3 - Aal-i-Imraan ()

|

(1) ಅಲಿಫ್ ಲಾಮ್ ಮೀಮ್

(2) ಅಲ್ಲಾಹ್ ಅವನ ಹೊರತು ಅನ್ಯ ನೈಜ ಆರಾಧ್ಯನಿಲ್ಲ ಅವನು ಚಿರಂತನನು, ಸರ್ವ ನಿಯಂತ್ರಕನಾಗಿದ್ದಾನೆ.

(3) ಅವನು ನಿಮ್ಮ ಮೇಲೆ ತನ್ನ ಮುಂಚಿನ ಗ್ರಂಥಗಳನ್ನು ಸತ್ಯವೆಂದು ದೃಢೀಕರಿಸುವಂತಹ ಗ್ರಂಥವನ್ನು ಸತ್ಯದೊಂದಿಗೆ ಅವತೀರ್ಣಗೊಳಿಸಿರುತ್ತಾನೆ.

(4) ಇದಕ್ಕಿಂತ ಮುಂಚೆ ಜನರ ಮಾರ್ಗದರ್ಶನಕ್ಕಾಗಿ ತೌರಾತ್ ಹಾಗೂ ಇಂಜೀಲನ್ನು ಅವತೀರ್ಣಗೊಳಿಸಿದನು. ಮತ್ತು ಅವನೇ ಸತ್ಯಾಸತ್ಯತೆಯ ಮಾನದಂಡವಾಗಿ ಖುರ್‌ಆನನ್ನು ಅವತೀರ್ಣಗೊಳಿಸಿರುತ್ತಾನೆ. ಖಂಡಿತವಾಗಿಯು ಅಲ್ಲಾಹನ ಸೂಕ್ತಿಗಳನ್ನು ನಿಷೇಧಿಸಿದವರಿಗೆ ಉಗ್ರ ಶಿಕ್ಷೆ ಇದೆ. ಮತ್ತು ಅಲ್ಲಾಹನು ಪ್ರತಾಪಶಾಲಿಯು, ಪ್ರತಿಕಾರ ತೀರಿಸಿಕೊಳ್ಳುವವನು ಆಗಿದ್ದಾನೆ.

(5) ಖಂಡಿತವಾಗಿಯೂ ಭೂಮಿ ಮತ್ತು ಆಕಾಶಗಳ ಯಾವ ವಸ್ತುವೂ ಅಲ್ಲಾಹನಿಂದ ಮರೆಯಾಗಿಲ್ಲ.

(6) ಅವನೇ ತಾಯಿಯ ಗರ್ಭಾಶಯದಲ್ಲಿ ತಾನಿಚ್ಛಿಸುವ ರೀತಿಯಲ್ಲಿ ನಿಮಗೆ ರೂಪ ಕೊಡುತ್ತಾನೆ. ಅವನ ಹೊರತು ಅನ್ಯ ನೈಜ ಆರಾಧ್ಯನಿಲ್ಲ. ಅವನು ಪ್ರತಾಪಶಾಲಿಯು, ಯುಕ್ತಿಪೂರ್ಣನು ಆಗಿದ್ದಾನೆ.

(7) ಓ ಪೈಗಂಬರರೇ ಅವನೇ ನಿಮ್ಮ ಮೇಲೆ ಗ್ರಂಥವನ್ನು ಅವತೀರ್ಣಗೊಳಿಸಿದನು. ಅದರಲ್ಲಿ ಸುಸ್ಪಷ್ಟವಾದ ಸದೃಢ ಸೂಕ್ತಿಗಳಿವೆ ಅವು ಗ್ರಂಥದ ಮೂಲವಾಗಿವೆ ಮತ್ತು ಕೆಲವು ಅಸ್ಪಷ್ಟ (ಬಹು ಅರ್ಥದ) ಸೂಕ್ತಿಗಳಿವೆ ಆದರೆ ಹೃದಯಗಳಲ್ಲಿ ವಕ್ರತೆ ಇರುವವರು ಗೊಂದಲವನ್ನುAಟು ಮಾಡಲು ಮತ್ತು ಅವುಗಳ ದುರ್ವ್ಯಾಖ್ಯಾನದ ಉದ್ದೇಶದಿಂದ ಪರಸ್ಪರ ಅಸ್ಪಷ್ಟವಿರುವ ಸೂಕ್ತಿಗಳನ್ನು ಅನುಸರಿಸುತ್ತಾರೆ. ವಸ್ತುತಃ ಅವುಗಳ ನೈಜ ವ್ಯಾಖ್ಯಾನವು ಅಲ್ಲಾಹನ ಹೊರತು ಇನ್ನಾರಿಗೂ ತಿಳಿದಿಲ್ಲ. ನಿಖರ ಹಾಗೂ ಸದೃಢ ಜ್ಞಾನವುಳ್ಳವರು, ನಾವು ಅವುಗಳಲ್ಲಿ ವಿಶ್ವಾಸವಿಟ್ಟಿದ್ದೇವೆ. ಅವು ನಮ್ಮ ಪ್ರಭುವಿನ ಕಡೆಯಿಂದಾಗಿದೆ ಎಂದೇ ಹೇಳುತ್ತಾರೆ. ಮತ್ತು ಕೇವಲ ಬುದ್ಧಿವಂತರು ಮಾತ್ರ ಉಪದೇಶ ಸ್ವೀಕರಿಸುತ್ತಾರೆ.

(8) ನಮ್ಮ ಪ್ರಭುವೇ ನಮ್ಮನ್ನು ಸನ್ಮಾರ್ಗದಲ್ಲಿ ಸೇರಿಸಿದ ಬಳಿಕ ನಮ್ಮ ಹೃದಯಗಳನ್ನು ವಕ್ರಗೊಳಿಸಬೇಡ ಮತ್ತು ನಿನ್ನ ವತಿಯಿಂದ ಕಾರುಣ್ಯವನ್ನು ನಮಗೆ ದಯಪಾಲಿಸು. ನಿಸ್ಸಂಶಯವಾಗಿಯೂ ನೀನು ಮಹಾ ಉದಾರಿಯಾಗಿರುವೆ.

(9) ಓ ನಮ್ಮ ಪ್ರಭುವೇ, ನಿಸ್ಸಂಶಯವಾಗಿಯು ನೀನು ಮನುಷ್ಯರನ್ನೆಲ್ಲ ಒಂದು ದಿನ ಒಟ್ಟುಗೂಡಿಸಲಿರುವೆ. ಆ ದಿನ ಬರುವುದರ ಬಗ್ಗೆ ಯಾವುದೇ ಸಂದೇಹÀವಿಲ್ಲ. ಖಂಡಿತವಾಗಿಯೂ ಅಲ್ಲಾಹನು ವಾಗ್ದಾನವನ್ನು ಉಲ್ಲಂಘಿಸುವುದಿಲ್ಲ.

(10) ಖಂಡಿತವಾಗಿಯು ಸತ್ಯ ನಿಷೇಧಿಗಳಿಗೆ ಅವರ ಸಂಪತ್ತಾಗಲೀ ಮತ್ತು ಸಂತಾನವಾಗಲೀ ಅಲ್ಲಾಹನ ವಿರುದ್ಧ ಯಾವ ಪ್ರಯೋಜನವನ್ನು ನೀಡಲಾರದು. ಅವರೇ ನರಕದ ಇಂಧನವಾಗಿದ್ದಾರೆ.

(11) ಅವರ ಅವಸ್ಥೆಯು ಫಿರ್‌ಔನನ ಅನುಯಾಯಿಗಳ ಮತ್ತು ಅವರ ಮುಂಚಿನವರ ಅವಸ್ಥೆಯಂತಾಗಿದೆ. ಅವರು ನಮ್ಮ ದೃಷ್ಟಾಂತಗಳನ್ನು ಸುಳ್ಳಾಗಿಸಿದರು. ಅನಂತರ ಅಲ್ಲಾಹನು ಅವರ ಪಾಪಗಳ ನಿಮಿತ್ತ ಅವರನ್ನು ಹಿಡಿದುಬಿಟ್ಟನು ಮತ್ತು ಅಲ್ಲಾಹನು ಕಠಿಣವಾಗಿ ಶಿಕ್ಷಿಸುವನಾಗಿದ್ದಾನೆ.

(12) ಓ ಪ್ರವಾದಿ ನೀವು ಸತ್ಯನಿಷೇಧಿಗಳಿಗೆ ಹೇಳಿರಿ; ನೀವು ಸಧ್ಯದಲ್ಲಿಯೇ ಸೋಲಿಸಲಾಗುವಿರಿ ಮತ್ತು ನರಕದೆಡೆಗೆ ಅಟ್ಟಲು ಒಟ್ಟು ಗೂಡಿಸಲಾಗುವಿರಿ. ಅದು ಬಹಳ ಕೆಟ್ಟ ಸ್ಥಳವಾಗಿದೆ.

(13) ನಿಶ್ಚಯವಾಗಿಯು (ಬದರ್ ಯುದ್ಧದಲ್ಲಿ) ಪರಸ್ಪರ ಎದುರುಗೊಂಡ ಎರಡು ಬಣಗಳಲ್ಲಿ ನಿಮಗೆ ದೃಷ್ಟಾಂತವಿದೆ. ಒಂದು ಬಣವು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡುತ್ತಿತ್ತು ಮತ್ತು ಇನ್ನೊಂದು ಬಣವು ಸತ್ಯನಿಷೇಧಿಗಳದ್ದಾಗಿತ್ತು. ಅವರು ತಮ್ಮ ಭಾಹ್ಯ ದೃಷ್ಟಿಯಲ್ಲಿ ಅವರನ್ನು (ಮುಸ್ಲಿಮರನ್ನು) ತಮಗಿಂತ ಇಮ್ಮಡಿ ಇರುವುದಾಗಿ ಕಂಡಿದ್ದರು. ಅಲ್ಲಾಹನು ತಾನಿಚ್ಛಿಸುವವರಿಗೆ ತನ್ನ ಸಹಾಯದಿಂದ ಬೆಂಬಲವನ್ನು ನೀಡುತ್ತಾನೆ. ಖಂಡಿತವಾಗಿಯು ಅಂತಃರ್ದೃಷ್ಟಿಯುಳ್ಳವರಿಗೆ ಇದರಲ್ಲಿ ಪಾಠವಿದೆ.

(14) ಜನÀÀರಿಗೆ ಇಂದ್ರಿಯಾಸಕ್ತಿಗಳಾದ ಸ್ತಿçÃಯರು, ಪುತ್ರರು, ರಾಶಿ ಹಾಕಲಾದ ಚಿನ್ನ ಮತ್ತು ಬೆಳ್ಳಿಗಳ ನಿಧಿಗಳು ಉತ್ಕೃಷ್ಟ ಜಾತಿಯ ಕುದುರೆಗಳು, ಜಾನುವಾರುಗಳು ಮತ್ತು ಕೃಷಿ ಭೂಮಿ ಮುಂತಾದ ಮನಮೋಹಕ ವಸ್ತುಗಳ ಪ್ರೀತಿಯನ್ನು ಅಲಂಕೃತಗೊಳಿಸಲಾಗಿದೆ. ಇವೆಲ್ಲವೂ ಐಹಿಕ ಜೀವನದ ಸುಖಭೋಗ ಸವಲತ್ತುಗಳಷ್ಟೆ ಮತ್ತು ಮರಳಿ ತಲುಪಲಿರುವ ಉತ್ತಮ ಸ್ಥಳವು ಅಲ್ಲಾಹನ ಬಳಿಯೇ ಇದೆ.

(15) ಓ ಪೈಗಂಬರರೇ ಹೇಳಿರಿ; ನಾನು ನಿಮಗೆ ಅದಕ್ಕಿಂತಲೂ ಉತ್ತಮವಾಗಿರುವುದನ್ನು ತಿಳಿಸಿಕೊಡಲೇ? ಭಯಭಕ್ತಿ ಪಾಲಿಸಿದವರಿಗೆ ತಮ್ಮ ಪ್ರಭುವಿನ ಬಳಿ ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳಿವೆ. ಅದರಲ್ಲಿ ಅವರು ಶಾಶ್ವತವಾಗಿರುವರು ಮತ್ತು ಪರಿಶುದ್ಧರಾದ ಪತ್ನಿಯರು ಮತ್ತು ಅದಕ್ಕಿಂತ ಮಹತ್ತರವಾದುದು ಅಲ್ಲಾಹನ ಸಂಪ್ರೀತಿಯಿರುವುದು ಅಲ್ಲಾಹನು ತನ್ನ ದಾಸರನ್ನು ವೀಕ್ಷಿಸುತ್ತಿದ್ದಾನೆ.

(16) ಅವರು (ಧರ್ಮನಿಷ್ಠರು): 'ಓ ನಮ್ಮ ಪ್ರಭು, ನಾವು ವಿಶ್ವಾಸವಿಟ್ಟಿದ್ದೇವೆ. ಆದ್ದರಿಂದ ನಮ್ಮ ಪಾಪಗಳನ್ನು ಕ್ಷಮಿಸು ಮತ್ತು ನಮ್ಮನ್ನು ನರಕ ಶಿಕ್ಷೆಯಿಂದ ರಕ್ಷಿಸು' ಎಂದು ಪ್ರಾರ್ಥಿಸುತ್ತಾರೆ.

(17) ಅವರು ಸಹನೆ ವಹಿಸುವವರು, ಸತ್ಯವನ್ನು ನುಡಿಯುವವರು, ಅನುಸರಣೆಯುಳ್ಳವರು, ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡುವವರು ಮತ್ತು ರಾತ್ರಿಯ ಕೊನೆಗಳಿಗೆಯಲ್ಲಿ ಪಾಪವಿಮೋಚನೆಗಾಗಿ ಪ್ರಾರ್ಥಿಸುತ್ತಿರುತ್ತಾರೆ.

(18) ಅಲ್ಲಾಹನು ತನ್ನ ಹೊರತು ಇತರ ಆರಾಧ್ಯರಿಲ್ಲವೆಂದು ಸ್ವತಃ ಸಾಕ್ಷö್ಯ ನುಡಿಯುತ್ತಾನೆ. (ಅದೇ ರೀತಿ) ಮಲಕ್‌ಗಳು (ದೂತರು) ಜ್ಞಾನವುಳ್ಳವರು ಸಹ ಸತ್ಯ ಹಾಗೂ ನ್ಯಾಯೋಚಿತವಾಗಿ ಪ್ರತಾಪಶಾಲಿಯೂ, ಯುಕ್ತಿಪೂರ್ಣನೂ ಆದ ಅಲ್ಲಾಹನ ಹೊರತು ಅನ್ಯ ಆರಾಧ್ಯನಿಲ್ಲವೆಂದು ಸಾಕ್ಷಿ ವಹಿಸುತ್ತಾರೆ.

(19) ಖಂಡಿತವಾಗಿಯು ಅಲ್ಲಾಹನ ಬಳಿ ಪ್ರತಿಫಲವು ಆಜ್ಞಾನುಸರಣೆಯಲ್ಲಿ ಮಾತ್ರವಿದೆ. ಗ್ರಂಥದವರು ತಮಗೆ ಜ್ಞಾನ ಬಂದ ನಂತರ ತಮ್ಮೊಳಗಿನ ಅಸೂಯೆಯ ನಿಮಿತ್ತ ಭಿನ್ನತೆ ತೋರಿದ್ದರು ಮತ್ತು ಯಾರು ಅಲ್ಲಾಹನ ಸೂಕ್ತಿಗಳನ್ನು ನಿಷೇಧಿಸುತ್ತಾರೋ ಅವರ ವಿಚಾರಣೆ ಮಾಡುವುದರಲ್ಲಿ ಅಲ್ಲಾಹನು ಅತೀ ಶೀಘ್ರನು.

(20) ಅನಂತರ ಅವರು ನಿಮ್ಮೊಂದಿಗೆ ತರ್ಕಿಸುವುದಾದರೆ 'ನಾನು ಮತ್ತು ನನ್ನ ಅನುಯಾಯಿಗಳು ಅಲ್ಲಾಹನಿಗೆ ಶರಣಾಗಿದ್ದೇವೆ' ಎಂದು ಹೇಳಿರಿ. ಗ್ರಂಥ ನೀಡಲಾದವರೊಂದಿಗೆ ಮತ್ತು ನಿರಕ್ಷರಿಗಳೊಂದಿಗೆ (ಬಹುದೇವಾರಾಧಕರು) 'ನೀವೂ ವಿಧೇಯರಾಗಿದ್ದೀರಾ'? ಎಂದು ಕೇಳಿರಿ ಅವರು ವಿಧೇಯರಾದರೆ ಖಂಡಿತ ಅವರು ಸನ್ಮಾರ್ಗವನ್ನು ಪಡೆದರು. ಇನ್ನು ಅವರು ವಿಮುಖರಾಗಿಬಿಟ್ಟರೆ ನಿಮ್ಮ ಮೇಲೆ ಸಂದೇಶ ತಲುಪಿಸುವ ಹೊಣೆಗಾರಿಕೆ ಮಾತ್ರವಿದೆ ಮತ್ತು ಅಲ್ಲಾಹನು ದಾಸರನ್ನು ಚೆನ್ನಾಗಿ ವೀಕ್ಷಿಸುವವನಾಗಿದ್ದಾನೆ.

(21) ಓ ಪೈಗಂಬರರೇ, ಯಾರು ಅಲ್ಲಾಹನ ದೃಷ್ಟಾಂತಗಳನ್ನು ನಿಷೇಧಿಸುತ್ತಾರೋ, ಯಾರು ಅನ್ಯಾಯವಾಗಿ ಪ್ರವಾದಿಗಳನ್ನು ವಧಿಸುತ್ತಾರೊ ಮತ್ತು ನ್ಯಾಯ ಪಾಲನೆಯ ಆದೇಶ ನೀಡುವವರನ್ನು ವಧಿಸುತ್ತಾರೊ ಅವರಿಗೆ ವೇದನಾಜನಕ ಶಿಕ್ಷೆಯ ಶುಭವಾರ್ತೆ ತಿಳಿಸಿರಿ.

(22) ಅವರೇ ಇಹದಲ್ಲೂ, ಪರದಲ್ಲೂ ತಮ್ಮ ಕರ್ಮಗಳು ನಿಷ್ಫಲಗೊಂಡವರಾಗಿದ್ದಾರೆ. ಅಲ್ಲಾಹನ ಪ್ರತಿಯಾಗಿ ಅವರಿಗೆ ಯಾರು ಸಹಾಯಕರಿಲ್ಲ.

(23) ಗ್ರಂಥದಿAದ ಒಂದAಶವನ್ನು ನೀಡಲ್ಪಟ್ಟವರನ್ನು ನೀವು ನೋಡಲಿಲ್ಲವೇ? ಅವರ ನಡುವೆ ತೀರ್ಮಾನಕ್ಕಾಗಿ ಅಲ್ಲಾಹನ ಗ್ರಂಥದೆಡೆಗೆ ಅವರನ್ನು ಕರೆಯಲಾದರೆ, ತರುವಾಯ ಅವರಲ್ಲೊಂದು ಪಂಗಡವು ವಿಮುಖರಾಗಿ ಮರಳಿಬಿಡುತ್ತದೆ.

(24) (ಇವರ ಈ ವರ್ತನೆ) ಎಣಿಕೆಯ ಕೆಲವು ದಿನಗಳ ಹೊರತು ನರಕಾಗ್ನಿಯು ನಮ್ಮನ್ನು ಖಂಡಿತ ಸ್ಪರ್ಶಿಸದು ಎಂಬ ಅವರ ಹೇಳಿಕೆಯೇ ಇದಕ್ಕಿರುವ ಕಾರಣವಾಗಿದೆ. ಧರ್ಮದ ವಿಷಯದಲ್ಲಿ ಅವರ ಸ್ವರಚಿತವಾದಗಳು ಅವರನ್ನು ಮೋಸಕ್ಕೊಳಗಾಗಿಸಿವೆ.

(25) ಒಂದು ದಿನವನ್ನು ಎದುರಿಸಲು ನಾವು ಅವರನ್ನು ಒಟ್ಟುಗೂಡಿಸಿದಾಗ ಆಕ್ರೋಶದ ಅವಸ್ಥೆಯು ಏನಾಗಬಹುದು? ಆ ದಿನದ ಆಗಮನದಲ್ಲಿ ಯಾವುದೇ ಸಂದೇಹವಿಲ್ಲ. ಅಂದು ಪ್ರತಿಯೊಬ್ಬನಿಗೂ ಅವನು ಮಾಡಿರುವುದನ್ನು ಪರಿಪೂರ್ಣವಾಗಿ ನೀಡಲಾಗುವುದು. ಅವರೊಂದಿಗೆ ಅನ್ಯಾಯವೆಸಗಲಾಗದು.

(26) ಓ ಪೈಗಂಬರರೇ ಹೇಳಿರಿ; ಓ ಅಲ್ಲಾಹ್ ಸರ್ವಾಧಿಪತ್ಯದ ಒಡೆಯನೇ, ನೀನಿಚ್ಛಿಸುವವರಿಗೆ ಅಧಿಪತ್ಯವನ್ನು ನೀಡುವೆ ನೀನಿಚ್ಛಿಸುವವರಿಂದ ಅಧಿಪತ್ಯವನ್ನು ಕಸಿದುಕೊಳ್ಳುವೆ ನೀನಿಚ್ಛಿಸುವವರಿಗೆ ಸನ್ಮಾನ ಪ್ರತಾಪವನ್ನು ನೀಡುವೆ ಮತ್ತು ನೀನಿಚ್ಛಿಸುವವರಿಗೆ ನಿಂದ್ಯತೆಯನ್ನೀಡುವೆ. ನಿನ್ನ ಕೈಯಲ್ಲೇ ಸಕಲ ಒಳಿತುಗಳಿವೆ. ನಿಸ್ಸಂಶಯವಾಗಿಯು ನೀನು ಸಕಲ ವಸ್ತುಗಳ ಮೇಲೆ ಸಾಮರ್ಥ್ಯವುಳ್ಳವನಾಗಿರುವೆ.

(27) ನೀನೇ ರಾತ್ರಿಯನ್ನು ಹಗಲಿನೊಳಗೆ ಮತ್ತು ಹಗಲನ್ನು ರಾತ್ರಿಯೊಳಗೆ ಪ್ರವೇಶಗೊಳಿಸುವೆ. ನೀನು ನಿರ್ಜೀವಿಯಿಂದ ಜೀವಿಯನ್ನು ಹೊರತರುವೆ ಮತ್ತು ಜೀವಿಯಿಂದ ನಿರ್ಜೀವಿಯನ್ನು ಹೊರತರುವೆ. ನೀನಿಚ್ಛಿಸುವವರಿಗೆ ಲೆಕ್ಕವಿಲ್ಲದ ಅನ್ನಾಧಾರ ನೀಡುವವನು ನೀನೆ ಆಗಿರುವೆ.

(28) ಸತ್ಯವಿಶ್ವಾಸಿಗಳು ಸತ್ಯವಿಶ್ವಾಸಿಗಳ ವಿರುದ್ಧ ಸತ್ಯನಿಷೇಧಿಗಳನ್ನು ಮಿತ್ರರನ್ನಾಗಿ ಮಾಡಿಕೊಳ್ಳಬಾರದು ಮತ್ತು ಯಾರು ಹಾಗೆ ಮಾಡುತ್ತಾನೋ ಅವನಿಗೆ ಅಲ್ಲಾಹನೊಡನೆ ಯಾವ ಸಂಬAಧವಿಲ್ಲ. ಆದರೆ ಅವರ ಕೆಡುಕಿನಿಂದ ಹೇಗಾದರೂ ರಕ್ಷಣೆ ಪಡೆಯುವ ಉದ್ದೇಶವಿದ್ದರೆ ಬೇರೆ ವಿಚಾರ ಮತ್ತು ಅಲ್ಲಾಹನು ತನ್ನ ಬಗ್ಗೆ ನಿಮ್ಮನ್ನು ಎಚ್ಚರಿಸುತ್ತಾನೆ ಮತ್ತು ಅಲ್ಲಾಹನೆಡೆಗೇ ಮರಳುವಿಕೆಯಿರುವುದು.

(29) ಹೇಳಿರಿ: ನೀವು ನಿಮ್ಮ ಮನಸ್ಸಲ್ಲಿರುವ ವಿಚಾರಗಳನ್ನು ಬಚ್ಚಿಟ್ಟರೂ ಅಥವಾ ಬಹಿರಂಗಪಡಿಸಿದರೂ ಅಲ್ಲಾಹನು ಅರಿಯುತ್ತಾನೆ. ಭೂಮಿ, ಆಕಾಶಗಳಲ್ಲಿರುವುದೆಲ್ಲವನ್ನೂ ಅವನು ಬಲ್ಲನು ಅಲ್ಲಾಹನು ಸಕಲ ಸಂಗತಿಗಳ ಮೇಲೆ ಸಾಮರ್ಥ್ಯವುಳ್ಳನಾಗಿದ್ದಾನೆ.

(30) ಪ್ರತಿಯೊಬ್ಬ ವ್ಯಕ್ತಿಯು ತಾನು ಮಾಡಿದ ಒಳಿತು ಮತ್ತು ಕೆಡುಕನ್ನು ತನ್ನ ಮುಂದೆ ಪ್ರತ್ಯಕ್ಷವಾಗಿ ಕಾಣಲಿರುವನು. ಆಗ ಅವನು ಆ ದಿನ ಮತ್ತು ಅವನ ದುಷ್ಕರ್ಮಗಳ ನಡುವೆ ಬಹಳಷ್ಟು ಅಂತರವಿರುತ್ತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತೆಂದು ಆಶಿಸುವನು. ಅಲ್ಲಾಹನು ತನ್ನ ಆಕ್ರೋಶದ ಬಗ್ಗೆ ನಿಮ್ಮನ್ನು ಎಚ್ಚರಿಸುತ್ತಾನೆ ಮತ್ತು ಅಲ್ಲಾಹನು ತನ್ನ ದಾಸರ ಮೇಲೆ ಅಪಾರ ದಯೆಯುಳ್ಳವನಾಗಿದ್ದಾನೆ.

(31) ಓ ಪೈಗಂಬರರೇ ಹೇಳಿರಿ: ವಾಸ್ತವದಲ್ಲಿ ನೀವು ಅಲ್ಲಾಹನನ್ನು ಪ್ರೀತಿಸುತ್ತೀರಿ ಎಂದಾದರೆ ನನ್ನನ್ನು ಅನುಸರಿಸಿರಿ. ಅಲ್ಲಾಹನು ನಿಮ್ಮನ್ನು ಪ್ರೀತಿಸುವನು ಮತ್ತು ನಿಮ್ಮ ಪಾಪಗಳನ್ನು ಕ್ಷಮಿಸುವನು ಅಲ್ಲಾಹನು ಅತ್ಯಧಿಕ ಕ್ಷಮಿಸುವವನೂ, ಕರುಣಾನಿಧಿಯೂ ಆಗಿದ್ದಾನೆ.

(32) ಹೇಳಿರಿ: 'ನೀವು ಅಲ್ಲಾಹ್ ಹಾಗೂ ಅವನ ಸಂದೇಶವಾಹಕರನ್ನು ಅನುಸರಿಸಿರಿ' ಇನ್ನು ಅವರು ವಿಮುಖರಾಗುವುದಾದರೆ ಖಂಡಿತವಾಗಿಯು ಅಲ್ಲಾಹನು ಸತ್ಯನಿಷೇಧಿಗಳನ್ನು ಪ್ರೀತಿಸುವುದಿಲ್ಲ.

(33) ನಿಶ್ಚಯವಾಗಿಯು ಅಲ್ಲಾಹನು ಆದಮ್(ಅ), ನೂಹ್(ಅ), ಇಬ್ರಾಹೀಮ್(ಅ)ರ ಕುಟುಂಬ ಮತ್ತು ಇಮ್ರಾನರ ಕುಟುಂಬವನ್ನು ಸರ್ವಲೋಕದವರಿಂದ (ದೌತ್ಯಕ್ಕಾಗಿ) ಆಯ್ಕೆ ಮಾಡಿರುತ್ತಾನೆ.

(34) ಇವರೆಲ್ಲ ಪರಸ್ಪರ ಕೆಲವರು ಇನ್ನು ಕೆಲವರ ಸಂತತಿಗಳಿಗೆ ಸೇರಿದವರಾಗಿರುವರು ಮತ್ತು ಅಲ್ಲಾಹನು ಆಲಿಸುವವನೂ, ಅರಿಯುವವನೂ ಆಗಿದ್ದಾನೆ.

(35) ಇಮ್ರಾನರ ಪತ್ನಿ ಹೀಗೆ ಪ್ರಾರ್ಥಿಸಿದ ಸಂಧರ್ಭ: ಓ ನನ್ನ ಪ್ರಭೂ, ನನ್ನ ಹೊಟ್ಟೆಯಲ್ಲಿರುವ ಶಿಶುವನ್ನು ನಿನಗಾಗಿಯೇ ಮೀಸಲಿಟ್ಟು ನಾನು ಹರಕೆ ಹೊತ್ತಿರುತ್ತೇನೆ. ನೀನದನ್ನು ನನ್ನಿಂದ ಸ್ವೀಕರಿಸು. ಖಂಡಿತವಾಗಿಯು ನೀನು ಚೆನ್ನಾಗಿ ಆಲಿಸುವವನೂ, ಎಲ್ಲವನ್ನು ಅರಿಯುವವನೂ ಆಗಿರುವೆ.

(36) ಆಕೆ ಹೆಣ್ಣು ಮಗುವನ್ನು ಜನ್ಮ ನೀಡಿದಾಗ ಹೇಳಿದಳು: 'ನನ್ನ ಪ್ರಭು ನನಗೆ ಹೆಣ್ಣು ಮಗುವಾಗಿದೆ-ವಾಸ್ತವದಲ್ಲಿ ಅವಳು ಜನ್ಮವಿತ್ತಿರುವುದೇನೆಂದು ಅಲ್ಲಾಹನಿಗೆ ಚೆನ್ನಾಗಿ ತಿಳಿದಿದೆ ಮತ್ತು ಗಂಡು ಮಗು (ಹರಕೆಗೆ ತಕ್ಕದ್ದಾಗಿತ್ತು ಏಕೆಂದರೆ ಅದು) ಹೆಣ್ಣಿನಂತೆ ದುರ್ಬಲವಾಗಿರುವುದಿಲ್ಲ. ನಿಸ್ಸಂಶಯವಾಗಿ ನಾನು ಅದರ ಹೆಸರು ಮರ್ಯಮ್ ಎಂದು ಇಟ್ಟಿರುವೆನು. ಆಕೆಯನ್ನು ಮತ್ತು ಆಕೆಯ ಸಂತತಿಗಳನ್ನೂ ಬಹಿಷ್ಕೃತ ಶೈತಾನನಿಂದ ನಿನ್ನ ಅಭಯ ಬೇಡುತ್ತೇನೆ.

(37) ಹಾಗೆಯೇ ಅವಳ ಪ್ರಭು ಆಕೆಯನ್ನು ಉತ್ತಮ ರೀತಿಯಲ್ಲಿ ಸ್ವೀಕರಿಸಿದನು ಮತ್ತು ಉತ್ತಮ ರೀತಿಯಲ್ಲಿ ಆಕೆಯ ಪೋಷಣೆಯನ್ನು ಮಾಡಿದನು ಮತ್ತು ಆಕೆಯ ಪರಿಪಾಲನೆಯ ಹೊಣೆಗಾರಿಕೆ ಝಕರಿಯ್ಯಾ(ಅ)ರಿಗೆ ವಹಿಸಿದನು. ಝಕರಿಯ್ಯಾ(ಅ) ಆಕೆಯ ಆರಾಧನೆ ಕೋಣೆಗೆ ಹೋದಾಗಲೆಲ್ಲಾ ಆಕೆಯ ಬಳಿ ಯಾವುದಾದರೂ ಆಹಾರ ಇಡಲಾಗಿರುವುದನ್ನು ಕಾಣುತ್ತಿದ್ದರು. ಒಮ್ಮೆ ಅವರು ಕೇಳಿದರು. ಓ ಮರ್ಯಮ್, ಈ ಆಹಾರವು ನಿನ್ನಲ್ಲಿಗೆ ಎಲ್ಲಿಂದ ಬಂತು? ಆಕೆ ಉತ್ತರಿಸಿದಳು 'ಇದು ಅಲ್ಲಾಹನ ಬಳಿಯಿಂದಾಗಿದೆ'. ನಿಸ್ಸಂದೇಹವಾಗಿಯು ಅಲ್ಲಾಹನು ತಾನಿಚ್ಛಿಸುವವರಿಗೆ ಲೆಕ್ಕವಿಲ್ಲದ್ದಷ್ಟು ನೀಡುತ್ತಾನೆ.

(38) ಅದೇ ಸಮಯದಲ್ಲಿ ಝಕರಿಯ್ಯಾ(ಅ) ತನ್ನ ಪ್ರಭುವಿನೊಡನೆ ಪ್ರಾರ್ಥಿಸಿದರು: 'ಓ ನನ್ನ ಪ್ರಭುವೇ, ನಿನ್ನವತಿಯಿಂದ ನನಗೆ ಸುನೀತವಾದ ಸಂತತಿಯನ್ನು ದಯಪಾಲಿಸು. ನಿಸ್ಸಂದೇಹವಾಗಿಯು ನೀನು ಪ್ರಾರ್ಥನೆಯನ್ನು ಆಲಿಸುವವನಾಗಿರುವೆ'.

(39) ತರುವಾಯ ಅವರು ಕೋಣೆಯಲ್ಲಿ ನಮಾಝ್ ಮಾಡುತ್ತಾ ನಿಂತಿದ್ದಾಗ ಮಲಕ್ (ದೂತರು) ಅವರಿಗೆ ಕರೆದು ಹೇಳಿದರು: ನಿಸ್ಸಂಶಯವಾಗಿಯು ಅಲ್ಲಾಹನು ನಿಮಗೆ 'ಯಾಹ್ಯಾರ (ಪುತ್ರನ) ಕುರಿತು ಶುಭವಾರ್ತೆಯನ್ನು ನೀಡುತ್ತಾನೆ. ಅವರು (ಯಾಹ್ಯಾ) ಅಲ್ಲಾಹನ ವಚನವನ್ನು (ಈಸಾರವರನ್ನು) ಸತ್ಯವೆಂದು ಸಮರ್ಥಿಸುವವರೂ, ನಾಯಕರೂ, ಆತ್ಮಸಂಯಮಿಯೂ, ಸಜ್ಜನರಲ್ಲಿ ಸೇರಿದ ಪೈಗಂಬರರಾಗಿರುವರು'.

(40) ಝಕರಿಯ್ಯಾ ಹೇಳಿದರು: 'ಓ ನನ್ನ ಪ್ರಭು, ನನಗೆ ಮಗು ಆಗುವುದಾದರೂ ಹೇಗೆ” ನಾನು ವೃದ್ಧನಾಗಿರುವೆನು ಮತ್ತು ನನ್ನ ಪತ್ನಿಯು ಬಂಜೆಯಾಗಿದ್ದಾಳೆ'. ಅಲ್ಲಾಹನು ಹೇಳಿದನು: 'ಇದೇ ಪ್ರಕಾರ ಅಲ್ಲಾಹನು ತಾನಿಚ್ಛಿಸುವುದನ್ನು ಮಾಡುತ್ತಾನೆ.

(41) ಅವರು ಹೇಳಿದರು: 'ಓ ನನ್ನ ಪ್ರಭೂ, ನನಗೋಸ್ಕರ ಇದರ ಯಾವುದಾದರೂ ಒಂದು ಕುರುಹನ್ನು ನಿಶ್ಚಯಿಸಿಕೊಡು'. ಅವನು ಹೇಳಿದನು: ನೀವು ಜನರೊಂದಿಗೆ ಮೂರು ದಿನಗಳ ಕಾಲ ಸನ್ನೆಯ ಮೂಲಕವಲ್ಲದೆ ಮಾತನಾಡದಿರುವುದು ನಿಮಗಿರುವ ಸಂಕೇತವಾಗಿದೆ. ನೀವು ನಿಮ್ಮ ಪ್ರಭುವನ್ನು ಅತ್ಯಧಿಕವಾಗಿ ಸ್ಮರಿಸಿರಿ. ಮತ್ತು ಸಂಜೆ ಮುಂಜಾನೆಗಳಲ್ಲಿ ಅವನ ಪಾವನತೆಯನ್ನು ಕೊಂಡಾಡಿರಿ.

(42) ಮಲಕ್‌ಗಳು ಮರ್ಯಮರ ಬಳಿ ಬಂದು ಹೇಳಿದ ಸಂದರ್ಭ: 'ಓ ಮರ್ಯಮ್, ಖಂಡಿತವಾಗಿಯು ಅಲ್ಲಾಹನು ನಿಮ್ಮನ್ನು ಆಯ್ಕೆ ಮಾಡಿರುವನು ಮತ್ತು ನಿಮ್ಮನ್ನು, ಪವಿತ್ರಗೊಳಿಸಿರುವನು ಮತ್ತು ಜಗತ್ತಿನ ಸ್ತಿçÃಯರ ಪೈಕಿ ನಿಮ್ಮನ್ನು ಆರಿಸಿಕೊಂಡಿರುವನು'.

(43) 'ಓ ಮರ್ಯಮ್, ನಿಮ್ಮ ಪ್ರಭುವಿಗೆ ಶರಣಾಗಿರಿ ಮತ್ತು ಸಾಷ್ಟಾಂಗವೆರಗಿರಿ. ಮತ್ತು ಬಾಗುವವರೊಂದಿಗೆ ಬಾಗಿರಿ'.

(44) ಓ ಪೈಗಂಬರರೇ ಇವು ನಾವು ನಿಮಗೆ ದಿವ್ಯ ಸಂದೇಶವಾಗಿ ತಲುಪಿಸುವ ಅಗೋಚರ ವಿಷಯಗಳಲ್ಲಾಗಿವೆ. ಅವರಲ್ಲಿ ಯಾರು ಮರ್ಯಮರನ್ನು ಪೋಷಿಸುತ್ತಾರೆಂದು ನಿರ್ಧರಿಸಲು ಅವರು ತಮ್ಮ ಲೇಖನಿಗಳನ್ನು (ನದಿಯಲ್ಲಿ) ಹಾಕಿದಾಗ ನೀವು ಅವರ ಬಳಿಯಿರಲಿಲ್ಲ. ಅವರ ತರ್ಕದ ಸಂದರ್ಭದಲ್ಲಾಗಲೀ ನೀವು ಅವರ ಬಳಿಯಿರಲಿಲ್ಲ.

(45) ಮಲಕ್‌ಗಳು ಹೇಳಿದ ಸಂದರ್ಭ: 'ಓ ಮರ್ಯಮ್, ಖಂಡಿತವಾಗಿಯು ಅಲ್ಲಾಹನು ತನ್ನ ಒಂದು 'ವಚನ'ದ ಕುರಿತು ನಿಮಗೆ ಶುಭವಾರ್ತೆ ನೀಡುತ್ತಾನೆ. ಅವರ ಹೆಸರು ಮರ್ಯಮರ ಪುತ್ರ ಈಸಾ ಮಸೀಹ್ ಎಂದಾಗಿದೆ ಅವರು ಇಹದಲ್ಲೂ, ಪರದಲ್ಲೂ ಆದರಣಿಯರೂ ಮತ್ತು ನನ್ನ ಸಮೀಪಸ್ಥರಲ್ಲಿ ಸೇರಿದವರೂ ಆಗಿರುವರು.

(46) ಅವರು ತೊಟ್ಟಿಲಲ್ಲಿರುವಾಗಲೂ, ಮಧ್ಯವಯಸ್ಕನಾಗಿರುವಾಗಲೂ ಜನರೊಡನೆ ಮಾತನಾಡುವರು ಮತ್ತು ಅವರು ಸಜ್ಜನರಲ್ಲಿ ಸೇರಿದವರಾಗಿರುವರು.

(47) ಆಕೆ ಹೇಳಿದಳು: 'ನನ್ನ ಪ್ರಭುವೇ, ನನಗೆ ಮಗುವಾಗುವುದಾದರೂ ಹೇಗೆ? ವಸ್ತುತಃ ನನ್ನನ್ನು ಯಾವ ಮನುಷ್ಯನೂ ಸ್ಪರ್ಶಿಸಿಲ್ಲ. ಅಲ್ಲಾಹನು ಹೇಳಿದನು: 'ಇದೇ ಪ್ರಕಾರ ಅಲ್ಲಾಹನು ತಾನಿಚ್ಛಿಸಿದ್ದನ್ನು ಸೃಷ್ಟಿಸುತ್ತಾನೆ. ಅವನು ಯಾವುದೇ ಕಾರ್ಯ ಮಾಡಲು ನಿರ್ಧರಿಸಿದಾಗ ಅದಕ್ಕೆ 'ಆಗು' ಎಂದು ಮಾತ್ರ ಹೇಳುತ್ತಾನೆ. ಆಗ ಅದು ಆಗಿ ಬಿಡುತ್ತದೆ'.

(48) ಅಲ್ಲಾಹನು ಅವರಿಗೆ ಗ್ರಂಥವನ್ನೂ, ಸುಜ್ಞಾನವನ್ನೂ, ತೌರಾತನ್ನೂ, ಇಂಜೀಲನ್ನೂ ಕಲಿಸುವನು.

(49) ಮತ್ತು ಅವರನ್ನು ಇಸ್ರಾಯೀಲ್ ಸಂತತಿಯೆಡೆಗೆ ಸಂದೇಶವಾಹಕರನ್ನಾಗಿ ನೇಮಿಸುವನು (ಅವರು ಹೇಳುವರು:) 'ನಾನು ನಿಮ್ಮ ಬಳಿ ನಿಮ್ಮ ಪ್ರಭುವಿನ ಕಡೆಯಿಂದ ದೃಷ್ಟಾಂತವನ್ನು ತಂದಿರುವೆನು. ನಾನು ನಿಮಗಾಗಿ ಆವೆ ಮಣ್ಣಿನ ಪಕ್ಷಿಯ ಆಕೃತಿಯಂತೆ ಮಾಡಿ, ನಾನದರಲ್ಲಿ ಊದಿದಾಗ ಅದು ಅಲ್ಲಾಹನ ಅಪ್ಪಣೆಯಿಂದ ಪಕ್ಷಿಯಾಗಿಬಿಡುವುದು ಮತ್ತು ಅಲ್ಲಾಹನ ಅಪ್ಪಣೆಯಿಂದ ನಾನು ಹುಟ್ಟು ಕುರುಡನನ್ನೂ, ಕುಷ್ಠರೋಗಿಯನ್ನೂ ಗುಣಪಡಿಸುವೆನು ಮತು ಮೃತರನ್ನು ಜೀವಂತಗೊಳಿಸುವೆನು. ನೀವು ತಿನ್ನುವುದನ್ನು ಮತ್ತು ನಿಮ್ಮ ಮನೆಗಳಲ್ಲಿ ಸಂಗ್ರಹಿಸಿಡುವುದನ್ನು ನಿಮಗೆ ತಿಳಿಸಿಕೊಡುವೆನು. ನೀವು ವಿಶ್ವಾಸವಿರಿಸುವವರಾಗಿದ್ದರೆ ನಿಸ್ಸಂಶಯವಾಗಿಯು ಇದರಲ್ಲಿ ನಿಮಗೆ ದೃಷ್ಟಾಂತವಿದೆ.

(50) ಮತ್ತು ನಾನು ನನ್ನ ಮುಂಚಿನ ಗ್ರಂಥವಾದ ತೌರಾತನ್ನು ಸತ್ಯವೆಂದು ದೃಢೀಕರಿಸಲು ಮತ್ತು ನಿಮ್ಮ ಮೇಲೆ ನಿಷಿದ್ಧಗೊಳಿಸಿರುವುದರಲ್ಲಿ ಕೆಲವನ್ನು ನಿಮಗೆ ಧರ್ಮ ಸಮ್ಮತಗೊಳಿಸಲೆಂದು ಬಂದಿರುವೆನು. ನಾನು ನಿಮಗೆ ನಿಮ್ಮ ಪ್ರಭುವಿನ ಕಡೆಯಿಂದ ದೃಷ್ಟಾಂತವನ್ನು ತಂದಿರುವೆನು. ಆದ್ದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.

(51) ಖಂಡಿತವಾಗಿಯೂ ನನ್ನ ಮತ್ತು ನಿಮ್ಮ ಪ್ರಭು ಅಲ್ಲಾಹನಾಗಿದ್ದಾನೆ. ನೀವು ಅವನನ್ನು ಮಾತ್ರ ಆರಾಧಿಸಿರಿ ಇದುವೇ ಋಜು ಮಾರ್ಗವಾಗಿದೆ.

(52) ಆದರೆ ಈಸಾ(ಅ)ರವರು ಅವರ ನಿಷೇಧವನ್ನು ಮನದಟ್ಟು ಮಾಡಿಕೊಂಡಾಗ, 'ಅಲ್ಲಾಹನ ಮಾರ್ಗದಲ್ಲಿ ನನ್ನ ಸಹಾಯಕರಾಗಿ ಯಾರಿದ್ದಾರೆ ಎಂದು ಕೇಳಿದರು.? ‘ನಾವು ಅಲ್ಲಾಹನ ಮಾರ್ಗದಲ್ಲಿ ಸಹಾಯಕರಾಗಿದ್ದೇವೆ ಎಂದು ಅನುಯಾಯಿಗಳು ಹೇಳಿದರು. ನಾವು ಅಲ್ಲಾಹನ ಮೇಲೆ ವಿಶ್ವಾಸವಿಟ್ಟಿದ್ದೇವೆ ಮತ್ತು ನಾವು ವಿಧೇಯರಾಗಿದ್ದೇವೆಂಬುದಕ್ಕೆ ನೀವು ಸಾಕ್ಷö್ಯವಹಿಸಿರಿ'.

(53) ‘ಓ ನಮ್ಮ ಪ್ರಭು, ನಾವು ನೀನು ಅವತೀರ್ಣಗೊಳಿಸಿರುವುದÀರಲ್ಲಿ ವಿಶ್ವಾಸ ವಿರಿಸಿದ್ದೇವೆ ಮತ್ತು ನಿನ್ನ ಸಂದೇಶವಾಹಕರನ್ನು ಅನುಸರಿಸಿದ್ದೇವೆ. ಇನ್ನು ನೀನು ನಮ್ಮನ್ನು ಸಾಕ್ಷö್ಯವಹಿಸಿದವರೊಂದಿಗೆ ದಾಖಲಿಸು'.

(54) ಈಸಾ(ಅ)ರ ವೈರಿಗಳು (ಯಹೂದಿಗಳು ಈಸಾ(ಅ)ರವರ ಕೊಲೆಗೆ) ತಂತ್ರ ಪ್ರಯೋಗಿಸಿದರು. ಅಲ್ಲಾಹನು ಸಹ (ಅವರ ರಕ್ಷಣೆಗೆ) ಪ್ರತಿತಂತ್ರ ಪ್ರಯೋಗಿಸಿದನು. ಮತ್ತು ಅಲ್ಲಾಹನು ತಂತ್ರ ಪ್ರಯೋಗಿಸುವವರಲ್ಲಿ ಉತ್ತಮನಾಗಿದ್ದಾನೆ.

(55) ಅಲ್ಲಾಹನು ಹೇಳಿದ ಸಂದರ್ಭ: 'ಓ ಈಸಾ, ಖಂಡಿತವಾಗಿಯು ನಾನು ನಿಮ್ಮನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳಲಿರುವೆನು ಮತ್ತು ನಿಮ್ಮನ್ನು ನನ್ನ ಬಳಿಗೆ (ಆಕಾಶದತ್ತ) ಎತ್ತಿಕೊಳ್ಳಲಿರುವೆನು. ಸತ್ಯನಿಷೇಧಿಗಳ ಆರೋಪಗಳಿಂದ ನಿಮ್ಮನ್ನು ಪರಿಶುದ್ಧಗೊಳಿಸಲಿರುವೆನು ಮತ್ತು ನಿಮ್ಮ ಅನುಯಾಯಿಗಳನ್ನು ಪುನರುತ್ಥಾನ ದಿನದವರೆಗೂ ಸತ್ಯನಿಷೇಧಿಗಳ ಮೇಲೆ ಪ್ರಾಬಲ್ಯ ನೀಡುವೆನು'. ತರುವಾಯ ನಿಮ್ಮೆಲ್ಲರ ಮರಳುವಿಕೆಯು ನನ್ನೆಡೆಗೇ ಆಗಿದೆ. ನಿಮ್ಮ ನಡುವಿನ ಸಕಲ ಭಿನ್ನತೆಯ ವಿಷಯಗಳಲ್ಲಿ ನಾನು ನಿಮ್ಮ ನಡುವೆ ತೀರ್ಪು ನೀಡಲಿರುವೆನು.

(56) ಅನಂತರ ಸತ್ಯನಿಷೇಧಿಗಳಿಗೆ ನಾನು ಇಹದಲ್ಲೂ, ಪರದಲ್ಲೂ ಕಠಿಣ ಶಿಕ್ಷೆ ನೀಡುವೆನು. ಅವರಿಗೆ ಅಲ್ಲಾಹನೆದುರು ಸಹಾಯಕರಾರೂ ಇರಲಾರರು.

(57) ಆದರೆ ಸತ್ಯವಿಶ್ವಾಸವಿಟ್ಟು ಸತ್ಕರ್ಮಗಳನ್ನು ಕೈಗೊಳ್ಳುವವರಿಗೆ ಅಲ್ಲಾಹನು ಅವರ ಪ್ರತಿಫಲವನ್ನು ಪರಿಪೂರ್ಣವಾಗಿ ನೀಡುವನು ಮತ್ತು ಅಲ್ಲಾಹನು ಅಕ್ರಮಿಗಳನ್ನು ಮೆಚ್ಚುವುದಿಲ್ಲ.

(58) ಇವು ನಾವು ನಿಮಗೆ ಓದಿಕೊಡುತ್ತಿರುವ ದೃಷ್ಟಾಂತಗಳು ಹಾಗೂ ಯುಕ್ತಿಪೂರ್ಣ ಭೋದನೆಗಳಾಗಿವೆ.

(59) ನಿಶ್ಚಯವಾಗಿಯು ಅಲ್ಲಾಹನ ಬಳಿ ಈಸಾ(ಅ)ರ ಉಪಮೆಯು ಆದಮ(ಅ)ರ ಉಪಮೆಯಂತಿದೆ. ಅವರನ್ನು ಅವನು ಮಣ್ಣಿನಿಂದ ಸೃಷ್ಟಿಸಿ ಹೇಳಿದನು: ನೀನು ಉಂಟಾಗು ಆಗ ಅವರು ಉಂಟಾದರು.

(60) (ಓ ಪೈಗಂಬರರೇ) ನಿನ್ನ ಪ್ರಭುವಿನ ವತಿಯಿಂದ ಇದು ಸತ್ಯವಾಗಿದೆ. ಆದ್ದರಿಂದ ನೀವು ಸಂದೇಹಪಡುವರಲ್ಲಾಗದಿರಿ.

(61) ಈ ದಿವ್ಯಜ್ಞಾನ ಬಂದ ಬಳಿಕ ಯಾರಾದರು ಈಸಾ(ಅ)ರವರ ಬಗ್ಗೆ ತರ್ಕಿಸುತ್ತಾರೋ ಅವರಿಗೆ ಹೇಳಿರಿ: 'ಬನ್ನಿರಿ, ನಾವು ನಮ್ಮ ಮತ್ತು ನಿಮ್ಮ ಮಕ್ಕಳನ್ನು ಹಾಗೂ ನಮ್ಮ ಮತ್ತು ನಿಮ್ಮ ಸ್ತಿçÃಯರನ್ನು ಕರೆದುಕೊಳ್ಳೋಣ. ಸ್ವತಃ ನಾವೂ ಮತ್ತು ನೀವೂ ಹಾಜರಾಗೋಣ ತರುವಾಯ ನಾವು ದೈನ್ಯತೆಯಿಂದ ಬೇಡಿಕೊಳ್ಳೋಣ ಮತ್ತು ಸುಳ್ಳುಗಾರರನ್ನು ಶÀಪಿಸೋಣ.

(62) ಖಂಡಿತವಾಗಿಯು ಇದು ನೈಜ ಘಟನೆಗಳ ವಿವರಣೆಯಾಗಿದೆ ಮತ್ತು ಅಲ್ಲಾಹನ ಹೊರತು ಅನ್ಯ ನೈಜ ಆರಾಧ್ಯನಿಲ್ಲ. ಮತ್ತು ನಿಸ್ಸಂದೇಹವಾಗಿಯು ಪ್ರತಾಪಶಾಲಿಯು, ಯುಕ್ತಿಪೂರ್ಣನು ಅಲ್ಲಾಹನಾಗಿದ್ದಾನೆ.

(63) ಇನ್ನು ಅವರು ವಿಮುಖರಾದರೆ ಖಂಡಿತವಾಗಿಯು ಅಲ್ಲಾಹನು ಕಿಡಿಗೇಡಿಗಳ ಕುರಿತು ಚೆನ್ನಾಗಿ ಬಲ್ಲನು.

(64) ಓ ಪೈಗಂಬರರೇ ಹೇಳಿರಿ: 'ಓ ಗ್ರಂಥದವರೇ, ನಮ್ಮ ಮತ್ತು ನಿಮ್ಮ ನಡುವೆ ಸಮಾನವಾಗಿರುವ ಒಂದು ವಚನದೆಡೆಗೆ ಬನ್ನಿರಿ. ಅಂದರೆ ನಾವು ಅಲ್ಲಾಹನ ಹೊರತು ಇನ್ನಾರನ್ನೂ ಆರಾಧಿಸದಿರೋಣ, ಅವನೊಂದಿಗೆ ಯಾರನ್ನೂ ಸಹಭಾಗಿಯನ್ನಾಗಿ ಮಾಡದಿರೋಣ ಮತ್ತು ಅಲ್ಲಾಹನನ್ನು ಹೊರತುಪಡಿಸಿ ನಾವು ಪರಸ್ಪರರಲ್ಲಿ ಇತರ ಯಾರನ್ನೂ ನಮ್ಮ ಪ್ರಭುವಾಗಿರಿಸದಿರೋಣ. ಇನ್ನು ಅವರು ವಿಮುಖರಾದರೆ ಅವರೊಡನೆ ಹೇಳಿರಿ: 'ನಾವು (ಅಲ್ಲಾಹನಿಗೆ) ವಿಧೇಯರಾಗಿದ್ದೇವೆಂಬುದಕ್ಕೆ ನೀವು ಸಾಕ್ಷö್ಯವಹಿಸಿರಿ'

(65) ಓ ಗ್ರಂಥದವರೇ, ನೀವು ಇಬ್ರಾಹೀಮರ ವಿಷಯದಲ್ಲಿ ಏಕೆ ತರ್ಕಿಸುತ್ತೀರಿ? ವಸ್ತುತಃ ತೌರಾತ್ ಮತ್ತು ಇಂಜೀಲ್‌ಗಳAತು ಅವರ ನಂತರ ಅವತೀರ್ಣಗೊಂಡಿವೆ. ಹಾಗಿದ್ದು ನೀವು ತಿಳಿದುಕೊಳ್ಳುವುದಿಲ್ಲವೇ?

(66) ನಿಮಗೆ ಜ್ಞಾನವಿರುವ ವಿಷಯದಲ್ಲಿ ನೀವು ತರ್ಕಿಸದಿರಿ. ಇನ್ನು ನಿಮಗೆ ಯಾವುದೇ ಜ್ಞಾನವಿಲ್ಲದ ವಿಷಯದಲ್ಲಿ ನೀವೇಕೆ ತರ್ಕಿಸುತ್ತಿರುವಿರಿ? ಅಲ್ಲಾಹನು ಅರಿಯುತ್ತಾನೆ ಮತ್ತು ನೀವು ಅರಿಯುವುದಿಲ್ಲ.

(67) ಇಬ್ರಾಹೀಮರು ಯಹೂದಿಯರೋ, ಕ್ರೆöÊಸ್ತರೋ ಆಗಿರಲಿಲ್ಲ. ಆದರೆ ಅವರು ಮಿಥ್ಯವನ್ನು ತ್ಯಜಿಸಿ ಸತ್ಯವನ್ನು ಅನುಸರಿಸುವ ಶರಣರಾಗಿದ್ದರು ಮತ್ತು ಅವರು ಬಹುದೇವಾರಾಧಕರಲ್ಲಿ ಸೇರಿದವರಾಗಿರಲಿಲ್ಲ.

(68) ಖಂಡಿತವಾಗಿಯು ಜನರ ಪೈಕಿ ಇಬ್ರಾಹೀಮನೊಂದಿಗೆ ಹೆಚ್ಚು ಸಮೀಪಸ್ಥರು ಅವರನ್ನು ಅನುಸರಿಸಿದವರು ಮತ್ತು ಈ ಪೈಗಂಬರ್ (ಮುಹಮ್ಮದ್(ಸ)) ಮತ್ತು ಸತ್ಯವಿಶ್ವಾಸಿಗಳಾಗಿದ್ದಾರೆ (ಮುಸ್ಲಿಮರು) ಅಲ್ಲಾಹನು ಸತ್ಯವಿಶ್ವಾಸಿಗಳ ಮಿತ್ರನಾಗಿದ್ದಾನೆ.

(69) ಗ್ರಂಥದವರ ಪೈಕಿ ಒಂದು ಪಂಗಡದವರು ನಿಮ್ಮನ್ನು ಪಥಭ್ರಷ್ಟಗೊಳಿಸಲು ಬಯಸುತ್ತಾರೆ. ವಾಸ್ತವದಲ್ಲಿ ಅವರು ಸ್ವತಃ ತಮ್ಮನ್ನೇ ಪಥಭ್ರಷ್ಟಗೊಳಿಸುತ್ತಿದ್ದಾರೆ. ಮತ್ತು ಅವರು ಅದನ್ನು ಗ್ರಹಿಸುವುದಿಲ್ಲ.

(70) ಓ ಗ್ರಂಥದವರೇ, ನೀವು ಅಲ್ಲಾಹನ ದೃಷ್ಟಾಂತಗಳನ್ನು ಏಕೆ ನಿರಾಕರಿಸುತ್ತಿರುವಿರಿ? ಸ್ವತಃ ನೀವು ಅವುಗಳ ಸತ್ಯತೆಯ ಸಾಕ್ಷಿವಹಿಸುತ್ತಿದ್ದೀರಿ.

(71) ಓ ಗ್ರಂಥದವರೇ, ನೀವು ಸತ್ಯವನ್ನು ಅಸತ್ಯದೊಂದಿಗೆ ಏಕೆ ಬೆರೆಸುತ್ತಿದ್ದೀರಿ ಮತ್ತು (ವಾಸ್ತವಿಕತೆಯನ್ನು) ತಿಳಿದಿದ್ದೂ ಸತ್ಯವನ್ನೇಕೆ ಮರೆಮಾಚುತ್ತೀರಿ?.

(72) ಗ್ರಂಥದವರ ಪೈಕಿ ಒಂದು ಪಂಗಡದವರು (ಪರಸ್ಪರ ಸಂಚು ಮಾಡುತ್ತಾ) ಹೇಳಿದರು: ನೀವು ಹಗಲಿನ ಆರಂಭದಲ್ಲಿ ಈ ವಿಶ್ವಾಸಿಗಳಿಗೆ ಅವತೀರ್ಣಗೊಂಡಿರುವುದರಲ್ಲಿ (ಕುರ್‌ಆನ್) ವಿಶ್ವಾಸವಿಡಿರಿ ಮತ್ತು ಸಾಯಂಕಾಲದಲ್ಲಿ ಅದನ್ನು ನಿಷೇಧಿಸಿರಿ. ಏಕೆಂದರೆ ಈ ಜನರು ಸಹ ವಿಮುಖರಾಗಿ ಬಿಡಬಹುದು.

(73) (ಯಹೂದರು ಹೇಳುತ್ತಾರೆ) ನೀವು ನಿಮ್ಮ ಧರ್ಮವನ್ನು ಅನುಸರಿಸುವವರನ್ನು ಬಿಟ್ಟು ಇನ್ನಾರನ್ನೂ ನಂಬಬೇಡಿರಿ. ನೀವು ಹೇಳಿರಿ: ನಿಸ್ಸಂಶಯವಾಗಿಯು ಸನ್ಮಾರ್ಗವು ಅಲ್ಲಾಹನ ಸನ್ಮಾರ್ಗವಾಗಿದೆ. (ಮತ್ತು ಅವರು ಹೀಗೂ ಹೇಳುತ್ತಾರೆ) ನಿಮಗೆ ನೀಡಲಾದಂತಹ ಧರ್ಮವನ್ನು ಇನ್ನಾರಿಗಾದರು ನೀಡಲ್ಪಡುವುದೆಂದು ಅಥವಾ ಅವರು ನಿಮ್ಮ ಪ್ರಭುವಿನ ಬಳಿ ನಿಮ್ಮ ವಿರುದ್ಧವಾದ ಮಾಡುವರೆಂದು (ನೀವು ನಂಬಬೇಡಿರಿ) (ಪೈಗಂಬರರೇ) ನೀವು ಹೇಳಿರಿ: ಖಂಡಿತವಾಗಿಯು ಅನುಗ್ರಹಗಳು ಅಲ್ಲಾಹನ ಕೈಯಲ್ಲಿವೆ. ಅವನು ತಾನಿಚ್ಛಿಸಿದವರಿಗೆ ಅದನ್ನು ನೀಡುತ್ತಾನೆ. ಅಲ್ಲಾಹನು ವಿಶಾಲತೆಯುಳ್ಳವನೂ, ಅರಿಯುವವನೂ ಆಗಿದ್ದಾನೆ.

(74) ತಾನಿಚ್ಛಿಸುವವರಿಗೆ ಅವನು ತನ್ನ ಕಾರುಣ್ಯಕ್ಕೆ (ಪ್ರವಾದಿತ್ವಕ್ಕೆ) ವಿಶೇಷವಾಗಿ ಕಾದಿರಿಸುತ್ತಾನೆ ಮತ್ತು ಅಲ್ಲಾಹನು ಮಹಾ ಅನುಗ್ರಹ ದಾತನಾಗಿದ್ದಾನೆ.

(75) (ಗ್ರಂಥದವರಲ್ಲಿ ಇಂತಹ) ಕೆಲವು ಪ್ರಾಮಾಣಿಕರಾಗಿದ್ದಾರೆ. ಒಂದು ಚಿನ್ನದ ಭಂಡಾರವನ್ನು ನಂಬಿಕೆಯಿAದ ಒಪ್ಪಿಸಿದರೂ ಅದನ್ನು ನಿಮಗೆ ಮರಳಿಸುವರು ಮತ್ತು ಅವರಲ್ಲಿ ಇನ್ನು ಕೆಲವರು ವಂಚಕರಿದ್ದಾರೆ ಅವರಿಗೆ ಒಂದು ದೀನಾರನ್ನೂ (ಚಿನ್ನದ ನಾಣ್ಯ) ನಂಬಿಕೆಯಿAದ ಒಪ್ಪಿಸಿದರೂ, ಅವರು ಅದನ್ನು ಮರಳಿಸಲಾರರು. ಆದರೆ ನೀವು ಅವರ ಬೆನ್ನಹಿಂದೆಯೇ ಬಿದ್ದರೆ ಬೇರೆ ವಿಚಾರ. ಇದೇಕೆಂದರೆ ಯಹೂದೇತರ ಹಕ್ಕುಗಳ ವಿಷಯದಲ್ಲಿ ನಮಗೆ ಯಾವುದೇ ಪಾಪವಿಲ್ಲವೆಂದು ಅವರು ಹೇಳುವುದರಿಂದಾಗಿದೆ. ಅವರು ತಿಳಿದೂ ತಿಳಿದೂ ಅಲ್ಲಾಹನ ಮೇಲೆ ಸುಳ್ಳು ಹೇಳುತ್ತಿದ್ದಾರೆ.

(76) ಏಕಿಲ್ಲ (ಖಂಡಿತ ಅಲ್ಲಾಹನು ಅವರ ವಿಚಾರಣೆ ನಡೆಸುತ್ತಾನೆ ಆದರೆ) ಯಾರು ತನ್ನ ಕರಾರನ್ನು ನೆರವೇರಿಸುತ್ತಾನೋ ಮತ್ತು ಭಯಭಕ್ತಿಯನ್ನು ಪಾಲಿಸುತ್ತಾನೋ ಖಂಡಿತವಾಗಿಯು ಅಲ್ಲಾಹನು ಭಯಭಕ್ತಿಯುಳ್ಳವರನ್ನು ಪ್ರೀತಿಸುತ್ತಾನೆ.

(77) ನಿಸ್ಸಂಶಯವಾಗಿಯು ಯಾರು ಅಲ್ಲಾಹನ ಕರಾರು ಮತ್ತು ತಮ್ಮ ಶಪಥಗಳನ್ನು ತುಚ್ಛ ಬೆಲೆಗೆ ಮಾರುತ್ತಾರೋ ಅವರಿಗೆ ಪರಲೋಕದಲ್ಲಿ ಯಾವುದೇ ಪಾಲಿಲ್ಲ. ಪುನರುತ್ಥಾನ ದಿನದಂದು ಅಲ್ಲಾಹನು ಅವರೊಂದಿಗೆ ಮಾತನಾಡುವುದಿಲ್ಲ, ಅವರ ಕಡೆಗೆ ನೋಡುವುದಿಲ್ಲ, ಅವರನ್ನು ಶುದ್ಧೀಕರಿಸುವುದಿಲ್ಲ ಮತ್ತು ಅವರಿಗೆ ಯಾತನಾಮಯ ಶಿಕ್ಷೆಯಿದೆ.

(78) ನಿಸ್ಸಂಶಯವಾಗಿ ಗ್ರಂಥದವರಲ್ಲಿ ಒಂದು ಗುಂಪು ಗ್ರಂಥವನ್ನು ಓದುವಾಗ ನಾಲಿಗೆಯನ್ನು ತಿರುಚುತ್ತಾರೆ. ಅವರು ಗ್ರಂಥದ ವಿಷಯವನ್ನು ಓದುತ್ತಾರೆಂದು ನೀವು ಭಾವಿಸಲಿಕ್ಕಾಗಿ ವಸ್ತುತಃ ಅದು ಗ್ರಂಥದ ವಿಷಯವಾಗಿರುವುದಿಲ್ಲ. ನಾವು ಓದುತ್ತಿರುವುದೆಲ್ಲ ಅಲ್ಲಾಹನ ಕಡೆಯಿಂದ ಎಂದು ಅವರು ಹೇಳುತ್ತಾರೆ ಆದರೆ ಅದು ಅಲ್ಲಾಹನ ಕಡೆಯಿಂದಾಗಿರುವುದಿಲ್ಲ. ಅವರು ಬೇಕು ಬೇಕೆಂದು ಸುಳ್ಳಾರೋಪವನ್ನು ಅಲ್ಲಾಹನ ಮೇಲೆ ಹೊರಿಸುತ್ತಾರೆ.

(79) ಅಲ್ಲಾಹನು ಗ್ರಂಥ ಮತ್ತು ಸುಜ್ಞಾನ ಹಾಗೂ ಪ್ರವಾದಿತ್ವವನ್ನು ನೀಡಿದಂತಹ ವ್ಯಕ್ತಿಯು ಜನರೊಂದಿಗೆ ನೀವು ಅಲ್ಲಾಹನ ಹೊರತು ನನ್ನ ದಾಸರಾಗಿರೆಂದು ಹೇಳುವುದು ಅಸಾಧ್ಯವಾಗಿದೆ. ಆದರೆ ನೀವು ಗ್ರಂಥವನ್ನು ಕಲಿಸುತ್ತಿರುವುದರ ನಿಮಿತ್ತ ಮತ್ತು ನಿಮ್ಮ ಈ ಗ್ರಂಥದ ಪಾರಾಯಣ ಮಾಡುವುದರ ನಿಮಿತ್ತ ನೀವು ಪ್ರಭುವಿನ ದಾಸರಾಗಿರಿ (ಎಂದು ಹೇಳುವನು)

(80) ಅವನು ನಿಮಗೆ ಮಲಕ್‌ಗಳನ್ನು ಮತ್ತು ಪೈಗಂಬರರನ್ನು ಪ್ರಭುಗಳನ್ನಾಗಿ ನಿಶ್ಚಯಿಸಿಕೊಳ್ಳಲು ಆದೇಶಿಸುವುದು ಅಸಾಧ್ಯವಾಗಿದೆ. ನೀವು ವಿಶ್ವಾಸಿಗಳಾದ ನಂತರವು ನಿಷೇಧಿಗಳಾಗಲು ಅವನು ನಿಮಗೆ ಆದೇಶಿಸುತ್ತಾನೆಯೇ?

(81) ಅಲ್ಲಾಹನು ಪ್ರವಾದಿಗಳೊಂದಿಗೆ ಕರಾರನ್ನು ಪಡೆದ ಸಂದರ್ಭವನ್ನು ಸ್ಮರಿಸಿರಿ. ನಾನು ನಿಮಗೆ ಗ್ರಂಥ ಮತ್ತು ಸುಜ್ಞಾನವನ್ನು ನೀಡಿ ಅನಂತರ ನಿಮ್ಮ ಬಳಿಯಿರುವುದನ್ನು ಸತ್ಯವೆಂದು ದೃಢಪಡಿಸುವ ಓರ್ವ ಸಂದೇಶವಾಹಕನನ್ನು ನಿಮ್ಮ ಬಳಿಗೆ ಬಂದರೆ ನೀವು ಅವನಲ್ಲಿ ವಿಶ್ವಾಸವನ್ನಿಡುವುದು ಹಾಗೂ ಅವನಿಗೆ ಸಹಾಯವನ್ನು ನೀಡುವುದು ನಿಮ್ಮ ಮೇಲೆ ಕಡ್ಡಾಯವಾಗಿದೆ. ತರುವಾಯ ಅಲ್ಲಾಹನು ಹೇಳಿದನು: ನೀವದನ್ನು ಒಪ್ಪಿಕೊಂಡು ಆ ವಿಷಯದಲ್ಲಿ ನನ್ನ ಹೊಣೆಗಾರಿಕೆಯನ್ನು ವಹಿಸಿಕೊಳ್ಳುವಿರಾ? ಅವರೆಲ್ಲರೂ ಹೇಳಿದರು: ನಾವು ಒಪ್ಪಿಕೊಂಡೆವು, ಅವನು ಹೇಳಿದನು: ಹಾಗಾದರೆ ನೀವು ಸಾಕ್ಷಿಗಳಾಗಿರಿ ಮತ್ತು ಸ್ವತಃ ನಾನೂ ನಿಮ್ಮೊಂದಿಗೆ ಸಾಕ್ಷಿಗಳಲ್ಲಿ ಸೇರುವೆನು.

(82) ಅದರ ನಂತರವೂ ಯಾರು ವಿಮುಖರಾಗುತ್ತಾರೋ ಅವರೇ ಧಿಕ್ಕಾರಿಗಳಾಗಿದ್ದಾರೆ.

(83) ಅವರು ಅಲ್ಲಾಹನ ಧರ್ಮದ ಹೊರತು ಬೇರೆ ಧರ್ಮವನ್ನು ಹುಡುಕುತ್ತಿದ್ದಾರೆಯೇ? ವಸ್ತುತಃ ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವವರೆಲ್ಲರೂ ಸ್ವ-ಇಚ್ಛೆಯಿಂದ ಅಥವಾ ಅನಿವಾರ್ಯತೆಯಿಂದ ಅವನಿಗೆ ವಿಧೇಯರಾಗಿದ್ದಾರೆ. ಎಲ್ಲರೂ ಅವನೆಡೆಗೇ ಮರಳಿಸಲಾಗುವರು.

(84) ಹೇಳಿರಿ: ಅಲ್ಲಾಹನಲ್ಲೂ, ನಮ್ಮ ಮೇಲೆ ಅವತೀರ್ಣಗೊಳಿಸಲಾಗಿರುವುದರಲ್ಲೂ ಮತ್ತು ಇಬ್ರಾಹೀಮ್ ಇಸ್ಮಾಯೀಲ್, ಇಸ್‌ಹಾಕ್, ಯಾಕೂಬ್ ಮತ್ತು ಅವರ ಸಂತತಿಗಳಿಗೆ ಅವತೀರ್ಣಗೊಳಿಸಲಾಗಿರುವುದರಲ್ಲೂ, ಮೂಸಾ, ಈಸಾರಿಗೆ ಹಾಗೂ ಸಕಲ ಪೈಗಂಬರರಿಗೆ ತಮ್ಮ ಪ್ರಭುವಿನ ವತಿಯಿಂದ ನೀಡಲಾಗಿರುವುದರಲ್ಲೂ ನಾವು ವಿಶ್ವಾಸವಿಟ್ಟಿರುವೆವು. ಅವರ ಪೈಕಿ ಯಾರ ನಡುವೆಯೂ ನಾವು ತಾರತಮ್ಯ ಮಾಡುವುದಿಲ್ಲ. ನಾವು ಅಲ್ಲಾಹನಿಗೆ ವಿಧೇಯರಾಗಿದ್ದೇವೆ.

(85) ಯಾರಾದರೂ ಇಸ್ಲಾಮ್ (ಅಲ್ಲಾಹನಿಗೆ ಶರಣಾಗತಿ)ನ ಹೊರತು ಬೇರೆ ಧರ್ಮವನ್ನು ಬಯಸಿದರೆ ಅದನ್ನು ಅವನಿಂದ ಎಂದಿಗೂ ಸ್ವೀಕರಿಸಲಾಗದು ಮತ್ತು ಅವನು ಪರಲೋಕದಲ್ಲಿ ನಷ್ಟ ಹೊಂದಿದವರಲ್ಲಿ ಸೇರುವನು.

(86) ವಿಶ್ವಾಸವಿಟ್ಟು ಸಂದೇಶವಾಹಕನ ಸತ್ಯಸಂಧ್ಯತೆಗೆ ಸಾಕ್ಷö್ಯವಹಿಸಿದ ಬಳಿಕ ಮತ್ತು ತಮ್ಮ ಬಳಿ ಸ್ಪಷ್ಟ ಪುರಾವೆಗಳು ಬಂದ ಬಳಿಕ ಅವಿಶ್ವಾಸಿಗಳಾದ ಜನರಿಗೆ ಅಲ್ಲಾಹನು ಸನ್ಮಾರ್ಗ ತೋರಿಸುವುದಾದರೂ ಹೇಗೆ? ಅಲ್ಲಾಹನು ಇಂತಹ ಅಕ್ರಮಿ ಜನರನ್ನು ಸನ್ಮಾರ್ಗದಲ್ಲಿ ಮುನ್ನಡೆಸುವುದಿಲ್ಲ.

(87) ಇಂಥವರಿಗೆ ಅಲ್ಲಾಹನ ಮತ್ತು ಮಲಕ್‌ಗಳ ಮತ್ತು ಎಲ್ಲಾ ಜನರ ಶಾಪವಿದೆ ಎಂಬುದೇ ಅವರಿಗಿರುವ ಪ್ರತಿಫಲವಾಗಿದೆ.

(88) ಅವರು ಅದರಲ್ಲಿ ಶಾಶ್ವತವಾಗಿರುವರು ಅವರಿಂದ ಶಿಕ್ಷೆಯನ್ನು ಹಗುರಗೊಳಿಸಲಾಗದು ಮತ್ತು ಅವರಿಗೆ ಕಾಲಾವಕಾಶವನ್ನೂ ನೀಡಲಾಗದು.

(89) ಆದರೆ ಅದರ (ಅವಿಶ್ವಾಸದ) ಬಳಿಕ ಪಶ್ಚಾತ್ತಾಪ ಪಟ್ಟು, ಸುಧಾರಣೆ ಮಾಡಿಕೊಂಡವರ ಹೊರತು ನಿಸ್ಸಂಶಯವಾಗಿಯು ಅಲ್ಲಾಹನು ಅತ್ಯಧಿಕ ಕ್ಷಮಿಸುವವನೂ, ಅಪಾರ ಕರುಣೆ ತೋರುವವನೂ ಆಗಿದ್ದಾನೆ.

(90) ನಿಸ್ಸಂಶಯವಾಗಿಯು ಯಾರು ವಿಶ್ವಾಸವಿಟ್ಟ ಬಳಿಕ ಸತ್ಯನಿಷೇಧಿಸುತ್ತಾರೋ ಅನಂತರ ನಿಷೇಧದಲ್ಲಿ ಇನ್ನಷ್ಟು ಮುಂದುವರಿಯುತ್ತಾರೋ ಅವರ ಪಶ್ಚಾತ್ತಾಪವನ್ನು ಎಂದಿಗೂ ಸ್ವೀಕರಿಸಲಾಗದು. ಅವರೇ ಮಾರ್ಗ ಭ್ರಷ್ಟರಾಗಿದ್ದಾರೆ.

(91) ಆದರೆ ಸತ್ಯನಿಷೇಧ ಕೈಗೊಂಡು ಸತ್ಯನಿಷೇಧದಲ್ಲೇ ಮರಣ ಹೊಂದುವವರ ಪೈಕಿ ಯಾರು ಭೂಮಿಯಷ್ಟು ಚಿನ್ನವನ್ನು ಪ್ರಾಯಶ್ಚಿತವಾಗಿ, ತಮ್ಮ ಮೋಕ್ಷಕ್ಕಾಗಿ ನೀಡಿದರೂ, ಅದು ಎಂದಿಗೂ ಸ್ವೀಕರಿಸಲ್ಪಡಲಾರದು. ಅವರಿಗೆ ಯಾತನಾಮಯ ಶಿಕ್ಷೆಯಿರುವುದು ಮತ್ತು ಅವರಿಗೆ ಅಲ್ಲಾಹನೆದುರು ಯಾವ ಸಹಾಯಕರೂ ಇರಲಾರರು.

(92) ನೀವು ತಮಗೆ ಪ್ರಿಯವಾದ ವಸ್ತುಗಳಿಂದ ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡುವವರೆಗೆ ನಿಮಗೆ ಪುಣ್ಯದ ಉನ್ನತ ದರ್ಜೆಗೆ ತಲುಪಲು ಸಾಧ್ಯವೇ ಇಲ್ಲಾ. ನೀವು ಏನನ್ನು ಖರ್ಚು ಮಾಡುವುದಾಗಿದ್ದರೂ ಖಂಡಿತವಾಗಿಯು ಅಲ್ಲಾಹನು ಅದರ ಕುರಿತು ಚೆನ್ನಾಗಿ ಅರಿಯುವವನಾಗಿದ್ದಾನೆ.

(93) ತೌರಾತ್ ಅವತೀರ್ಣವಾಗುವುದಕ್ಕೆ ಮೊದಲು (ಪೈಗಂಬರ್) (ಯಾಕೂಬ್) ತಮ್ಮ ಮೇಲೆ ಯಾವುದನ್ನು ನಿಷಿದ್ಧಗೊಳಿಸಿದ್ದ ವಸ್ತುಗಳ ಹೊರತು (ಮುಸ್ಲಿಮರಿಗೆ ಧರ್ಮ ಬದ್ಧವಾಗಿರುವ) ಎಲ್ಲಾ ಆಹಾರ ಪದಾರ್ಥಗಳೂ ಇಸ್ರಾಯೀಲ್ ಸಂತತಿಗಳಿಗೂ ಧರ್ಮಸಮ್ಮತವಾಗಿದ್ದವು. ಓ ಪೈಗಂಬರರೇ ಹೇಳಿರಿ: ನೀವು ಸತ್ಯಸಂಧರಾಗಿದ್ದರೆ ತೌರಾತನ್ನು ತಂದು ಅದರ ಪಾರಾಯಣ ಮಾಡಿರಿ.

(94) ಇದರ ಬಳಿಕವೂ ಯಾರು ಅಲ್ಲಾಹನ ಹೆಸರಿನಲ್ಲಿ ಸುಳ್ಳನ್ನು ಹೆಣೆದರೂ ಅವರೇ ಅಕ್ರಮಿಗಳು.

(95) (ಪೈಗಂಬರರೇ) ಹೇಳಿರಿ: ಅಲ್ಲಾಹನು ಸತ್ಯವನ್ನು ಹೇಳಿದ್ದಾನೆ. ಮಿಥ್ಯವನ್ನು ತ್ಯಜಿಸಿ ಸತ್ಯವನ್ನು ಅನುಸರಿಸಿದ ಇಬ್ರಾಹೀಮ್(ಅ)ರ ಮಾರ್ಗವನ್ನು ಅನುಸರಿಸಿರಿ. ಅವರು ಬಹುದೇವಾರಾಧಕರಲ್ಲಿ ಸೇರಿರಲಿಲ್ಲ.

(96) ಮನುಷ್ಯರಿಗಾಗಿ ಸ್ಥಾಪಿಸಲ್ಪಟ್ಟ ಮೊಟ್ಟ ಮೊದಲ ಭವನವು ಮಕ್ಕ್ಕಾದಲ್ಲಿರುವುದೇ ಆಗಿದೆ.

(97) ಅದರಲ್ಲಿ ಸ್ಪಷ್ಟ ದೃಷ್ಟಾಂತಗಳಿವೆ. ಇಬ್ರಾಹೀಮ್(ಅ)ರವರು ನಿಂತಿದ್ದ ಸ್ಥಳವಿದೆ. ಯಾರು ಅಲ್ಲಿಗೆ ಪ್ರವೇಶಿಸುತ್ತಾನೋ ಅವನು ನಿರ್ಭಯನಾಗುವನು. ಅಲ್ಲಾಹನು ಅದರೆಡೆಗೆ ತಲುಪಲು ಸಾಧ್ಯವಿರುವ ಜನರ ಮೇಲೆ ಆ ಭವನದ ಹಜ್ಜ್ಯಾತ್ರೆ ನಡೆಸುವುದನ್ನು ಕಡ್ಡಾಯಗೊಳಿಸಿದ್ದಾನೆ. ಇನ್ನು ಯಾರಾದರೂ (ಈ ಆದೇಶವನ್ನು) ನಿರಾಕರಿಸಿದರೆ ಅಲ್ಲಾಹನು ಸರ್ವಲೋಕದವರಿಂದ ನಿರಪೇಕ್ಷನಾಗಿದ್ದಾನೆ.

(98) ಪೈಗಂಬರರೇ ಹೇಳಿರಿ: ಓ ಗ್ರಂಥದವರೇ, ನೀವು ಅಲ್ಲಾಹನ ಸೂಕ್ತಿಗಳನ್ನು ಏಕೆ ನಿಷೇಧಿಸುತ್ತಿರುವಿರಿ? ನೀವು ಮಾಡುತ್ತಿರುವುದಕ್ಕೆಲ್ಲಾ ಅಲ್ಲಾಹನು ಸಾಕ್ಷಿಯಾಗಿದ್ದಾನೆ.

(99) ಹೇಳಿರಿ: ಓ ಗ್ರಂಥದವರೇ, ವಿಶ್ವಾಸಿಗಳನ್ನು (ಅಲ್ಲಾಹನ ಮೇಲೆ ವಿಶ್ವಾಸವಿರಿಸಿದವನು) ಅಲ್ಲಾಹನ ಮಾರ್ಗದಿಂದ ನೀವೇಕೆ ತಡೆಯುತ್ತಿರುವಿರಿ. ಮತ್ತು ಅಡ್ಡದಾರಿಯಲ್ಲಿ ನಡೆಯಬೇಕೆಂದು ಬಯಸುತ್ತೀರಿ. ವಸ್ತುತಃ (ಅವನು ನೇರ ಮಾರ್ಗದಲ್ಲಿರುವ ಬಗ್ಗೆ) ನೀವೇ ಸಾಕ್ಷಿಗಳಾಗಿರುವಿರಿ. ಅಲ್ಲಾಹನು ನಿಮ್ಮ ಕರ್ಮಗಳ ಬಗ್ಗೆ ಅಲಕ್ಷö್ಯನಲ್ಲ.

(100) ಓ ಸತ್ಯವಿಶ್ವಾಸಿಗಳೇ, ಗ್ರಂಥ ನೀಡಲ್ಪಟ್ಟವರ ಯಾವುದೇ ಒಂದು ಗುಂಪನ್ನು ನೀವು ಅನುಸರಿಸುವುದಾದರೆ ಅವರು ನಿಮ್ಮನ್ನು ನೀವು ವಿಶ್ವಾಸ ಸ್ವೀಕರಿಸಿದ ನಂತರ ನಿಷೇಧಿಗಳನ್ನಾಗಿ ಮಾರ್ಪಡಿಸುವರು.

(101) ನಿಮಗೆ ಅಲ್ಲಾಹನ ಸೂಕ್ತಿಗಳನ್ನು ಓದಿ ಕೊಡಲಾಗುತ್ತಿದ್ದೂ (ನಿಮ್ಮ ಮಾರ್ಗದರ್ಶನಕ್ಕಾಗಿ) ನಿಮ್ಮ ಮಧ್ಯೆ ಅಲ್ಲಾಹನ ಸಂದೇಶವಾಹಕರಿದ್ದೂ ಕೂಡ ನೀವು ಸತ್ಯನಿಷೇಧಿಸುವುದಾದರೂ ಹೇಗೆ? ಯಾರು ಅಲ್ಲಾಹನ ಧರ್ಮವನ್ನು ಸದೃಢವಾಗಿ ಹಿಡಿಯುತ್ತಾನೋ ನಿಸ್ಸಂದೇಹವಾಗಿಯು ಅವನನ್ನು ಸನ್ಮಾರ್ಗದಲ್ಲಿ ಮುನ್ನಡೆಸಲಾಯಿತು.

(102) ಓ ಸತ್ಯವಿಶ್ವಾಸಿಗಳೇ, ನೀವು ಅಲ್ಲಾಹನನ್ನು ಭಯಪಡಬೇಕಾದ ರೀತಿಯಲ್ಲೇ ಭಯಪಡಿರಿ ಮತ್ತು ಮುಸ್ಲಿಮರಾಗಿಯೇ ವಿನಃ ನೀವು ಖಂಡಿತ ಮರಣ ಹೊಂದಬಾರದು.

(103) ನೀವೆಲ್ಲರೂ ಒಟ್ಟಾಗಿ ಅಲ್ಲಾಹನ ಪಾಶವನ್ನು ಸದೃಢವಾಗಿ ಹಿಡಿದುಕೊಳ್ಳಿರಿ. ನೀವು ಭಿನ್ನರಾಗದಿರಿ ಮತ್ತು ಅಲ್ಲಾಹನು ನಿಮಗೆ ನೀಡಿದ ಅನುಗ್ರಹವನ್ನು ಸ್ಮರಿಸಿರಿ. ನೀವು ಪರಸ್ಪರ ಶತ್ರುಗಳಾಗಿದ್ದಾಗ ಅವನು ನಿಮ್ಮ ಹೃದಯಗಳನ್ನು ಬೆಸೆದನು. ಹಾಗೆಯೇ ಅವನ ಔದಾರ್ಯದಿಂದ ನೀವು ಸಹೋದರರಾಗಿ ಬಿಟ್ಟಿರಿ. ನೀವು ನರಕಾಗ್ನಿಯ ಅಂಚಿಗೆ ತಲುಪಿಬಿಟ್ಟಿದ್ದೀರಿ. ಅವನು ನಿಮ್ಮನ್ನು ರಕ್ಷಿಸಿದನು. ಇದೇ ಪ್ರಕಾರ ಅಲ್ಲಾಹನು ತನ್ನ ದೃಷ್ಟಾಂತಗಳನ್ನು ನೀವು ಸನ್ಮಾರ್ಗಪಡೆಯಲೆಂದು ನಿಮಗೆ ವಿವರಿಸಿಕೊಡುತ್ತಾನೆ.

(104) ಒಳಿತಿನೆಡೆಗೆ ಆಹ್ವಾನಿಸುವ, ಸದಾಚಾರವನ್ನು ಆದೇಶಿಸುವ ಮತ್ತು ದುಷ್ಕೃತ್ಯಗಳಿಂದ ತಡೆಯುವಂತಹ ಒಂದು ಸಮುದಾಯವು ನಿಮ್ಮಲ್ಲಿರುವುದು ಅವಶ್ಯವಾಗಿದೆ ಮತ್ತು ಅವರೇ ವಿಜಯ ಹೊಂದುವವರಾಗಿದ್ದಾರೆ.

(105) ತಮ್ಮ ಬಳಿಗೆ ಸ್ಪಷ್ಟವಾದ ಪುರಾವೆಗಳು ಬಂದ ನಂತರವೂ ಛಿನ್ನಭಿನ್ನರಾಗಿ ಪರಸ್ಪರ ಭಿನ್ನಾಭಿಪ್ರಾಯ ಹೊಂದಿದವರAತೆ ನೀವಾಗಬಾರದು. ಅವರಿಗೇ ಅತ್ಯುಗ್ರ ಶಿಕ್ಷೆಯಿರುವುದು.

(106) ಅಂದು ಕೆಲವು ಮುಖಗಳು ಬೆಳಗಲಿವೆ ಮತ್ತು ಕೆಲವು ಮುಖಗಳು ಕಪ್ಪಾಗಲಿವೆ. ಕಪ್ಪಾದ ಮುಖದವರೊಂದಿಗೆ ಹೇಳಲಾಗುವುದು: ನೀವು ವಿಶ್ವಾಸವನ್ನು ಸ್ವೀಕರಿಸಿದ ನಂತರ ನಿಷೇಧವನ್ನು ಕೈಗೊಂಡಿರಾ? ಇದೀಗ ನಿಮ್ಮ ಸತ್ಯನಿಷೇಧದ ಫಲವನ್ನು ಅನುಭವಿಸಿರಿ.

(107) ಇನ್ನು ಬೆಳಗಿದ ಮುಖದವರು ಅಲ್ಲಾಹನ ಕಾರಣ್ಯದಲ್ಲಿರುವರು ಮತ್ತು ಅವರದರಲ್ಲಿ ಶಾಶ್ವತವಾಗಿರುವರು.

(108) ಓ ಪೈಗಂಬರರೇ ಇವು ಅಲ್ಲಾಹನ ಸೂಕ್ತಿಗಳಾಗಿವೆ ಇದನ್ನು ನಾವು ನಿಮಗೆ ಸತ್ಯಪೂರ್ಣವಾಗಿ ಓದಿ ಕೇಳಿಸುತ್ತಿದ್ದೇವೆ ಮತ್ತು ಅಲ್ಲಾಹನು ಸರ್ವಲೋಕವಾಸಿಗಳೊಂದಿಗೆ ಅನ್ಯಾಯ ಮಾಡುವುದನ್ನು ಬಯಸುವುದಿಲ್ಲ.

(109) ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವುದೆಲ್ಲವೂ ಅಲ್ಲಾಹನದ್ದಾಗಿದೆ ಮತ್ತು ಸಕಲ ಕಾರ್ಯಗಳೂ ಅಲ್ಲಾಹನ ಕಡೆಗೇ ಮರಳಿಸಲಾಗುತ್ತವೆ.

(110) ನೀವು ಮನುಕುಲಕ್ಕಾಗಿ ಸೃಷ್ಟಿಸಲಾದ ಅತ್ಯುತ್ತಮ ಸಮುದಾಯದವರಾಗಿರುವಿರಿ. ನೀವು ಸದಾಚಾರವನ್ನು ಆದೇಶಿಸತ್ತೀರಿ ಮತ್ತು ದುರಾಚಾರಗಳಿಂದ ತಡೆಯುತ್ತೀರಿ ಮತ್ತು ಅಲ್ಲಾಹನಲ್ಲಿ ವಿಶ್ವಾಸವಿಡುತ್ತೀರಿ. ಗ್ರಂಥದವರು ಸಹ ವಿಶ್ವಾಸವಿಡುತ್ತಿದ್ದರೆ ಅದು ಅವರ ಪಾಲಿಗೆ ಉತ್ತಮವಾಗುತ್ತಿತ್ತು. ಅವರ ಪೈಕಿ ಸತ್ಯವಿಶ್ವಾಸಿಗಳೂ ಇದ್ದಾರೆ. ಆದರೆ ಹೆಚ್ಚಿನವರು ಧಿಕ್ಕಾರಿಗಳಾಗಿದ್ದಾರೆ.

(111) ಖಂಡಿತ ಅವರು (ಯಹೂದಿಗಳು) ನಿಮಗೆ ಕೆಲವು ಕೀಟಲೆಗಳಿಗಿಂತ ಹೆಚ್ಚಾಗಿ ಇನ್ನಾವ ತೊಂದರೆಯನ್ನುAಟು ಮಾಡಲಾರರು. ಇನ್ನು ಅವರು ನಿಮ್ಮೊಂದಿಗೆ ಯುದ್ಧ ಮಾಡಿದರೆ ಅವರು ಬೆನ್ನು ತಿರುಗಿಸಿ ಓಡುವರು ನಂತರ ಅವರಿಗೆ ಸಹಾಯವೂ ನೀಡಲಾಗದು.

(112) ಅವರ ಮೇಲೆ ಎಲ್ಲೆಡೆಯಿಂದ ನಿಂದ್ಯತೆಯ ಪ್ರಹಾರ ಬಿದ್ದಿದೆ. ಆದರೆ ಅಲ್ಲಾಹನ ಅಥವಾ ಜನರ ಆಶ್ರಯದ ಹೊರತು. ಅವರು ಅಲ್ಲಾಹನ ಕ್ರೋಧಕ್ಕೆ ಪಾತ್ರರಾದರು ಮತ್ತು ಅವರ ಮೇಲೆ ದಾರಿದ್ರö್ಯವನ್ನು ಹಾಕಲಾಯಿತು. ಇದೇಕೆಂದರೆ ಅವರು ಅಲ್ಲಾಹನ ಸೂಕ್ತಿಗಳನ್ನು ನಿಷೇಧಿಸುತ್ತಿದ್ದರು ಮತ್ತು ಅನ್ಯಾಯವಾಗಿ ಪೈಗಂಬರರÀನ್ನು ಕೊಲೆಗೈಯುತ್ತಿದ್ದರು. ಇದು ಅವರ ಧಿಕ್ಕಾರ ಹಾಗೂ ಅತಿಕ್ರಮಗಳಿಗಿರುವ ಫಲವಾಗಿದೆ.

(113) ಗ್ರಂಥದವರೆಲ್ಲರೂ ಸಮಾನರಲ್ಲ ಅವರಲ್ಲಿ ಒಂದು ಗುಂಪು (ಸತ್ಯದಲ್ಲಿ) ನೆಲೆಗೊಂಡಿರುವರು ರಾತ್ರಿಯ ಅಂತಿಮ ವೇಳೆಗಳಲ್ಲಿ ಅಲ್ಲಾಹನ ವಚನಗಳನ್ನು ಪಾರಾಯಣ ಮಾಡುವರು ಮತ್ತು ಸಾಷ್ಟಾಂಗವನ್ನು ಮಾಡುವವರೂ ಇದ್ದಾರೆ.

(114) ಅವರು ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವನ್ನಿಡುತ್ತಾರೆ. ಸದಾಚಾರವನ್ನು ಆದೇಶಿಸುತ್ತಾರೆ, ದುರಾಚಾರಗಳಿಂದ ತಡೆಯುತ್ತಾರೆ ಮತ್ತು ಒಳಿತಿನ ಕಾರ್ಯಗಳಲ್ಲಿ ಶೀಘ್ರತೆಯನ್ನು ತೋರಿಸುತ್ತಾರೆ. ಮತ್ತು ಅವರೇ ಸಜ್ಜನರಲ್ಲಿ ಸೇರಿದವರಾಗಿದ್ದಾರೆ.

(115) ಅವರು ಯಾವುದೇ ಒಳಿತನ್ನೂ ಮಾಡಿದರು ಅದನ್ನು ಕಡೆಗಣಿಸಲಾಗದು. ಮತ್ತು ಅಲ್ಲಾಹನು ಭಯಭಕ್ತಿ ಪಾಲಿಸುವವರನ್ನು ಚೆನ್ನಾಗಿ ಅರಿಯುತ್ತಾನೆ.

(116) (ಇದಕ್ಕೆ ತದ್ವಿರುದ್ಧವಾಗಿ) ಸತ್ಯನಿ಼ಷೇಧಿಗಳಿಗೆ ತಮ್ಮ ಸಂಪತ್ತಾಗಲೀ ಮತ್ತು ತಮ್ಮ ಸಂತಾನವಾಗಲೀ ಅಲ್ಲಾಹನ ಶಿಕ್ಷೆಯಿಂದ ಯಾವ ಪ್ರಯೋಜನವನ್ನೂ ನೀಡಲಾರದು. ಅವರು ನರಕವಾಸಿಗಳಾಗಿದ್ದಾರೆ. ಅವರು ಅದರಲ್ಲಿ ಶಾಶ್ವತವಾಗಿರುವರು.

(117) ಇಹಲೋಕದಲ್ಲಿ ಸತ್ಯನಿಷೇಧಿಗಳು ವ್ಯಯಿಸುವ (ದಾನಧರ್ಮಗಳ) ಉಪಮೆಯು ಅತೀ ಶೀತವಿರುವ ಒಂದು ಭಯಂಕರ ಗಾಳಿಯು ಅಕ್ರಮಿ ಜನಾಂಗದ ಕೃಷಿಗೆ ಬೀಸಿ ಅದನ್ನು ಸಂಪೂರ್ಣ ನಾಶಗೊಳಿಸಿದಂತಿದೆ. ಅಲ್ಲಾಹನು ಅವರ ಮೇಲೆ ಅಕ್ರಮ ಮಾಡಲಿಲ್ಲ. ಆದರೆ ಅವರು ಸ್ವತಃ ತಮ್ಮ ಮೇಲೆ ಅಕ್ರಮವೆಸಗುತ್ತಿದ್ದಾರೆ.

(118) ಓ ಸತ್ಯವಿಶ್ವಾಸಿಗಳೇ, ನೀವು ನಿಮ್ಮವರನ್ನಲ್ಲದೇ ಇತರರನ್ನು ನಿಮ್ಮ ರಹಸ್ಯದ ಆಪ್ತಮಿತ್ರರನ್ನಾಗಿ ಮಾಡಿಕೊಳ್ಳಬೇಡಿರಿ. ಅವರು ನಿಮ್ಮ ಅವನತಿಗಾಗಿ ಸ್ವಲ್ಪವೂ ದಾಕ್ಷಿಣ್ಯವನ್ನು ತೋರಲಾರರು. ನೀವು ತೊಂದರೆಗೊಳಗಾಗಬೇಕೆAಬುದೇ ಅವರ ಉದ್ದೇಶವಾಗಿದೆ. ಅವರ ವಿದ್ವೇಷವು ಸ್ವತಃ ಅವರ ಬಾಯಿಯಿಂದಲೇ ಪ್ರಕಟವಾಗಿಬಿಟ್ಟಿದೆ. ಮತ್ತು ಅವರ ಹೃದಯಗಳಲ್ಲಿ ಅಡಕವಾಗಿರುವುದು ಇನ್ನೂ ಘೋರವಾಗಿದೆ. ನಾವು ನಿಮಗಾಗಿ ದೃಷ್ಟಾಂತಗಳನ್ನು ವಿವರಿಸಿ ಕೊಟ್ಟಿದ್ದೇವೆ, ನೀವು ಚಿಂತಿಸಿ ಗ್ರಹಿಸುವವರಾಗಿದ್ದರೆ?

(119) (ಚಿಂತಿಸಿರಿ) ನೀವು ಅವರನ್ನು ಪ್ರೀತಿಸುತ್ತೀರಿ. ಅವರು ನಿಮ್ಮನ್ನು ಪ್ರೀತಿಸುವುದಿಲ್ಲ. ನೀವು ಎಲ್ಲಾ ಗ್ರಂಥಗಳಲ್ಲಿ ಸಂಪೂರ್ಣವಾಗಿ ವಿಶ್ವಾವಿಡುತ್ತೀರಿ (ಅವರು ವಿಶ್ವಾಸವಿಡುವುದಿಲ್ಲ) ಅವರಂತೂ ನಿಮ್ಮನ್ನು ಭೇಟಿಯಾದಾಗ ನಾವು ವಿಶ್ವಾಸವಿಟ್ಟಿದ್ದೇವೆ ಎಂದು ಹೇಳುತ್ತಾರೆ. ಆದರೆ ಏಕಾಂತದಲ್ಲಿ ಆಕ್ರೋಶದಿಂದ ತಮ್ಮ ಬೆರಳುಗಳನ್ನು ಕಚ್ಚುವರು. ಹೇಳಿರಿ: ದುರ್ದೈವಿಗಳೇ ನೀವು ನಿಮ್ಮ ಆಕ್ರೋಶದಲ್ಲೇ ಸಾಯಿರಿ. ಅಲ್ಲಾಹನು ಹೃದಯಗಳಲ್ಲಿರುವ ರಹಸ್ಯವನ್ನು ಚೆನ್ನಾಗಿ ಅರಿಯುತ್ತಾನೆ.

(120) ನಿಮಗೆ ಒಳಿತು ಲಭಿಸಿದರೆ ಅವರಿಗೆ ಸಂಕಟವಾಗುತ್ತದೆ. ಇನ್ನು ನಿಮಗೆ ಕೆಡಕು ಒದಗಿದರೆ ಅವರು ಹರ್ಷ ಪಡುತ್ತಾರೆ. ನೀವು ಸಹನೆ ಕೈಗೊಂಡರೆ ಮತ್ತು ಭಯಭಕ್ತಿಯನ್ನು ಪಾಲಿಸಿದರೆ ಅವರ ಕುತಂತ್ರವು ನಿಮಗೆ ಯಾವ ಹಾನಿಯುಂಟು ಮಾಡಲಾರದು. ಖಂಡಿತವಾಗಿಯು ಅಲ್ಲಾಹನು ಅವರ ಕೃತ್ಯಗಳನ್ನು ಆವರಿಸುವವನಾಗಿದ್ದಾನೆ.

(121) ಓ ಪೈಗಂಬರರೇ. ನೀವು ನುಸುಕಿನಲ್ಲೇ ತಮ್ಮ ಮನೆಯಿಂದ ಹೊರಟು ವಿಶ್ವಾಸಿಗಳನ್ನು ರಣರಂಗಕ್ಕಿಳಿಸಿ ಯುದ್ಧದ ಆಯಾಕಟ್ಟಿನಲ್ಲಿ ನಿಲ್ಲಿಸುತ್ತಿದ್ದಂತಹ ಸಂದರ್ಭವನ್ನು ಸ್ಮರಿಸಿರಿ. ಅಲ್ಲಾಹನು, ಆಲಿಸುವವನೂ, ಅರಿಯುವವನೂ ಆಗಿದ್ದಾನೆ.

(122) ನಿಮ್ಮ ಎರಡು ಪಂಗಡಗಳು ಹೇಡಿತನ ತೋರಲು ಬಯಸಿದ ಸಂದರ್ಭವನ್ನು ಸ್ಮರಿಸಿರಿ ಆದರೆ ಅಲ್ಲಾಹನು ಅವರ ರಕ್ಷಕ ಹಾಗೂ ಸಹಾಯಕನಾಗಿದ್ದಾನೆ ಮತ್ತು ಸತ್ಯವಿಶ್ವಾಸಿಗಳು ಅವನ ಮೇಲೆ ಭರವಸೆವನ್ನಿಡಲಿ.

(123) ನೀವು ದುರ್ಬಲರಾಗಿದ್ದಾಗ ಬದ್ರ್ ಯುದ್ಧದಲ್ಲಿ ಅಲ್ಲಾಹನು ನಿಮಗೆ ಸಹಾಯ ಮಾಡಿದ್ದಾನೆ. ಆದ್ದರಿಂದ ನೀವು ಅಲ್ಲಾಹನನ್ನು ಭಯಪಡಿರಿ. ನೀವು ಕೃತಜ್ಞತೆ ಸಲ್ಲಿಸುವವರಾಗಲೂಬಹುದು.

(124) ನಿಮ್ಮ ಪ್ರಭು ಮೂರು ಸಾವಿರ ಮಲಕ್‌ಗಳÀನ್ನು ಇಳಿಸಿ ನಿಮಗೆ ಸಹಾಯವನ್ನು ನೀಡುವನು ಎಂಬುದು ನಿಮಗೆ ಸಾಲದೇ? ಎಂದು ನೀವು ಸತ್ಯವಿಶ್ವಾಸಿಗಳಿಗೆ ಸಾಂತ್ವನ ನೀಡುತ್ತಿದ್ದ ಸಂದರ್ಭವನ್ನು ಸ್ಮರಿಸಿರಿ.

(125) ಏಕಿಲ್ಲ, ನೀವು ಸಹನೆ ವಹಿಸಿದರೆ, ಭಯಭಕ್ತಿ ಪಾಲಿಸಿದರೆ ಮತ್ತು ಅವರು ನಿಮ್ಮೆಡೆಗೆ ಈ ಕ್ಷಣದಲ್ಲಿ ಬಂದರೂ ನಿಮ್ಮ ಪ್ರಭು (ನಿಮ್ಮ ಸಹಾಯಕ್ಕಾಗಿ) ಗುರುತುಗಳಿರುವ ಐದು ಸಾವಿರ ಮಲಕ್‌ಗಳ ಮೂಲಕ ನಿಮಗೆ ಸಹಾಯವನ್ನು ನೀಡುವನು.

(126) ಅಲ್ಲಾಹನು ಹೀಗೆ ಮಾಡಿದ್ದು ಇದರ ಮೂಲಕ ನಿಮಗೆ ಶುಭವಾರ್ತೆ ಹಾಗೂ ನಿಮ್ಮ ಹೃದಯಕ್ಕೆ ಸಾಂತ್ವನವಾಗಲೆAದಾಗಿದೆ. ಇಲ್ಲವಾದರೆ ಸಹಾಯವು ಪ್ರತಾಪಶಾಲಿಯು, ಯುಕ್ತಿಪೂರ್ಣನೂ ಆದ ಅಲ್ಲಾಹನ ಕಡೆಯಿಂದ ಮಾತ್ರವಿರುತ್ತದೆ.

(127) ಏಕೆಂದರೆ (ನಿಮ್ಮ ಸಹಾಯಕ್ಕಾಗಿ) ಸತ್ಯನಿಷೇಧಿಗಳ ಒಂದು ವಿಭಾಗವನ್ನು ಮೂಲೋತ್ಪಾಟನೆಗೈಯ್ಯಲು ಅಥವಾ ಅವರನ್ನು ಅಪಮಾನಿತರನ್ನಾಗಿ ಮತ್ತು ಅವರು ಸೋತು ನಿರಾಶರಾಗಿ ಮರಳಲೆಂದಾಗಿದೆ.

(128) ಓ ಸಂದೇಶವಾಹಕರೇ, ಈ ಸತ್ಯನಿಷೇಧಿಗಳ ವಿಷಯದಲ್ಲಿ ಶಪಿಸುವ ಅಧಿಕಾರ ನಿಮಗೇನೂ ಇಲ್ಲ. ಅಲ್ಲಾಹನು ಇಚ್ಛಿಸಿದರೆ ಅವರ ಪಶ್ಚಾತ್ತಾಪವನ್ನು ಸ್ವೀಕರಿಸಬಹುದು ಅಥವಾ ಅವರನ್ನು ಶಿಕ್ಷಿಸಬಹುದು. ಏಕೆಂದರೆ ಅವರು ಅಕ್ರಮಿಗಳಾಗಿರುವರು.

(129) ಭೂಮಿ, ಆಕಾಶಗಳಲ್ಲಿರುವುದೆಲ್ಲವೂ ಅಲ್ಲಾಹನದ್ದಾಗಿದೆ. ತಾನಿಚ್ಛಿಸುವವರನ್ನು ಅವನು ಕ್ಷಮಿಸುವನು. ತಾನಿಚ್ಛಿಸುವವರನ್ನು ಅವನು ಶಿಕ್ಷಿಸುವನು. ಅಲ್ಲಾಹನು ಅತ್ಯಧಿಕ ಕ್ಷಮಿಸುವವನು ಕರುಣಾನಿಧಿಯು ಆಗಿದ್ದಾನೆ.

(130) ಓ ಸತ್ಯವಿಶ್ವಾಸಿಗಳೇ, ನೀವು ದುಪ್ಪಟ್ಟು ದುಪ್ಪಟ್ಟಾಗಿ ಬಡ್ಡಿಯನ್ನು ತಿನ್ನಬೇಡಿರಿ. ಮತ್ತು ಅಲ್ಲಾಹನನ್ನು ಭಯಪಡಿರಿ. ಪ್ರಾಯಶಃ ನೀವು ಯಶಸ್ಸು ಹೊಂದಬಹುದು.

(131) ಸತ್ಯನಿಷೇಧಿಗಳಿಗಾಗಿ ಸಿದ್ಧಗೊಳಿಸಲಾದ ಆ ನರಕಾಗ್ನಿಯನ್ನು ಭಯಪಡಿರಿ.

(132) ನೀವು ಅಲ್ಲಾಹ್ ಮತ್ತು ಸಂದೇಶವಾಹಕರನ್ನು ಅನುಸರಿಸಿರಿ. ಇದರಿಂದ ನಿಮ್ಮ ಮೇಲೆ ಕರುಣೆ ತೋರಲೂಬಹುದು.

(133) ನಿಮ್ಮ ಪ್ರಭುವಿನ ಕ್ಷಮಾದಾನ ಹಾಗೂ ಭೂಮಿ, ಆಕಾಶಗಳಷ್ಟು ವಿಶಾಲವಾದ ಸ್ವರ್ಗದೆಡೆಗೆ ನೀವು ಧಾವಿಸಿರಿ. ಅದನ್ನು ಭಯಭಕ್ತಿ ಪಾಲಿಸುವವರಿಗಾಗಿ ಸಿದ್ಧಗೊಳಿಸಲಾಗಿದೆ.

(134) ಅವರು ಅನುಕೂಲ ಸ್ಥಿತಿಯಲ್ಲೂ, ದುಸ್ಥಿತಿಯಲ್ಲೂ ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡುವವರು ಕೋಪವನ್ನು ನುಂಗಿಕೊಳ್ಳುವವರು ಮತ್ತು ಜನರನ್ನು ಮನ್ನಿಸುವವರಾಗಿದ್ದಾರೆ. ಅಲ್ಲಾಹನು ಆ ಸತ್ಕರ್ಮಿಗಳನ್ನು ಪ್ರೀತಿಸುತ್ತಾನೆ.

(135) ಅವರು ಏನಾದರೂ ನೀಚಕೃತ್ಯವೆಸಗಿದರೆ ಅಥವಾ ಅವರು ಯಾವುದಾದರೂ ಪಾಪ ಮಾಡಿದರೆ ಕೂಡಲೇ ಅಲ್ಲಾಹನನ್ನು ಸ್ಮರಿಸಿ ತಮ್ಮ ಪಾಪಗಳಿಗೆ ಕ್ಷಮೆ ಬೇಡುತ್ತಾರೆ. ವಾಸ್ತವದಲ್ಲಿ ಅಲ್ಲಾಹನ ಹೊರತು ಪಾಪಗಳನ್ನು ಕ್ಷಮಿಸುವವರು ಇನ್ನಾರಿದ್ದಾರೆ? ಮತ್ತು ಅವರು ತಿಳಿದೂ ಯಾವುದೇ ಕೆಡುಕಿನಲ್ಲಿ ಪಟ್ಟುಹಿಡಿಯಲಾರರು.

(136) ಅಂಥಹವರಿಗೆ ಇರುವ ಪ್ರತಿಫಲವು ತಮ್ಮ ಪ್ರಭುವಿನ ಕಡೆಯಿಂದಿರುವ ಪಾಪವಿಮೋಚನೆ ಮತ್ತು ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳಾಗಿವೆ. ಅಲ್ಲಿ ಅವರು ಶಾಶ್ವತವಾಗಿರುವರು. ಆ ಸತ್ಕರ್ಮ ಮಾಡುವವರ ಪ್ರತಿಫಲವು ಅದೆಷ್ಟು ಉತ್ತಮವಾಗಿದೆ!

(137) ನಿಮಗಿಂತ ಮುಂಚೆಯ ಅನೇಕ ಸಮುದಾಯಗಳ ಘಟನೆಗಳು ಗತಿಸಿವೆ. ಆದ್ದರಿಂದ ನೀವು ಭೂಮಿಯಲ್ಲಿ ಸಂಚರಿಸಿ (ದಿವ್ಯ ಸಂದೇಶಗಳನ್ನು) ನಿಷೇಧಿಸಿದವರ ಅಂತ್ಯ ಹೇಗಾಯಿತೆಂಬುದನ್ನು ನೋಡಿರಿ.

(138) ಇದು (ಕುರ್‌ಆನ್) ಸಾರ್ವಜನಿಕರಿಗೆ ಸ್ಪಷ್ಟ ವಿವರಣೆಯಾಗಿದೆ ಮತ್ತು ಭಯಭಕ್ತಿಯುಳ್ಳವರಿಗೆ ಸನ್ಮಾರ್ಗದರ್ಶನ ಹಾಗೂ ಉಪದೇಶವಾಗಿದೆ.

(139) ನೀವು ಧೈರ್ಯಗುಂದಬೇಡಿರಿ ಮತ್ತು ವ್ಯಥೆ ಪಡಬೇಡಿರಿ. ನೀವು ವಿಶ್ವಾಸಿಗಳಾಗಿದ್ದರೆ ನೀವೇ ಜಯಶಾಲಿಗಳಾಗುವಿರಿ.

(140) ನಿಮಗೆ ಗಾಯಗಳಾಗಿದ್ದರೆ ನಿಮ್ಮ ಎದುರಾಳಿಗಳೂ ಸಹ ಇದೇ ರೀತಿಯ ಗಾಯಗಳಾಗಿದ್ದವು. ನಾವು ಈ ದಿನಗಳನ್ನು ಜನರ ನಡುವೆ ಬದಲಾಯಿಸುತ್ತಿರುತ್ತೇವೆ. ಇದು (ಉಹುದ್‌ನ ಪರಾಜಯವು) ಅಲ್ಲಾಹನು ಸತ್ಯವಿಶ್ವಾಸಿಗಳನ್ನು ಅರಿಯಲಿಕ್ಕೂ, ನಿಮ್ಮಲ್ಲಿ ಕೆಲವರನ್ನು ಹುತಾತ್ಮರನ್ನಾಗಿ ಮಾಡಲಿಕ್ಕು ಆಗಿತ್ತು. ಅಲ್ಲಾಹನು ಅಕ್ರಮಿಗಳನ್ನು ಪ್ರೀತಿಸುವುದಿಲ್ಲ.

(141) ಅಲ್ಲಾಹನು ಸತ್ಯವಿಶ್ವಾಸಿಗಳನ್ನು ಶುದ್ಧೀಕರಿಸಲಿಕ್ಕೂ ಮತ್ತು ಸತ್ಯನಿಷೇಧಿಗಳನ್ನು ನಿರ್ನಾಮಗೊಳಿಸಲಿಕ್ಕೂ ಆಗಿತ್ತು.

(142) ನೀವು ನಿರಾಯಾಸವಾಗಿ ಸ್ವರ್ಗವನ್ನು ಪ್ರವೇಶಿಸುವಿರೆಂದು ಭಾವಿಸಿರುವಿರಾ? ವಸ್ತುತಃ ನಿಮ್ಮಲ್ಲಿ ಯಾರೆಲ್ಲ ಅಲ್ಲಾಹನ ಮಾರ್ಗದಲ್ಲಿ ಹೋರಾಟ ನಡೆಸುವವರೂ ಅದಕ್ಕಾಗಿ ಸಹನೆ ಪಡುವವರಿದ್ದಾರೆಂದು ಅವನು ಇನ್ನೂ ಕಾಣಲೇ ಇಲ್ಲ.

(143) ನೀವು ಯುದ್ಧಕ್ಕೆ ಮೊದಲು ಹುತಾತ್ಮತೆಯ ಹಂಬಲದಲ್ಲಿದ್ದೀರಿ. ಇದೀಗ ನೀವು ಅದನ್ನು ನಿಮ್ಮ ಕಣ್ಣೆದುರೇ ಕಾಣುತ್ತಿರುವಿರಿ.

(144) ಮುಹಮ್ಮದ್(ಸ) ಓರ್ವ ಸಂದೇಶವಾಹಕರು ಮಾತ್ರ ಅವರಿಗಿಂತ ಮುಂಚೆ ಅನೇಕ ಸಂದೇಶವಾಹಕರು ಗತಿಸಿದ್ದಾರೆ. ಅವರು ಮೃತಪಟ್ಟರೆ ಅಥವಾ ಹುತಾತ್ಮರಾದರೆ ನೀವು ಇಸ್ಲಾಮಿನಿಂದ ಮರಳಿ ಹೋಗುವಿರಾ? ಮತ್ತು ಯಾರಾದರೂ ಹಿಂದಕ್ಕೆ ಮರಳಿ ಹೋಗುವುದಾದರೆ ಅವನು ಅಲ್ಲಾಹನಿಗೆ ಯಾವ ಹಾನಿಯನ್ನು ಮಾಡಲಾರನು. ಸಧ್ಯದಲ್ಲೇ ಕೃತಜ್ಞತೆ ತೋರುವವರಿಗೆ ಅಲ್ಲಾಹನು ಉತ್ತಮ ಪ್ರತಿಫಲವನ್ನು ನೀಡಲಿದ್ದಾನೆ.

(145) ಅಲ್ಲಾಹನ ಅಪ್ಪಣೆಯಿಲ್ಲದೆ ಯಾವ ಜೀವಿಯು ಮರಣಹೊಂದಲಾರದು. ಅದು ನಿರ್ಧರಿತ ಅವಧಿಯಾಗಿದೆ. ಐಹಿಕ ಪ್ರತಿಫಲವನ್ನು ಬಯಸುವವರಿಗೆ ನಾವು ಅದರಿಂದ ಅಲ್ಪವನ್ನು ನೀಡುತ್ತೇವೆ ಮತ್ತು ಪರಲೋಕದ ಪ್ರತಿಫಲವನ್ನು ಬಯಸುವವರಿಗೆ ನಾವು ಅದನ್ನು ನೀಡುತ್ತೇವೆ. ಕೃತಜ್ಞತೆ ತೋರುವವರಿಗೆ ನಾವು ಶೀಘ್ರವಾಗಿ ಉತ್ತಮ ಪ್ರತಿಫಲವನ್ನು ಕರುಣಿಸಲಿದ್ದೇವೆ.

(146) (ಇದಕ್ಕಿಂತ ಮುಂಚೆ) ಅದೆಷ್ಟೂ ಪೈಗಂಬರರು (ಗತಿಸಿಹೋಗಿದ್ದಾರೆ) ಅಲ್ಲಾಹನ ಅದೆಷ್ಟೂ ಭಕ್ತರು ಯುದ್ಧ ಮಾಡಿದ್ದಾರೆ! ಅವರಿಗೆ ಅಲ್ಲಾಹನ ಮಾರ್ಗದಲ್ಲಿ ಸಾಕಷ್ಟು ಬವಣೆಗಳನ್ನು ಎದುರಿಸಬೇಕಾಯಿತು. ಆದರೆ ಅವರು ಎದೆಗುಂದಲಿಲ್ಲ, ಮತ್ತು ಬಲಹೀನರಾಗಲಿಲ್ಲ ಹಾಗೂ ಕೀಳರಿಮೆ ತೋರಲಿಲ್ಲ ಮತ್ತು ಅಲ್ಲಾಹನು ಸಹನಾಶೀಲರನ್ನು ಪ್ರೀತಿಸುತ್ತಾನೆ.

(147) (ಆ ಸತ್ಯವಿಶ್ವಾಸಿಗಳು) ಓ ನಮ್ಮ ಪ್ರಭೂ, ನಮ್ಮ ಪಾಪಗಳನ್ನು ಕ್ಷಮಿಸು ಮತ್ತು ನಮ್ಮ ಕಾರ್ಯಗಳಲ್ಲಿ ಉಂಟಾದAತಹ ಅತಿಕ್ರಮಗಳನ್ನು ಮನ್ನಿಸು ಮತ್ತು ನಮ್ಮ ಪಾದಗಳನ್ನು ನೆಲಯೂರಿಸು ಮತ್ತು ನಮಗೆ ಸತ್ಯ ನಿಷೇಧಿ ಜನತೆಯ ವಿರುದ್ಧ ಸಹಾಯವನ್ನು ನೀಡು ಎಂದೇ ಅವರು ಪ್ರಾರ್ಥಿಸುತ್ತಿದ್ದರು.

(148) ಆದ್ದರಿಂದ ಅಲ್ಲಾಹನು ಅವರಿಗೆ ಇಹಲೋಕದ ಪ್ರತಿಫಲವನ್ನೂ ನೀಡಿದನು. ಮತ್ತು ಶ್ರೇಷ್ಠವಾದ ಪರಲೋಕದ ಪ್ರತಿಫಲವನ್ನು ದಯಪಾಲಿಸಿದನು. ಅಲ್ಲಾಹನು ಸಜ್ಜನರನ್ನು ಪ್ರೀತಿಸುತ್ತಾನೆ.

(149) ಓ ಸತ್ಯವಿಶ್ವಾಸಿಗಳೇ, ನೀವು ಸತ್ಯನಿಷೇಧಿಗಳನ್ನು ಅನುಸರಿಸುವುದಾದರೆ ಅವರು ನಿಮ್ಮನ್ನು ಪೂರ್ವ ಸ್ಥಿತಿಗೆ ಮರಳಿಸಿ ಬಿಡುವರು. ಅನಂತರ ನೀವು ಪರಾಜಯ ಹೊಂದಿ ಹಿಂದಿರುಗುವಿರಿ.

(150) ಹಾಗಲ್ಲ, ಅಲ್ಲಾಹನು ನಿಮ್ಮ ರಕ್ಷಕನಾಗಿದ್ದಾನೆ ಮತ್ತು ಅವನೇ ನಿಮ್ಮ ಉತ್ತಮ ಸಹಾಯಕನಾಗಿದ್ದಾನೆ (ಸತ್ಯನಿಷೇಧಿಗಳು ನಿಮ್ಮ ಓಳಿತನ್ನು ಬಯಸುವವರಲ್ಲ).

(151) ಸದ್ಯದಲ್ಲೇ ನಾವು ಸತ್ಯನಿಷೇಧಿಗಳ ಹೃದಯಗಳಲ್ಲಿ ಭೀತಿಯನ್ನು ಹುಟ್ಟಿಸುವೆವು. ಇದು ಅವರು ಅಲ್ಲಾಹನೊಂದಿಗೆ ಅವನು ಯಾವ ಪುರಾವೆಯನ್ನೂ ಅವತೀರ್ಣಗೊಳಿಸದಿರುವ ವಸ್ತುಗಳನ್ನು ಸಹಭಾಗಿಗಳನ್ನಾಗಿ ನಿಶ್ಚಯಿಸಿದುದರ ಫಲವಾಗಿದೆ. ಅವರ (ಅಂತಿಮ) ವಾಸಸ್ಥಳವು ನರಕವಾಗಿದೆ ಮತ್ತು ಆ ಅಕ್ರಮಿಗಳ ವಾಸಸ್ಥಳವು ಅದೆಷ್ಟು ನಿಕೃಷ್ಟವಾಗಿದೆ!

(152) ಅಲ್ಲಾಹನು ನಿಮ್ಮೊಡನೆ ಮಾಡಿದ್ದ ತನ್ನ ವಾಗ್ದಾನವನ್ನು ಈಡೇರಿಸಿ ಕೊಟ್ಟಿರುವನು. ಆರಂಭದಲ್ಲಿ ಅಲ್ಲಾಹನ ಅಪ್ಪಣೆಯಿಂದ ನೀವು ಖುರೈಷರನ್ನು ವದಿಸುತ್ತಿದ್ದೀರಿ. ಅಲ್ಲಾಹನು ನೀವು ಆಶಿಸುತ್ತಿದ್ದ ವಿಜಯವನ್ನು ತೋರಿಸಿಕೊಟ್ಟನು ಬಳಿಕ ನೀವು ಪೈಗಂಬರರ ಆದೇಶವನ್ನು ಉಲ್ಲಂಘಿಸಿ ಯುದ್ಧದ ಆಯಕಟ್ಟಿನಲ್ಲಿ ಸ್ಥಿರವಾಗಿರುವ ವಿಷಯದಲ್ಲಿ ಅವಿಧೇಯತೆ ತೋರಿ ಜಗಳವಾಡತೊಡಗದಿರಿ. ಏಕೆಂದರೆ, ನಿಮ್ಮಲ್ಲಿ ಕೆಲವರು ಇಹಲೋಕವನ್ನು ಬಯಸುತ್ತಿದ್ದರು ಮತ್ತು ಕೆಲವರ ಉದ್ದೇಶವು ಪರಲೋಕವಾಗಿತ್ತು. ಅಲ್ಲಾಹನು ನಿಮ್ಮನ್ನು ಪರೀಕ್ಷಿಸಲೆಂದು ಅವರಿಂದ (ಖುರೈಷರಿಂದ) ಅಲಕ್ಷö್ಯಗೊಳಿಸಿದನು. ಆದರೂ ನಿಮ್ಮ ಪ್ರಮಾದವನ್ನು (ಯುದ್ಧದಿಂದ ಬೆನ್ನು ತೋರಿಸಿದ ಪಾಪವನ್ನು) ಖಂಡಿತವಾಗಿಯೂ ಕ್ಷಮಿಸಿರುತ್ತಾನೆ. ಅಲ್ಲಾಹನು ಸತ್ಯವಿಶ್ವಾಸಿಗಳ ಮೇಲೆ ಮಹಾ ಔದರ್ಯವಂತನಾಗಿದ್ದಾನೆ.

(153) ನೀವು ಯಾರನ್ನು ತಿರುಗಿಯು ನೋಡದೇ (ರಣರಂಗದಿAದ) ಪಲಾಯನ ಗೈಯುತ್ತಿದ್ದ ಸಂದರ್ಭವನ್ನು ಸ್ಮರಿಸಿರಿ ಮತ್ತು ಸಂದೇಶವಾಹಕರು ನಿಮ್ಮನ್ನು ಹಿಂದಿನಿAದ ಕರೆಯುತ್ತಿದ್ದರು. ಅಲ್ಲಾಹನು ನಿಮಗೆ ದುಃಖದ ಮೇಲೆ ದುಃಖವನ್ನು ನೀಡಿದನು. ಇದೇಕೆಂದರೆ (ಮುಂದೆ ನಿಮಗೊಂದು ಪಾಠವಾಗಲೆಂದು) ನೀವು ನಷ್ಟ ಹೊಂದಿದ ವಸ್ತುವಿನ ಕುರಿತಾಗಲೀ ನಿಮಗೆ ಬಾಧಿಸಿದ ಆಪತ್ತಿನ ಕುರಿತಾಗಲೀ ದುಃಖಿಸದಿರಲೆಂದಾಗಿದೆ. ಅಲ್ಲಾಹನು ನಿಮ್ಮ ಸಕಲ ಕರ್ಮಗಳ ಕುರಿತು ಸೂಕ್ಷö್ಮ ಜ್ಞಾನವುಳ್ಳವನಾಗಿದ್ದಾನೆ.

(154) ತರುವಾಯ ಅವನು ಆ ದುಃಖದ ಬಳಿಕ ನಿಮ್ಮ ಮೇಲೆ ನಿರ್ಭಯತೆಯನ್ನು ಇಳಿಸಿದನು ಮತ್ತು ನಿಮ್ಮಲ್ಲಿ ಒಂದು ತಂಡಕ್ಕೆ ಸಮಾಧಾನದ ತೂಕಡಿಕೆಯು ಹತ್ತತೊಡಗಿತು. ಇನ್ನು ಕೆಲವರು ತಮ್ಮದೇ ಕುರಿತಾದ ಚಿಂತೆಯಲ್ಲಿ ಮುಳುಗಿದ್ದರು ಮತ್ತು ಅವರು ಅಲ್ಲಾಹನ ಕುರಿತು ಸತ್ಯಕ್ಕೆ ವಿರುದ್ಧವಾದ ಅಜ್ಞಾನಜನ್ಯ ತುಂಬಿದ ಸಂದೇಹಗಳನ್ನು ಮಾಡತೊಡಗಿದರು ಮತ್ತು ಹೇಳುತ್ತಿದ್ದರು: ನಮಗೆ ಯಾವುದಾದರು ವಿಷಯದಲ್ಲಿ ಅಧಿಕಾರವಿದೆಯೇ? ನೀವು ಹೇಳಿರಿ: ಸಕಲ ಕಾರ್ಯವೂ ಅಲ್ಲಾಹನ ಅಧಿಕಾರದಲ್ಲಿದೆ. ಇವರು ತಮ್ಮ ಮನಸ್ಸುಗಳಲ್ಲಿರುವ ರಹಸ್ಯವನ್ನು ನಿಮಗೆ ತಿಳಿಸುವುದಿಲ್ಲ ಮತ್ತು ಹೇಳುತ್ತಾರೆ: ನಮಗೇನಾದರೂ ಅಧಿಕಾರವಿರುತ್ತಿದ್ದರೆ ನಾವು ಇಲ್ಲಿ ಕೊಲ್ಲಲ್ಪಡುತ್ತಿರಲಿಲ್ಲ. ನೀವು ಹೇಳಿರಿ: ನೀವು ನಿಮ್ಮ ಮನೆಗಳಲ್ಲಿದ್ದರೂ ಸಹ ಯಾರ ವಿಧಿಯಲ್ಲಿ ಕೊಲೆ ಯಾಗುವುದಿರುತ್ತದೆಯೋ ಅವರು ತಮ್ಮ ಮರಣಾ ಸ್ಥಳಕ್ಕೆ ಬರುತ್ತಿದ್ದರು. ಅಲ್ಲಾಹನಿಗೆ ನಿಮ್ಮ ಹೃದಯಗಳಲ್ಲಿ ಅಡಿಗಿರುವುದನ್ನು ಪರೀಕ್ಷಿಸಲಿಕ್ಕಿತ್ತು ಮತ್ತು ಹೃದಯಗಳಲ್ಲಿರುವ ವಿಚಾರಗಳನ್ನು ಶುದ್ಧೀಕರಿಸಲಿಕ್ಕಿತ್ತು ಮತ್ತು ಅಲ್ಲಾಹನು ಹೃದಯಗಳಲ್ಲಿರುವುದನ್ನು ತಿಳಿಯುವವನಗಿದ್ದಾನೆ.

(155) ಎರಡು ಸೈನ್ಯಗಳು ಕದನದಲ್ಲಿ ಎದುರು ಬದುರುಗೊಂಡ ದಿನ ನಿಮ್ಮಲ್ಲಿ ಬೆನ್ನು ತಿರುಗಿಸಿ ಓಡಿದವರಾರೋ ಅವರು ಮಾಡಿದ ಕೆಲವು ಕೃತ್ಯಗಳ ಕಾರಣದಿಂದ ಶೈತಾನನು ಅವರನ್ನು ದಾರಿ ತಪ್ಪಿಸಿದನು. ಆದರೆ ಅಲ್ಲಾಹನು ಅವರನ್ನು ಕ್ಷಮಿಸಿದನು. ಖಂಡಿತವಾಗಿಯು ಅಲ್ಲಾಹನು ಅತ್ಯಧಿಕ ಕ್ಷಮಿಸುವವನೂ, ವಿವೇಕವಂತನೂ ಆಗಿದ್ದಾನೆ.

(156) ಓ ಸತ್ಯವಿಶ್ವಸಿಗಳೇ, ತಮ್ಮ ಸಹೋದರರು ಯಾತ್ರೆಗಾಗಿ ಆಥವಾ ಯುದ್ಧಕ್ಕಾಗಿ ಹೊರಟು (ಸಾವನ್ನಪ್ಪಿದರೆ) ಅವರು ನಮ್ಮ ಬಳಿಯಿರುತ್ತಿದ್ದರೆ ಸಾವನ್ನಪ್ಪುತ್ತಿರಲಿಲ್ಲ ಅಥವಾ ಕೊಲ್ಲಲ್ಪಡುತ್ತಿರಲಿಲ್ಲ ಎಂದು ಹೇಳುವ ಅವಿಶ್ವಾಸಿಗಳಂತೆ ನೀವಾಗಬಾರದು. ಅಲ್ಲಾಹನು ಅವರ ಈ ಭಾವನೆಯನ್ನು ಅವರ ಹೃದಯದಲ್ಲಿ ಖೇದಕರ ವಿಷಯವನ್ನಾಗಿಸಲೆಂದಾಗಿದೆ. ಜೀವ ಕೊಡುವವನು, ಮರಣ ನೀಡುವವನು ಅಲ್ಲಾಹನಾಗಿದ್ದಾನೆ. ಮತ್ತು ಅಲ್ಲಾಹನು ನಿಮ್ಮ ಕರ್ಮಗಳನ್ನು ವೀಕ್ಷಿಸುತ್ತಿದ್ದಾನೆ.

(157) ಖಂಡಿತವಾಗಿಯು ನೀವು ಅಲ್ಲಾಹನ ಮಾರ್ಗದಲ್ಲಿ ಹುತಾತ್ಮರಾದರೇ ಅಥವಾ ಮರಣವನ್ನಪ್ಪಿದರೇ ನಿಸ್ಸಂಶಯವಾಗಿಯು ಅಲ್ಲಾಹನಿಂದ ಲಭಿಸುವ ಪಾಪವಿಮೋಚನೆ ಮತ್ತು ಕಾರುಣ್ಯವು ಅವರು ಶೇಖರಿಸಿಡುವುದಕ್ಕಿಂತಲೂ ಉತ್ತಮವಾಗಿದೆ.

(158) ನೀವು ಮರಣವನ್ನಪ್ಪಿದರೂ, ಅಥವಾ ಕೊಲ್ಲಲ್ಪಟ್ಟರು ಖಂಡಿತವಾಗಿಯು ಅಲ್ಲಾಹನ ಬಳಿಗೇ ನೀವು ಒಟ್ಟುಗೂಡಿಸಲಾಗುವಿರಿ.

(159) ಅಲ್ಲಾಹನ ಕಾರುಣ್ಯದ ನಿಮಿತ್ತ ನೀವು ಅವರೊಂದಿಗೆ ಸೌಮ್ಯವಾಗಿ ವರ್ತಿಸುತ್ತಿರುವಿರಿ ನೀವೇನಾದರು ಒರಟರು, ಕಠಿಣ ಹೃದಯಿಯು ಅಗಿರುತ್ತಿದ್ದರೆ ಅವರು ನಿಮ್ಮ ಬಳಿಯಿಂದ ಚದುರಿ ಹೋಗುತ್ತಿದ್ದರು. ಆದ್ದರಿಂದ ನೀವು ಅವರಿಗೆ ಕ್ಷಮೆಯನ್ನು ನೀಡಿರಿ ಮತ್ತು ಅವರಿಗಾಗಿ ಪಾಪವಿಮೋಚನೆಯನ್ನು ಬೇಡಿರಿ. ಮತ್ತು ಅವರೊಂದಿಗೆ ಕಾರ್ಯ ನಿರ್ವಹಣೆಯಲ್ಲಿ ಸಮಾಲೋಚನೆಯನ್ನು ನಡೆಸಿರಿ. ಅನಂತರ ನೀವು ಒಂದು ದೃಢ ನಿರ್ಧಾರಕ್ಕೆ ಬಂದರೆ ಅಲ್ಲಾಹನ ಮೇಲೆ ಭರವಸೆಯನ್ನಿಡಿರಿ. ನಿಸ್ಸಂಶಯವಾಗಿಯು ಅಲ್ಲಾಹನು ತನ್ನ ಮೇಲೆ ಭರವಸೆಯನ್ನಿಡುವವರನ್ನು ಇಷ್ಟ ಪಡುತ್ತಾನೆ.

(160) ಅಲ್ಲಾಹನು ನಿಮಗೆ ಸಹಾಯ ಮಾಡುವುದಾದರೆ ನಿಮ್ಮನ್ನು ಸೋಲಿಸುವವನು ಯಾರಿಲ್ಲ ಇನ್ನು ಅವನು ನಿಮ್ಮನ್ನು ಕೈಬಿಟ್ಟರೆ ಅವನಲ್ಲದೇ ನಿಮಗೆ ಸಹಾಯ ಮಾಡುವವರು ಯಾರಿದ್ದಾರೆ? ಸತ್ಯವಿಶ್ವಾಸಿಗಳು ಅಲ್ಲಾಹನ ಮೇಲೆಯೇ ಭರವಸೆಯಿಡಲಿ.

(161) ಪೈಗಂಬರ್‌ರವರಿAದ ವಂಚನೆ ಎಂಬುದು ಅಸಂಭವವಾಗಿದೆ. ಪ್ರತಿಯೊಬ್ಬ ವಂಚಕನೂ ಪುನರುತ್ಥಾನ ದಿನದಂದು ತಾನು ವಂಚಿಸಿದ ವಸ್ತುವಿನೊಂದಿಗೆ ಹಾಜರಾಗುವನು. ಅನಂತರ ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಸಂಪಾದನೆಯ ಫಲವನ್ನು ಪರಿಪೂರ್ಣವಾಗಿ ನೀಡಲಾಗುವುದು. ಅವರೊಂದಿಗೆ ಯಾವ ಅನ್ಯಾಯವನ್ನೂ ಮಾಡಲಾಗದು.

(162) ಅಲ್ಲಾಹನ ಸಂತೃಪ್ತಿಯನ್ನು ಅರಸಿದವನು ಅಲ್ಲಾಹನ ಕ್ರೋಧಕ್ಕೆ ಪಾತ್ರನಾಗಿ ಮರಳುವ ಒಬ್ಬ ವ್ಯಕ್ತಿಯಂತ್ತಾಗುವನೇ? ಮತ್ತು ಅವನ ವಾಸಸ್ಥಳವು ನರಕವಾಗಿದೆ. ಅದೆಷ್ಟು ನಿಕೃಷ್ಟ ವಾಸ ಸ್ಥಳ!

(163) ಅಲ್ಲಾಹನ ಬಳಿ ಅವರಿಗೆ ವಿವಿಧ ಪದವಿಗಳಿವೆ ಮತ್ತು ಅಲ್ಲಾಹನು ಅವರು ಮಾಡುತ್ತಿರುವುದೆಲ್ಲವನ್ನೂ ನೋಡುತ್ತಿರುವನು.

(164) ಸತ್ಯವಿಶ್ವಾಸಿಗಳಿಗೆ ಅವರಿಂದಲೇ ಆದ ಒಬ್ಬ ಸಂದೇಶವಾಹಕನನ್ನು ಅವರ ನಡುವೆ ಕಳುಹಿಸುವ ಮೂಲಕ ಖಂಡಿತವಾಗಿಯು ಅವರ ಮೇಲೆ ಅಲ್ಲಾಹನು ಮಹಾ ಉಪಕಾರ ಮಾಡಿದ್ದಾನೆ. ಅವರು ಅವರಿಗೆ ಅಲ್ಲಾಹನ ಸೂಕ್ತಿಗಳನ್ನು ಓದಿ ಕೇಳಿಸುತ್ತಾರೆ ಮತ್ತು ಅವರನ್ನು ಸಂಸ್ಕರಿಸುತ್ತಾರೆ. ಮತ್ತು ಅವರಿಗೆ ಗ್ರಂಥವನ್ನೂ, ಸುಜ್ಞಾನವನ್ನೂ ಕಲಿಸಿಕೊಡುತ್ತಾರೆ. ಖಂಡಿತವಾಗಿಯೂ ಅವರೆಲ್ಲರೂ ಇದಕ್ಕೆ ಮೊದಲು ಸ್ಪಷ್ಟವಾದ ಪಥಭ್ರಷ್ಟತೆಯಲ್ಲಿದ್ದರು.

(165) ಉಹುದ್ ಸಮಯದಲ್ಲಿ ನಿಮಗೊಂದು ವಿಪತ್ತು ಬಾಧಿಸಿದಾಗ ನೀವು ಇದೆಲ್ಲಿಂದ ಬಂತು ಎನ್ನತೊಡಗಿದಿರಾ ? ವಸ್ತುತಃ ನಿಮ್ಮ ಕೈಗಳಿಂದ ಅವರಿಗೆ (ಖುರೈಷರಿಗೆ) ಇಮ್ಮಡಿ ವಿಪತ್ತು ಬಾಧಿಸಿತ್ತು. ಓ ಪೈಗಂಬರರೇ ಹೇಳಿರಿ; ಅದು ಸ್ವತಃ ನಿಮ್ಮ ಕಡೆಯಿಂದ ಬಂದಿರುವುದಾಗಿದೆ, ಖಂಡಿತವಾಗಿಯೂ ಅಲ್ಲಾಹನು ಸಕಲ ಸಂಗತಿಗಳ ಮೇಲೆ ಸಾಮರ್ಥ್ಯವುಳ್ಳವನಾಗಿದ್ದಾನೆ.

(166) ಎರಡು ಸೈನ್ಯಗಳು ಪರಸ್ಪರ ಎದುರುಗೊಂಡ ದಿನ ನಿಮಗೆ ಬಾಧಿಸಿದೆಲ್ಲವೂ ಅಲ್ಲಾಹನ ಅಪ್ಪಣೆಯಿಂದಾಗಿದೆ. ಇದೇಕೆಂದರೆ ಅಲ್ಲಾಹನು ಸತ್ಯವಿಶ್ವಾಸಿಗಳನ್ನು ಪ್ರತ್ಯಕ್ಷವಾಗಿ ಅರಿತುಕೊಳ್ಳಲೆಂದಾಗಿದೆ.

(167) ಮತ್ತು ಕಪಟವಿಶ್ವಾಸಿಗಳನ್ನು ಅರಿತುಕೊಳ್ಳಲೆಂದಾಗಿದೆ. 'ಬನ್ನಿರಿ, ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಿರಿ ಅಥವಾ ಸತ್ಯನಿಷೇಧಿಗಳನ್ನು ದೂರಮಾಡಿರಿ' ಎಂದು ಅವರಿಗೆ ಹೇಳಲಾದರೆ ಅವರು ಹೇಳುತ್ತಾರೆ. ನಮಗೆ ಯುದ್ಧ ಮಾಡುವುದು ಗೊತ್ತಿರುತ್ತಿದ್ದರೆ ಖಂಡಿತ ನಾವು ನಿಮ್ಮ ಜೊತೆ ನಡೆಯುತ್ತಿದ್ದೆವು. ಅಂದು ಅವರು ಸತ್ಯವಿಶ್ವಾಸಕ್ಕಿಂತಲು ಹೆಚ್ಚಾಗಿ ಸತ್ಯನಿಷೇಧಕ್ಕೆ ನಿಕಟವಾಗಿದ್ದರು. ಅವರು ತಮ್ಮ ಮನಸ್ಸಿನಲ್ಲಿ ಇಲ್ಲದಿರುವುದನ್ನು ತಮ್ಮ ಬಾಯಿಯಿಂದ ಹೇಳುತ್ತಾರೆ. ಅವರು ಬಚ್ಚಿಡುತ್ತಿರುವುದನ್ನು ಅಲ್ಲಾಹನು ಚೆನ್ನಾಗಿ ಅರಿಯುತ್ತಾನೆ.

(168) ಅವರು ಸ್ವತಃ (ಮನೆಗಳಲ್ಲಿ) ಕುಳಿತುಕೊಂಡು (ಯುದ್ಧಕ್ಕೆ ಹೋದ) ತಮ್ಮ ಸಹೋದರರ ಕುರಿತು 'ಅವರು ನಮ್ಮ ಮಾತು ಕೇಳಿರುತ್ತಿದ್ದರೆ ಕೊಲೆಗೀಡಾಗುತ್ತಿರಲಿಲ್ಲ' ಎಂದು ಹೇಳಿದವರಾಗಿದ್ದಾರೆ. ನೀವು ನಿಮ್ಮ ಮಾತಿನಲ್ಲಿ ಸತ್ಯಸಂಧರಾಗಿದ್ದರೆ ಸ್ವತಃ ನಿಮ್ಮಿಂದ ಮರಣವನ್ನು ತಡೆದು ಕೊಳ್ಳಿರಿ ಎಂದು ನೀವು ಹೇಳಿರಿ.

(169) ಅಲ್ಲಾಹುವಿನ ಮಾರ್ಗದಲ್ಲಿ ಹುತಾತ್ಮರಾದವರನ್ನು ನೀವು ಎಂದೂ ಮೃತಪಟ್ಟರೆಂದು ಭಾವಿಸಬೇಡಿರಿ. ಏಕೆಂದರೆ ಅವರು ತಮ್ಮ ಪ್ರಭುವಿನ ಬಳಿ ಜೀವಂತವಾಗಿದ್ದಾರೆ. ಮತ್ತು ಅನ್ನಾಧಾರವನ್ನು ಪಡೆಯುತ್ತಿದ್ದಾರೆ.

(170) ಅಲ್ಲಾಹನು ತನ್ನ ಅನುಗ್ರಹದಿಂದ ಅವರಿಗೆ ದಯಪಾಲಿಸಿರುವುದರಲ್ಲಿ ಸಂತುಷ್ಟರಾಗಿರುವರು ಮತ್ತು ತಮ್ಮೊಂದಿಗೆ ಇಲ್ಲಿಯ ವರೆಗೆ ಬಂದು ಸೇರದಿರುವ ತಮ್ಮ ಹಿಂದೆಯೇ (ಭೂಲೋಕದಲ್ಲಿ) ಇರುವ ವಿಶ್ವಾಸಿಗಳ ಕುರಿತು ಅವರಿಗೆ ಯಾವುದೇ ಭಯವಿಲ್ಲ ಹಾಗೂ ದುಃಖವಿಲ್ಲವೆಂದು ಅವರು (ಹುತಾತ್ಮರು) ಹರ್ಷ ಪ್ರಕಟಿಸುತ್ತಾರೆ.

(171) ಅಲ್ಲಾºನ ಅನುಗ್ರಹ ಮತ್ತು ಔದಾರ್ಯದಿಂದಾಗಿ ಖಂಡಿತವಾಗಿಯೂ ಅಲ್ಲಾಹನು ಸತ್ಯವಿಶ್ವಾಸಿಗಳ ಪ್ರತಿಫಲವನ್ನು ವ್ಯರ್ಥಗೊಳಿಸುವುದಿಲ್ಲವೆಂದು ಅವರು ಸಂತೃಪ್ತರಾಗಿರುತ್ತಾರೆ.

(172) ಅವರು ತಮಗೆ ಗಾಯವಾದ ಬಳಿಕವೂ ಅಲ್ಲಾಹ್ ಮತ್ತು ಸಂದೇಶವಾಹಕರ ಕರೆಗೆ ಓಗೊಟ್ಟವರಾಗಿದ್ದಾರೆ. ಅವರ ಪೈಕಿ ಯಾರು ಸತ್ಕರ್ಮಗೈಯ್ಯುತ್ತಾರೋ ಮತ್ತು ಭಯಭಕ್ತಿ ಪಾಲಿಸುತ್ತಾರೋ ಅವರಿಗೆ ಮಹಾಪ್ರತಿಫಲವಿದೆ.

(173) ಸತ್ಯನಿಷೇಧಿಗಳು (ಖುರೈಷರು) ನಿಮ್ಮ ವಿರುದ್ಧ ಯುದ್ಧಕ್ಕಾಗಿ ಸಂಘಟಿತರಾಗಿದ್ದಾರೆ ನೀವು ಅವರನ್ನು ಭಯಪಡಿರಿ ಎಂದು ಜನರು ಸತ್ಯವಿಶ್ವಾಸಿಗಳಿಗೆ ಹೇಳಿದಾಗ ಈ ಮಾತು ಅವರ ವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸಿತು ಮತ್ತು ನಮಗೆ ಅಲ್ಲಾಹನು ಸಾಕು. ಮತ್ತು ಅತ್ಯುತ್ತಮ ಕಾರ್ಯಸಾಧಕನು ಅವನೇ ಆಗಿದ್ದಾನೆಂದು ಅವರು ಹೇಳಿದರು.

(174) ಅವರು ಅಲ್ಲಾಹನ ವತಿಯ ಅನುಗ್ರಹ ಮತ್ತು ಔದಾರ್ಯದೊಂದಿಗೆ ಮರಳಿದರು. ಯಾವುದೇ ಹಾನಿಯು ಅವರಿಗೆ ಬಾಧಿಸಲಿಲ್ಲ. ಅವರು ಅಲ್ಲಾಹನ ಸಂತೃಪ್ತಿಯನ್ನು ಅನುಸರಿಸಿದರು. ಅಲ್ಲಾಹನು ಮಹಾ ಔದಾರ್ಯವಂತನಾಗಿದ್ದಾನೆ.

(175) ಖಂಡಿತವಾಗಿಯು ಶೈತಾನನು ನಿಮ್ಮನ್ನು ತನ್ನ ಮಿತ್ರರ ಬಗ್ಗೆ ಹೆದರಿಸುತ್ತಾನೆ. ಆದ್ದರಿಂದ ನೀವು ಅವರನ್ನು ಭಯಪಡದಿರಿ ಮತ್ತು ನನ್ನನ್ನು ಭಯಪಡಿರಿ, ನೀವು ಸತ್ಯವಿಶ್ವಾಸಿಗಳಾಗಿದ್ದರೆ.

(176) ಸತ್ಯನಿಷೇಧಕ್ಕೆ ಧಾವಿಸಿ ಮುನ್ನುಗ್ಗುತ್ತಿರುವ ಜನರು ನಿಮ್ಮನ್ನು ದುಃಖಕ್ಕೀಡು ಮಾಡದಿರಲಿ. ಖಂಡಿತವಾಗಿಯು ಅವರು ಅಲ್ಲಾಹನಿಗೆ ಯಾವ ಹಾನಿಯನ್ನುಂಟು ಮಾಡಲಾರರು. ಅಲ್ಲಾಹನು ಪರಲೋಕದಲ್ಲಿ ಅವರಿಗೆ ಯಾವ ಪಾಲನ್ನೂ ನೀಡದಿರಲು ಇಚ್ಛಿಸಿದ್ದಾನೆ ಮತ್ತು ಅವರಿಗೆ ಮಹಾ ಕಠಿಣ ಶಿಕ್ಷೆಯಿದೆ.

(177) ಸತ್ಯವಿಶ್ವಾಸದ ಬದಲಿಗೆ ಸತ್ಯನಿಷೇಧವನ್ನು ಖರೀದಿಸಿದವರು ಅಲ್ಲಾಹನಿಗೆ ಯಾವ ಹಾನಿಯನ್ನುಂಟು ಮಾಡಲಾರರು. ಅವರಿಗೆ ವೇದನಾಜನಕ ಶಿಕ್ಷೆಯಿರುವುದು.

(178) ಸತ್ಯನಿಷೇಧಿಗಳಿಗೆ ನಾವು ಕಾಲಾವಕಾಶ ನೀಡುತ್ತಿರುವುದನ್ನು ತಮ್ಮ ಪಾಲಿಗೆ ಒಳಿತೆಂದು ಅವರು ಭಾವಿಸದಿರಲಿ. ಈ ಕಾಲಾವಕಾಶವು ಅವರ ಪಾಪಗಳಲ್ಲಿ ಇನ್ನಷ್ಟು ಮುಂದೆ ಸಾಗಲೆಂದಾಗಿದೆ. ಮತ್ತು (ಕೊನೆಗಂತು) ಅವರಿಗೆ ಅಪಮಾನಕರ ಶಿಕ್ಷೆಯಿರುವುದು.

(179) ಶುದ್ಧರನ್ನು ಅಶುದ್ಧರಿಂದ ಬೇರ್ಪಡಿಸುವ ತನಕ ನೀವು ಈಗಿರುವ ಸ್ಥಿತಿಯಲ್ಲೇ ಸತ್ಯವಿಶ್ವಾಸಿಗಳನ್ನು ಅಲ್ಲಾಹನು ಬಿಟ್ಟು ಬಿಡುವುದಿಲ್ಲ ಮತ್ತು ಅಲ್ಲಾಹನು ನಿಮಗೆ ಅಗೋಚರ ಜ್ಞಾನವನ್ನು ಪ್ರಕಟಗೊಳಿಸುವುದಿಲ್ಲ. ಆದರೆ ಅಲ್ಲಾಹನು ತನ್ನ ಸಂದೇಶವಾಹಕರ ಪೈಕಿ ತಾನಿಚ್ಛಿಸುವವರನ್ನು (ಅಗೋಚರ ಜ್ಞಾನ ನೀಡುವುದಕ್ಕಾಗಿ) ಆಯ್ಕೆ ಮಾಡುತ್ತಾನೆ. ಆದ್ದರಿಂದ ನೀವು ಅಲ್ಲಾಹನಲ್ಲೂ, ಅವನ ಸಂದೇಶವಾಹಕರಲ್ಲೂ ವಿಶ್ವಾಸವಿಡಿರಿ. ನೀವು ವಿಶ್ವಾಸವಿಡುವವರು ಮತ್ತು ಭಯಭಕ್ತಿ ಪಾಲಿಸುವವರಾದರೆ ನಿಮಗೆ ಮಹಾ ಪ್ರತಿಫಲವಿದೆ.

(180) ಅಲ್ಲಾಹನು ತನ್ನ ಅನುಗ್ರಹದಿಂದ ದಯಪಾಲಿಸಿರುವ ಧನದಲ್ಲಿ ಜಿಪುಣತೆ ತೋರುತ್ತಿರುವವರು ಜಿಪುಣತೆಯನ್ನು ತಮ್ಮ ಪಾಲಿಗೆ ಉತ್ತಮವೆಂದು ಭಾವಿಸದಿರಲಿ. ಆದರೆ ಅದು ಅವರಿಗೆ ಅತ್ಯಂತ ಕೆಟ್ಟದ್ದಾಗಿದೆ. ಸದ್ಯದಲ್ಲೇ ಪುನರುತ್ಥಾನದ ದಿನದಂದು ಅವರು ಜಿಪುಣತೆಯಿಂದ ಸಂಗ್ರಹಿಸಿರುವ ವಸ್ತುವನ್ನೇ ಅವರಿಗೆ ಕಂಠಕಡಗವನ್ನಾಗಿ ಹಾಕಲಾಗುವುದು. ಆಕಾಶಗಳ ಮತ್ತು ಭೂಮಿಯ ವಾರೀಸು ಹಕ್ಕು ಅಲ್ಲಾಹನದ್ದಾಗಿದೆ ಮತ್ತು ನೀವು ಮಾಡುತ್ತಿರುವುದರ ಕುರಿತು ಅಲ್ಲಾಹನು ಅರಿವುಳ್ಳನಾಗಿದ್ದಾನೆ.

(181) ಅಲ್ಲಾಹನು ನಿರ್ಗತಿಕನಾಗಿದ್ದಾನೆ. ಮತ್ತು ನಾವು ಧನಿಕರಾಗಿದ್ದೇವೆಂದು ಹೇಳಿದವÀರ ಮಾತನ್ನು ಖಂಡಿತವಾಗಿಯು ಅಲ್ಲಾಹನು ಆಲಿಸಿದ್ದಾನೆ. ಅವರು ಹೇಳಿರುವ ಮಾತನ್ನು ಮತ್ತು ಅವರು ಅನ್ಯಾಯವಾಗಿ ಪೈಗಂಬರರನ್ನು ಕೊಂದಿರುವುದನ್ನು ನಾವು ದಾಖಲಿಸುತ್ತೇವೆ. ಮತ್ತು ಪುನರುತ್ಥಾನದ ದಿನ ಧಗಧಗಿಸುತ್ತಿರುವ ಶಿಕ್ಷೆಯನ್ನು ಸವಿಯಿರಿ ಎಂದು ಅವರೊಂದಿಗೆ ಹೇಳುವೆವು.

(182) ಇದು ನಿಮ್ಮ ಕೈಗಳು ಮಾಡಿದ ಕರ್ಮಗಳ ಫಲವಾಗಿದೆ ಮತ್ತು ಅಲ್ಲಾಹನು ತನ್ನ ದಾಸರ ಮೇಲೆ ಅಕ್ರಮವೆಸಗುವವನಲ್ಲ.

(183) ಸಂದೇಶವಾಹಕರು ನಮ್ಮ ಮುಂದೆ ಬಲಿಯನ್ನರ್ಪಿಸಿ ಅದನ್ನು ಅಗ್ನಿಯು ಭಕ್ಷಿಸುವುದನ್ನು ನಾವು (ಕಣ್ಣಾರೆ ಕಾಣುವ ತನಕ) ಅವರನ್ನು ಅಂಗೀಕರಿಸಬಾರದೆAದು ಅಲ್ಲಾಹನು ನಮ್ಮೊಂದಿಗೆ ಕರಾರು ಪಡೆದಿದ್ದಾನೆಂದು ಅವರು ಹೇಳಿದವರಾಗಿದ್ದಾರೆ. ನೀವು ಹೇಳಿರಿ: ನೀವು ಸತ್ಯ ಸಂಧರಾಗಿದ್ದರೆ ನನಗಿಂತ ಮುಂಚೆ ಬಂದ ಸಂದೇಶವಾಹಕರು ನಿಮ್ಮೆಡೆಗೆ ಸ್ಪಷ್ಟ ದೃಷ್ಟಾಂತಗಳನ್ನು ಮತ್ತು ನೀವು ಹೇಳಿದ್ದನ್ನು (ಅಗ್ನಿಪರೀಕ್ಷೆಯನ್ನು) ಸಹ ತಂದಿದ್ದರು. ಹಾಗಿರುವಾಗ ನೀವು ಅವರನ್ನೇಕೆ ವಧಿಸಿದಿರಿ.

(184) ಇನ್ನೂ ಅವರು ನಿಮ್ಮನ್ನು ನಿಷೇಧಿಸುವುದಾದರೆ, ನಿಮಗಿಂತ ಮುಂಚೆ ಸ್ಪಷ್ಟಪುರಾವೆಗಳೊಂದಿಗೆ, ಪ್ರಕಾಶ ಬೀರುವ ಗ್ರಂಥದೊAದಿಗೆ ಬಂದ ಸಂದೇಶವಾಹಕರು ಸಹ ನಿಷೇಧಕ್ಕೊಳಗಾಗಿದ್ದಾರೆ.

(185) ಪ್ರತಿಯೊಂದು ಜೀವವೂ ಮರಣದ ರುಚಿ ಸವಿಯಲಿದೆ ಮತ್ತು ನಿಮಗೆ ಪುನರುತ್ಥಾನ ದಿನದಂದು ನಿಮ್ಮ ಪ್ರತಿಫಲಗಳನ್ನು ಸಂಪೂರ್ಣವಾಗಿ ನೀಡÀಲಾಗುವುದು. ಇನ್ನು ಯಾರು ನರಕದಿಂದ ದೂರ ಸರಿಸಲಾದನೋ ಮತ್ತು ಸ್ವರ್ಗದಲ್ಲಿ ಪ್ರವೇಶಿಸಲಾದನೋ ಖಂಡಿತವಾಗಿಯು ಅವನು ಯಶಸ್ಸು ಪಡೆದನು ಮತ್ತು ಐಹಿಕ ಜೀವನವು ಕೇವಲ ಮೋಸದ ವಸ್ತುವಾಗಿದೆ.

(186) ಖಂಡಿತವಾಗಿಯು ನಿಮ್ಮ ಸಂಪತ್ತುಗಳಲ್ಲೂ ಮತ್ತು ಶರೀರಗಳಲ್ಲೂ ನಿಮ್ಮನ್ನು ಪರೀಕ್ಷಿಸಲಾಗುವುದು ಮತ್ತು ನಿಮಗಿಂತ ಮುಂಚೆ ಗ್ರಂಥ ನೀಡಲಾದವರಿಂದ ಮತ್ತು ಬಹುದೇವಾರಾಧಕರಿಂದ ನೀವು ಸಾಕಷ್ಟು ಚುಚ್ಚು ಮಾತುಗಳನ್ನು ಕೇಳಲಿರುವಿರಿ ಎಂಬುದು ಖಚಿತವಾಗಿದೆ. ನೀವು ಸಹನೆ ವಹಿಸುವುದಾದರೆ ಮತ್ತು ಭಯಭಕ್ತಿ ಪಾಲಿಸುವುದಾದರೆ, ಖಂಡಿತವಾಗಿಯು ಇದು ಎದೆಗಾರಿಕೆಯ ಸಂಗತಿಯಾಗಿದೆ.

(187) ಮತ್ತು ಗ್ರಂಥ ನೀಡಲಾದವರೊಂದಿಗೆ: ನೀವದನ್ನು ಎಲ್ಲ ಜನರಿಗೆ ವಿವರಿಸಿಕೊಡಬೇಕು, ಮತ್ತು ಅದನ್ನು ಬಚ್ಚಿಡಬಾರದೆಂದು ಅಲ್ಲಾಹನು ಕರಾರು ಪಡೆದುಕೊಂಡ ಸಂಧರ್ಭವನ್ನು ಸ್ಮರಿಸಿರಿ. ಅದಾಗ್ಯೂ ಅವರು ಆ ಕರಾರನ್ನು ತಮ್ಮ ಬೆನ್ನ ಹಿಂದೆ ಎಸೆದರು ಮತ್ತು ಅದನ್ನು ತುಚ್ಛ ಬೆಲೆಗೆ ಮಾರಿಬಿಟ್ಟರು. ಅವರ ಈ ಕ್ರಯವಿಕ್ರಯವು ಅದೆಷ್ಟು ನಿಕೃಷ್ಟವಾಗಿದೆ.

(188) ಅವರು ತಮ್ಮ ಕೃತ್ಯಗಳ ಮೇಲೆ ಸಂತುಷ್ಟರಾಗಿದ್ದಾರೆ ಮತ್ತು ತಾವು ಮಾಡದಿರುವ ಸಂಗತಿಗಳ ಕುರಿತು ಪ್ರಶಂಸೆ ಗಿಟ್ಟಿಸಲು ಬಯಸುತ್ತಾರೆ. ಅವರು ಶಿಕ್ಷೆಯಿಂದ ಪಾರಾಗುವವರೆಂದು ನೀವು ಖಂಡಿತ ಭಾವಿಸಬೇಡಿರಿ. ಅವರಿಗೆ ವೇದನಾಜನಕ ಶಿಕ್ಷೆಯಿರುವುದು.

(189) ಆಕಾಶಗಳ ಮತ್ತು ಭೂಮಿಯ ಅಧಿಪತ್ಯವು ಅಲ್ಲಾಹನಿಗೆ ಮಾತ್ರವಿದೆ ಮತ್ತು ಅಲ್ಲಾಹನು ಸಕಲ ಸಂಗತಿಗಳ ಮೇಲೆ ಸಾಮರ್ಥ್ಯವುಳ್ಳವನಾಗಿದ್ದಾನೆ.

(190) ಭೂಮಿ, ಆಕಾಶಗಳ ಸೃಷ್ಟಿಯಲ್ಲೂ, ರಾತ್ರಿ ಹಗಲುಗಳ ಬದಲಾವಣೆಯಲ್ಲೂ ಖಂಡಿತವಾಗಿಯು ಬುದ್ಧಿವಂತರಿಗೆ ಅನೇಕ ದೃಷ್ಟಾಂತಗಳಿವೆ.

(191) ಅವರು ನಿಂತುಕೊAಡೂ, ಕುಳಿತುಕೊಂಡೂ ಮತ್ತು ತಮ್ಮ ಪಾರ್ಶ್ವದಲ್ಲಿ ಮಲಗಿಕೊಂಡೂ ಅಲ್ಲಾಹನನ್ನು ಸ್ಮರಿಸುತ್ತಾರೆ.ಮತ್ತು ಭೂಮಿ ಆಕಾಶಗಳ ಸೃಷ್ಟಿಯ ಕುರಿತು ಚಿಂತನೆ ಮಾಡುತ್ತಾರೆ ಮತ್ತು ಹೇಳುತ್ತಾರೆ: ಓ ನಮ್ಮ ಪ್ರಭೂ, ಇದನ್ನು ನೀನು ವ್ಯರ್ಥವಾಗಿ ಸೃಷ್ಟಿಸಿಲ್ಲ. ನೀನು ಪರಮಪಾವನನು ಆದ್ದರಿಂದ ನೀನು ನಮ್ಮನ್ನು ನರಕ ಶಿಕ್ಷೆಯಿಂದ ಕಾಪಾಡು.(ಎಂದು ಪ್ರಾರ್ಥಿಸುತ್ತಾರೆ)

(192) ಓ ನಮ್ಮ ಪ್ರಭೂ, ನೀನು ಯಾರನ್ನಾದರೂ ನರಕಕ್ಕೆ ಪ್ರವೇಶಿಸಿದರೆ ನಿಶ್ಚಯವಾಗಿಯು ಅವನನ್ನು ನೀನು ನಿಂದ್ಯನಾಗಿ ಮಾಡಿರುವೆ ಮತ್ತು ಅಕ್ರಮಿಗಳಿಗೆ ಸಹಾಯಕರಾಗಿ ಯಾರೂ ಇರಲಾರರು.

(193) ನಮ್ಮ ಪ್ರಭೂ, ಓರ್ವ ಕರೆ ನೀಡುವಾತನು: 'ನೀವು ನಿಮ್ಮ ಪ್ರಭುವಿನಲ್ಲಿ ವಿಶ್ವಾಸವಿಡಿರಿ' ಎಂದು ಹೇಳುತ್ತಾ ಸತ್ಯವಿಶ್ವಾಸದೆಡೆಗೆ ಕರೆಯುವುದನ್ನು ನಾವು ಆಲಿಸಿದೆವು. ಆಗ ನಾವು ವಿಶ್ವಾಸವಿಟ್ಟೆವು. ಆದುದರಿಂದ ನಮ್ಮ ಪ್ರಭು, ನಮ್ಮ ಪಾಪಗಳನ್ನು ಕ್ಷಮಿಸಿಬಿಡು ಮತ್ತು ನಮ್ಮ ಕೆಡುಕುಗಳನ್ನು ನಮ್ಮಿಂದ ದೂರ ಮಾಡು ಮತ್ತು ಸಜ್ಜನರ ಜೊತೆ ನಮಗೆ ಮರಣವನ್ನು ಕೊಡು.

(194) ನಮ್ಮ ಪ್ರಭು, ನೀನು ನಿನ್ನ ಸಂದೇಶವಾಹಕರ ಮೂಲಕ ನಮ್ಮೊಂದಿಗೆ ವಾಗ್ದಾನ ಮಾಡಿರುವುದನ್ನು ನಮಗೆ ದಯಪಾಲಿಸು ಮತ್ತು ನಮ್ಮನ್ನು ಪುನರುತ್ಥಾನ ದಿನದಂದು ಅಪಮಾನಿಸದಿರು. ಖಂಡಿತವಾಗಿಯು ನೀನು ವಾಗ್ದಾನವನ್ನು ಉಲ್ಲಂಘಿಸುವುದಿಲ್ಲ.

(195) ಆಗ ಅವರ ಪ್ರಭು ಅವರ ಪ್ರಾರ್ಥನೆಗೆ ಓಗೊಟ್ಟನು ಅಂದರೆ ನಾನು ನಿಮ್ಮ ಪೈಕಿ ಕರ್ಮವೆಸಗುವ ಯಾವೊಬ್ಬನ ಕರ್ಮವನ್ನು ಅದು ಪುರುಷನದ್ದಾಗಲೀ, ಸ್ತಿçÃಯದ್ದಾಗಲೀ ಎಂದಿಗೂ ನಿಷ್ಫಲಗೊಳಿಸಲಾರೆನು. ನೀವು ಪರಸ್ಪರ ಸಮಾನ ವರ್ಗವಾಗಿದ್ದೀರಿ. ಆದ್ದರಿಂದ ಯಾರು (ನನಗಾಗಿ) ವಲಸೆ ಹೋದರೋ, ಸ್ವಂತ ಮನೆಗಳಿಂದ ಹೊರ ದಬ್ಬಲ್ಪಟ್ಟರೋ ನನ್ನ ಮಾರ್ಗದಲ್ಲಿ ಹಿಂಸೆಗೊಳಗಾದರೂ, ಯುದ್ಧ ಮಾಡಿದರೂ ಮತ್ತು ಹುತಾತ್ಮರಾದರೂ ಅವರಿಗೆ ನಿಶ್ಚಯವಾಗಿಯು ನಾನು ಅವರ ಕೆಡಕುಗಳನ್ನು ದೂರ ಮಾಡುವೆನು ಮತ್ತು ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವ ಸ್ವಗೋದ್ಯಾನಗಳಲ್ಲಿ ಅವರನ್ನು ಪ್ರವೇಶಿಸುವೆನು. ಅದು ಅಲ್ಲಾಹನ ಬಳಿ ಅತ್ಯುತ್ತಮವಾದ ಪ್ರತಿಫಲವಾಗಿದೆ.

(196) ನಾಡುಗಳಲ್ಲಿ ಸತ್ಯನಿಷೇಧಿಗಳ ಮೆರೆದಾಟವು ನಿಮ್ಮನ್ನು ವಂಚಿಸದಿರಲಿ.

(197) ಅದು ಕ್ಷÄಲ್ಲಕ ಲಾಭವಾಗಿದೆ. ಅದರ ನಂತರ ಅವರ ನೆಲೆಯು ನರಕವಾಗಿದೆ ಮತ್ತು ಅದೆಷ್ಟು ಕೆಟ್ಟ ವಾಸಸ್ಥಳವಾಗಿದೆ!

(198) ಆದರೆ ಯಾರು ತಮ್ಮ ಪ್ರಭುವನ್ನು ಭಯಪಡುತ್ತಾರೋ ಅವರಿಗೆ ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳಿವೆ. ಅವರು ಅದರಲ್ಲಿ ಶಾಶ್ವತವಾಗಿರುವರು. ಇದು ಅಲ್ಲಾಹನ ಕಡೆಯ ಆತಿಥ್ಯವಾಗಿದೆ ಮತ್ತು ಸಜ್ಜನರ ಪಾಲಿಗೆ ಅಲ್ಲಾಹನ ಬಳಿಯಲ್ಲಿರುವುದೇ ಅತ್ಯುತ್ತಮವಾಗಿದೆ.

(199) ಖಂಡಿತವಾಗಿಯು ಗ್ರಂಥದವರಲ್ಲಿ ಕೆಲವರು ಅಲ್ಲಾಹನಲ್ಲೂ, ನಿಮ್ಮೆಡೆಗೆ ಅವತೀರ್ಣಗೊಳಿಸಲಾದುದರಲ್ಲೂ ಮತ್ತು ತಮ್ಮೆಡೆಗೆ ಅವತೀರ್ಣಗೊಳಿಸಲಾ- ದುದರಲ್ಲೂ ವಿಶ್ವಾಸವಿಡುವವರಿದ್ದಾರೆ. ಅವರು ಅಲ್ಲಾಹನನ್ನು ಭಯಪಡುತ್ತಾರೆ ಮತ್ತು ಅವರು ಅಲ್ಲಾಹನ ಸೂಕ್ತಿಗಳನ್ನು ಕ್ಷÄಲ್ಲಕ ಬೆಲೆಗೆ ಮಾರುವುದಿಲ್ಲ. ಅವರ ಪ್ರತಿಫಲವು ಅವರ ಪ್ರಭುವಿನ ಬಳಿಯಿರುವುದು. ಖಂಡಿತವಾಗಿಯು ಅಲ್ಲಾಹನು ಶೀಘ್ರವಾಗಿ ವಿಚಾರಣೆ ನಡೆಸುವವನಾಗಿದ್ದಾನೆ.

(200) ಓ ಸತ್ಯವಿಶ್ವಾಸಿಗಳೇ, ನೀವು ಸಹನೆ ಪಾಲಿಸಿರಿ, ಇತರರಲ್ಲಿ ಸ್ಥೆöÊರ್ಯ ತುಂಬಿರಿ, ಪ್ರತಿರೋಧಕ್ಕೆ ಸನ್ನದ್ಧರಾಗಿರಿ ಮತ್ತು ಸದಾ ಅಲ್ಲಾಹನನ್ನು ಭಯಪಡುತ್ತಿರಿ. ಪ್ರಾಯಶಃ ನೀವು ಜಯಶಾಲಿಗಳಾಗಬಹುದು.