(1) ಅಲೀಫ್ ಲಾಮ್ ಮೀಮ್.
(2) ಕೇವಲ 'ನಾವು ವಿಶ್ವಾಸವಿರಿಸಿದೆವು' ಎಂದು ಹೇಳಿದ ಮಾತ್ರಕ್ಕೆ ಅವರನ್ನು ಪರೀಕ್ಷೆಗೊಳಪಡಿಸದೆ ಬಿಟ್ಟುಬಿಡಲಾಗುವುದೆಂದು ಅವರು ಭಾವಿಸಿದ್ದಾರೆಯೇ?
(3) ನಾವು ಅವರಿಗಿಂತ ಮುಂಚಿನವರನ್ನೂ ಪರೀಕ್ಷೆಗೊಳಪಡಿಸಿದ್ದೇವು. ಆದ್ದರಿಂದ ಅಲ್ಲಾಹನು ಸತ್ಯವಂತರು ಯಾರೆಂದು ಖಂಡಿತವಾಗಿಯು ಅರಿಯವನು ಮತ್ತು ಸುಳ್ಳುಗಾರರು ಯಾರೆಂಬುದನ್ನು ನಿಸ್ಸಂದೇಹವಾಗಿಯು ತಿಳಿಯಲಿದ್ದಾನೆ.
(4) ದುಷ್ಕೃತ್ಯಗಳನ್ನು ಎಸಗುವವರು ನಮ್ಮ ಹಿಡಿತದಿಂದ ತಪ್ಪಿಸಿಕೊಳ್ಳಬಹುದೆಂದು ಭಾವಿಸಿದ್ದಾರೆಯೇ? ಅವರು ಅದೆಂತಹ ಕೆಟ್ಟ ನಿರ್ಣಯವನ್ನು ಮಾಡುತ್ತಿದ್ದಾರೆ!
(5) ಯಾರು ಅಲ್ಲಾಹನ ಭೇಟಿಯನ್ನು ನಿರೀಕ್ಷಿಸುವನೋ ನಿಶ್ಚಯವಾಗಿಯು ಅಲ್ಲಾಹನ ನಿಶ್ಚಿತಾವಧಿಯು ಬರಲಿದೆ ಮತ್ತು ಅವನು ಸರ್ವವನ್ನಾಲಿಸುವವನು, ಸರ್ವಜ್ಞಾನಿಯು ಆಗಿದ್ದಾನೆ.
(6) ಯಾರು ಅಲ್ಲಾಹನ ಮಾರ್ಗದಲ್ಲಿ ಪ್ರಯತ್ನಿಸುವನೋ ತನ್ನ ಒಳಿತಿಗಾಗಿಯೇ ಪ್ರಯತ್ನಿಸುವನು. ವಾಸ್ತವದಲ್ಲಿ ಅಲ್ಲಾಹನು ಸರ್ವಲೋಕದವರಿಂದ ನಿರಪೇಕ್ಷಕನಾಗಿದ್ದಾನೆ.
(7) ಯಾರು ಸತ್ಯವಿಶ್ವಾಸವಿರಿಸಿ ಸತ್ಕರ್ಮಗಳನ್ನು ಕೈಗೊಂಡರೋ ನಾವು ಅವರ ಪಾಪಗಳನ್ನು ಅವರಿಂದ ಅಳಿಸಿಬಿಡುವೆವು, ಮತ್ತು ಅವರಿಗೆ ಅವರ ಸತ್ಕರ್ಮಗಳಿಗಾಗಿ ಅತ್ಯುತ್ತಮ ಪ್ರತಿಫಲವನ್ನು ನೀಡುವೆವು.
(8) ಮತ್ತು ತನ್ನ ಮಾತಾಪಿತರೊಂದಿಗೆ ಸದ್ವರ್ತನೆಯನ್ನು ತೋರಬೇಕೆಂದು ನಾವು ಮನುಷ್ಯನಿಗೆ ಉಪದೇಶ ನೀಡಿದ್ದೇವೆ. ಆದರೆ ಅವರು ನಿಮಗೆ ಜ್ಞಾನವಿಲ್ಲದ್ದನ್ನು ನನ್ನೊಂದಿಗೆ(ಅಲ್ಲಾಹನೊAದಿಗೆ) ದೇವಸಹಭಾಗಿಯನ್ನಾಗಿ ನಿಶ್ಚಯಿಸಬೇಕೆಂದು ಒತ್ತಾಯಿಸಿದರೆ ಈ ವಿಷಯದಲ್ಲಿ ಅವರನ್ನು ಅನುಸರಿಸಬೇಡಿರಿ. ನಿಮ್ಮ ಮರಳುವಿಕೆಯು ನನ್ನೆಡೆಗೇ ಆಗಿದೆ. ಅನಂತರ ನಾನು ನೀವು ಮಾಡುತ್ತಿರುವುದೆಲ್ಲವನ್ನೂ ನಿಮಗೆ ತಿಳಿಸಿಕೊಡುವೆನು.
(9) ಯಾರು ಸತ್ಯವಿಶ್ವಾಸವಿರಿಸಿ ಸತ್ಕರ್ಮಗಳನ್ನು ಕೈಗೊಂಡರೋ ಖಂಡಿತವಾಗಿಯು ನಾವು ಅವರನ್ನು ಸಜ್ಜನರಲ್ಲಿ ಸೇರಿಸುತ್ತೇವೆ.
(10) ಜನರ ಪೈಕಿ ಕೆಲವರು ನಾವು ಅಲ್ಲಾಹನ ಮೇಲೆ ವಿಶ್ವಾಸವಿರಿಸಿದ್ದೇವೆಂದು ಹೇಳುತ್ತಾರೆ. ಆದರೆ ಅಲ್ಲಾಹನ ಮಾರ್ಗದಲ್ಲಿ ಅವರು ಪೀಡಿಸಲ್ಪಟ್ಟರೆ ಜನರ ಕಿರುಕುಳವನ್ನು ಅವರು ಅಲ್ಲಾಹನ ಯಾತನೆಯೆಂದು ಬಗೆಯುತ್ತಾರೆ.ಇನ್ನು ಅಲ್ಲಾಹನ ಸಹಾಯವು ಬಂದೊದಗಿದರೆ ನಾವು ನಿಮ್ಮ ಜೊತೆಯಲ್ಲೇ ಇದ್ದೇವೆ ಎಂದು ಹೇಳುತ್ತಾರೆ. ಸರ್ವಲೋಕದವರ ಹೃದಯಗಳಲ್ಲಿರುವುದುನ್ನು ಅಲ್ಲಾಹನು ಅರಿಯುವವನಲ್ಲವೇ?
(11) ಸತ್ಯವಿಸ್ವಾಸಿಗಳನ್ನು ಅಲ್ಲಾಹನು ಖಂಡಿತ ತಿಳಿಯವನು ಮತ್ತು ಕಪಟ ವಿಶ್ವಾಸಿಗಳನ್ನು ಅವನು ಖಂಡಿತ ಅರಿಯುವನು.
(12) ಸತ್ಯನಿಷೇಧಿಗಳು ಸತ್ಯವಿಶ್ವಾಸಿಗಳಿಗೆ ನೀವು ನಮ್ಮ ಮಾರ್ಗವನ್ನು ಅನುಸರಿಸಿರಿ ನಿಮ್ಮ ಪಾಪಗಳನ್ನು ನಾವು ವಹಿಸಿ ಕೊಳ್ಳುತ್ತೇವೆ ಎಂದು ಹೇಳುತ್ತಾರೆ. ವಸ್ತುತಃ ಅವರು ಅವರ ಪಾಪಗಳಿಂದ ಏನನ್ನೂ ವಹಿಸಿಕೊಳ್ಳುವವರಲ್ಲ, ಅವರಂತೂ ಸುಳ್ಳುಗಾರಾಗಿದ್ದಾರೆ.
(13) ಅದಾಗ್ಯೂ ಅವರು ತಮ್ಮ ಭಾರಗಳನ್ನು ಮತ್ತು ತಮ್ಮ ಭಾರಗಳ ಜೊತೆಗೇ (ಇತರ ಜನರ) ಭಾರಗಳನ್ನೂ ವಹಿಸಿಕೊಳ್ಳುವರು. ಪುನರುತ್ಥಾನ ದಿನದಂದು ಅವರು ಸುಳ್ಳು ಸೃಷ್ಟಿಸುತ್ತಿರುವುದರ ಕುರಿತು ಅವರು ವಿಚಾರಿಸಲ್ಪಡುವರು.
(14) ನಾವು ನೂಹರನ್ನು ಅವರ ಜನಾಂಗದೆಡೆಗೆ ಕಳುಹಿಸದೆವು. ಅವರು ಅವರ ನಡುವೆ ಒಂಬೈನೂರ ಐವತ್ತು ವರ್ಷಗಳ ಕಾಲ ವಾಸಿಸಿದರು.ಅನಂತರ ಅವರು ಅಕ್ರಮಿಗಳಾಗಿದ್ದ ಸ್ಥಿತಿಯಲ್ಲೇ ಜಲಪ್ರಳಯವು ಅವರನ್ನು ಬಂದಾವರಿಸಿತು.
(15) ಅನಂತರ ನಾವು ನೂಹರನ್ನು ಮತ್ತು ಹಡಗಿನಲ್ಲಿದ್ದವರನ್ನು ರಕ್ಷಿಸಿದೆವು ಮತ್ತು ಅದನ್ನು ಸರ್ವಲೋಕದವರಿಗೆ ಒಂದು ನಿದರ್ಶನವನ್ನಾಗಿ ಮಾಡಿದೆವು.
(16) ಇಬ್ರಾಹೀಮರು (ಸಂದೇಶವಾಹಕರಾಗಿ) ತಮ್ಮ ಜನಾಂಗದವರಿಗೆ ಹೇಳಿದ ಸಂದರ್ಭವನ್ನು ಸ್ಮರಿಸಿರಿ: ನೀವು ಅಲ್ಲಾಹನನ್ನು ಆರಾಧಿಸಿರಿ ಮತ್ತು ಅವನನ್ನು ಭಯಪಡಿರಿ. ನೀವು ಅರಿಯುವವರಾಗಿದ್ದರೆ ಇದು ನಿಮ್ಮ ಪಾಲಿಗೆ ಉತ್ತಮವಾಗಿದೆ.
(17) ನೀವು ಅಲ್ಲಾಹನ ಹೊರತು ವಿಗ್ರಹಗಳ ಆರಾಧನೆ ಮಾಡುತ್ತಿರುವಿರಿ ಮತ್ತು ಸುಳ್ಳುವಿಚಾರಗಳನ್ನು ಸೃಷ್ಟಿಸುತ್ತಿರುವಿರಿ. ವಾಸ್ತವದಲ್ಲಿ, ನೀವು ಅಲ್ಲಾಹನ ಹೊರತು ಯಾರನ್ನು ಕರೆದುಬೇಡುತ್ತೀರೋ ಅವರು ನಿಮ್ಮ ಜೀವನಾಧಾರದ ಒಡೆಯರಲ್ಲ. ಇನ್ನು ನೀವು ಅಲ್ಲಾಹನಲ್ಲೇ ಜೀವನಾಧಾರವನ್ನು ಅರಸಿರಿ ಮತ್ತು ಅವನನ್ನೇ ಆರಾಧಿಸಿರಿ ಮತ್ತು ಅವನಿಗೇ ಕೃತಜ್ಞತೆಯನ್ನು ಸಲ್ಲಿಸಿರಿ. ಕೊನೆಗೆ ನೀವು ಅವನೆಡೆಗೇ ಮರಳಿಸಲಾಗುವಿರಿ.
(18) ಇನ್ನು ನೀವು ಸುಳ್ಳಾಗಿಸುವುದಾದರೆ ನಿಮಗಿಂತ ಮುಂಚೆ ಹಲವು ಜನಾಂಗಗಳು ಸಹ ಸುಳ್ಳಾಗಿಸಿವೆ ಮತ್ತು ಸಂದೇಶವನ್ನು ಸುಸ್ಪಷ್ಟವಾಗಿ ತಲುಪಿಸುವ ಹೊರತು ಸಂದೇಶವಾಹಕರ ಮೇಲೆ ಯಾವ ಹೊಣೆಗಾರಿಕೆಯೂ ಇಲ್ಲ.
(19) ಅಲ್ಲಾಹನು ಸೃಷ್ಟಿಯನ್ನು ಆರಂಭಿಸುವುದು ನಂತರ ಅದನ್ನು ಪುನರಾವರ್ತಿಸುವುದು ಹೇಗೆಂಬುದನ್ನು ಇವರು ಕಾಣುವುದಿಲ್ಲವೇ? ವಾಸ್ತವದಲ್ಲಿ ಇದು ಅಲ್ಲಾಹನಿಗೆ ಅತ್ಯಂತ ಸರಳವಾಗಿದೆ.
(20) ಹೇಳಿರಿ: ನೀವು ಭೂಮಿಯಲ್ಲಿ ಸಂಚಿರಿಸಿ ನೋಡಿರಿ ಅವನು ಸೃಷ್ಟಿಯ ಆರಂಭ ಹೇಗೆ ಮಾಡುತ್ತಾನೆಂದು. ಅನಂತರ ಅಲ್ಲಾಹನೇ ಎರಡನೆ ಬಾರಿಯೂ ಸೃಷ್ಟಿಸುವವನಾಗಿದ್ದಾನೆ. ನಿಶ್ಚಯವಾಗಿಯು ಅಲ್ಲಾಹನು ಸರ್ವ ವಸ್ತುಗಳ ಮೇಲೆ ಸಮರ್ಥನಾಗಿದ್ದಾನೆ.
(21) ಅವನು (ಅವರವರ ಕರ್ಮಗಳ ನಿಮಿತ್ತ) ತಾನಿಚ್ಛಿಸಿದವರಿಗೆ ಶಿಕ್ಷಿಸುತ್ತಾನೆ ಮತ್ತು ತಾನಿಚ್ಛಿಸಿದವರಿಗೆ ಕರುಣೆ ತೋರಿಸುತ್ತಾನೆ. ನೀವೆಲ್ಲರೂ ಅವನೆಡೆಗೆ ಮರಳಿಸಲಾಗುವಿರಿ.
(22) ನೀವು ಭೂಮಿಯಲ್ಲಾಗಲೀ, ಆಕಾಶದಲ್ಲಾಗಲೀ ಅವನನ್ನು ಸೋಲಿಸಲಾರಿರಿ. ಅಲ್ಲಾಹನನ್ನು ಬಿಟ್ಟು ಯಾವ ರಕ್ಷಕ ಮಿತ್ರನಾಗಲೀ, ಸಹಾಯಕನಾಗಲೀ ನಿಮಗಿರುವುದಿಲ್ಲ.
(23) ಅಲ್ಲಾಹನ ಸೂಕ್ತಿಗಳನ್ನು ಮತ್ತು ಅವನ ಭೇಟಿಯನ್ನು ನಿಷೇಧಿಸಿದವರು ನನ್ನ ಕೃಪೆಯಿಂದ ನಿರಾಶೆ ಹೊಂದಿದ್ದಾರೆ ಮತ್ತು ಅವರಿಗೆ ವೇದನಾಜನಕ ಯಾತನೆಯಿದೆ.
(24) “ನೀವು ಅವನನ್ನು (ಇಬ್ರಾಹೀಮನನ್ನು) ಕೊಂದು ಹಾಕಿರಿ. ಇಲ್ಲವೇ ಸುಟ್ಟು ಹಾಕಿರಿ” ಎನ್ನುವುದನ್ನು ಬಿಟ್ಟು ಅವರ ಜನಾಂಗದವರ ಉತ್ತರ ಬೇರೇನಿರಲಿಲ್ಲ. ಆದರೆ ಅಲ್ಲಾಹನು ಅವರನ್ನು ಅಗ್ನಿಯಿಂದ ರಕ್ಷಿಸಿದನು. ನಿಸ್ಸಂದೇಹವಾಗಿಯು ಸತ್ಯವಿಶ್ವಾಸವಿರಿಸುವ ಜನರಿಗೆ ಇದರಲ್ಲಿ ಹಲವಾರು ನಿದರ್ಶನಗಳಿವೆ.
(25) ಪೈಗಂಬರ್ ಇಬ್ರಾಹೀಮ್ ಹೇಳಿದರು: ನೀವು ಅಲ್ಲಾಹನ ಹೊರತು ಆರಾಧಿಸುತ್ತಿರುವ ವಿಗ್ರಹಗಳನ್ನು ಪರಸ್ಪರ ಲೌಕಿಕ ಮಿತ್ರತ್ವಕ್ಕಾಗಿ ನಿಶ್ಚಯಿಸಿರುತ್ತೀರಿ. ಆದರೆ ಪುನರುತ್ಥಾನ ದಿನದಂದು ನೀವು ಪರಸ್ಪರ ಒಬ್ಬರು ಇನ್ನೊಬ್ಬರನ್ನು ನಿರಾಕರಿಸಿ ಬಿಡುವಿರಿ ಮತ್ತು ಪರಸ್ಪರರನ್ನು ಶಪಿಸತೊಡಗುವಿರಿ. ನಿಮ್ಮ ಅಭಯ ತಾಣವು ನರಕಾಗ್ನಿಯಾಗಿದೆ ಮತ್ತು ನಿಮಗೆ ಯಾವ ಸಹಾಯಕರೂ ಇರಲಾರರು.
(26) ಲೂತರು ಅವರಲ್ಲಿ ವಿಶ್ವಾಸವಿರಿಸಿದರು ಮತ್ತು ಇಬ್ರಾಹೀಮರು ಹೇಳಿದರು: ನಾನು ನನ್ನ ಪ್ರಭುವಿನೆಡೆಗೆ ವಲಸೆ ಹೋಗಲಿರುವೆನು. ಅವನು ಮಹಾ ಪ್ರಚಂಡನೂ, ಸುಜ್ಞಾನಿಯೂ ಆಗಿರುವನು.
(27) ತರುವಾಯ ನಾವು ಅವರಿಗೆ ಇಸ್ಹಾಕ್ ಮತ್ತು ಯಾಕೂಬ್ರನ್ನು ದಯಪಾಲಿಸಿದೆವು ಮತ್ತು ಪ್ರವಾದಿತ್ವವನ್ನು ಗ್ರಂಥವನ್ನು ಅವರ ಸಂತತಿಗಳಲ್ಲಿ ನಿಶ್ಚಯಿಸಿದೆವು ಮತ್ತು ಅವರಿಗೆ ಇಹಲೋಕದಲ್ಲೂ ಪ್ರತಿಫಲವನ್ನು ದಯಪಾಲಿಸಿದೆವು ಮತ್ತು ಪರಲೋಕದಲ್ಲಿ ಖಂಡಿತವಾಗಿಯು ಅವರು ಸದಾಚಾರಿಗಳಲ್ಲಾಗಿರುವರು.
(28) ಲೂತ್ ತಮ್ಮ ಜನಾಂಗದವರಿಗೆ ಹೇಳಿದ ಸಂದರ್ಭವನ್ನು ಸ್ಮರಿಸಿರಿ: ನಿಮಗಿಂತ ಮುಂಚೆ ಲೋಕದವರಲ್ಲಿ ಯಾರು ಮಾಡಿರದಂತಹ ನೀಚಕೃತ್ಯವನ್ನು ನೀವು ಮಾಡುತ್ತಿರುವಿರಿ.
(29) ನೀವು ಕಾಮೇಚ್ಛೆಗಾಗಿ ಪರುಷರನ್ನು ಸಮೀಪಿಸುತ್ತಿರುವಿರಾ?ಮತ್ತು ದರೋಡೆ ಮಾಡುತ್ತಿರುವಿರಾ? ಹಾಗೂ ನಿಮ್ಮ ಸಭೆಗಳಲ್ಲಿ ನಿರ್ಲಜ್ಜೆಯ ಕೃತ್ಯವನ್ನು ಎಸಗುತ್ತಿರುವಿರಾ? ಆದರೆ ಅವರ ಜನಾಂಗದವರ ಉತ್ತರ ನೀನು ಸತ್ಯವಂತನಾಗಿದ್ದರೆ ಅಲ್ಲಾಹನ ಯಾತನೆಯನ್ನು ನಮ್ಮಲ್ಲಿಗೆ ತಾ. ಎಂಬುದರ ಹೊರತು ಬೇರೆನಿರಲಿಲ್ಲ.
(30) ಆಗ ಲೂತರು ಪ್ರಾರ್ಥಿಸಿದರು: ಓ ನನ್ನ ಪ್ರಭುವೇ, ನೀನು ಈ ದುಷ್ಟ ಜನರ ವಿರುದ್ದ ನನಗೆ ಸಹಾಯ ಮಾಡು.
(31) ಮತ್ತು ನಮ್ಮ ದೂತರು ಇಬ್ರಾಹೀಮರ ಬಳಿಗೆ ಸುವಾರ್ತೆಯೊಂದಿಗೆ ಬಂದಾಗ ಹೇಳಿದರು: ನಾವು ಆ (ಲೂತರ) ನಾಡಿನ ಜನರನ್ನು ನಾಶಮಾಡುವವರಿದ್ದೇವೆ. ನಿಜವಾಗಿಯೂ ಅಲ್ಲಿನ ಜನರು ಅಪರಾಧಿಗಳಾಗಿದ್ದಾರೆ.
(32) ಇಬ್ರಾಹೀಮರು ಹೇಳಿದರು: ಅಲ್ಲಿ ಲೂತರು ಇದ್ದಾರೆ. ದೂತರು ಹೇಳಿದರು: ಅಲ್ಲಿರುವವರ ಕುರಿತು ನಾವು ಚೆನ್ನಾಗಿಬಲ್ಲೆವು. ನಾವು ಲೂತರನ್ನು ಮತ್ತು ಅವರ ಕುಟುಂಬವನ್ನು ರಕ್ಷಿಸುವೆವು. ಆದರೆ ಅವರ ಪತ್ನಿಯ ಹೊರತು, ಅವಳು ಹಿಂದುಳಿಯವವ ರಲ್ಲಾಗಿರುವಳು.
(33) ಅನಂತರ ನಮ್ಮ ದೂತರು ಲೂತರ ಬಳಿ ಬಂದಾಗ ಅವರು ಅವರ ನಿಮಿತ್ತ ಸಂಕಟಕ್ಕೊಳಗಾದರು ಮತ್ತು ಒಳಗೊಳಗೇ ಇಕ್ಕಟ್ಟು ಅನುಭವಿಸತೊಡಗಿದರು. ಆದರೆ ದೂತರು ಹೇಳಿದರು: ನೀವು ಭಯ ಪಡಬೇಡಿ, ಮತ್ತು ವ್ಯಥೆಪಡುವುದು ಬೇಡ. ನಾವು ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ರಕ್ಷಿಸಲಿದ್ದೇವೆ. ಆದರೆ ನಿಮ್ಮ ಪತ್ನಿಯ ಹೊರತು ಅವಳು ಹಿಂದುಳಿಯುವರಲ್ಲಾಗಿ ರುವಳು.
(34) ಈ ನಾಡಿನವರ ಮೇಲೆ ಅವರು ಆಜ್ಞೋಲ್ಲಂಘನೆ ಮಾಡುತ್ತಿದ್ದುದರ ನಿಮಿತ್ತ ನಾವು ಆಕಾಶದಿಂದ ಯಾತನೆಯನ್ನು ಇಳಿಸುವವರಿದ್ದೇವೆ.
(35) ಚಿಂತಕರಿಗೆ ನಾವು ಆ ನಾಡನ್ನು ಸುಸ್ಪಷ್ಟ ನಿದರ್ಶನವನ್ನಾಗಿ ಮಾಡಿದೆವು.
(36) ಮದ್ಯನ್ನೆಡೆಗೆ ಅವರ ಸಹೋದರ ಶುಐಬರನ್ನು ಕಳುಹಿಸಿದೆವು ಅವರು ಹೇಳಿದರು: ಓ ನನ್ನ ಜನಾಂಗದವರೇ, ನೀವು ಅಲ್ಲಾಹನನ್ನು ಆರಾಧಿಸಿರಿ. ಅಂತಿಮ ದಿನವನ್ನು ನಿರೀಕ್ಷಿಸಿರಿ ಮತ್ತು ಭೂಮಿಯಲ್ಲಿ ಕ್ಷೆÆÃಭೆ ಹರಡುತ್ತಾ ತಿರುಗದಿರಿ.
(37) ಆದರೆ ಅವರು ಅವರನ್ನು ಸುಳ್ಳಾಗಿಸಿದರು. ಕೊನೆಗೆ ಅವರನ್ನು ಒಂದು ಭಯಂಕರ ಭೂಕಂಪವು ಹಿಡಿದು ಬಿಟ್ಟಿತು ಮತ್ತು ಅವರು ತಮ್ಮ ಮನೆಗಳಲ್ಲಿ ಅಧೋಮುಖಿಗಳಾಗಿ ಬಿದ್ದಿದ್ದರು.
(38) ನಾವು ಆದ್ ಮತ್ತು ಸಮೂದ್ ಜನಾಂಗಗಳನ್ನು ಸಹ ನಾಶಮಾಡಿದೆವು ಅವರ ವಸತಿಗಳಿಂದ ನಿಮಗೆ ಸ್ಪಷ್ಟವಾಗಿದೆ. ಶೈತಾನನು ಅವರ ದುಷ್ಕರ್ಮಗಳನ್ನು ಅವರಿಗೆ ಮನಮೋಹಕವಾಗಿ ತೋರಿಸಿದ್ದನು ಮತ್ತು ಅವರನ್ನು ಸನ್ಮಾರ್ಗದಿಂದ ತಡೆದಿದ್ದನು; ವಸ್ತುತಃ ಅವರು ಬುದ್ಧಿಯುಳ್ಳವರಾಗಿದ್ದರು.
(39) ಕಾರೂನ್, ಫಿರ್ಔನ್ ಹಾಗೂ ಹಾಮಾನರನ್ನೂ ನಾವು ನಾಶಗೊಳಿಸಿದೆವು. ಅವರ ಬಳಿಗೆ ಮೂಸಾರವರು ಸುಸ್ಪಷ್ಟ ಪುರಾವೆಗಳೊಂದಿಗೆ ಬಂದಿದರು. ಅದಾಗ್ಯೂ ಅವರು ಭೂಮಿಯಲ್ಲಿ ಉದ್ಧಟತನ ತೋರಿದರು. ಆದರೆ ಅವರಿಗೆ ನಮ್ಮಿಂದ ತಪ್ಪಿಸಿಕೊಳ್ಳಲಾಗಲಿಲ್ಲ.
(40) ಅನಂತರ ಪ್ರತಿಯೊಬ್ಬನನ್ನೂ ನಾವು ಅವನವನ ಪಾಪದ ಪರಿಣಾಮವಾಗಿ ಹಿಡಿದು ಬಿಟ್ಟೆವು. ಅವರ ಪೈಕಿ ಕೆಲವರ ಮೇಲೆ ನಾವು ಕಲ್ಲುಗಳ ಮಳೆಯನ್ನು ವರ್ಷಿಸಿದೆವು ಕೆಲವರನ್ನು ಮಹಾ ಘೋರ ಆರ್ಭಟವು ಹಿಡಿದು ಬಿಟ್ಟಿತು ಮತ್ತು ಕೆಲವರನ್ನು ಭೂಮಿಯೊಳಗೆ ಹುದುಗಿಸಿಬಿಟ್ಟೆವು. ಇನ್ನೂ ಕೆಲವರನ್ನು ಮುಳಿಗಿಸಿಬಿಟ್ಟೆವು. ಅಲ್ಲಾಹನು ಅವರ ಮೇಲೆ ಅಕ್ರಮವೆಸುವವನಾಗಿರಲಿಲ್ಲ. ಆದರೆ ಅವರೇ ತಮ್ಮ ಮೇಲೆ ಅಕ್ರಮವೆಸಗುತ್ತಿದ್ದರು.
(41) ಅಲ್ಲಾಹನನ್ನು ಬಿಟ್ಟು ಇತರರನ್ನು ರಕ್ಷಕ ಮಿತ್ರರನ್ನಾಗಿ ಮಾಡಿಕೊಂಡಿರುವವರ ಉಪಮೆಯು ಒಂದು ಜೇಡರ ಹುಳದಂತೆ. ಅದೊಂದು ಮನೆಯನ್ನು ನಿರ್ಮಿಸುತ್ತದೆ. ವಸ್ತುತಃ ಸಕಲ ಮನೆಗಳಿಗಿಂತ ದುರ್ಬಲ ಮನೆಯು ಜೇಡರ ಮನೆಯಾಗಿದೆ. ಅವರು ಅರಿಯುವವರಾಗಿದ್ದರೇ!
(42) ನಿಶ್ಚಯವಾಗಿಯು ಅಲ್ಲಾಹನು ತನ್ನ ಹೊರತು ಅವರು ಕರೆದು ಬೇಡುತ್ತಿರುವುದನ್ನು ಅರಿಯುತ್ತಾನೆ ಮತ್ತು ಅವನು ಪ್ರಚಂಡನು, ಸುಜ್ಞಾನಿಯು ಆಗಿದ್ದಾನೆ.
(43) ನಾವು ಈ ಉಪಮೆಗಳನ್ನು ಜನರಿಗೆ ವಿವರಿಸಿಕೊಡುತ್ತೇವೆ. ಅವುಗಳನ್ನು ಜ್ಞಾನಿಗಳು ಮಾತ್ರ ತಿಳಿದು ಕೊಳ್ಳುತ್ತಾರೆ.
(44) ಅಲ್ಲಾಹನು ಆಕಾಶಗಳನ್ನೂ, ಭೂಮಿಯನ್ನೂ ಸತ್ಯದೊಂದಿಗೆ ಸೃಷ್ಟಿಸಿದ್ದಾನೆ. ನಿಶ್ಚಯವಾಗಿಯು ಸತ್ಯವಿಶ್ವಾಸಿಗಳಿಗೆ ಇದರಲ್ಲಿ ಮಹಾ ಪುರಾವೆಯಿದೆ.
(45) (ಓ ಪೈಗಂಬರರೇ) ನಿಮ್ಮೆಡೆಗೆ ಸಂದೇಶ ನೀಡಲಾಗುತ್ತಿರುವ ಗ್ರಂಥದಿAದ ನೀವು ಓದಿ ಹೇಳಿರಿ ಮತ್ತು ನಮಾಝ್ ಸಂಸ್ಥಾಪಿಸಿರಿ. ನಿಜವಾಗಿಯು ನಮಾಝ್ ನಿರ್ಲಜ್ಜೆ ಮತ್ತು ಕೆಡುಕುಗಳಿಂದ ತಡೆಯುತ್ತದೆ. ನಿಸ್ಸಂಶಯವಾಗಿಯು ಅಲ್ಲಾಹನ ಸ್ಮರಣೆಯು ಅತ್ಯಂತ ಹಿರಿದಾದುದಾಗಿದೆ ಮತ್ತು ಅಲ್ಲಾಹನು ನೀವು ಮಾಡುತ್ತಿರುವುದನ್ನೆಲ್ಲ ಅರಿಯುತ್ತಾನೆ.
(46) ಸತ್ಯವಿಶ್ವಾಸಿಗಳೇ, ಗ್ರಂಥದವರೊಡನೆ ಅತ್ಯುತ್ತಮ ರೀತಿಯಲ್ಲೇ ನೀವು ವಾಗ್ವಾದ ನಡೆಸಿರಿ. ಆದರೆ ಅವರ ಪೈಕಿ ಅಕ್ರಮವೆಸಗಿದವರ ಹೊರತು ಮತ್ತು ಹೇಳಿರಿ: ಓ ಗ್ರಂಥದವರೇ ನಮ್ಮೆಡೆಗೆ ಅವತೀರ್ಣ ಗೊಳಿಸಲಾದುದರಲ್ಲೂ, ನಿಮ್ಮೆಡೆಗೆ ಅವರ್ತೀಣ ಗೊಳಿಸಲಾದುದರಲ್ಲೂ ನಾವು ವಿಶ್ವಾಸಿರಿಸಿದೆವು. ಮತ್ತು ನಮ್ಮ ಹಾಗೂ ನಿಮ್ಮ ಆರಾಧ್ಯನು ಒಬ್ಬನೇ ಆಗಿದ್ದಾನೆ ಮತ್ತು ನಾವು ಅವನ ಆಜ್ಞಾಪಾಲಕರಾಗಿದ್ದೇವೆ.
(47) (ಓ ಪೈಗಂಬರರೇ) ನಾವು ಇದೇ ರೀತಿ ನಿಮ್ಮೆಡೆಗೆ ಈ ಗ್ರಂಥವನ್ನು ಅವತೀರ್ಣಗೊಳಿಸಿರುತ್ತೇವೆ. ಇದಕ್ಕೆ ಮೊದಲು ನಾವು ಗ್ರಂಥವನ್ನು ನೀಡಲ್ಪಟ್ಟವರು ಇದರಲ್ಲಿ (ಕುರ್ಆನಿನಲ್ಲಿ) ವಿಶ್ವಾಸವಿರಿಸುತ್ತಾರೆ ಮತ್ತು ಇವರ (ಈ ಬಹುದೇವಾರಾಧಕರ) ಪೈಕಿಯು ಕೆಲವರು ಇದರಲ್ಲಿ ವಿಶ್ವಾಸವಿರಿಸುತ್ತಾರೆ. ಇನ್ನು ನಮ್ಮ ಸೂಕ್ತಿಗಳನ್ನು ಕೇವಲ ಸತ್ಯನಿಷೇಧಿಗಳು ಮಾತ್ರ ನಿಷೇಧಿಸುತ್ತಾರೆ.
(48) ಇದಕ್ಕೆ ಮೊದಲು ನೀವು ಯಾವ ಗ್ರಂಥವನ್ನು ಓದುತ್ತಿರಲಿಲ್ಲ ಮತ್ತು ಅದನ್ನು ನಿಮ್ಮ ಬಲಗೈಯಿಂದ ಬರೆಯುತ್ತಿರಲಿಲ್ಲ. ಹಾಗೇನಾದರೂ ಇದ್ದರೆ ಈ ಮಿಥ್ಯವಾದಿಗಳು ಸಂದೇಹಕ್ಕೊಳಗಾಗುತ್ತಿದ್ದರು.
(49) ಆದರೆ, ಇದು (ಈ ಕುರ್ಆನ್) ಜ್ಞಾನಿಗಳ ಹೃದಯಗಳಲ್ಲಿ ಸುರಕ್ಷಿತವಾಗಿರುವ ಸುಸ್ಪಷ್ಟ ಸೂಕ್ತಿಗಳಾಗಿವೆ. ಅಕ್ರಮಿಗಳ ಹೊರತು ನಮ್ಮ ಸೂಕ್ತಿಗಳನ್ನು ಇನ್ನಾರೂ ನಿಷೇಧಿಸುವುದಿಲ್ಲ.
(50) ಸತ್ಯನಿಷೇಧಿಗಳು ಹೇಳಿದರು: ಇವನ ಮೇಲೆ ಇವನ ಪ್ರಭುವಿನಿಂದ ಕೆಲವು ದೃಷ್ಟಾಂತಗಳು ಏಕೆ ಇಳಿಸಲಾಗಿಲ್ಲ? ಹೇಳಿರಿ: ದೃಷ್ಟಾಂತಗಳೆಲ್ಲವೂ ಅಲ್ಲಾಹನ ಬಳಿಯಿವೆ. ನಾನು ಕೇವಲ ಸುಸ್ಪಷ್ಟವಾಗಿ ಮುನ್ನೆಚ್ಚರಿಕೆ ನೀಡುವವನಾಗಿದ್ದೇನೆ.
(51) ಅವರ ಮೇಲೆ ಪಠಿಸಲಾಗುತ್ತಿರುವಂತಹ ಗ್ರಂಥವನ್ನು ನಾವು ನಿನಗೆ ನೀಡಿರುತ್ತೇವೆಂಬುದು ಅವರಿಗೆ ಸಾಲದೇ? ಇದರಲ್ಲಿ ವಿಶ್ವಾಸವಿರಿಸುವ ಜನರಿಗೆ ಕಾರುಣ್ಯವು ಉದ್ಭೋಧೆಯು ಇದೆ.
(52) ಹೇಳಿರಿ: ನನ್ನ ಮತ್ತು ನಿಮ್ಮ ನಡುವೆ ಸಾಕ್ಷಿಯಾಗಿ ಅಲ್ಲಾಹನೇ ಸಾಕು. ಅವನು ಭೂಮಿ, ಆಕಾಶಗಳಲ್ಲಿರುವ ಸಕಲ ವಿಷಯಗಳ ಅರಿವುಳ್ಳವನಾಗಿದ್ದಾನೆ. ಮಿಥ್ಯದಲ್ಲಿ ವಿಶ್ವಾಸವನ್ನಿರಿಸಿರುವವರು ನಷ್ಟ ಹೊಂದಿದವರಾಗಿರುತ್ತಾರೆ.
(53) ಇವರು ನಿಮ್ಮಿಂದ ಯಾತನೆಗೆ ಆತುರ ಪಡುತ್ತಿದ್ದಾರೆ ನಿಶ್ಚಿತ ಕಾಲಾವಧಿಯೇನಾದರೂ ಇಲ್ಲದಿರುತ್ತಿದ್ದರೆ ಕೂಡಲೇ ಅವರ ಬಳಿಗೆ ಯಾತನೆಯು ಬಂದು ಬಿಡುತ್ತಿತ್ತು. ಖಂಡಿತವಾಗಿಯೂ ಅದು ಅವರಲ್ಲಿಗೆ ಅವರು ಊಹಿಸದಿರುವ ಸ್ಥಿತಿಯಲ್ಲೇ ಹಠಾತ್ತನೆ ಬಂದು ಬಿಡುವುದು.
(54) ಇವರು ನಿಮ್ಮಿಂದ ಯಾತನೆಗೆ ಆತುರ ಪಟ್ಟುಕೊಳ್ಳುತ್ತಿದ್ದಾರೆ ನಿಶ್ಚಯವಾಗಿಯು ನರಕವು ಸತ್ಯನಿಷೇಧಿಗಳನ್ನು ಸುತ್ತುವರಿದಿದೆ.
(55) ಅವರ ಮೇಲ್ಗಡೆಯಿಂದಲೂ ಅವರ ಕಾಲಡಿಯಿಂದಲೂ ಯಾತನೆಯು ಅವರನ್ನು ಆವರಿಸುವ ದಿನ, ಅಲ್ಲಾಹನು ಹೇಳುವನು: ಇನ್ನು ನೀವು ನಿಮ್ಮ ಕೃತ್ಯಗಳ ರುಚಿಯನ್ನು ಅನುಭವಿಸಿರಿ.
(56) ಓ ನನ್ನ ಸತ್ಯವಿಶ್ವಾಸಿ ದಾಸರೇ, ನಿಸ್ಸಂಶಯವಾಗಿಯು ನನ್ನ ಭೂಮಿಯು ವಿಶಾಲವಾಗಿದೆ. ಆದ್ದರಿಂದ ನೀವು ನನ್ನನ್ನೇ ಆರಾಧಿಸಿರಿ.
(57) ಪ್ರತಿಯೊಂದು ಜೀವಿಯು ಮರಣದ ರುಚಿ ಸವಿಯಬೇಕಾಗಿದೆ. ತರುವಾಯ ನೀವೆಲ್ಲರೂ ನಮ್ಮೆಡೆಗೇ ಮರಳಿಸಲಾಗುವಿರಿ.
(58) ಯಾರು ಸತ್ಯವಿಶ್ವಾಸಿವಿರಿಸಿ ಸತ್ಕರ್ಮಗಳನ್ನು ಕೈಗೊಂಡರೋ ಖಂಡಿತ ನಾವು ಅವರಿಗೆ ಸ್ವರ್ಗೋದ್ಯಾನದ ಉನ್ನತ ಭವನಗಳಲ್ಲಿ ನೆಲೆಸುವೆವು. ಅವುಗಳ ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವುವು. ಅವರು ಅಲ್ಲಿ ಶಾಶ್ವತವಾಗಿರುವರು. ಸತ್ಕರ್ಮವೆಸಗುವವರ ಪ್ರತಿಫಲವು ಅದೆಷ್ಟು ಉತ್ತಮವಾದುದು.
(59) ಅವರು ಸಹನೆ ವಹಿಸಿದವರು, ತಮ್ಮ ಪ್ರಭುವಿನ ಮೇಲೆ ಭರವಸೆಯನ್ನಿಟ್ಟಿರುವವರು ಆಗಿದ್ದಾರೆ.
(60) ತಮ್ಮ ಆಹಾರವನ್ನು ಹೊತ್ತು ನಡೆಯದ ಅದೆಷ್ಟೋ ಜೀವಿಗಳಿವೆ. ಅಲ್ಲಾಹನು ಅವುಗಳಿಗೂ ಮತ್ತು ನಿಮಗೂ ಆಹಾರ ನೀಡುತ್ತಾನೆ ಮತ್ತು ಅವನು ಸರ್ವವನ್ನಾಲಿಸುವವನು, ಚೆನ್ನಾಗಿ ಅರಿಯುವವನು ಆಗಿದ್ದಾನೆ.
(61) ಭೂಮಿ, ಆಕಾಶಗಳನ್ನು ಸೃಷ್ಟಿಸಿದವನು ಮತ್ತು ಸೂರ್ಯನನ್ನೂ, ಚಂದ್ರನನ್ನೂ ಅಧೀನಗೊಳಿಸಿದವನು ಯಾರೆಂದು ನೀವು ಅವರೊಡನೆ ಕೇಳಿದರೆ ಖಂಡಿತ ಅವರು ಅಲ್ಲಾಹ್ ಎಂದೇ ಉತ್ತರಿಸುತ್ತಾರೆ. ಹಾಗಿದ್ದೂ ಅವರೆತ್ತ ಅಲೆದಾಡಿಸಲಾಗುತ್ತಿದ್ದಾರೆ?
(62) ಅಲ್ಲಾಹನು ತನ್ನ ದಾಸರ ಪೈಕಿ ತಾನಿಚ್ಛಿಸಿದವರಿಗೆ ಜೀವನಾಧಾರವನ್ನು ವಿಶಾಲಗೊಳಿಸುತ್ತಾನೆ ಹಾಗೂ ತಾನಿಚ್ಛಿಸಿದವರಿಗೆ ಸೀಮಿತಗೊಳಿಸುತ್ತಾನೆ. ನಿಶ್ಚಯವಾಗಿಯು ಅಲ್ಲಾಹನು ಸಕಲ ವಸ್ತುಗಳ ಅರಿವುಳ್ಳವನಾಗಿದ್ದಾನೆ.
(63) ನೀವು ಅವರೊಡನೆ ಆಕಾಶದಿಂದ ನೀರನ್ನು ಸುರಿಸಿ ಭೂಮಿಯನ್ನು ಅದರ ನಿರ್ಜೀವದ ನಂತರ ಜೀವಕೊಟ್ಟವನು ಯಾರೆಂದು ಕೇಳಿದರೆ ಖಂಡಿತ ಅವರು ಅಲ್ಲಾಹ್ ಎಂದೇ ಉತ್ತರಿಸುತ್ತಾರೆ. ನೀವು ಹೇಳಿರಿ: ಸರ್ವಸ್ತುತಿಯು ಅಲ್ಲಾಹನಿಗೇ ಮೀಸಲು. ಆದರೆ ಅವರಲ್ಲಿ ಹೆಚ್ಚಿನವರು ಬುದ್ಧಿಶೂನ್ಯರಾಗಿದ್ದಾರೆ.
(64) ಈ ಲೌಕಿಕ ಜೀವನವು ಕೇವಲ ಆಟ, ವಿನೋದವಾಗಿದೆ. ಪರಲೋಕ ಭವನದ ಜೀವನವೇ ಯತಾರ್ಥ ಜೀವನವಾಗಿದೆ. ಅವರು ಅರಿಯುತ್ತಿದ್ದರೆ!
(65) ಬಹುದೇವಾರಾಧಕರು ಹಡಗುಗಳಲ್ಲಿ ಸಂಚರಿಸುವಾಗ ತಮ್ಮ ಧರ್ಮವನ್ನು ಅಲ್ಲಾಹನಿಗೇ ಮೀಸಲಿಟ್ಟು ಅವನನ್ನು ಕರೆದು ಪ್ರಾರ್ಥಿಸುತ್ತಾರೆ. ಆದರೆ ಅವನು ಅವರನ್ನು ರಕ್ಷಿಸಿ ದಡಕ್ಕೆ ಸೇರಿಸಿದರೆ ಕೂಡಲೇ ಅವರು ಸಹಭಾಗಿಗಳನ್ನು ಕಲ್ಪಿಸತೊಡಗುತ್ತಾರೆ.
(66) ಇದು ನಾವು ಅವÀರಿಗೆ ದಯಪಾಲಿಸಿರುವ ಅನುಗ್ರಹಗಳಿಗೆ ಕೃತಘ್ನತೆ ತೋರಲೆಂದೂ, ಸುಖಾಡಂಬರಗಳನ್ನು ಅನುಭವಿಸಲೆಂದೂ ಆಗಿದೆ. ಅವರು ಸದ್ಯದಲ್ಲೇ ಅರಿಯಲಿದ್ದಾರೆ.
(67) ನಾವು 'ಹರಮ್' (ಮಕ್ಕಾ ಪ್ರದೇಶವನ್ನು) ಅನ್ನು ನಿರ್ಭಯ ತಾಣವನ್ನಾಗಿ ಮಾಡಿದ್ದೇವೆಂದು ಅವರು ನೋಡುವುದಿಲ್ಲವೇ? ವಸ್ತುತಃ ಅದರ ಸುತ್ತ ಮುತ್ತಲಿನ ಜನರು ಅಪಹರಿಸಲ್ಪಡುತ್ತಿದ್ದಾರೆ. ಅದಾಗ್ಯೂ ಅವರು ಮಿಥ್ಯದಲ್ಲಿ ವಿಶ್ವಾಸವಿಟ್ಟು ಅಲ್ಲಾಹನ ಅನುಗ್ರಹಗಳಿಗೆ ಕೃತಘ್ನತೆ ತೋರುತ್ತಿದ್ದಾರೆಯೇ?
(68) ಅಲ್ಲಾಹನ ಮೇಲೆ ಸುಳ್ಳಾಗಿಸಿದವನಿಗಿಂತ ದೊಡ್ಡ ಅಕ್ರಮಿಯು ಇನ್ನಾರಿದ್ದಾನೆ? ಇಂತಹ ಸತ್ಯ ನಿಷೇಧಿಗಳ ತಂಗುದಾಣವು ನರಕದಲ್ಲಿಲ್ಲವೇ?
(69) ನಮಗಾಗಿ ಹೋರಾಡುವವರಿಗೆ ನಾವು ನಮ್ಮ ಮಾರ್ಗಗಳನ್ನು ಖಂಡಿತ ತೋರಿಸಿ ಕೊಡಲಿದ್ದೇವೆ. ನಿಶ್ಚಯವಾಗಿಯು ಅಲ್ಲಾಹನು ಸಜ್ಜನರ ಜೊತೆಯಲ್ಲಿದ್ದಾನೆ.