮನ್ನು (ಪೈಗಂಬರರನ್ನು) ಕಂಡಾಗಲೆಲ್ಲಾ ನಿಮ್ಮನ್ನು ಪರಿಹಾಸ್ಯ ಮಾಡತೊಡಗುತ್ತಾರೆ. ಅಲ್ಲಾಹನು ಸಂದೇಶವಾಹಕನಾಗಿ ನಿಯೋಗಿಸಿರುವುದು ಇವನನ್ನೇ?

(42) ನಾವು ಇದರಲ್ಲೇ ಸ್ಥಿರಚಿತ್ತರಾಗಿರದಿರುತ್ತಿದ್ದರೆ ಈ ವ್ಯಕ್ತಿ ನಮ್ಮನ್ನು ನಮ್ಮ ಆರಾಧ್ಯ ದೇವರುಗಳಿಂದ ದಾರಿತಪ್ಪಿಸುತ್ತಿದ್ದನು. ಅವರು ಸಧ್ಯದಲ್ಲೆ ಯಾತನೆಗಳನ್ನು ಕಾಣುವಾಗ ಹೆಚ್ಚು ಮಾರ್ಗಭ್ರಷ್ಟನಾರೆಂದು ಸ್ಪಷ್ಟವಾಗಿ ಅರಿಯುವರು.

(43) ತನ್ನ ಸ್ವೇಚ್ಛೆಯನ್ನು ತನ್ನ ಆರಾಧ್ಯನನ್ನಾಗಿ ಮಾಡಿಕೊಂಡವನನ್ನು ನೀವು ನೋಡಿರುವಿರಾ?

(44) ಇವರಲ್ಲಿ ಹೆಚ್ಚಿನವರು ಕೇಳಿಸಿಕೊಳ್ಳುತ್ತಾರೆ ಅಥವಾ ಬುದ್ಧಿ ಪ್ರಯೋಗಿಸುತ್ತಾರೆಂದು ನೀವು ಭಾವಿಸುತ್ತಿರುವಿರಾ? ಇವರು ಜಾನುವಾರುಗಳಂತಿದ್ದಾರೆ. ಮಾತ್ರವಲ್ಲ, ಇವರು ಅವುಗಳಿಗಿಂತಲೂ ಭ್ರಷ್ಟ ಮಾರ್ಗದವರಾಗಿದ್ದಾರೆ.

(45) ಇವರಲ್ಲಿ ಹೆಚ್ಚಿನವರು ಕೇಳಿಸಿಕೊಳ್ಳುತ್ತಾರೆ ಅಥವಾ ಬುದ್ಧಿ ಪ್ರಯೋಗಿಸುತ್ತಾರೆಂದು ನೀವು ಭಾವಿಸುತ್ತಿರುವಿರಾ? ಇವರು ಜಾನುವಾರುಗಳಂತಿದ್ದಾರೆ. ಮಾತ್ರವಲ್ಲ, ಇವರು ಅವುಗಳಿಗಿಂತಲೂ ಭ್ರಷ್ಟ ಮಾರ್ಗದವರಾಗಿದ್ದಾರೆ.

(46) ಆ ನಂತರ ನಾವು ಆ ನೆರಳನ್ನು ಮೆಲ್ಲ ಮೆಲ್ಲನೆ ನಮ್ಮೆಡೆಗೆ ಎಳೆಯುತ್ತೇವೆ.

(47) ಅವನೇ ಅಲ್ಲಾಹ್ ನಿಮಗೆ ರಾತ್ರಿಯನ್ನು ಮರೆಯನ್ನಾಗಿಯೂ, ನಿದ್ರೆಯನ್ನು ವಿಶ್ರಾಂತಿಯನ್ನಾಗಿಯೂ ಮತ್ತು ಹಗಲನ್ನು ಚಟುವಟಿಕೆಯ ವೇಳೆಯನ್ನಾಗಿಯೂ ಮಾಡಿದನು.

(48) ಅವನೇ ತನ್ನ ಕರುಣೆಗೆ ಮುಂಚೆ ಸುವಾರ್ತೆಯನ್ನು ನೀಡುವ ಮಾರುತಗಳನ್ನು ಕಳುಹಿಸುತ್ತಾನೆ ನಾವು ಆಕಾಶದಿಂದ ಶುದ್ಧ ನೀರನ್ನು ಸುರಿಸುತ್ತೇವೆ.

(49) ಅದರ ಮೂಲಕ ನಿರ್ಜೀವ ಭೂಮಿಗೆ ಜೀವ ನೀಡಲೆಂದಾಗಿದೆ ಮತ್ತು ನಾವು ಅದನ್ನು ನಮ್ಮ ಸೃಷ್ಟಿಗಳ ಪೈಕಿ ಅನೇಕ ಜಾನುವಾರುಗಳಿಗೂ, ಅಸಂಖ್ಯಾತ ಮನುಷ್ಯರಿಗೂ ಕುಡಿಸಲಿಕ್ಕಾಗಿ.

(50) ಅವರು ಉಪದೇಶ ಸ್ವೀಕರಿಸಲೆಂದು ನಾವು ಅದನ್ನು ಅವರ ನಡುವೆ ವಿವಿಧ ರೂಪದಲ್ಲಿ ವಿವರಿಸಿ ಕೊಟ್ಟಿದ್ದೇವೆ. ಆದರೆ ಹೆಚ್ಚಿನ ಜನರು ಕೃತಘ್ನತೆಯ ಹೊರತು ಇನ್ನಾವುದಕ್ಕೂ ಒಪ್ಪಲಿಲ್ಲ.

(51) ನಾವು ಇಚ್ಛಿಸಿರುತ್ತಿದ್ದರೆ ಪ್ರತಿಯೊಂದು ನಾಡಿನಲ್ಲೂ ಒಬ್ಬ ಮುನ್ನೆಚ್ಚರಿಕೆ ನೀಡುವವನನ್ನು ಕಳುಹಿಸುತ್ತಿದ್ದೆವು.

(52) ಆದುದರಿಂದ ನೀವು ಸತ್ಯನಿಷೇಧಿಗಳನ್ನು ಅನುಸರಿಸಬೇಡಿರಿ ಹಾಗೂ ಅವರಜೊತೆ ಈ ಕುರ್‌ಆನಿನ ಮೂಲಕ ಮಹಾ ಹೋರಾಟ ನಡೆಸಿರಿ.

(53) ಅವನೇ ಎರಡು ಸಮುದ್ರಗಳನ್ನು ಪರಸ್ಪರ ಒಂದುಗೂಡಿಸಿರುವನು. ಒಂದು ಸಿಹಿಯಾದುದೂ, ಸ್ವಾದಭರಿತವೂ ಆಗಿದೆ, ಮೊತ್ತೊಂದು ಉಪ್ಪ್ಪು, ಕಹಿಯಾದುದೂ ಆಗಿರುತ್ತದೆ ಮತ್ತು ಇವುಗಳೆರಡರ ನಡುವೆ ಒಂದು ತೆರೆಯನ್ನೂ ಹಾಗೂ ಬಲಿಷ್ಠ ತಡೆಯನ್ನು ಅವನು ನಿಶ್ಚಯಿಸಿರುವನು.

(54) ಮತ್ತು ಅವನೇ ನೀರಿನಿಂದ ಮನುಷ್ಯನನ್ನು ಸೃಷ್ಟಿಸಿದ್ದಾನೆ. ಅನಂತರ ಅವನನ್ನು ವಂಶೀಯನಾಗಿಯೂ, ವೈವಾಹಿಕ ಸಂಬAಧವುಳ್ಳವನಾಗಿಯೂ ಮಾಡಿದನು. ನಿಸ್ಸಂದೇಹವಾಗಿಯೂ ನಿಮ್ಮ ಪ್ರಭುವು ಸರ್ವಶಕ್ತನಾಗಿದ್ದಾನೆ.

(55) ಅವರು ಅಲ್ಲಾಹನ ಹೊರತು ತಮಗೆ ಪ್ರಯೋಜನವನ್ನಾಗಲೀ, ಹಾನಿಯನ್ನಾಗಲೀ ಮಾಡಲಾಗದ ವಸ್ತುಗಳನ್ನು ಆರಾಧಿಸುತ್ತಾರೆ ಮತ್ತು ಸತ್ಯನಿಷೇಧಿಯು ತನ್ನ ಪ್ರಭುವಿನ ವಿರುದ್ಧ (ಶೈತಾನನ) ಬೆಂಬಲಿಗನಾಗಿರುತ್ತಾನೆ.

(56) ನಾವು ನಿಮ್ಮನ್ನು (ಮುಹಮ್ಮದರನ್ನು) ಕೇವಲ ಸುವಾರ್ತೆ ನೀಡುವವನಾಗಿಯೂ ಮತ್ತು ಮುನ್ನೆಚ್ಚರಿಕೆ ಕೊಡುವವನಾಗಿಯೂ ಕಳುಹಿಸಿರುತ್ತೇವೆ.

(57) ಹೇಳಿರಿ ಈ ಕಾರ್ಯಕ್ಕಾಗಿ ನಾನು ನಿಮ್ಮಿಂದ ಯಾವುದೇ ಪ್ರತಿಫಲವನ್ನು ಕೇಳುವುದಿಲ್ಲ. ಆದರೆ ಇಚ್ಛಿಸುವವನು ತನ್ನ ಪ್ರಭುವಿನ ಹಾದಿಯನ್ನು ಹಿಡಿಯಲಿ.

(58) ಎಂದೂ ಮರಣ ಹೊಂದದ ಚಿರಂತನನಾದ ಅಲ್ಲಾಹನ ಮೇಲೆ ನೀವು ಭರವಸೆಯನ್ನಿಡಿ, ಮತ್ತು ಅವನ ಸ್ತುತಿಯೊಂದಿಗೆ ಪಾವಿತ್ರö್ಯವನ್ನು ಹೊಗಳುತ್ತಿರಿ ಮತ್ತು ಅವನು ತನ್ನ ದಾಸರ ಪಾಪಗಳ ಬಗ್ಗೆ ಚೆನ್ನಾಗಿ ಬಲ್ಲನು.

(59) ಅವನೇ ಆಕಾಶಗಳನ್ನು, ಭೂಮಿಯನ್ನು ಅವೆರೆಡರ ನಡುವೆಯಿರುವುದನ್ನು ಆರು ದಿನಗಳಲ್ಲಿ ಸೃಷ್ಟಿಸಿದನು. ತರುವಾಯ ಅವನು ಸಿಂಹಾಸನದ ಮೇಲೆ ಆರೋಢನಾದನು. ಅವನು ಪರಮದಯಾಮಯನು; ನೀವು ಅವನ ಬಗ್ಗೆ ವಿಚಾರವಂತರಲ್ಲಿ ಕೇಳಿ ನೋಡಿರಿ.

(60) ನೀವು ಪರಮದಯಾಮಯನಿಗೆ ಸಾಷ್ಟಾಂಗವೆರಗಿರೆAದು ಅವರೊಂದಿಗೆ ಹೇಳಲಾದರೆ ಅವರು ಪರಮದಯಾಮಯನೆಂದರೇನು? ನೀವು ಆಜ್ಞಾಪಿಸಿದುದಕ್ಕೆ ನಾವು ಸಾಷ್ಟಾಂಗವೆರಗಬೇಕೆ? ಎಂದು ಕೇಳುತ್ತಾರೆ ಮತ್ತು ಅವರಿಗೆ ಇದು ತಿರಸ್ಕಾರವನ್ನು ಇನ್ನಷ್ಟು ಹೆಚ್ಚಿಸಿ ಕೊಡುತ್ತದೆ.

(61) ಆಕಾಶದಲ್ಲಿ ನಕ್ಷತ್ರ ಮಂಡಲಗಳನ್ನು ನಿರ್ಮಿಸಿದವನು ಮತ್ತು ಅದರಲ್ಲಿ ಸೂರ್ಯನನ್ನು, ಹೊಳೆಯುವ ಚಂದ್ರನನ್ನು ನಿಶ್ಚಯಿಸಿದವನು ಮಹಾ ಮಂಗಳಮಯನು!

(62) ಉಪದೇಶ ಸ್ವೀಕರಿಸಲು ಬಯಸುವವನಿಗೆ ಅಥವಾ ಕೃತಜ್ಞತೆ ಸಲ್ಲಿಸಲು ಬಯಸುವವನಿಗೆ ಅವನೇ ರಾತ್ರಿಯನ್ನು, ಹಗಲನ್ನು ಒಂದನ್ನೊAದು ಹಿಂಬಾಲಿಸುವುದನ್ನಾಗಿ ಮಾಡಿದನು.

(63) ಪರಮದಯಾಮಯನ ನೈಜ ದಾಸರು ಭೂಮಿಯಲ್ಲಿ ವಿನಯದಿಂದ ನಡೆಯುವವರು ಮತ್ತು ಅವರನ್ನು ಉದ್ದೇಶಿಸಿ ಅಜ್ಞಾನಿಗಳು ಮಾತನಾಡತೊಡಗಿದರೆ ಸಲಾಮ್ (ಶಾಂತಿ) ಎಂದು ಹೇಳುವವರಾಗಿದ್ದರೆ.

(64) ಅವರು ರಾತ್ರಿಯನ್ನು ತಮ್ಮ ಪ್ರಭುವಿಗೆ ಸಾಷ್ಟಾಂಗವೆರಗುತ್ತಾ, ನಿಂತು ಪ್ರಾರ್ಥಿಸುತ್ತಾರೆ.

(65) ಮತ್ತು ಅವರು ಹೀಗೆ ಪ್ರಾರ್ಥಿಸುತ್ತಾರೆ: ನಮ್ಮ ಪ್ರಭುವೇ, ನೀನು ನಮ್ಮಿಂದ ನರಕದಯಾತನೆಯನ್ನು ದೂರ ಮಾಡು, ನಿಜವಾಗಿಯು ಅದರ ಯಾತನೆಯು ವಿನಾಶಕಾರಿಯಾಗಿದೆ.

(66) ನಿಸ್ಸಂದೇಹವಾಗಿಯು ಅದು ತಂಗಲು ಮತ್ತು ವಾಸಮಾಡಲು ಅತಿ ನಿಕೃಷ್ಟ ತಾಣವಾಗಿದೆ.

(67) ಅವರು ಖರ್ಚು ಮಾಡುವಾಗ ದುಂದುವೆಚ್ಚ ಮಾಡುವುದಿಲ್ಲ ಮತ್ತು ಜಿಪುಣತೆ ತೋರುವುದಿಲ್ಲ ಹಾಗೂ ಅವರೆಡರ ನಡುವೆ ಮಧ್ಯಮರೀತಿಯಲ್ಲಿ ಖರ್ಚು ಮಾಡುತ್ತಾರೆ.

(68) ಅವರು ಅಲ್ಲಾಹನೊಂದಿಗೆ ಇತರ ಯಾವ ದೇವರನ್ನು ಕರೆದು ಬೇಡುವುದಿಲ್ಲ ಅಲ್ಲಾಹನು ನಿಷಿದ್ಧಗೊಳಿಸಿರುವ ಜೀವವನ್ನು ಅನ್ಯಾಯವಾಗಿ ಕೊಲ್ಲುವುದಿಲ್ಲ ಮತ್ತು ವ್ಯಭಿಚಾರವೆಸಗುವುದಿಲ್ಲ ಮತ್ತು ಇದನ್ನು ಮಾಡುವವನು ತನ್ನ ಪಾಪದ ಪ್ರತಿಫಲವನ್ನು ಪಡೆಯುವನು.

(69) ಅವನಿಗೆ ಪುನರುತ್ಥಾನದ ದಿನದಂದು ಇಮ್ಮಡಿ ಯಾತನೆಯನ್ನು ನೀಡಲಾಗುವುದು ಮತ್ತು ಅವನು ಅದರಲ್ಲಿ ಅಪಮಾನಿತನಾಗಿ ಶಾಶ್ವತನಾಗಿರುವನು.

(70) ಆದರೆ ಪಶ್ಚಾತ್ತಾಪ ಪಟ್ಟು ಸತ್ಯವಿಶ್ವಾಸವಿರಿಸಿ, ಸತ್ಕರ್ಮಗಳನ್ನು ಮಾಡಿದವನಿಗೆ ಅಲ್ಲಾಹನು ಅವರ ಕೆಡುಕುಗಳನ್ನು ಒಳಿತುಗಳೊಂದಿಗೆ ಮಾರ್ಪಡಿಸುತ್ತಾನೆ. ಮತ್ತು ಅಲ್ಲಾಹನು ಕ್ಷಮಾಶೀಲನು, ಕರುಣಾನಿಧಿಯು ಆಗಿರುತ್ತಾನೆ.

(71) ಪಶ್ಚಾತ್ತಾಪ ಪಟ್ಟು ಸತ್ಕರ್ಮವನ್ನೆಸಗುವವನು ವಾಸ್ತವದಲ್ಲಿ ಅಲ್ಲಾಹನೆಡೆಗೆ ತೃಪ್ತೀಕರವಾದ ರೀತಿಯಲ್ಲಿ ಮರಳುತ್ತಾನೆ.

(72) ಅವರು ಸುಳ್ಳು ಸಾಕ್ಷö್ಯವಹಿಸುವುದಿಲ್ಲ ಹಾಗೂ ಅವರು ಯಾವುದಾದರೂ ವ್ಯರ್ಥ ವಿನೋದಗಳ ಮುಂದಿನಿAದ ಹಾದು ಹೋದರೆ ಸಭ್ಯತೆಯೊಂದಿಗೆ ಹಾದು ಹೋಗುತ್ತಾರೆ.

(73) ಅವರಿಗೆ ತಮ್ಮ ಪ್ರಭುವಿನ ಸೂಕ್ತಿಗಳನ್ನು ಓದಿ ಹೇಳಲಾದರೆ ಕಿವುಡರೂ, ಅಂಧರೂ ಆಗಿ ಅವುಗಳ ಮುಂದೆ ಎರಗುವುದಿಲ್ಲ.

(74) ಮತ್ತು ಅವರು ಹೀಗೆ ಪ್ರಾರ್ಥಿಸುತ್ತಾರೆ: ನಮ್ಮ ಪ್ರಭುವೇ, ನೀನು ನಮಗೆ ನಮ್ಮ ಪತ್ನಿಯರಿಂದಲೂ, ನಮ್ಮ ಸಂತತಿಗಳಿAದಲೂ ಕಣ್ಣುಗಳಿಗೆ ತಂಪನ್ನು ದಯಪಾಲಿಸು ಮತ್ತು ನಮ್ಮನ್ನು ಭಯಭಕ್ತಿಯುಳ್ಳವರ ಮುಂದಾಳುಗಳನ್ನಾಗಿ ಮಾಡು.

(75) ಅವರಿಗೇ ತಮ್ಮ ಸಹನೆ ವಹಿಸಿದುದರ ಬದಲಿಗೆ ಸ್ವರ್ಗದ ಉನ್ನತ ಅಂತಸ್ತಿನ ಪ್ರತಿಫಲ ನೀಡಲಾಗುವುದು ಮತ್ತು ಅಲ್ಲಿ ಅವರಿಗೆ ಸಲಾಮ್‌ಗಳನ್ನು ತಲುಪಿಸಲಾಗುವುದು.

(76) ಅದರಲ್ಲವರು ಶಾಶ್ವತವಾಗಿರುವರು. ಅದು ಉತ್ತಮ ತಂಗುದಾಣವೂ, ಉತ್ತಮ ಸ್ಥಾನವೂ ಆಗಿದೆ.

(77) ಹೇಳಿರಿ: ನೀವು ಅವನನ್ನು ಆರಾಧಿಸದಿದ್ದರೆ ನನ್ನ ಪ್ರಭುವು ನಿಮ್ಮನ್ನು ಒಂದಿಷ್ಟೂ ಪರಿಗಣಿಸುವುದಿಲ್ಲ. ನೀವಂತು ಸುಳ್ಳಾಗಿಸಿರುತ್ತೀರಿ. ಇನ್ನು ಬಹು ಬೇಗನೇ ಅದರ ಶಿಕ್ಷೆಯು ನಿಮಗೆ ತಲುಪಲಿದೆ.