(1) ತ್ವಾಸೀನ್ ಇವು ಕುರ್ಆನ್ ಮತ್ತು ಸುವ್ಯಕ್ತ ಗ್ರಂಥದ ಸೂಕ್ತಿಗಳಾಗಿವೆ.
(2) ಸತ್ಯವಶ್ವಾಸಿಗಳಿಗೆ ಸನ್ಮಾರ್ಗವು ಮತ್ತು ಸುವಾರ್ತೆಯು ಆಗಿದೆ.
(3) ಅವರು ನಮಾಝ್ ನಿರ್ವಹಿಸುವವರು, ಝಕಾತ್ ನೀಡುವವರು ಮತ್ತು ಪರಲೋಕದಲ್ಲಿ ದೃಢ ನಂಬಿಕೆಯುಳ್ಳವರಾಗಿದ್ದಾರೆ.
(4) ನಿಜವಾಗಿಯು ಪರಲೋಕದ ಮೇಲೆ ವಿಶ್ವಾಸವಿರಿಸಿದವರಿಗೆ ನಾವು ಅವರ ಕರ್ಮಗಳನ್ನು ಮನಮೋಹಕಗೊಳಿಸಿದ್ದೇವೆ. ಹಾಗಾಗಿ ಅವರು ಅಂಧರಾಗಿ ಅಲೆದಾಡುತ್ತಾರೆ.
(5) ಇವರೇ ಕಠಿಣ ಶಿಕ್ಷೆಗೆ ಗುರಿ ಯಾಗುವರು ಮತ್ತು ಪರಲೋಕದಲ್ಲಿ ಅತ್ಯಂತ ನಷ್ಟ ಹೊಂದುವರಾಗಿರುತ್ತಾರೆ.
(6) ನಿಸ್ಸಂದೇಹವಾಗಿಯು ಓ ಪೈಗಂಬರರೇ ನಿಮಗೆ ಈ ಕುರ್ಆನನ್ನು ಯುಕ್ತಿವಂತನು, ಸರ್ವಜ್ಞಾನಿಯು, ಆದ ಅಲ್ಲಾಹನ ಕಡೆಯಿಂದ ನೀಡಲಾಗುತ್ತಿದೆ.
(7) ಮೂಸಾ ತನ್ನ ಮನೆಯವರಿಗೆ ಹೇಳಿದ ಸಂದರ್ಭವನ್ನು ಸ್ಮರಿಸಿರಿ: ನಾನೊಂದು ಬೆಂಕಿಯನ್ನು ಕಂಡಿರುವೆನು. ನಾನು ಅಲ್ಲಿಂದೇನಾದರೂ ನಿಮಗೆ ಸುದ್ದಿಯನ್ನು ತರುವೆನು ಇಲ್ಲವೇ ಪ್ರಜ್ವಲಿಸುವ ಬೆಂಕಿಕೆAಡವನ್ನು ತರುವೆನು. ನೀವು ಚಳಿಕಾಯಿಸಿಕೊಳ ್ಳಬಹುದು.
(8) ಅವರು ಅಲ್ಲಿಗೆ ತಲುಪಿದಾಗ ಕರೆಕೊಡಲಾಯಿತು: “ಈ ಅಗ್ನಿಯಲ್ಲಿರುವವನು ಮಹಾಮಂಗಳಮಯನಾಗಿರುವನು ಮತ್ತು ಇದರ ಸುತ್ತಮುತ್ತಲಲ್ಲಿರುವವರು ಸಹ ಮತ್ತು ಸರ್ವಲೋಕಗಳ ಪ್ರಭುವಾದ ಅಲ್ಲಾಹನು ಪರಮ ಪಾವನನು.
(9) ಓ ಮೂಸಾ! ವಾಸ್ತವವೇನೆಂದರೆ ಪ್ರಚಂಡನು, ಯುಕ್ತಿಪೂರ್ಣನು ಆದ ಅಲ್ಲಾಹನು. ನಾನೇ
(10) ಮತ್ತು ನಿಮ್ಮ ಲಾಠಿಯನ್ನು ಕೆಳಗೆ ಹಾಕಿಬಿಡಿ. ಅವರು ಅದನ್ನು (ಹಾಕಿದಾಗ) ಸರ್ಪವೆಂಬAತೆ ತೆವಳುತ್ತಿರುವುದಾಗಿ ಕಂಡಾಗ ಬೆನ್ನು ತಿರುಗಿಸಿ ಓಟಕಿತ್ತರು ಹಾಗೂ ತಿರುಗಿ ನೋಡಲಿಲ್ಲ. ಓ ಮೂಸಾ ನೀವು ಭಯಪಡದಿರಿ. ನಿಶ್ಚಯವಾಗಿಯು ಸಂದೇಶವಾಹಕರು ನನ್ನ ಸನ್ನಿಧಿಯಲ್ಲಿ ಭಯಪಡುವುದಿಲ್ಲ.
(11) ಆದರೆ ಯಾರು ಅಕ್ರಮವೆಸಗುವನೋ, ತರುವಾಯ ಕೆಡುಕಿನ ಬದಲಿಗೆ ಒಳಿತನ್ನು ತರುವನೋ ನಾನು ಕ್ಷಮಾಶೀಲನು, ಕರುಣಾನಿಧಿಯು ಆಗಿರುವೆನು.
(12) ನಿನ್ನ ಕೈಯನ್ನು ನಿನ್ನ ಜೇಬಿನೊಳಗೆ ಹಾಕು. ಅದು ಯಾವುದೇ ಲೋಪವಿಲ್ಲದೆ ಬೆಳ್ಳಗಾಗಿ ಮಿಂಚುತ್ತ ಹೊರಬರುವುದು. ನೀನು ಒಂಬತ್ತು ದೃಷ್ಟಾಂತಗಳೊAದಿಗೆ ಫಿರ್ಔನ್ ಮತ್ತು ಅವನ ಜನಾಂಗದೆಡೆಗೆ ಹೋಗು. ನಿಜವಾಗಿಯು ಅವರು ದುಷ್ಕರ್ಮಿಗಳಾಗಿದ್ದಾರೆ.
(13) ಆದರೆ ಕಣ್ತೆರೆಸುವಂತಹ ನಮ್ಮ ದೃಷ್ಟಾಂತಗಳು ಅವರ ಬಳಿಗೆ ಬಂದಾಗ: ಇದು ಸುಸ್ಪಷ್ಟ ಜಾದುವಾಗಿದೆ ಎಂದು ಅವರು ಹೆಳಿದರು.
(14) ಅವರು ಅಕ್ರಮ ಮತ್ತು ಅಹಂಕಾರದಿAದಾಗಿ ಅವುಗಳನ್ನು ನಿಷೇಧಿಸಿ ಬಿಟ್ಟರು. ವಸ್ತುತಃ ಅವರ ಹೃದಯಗಳು ದೃಢವಾಗಿ ನಂಬಿದ್ದವು. ಇನ್ನು ಕ್ಷೆÆÃಭೆ ಹರಡುವವರ ದುಷ್ಪರಿಣಾಮವು ಹೇಗಿತ್ತೆಂಬುದನ್ನು ನೋಡಿರಿ.
(15) ನಿಶ್ಚಯವಾಗಿಯು ನಾವು ದಾವೂದ್ ಮತ್ತು ಸುಲೈಮಾನರಿಗೆ ಜ್ಞಾನವನ್ನು ದಯಪಾಲಿಸಿದೆವು ಮತ್ತು ಅವರಿಬ್ಬರು ಹೇಳಿದರು: ತನ್ನ ಅನೇಕ ಸತ್ಯವಿಶ್ವಾಸಿ ದಾಸರ ಮೇಲೆ ನಮಗೆ ಶ್ರೇಷ್ಠತೆ ನೀಡಿದಂತಹ ಅಲ್ಲಾಹನಿಗೆ ಸರ್ವಸ್ತುತಿಯು ಮೀಸಲು.
(16) ಸುಲೈಮಾನರು ದಾವೂದರ ವಾರೀಸುದಾರರಾದರು ಮತ್ತು ಹೇಳಿದರು: ಓ ಜನರೇ, ನಮಗೆ ಪಕ್ಷಿಗಳ ಮಾತನ್ನು ಕಲಿಸಲಾಗಿದೆ ಮತ್ತು ನಾವು ಎಲ್ಲಾ ವಸ್ತುಗಳಿಂದಲೂ ಕರುಣಿಸಲಾಗಿದ್ದೇವೆ. ನಿಸ್ಸಂಶಯವಾಗಿಯು ಇದು ಸುಸ್ಪಷ್ಟ ಅನುಗ್ರಹವಾಗಿದೆ.
(17) ಸುಲೈಮಾನರಿಗಾಗಿ ಜಿನ್ನ್ (ಯಕ್ಷ) ಮನುಷ್ಯ ಮತ್ತು ಪಕ್ಷಿಗಳ ಸೈನ್ಯವನ್ನು ಒಟ್ಟುಗೂಡಿಸಲಾಯಿತು. ಮತ್ತು ಪ್ರತಿಯೊಂದು ವರ್ಗವನ್ನು ಸಂಪೂರ್ಣ ಶಿಸ್ತಿನೊಂದಿಗೆ ಇಡಲಾಯಿತು.
(18) ಹಾಗೆಯೇ ಅವರು ಇರುವೆಯ ಕಣಿವೆಗೆ ಬಂದಾಗ ಒಂದು ಇರುವೆಯು ಹೇಳಿತು: ಓ ಇರುವೆಗಳೇ, ನೀವು ನಿಮ್ಮ ಬಿಲಗಳೊಳಗೆ ಸೇರಿಕೊಳ್ಳಿರಿ. ಸುಲೈಮಾನ್ ಮತ್ತು ಅವರ ಸೈನ್ಯವು ತಮಗರಿವಿಲ್ಲ ದಂತೆಯೇ ನಿಮ್ಮನ್ನು ತುಳಿಯದಂತಾಗದಿರಲಿ.
(19) ಅದರ ಮಾತಿನಿಂದ ಪೈಗಂಬರ್ ಸುಲೈಮನರು ಮಂದಹಾಸ ನಗುಬೀರಿದರು ಮತ್ತು ಪ್ರಾರ್ಥಿಸಿದರು: ನನ್ನ ಪ್ರಭುವೇ, ನೀನು ನನ್ನ ಮೇಲೂ, ನನ್ನ ಮಾತಾಪಿತರ ಮೇಲೂ ದಯಪಾಲಿಸಿದಂತಹ ನಿನ್ನ ಅನುಗ್ರಹಕ್ಕೆ ನಾನು ಕೃತಜ್ಞತೆ ಸಲ್ಲಿಸಲು ಮತ್ತು ನೀನು ಮೆಚ್ಚುವಂತಹ ಸತ್ಕರ್ಮವೆಸಗಲು ನನಗೆ ಸ್ಪೂರ್ತಿ ನೀಡು ಮತ್ತು ನೀನು ನನ್ನನ್ನು ನಿನ್ನ ಸಜ್ಜನರಾದ ದಾಸರಲ್ಲಿ ಸೇರಿಸು.
(20) ಅವರು ಪಕ್ಷಿಗಳನ್ನು ಪರಿಶೀಲಿಸಿದರು ಮತ್ತು ಹೇಳಿದರು: ಏನು ಸಮಾಚಾರ; ನಾನು ಹುದ್ಹುದ್ನನ್ನು (ಮರಕುಟಿಕ) ಕಾಣುತ್ತಿಲ್ಲವಲ್ಲ? ಅದು ಅನುಪಸ್ಥಿತಿ ಯಾಗಿದೆಯಲ್ಲವೇ?
(21) ಖಂಡಿತ ನಾನದಕ್ಕೆ ಕಠಿಣ ಶಿಕ್ಷೆಯನ್ನು ವಿಧಿಸುತ್ತೇನೆ ಅಥವಾ ಅದನ್ನು ನಾನು ಕೊಯ್ದು ಬಿಡುತ್ತೇನೆ. ಇಲ್ಲವೇ ಅದು ನನ್ನ ಮುಂದೆ ಯಾವುದಾದರು ಸುಸ್ಪಷ್ಟ ಕಾರಣವನ್ನು ಹೇಳಬೇಕು.
(22) ಸ್ವಲ್ಪ ಹೊತ್ತಿನಲ್ಲೇ ಅದು ಬಂದು ಹೇಳಿತು: ನಾನು ನಿಮಗೆ ತಿಳಿದಿರದಂತಹ ಸಂಗತಿಯೊAದನ್ನು ತಿಳಿದಿದ್ದೇನೆ. ನಾನು 'ಸಬಾ ಪಟ್ಟಣದ' ಒಂದು ಖಾತರಿ ಸುದ್ಧಿಯನ್ನು ನಿಮ್ಮಲ್ಲಿಗೆ ತಂದಿರುತ್ತೇನೆ.
(23) ನಾನು ಓರ್ವ ಸ್ತಿçà ಅಲ್ಲಿನ ಜನರನ್ನು ಆಳುತ್ತಿರುವುದಾಗಿ ಕಂಡಿರುವೆನು ಮತ್ತು ಅವಳಿಗೆ ಸಕಲ ವಸ್ತುಗಳನ್ನು ನೀಡಲಾಗಿದೆ. ಅಲ್ಲದೇ ಅವಳಿಗೊಂದು ದೊಡ್ಡಸಿಂಹಾಸನವಿದೆ.
(24) ನಾನು ಅವಳನ್ನು ಮತ್ತು ಅವಳ ಜನರನ್ನು ಅಲ್ಲಾಹನ ಹೊರತು ಸೂರ್ಯನಿಗೆ ಸಾಷ್ಟಾಂಗವೆರಗುತ್ತಿರುವುದಾಗಿ ಕಂಡಿರುವೆನು. ಶೈತಾನನು ಅವರ ಕರ್ಮಗಳನ್ನು ಅವರಿಗೆ ಸುಂದರವಾಗಿಸಿ ಅವರನ್ನು ಸನ್ಮಾರ್ಗದಿಂದ ತಡೆದಿರುತ್ತಾನೆ. ಆದ್ದರಿಂದ ಅವರು ಸನ್ಮಾರ್ಗ ಹೊಂದುವುದಿಲ್ಲ.
(25) ಭೂಮಿ, ಆಕಾಶಗಳಲ್ಲಿರುವ ರಹಸ್ಯ ವಸ್ತುಗಳನ್ನು ಹೊರತರುವ ಮತ್ತು ನೀವು ಅಡಗಿಸಿಡುವುದನ್ನೂ, ಬಹಿರಂಗಗೊಳಿಸುವುದನ್ನೂ ಅರಿಯುವ ಅಲ್ಲಾಹನಿಗೇ ಅವರು ಸಾಷ್ಟಾಂಗವೆರಗುವುದಿಲ್ಲ.
(26) ಅಲ್ಲಾಹನ ಹೊರತು ಇನ್ನಾವ ನೈಜ ಆರಾಧ್ಯನಿಲ್ಲ. ಅವನೇ ಮಹಾ ಸಿಂಹಾಸನದ ಒಡೆಯನಾಗಿದ್ದಾನೆ.
(27) ಸುಲೈಮಾನ್ ಹೇಳಿದರು: ನೀನು ಸತ್ಯವನ್ನು ನುಡಿದಿರುವೆಯಾ ಅಥವಾ ಸುಳ್ಳನಾಗಿರುವೆಯಾ ಎಂಬುದನ್ನು ನಾವು ನೋಡುವೆವು.
(28) ನೀನು ಈ ನನ್ನ ಪತ್ರವನ್ನು ತೆಗೆದುಕೊಂಡು ಹೋಗಿ ಅವರ ಮುಂದೆ ಹಾಕಿಬಿಡು. ಮತ್ತು ಅವರಿಂದ ಸರಿದು ನಿಲ್ಲು ಅನಂತರ ಅವರು ಯಾವ ಪ್ರತಿಕ್ರಿಯೆ ನೀಡುತ್ತಾರೆಂಬುದನ್ನು ನೋಡು.
(29) ಅವಳು (ರಾಣಿಯು) ಹೇಳಿದಳು: ಓ ನಾಯಕರೇ, ನನ್ನೆಡೆಗೆ ಒಂದು ಗೌರವಾರ್ಹ ಪತ್ರವನ್ನು ಹಾಕಲಾಗಿದೆ.
(30) ಅದು ಸುಲೈಮಾನರ ಕಡೆಯಿಂದ ಬಂದಿದೆ ಅದನ್ನು ಪರಮ ದಯಾಮಯನು, ಕರುಣಾನಿಧಿಯು ಆದ ಅಲ್ಲಾಹನ ನಾಮದಿಂದ, ಆರಂಭಿಸಲಾಗಿದೆ.
(31) ಇದರಲ್ಲಿ ನೀವು ನನ್ನ ಮುಂದೆ ಅಹಂಕಾರ ತೋರದಿರಿ ಮತ್ತು ಅಲ್ಲಾಹನಿಗೆ ಶರಣಾಗಿ ನನ್ನೆಡೆಗೆ ಬನ್ನಿರಿ ಎಂದಿದೆ.
(32) ಅವಳು ಹೇಳಿದಳು: ಓ ನಾಯಕರೇ, ನನ್ನ ಈ ವಿಚಾರದಲ್ಲಿ ನನಗೆ ಸಲಹೆ ನೀಡಿರಿ. ನಾನು ಯಾವ ವಿಷಯದಲ್ಲೂ ನಿಮ್ಮನ್ನು ಬಿಟ್ಟು ತೀರ್ಮಾನವನ್ನು ಕೈಗೊಳ್ಳುವುದಿಲ್ಲ.
(33) ಅವರು ಹೇಳಿದರು: ನಾವು ಶಕ್ತಿಶಾಲಿಗಳೂ, ಯುದ್ಧ ವೀರರೂ ಆಗಿದ್ದೇವೆ ಮತ್ತು ತೀರ್ಮಾನ ನಿಮ್ಮ ಕೈಯಲ್ಲಿದೆ. ನೀವು ನಮಗೆ ಯಾವ ಆದೇಶ ನೀಡುವಿರಿ ಎಂದು ಸ್ವತಃ ನೀವೇ ಯೋಚಿಸಿರಿ.
(34) ಅವರು ಹೇಳಿದರು: ನಾವು ಶಕ್ತಿಶಾಲಿಗಳೂ, ಯುದ್ಧ ವೀರರೂ ಆಗಿದ್ದೇವೆ ಮತ್ತು ತೀರ್ಮಾನ ನಿಮ್ಮ ಕೈಯಲ್ಲಿದೆ. ನೀವು ನಮಗೆ ಯಾವ ಆದೇಶ ನೀಡುವಿರಿ ಎಂದು ಸ್ವತಃ ನೀವೇ ಯೋಚಿಸಿರಿ.
(35) ಆದ ಕಾರಣ ಯುದ್ಧದ ಬದಲಿಗೆ ನಾನು ಅವರ ಕಡೆಗೆ ಒಂದು ಉಡುಗೊರೆಯನ್ನು ಕಳುಹಿಸುವವಳಿದ್ದೇನೆ. ಅನಂತರ ದೂತರು ಯಾವ ಪ್ರತಿಕ್ರಿಯೆಯೊಂದಿಗೆ ಮರಳುತ್ತಾರೆಂದು ನಾನು ನೋಡುತ್ತೇನೆ.
(36) (ರಾಣಿಯ) ದೂತರು ಪೈಗಂಬರ್ ಸುಲೈಮಾನರ ಬಳಿ ತಲುಪಿದಾಗ ಅವರು ಹೇಳಿದರು: ನೀವು ಧನದ ಮೂಲಕ ನನಗೆ ನೆರವು ನೀಡಬಯಸುವಿರಾ? ನನಗೆ ಅಲ್ಲಾಹನು ನಿಮಗೆ ನೀಡಿರುವುದಕ್ಕತಿಂತಲೂ ಅತ್ಯುತ್ತಮವಾದುದನ್ನು ನೀಡಿರುತ್ತಾನೆ. ನೀವೇ ನಿಮ್ಮ ಉಡುಗೊರೆಯ ಕುರಿತು ಸಂತುಷ್ಟರಾಗಿರಿ.
(37) ನೀನು ಅವರ ಬಳಿಗೆ ಮರಳು, ನಾವು ಖಂಡಿತ ಅವರು ಎದುರಿಸಲಾಗದಂತಹ ಸೈನ್ಯವನ್ನು ತರುವೆವು. ಹಾಗೂ ನಿಶ್ಚಯವಾಗಿಯೂ ನಾವು ಅವರನ್ನು ನಿಂದ್ಯರು ಮತ್ತು ಅಪಮಾನಿತರನ್ನಾಗಿಸಿ ಅಲ್ಲಿಂದ ಹೊರಗಟ್ಟುವೆವು.
(38) ಅವರು (ಸುಲೈಮಾನರು): ಓ ನಾಯಕರೇ, ಅವರು ಶರಣಾಗತರಾಗಿ ನನ್ನಲ್ಲಿಗೆ ಬರುವ ಮೊದಲೇ ನಿಮ್ಮಲ್ಲಿ ಅವಳ ಸಿಂಹಾಸನವನ್ನು ನನ್ನ ಬಳಿಗೆ ತರುವವರು ಯಾರಿದ್ದಾರೆ? ಎಂದು ಕೇಳಿದರು.
(39) ಯಕ್ಷಗಳ ಪೈಕಿ ಒಬ್ಬ ಬಲಾಢ್ಯನಾದ ಜಿನ್ನ್ ಹೇಳಿದನು: ನೀವು ತಮ್ಮ ಈ ಸಭೆಯಿಂದ ಎದ್ದೇಳುವುದಕ್ಕೂ ಮುನ್ನ ನಾನು ಅದನ್ನು ನಿಮ್ಮ ಬಳಿಗೆ ತರುತ್ತೇನೆ. ನಿಜವಾಗಿಯೂ ನಾನು ಇದಕ್ಕೆ ಶಕ್ತನೂ ಮತ್ತು ನಂಬಿಗಸ್ಥನೂ ಆಗಿದ್ದೇನೆ.
(40) ಗ್ರಂಥದ ಜ್ಞಾನ ಪಡೆದ ಓರ್ವನು ಹೇಳಿದನು: ನಾನದನ್ನು ನಿಮ್ಮ ಬಳಿಗೆ ನೀವು ತಮ್ಮ ಕಣ್ಣರೆಪ್ಪೆಗಳನ್ನು ಮಿಟುಕಿಸುವುದಕ್ಕೂ ಮುನ್ನ ತಂದು ಕೊಡಬಲ್ಲೆನು. ಅವರು ಅದನ್ನು ತನ್ನ ಬಳಿಯಿರುವುದಾಗಿ ಕಂಡಾಗ ಹೇಳಿದರು: ಇದು ನನ್ನ ಪ್ರಭುವಿನ ಅನುಗ್ರಹವಾಗಿದೆ. ನಾನು ಕೃತಜ್ಞತೆ ಸಲ್ಲಿಸುವೆನೋ ಅಥವಾ ಕೃತಘ್ನತೆ ತೋರುವೆನೋ ಎಂದು ನನ್ನನ್ನು ಪರೀಕ್ಷಿಸಲೆಂದಾಗಿದೆ ಮತ್ತು ಯಾರು ಕೃತಜ್ಞತೆ ಸಲ್ಲಿಸುತ್ತಾನೋ ಅವನು ತನ್ನದೇ ಪ್ರಯೋಜನಕ್ಕೋಸ್ಕರ ಕೃತಜ್ಞತೆ ಸಲ್ಲಿಸುತ್ತಾನೆ ಮತ್ತು ಯಾರು ಕೃತಘ್ನತೆ ತೋರುತ್ತಾನೋ ನನ್ನ ಪ್ರಭುವು ನಿರಪೇಕ್ಷನೂ ಉದಾರಿಯೂ ಆಗಿದ್ದಾನೆ.
(41) ಸುಲೈಮಾನರು ಸೇವಕರಿಗೆ ಹೇಳಿದರು: ನೀವು ಅವಳ ಸಿಂಹಾಸನವನ್ನು ರೂಪ ಬದಲಾವಣೆ ಮಾಡಿರಿ. ಅವಳು ದಾರಿ ಪಡೆಯುತ್ತಾಳೋ ಅಥವಾ ಪಥಭ್ರಷ್ಟರಲ್ಲಿ ಸೆರುತ್ತಾಳೋ ಎಂಬುದನ್ನು ನೋಡೋಣ.
(42) ಅನಂತರ ಆಕೆ ಬಂದಾಗ ನಿನ್ನ ಸಿಂಹಾಸನ ಹೀಗೆ ಇದೆಯೇ? ಎಂದು ಕೇಳಲಾಯಿತು. ಅವಳು ಹೇಳಿದಳು: ಇದು ಅದುವೇ ಎಂಬAತಿದೆ. ನಮಗೆ ಇದಕ್ಕೂ ಮೊದಲೇ ಜ್ಞಾನವನ್ನು ನೀಡಲಾಗಿದೆ ಮತ್ತು ನಾವು ವಿಧೇಯರಾಗಿದ್ದೇವು.
(43) ಅವಳು ಅಲ್ಲಾಹನ ಹೊರತು ಆರಾಧಿಸುತ್ತಿದ್ದ ವಸ್ತುಗಳು ಅವಳನ್ನು (ಸತ್ಯವಿಶ್ವಾಸದಿಂದ) ತಡೆದಿದ್ದವು. ನಿಜವಾಗಿಯು ಅವಳು ಸತ್ಯನಿಷೇಧಿ ಜನರಲ್ಲಿ ಸೇರಿದವಳಾಗಿದ್ದಾದಳು.
(44) ಅವಳಿಗೆ ಹೇಳಲಾಯಿತು: ನೀನು ಅರಮನೆಯನ್ನು ಪ್ರವೇಶಿಸು. ಅವಳು ಅದನ್ನು ಕಂಡಾಗ ಸರೋವರವೆಂದೇ ಭಾವಿಸಿಕೊಂಡು ತನ್ನ ಕುಣ ಕಾಲುಗಳವರೆಗೆ ಬಟ್ಟೆಗಳನ್ನು ಮೇಲೇರಿಸಿದಳು. ಅವರು ಹೇಳಿದರು: ಇದಂತು ಗಾಜಿನಿಂದ ನುಣುಪಾಗಿ ಹಾಸಲ್ಪಟ್ಟ ಅರಮನೆಯಾಗಿದೆ. ಅವಳು ಹೇಳಿದಳು: ನನ್ನ ಪ್ರಭುವೇ ನಿಜವಾಗಿಯೂ, ನಾನು ನನ್ನ ಮೇಲೆ ಅಕ್ರಮ ಮಾಡಿರುವೆನು. ಇನ್ನು ನಾನು ಸುಲೈಮಾನನ ಜೊತೆ ಸರ್ವಲೋಕಗಳ ಪ್ರಭುವಿಗೆ ವಿಧೇಯಳಾಗಿದ್ದೇನೆ.
(45) ನಿಶ್ಚಯವಾಗಿಯು ನಾವು ಸಮೂದರೆಡೆಗೆ ಅವರ ಸಹೋದರ ಸ್ವಾಲಿಹರನ್ನು “ನೀವು ಅಲ್ಲಾಹನನ್ನು ಆರಾಧಿಸಿರಿ” ಎಂಬ ಸಂದೇಶದೊAದಿಗೆ ಕಳುಹಿಸದೆವು. ಆಗ ಕೂಡಲೇ ಅವರು ಎರಡು ಗುಂಪುಗಳಾಗಿ ಪರಸ್ಪರ ಜಗಳವಾಡತೊಡಗಿದರು.
(46) ಅವರು ಹೇಳಿದರು: ಓ ನನ್ನ ಜನರೇ, ನೀವು ಒಳಿತಿಗೂ ಮುನ್ನ ಕೆಡುಕಿಗೇಕೆ ಆತುರಪಟ್ಟುಕೊಳ್ಳುತ್ತೀರಿ. ನೀವೇಕೆ ಅಲ್ಲಾಹನಲ್ಲಿ ಕ್ಷಮೆ ಬೇಡುವುದಿಲ್ಲ. ನಿಮ್ಮ ಮೇಲೆ ಕರುಣೆ ತೋರಲೂಬಹುದು.
(47) ಆಗ ಅವರು (ಅವರ ಜನಾಂಗ) ಹೇಳಿದರು: ನಿನ್ನಿಂದ ಮತ್ತು ನಿನ್ನ ಜೊತೆಯಿರುವವರಿಂದ ನಾವು ಅಪಶಕುನವನ್ನು ಅನುಭವಿಸುತ್ತಿದ್ದೇವೆ. ಅವರು ಹೇಳಿದರು: ನಿಮ್ಮ ಶಕುನವು ಅಲ್ಲಾಹನ ಬಳಿಯಿದೆ. ಮಾತ್ರವಲ್ಲ, ನೀವು ಪರೀಕ್ಷೆಗೊಳಗಾದ ಜನಾಂಗವಾಗಿರುವಿರಿ.
(48) ಆ ಪಟ್ಟಣದಲ್ಲಿ ಒಂಬತ್ತು ಮಂದಿ ಪ್ರಮುಖರಿದ್ದರು. ಅವರು ಭೂಮಿಯಲ್ಲಿ ಕ್ಷೆÆÃಭೆ ಹರಡುತ್ತಿದ್ದರು ಮತ್ತು ಸುಧಾರಣೆ ಮಾಡುತ್ತಿರಲಿಲ್ಲ.
(49) ಅವರು ಪರಸ್ಪರ ಹೀಗೆಂದರು: ಅವಶ್ಯವಾಗಿ ನಾವು ರಾತ್ರೋರಾತ್ರಿ ಸ್ವಾಲಿಹ್ ಮತ್ತು ಅವನ ಮನೆಯವರ ಮೇಲೆ ಆಕ್ರಮಣ ನಡೆಸೋಣ ಎಂದು ಅಲ್ಲಾಹನ ಮೇಲೆ ಆಣೆ ಹಾಕಿರಿ ಮತ್ತು ಅವನ ವಾರೀಸುದಾರರಿಗೆ ಅವನ ಮನೆಯವರ ನಾಶದ ಸಂದರ್ಭದಲ್ಲಿ ನಾವು ಹಾಜರಿರಲಿಲ್ಲವೆಂದು ಸ್ಪಷ್ಟವಾಗಿ ಹೇಳಿಬಿಡೋಣ. ಮತ್ತು ನಿಜವಾಗಿಯೂ ನಾವು ಸತ್ಯವಂತರಾಗಿದ್ದೇವೆ.
(50) ಅವರೊಂದು ತಂತ್ರವನ್ನು ಹೂಡಿದರು ಮತ್ತು ನಾವೂ ಸಹ ಅವರು ಅರಿಯದಂತೆ ಪ್ರತಿತಂತ್ರವನ್ನು ಹೂಡಿದೆವು.
(51) ನೀವು ಅವರ ಕುತಂತ್ರದ ಪರಿಣಾಮವು ಹೇಗಿತ್ತೆಂಬುದನ್ನು ನೋಡಿರಿ. ನಾವು ಅವರನ್ನೂ, ಅವರ ಸಕಲ ಜನರನ್ನೂ, ನಾಶ ಮಾಡಿಬಿಟ್ಟೆವು.
(52) ಇವು ಅವರ ನಿವಾಸಗಳು ಅವರು ಅಕ್ರಮವೆಸಗಿದ್ದ ನಿಮಿತ್ತ ಕುಸಿದು ಬಿದ್ದಿವೆ. ಇದರಲ್ಲಿ ಅರಿವುಳ್ಳವರಿಗೆ ಮಹಾ ನಿದರ್ಶನವಿದೆ.
(53) ನಾವು ಸತ್ಯವಿಶ್ವಾಸ ಕೈಗೊಂಡು ಭಯಭಕ್ತಿಯನ್ನಿರಿಸಿದವರನ್ನು ರಕ್ಷಿದೆವು.
(54) ಮತ್ತು ಲೂತರನ್ನು ಸ್ಮರಿಸಿರಿ ಅವರು ತನ್ನ ಜನರಿಗೆ ಹೇಳಿದ ಸಂದರ್ಭ: ನೀವು ತಿಳಿದೂ ತಿಳಿದೂ ನೀಚಕೃತ್ಯವನ್ನು ಎಸಗುತ್ತಿದ್ದೀರಾ?
(55) ನೀವು ಸ್ತಿçÃಯರನ್ನು ಬಿಟ್ಟು ಕಾಮೇಚ್ಛೆಗಾಗಿ ಪುರುಷರ ಬಳಿ ಹೋಗುತ್ತಿರುವಿರಾ? ವಾಸ್ತವ ವಿಚಾರವೇನೆಂದರೆ ನೀವು ಮಹಾ ಅವಿವೇಕವನ್ನು ತೋರಿಸುತ್ತಿರುವಿರಿ.
(56) ಆಗ ಜನರ ಪ್ರತಿಕ್ರಿಯೆಯು “ನೀವು ಲೂತರ ಕುಟುಂಬವನ್ನು ನಿಮ್ಮ ನಾಡಿನಿಂದ ಗಡಿಪಾರು ಮಾಡಿರಿ. ಅವರಂತು ಮಹಾ ಪರಿಶುದ್ಧರಾಗಲು ಹೊರಟಿದ್ದಾರೆ” ಎಂಬುದರ ಹೊರತು ಇನ್ನೇನಿರಲಿಲ್ಲ.
(57) ಕೊನೆಗೆ ನಾವು ಅವರ ಪತ್ನಿಯ ಹೊರತು ಅವರನ್ನು ಮತ್ತು ಅವರ ಕುಟುಂಬದವರನ್ನು ರಕ್ಷಿದಿದೆವು. ಅವಳು ಹಿಂದುಳಿಯುವರಲ್ಲಿ ಆಗುವಳೆಂದು ನಾವು ನಿಶ್ಚಯಿಸಿಬಿಟ್ಟಿದ್ದೆವು.
(58) ಮತ್ತು ನಾವು ಅವರ ಮೇಲೆ ಒಂದು ಮಳೆಯನ್ನು ಸುರಿಸಿದೆವು. ಎಚ್ಚರಿಕೆ ನೀಡಲಾದವರ ಮೇಲೆ ಅದು ಅತ್ಯಂತ ಕೆಟ್ಟ ಮಳೆಯಾಗಿತ್ತು.
(59) (ಓ ಪೈಗಂಬರರೇ) ಹೇಳಿರಿ: ಸರ್ವಸ್ತುತಿಯು ಅಲ್ಲಹನಿಗೇ ಮೀಸಲು ಮತ್ತು ಅವನು ಆಯ್ದುಕೊಂಡ ದಾಸರ ಮೇಲೆ ಶಾಂತಿಯಿರಲಿ. ಅಲ್ಲಾಹನು ಉತ್ತಮನೋ ಅಥವಾ ಅವರು ಸಹಭಾಗಿಗಳನ್ನಾಗಿ ಮಾಡುತ್ತಿರುವ ದೇವರುಗಳೋ?
(60) (ಓ ಪೈಗಂಬರರೇ) ಹೇಳಿರಿ: ಸರ್ವಸ್ತುತಿಯು ಅಲ್ಲಹನಿಗೇ ಮೀಸಲು ಮತ್ತು ಅವನು ಆಯ್ದುಕೊಂಡ ದಾಸರ ಮೇಲೆ ಶಾಂತಿಯಿರಲಿ. ಅಲ್ಲಾಹನು ಉತ್ತಮನೋ ಅಥವಾ ಅವರು ಸಹಭಾಗಿಗಳನ್ನಾಗಿ ಮಾಡುತ್ತಿರುವ ದೇವರುಗಳೋ?
(61) ಭೂಮಿಯನ್ನು ಸ್ಥಿರತೆಯುಳ್ಳ ತಂಗುದಾಣವನ್ನಾಗಿ ಮಾಡಿಕೊಟ್ಟವನು ಮತ್ತು ಅದರ ನಡುವೆ ನದಿಗಳನ್ನು ಹರಿಸಿಕೊಟ್ಟವನು ಮತ್ತು ಅದಕ್ಕಾಗಿ ದೃಢ ಪರ್ವತಗಳನ್ನು ನಾಟಿದವನು ಮತ್ತು ಎರಡು ಸಮುದ್ರಗಳ ನಡುವೆ ತಡಯೊಂದನ್ನು ನಿಶ್ಚಯಿಸಿದವನು ಯಾರು? ಅಲ್ಲಾಹನೊಂದಿಗೆ ಇತರ ಆರಾಧ್ಯರೂ ಇದ್ದಾರೆಯೇ? ಆದರೆ ಅವರಲ್ಲಿ ಹೆಚ್ಚಿನವರು ಅರಿಯುವುದಿಲ್ಲ.
(62) ಅಥವಾ ಸಂಕಷ್ಟಕ್ಕೆ ಗುರಿಯಾದವನು ಕರೆದು ಬೇಡಿದಾಗ ಅವನ ಕರೆಗೆ ಓಗೊಟ್ಟು ಅವನ ಸಂಕಷ್ಟವನ್ನು ನೀಗಿಸುವವನು ಯಾರು?ಮತ್ತು ನಿಮ್ಮನ್ನು ಭೂಮಿಯ ಉತ್ತರಾಧಿಕಾರಿಗಳಾಗಿ ನಿಶ್ಚಯಿಸುವವನು ಯಾರು? ಅಲ್ಲಾಹನೊಂದಿಗೆ ಬೇರೆ ಆರಾಧ್ಯನಿದ್ದಾನೆಯೇ? ಅತ್ಯಲ್ಪವೇ ನೀವು ಉಪದೇಶಗಳನ್ನು ಸ್ವೀಕರಿಸುತ್ತೀರಿ.
(63) ನಿಮ್ಮನ್ನು ನೆಲ ಮತ್ತು ಸಮುದ್ರದ ಅಂಧಕಾರಗಳಲ್ಲಿ ದಾರಿ ತೋರಿಸುವವನು ಯಾರು? ತನ್ನ ಕರುಣೆಗೆ ಮುಂಚೆಯೇ ಸುವಾರ್ತೆ ನೀಡುವಂತಹ ಮಾರುತಗಳನ್ನು ಕಳುಹಿಸುವವನು ಯಾರು? ಅಲ್ಲಾಹನೊಂದಿಗೆ ಬೇರೆ ಆರಾಧ್ಯನಿದ್ದಾನೆಯೇ? ಅವರು ಕಲ್ಪಿಸಿಕೊಳ್ಳುತ್ತಿರುವ ಸಹಭಾಗಿತ್ವದಿಂದ ಅವನು ಅದೆಷ್ಟೋ ಉನ್ನತನಾಗಿದ್ದಾನೆ.
(64) ಸೃಷ್ಟಿಯನ್ನು ಪ್ರಥಮ ಬಾರಿಗೆ ಉಂಟು ಮಾಡಿ, ತರುವಾಯ ಅದನ್ನು ಪುನರಾವರ್ತಿಸುವವನು ಯಾರು? ಆಕಾಶದಿಂದಲೂ, ಭೂಮಿಯಿಂದಲೂ ನಿಮಗೆ ಜೀವನಾಧಾರ ನೀಡುವವನು ಯಾರು? ಅಲ್ಲಾಹನೊಂದಿಗೆ ಬೇರೆ ಆರಾಧ್ಯನಿದ್ದಾನೆಯೇ? ಹೇಳಿರಿ, ನೀವು ಸತ್ಯವಂತರಾಗಿದ್ದರೆ ನಿಮ್ಮ ಆಧಾರ ಪುರಾವೆಯನ್ನು ತನ್ನಿರಿ.
(65) ಹೇಳಿರಿ: ಆಕಾಶ ಮತ್ತು ಭೂಮಿಯಲ್ಲಿರುವವರ ಪೈಕಿ ಯಾರೂ ಅಲ್ಲಾಹನ ಹೊರತು ಅಗೋಚರ ಜ್ಞಾನವನ್ನು ಅರಿಯುವುದಿಲ್ಲ. ಅವರಿಗೆ ತಾವು ಯಾವಾಗ ಎಬ್ಬಿಸಲಾಗುವೆವೆಂದೂ ತಿಳಿದಿಲ್ಲ.
(66) ಹೇಳಿರಿ: ಆಕಾಶ ಮತ್ತು ಭೂಮಿಯಲ್ಲಿರುವವರ ಪೈಕಿ ಯಾರೂ ಅಲ್ಲಾಹನ ಹೊರತು ಅಗೋಚರ ಜ್ಞಾನವನ್ನು ಅರಿಯುವುದಿಲ್ಲ. ಅವರಿಗೆ ತಾವು ಯಾವಾಗ ಎಬ್ಬಿಸಲಾಗುವೆವೆಂದೂ ತಿಳಿದಿಲ್ಲ.
(67) ಸತ್ಯನಿಷೇಧಿಗಳು ಹೇಳಿದರು: ನಾವು, ನಮ್ಮ ತಂದೆ ತಾತಂದಿರು ಮಣ್ಣಾಗಿ ಹೋದರೂ ನಮ್ಮನ್ನು ಹೊರತರಲಾಗುತ್ತದೆಯೇ?
(68) ಖಂಡಿತವಾಗಿಯು ಇಂತಹ ವಾಗ್ದಾನಗಳನ್ನು ನಮಗೂ, ಇದಕ್ಕೆ ಮೊದಲು ನಮ್ಮ ತಂದೆ ತಾತಂದಿರಿಗೂ ನೀಡಲಾಗಿತ್ತು. ಇವು ಪೂರ್ವಿಕರ ಕಟ್ಟು ಕಥೆಗಳೇ ಹೊರತು ಬೇರೇನಲ್ಲ.
(69) ಹೇಳಿರಿ: ಭೂಮಿಯಲ್ಲಿ ಸಂಚರಿಸಿ ಅಪರಾಧಿಗಳ ಪರಿಣಾಮವು ಹೇಗಾಯಿತೆಂದು ನೋಡಿರಿ.
(70) ನೀವು ಅವರ ಬಗ್ಗೆ ವ್ಯಥೆಪಡಬೇಡಿರಿ ಮತ್ತು ಅವರು ಹೂಡುವ ಕುತಂತ್ರಗಳ ನಿಮಿತ್ತ ವ್ಯಾಕುಲಗೊಳ್ಳದಿರಿ.
(71) (ಓ ಪೈಗಂಬರರೇ) ನೀವು ಸತ್ಯವಂತರಾಗಿದ್ದರೆ ಈ ಯಾತನೆಯ ವಾಗ್ದಾನವು ಯಾವಾಗ ಈಡೇರುವುದು? ಎಂದು ಅವರು (ಮಕ್ಕಾದ ಬಹುದೇವಾರಾಧಕರು) ಕೇಳುತ್ತಾರೆ.
(72) ಉತ್ತರಿಸಿರಿ: ನೀವು ಆತುರಪಡುತ್ತಿರುವ ಕಾರ್ಯಗಳ ಪೈಕಿ ಕೆಲವು ನಿಮ್ಮ ಸಮೀಪವಾಗಿರಲೂಬಹುದು.
(73) ನಿಶ್ಚಯವಾಗಿಯು ನಿಮ್ಮ ಪ್ರಭುವು ಜನರ ಮೇಲೆ ಮಹಾ ಅನುಗ್ರಹದಾತನಾಗಿದ್ದಾನೆ. ಆದರೆ ಅವರಲ್ಲಿ ಹೆಚ್ಚಿನವರು ಕೃತಜ್ಞತೆ ತೋರುವುದಿಲ್ಲ.
(74) . ನಿಸ್ಸಂಶಯವಾಗಿಯು ನಿಮ್ಮ ಪ್ರಭುವು ಅವರ ಹೃದಯಗಳು ಅಡಗಿಸುತ್ತಿರುವ ಮತ್ತು ಪ್ರಕಟಗೊಳಿಸುತ್ತಿವುದನ್ನು ಚೆನ್ನಾಗಿ ಬಲ್ಲನು
(75) ಆಕಾಶ ಮತ್ತು ಭೂಮಿಯ ಯಾವ ರಹಸ್ಯ ವಸ್ತುವೂ ಒಂದು ಸುಸ್ಪಷ್ಟ ಗ್ರಂಥದಲ್ಲಿ ದಾಖಲಿಸಲ್ಪಪಡದೇ ಇಲ್ಲ.
(76) ವಾಸ್ತವದಲ್ಲಿ ಇಸ್ರಾಯೀಲ್ ಸಂತತಿಗಳಿಗೆ ಅವರು ಭಿನ್ನತೆ ಹೊಂದಿರುವ ಹೆಚ್ಚಿನ ವಿಷಯಗಳ ವಸ್ತುಸ್ಥಿತಿಯನ್ನು ಈ ಕುರ್ಆನ್ ವಿವರಿಸಿಕೊಡುತ್ತದೆ.
(77) ನಿಜವಾಗಿಯು ಇದು ಸತ್ಯವಿಶ್ವಾಸಿಗಳಿಗೆ ಸನ್ಮಾರ್ಗವು, ಕರುಣೆಯು ಆಗಿದೆ.
(78) ನಿಶ್ಚಯವಾಗಿಯು ನಿಮ್ಮ ಪ್ರಭುವು ತನ್ನ ಅಪ್ಪಣೆಯಿಂದ ಅವರ ನಡುವೆ ತೀರ್ಪು ನೀಡುವನು. ಅವನು ಮಹಾ ಪ್ರಚಂಡನು, ಸರ್ವಜ್ಞಾನಿಯು ಆಗಿದ್ದಾನೆ.
(79) ಆದ್ದರಿಂದ ನೀವು ಅಲ್ಲಾಹನ ಮೇಲೆ ಭರವಸೆಯನ್ನಿಡಿ. ನಿಶ್ಚಯವಾಗಿಯು ನೀವು ಸ್ಪಷ್ಟವಾದ ಸತ್ಯ ಮಾರ್ಗದಲ್ಲಿರುವಿರಿ
(80) ನಿಸ್ಸಂಶಯವಾಗಿಯು ನೀವು ಮೃತರನ್ನು ಕೇಳಿಸಲಾರಿರಿ. ಮತ್ತು ಕಿವುಡರಿಗೆ ಅವರು ಬೆನ್ನು ತಿರುಗಿಸಿ ಹೋದರೆ ನಿಮ್ಮ ಕರೆಯನ್ನು ಕೇಳುವಂತೆ ಮಾಡಲಾರಿರಿ.
(81) ನೀವು ಕುರುಡರನ್ನು ಅವರ ದುರ್ಮಾರ್ಗದಿಂದ ಸನ್ಮಾರ್ಗದೆಡೆಗೆ ಮುನ್ನಡೆಸಲಾರಿರಿ. ನೀವು ನಮ್ಮ ಸೂಕ್ತಿಗಳ ಮೇಲೆ ವಿಶ್ವಾಸವಿರಿಸಿ ಶರಣಾದವನಿಗೆ ಮಾತ್ರ ಕೇಳಿಸಬಲ್ಲಿರಿ.
(82) ಅವರ ಮೇಲೆ ಯಾತನೆಯ ವಾಗ್ದಾನ ಪೂರ್ಣಗೊಂಡಾಗ ನಾವು ಅವರಿಗಾಗಿ ಭೂಮಿಯಿಂದ ಒಂದು ಪ್ರಾಣಿಯನ್ನು ಹೊರಡಿಸುವೆವು. ಅದು ಜನರು ನಮ್ಮ ದೃಷ್ಟಾಂತಗಳಲ್ಲಿ ವಿಶ್ವಾಸವಿರಿಸುತ್ತಿರಲಿಲ್ಲ. ಎಂದು ಅದು ಅವರೊಂದಿಗೆ ಮಾತನಾಡುವುದು.
(83) ನಾವು ಪ್ರತಿಯೊಂದು ಸಮುದಾಯದಿಂದಲೂ ನಮ್ಮ ದೃಷ್ಟಾಂತಗಳನ್ನು ಸುಳ್ಳಾಗಿಸಿದವರ ಪೈಕಿ ಒಂದೊAದು ತಂಡವನ್ನು ಒಟ್ಟುಗೂಡಿಸಲಾಗುವ ದಿನ. ಅನಂತರ ಅವರನ್ನು ವಿವಿಧ ಗುಂಪುಗಳನ್ನಾಗಿ ಬೇರ್ಪಡಿಸಲಾಗುವುದು.
(84) ಕೊನೆಗೆ ಅವರೆಲ್ಲರೂ ಬಂದಾಗ ಅಲ್ಲಾಹನು ಹೇಳುವನು: ನೀವು ನನ್ನ ಸೂಕ್ತಿಗಳನ್ನು ಅವುಗಳ ಕುರಿತು ಪೂರ್ಣ ಜ್ಞಾನವಿಲ್ಲದೆಯೇ ಸುಳ್ಳಾಗಿಸಿಬಿಟ್ಟಿರಿ? ಹೇಳಿರಿ, ನೀವು ಮಾಡುತ್ತಿದ್ದುದಾದರೂ ಏನು?
(85) ಅವರು ಅಕ್ರಮವೆಸಗಿದುದರ ನಿಮಿತ್ತ ಅವರ ಮೇಲೆ ವಚನವು ಸ್ಥಿರಗೊಳ್ಳುವುದು ಮತ್ತು ಅವರು ಏನನ್ನೂ ಹೇಳಲಾರರು.
(86) ಅವರು ಅಕ್ರಮವೆಸಗಿದುದರ ನಿಮಿತ್ತ ಅವರ ಮೇಲೆ ವಚನವು ಸ್ಥಿರಗೊಳ್ಳುವುದು ಮತ್ತು ಅವರು ಏನನ್ನೂ ಹೇಳಲಾರರು.
(87) ಕಹಳೆ ಊದಲಾಗುವ ದಿನ ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವವರು ದಿಗ್ಭಾçಂತರಾಗುವರು.ಆದರೆ ಅಲ್ಲಾಹನು ಇಚ್ಛಿಸಿದವನ ಹೊರತು ಮತ್ತು ಸಕಲರೂ ಅವನಲ್ಲಿಗೆ ದೈನ್ಯರಾಗಿ ಹಾಜರಾಗುವರು.
(88) ಅಂದು ನೀವು ಪರ್ವತಗಳನ್ನು ಸ್ಥಿರವಾಗಿ ಇರುವಂತೆ ಭಾವಿಸುವಿರಿ. ಆದರೆ ಅವು ಮೋಡಗಳಂತೆ ಸಾಗುವುವು. ಇವೆಲ್ಲವೂ ಸರ್ವ ಸಂಗತಿಯನ್ನು ಸದೃಢಗೊಳಿಸಿದಂತಹ ಅಲ್ಲಾಹನ ಕೈಚಳಕವಾಗಿದೆ. ಅವನು ನೀವು ಮಾಡುತ್ತಿರುವುದರ ಕುರಿತು ಚೆನ್ನಾಗಿ ಬಲ್ಲನು.
(89) ಯಾರು ಒಳಿತನ್ನು ತರುತ್ತಾರೋ ಅವರಿಗೆ ಅದಕ್ಕಿಂತ ಉತ್ತಮವಾದ ಪ್ರತಿಫಲ ಲಭಿಸುವುದು ಮತ್ತು ಅವರು ಅಂದಿನ ದಿಗ್ಭಾçಂತಿಯಿAದ ನಿರ್ಭಯರಾಗಿರುವರು.
(90) ಮತ್ತು ಯಾರು ಕೆಡುಕನ್ನು ತರುತ್ತಾರೋ ಅವರನ್ನು ಅಧೋಮುಖಿಗಳಾಗಿ ನರಕಾಗ್ನಿಗೆ ಎಸೆಯಲಾಗವುದು. ನೀವು ಎಸಗುತ್ತಿದ್ದುದನ್ನು ಮಾತ್ರ ಪ್ರತಿಫಲ ನೀಡಲಾಗುವಿರಿ?
(91) ನನಗೆ ಈ ನಾಡಿನ ಪ್ರಭುವನ್ನು ಆರಾಧಿಸುತ್ತಿರಲು ಮಾತ್ರ ಆದೇಶ ನೀಡಲಾಗಿರುತ್ತದೆ. ಅವನು ಇದನ್ನು ಪವಿತ್ರಗೊಳಿಸಿರುತ್ತಾನೆ ಸರ್ವ ಸಂಗತಿಗಳು ಅವನ ಅಧಿಪತ್ಯದಲ್ಲಿದೆ ಮತ್ತು ನಾನು ವಿಧೇಯ ದಾಸರಲ್ಲಾಗಬೇಕೆಂದು ಆದೇಶ ನೀಡಲ್ಪಟ್ಟಿರುತ್ತೇನೆ.
(92) ಮತ್ತು ನಾನು ಕುರ್ಆನನ್ನು ಓದಿ ಕೇಳಿಸುತ್ತಲಿರಬೇಕೆಂದು. (ಆದೇಶ ನೀಡಲ್ಪಟ್ಟಿರುತ್ತೇನೆ) ಆದ್ದರಿಂದ ಯಾರು ಸನ್ಮಾರ್ಗ ಸ್ವೀಕರಿಸುವನೋ ಅವನು ತನಗಾಗಿಯೇ ಸನ್ಮಾರ್ಗ ಸ್ವೀಕರಿಸುತ್ತಾನೆ ಮತ್ತು ಯಾರು ಪಥಭ್ರಷ್ಟನಾಗುತ್ತಾನೋ ಆಗ: ನಾನಂತು ಕೇವಲ ಒಬ್ಬ ಮುನ್ನೆಚ್ಚರಿಕೆ ನೀಡುವವನೆಂದು ಹೇಳಿರಿ.
(93) ಹೇಳಿರಿ: ಸರ್ವಸ್ತುತಿಯು ಅಲ್ಲಾಹನಿಗೇ ಮೀಸಲು. ಅವನು ಸದ್ಯದಲ್ಲೇ ತನ್ನ ದೃಷ್ಟಾಂತಗಳನ್ನು ನಿಮಗೆ ತೋರಿಸಿ ಕೊಡಲಿದ್ದಾನೆ ಆಗ ನೀವೇ ಅವುಗಳನ್ನು ಅರಿತುಕೊಳ್ಳಲಿದ್ದೀರಿ ಮತ್ತು ನೀವು ಮಾಡುತ್ತಿರುವ ಕರ್ಮಗಳ ಬಗ್ಗೆ ನಿಮ್ಮ ಪ್ರಭುವು ಅಲಕ್ಷö್ಯನಲ್ಲ.