(1) ತ್ವಾ ಸೀನ್ ಮೀಮ್
(2) ಇವು ಸುವ್ಯಕ್ತ ಗ್ರಂಥದ ಸೂಕ್ತಿಗಳಾಗಿವೆ.
(3) (ಓ ಪೈಗಂಬರರೇ) ಪ್ರಾಯಶಃ ಅವರು ಸತ್ಯವಿಶ್ವಾಸ ಸ್ವೀಕರಿಸಲಿಲ್ಲವೆಂಬ ಕಾರಣಕ್ಕೆ ನೀವು ನಿಮ್ಮ ಜೀವನವನ್ನೇ ನಾಶಗೊಳಿಸಬಹುದು.
(4) ನಾವು ಇಚ್ಛಿಸಿದರೆ ಅವರ ಮೇಲೆ ಆಕಾಶದಿಂದ ದೃಷ್ಟಾಂತವನ್ನು ಇಳಿಸುತ್ತಿದ್ದೆವು ಆಗ ಅದರ ಮುಂದೆ ಅವರ ಕೊರಳುಗಳು ಬಾಗಿಬಿಡುತ್ತಿದ್ದವು.
(5) ಅವರ ಬಳಿ ಪರಮದಯಾಮಯನ ಕಡೆಯಿಂದ ಯಾವುದೇ ಹೊಸ ಉದ್ಭೋಧೆಯು ಬಂದರೂ ಅವರು ಅದರಿಂದ ವಿಮುಖರಾಗುವವರಾದರು.
(6) ಕೊನೆಗೆ ಅವರು (ಸತ್ಯವನ್ನು) ಸುಳ್ಳಾಗಿಸಿಬಿಟ್ಟರು. ಇನ್ನು ಸದ್ಯದಲ್ಲೇ ಅವರು ಯಾವುದರ ಕುರಿತು ಪರಿಹಾಸ್ಯ ಮಾಡುತ್ತಿದ್ದರೋ ಅದರ ವೃತ್ತಾಂತಗಳು ಅವರ ಬಳಿಗೆ ಬರಲಿವೆ.
(7) ನಾವು ಎಲ್ಲಾ ವಿಧದ ಉತ್ತಮ ಜೋಡಿಗಳನ್ನು ಬೆಳಿಸಿದ್ದೇವೆಂದು, ಅವರು ಭೂಮಿಯೆಡೆಗೆ ನೋಡಲಿಲ್ಲವೇ?
(8) ನಿಸ್ಸಂಶಯವಾಗಿಯು ಇದರಲ್ಲಿ ಮಹಾ ದೃಷ್ಟಾಂತವಿದೆ ಮತ್ತು ಅವರ ಪೈಕಿ ಅಧಿಕ ಮಂದಿ ಸತ್ಯವಿಶ್ವಾಸಿಗಳಲ್ಲ.
(9) ನಿಸ್ಸಂದೇಹವಾಗಿಯು ನಿಮ್ಮ ಪ್ರಭು ಪ್ರಚಂಡನು, ಕರುಣಾನಿಧಿಯು ಆಗಿದ್ದಾನೆ.
(10) ಸಂದೇಶವಾಹಕರೇ ನಿಮ್ಮ ಪ್ರಭುವು ಮೂಸಾರವರನ್ನು ಕರೆದು ನೀನು ಅಕ್ರಮಿ ಜನಾಂಗದೆಡೆಗೆ ಹೋಗು ಎಂದು ಹೇಳಿದ ಸಂದರ್ಭವನ್ನು ಸ್ಮರಿಸಿರಿ.
(11) ಫಿರ್ಔನನ ಜನಾಂಗದೆಡೆಗೆ. ಅವರು ಭಯಭಕ್ತಿ ತೋರುವುದಿಲ್ಲವೇ?
(12) ಮೂಸಾ ಹೇಳಿದರು: ನನ್ನ ಪ್ರಭುವೇ, ನನ್ನನ್ನು ಅವರು ಸುಳ್ಳಾಗಿಸಬಹುದೆಂಬ ಭಯ ನನಗಿದೆ.
(13) ನನ್ನ ಹೃದಯವು ಸಂಕುಚಿತಗೊಳ್ಳುತ್ತಿದೆ. ಮತ್ತು ನನ್ನ ನಾಲಗೆಯು ಚಲಿಸುತ್ತಿಲ್ಲ. ಆದ್ದರಿಂದ ನೀನು ಹಾರೂನನೆಡೆಗೂ ಸಂದೇಶವನ್ನು ಕಳುಹಿಸು.
(14) ಮತ್ತು ಅವರ ಬಳಿ ನನ್ನ ಮೇಲಿನ ಒಂದು ಅಪರಾಧವೂ ಇದೆ. ಹಾಗಾಗಿ ಅವರು ನನ್ನನ್ನು ಕೊಂದುಬಿಡಬಹುದೆAದು ನಾನು ಭಯಪಡುತ್ತಿರುವೆನು.
(15) ಅಲ್ಲಾಹನು ಹೇಳಿದನು: ಖಂಡಿತ ಹಾಗಾಗದು. ನೀವಿಬ್ಬರು ನಮ್ಮ ದೃಷ್ಟಾಂತಗಳೊAದಿಗೆ ಹೋಗಿರಿ ನಾವು ನಿಮ್ಮ ಜೊತೆಯಲ್ಲಿದ್ದು ಚೆನ್ನಾಗಿ ಆಲಿಸುವವರಾಗಿದ್ದೇವೆ.
(16) ನೀವಿಬ್ಬರೂ ಫೀರ್ಔನನ ಬಳಿಗೆ ಹೋಗಿ ಹೇಳಿರಿ: ನಿಸ್ಸಂದೇಹವಾಗಿಯು ನಾವು ಸರ್ವಲೋಕಗಳ ಪ್ರಭುವಿನ ಸಂದೇಶವಾಹಕರಾಗಿದ್ದೇವೆ.
(17) ನೀನು ನಮ್ಮೊಂದಿಗೆ ಇಸ್ರಾಯೀಲ್ ಸಂತತಿಗಳನ್ನು ಕಳುಹಿಸಿಕೊಡು.
(18) ಫಿರ್ಔನ್ ಹೇಳಿದನು: ನೀನು ಶಿಶುವಾಗಿದ್ದಾಗ ನಾವು ನಿನ್ನನ್ನು ನಮ್ಮ ಬಳಿ ಪೋಷಿಸಿರಲಿಲ್ಲವೇ? ಮತ್ತು ನಮ್ಮೊಡನೆ ನೀನು ನಿನ್ನ ಜೀವನದ ಎಷ್ಟೋ ವರ್ಷಗಳನ್ನು ಕಳೆದಿರಲಿಲ್ಲವೆ?
(19) ನೀನು ಮಾಡುವುದನ್ನು ಮಾಡಿರುವೆ ಮತ್ತು ನೀನು ಕೃತಘ್ನರಲ್ಲಾಗಿರುವೆ.
(20) ಮೂಸಾ ಉತ್ತರಿಸಿದರು: ನಾನು ಅದನ್ನು ಮಾಡಿದ್ದೆ ನಿಜ. ಆಗ ನಾನು ಅಜ್ಞಾನರಲ್ಲಿ ಸೇರಿದ್ದೆ.
(21) ಬಳಿಕ ನಾನು ನಿಮ್ಮನ್ನು ಭಯಪಟ್ಟು ನಿಮ್ಮಿಂದ ಓಡಿ ಹೋದೆನು. ಆಗ ನನ್ನ ಪ್ರಭುವು ನನಗೆ ಸುಜ್ಞಾನವನ್ನು ನೀಡಿದನು. ಮತ್ತು ನನ್ನನ್ನು ಅವನ ಸಂದೇಶವಾಹಕರಲ್ಲಿ ಸೇರಿಸಿದನು.
(22) ಇಸ್ರಾಯೀಲ್ ಸಂತತಿಗಳನ್ನು ಗುಲಾಮರನ್ನಾಗಿ ಮಾಡಿಕೊಂಡಿದ್ದೇ ನೀನು ನನ್ನ ಮೇಲೆ ಮಾಡಿದ ಉಪಕಾರವೇ?
(23) ಫಿರ್ಔನ್ ಹೇಳಿದನು “ಸರ್ವಲೋಕಗಳ ಪ್ರಭು ಎಂದರೇನು?”
(24) ಮೂಸಾ ಹೇಳಿದರು: ಅವನು ಆಕಾಶಗಳ ಮತ್ತು ಭೂಮಿಯ ಹಾಗೂ ಅವೆರಡರ ನಡುವೆ ಇರುವ ಸಕಲ ವಸ್ತುಗಳ ಪ್ರಭುವಾಗಿದ್ದಾನೆ. ನೀವು ದೃಢವಿಶ್ವಾಸಿಗಳಾಗಿದ್ದರೆ.
(25) ಫಿರ್ಔನನು ತನ್ನ ಸುತ್ತಮುತ್ತ ಇದ್ದವರಿಗೆ ಹೇಳಿದನು: ನೀವು ಕೇಳಿಸಿಕೊಳ್ಳುತ್ತಿಲ್ಲವೇ?
(26) ಮೂಸ ಹೇಳಿದರು: ಅವನು ನಿಮ್ಮ ಪ್ರಭುವೂ ಮತ್ತು ನಿಮ್ಮ ಪೂರ್ವಿಕರಾದಂತಹ ನಿಮ್ಮ ತಾತ ಮುತ್ತಾತಂದಿರ ಪ್ರಭುವೂ ಆಗಿದ್ದಾನೆ.
(27) ಫಿರ್ಔನನು ಹೇಳಿದನು: ನಿಮ್ಮೆಡೆಗೆ ಕಳುಹಿಸಲಾದ ಈ ನಿಮ್ಮ ಸಂದೇಶವಾಹಕನು ನಿಜವಾಗಿಯೂ ಹುಚ್ಚನಾಗಿದ್ದಾನೆ.
(28) ಮೂಸಾ ಹೇಳಿದರು: ಅವನೇ ಪೂರ್ವ, ಪಶ್ಚಿಮ ಹಾಗೂ ಅವೆರಡರ ನಡುವೆಯಿರುವ ಎಲ್ಲದರ ಪ್ರಭುವಾಗಿದ್ದಾನೆ. ನೀವು ಯೋಚಿಸುವವರಾಗಿದ್ದರೆ.
(29) ಫಿರ್ಔನ್ ಹೇಳಿದನು: ಕೇಳು, ನೀನು ನನ್ನನ್ನು ಬಿಟ್ಟು ಬೇರೆ ಆರಾಧ್ಯನನ್ನು ಮಾಡಿಕೊಂಡಲ್ಲಿ ಖಂಡಿತವಾಗಿಯು ನಾನು ನಿನ್ನನ್ನು ಕಾರಾಗೃಹ ವಾಸಿಗಳಲ್ಲಿ ಹಾಕಿ ಬಿಡುವೆನು.
(30) ಮೂಸಾ ಹೇಳಿದರು: ಒಂದು ವೇಳೆ ನಾನು ನಿನ್ನಲ್ಲಿಗೆ ಒಂದು ಸ್ಪಷ್ಟವಾದ ಪುರಾವೆಯನ್ನು ತಂದರೂ?
(31) ಫಿರ್ಔನನು ಹೇಳಿದನು: ನೀನು ಸತ್ಯವಂತರಲ್ಲಾಗಿದ್ದರೆ ಅದನ್ನು ಮುಂದೆ ತಾ.
(32) ಮೂಸ ತನ್ನ ಲಾಠಿಯನ್ನು ಹಾಕಿದಾಗ ಅದು ಹಠಾತ್ತನೆ ಪ್ರತ್ಯಕ್ಷ ಹೆಬ್ಬಾವಾಗಿಬಿಟ್ಟಿತು.
(33) ಮತ್ತು ಅವರು ತಮ್ಮ ಕೈಯನ್ನು ಪಾರ್ಶ್ವದಿಂದ ಹೊರಗೆಳೆದಾಗ. ಹಠಾತ್ತನೆ ಅದು ವೀಕ್ಷಕರ ಮುಂದೆ ಪ್ರಜ್ವಲಿಸತೊಡಿಗತು.
(34) ಫಿರ್ಔನ್ ತನ್ನ ಬಳಿಯಿದ್ದ ಸರದಾರರಿಗೆ ಹೇಳಿದನು: ನಿಶ್ಚಯವಾಗಿ ಇವನು ನುರಿತ ಜಾದುಗಾರನಾಗಿದ್ದಾನೆ.
(35) ಇವನು ತನ್ನ ಜಾದುವಿನ ಶಕ್ತಿಯಿಂದ ನಿಮ್ಮನ್ನು ನಿಮ್ಮ ನಾಡಿನಿಂದ ಹೊರಹಾಕಲೆಂದು ಬಯಸುತ್ತಿದ್ದಾನೆ. ಇನ್ನು ನೀವು ಏನು ಸಲಹೆ ನೀಡುವಿರಿ?
(36) ಅವರು ಹೇಳಿದರು: ನೀವು ಅವನಿಗೂ, ಅವನ ಸಹೋದರನಿಗೂ ಕಾಲಾವಕಾಶ ನೀಡಿರಿ. ಎಲ್ಲಾ ನಗರಗಳಲ್ಲಿ ಕರೆ ನೀಡುವವರನ್ನು ಕಳುಹಿಸಿರಿ.
(37) ಅವರು ನಿನ್ನೆಡೆಗೆ ಪ್ರತಿಯೊಬ್ಬ ನುರಿತ ಜಾದುಗಾರನನ್ನು ಕರೆತರಲಿ.
(38) ಅನಂತರ ಜಾದುಗಾರರೆಲ್ಲ ಒಂದು ನಿಗದಿತ ವೇಳೆಗೆ ಒಟ್ಟುಗೂಡಿಸಲ್ಪಟ್ಟರು.
(39) ಮತ್ತು ಸಾರ್ವಜನಿಕರೊಂದಿಗೂ ಹೇಳಲಾಯಿತು: ನೀವೂ ಸಮಾವೇಶದಲ್ಲಿ ಹಾಜರಾಗುವಿರಾ?
(40) ಇಂದು ಜಾದುಗಾರರು ಮೇಲುಗೈ ಸಾಧಿಸಿದರೆ, ನಾವು ಅವರನ್ನೇ ಅನುಸರಿಸಲೆಂದಾಗಿದೆ.
(41) ಜಾದುಗಾರರು ಬಂದು ಫಿರ್ಔನನಿಗೆ ಹೇಳಿದರು: ನಾವೇನಾದರೂ ಮೇಲುಗೈ ಸಾಧಿಸಿದರೆ ನಮಗೆ ಪ್ರತಿಫಲವೇನಾದರೂ ಇದೆಯೇ?
(42) ಫಿರ್ಔನನು ಉತ್ತರಿಸಿದನು: ಹೌದು ಆಗ ನೀವು ನನ್ನ ಆಪ್ತರಲ್ಲಿ ಸೇರಿಬಿಡುವಿರಿ.
(43) ಮೂಸಾ(ಅ) ಅವರೊಡನೆ ಹೇಳಿದರು: ನೀವೇನನ್ನು ಹಾಕುವವರಿದ್ದೀರೋ ಅದನ್ನು ಹಾಕಿಬಿಡಿರಿ.
(44) ಕೊನೆಗೆ ಅವರು ತಮ್ಮ ಹಗ್ಗಗಳನ್ನೂ, ಲಾಠಿಗಳನ್ನೂ ಹಾಕಿದರು ಮತ್ತು ಹೇಳಿದರು: ಫಿರ್ಔನನ ಪ್ರತಾಪದಾಣೆ! ಖಂಡಿತ ನಾವು ಮೇಲುಗೈ ಸಾಧಿಸಲಿದ್ದೇವೆ.
(45) ಆಗ ಮೂಸಾ ಸಹ ತನ್ನ ಲಾಠಿಯನ್ನು ಹಾಕಿದರು. ಆಗಲೇ ಅದು (ಹೆಬ್ಬಾವಾಗಿ) ಅವರು ಸೃಷ್ಟಿಸಿದ ಮಿಥ್ಯಗಳನ್ನೆಲ್ಲಾ ನುಂಗಿಹಾಕಿತು.
(46) ಕೂಡಲೇ ಜಾದುಗಾರರೆಲ್ಲರೂ ಸಾಷ್ಟಾಂಗವೆರಗಿದರು.
(47) ಅವರು ಹೇಳಿದರು: ನಾವು ಸರ್ವಲೋಕಗಳ ಪ್ರಭುವಿನಲ್ಲಿ ವಿಶ್ವಾಸವಿರಿಸಿದೆವು.
(48) ಮೂಸಾ ಮತ್ತು ಹಾರೂನರ ಪ್ರಭುವಿನಲ್ಲಿ.
(49) ಫಿರ್ಔನ್ ಹೇಳಿದನು: ನಾನು ನಿಮಗೆ ಅನುಮತಿ ನೀಡುವ ಮೊದಲೇ ನೀವು ಅವನನ್ನು ನಂಬಿ ಬಿಟ್ಟಿರಾ? ನಿಜವಾಗಿಯು ಅವನೇ ನಿಮ್ಮೆಲ್ಲರಿಗೂ ಜಾದುವನ್ನು ಕಲಿಸಿಕೊಟ್ಟಂತಹ ನಿಮ್ಮ ಗುರು ಆಗಿದ್ದಾನೆ. ಇನ್ನು ಸದ್ಯದಲ್ಲೇ ಅರಿತುಕೊಳ್ಳಲಿದ್ದೀರಿ. ನಾನು ಖಂಡಿತ ನಿಮ್ಮ ಕೈ, ಕಾಲುಗಳನ್ನು ಒಂದಕ್ಕೊAದು ವಿರುದ್ಧ ದಿಕ್ಕಿನಲ್ಲಿ ಕತ್ತರಿಸಿ ಹಾಕುವೆನು ಮತ್ತು ಖಂಡಿತ ನಿಮ್ಮೆಲ್ಲರನ್ನೂ ಶಿಲುಬೆಗೇರಿಸುವೆನು.
(50) ಅವರು ಹೇಳಿದರು: ತೊಂದರೆಯಿಲ್ಲ. ನಾವು ನಮ್ಮ ಪ್ರಭುವಿನೆಡೆಗೆ ಮರಳಿಹೋಗುವವರೇ ಆಗಿದ್ದೇವೆ.
(51) ನಾವು ಸತ್ಯವಿಶ್ವಾಸಿಗಳಲ್ಲಿ ಮೊದಲಿಗರಾಗಿದ್ದೆವೆಂಬ ಕಾರಣಕ್ಕೆ ನಮ್ಮ ಪ್ರಭುವು ನಮ್ಮ ಪಾಪಗಳನ್ನು ಕ್ಷಮಿಸಿ ಬಿಡುವನೆಂದು ನಾವು ತೀವ್ರ ಆಕಾಂಕ್ಷೆಯನ್ನಿರಿಸಿದ್ದೇವೆ.
(52) ನಾವು ಮೂಸಾರವರೆಡೆಗೆ ದಿವ್ಯ ಸಂದೇಶ ನೀಡಿದೆವು: ನೀವು ನನ್ನ ದಾಸರನ್ನು ಕರೆದುಕೊಂಡು ರಾತ್ರೋ ರಾತ್ರಿ ಹೊರಡಿರಿ. ಖಂಡಿತ ನೀವು ಬೆನ್ನಟ್ಟಲ್ಪಡುವಿರಿ.
(53) ಫಿರ್ಔನನು ನಗರಗಳಲ್ಲಿ ಕರೆ ನೀಡುವವರನ್ನು ಕಳುಹಿಸಿದನು.
(54) ನಿಶ್ಚಯವಾಗಿಯು ಈ ಗುಂಪು ಅತ್ಯಲ್ಪ ಸಂಖ್ಯೆಯದ್ದಾಗಿದೆ.
(55) ಮತ್ತು ಅವರು ನಮ್ಮನ್ನು ತೀವ್ರವಾಗಿ ಕೆರಳಿಸಿದ್ದಾರೆ.
(56) ಮತ್ತು ಅವರು ನಮ್ಮನ್ನು ತೀವ್ರವಾಗಿ ಕೆರಳಿಸಿದ್ದಾರೆ.
(57) ಕೊನೆಗೆ ನಾವು ಅವರನ್ನು ತೋಟಗಳಿಂದಲೂ, ಚಿಲುಮೆಗಳಿಂದಲೂ ಹೊರಕ್ಕಟ್ಟಿದೆವು.
(58) ಮತ್ತು ಭಂಡಾರಗಳಿAದಲೂ, ಉತ್ತಮ ನಿವಾಸಗಳಿಂದಲೂ ಹೊರದೂಡಿದೆವು.
(59) ಹೀಗೇ ಆಯಿತು ಮತ್ತು ನಾವು ಅವುಗಳಿಗೆ ಇಸ್ರಾಯೀಲ್ ಸಂತತಿಗಳನ್ನು ವಾರೀಸುದಾರರನ್ನಾಗಿ ಮಾಡಿದೆವು.
(60) ಕೊನೆಗೆ ಫಿರ್ಔನಿಯರು ಸೂರ್ಯೋದಯದ ಹೊತ್ತಿನಲ್ಲೇ ಅವರನ್ನು ಬೆಂಬತ್ತಿ ಹೋದರು.
(61) ಹಾಗೆಯೇ ಉಭಯ ತಂಡಗಳು ಪರಸ್ಪರರನ್ನು ನೋಡಿದಾಗ ಮೂಸಾರವರ ಸಂಗಡಿಗರು: ನಿಶ್ಚಯವಾಗಿಯು ನಾವಂತು ಸಿಕ್ಕಿಬಿದ್ದೆವು ಎಂದು ಹೇಳಿದರು.
(62) ಮೂಸಾ ಹೇಳಿದರು: ಖಂಡಿತ ಇಲ್ಲ! ನನ್ನ ಜೊತೆ ನನ್ನ ಪ್ರಭು ಇದ್ದಾನೆ. ಅವನು ನನಗೆ ದಾರಿ ತೋರಿಸಲಿರುವನು.
(63) ನಾವು ಮೂಸಾರೆಡೆಗೆ ದಿವ್ಯ ಸಂದೇಶ ನೀಡಿದೆವು: ನೀವು ನಿಮ್ಮ ಲಾಠಿಯನ್ನು ಸಮುದ್ರಕ್ಕೆ ಹೊಡೆಯಿರಿ. ಆಗಲೇ ಅದು ಇಬ್ಭಾಗವಾಯಿತು ಮತ್ತು ಪ್ರತಿಯೊಂದು ಭಾಗವು ಮಹಾ ಪರ್ವತದಂತಾಗಿಬಿಟ್ಟಿತು.
(64) ಮತ್ತು ನಾವು ಅಲ್ಲಿ ಇತರರನ್ನು ಸಮೀಪಗೊಳಿಸಿದೆವು.
(65) ಮತ್ತು ನಾವು ಮೂಸಾ ಮತ್ತು ಅವರ ಜೊತೆಯಿದ್ದವರನ್ನು ರಕ್ಷಿಸಿದೆವು.
(66) ಅನಂತರ ನಾವು ಇತರರನ್ನು ಮುಳುಗಿಸಿಬಿಟ್ಟೆವು.
(67) ನಿಶ್ಚಯವಾಗಿಯು ಇದರಲ್ಲಿ ಮಹಾ ನಿದರ್ಶನವಿದೆ ಮತ್ತು ಅವರ ಪೈಕಿ ಹೆಚ್ಚಿನವರು ಸತ್ಯವಿಶ್ವಾಸಿಗಳಾಗಿರಲಿಲ್ಲ.
(68) ನಿಸ್ಸಂಶಯವಾಗಿಯು ನಿಮ್ಮ ಪ್ರಭುವು ಪ್ರಚಂಡನು, ಕರುಣಾನಿಧಿಯು ಆಗಿರುವನು.
(69) ಅವರಿಗೆ ಇಬ್ರಾಹೀಮರ ವೃತ್ತಾಂತವನ್ನು ತಿಳಿಸಿಕೊಡಿ.
(70) ಅವರು ತನ್ನ ತಂದೆ ಮತ್ತು ತಮ್ಮ ಜನಾಂಗದೊಡನೆ “ನೀವು ಯಾರನ್ನು ಆರಾಧಿಸುತ್ತಿರುವಿರಿ?” ಎಂದು ಕೇಳಿದ ಸಂದರ್ಭವನ್ನು ಸ್ಮರಿಸಿರಿ.
(71) ಅವರು ಉತ್ತಿರಿಸಿದರು: ನಾವು ವಿಗ್ರಹಗಳನ್ನು ಆರಾಧಿಸುತ್ತೇವೆ. ಮತ್ತು ಅವುಗಳ ಉಪಾಸನೆಯಲ್ಲೇ ಕುಳಿತಿರುತ್ತೇವೆ.
(72) ಆಗ ಇಬ್ರಾಹೀಮರು ಹೇಳಿದರು: ನೀವು ಕರೆದು ಬೇಡುವಾಗ ಅವು ಕೇಳಿಸಿಕೊಳ್ಳುತ್ತವೆಯೇ?
(73) ಆಗ ಇಬ್ರಾಹೀಮರು ಹೇಳಿದರು: ನೀವು ಕರೆದು ಬೇಡುವಾಗ ಅವು ಕೇಳಿಸಿಕೊಳ್ಳುತ್ತವೆಯೇ?
(74) ಅವರು ಉತ್ತರಿಸಿದರು: (ಇಲ್ಲ) ಆದರೆ ನಾವು ನಮ್ಮ ತಂದೆ ತಾತಂದಿರನ್ನು ಹೀಗೇ ಮಾಡುತ್ತಿರುವುದಾಗಿ ಕಂಡಿರುತ್ತೇವೆ.
(75) 75&76
(76) ಇಬ್ರಾಹೀಮರು ಹೇಳಿದರು: ನೀವೂ ನಿಮ್ಮ ತಂದೆ ತಾತಂದಿರೂ. ಯಾರನ್ನು ಆರಾಧಿಸುತ್ತಿರುವಿರೆಂದು ನಿಮಗೆ ಗೊತ್ತಿದೆಯೇ?
(77) ನಿಶ್ಚಯವಾಗಿಯು ಅವೆಲ್ಲವೂ (ಆ ಮಿಥ್ಯದೇವರುಗಳು) ನನ್ನ ಶತ್ರುಗಳು. ಸರ್ವಲೋಕಗಳ ನೈಜ ಪ್ರಭುವಾದ ಅಲ್ಲಾಹನ ಹೊರತು.
(78) ಅವನು ನನ್ನನ್ನು ಸೃಷ್ಟಿಸಿದವನು ಮತ್ತು ಅವನೇ ನನ್ನ ಮಾರ್ಗದರ್ಶನ ಮಾಡುತ್ತಾನೆ.
(79) ಅವನೇ ನನಗೆ ತಿನಿಸುವವನು, ಕುಡಿಸುವವನು.
(80) ಮತ್ತು ನಾನು ರೋಗಗ್ರಸ್ಥನಾದಾಗ ಅವನೇ ನನ್ನನ್ನು ಗುಣಪಡಿಸುತ್ತಾನೆ.
(81) ಮತ್ತು ನನ್ನನ್ನು ಮರಣಗೊಳಿಸುವನು. ಅನಂತರ ನನಗೆ ಪುನಃ ಜೀವ ನೀಡುವನು.
(82) ಮತ್ತು ಪ್ರತಿಫಲ ನೀಡುವ ದಿನ ಅವನು ನನ್ನ ಪಾಪಗಳನ್ನು ಕ್ಷಮಿಸುವವನೆಂದು ನಾನು ನಿರೀಕ್ಷಿಸಿದ್ದೇನೆ.
(83) ನನ್ನ ಪ್ರಭುವೇ, ನನಗೆ ಸುಜ್ಞಾನವನ್ನು ದಯಪಾಲಿಸು ಮತ್ತು ನನ್ನನ್ನು ಸಜ್ಜನರಲ್ಲಿ ಸೇರಿಸು.
(84) ಮತ್ತು ಮುಂದಿನ ಪೀಳಿಗೆಗಳಲ್ಲೂ ನನ್ನ ಸತ್ಕೀರ್ತಿಯನ್ನು ಉಳಿಸಿಬಿಡು.
(85) ನೀನು ನನ್ನನ್ನು ಅನುಗ್ರಹಪೂರ್ಣ ಸ್ವರ್ಗದ ವಾರೀಸುದಾರರಲ್ಲಿ ಸೇರಿಸು.
(86) ನೀನು ನನ್ನ ತಂದೆಯನ್ನು ಕ್ಷಮಿಸು. ನಿಜವಾಗಿಯೂ ಅವನು ಮಾರ್ಗ ಭ್ರಷ್ಟರಲ್ಲಾಗಿದ್ದನು.
(87) ಜನರನ್ನು ಪುನರುತ್ಥಾನಗೊಳಿಸುವ ದಿನ ನೀನು ನನ್ನನ್ನು ಅಪಮಾನಿಸದಿರು.
(88) ಅಂದು ಸಂಪತ್ತಾಗಲೀ, ಸಂತತಿಗಳಾಗಲೀ ಪ್ರಯೋಜನಕ್ಕೆ ಬಾರದು.
(89) ಆದರೆ ಅಲ್ಲಾಹನ ಬಳಿಗೆ ಸುರಕ್ಷಿತ ಹೃದಯದೊಂದಿಗೆ ಬರುವವನ ಹೊರತು.
(90) ಭಯಭಕ್ತಿಯುಳ್ಳವರಿಗಾಗಿ ಸ್ವರ್ಗವನ್ನು ಸಮೀಪ ತರಲಾಗುವುದು.
(91) ಮಾರ್ಗಭ್ರಷ್ಟರಿಗೆ ನರಕವನ್ನು ಪ್ರಕಟಗೊಳಿಸಲಾಗವುದು.
(92) ಮತ್ತು ಅವರೊಂದಿಗೆ ಕೇಳಲಾಗುವುದು: ನೀವು ಆರಾಧಿಸುತ್ತಿದ್ದವುಗಳೆಲ್ಲಾ ಎಲ್ಲಿವೆ?
(93) ಅಲ್ಲಾಹನ ಹೊರತು ಅವು ನಿಮಗೆ ಸಹಾಯ ಮಾಡಬಲ್ಲರೇ ಅಥವಾ ಸ್ವತಃ ಅವರೇ ತಮ್ಮ ಸಹಾಯವನ್ನು ಮಾಡಿಕೊಳ್ಳಬಲ್ಲರೇ?
(94) ಆಗ ಅವರೂ, ಸಕಲ ಮಾರ್ಗಭ್ರಷ್ಟರು ನರಕದಲ್ಲಿ ಅಧೋಮುಖಿಗಳಾಗಿ ಎಸೆಯಲಾಗುವರು.
(95) ಮತ್ತು ಇಬ್ಲೀಸನ ಸಕಲ ಸೈನ್ಯವೂ ಸಹ.
(96) ಅಲ್ಲಿ ಅವರು ಪರಸ್ಪರ ಜಗಳವಾಡುತ್ತಾ ಹೇಳುವರು.
(97) 97&98
(98) ಅಲ್ಲಾಹನಾಣೆ ನಿಮ್ಮನ್ನು ಸರ್ವಲೋಕಗಳ ಪ್ರಭುವಿಗೆ ಸಮಾನರನ್ನಾಗಿಸಿದ್ದ ಸಂದರ್ಭದಲ್ಲಿ ನಿಜವಾಗಿಯು ನಾವು ಸ್ಪಷ್ಟ ಪಥಭ್ರಷ್ಟತೆಯಲ್ಲಿ ದ್ದೆವು.
(99) ನಮ್ಮನ್ನಂತು ಈ ದುಷ್ಟರ ಹೊರತು ಇನ್ನಾರೂ ದಾರಿಗೆಡಿಸಿಲ್ಲ.
(100) ಈಗ ನಮ್ಮ ಶಿಫಾರಸ್ಸುದಾರರು ಯಾರೂ ಇಲ್ಲ.
(101) ಮತ್ತು ಅನುಕಂಪವಿರುವ ಮಿತ್ರರೂ ಇಲ್ಲ.
(102) ಇನ್ನೂ ನಮಗೇನಾದರು ಒಮ್ಮೆ ಮರಳುವ ಅವಕಾಶವಿರುತ್ತಿದ್ದರೆ ನಾವು ಸತ್ಯವಿಶ್ವಾಸಿಗಳಲ್ಲಾಗುತ್ತಿದ್ದೆವು.
(103) ನಿಜವಾಗಿಯೂ ಇದರಲ್ಲಿ ಮಹಾ ದೃಷ್ಟಾಂತವಿದೆ ಮತ್ತು ಅವರಲ್ಲಿ ಹೆಚ್ಚಿನವರು ಸತ್ಯವಿಶ್ವಾಸ ಸ್ವೀಕರಿಸುವವರಲ್ಲ.
(104) ನಿಜವಾಗಿಯೂ ನಿಮ್ಮ ಪ್ರಭು ಪ್ರಚಂಡನು, ಕರುಣಾನಿಧಿಯು ಆಗಿದ್ದಾನೆ.
(105) ನೂಹರ ಜನಾಂಗವು ಸಂದೇಶವಾಹಕರನ್ನು ಸುಳ್ಳಾಗಿಸಿತು.
(106) ಅವರ ಸಹೋದರ ನೂಹ್ರವರು “ನೀವು ಅಲ್ಲಾಹನನ್ನು ಭಯಪಡುವು ದಿಲ್ಲವೇ” ಎಂದು ಕೇಳಿದ ಸಂದರ್ಭವನ್ನು ಸ್ಮರಿಸಿರಿ.
(107) ನಿಜವಾಗಿಯು ನಾನು ನಿಮ್ಮೆಡೆಗೆ ನಂಬಿಗಸ್ಥ ಸಂದೇಶವಾಹಕನಾಗಿದ್ದೇನೆ.
(108) ಆದ್ದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.
(109) ಈ ಕಾರ್ಯಕ್ಕಾಗಿ ನಾನು ನಿಮ್ಮಲ್ಲಿ ಯಾವ ಪ್ರತಿಫಲವನ್ನೂ ಕೇಳುವುದಿಲ್ಲ. ನನ್ನ ಪ್ರತಿಫಲವಂತು ಸರ್ವಲೋಕಗಳ ಪ್ರಭುವಿನ ಬಳಿಯಿದೆ.
(110) ಆದ್ದರಿಂದ ನೀವು ಅಲ್ಲಾಹನನ್ನು ಭಯಪಡರಿರಿ ಮತ್ತು ನನ್ನನ್ನು ಅನುಸರಿಸಿರಿ.
(111) ಆದ್ದರಿಂದ ನೀವು ಅಲ್ಲಾಹನನ್ನು ಭಯಪಡರಿರಿ ಮತ್ತು ನನ್ನನ್ನು ಅನುಸರಿಸಿರಿ.
(112) ಆದ್ದರಿಂದ ನೀವು ಅಲ್ಲಾಹನನ್ನು ಭಯಪಡರಿರಿ ಮತ್ತು ನನ್ನನ್ನು ಅನುಸರಿಸಿರಿ.
(113) ಅವರ ಲೆಕ್ಕವಿಚಾರಣೆಯಂತು ನನ್ನ ಪ್ರಭುವಿನ ಹೊಣೆಯಲ್ಲಿದೆ. ನಿಮಗೆ ತಿಳಿದಿರುತ್ತಿದ್ದರೆ!
(114) ಸತ್ಯವಿಶ್ವಾಸಿಗಳನ್ನು ನಾನು ಅಟ್ಟಿ ಓಡಿಸುವವನಲ್ಲ.
(115) ನಾನಂತು ಸುಸ್ಪಷ್ಟವಾಗಿ ಒಬ್ಬ ಮುನ್ನೆಚ್ಚರಿಕೆ ನೀಡುವವನಾಗಿದ್ದೇನೆ.
(116) ಅವರು ಹೇಳಿದರು: ಓ ನೂಹ್! ನೀನಿದನ್ನು ತೊರೆಯದಿದ್ದರೆ ಖಂಡಿತವಾಗಿಯು ನಿನ್ನನ್ನು ಕಲ್ಲೆಸೆದು ಕೊಲ್ಲಲಾಗುವುದು.
(117) ನೂಹ್ರವರು ಪ್ರಾರ್ಥಿಸಿದರು: ನನ್ನ ಪ್ರಭುವೇ, ನನ್ನ ಜನರು ನನ್ನನ್ನು ಸುಳ್ಳಾಗಿಸಿಬಿಟ್ಟರು.
(118) ಆದ್ದದರಿಂದ ನೀನು ನನ್ನ ಮತ್ತು ಅವರ ನಡುವೆ ನಿರ್ಣಾಯಕ ತೀರ್ಮಾನವನ್ನು ಮಾಡಿಬಿಡು ಮತ್ತು ನನ್ನನ್ನೂ, ನನ್ನ ಸತ್ಯವಿಶ್ವಾಸಿ ಸಂಗಡಿಗರನ್ನೂ ರಕ್ಷಿಸು.
(119) ಕೊನೆಗೆ ನಾವು ಅವರನ್ನೂ,ಮತ್ತು ತುಂಬಿದ ಹಡಗಿನಲ್ಲಿ ಅವರ ಜೊತೆಗಿದ್ದವರನ್ನು ರಕ್ಷಿಸಿದೆವು.
(120) ತರುವಾಯ ಉಳಿದವರನ್ನು ನಾವು ಮುಳುಗಿಸಿಬಿಟ್ಟೆವು.
(121) ನಿಶ್ಚಯವಾಗಿಯು ಇದರಲ್ಲಿ ಮಹಾ ನಿದರ್ಶನವಿದೆ ಮತ್ತು ಅವರಲ್ಲಿ ಹೆಚ್ಚಿನವರು ಸತ್ಯವಿಶ್ವಾಸ ಸ್ವೀಕರಿಸುವವರಾಗಿರಲಿಲ್ಲ.
(122) ನಿಸ್ಸಂದೇಹವಾಗಿಯು ನಿಮ್ಮ ಪ್ರಭು ಪ್ರಚಂಡನು, ಕರುಣಾನಿಧಿಯು ಆಗಿದ್ದಾನೆ.
(123) ಆದ್ ಜನಾಂಗವು ಸಂದೇಶವಾಹಕರನ್ನು ಸುಳ್ಳಾಗಿಸಿತು.
(124) ಅವರ ಸಹೋದರ ಹೂದ್ರವರು “ನೀವು (ಅಲ್ಲಾಹನನ್ನು) ಭಯ ಪಡುವುದಿಲ್ಲವೇ?” ಎಂದು ಹೇಳಿದ ಸಂದರ್ಭವನ್ನು ಸ್ಮರಿಸಿರಿ.
(125) ನಾನು ನಿಮ್ಮ ನಂಬಿಗಸ್ಥ ಸಂದೇಶವಾಹಕನಾಗಿದ್ದೇನೆ.
(126) ಆದ್ದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.
(127) ನಾನು ಈ ಕಾರ್ಯಕ್ಕಾಗಿ ನಿಮ್ಮಲ್ಲಿ ಯಾವ ಪ್ರತಿಫಲವನ್ನೂ ಕೇಳುವುದಿಲ್ಲ. ನನ್ನ ಪ್ರತಿಫಲವಂತು ಸರ್ವಲೋಕಗಳ ಪ್ರಭುವಿನ ಬಳಿ ಇದೆ.
(128) ನೀವು ಪ್ರತಿಯೊಂದು ಎತ್ತರ ಪ್ರದೇಶದಲ್ಲಿ ವ್ಯರ್ಥವಾಗಿ ಸ್ಮಾರಕವನ್ನು ನಿರ್ಮಿಸುತ್ತಿದ್ದೀರಾ?
(129) ನೀವು ಇಲ್ಲೇ ಶಾಶ್ವತರಾಗಿರುವಿರೇನೋ ಎಂಬAತೆ ಬೃಹತ್ ಸೌಧಗಳನ್ನು ನಿರ್ಮಿಸುತ್ತಿರುವಿರಿ.
(130) ನೀವು ಯಾರನ್ನಾದರೂ ಹಿಡಿಯುವುದಾದರೆ ಅತ್ಯಂತ ದೌರ್ಜನ್ಯದೊಂದಿಗೆ ಹಿಡಿಯುತ್ತೀರಿ.
(131) ಆದುದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.
(132) ನಿಮಗೆ ತಿಳಿದಿರುವ ವಸ್ತುಗಳ ಮೂಲಕ ನಿಮಗೆ ಸಹಾಯ ಮಾಡಿದ ಅಲ್ಲಾಹನನ್ನು ಭಯಪಡಿರಿ.
(133) ಅವನು ನಿಮಗೆ ಜಾನುವಾರುಗಳ ಮತ್ತು ಸಂತಾನಗಳ ಮೂಲಕ ಸಹಾಯ ಮಾಡಿದ್ದಾನೆ.
(134) ತೋಟಗಳ ಮತ್ತು ಚಿಲುಮೆಗಳ ಮೂಲಕ (ಸಹಾಯ ಮಾಡಿದ್ದಾನೆ)
(135) ನನಗೆ ನಿಮ್ಮ ವಿಚಾರವಾಗಿ ಒಂದು ಮಹಾ ದಿನದ ಯಾತನೆಯ ಭಯವಿದೆ.
(136) ಅವರು ಹೇಳಿದರು: ನೀನು ಉಪದೇಶ ಮಾಡಿದರೂ, ಮಾಡದಿದ್ದರೂ ನಮ್ಮ ಪಾಲಿಗೆ ಅವೆರೆಡೂ ಸಮವಾಗಿದೆ.
(137) ಇದಂತು ಪೂರ್ವಿಕರ ಸಂಪ್ರದಾಯವಾಗಿದೆ.
(138) ನಾವು ಎಂದಿಗೂ ಯಾತನೆಗೊಳಗಾಗುವವರಲ್ಲ.
(139) ಕೊನೆಗೆ ಅವರು ಅವರನ್ನು ಸುಳ್ಳಾಗಿಸಿದರು. ಆದ್ದರಿಂದ ಅವರನ್ನು ನಾವು ನಾಶಮಾಡಿ ಬಿಟ್ಟೆವು. ನಿಜವಾಗಿಯು ಇದರಲ್ಲಿ ಒಂದು ದೃಷ್ಟಾಂತವಿದೆ ಮತ್ತು ಅವರಲ್ಲಿ ಹೆಚ್ಚಿನವರು ಸತ್ಯವಿಶ್ವಾಸಿಗಳಾಗಿರಲಿಲ್ಲ.
(140) ನಿಸ್ಸಂದೇಹವಾಗಿಯೂ ನಿಮ್ಮ ಪ್ರಭುವೇ ಪ್ರಚಂಡನೂ, ಕರುಣಾನಿಧಿಯೂ ಆಗಿರುತ್ತಾನೆ.
(141) ಸಮೂದ್ ಜನಾಂಗದವರೂ ಸಂದೇಶವಾಹಕರನ್ನು ಸುಳ್ಳಾಗಿಸಿದರು.
(142) ಅವರ ಸಹೋದರ ಸ್ವಾಲಿಹ್: ನೀವು ಅಲ್ಲಾಹನನ್ನು ಭಯಪಡುವುದಿಲ್ಲವೇ? ಎಂದು ಕೇಳಿದ ಸಂದರ್ಭವನ್ನು ಸ್ಮರಿಸಿರಿ.
(143) ನಾನು ನಿಮ್ಮೆಡೆಗೆ ಪ್ರಮಾಣಿಕ ಸಂದೇಶವಾಹಕನಾಗಿದ್ದೇನೆ.
(144) ಆದ್ದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.
(145) ನಾನು ಈ ಕಾರ್ಯಕ್ಕಾಗಿ ನಿಮ್ಮಲ್ಲಿ ಯಾವ ಪ್ರತಿಫಲವನ್ನೂ ಕೇಳುವುದಿಲ್ಲ. ನನ್ನ ಪ್ರತಿಫಲವಂತು ಸರ್ವಲೋಕಗಳ ಪ್ರಭುವಿನ ಬಳಿ ಇದೆ.
(146) ನೀವು ಇಲ್ಲಿರುವ ವಸ್ತುಗಳಲ್ಲೇ ನಿರ್ಭಯರಾಗಿರಲು ನಿಮ್ಮನ್ನು ಬಿಟ್ಟು ಬಿಡಲಾಗುವುದೇ?
(147) ತೋಟಗಳಲ್ಲೂ, ಚಿಲುಮೆಗಳಲ್ಲೂ.
(148) ತೋಟಗಳಲ್ಲೂ, ಚಿಲುಮೆಗಳಲ್ಲೂ.
(149) ನೀವು ಪರ್ವತಗಳನ್ನು ಕೊರೆದು ಹೆಗ್ಗಳಿಕೆಗಾಗಿ ನಿವಾಸಗಳನ್ನು ನಿರ್ಮಿಸುತ್ತೀರಿ.
(150) ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.
(151) ಮತ್ತು ನೀವು ಹದ್ದು ಮೀರುತ್ತಿರುವವರ ಆಜ್ಞೆಯನ್ನು ಅನುಸರಿಸಬೇಡಿರಿ.
(152) ಅವರು ಭೂಮಿಯಲ್ಲಿ ಕ್ಷೆÆÃಭೆಯನ್ನು ಹರಡುವವರು ಮತ್ತು ಸುಧಾರಣೆಯನ್ನು ಮಾಡದವರಾಗಿದ್ದಾರೆ.
(153) ಅವರು ಹೇಳಿದರು: ಖಂಡಿತ ನೀನು ಮಾಟÀಬಾಧಿತರಲ್ಲಾಗಿರುವೆ.
(154) ನೀನು ನಮ್ಮಂತಹ ಮನುಷ್ಯನೇ ಆಗಿರುವೆ, ನೀನು ಸತ್ಯವಂತರಲ್ಲಾಗಿದ್ದರೆ ಯಾವುದಾದರೂ ದೃಷ್ಟಾಂತವನ್ನು ತಾ.
(155) ಸ್ವಾಲಿಹ್ ಹೇಳಿದರು: ಇದೊಂದು ಒಂಟೆ, ನೀರು ಕುಡಿಯುವ ಒಂದು ಸರದಿಯು ಇದಕ್ಕಿರುವುದು ಮತ್ತು ನೀರು ಕುಡಿಯುವ ಒಂದು ನಿಶ್ಚಿತ ದಿನದ ಸರದಿಯು ನಿಮಗಿರುವುದು.
(156) ನೀವಿದನ್ನು ಕೆಡುಕಿನಿಂದ ಮುಟ್ಟಬೇಡಿರಿ. ಇಲ್ಲವಾದರೆ ಒಂದು ಘೋರ ದಿನದ ಯಾತನೆಯು ನಿಮ್ಮನ್ನು ಹಿಡಿದುಕೊಳ್ಳುವುದು.
(157) ಕೊನೆಗೆ ಅವರು ಅದರ ಮೊಣಕಾಲಿನ ಸ್ನಾಯು ಕತ್ತರಿಸಿಬಿಟ್ಟರು. ಆಗ ಅವರು ಪಶ್ಚಾತ್ತಾಪ ಪಟ್ಟರು.
(158) ಆಗ ಅವರನ್ನು ಶಿಕ್ಷೆಯು ಬಾಧಿಸಿತು. ನಿಸ್ಸಂದೇಹವಾಗಿಯು ಇದರಲ್ಲಿ ಒಂದು ದೃಷ್ಟಾಂತವಿದೆ ಮತ್ತು ಅವರಲ್ಲಿ ಹೆಚ್ಚಿನವರು ಸತ್ಯವಿಶ್ವಾಸಿಗಳಾಗಿರಲಿಲ್ಲ.
(159) ನಿಸ್ಸಂಶಯವಾಗಿಯು ನಿಮ್ಮ ಪ್ರಭುವು ಪ್ರಚಂಡನು, ಕರುಣಾನಿಧಿಯು ಆಗಿರುತ್ತಾನೆ.
(160) ಲೂತರ ಜನಾಂಗವು ಸಂದೇಶವಾಹಕರನ್ನು ಸುಳ್ಳಾಗಿಸಿತು.
(161) ಅವರೊಂದಿಗೆ ಅವರ ಸಹೋದರ ಲೂತ್: “ನೀವು ಅಲ್ಲಾಹನನ್ನು ಭಯಪಡುವುದಿಲ್ಲವೇ?” ಎಂದು ಕೇಳಿದ ಸಂದರ್ಭವನ್ನು ಸ್ಮರಿಸಿರಿ.
(162) ನಿಜವಾಗಿಯು ನಾನು ನಿಮ್ಮೆಡೆಗೆ ಪ್ರಾಮಾಣಿಕ ಸಂದೇಶವಾಹಕನಾಗಿದ್ದೇನೆ.
(163) ಆದ್ದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.
(164) ನಾನು ಈ ಕಾರ್ಯಕ್ಕಾಗಿ ನಿಮ್ಮಲ್ಲಿ ಯಾವ ಪ್ರತಿಫಲವನ್ನೂ ಕೇಳುವುದಿಲ್ಲ. ನನ್ನ ಪ್ರತಿಫಲವಂತು ಕೇವಲ ಸರ್ವಲೋಕಗಳ ಪ್ರಭುವಿನ ಬಳಿಯಿದೆ.
(165) ನೀವು ಜಗತ್ತಿನವರ ಪೈಕಿ ಪುರುಷರೊಂದಿಗೆ ಕಾಮೇಚ್ಛೆಯನ್ನು ಈಡೇರಿಸಿಕೊಳ್ಳುತ್ತಿರುವಿರಾ?
(166) ಮತ್ತು ನಿಮ್ಮ ಪ್ರಭುವು ನಿಮಗಾಗಿ ಸೃಷ್ಟಿಸಿರುವ ನಿಮ್ಮ ಪತ್ನಿಯರನ್ನು ತೊರೆದು ಬಿಡುತ್ತಿರಾ? ನಿಜಕ್ಕೂ ನೀವು ಮಿತಿಮೀರಿದ ಜನಾಂಗವಾಗಿದ್ದೀರಿ.
(167) ಅವರು ಹೇಳಿದರು: ಓ ಲೂತ್, ನೀನು ಇದನ್ನು ತೊರೆಯದಿದ್ದರೆ, ಖಂಡಿತ ನೀನು ಗಡಿಪಾರು ಮಾಡಲ್ಪಡುವೆ.
(168) ಲೂತ್ ಹೇಳಿದರು: ಖಂಡಿತವಾಗಿಯು ನಾನು ನಿಮ್ಮ ಕೃತ್ಯದಿಂದ ತೀವ್ರ ಬೇಸರಗೊಂಡಿರುವೆನು.
(169) ನನ್ನ ಪ್ರಭುವೇ, ನನ್ನನ್ನೂ, ನನ್ನ ಕುಟುಂಬವನ್ನೂ ಅವರು ಎಸಗುತ್ತಿರುವ ಹೀನಕೃತ್ಯದಿಂದ ರಕ್ಷಿಸು
(170) ಆಗ ನಾವು ಅವನನ್ನು ಮತ್ತು ಅವನ ಕುಟುಂಬದವರೆಲ್ಲರನ್ನು ರಕ್ಷಿಸಿದೆವು.
(171) ಆದರೆ ಒರ್ವ ಮುದುಕಿಯ ಹೊರತು. ಅವಳು ಹಿಂದುಳಿದವರಲ್ಲಾಗಿ ಬಿಟ್ಟಳು.
(172) ಅನಂತರ ನಾವು ಉಳಿದವರನ್ನು ನಾಶ ಮಾಡಿಬಿಟ್ಟೆವು.
(173) ಮತ್ತು ನಾವು ಅವರ ಮೇಲೆ ವಿಶೇಷ ವಿಚಿತ್ರ ರೂಪದ ಮಳೆಯನ್ನು ವರ್ಷಿಸಿದೆವು. ಎಚ್ಚರಿಕೆ ನೀಡಲಾದವರ ಮೇಲೆ ಎರಗಿದ ಆ ಮಳೆಯು ಅದೆಷ್ಟು ನಿಕೃಷ್ಟವಾದುದು.
(174) ನಿಶ್ಚಯವಾಗಿಯೂ ಇದರಲ್ಲಿ ನಿದರ್ಶನವಿದೆ ಮತ್ತು ಅವರಲ್ಲಿ ಹೆಚ್ಚಿನವರು ಸತ್ಯವಿಶ್ವಾಸಿಗಳಾಗಿರಲಿಲ್ಲ.
(175) ವಾಸ್ತವದಲ್ಲಿ ನಿಮ್ಮ ಪ್ರಭು ಪ್ರಚಂಡನು, ಕರಣಾನಿಧಿಯು ಆಗಿದ್ದಾನೆ.
(176) ಐಕಾ ನಾಡಿನವರು ಸಂದೇಶವಾಹಕರನ್ನು ಸುಳ್ಳಾಗಿಸಿದರು.
(177) ಅವರೊಂದಿಗೆ ಶುಐಬರು: “ನೀವು ಭಯಪಡುವುದಿಲ್ಲವೆ?” ಎಂದು ಕೇಳಿದ ಸಂದರ್ಭವನ್ನು ಸ್ಮರಿಸಿರಿ.
(178) ನಿಶ್ಚಯವಾಗಿಯು ನಾನು ನಿಮ್ಮ ಕಡೆಗೆ ಒಬ್ಬ ಪ್ರಮಾಣಿಕ ಸಂದೇಶವಾಹಕನಾಗಿದ್ದೇನೆ.
(179) ಆದುದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಹಾಗೂ ನನ್ನನ್ನು ಅನುಸರಿಸಿರಿ.
(180) ನಾನು ಈ ಕಾರ್ಯಕ್ಕಾಗಿ ನಿಮ್ಮಲ್ಲಿ ಯಾವ ಪ್ರತಿಫಲವನ್ನು ಕೇಳುವುದಿಲ್ಲ. ನನ್ನ ಪ್ರತಿಫಲವಂತು ಸರ್ವಲೋಕಗಳ ಪ್ರಭುವಿನ ಬಳಿಯಿದೆ.
(181) ನೀವು ಅಳತೆಯನ್ನು ಪೂರ್ತಿಯಾಗಿ ಕೊಡಿರಿ ಮತ್ತು ಕಡಿತಗೊಳಿಸುವವರಲ್ಲಿ ನೀವಾಗಬೇಡಿರಿ.
(182) ಸಮತೋಲನವುಳ್ಳ ಸರಿಯಾದ ತಕ್ಕಡಿಯಿಂದಲೇ ನೀವು ತೂಕ ಮಾಡಿರಿ.
(183) ಮತ್ತು ಜನರಿಗೆ ಅವರ ವಸ್ತುಗಳನ್ನು ಕಡಿತಗೊಳಿಸಿ ನೀಡದಿರಿ. ಮತ್ತು ಭೂಮಿಯಲ್ಲಿ ಕ್ಷೆÆÃಭೆ ಹರಡುತ್ತಾ ನಡೆಯದಿರಿ.
(184) ನಿಮ್ಮನ್ನೂ, ನಿಮ್ಮ ಪೂರ್ವಜರನ್ನು ಸೃಷ್ಟಿಸಿದವನನ್ನು ನೀವು ಭಯಪಡಿರಿ.
(185) ಅವರು ಹೇಳಿದರು: ನೀನಂತು ಮಾಟಬಾಧಿತರಲ್ಲಿ ಸೇರಿರುವೆ.
(186) ಮತ್ತು ನೀನು ನಮ್ಮಂತಹ ಒಬ್ಬ ಮನುಷ್ಯನಾಗಿರುವೆ ಹಾಗೂ ನಿಶ್ಚಯವಾಗಿಯು ನಾವು ನಿನ್ನನ್ನು ಸುಳ್ಳರಲ್ಲಿ ಸೇರಿದವನೆಂದು ಭಾವಿಸುತ್ತೇವೆ.
(187) ಆದುದರಿಂದ ನೀನು ಸತ್ಯವಂತರಲ್ಲಾಗಿದ್ದರೆ ನಮ್ಮ ಮೇಲೆ ಆಕಾಶದ ಒಂದು ತುಂಡನ್ನು ಬೀಳಿಸು.
(188) ಶುಐಬ್ ಹೇಳಿದರು: ನನ್ನ ಪ್ರಭುವು ನೀವು ಮಾಡುತ್ತಿರುವುದನ್ನು ಚೆನ್ನಾಗಿ ಬಲ್ಲವನಾಗಿದ್ದಾನೆ.
(189) ಅವರು ಶುಐಬ್ರವರನ್ನು ಸುಳ್ಳಾಗಿಸಿದರು. ಆಗ ಅವರನ್ನು ಛಾಯಾವೃತ ದಿನದ ಯಾತನೆಯು ಹಿಡಿದುಬಿಟ್ಟಿತು.ಅದು ಒಂದು ಘೋರ ದಿನದ ಯಾತನೆಯಾಗಿತ್ತು.
(190) ನಿಜವಾಗಿಯು ಇದರಲ್ಲಿ ಮಹಾ ದೃಷ್ಟಾಂತವಿದೆ ಮತ್ತು ಅವರಲ್ಲಿ ಹೆಚ್ಚಿನವರು ವಿಶ್ವಾಸಿಗಳಾಗಿರಲಿಲ್ಲ.
(191) ನಿಜವಾಗಿಯು ಇದರಲ್ಲಿ ಮಹಾ ದೃಷ್ಟಾಂತವಿದೆ ಮತ್ತು ಅವರಲ್ಲಿ ಹೆಚ್ಚಿನವರು ವಿಶ್ವಾಸಿಗಳಾಗಿರಲಿಲ್ಲ.
(192) ನಿಸ್ಸಂದೇಹವಾಗಿಯು ಇದು (ಕುರ್ಆನ್) ಸರ್ವಲೋಕಗಳ ಪ್ರಭುವಿನ ಕಡೆಯಿಂದ ಅವತೀರ್ಣಗೊಂಡಿದ್ದಾಗಿದೆ.
(193) ಓರ್ವ ಪ್ರಯಾಣಿಕ (ದೇವದೂತ) ಜಿಬ್ರೀಲ್ ತಂದಿಳಿಸಿದ್ದಾರೆ.
(194) ಓ ಪೈಗಂಬರರೇ ನಿಮ್ಮ ಹೃದಯದಲ್ಲಿ (ಇಳಿಸಲಾಗಿರುವುದು) ನೀವು ಜನರಿಗೆ ಮುನ್ನೆಚ್ಚರಿಕೆ ಕೊಡುವವರಲ್ಲಾಗಬೇಕೆಂದು.
(195) ಸುಸ್ಪಷ್ಟ ಅರಬೀ ಭಾಷೆಯಲ್ಲಿ.
(196) ಈ ಕುರ್ಆನಿನ ಪ್ರಸ್ತಾಪವು ಗತ ಪೈಗಂಬರರ ಗ್ರಂಥಗಳಲ್ಲೂ ಇದೆ.
(197) ಇಸ್ರಾಯೀಲ್ ಸಂತತಿಗಳ ಧರ್ಮ ಪಂಡಿತರು ಸಹ ಇದನ್ನು ಅರಿತಿರುವುದು ಬಹದೇವಾರಾಧಕರಿಗೆ ಒಂದು ನಿದರ್ಶನವಲ್ಲವೇ?
(198) ನಾವೇನಾದರೂ ಇದನ್ನು ಒಬ್ಬ ಅರಬೇತರನ ಮೇಲೆ ಅವತೀರ್ಣಗೊಳಿಸಿರುತ್ತಿದ್ದರೆ.
(199) ಹಾಗೆಯೇ ಅವನು ಅವರ ಮುಂದೆ ಇದನ್ನು ಓದಿ ಹೇಳಿರುತ್ತಿದ್ದರೆ ಅವರು ಅದರಲ್ಲಿ ವಿಶ್ವಾಸಿವಿಡುವವರಾಗುತ್ತಿರಲಿಲ್ಲ.
(200) ಇದೇ ಪ್ರಕಾರ ನಾವು ಇದನ್ನು (ನಿರಾಕರಣೆಯನ್ನು) ಅಪರಾಧಿಗಳ ಹೃದಯಗಳಲ್ಲಿ ಹಾಕಿ ಬಿಟ್ಟಿರುತ್ತೇವೆ.
(201) ಅವರು ವೇದನಾಜನಕ ಯಾತನೆಯನ್ನು ಕಣ್ಣಾರೆ ಕಾಣುವವರೆಗೆ ಅದರಲ್ಲಿ ವಿಶ್ವಾಸವಿಡಲಾರರು.
(202) ಆ ಶಿಕ್ಷೆಯು ಅವರ ಬಳಿಗೆ ಹಠಾತನೆ ಬಂದು ಬಿಡುವುದು. ಅವರಿಗೆ ಅದರ ಬೋಧವು ಸಹ ಇರಲಾರದು.
(203) ಅವರಾಗ ಹೇಳದತೊಡಗುವರು: ನಮಗೆ ಸ್ವಲ್ಪ ಕಾಲಾವಕಾಶ ಸಿಗಬಹುದೇ?
(204) ಅವರಾಗ ಹೇಳದತೊಡಗುವರು: ನಮಗೆ ಸ್ವಲ್ಪ ಕಾಲಾವಕಾಶ ಸಿಗಬಹುದೇ?
(205) ನೀವು ನೋಡಿದಿರಾ? ನಾವು ಅವರನ್ನು ವರ್ಷಗಟ್ಟಲೇ ಸುಖ ಭೋಗ ಅನುಭವಿಸಲು ಬಿಟ್ಟರೂ..
(206) ಆ ಬಳಿಕ ಅವರಲ್ಲಿಗೆ ಅವರು ಎಚ್ಚರಿಕೆ ನೀಡಲಾಗುತ್ತಿದ್ದಂತಹ ಯಾತನೆಯು ಬಂದೆರಗಿದಾಗ.
(207) ಅವರು ಏನೇ ಸುಖಭೋಗಿಸುತ್ತಿರಲಿ, ಅದಾವುದೂ ಅವರಿಗೆ ಯಾವ ಪ್ರಯೋಜನಕ್ಕೂ ಬರಲಾರದು.
(208) ನಾವು ಯಾವುದೇ ನಾಡನ್ನೂ ಅದಕ್ಕೆ ಎಚ್ಚರಿಕೆ ನೀಡುವವರಿಲ್ಲದೇ ನಾಶ ಮಾಡಿರುವುದಿಲ್ಲ.
(209) ಇದು ಉದ್ಭೋಧೆಯಲ್ಲಾಗಿತ್ತು ಮತ್ತು ನಾವು ಅನ್ಯಾಯ ಮಾಡುವವರಲ್ಲ.
(210) ಈ ಕುರ್ಆನನ್ನು ಶೈತಾನರು ತಂದಿಳಿಸಲಿಲ್ಲ.
(211) ಅವರು ಅದಕ್ಕೆ ಯೋಗ್ಯರೂ ಆಗಿರಲಿಲ್ಲ, ಅವರು ಅದರ ಸಾಮರ್ಥ್ಯವನ್ನು ಹೊಂದಿದವರಾಗಿರಲಿಲ್ಲ.
(212) ಖಂಡಿತವಾಗಿಯು ಅವರಂತು ಇದನ್ನು (ದೈವವಾಣಿಯನ್ನು) ಆಲಿಸುವುದರಿಂದಲೂ ತಡೆಯಲ್ಪಟ್ಟಿರುವರು.
(213) ಆದ್ದರಿಂದ ನೀವು ಅಲ್ಲಾಹನೊಂದಿಗೆ ಇನ್ನಾವ ಆರಾಧ್ಯನನ್ನೂ ಕರೆದು ಬೇಡದಿರಿ. ಇಲ್ಲವಾದರೆ ನೀವು ಸಹ ಯಾತನೆಗೊಳಗಾಗುವರಲ್ಲಿ ಸೇರಿಬಿಡುವಿರಿ.
(214) ನಿಮ್ಮ ಅಂತ್ಯದ ನಿಕಟ ಸಂಬAಧಿಕರಿಗೆ ಎಚ್ಚರಿಕೆ ನೀಡಿರಿ.
(215) ಮತ್ತು ನೀವು ನಿಮ್ಮನ್ನು ಅನುಸರಿಸುವ ಸತ್ಯವಿಶ್ವಾಸಿಗಳಿಗಾಗಿ ನಿಮ್ಮ ಭುಜವನ್ನು ತಗ್ಗಿಸಿರಿ.
(216) ಇನ್ನು ಅವರು ನಿಮ್ಮನ್ನು ಧಿಕ್ಕರಿಸಿದರೆ ನೀವು ಮಾಡುತ್ತಿರುವ ಕಾರ್ಯಗಳಿಂದ ನಾನು ಹೊಣೆ ಮುಕ್ತನಾಗಿದ್ದೇನೆ ಎಂದು ಹೇಳಿರಿ.
(217) ಪ್ರಚಂಡನು, ಕರುಣಾನಿಧಿಯು ಆದ ಅಲ್ಲಾಹನ ಮೇಲೆ ಭರವಸೆಯಿಡಿ.
(218) ನೀವು (ನಮಾಜ್ಗಾಗಿ) ನಿಲ್ಲುವಾಗ ನಿಮ್ಮನ್ನು ಅವನು ನೋಡುತ್ತಾನೆ.
(219) ಮತ್ತು ಸಾಷ್ಟಾಂಗ ಮಾಡುವವರ ಜೊತೆ ನಿಮ್ಮ ಚಲನವಲನವನ್ನೂ. (ನೋಡುತ್ತಾನೆ.)
(220) ಅವನು ಸರ್ವವನ್ನಾಲಿಸುವವನು, ಸರ್ವಜ್ಞಾನಿಯು ಆಗಿರುವನು.
(221) ಶೈತಾನರು ಯಾರ ಮೇಲೆ ಇಳಿಯುತ್ತಾರೆಂದು ನಾನು ನಿಮಗೆ ತಿಳಿಸಿ ಕೊಡಲೇ?
(222) ಅವರು ಪ್ರತಿಯೊಬ್ಬ ಸುಳ್ಳುಗಾರನಾದ ಪಾಪಿಯ ಮೇಲೆ ಇಳಿಯುತ್ತಾರೆ.
(223) ಅವರು (ಆಕಾಶದೆಡೆಗೆ) ಕಿವಿಗೊಟ್ಟು ಕೇಳುತ್ತಾರೆ ಆದರೆ ಅವರಲ್ಲಿ ಹೆಚ್ಚಿನವರು ಸುಳ್ಳುಗಾರಾಗಿದ್ದಾರೆ.
(224) ಕವಿಗಳನ್ನು ಪಥಭ್ರಷ್ಟರು ಅನುಸರಿಸುತ್ತಾರೆ.
(225) ಅವರು ಪ್ರತಿಯೊಂದು ಕಣಿವೆಯಲ್ಲೂ ಅಲೆದಾಡುತ್ತಿರುವುದನ್ನು ನೀವು ಕಾಣುವುದಿಲ್ಲವೇ?
(226) ಮತ್ತು ಖಂಡಿತವಾಗಿಯೂ ಅವರು ಮಾಡದ್ದನ್ನು ಆಡುತ್ತಾರೆ.
(227) ಆದರೆ (ಕವಿಗಳಲ್ಲಿ) ಸತ್ಯವಿಶ್ವಾಸವಿರಿಸಿ, ಸತ್ಕರ್ಮಗಳನ್ನು ಕೈಗೊಂಡು ಅಲ್ಲಾಹನನ್ನು ಅತ್ಯಧಿಕ ಸ್ಮರಿಸುವವರ ಹೊರತು, ಅವರು ಮತ್ತು ತಾವು ಅಕ್ರಮಕ್ಕೊಳಗಾದ ಬಳಿಕ ಪ್ರತಿಕಾರ ಕೈಗೊಂಡವರ ಹೊರತು. ಯಾರು ಅಕ್ರಮ ಕೈಗೊಂಡಿರುವರೋ ಅವರು ಯಾವ ಕಡೆಗೆ ಮರಳಿಸಲಾಗುತ್ತಾರೆಂಬುದನ್ನು ಸದ್ಯದಲ್ಲೇ ತಿಳಿಯುವರು.