58 - Al-Mujaadila ()

|

(1) (ಓ ಪೈಗಂಬರರೇ) ನಿಶ್ಚಯವಾಗಿಯೂ ನಿಮ್ಮೊಂದಿಗೆ ತನ್ನ ಪತಿಯ ವಿಚಾರದಲ್ಲಿತರ್ಕಿಸುತ್ತಿದ್ದಂತಹಾ ಹಾಗೂ ಅಲ್ಲಾಹನ ಮುಂದೆ ದೂರು ಹೇಳುತ್ತಿದ್ದಂತಹ ಸ್ತ್ರೀಯ ಮಾತನ್ನು ಅಲ್ಲಾಹನು ಆಲಿಸಿದನು ಮತ್ತು ಅಲ್ಲಾಹನು ನಿಮ್ಮಿಬ್ಬರ ಸಂಭಾಷಣೆಯನ್ನು ಆಲಿಸುತ್ತಿದ್ದನು. ನಿಸ್ಸಂಶಯವಾಗಿಯೂ ಅಲ್ಲಾಹನು ಆಲಿಸುವವನೂ ಎಲ್ಲವನ್ನು ನೋಡುವವನೂ ಆಗಿದ್ದಾನೆ.

(2) ನಿಮ್ಮ ಪೈಕಿ ಯಾರು ತಮ್ಮ ಪತ್ನಿಯೊಂದಿಗೆ ಝಿಹಾರ್ ಮಾಡಿ (ತಾಯಿ ಎಂದು ಹೇಳಿ) ಬಿಡುತ್ತಾರೋ ವಸ್ತುತಃ ಅವರು ಅವರ ತಾಯಂದಿರರಾಗ ಲಾರರು ,ಅವರನ್ನು ಹೆತ್ತವರೇ ಅವರ ತಾಯಂದಿರು, ನಿಜವಾಗಿಯೂ ಅವರು ವಿವೇಕಕ್ಕೆ ನಿಲುಕದಂತಹ ಸುಳ್ಳು ಹೇಳುತ್ತಿದ್ದಾರೆ. ನಿಸ್ಸಂಶಯವಾಗಿಯೂ ಅಲ್ಲಾಹನು ಮನ್ನಿಸುವವನು ಕ್ಷಮಾಶೀಲನೂ ಆಗಿದ್ದಾನೆ.

(3) ತಮ್ಮ ಸ್ತ್ರೀಯರೊಂದಿಗೆ ಝಿಹಾರ್ ಮಾಡುವವರು ತರುವಾಯ ತಾವು ಹೇಳಿದ ಮಾತಿನಿಂದ ಪಶ್ಚಾತ್ತಾಪ ಪಟ್ಟು ಮರಳಿದರೆ ಅವರು ಪರಸ್ಪರರನ್ನು ಸ್ಪರ್ಶಿಸುವ ಮೊದಲು ಒಬ್ಬ ಗುಲಾಮನನ್ನು ವಿಮೋಚಿಸತಕ್ಕದ್ದು. ಇದರ ಮೂಲಕ ನಿಮಗೆ ಉಪದೇಶ ನೀಡಲಾಗುತ್ತಿದೆ, ಅಲ್ಲಾಹನು ನೀವು ಮಾಡುತ್ತಿರುವುದರ ಕುರಿತು ಸೂಕ್ಷ್ಮಜ್ಞಾನಿಯಾಗಿರುವನು.

(4) ಇನ್ನು ಯಾರಿಗಾದರೂ ಗುಲಾಮನು ಸಿಗದಿದ್ದರೆ ಅವರು ಪರಸ್ಪರ ಸ್ಪರ್ಶಿಸುವ ಮೊದಲು ಅವನು ನಿರಂತರವಾಗಿ ಎರಡು ತಿಂಗಳ ಕಾಲ ಉಪವಾಸ ಆಚರಿಸಬೇಕಾಗಿದೆ, ಇದು ಸಾಧ್ಯವಾಗದಿದ್ದರೆ ಅವನು ಅರವತ್ತು ನಿರ್ಗತಿಕರಿಗೆ ಉಣಬಡಿಸಬೇಕಾಗಿದೆ. ಇದು ನೀವು ಅಲ್ಲಾಹನ ಹಾಗೂ ಅವನ ಸಂದೇಶವಾಹಕರ ಮೇಲೆ ವಿಶ್ವಾಸವಿಡಲೆಂದಾಗಿದೆ. ಇವು ಅಲ್ಲಾಹನ ಮೇರೆಗಳಾಗಿವೆ. ಮತ್ತು ಸತ್ಯ ನಿಷೇಧಿಗಳಿಗೆ ವೇದನಾಜನಕ ಯಾತನೆ ಇದೆ.

(5) ನಿಸ್ಸಂದೇಹವಾಗಿಯೂ ಅಲ್ಲಾಹನನ್ನು ಅವನ ಸಂದೇಶವಾಹಕರನ್ನು ವಿರೋಧಿಸುವವರು ತಮಗಿಂತ ಮುಂಚಿನವರು ನಿಂದಿಸಲ್ಪಟ್ಟAತೆ ಅವರೂ ನಿಂದಿಸಲ್ಪಡುವರು, ನಿಸ್ಸಂಶಯವಾಗಿಯೂ ನಾವು ಸುಸ್ಪಷ್ಟ ಪುರಾವೆಗಳನ್ನು ಅವತೀರ್ಣಗೊಳಿಸಿದ್ದೇವೆ ಮತ್ತು ಸತ್ಯ ನಿಷೇಧಿಗಳಿಗೆ ನಿಂದ್ಯತೆಯ ಯಾತನೆ ಇದೆ.

(6) ಅಲ್ಲಾಹನು ಅವರೆಲ್ಲರನ್ನು ಎಬ್ಬಿಸಿ ಅವರಿಗೆ ಅವರು ಮಾಡಿದಂತಹ ಕರ್ಮಗಳನ್ನು ತಿಳಿಸಿಕೊಡುವ ದಿನ. ಅಲ್ಲಾಹನು ಅದನ್ನು ಎಣಿಸಿ ದಾಖಲಿಸಿದ್ದಾನೆ. ಆದರೆ ಅವರು ಅದನ್ನು ಮರೆತುಬಿಟ್ಟಿದ್ದರು ಅಲ್ಲಾಹನು ಎಲ್ಲಾ ಸಂಗತಿಗಳ ಮೇಲೆ ಸಾಕ್ಷಿಯಾಗಿದ್ದಾನೆ.

(7) ಆಕಾಶಗಳಲ್ಲಿರುವ ಮತ್ತು ಭೂಮಿಯಲ್ಲಿರುವ ಸಕಲ ವಸ್ತುಗಳನ್ನು ಅಲ್ಲಾಹನು ಅರಿಯುತ್ತಾನೆ ಎಂದು ನೀವು ಕಾಣುವುದಿಲ್ಲವೇ? ಮೂವರ ಗೂಢಾಲೋಚನೆಯು ಅವರ ಪೈಕಿ ನಾಲ್ಕನೆಯವನಾಗಿ ಅಲ್ಲಾಹನಲ್ಲದೆ ನಡೆಯದು, ಮತ್ತು ಐವರ ಗೂಢಾಲೋಚನೆಯು ಅವರ ಪೈಕಿ ಆರನೇಯವನಾಗಿ ಅವನಿಲ್ಲದೆ ನಡೆಯದು. ಅದಕ್ಕಿಂತ ಕಡಿಮೆಯವರದ್ದಾಗಲಿ ಹೆಚ್ಚಿನವರದ್ದಾಗಲಿ ಅವರೆಲ್ಲೇ ಇರಲಿ ಅವನು ಅವರ ಜೊತೆಯಲ್ಲಿ ಇರುತ್ತಾನೆ. ಬಳಿಕ ಪುನರುತ್ಥಾನದಂದು ಅವನು ಅವರಿಗೆ ಅವರು ಮಾಡುತ್ತಿದ್ದುದ್ದನ್ನು ತಿಳಿಸಿ ಕೊಡುವನು. ನಿಸ್ಸಂಶಯವಾಗಿಯೂ ಅಲ್ಲಾಹನು ಎಲ್ಲ ಸಂಗತಿಗಳನ್ನು ಅರಿಯುವವನಾಗಿರುವನು.

(8) ಗೂಢಾಲೋಚನೆ ನಡೆಸುವುದರಿಂದ ತಡೆಯಲ್ಪಟ್ಟವರೆಡೆಗೆ ನೀವು ನೋಡಲಿಲ್ಲವೇ ?ಅವರು ತಮ್ಮನ್ನು ತಡೆಯಲಾದ ಕೆಲಸಗಳಿಗೆ ಪುನಃ ಮರಳುತ್ತಿದ್ದಾರೆ, ಮತ್ತು ಪರಸ್ಪರ ಪಾಪ, ಅತಿರೇಕ ಹಾಗೂ ಸಂದೇಶವಾಹಕರ ಧಿಕ್ಕಾರದ ವಿಚಾರದಲ್ಲಿ ಗೂಢಾಲೋಚನೆ ನಡೆಸುತ್ತಾರೆ, ಅವರು ನಿಮ್ಮ ಬಳಿಗೆ ಬಂದಾಗ ಅಲ್ಲಾಹನು ನಿಮಗೆ ಸಲಾಂ ಹೇಳದ ರೀತಿಯಲ್ಲಿ ಸಲಾಂ ಹೇಳುತ್ತಾರೆ ಮತ್ತು ನಾವು ಹೇಳುತ್ತಿರುವುದರ ನಿಮಿತ್ತ ಅಲ್ಲಾಹನು ನಮ್ಮನ್ನು ಶಿಕ್ಷಿಸುವುದಿಲ್ಲವೇಕೆ ? ಎಂದು ತಮ್ಮ ಮನಸ್ಸಿನಲ್ಲಿ ಹೇಳಿಕೊಳ್ಳುತ್ತಾರೆ. ಇವರಿಗೆ ನರಕವೇ ಸಾಕು, ಅವರು ಅದನ್ನು ಪ್ರವೇಶಿಸುವರು, ಹಾಗೆಯೇ ಅದೆಷ್ಟು ಕೆಟ್ಟ ನೆಲೆಯಾಗಿದೆ.

(9) ಓ ಸತ್ಯ ವಿಶ್ವಾಸಿಗಳೇ ನೀವು ಪರಸ್ಪರ ಪಾಪ, ಅತಿರೇಕ, ಹಾಗೂ ಸಂದೇಶವಾಹಕನನ್ನು ಧಿಕ್ಕರಿಸುವ ವಿಚಾರದಲ್ಲಿ ಗೂಢಾಲೋಚನೆ ನಡೆಸದಿರಿ. ಬದಲಿಗೆ ನೀವು ಪುಣ್ಯ ಹಾಗೂ ಭಯ-ಭಕ್ತಿಯ ವಿಚಾರದಲ್ಲಿ ಗೂಢಾಲೋಚನೆ ನಡೆಸಿರಿ, ಮತ್ತು ನೀವು ಯಾರೆಡೆಗೆ ಒಟ್ಟುಗೂಡಿಸಲ್ಪಡುವಿರೋ ಆ ಅಲ್ಲಾಹನನ್ನು ಭಯಪಡಿರಿ.

(10) ಖಂಡಿತ ಗೂಢಾಲೋಚನೆಯು ಶೈತಾನನ ಕೃತ್ಯವಾಗಿದೆ, ಇದರಿಂದ ಸತ್ಯ ವಿಶ್ವಾಸಿಗಳಿಗೆ ದುಃಖವನ್ನುಂಟು ಮಾಡಲೆಂದಾಗಿದೆ ಆದರೆ ಅವನು ಅಲ್ಲಾಹನ ಅನುಮತಿ ಇಲ್ಲದೆ ಅವರಿಗೆ ಯಾವ ಹಾನಿಯನ್ನು ಮಾಡಲಾರನು ಸತ್ಯ ವಿಶ್ವಾಸಿಗಳು ಅಲ್ಲಾಹನ ಮೇಲೆಯೇ ಭರವಸೆಯನ್ನಿಡಲಿ.

(11) ಸತ್ಯ ವಿಶ್ವಾಸಿಗಳೇ ನೀವು ಸಭೆಗಳಲ್ಲಿ ಸ್ಥಳಾವಕಾಶ ಮಾಡಿಕೊಡಿರಿ ಎಂದು ನಿಮ್ಮೊಂದಿಗೆ ಹೇಳಲಾದರೆ ನೀವು ಸ್ಥಳಾವಕಾಶ ಮಾಡಿಕೊಡಿರಿ. ಅಲ್ಲಾಹನು ನಿಮಗೆ ಇಹಪರದಲ್ಲಿ) ವಿಶಾಲತೆಯನ್ನು ದಯಪಾಲಿಸುವನು ಮತ್ತು ನಿಮಗೆ ಎದ್ದು ಬಿಡಿರಿ ಎಂದು ಹೇಳಲಾದರೆ ನೀವು ಎದ್ದು ಬಿಡಿರಿ. ಅಲ್ಲಾಹನು ನಿಮ್ಮಲ್ಲಿ ಸತ್ಯ ವಿಶ್ವಾಸವಿರಿಸಿದವರ ಹಾಗೂ ಜ್ಞಾನ ನೀಡಲ್ಪಟ್ಟವರ ಪದವಿಗಳನ್ನು ಉನ್ನತಗೊಳಿಸುವನು ಮತ್ತು ಅಲ್ಲಾಹನು ನೀವು ಮಾಡುತ್ತಿರುವುದರ ಕುರಿತು ಚೆನ್ನಾಗಿ ಅರಿಯುವವನಾಗಿದ್ದಾನೆ.

(12) ಓ ಸತ್ಯ ವಿಶ್ವಾಸಿಗಳೇ ನೀವು ಸಂದೇಶವಾಹಕರೊAದಿಗೆ ಗೂಢಾಲೋಚನೆ ನಡೆಸಲು ಇಚ್ಚಿಸಿದಾಗ ನೀವು ನಿಮ್ಮ ಗೂಢಾಲೋಚನೆಯ ಮೊದಲು ಏನಾದರೂ ದಾನವನ್ನು ನೀಡಿರಿ. ಇದು ನಿಮ್ಮ ಪಾಲಿಗೆ ಅತ್ಯುತ್ತಮವೂ ಅತಿ ಪರಿಶುದ್ಧವೂ ಆಗಿದೆ, ಇನ್ನು ನಿಮ್ಮ ಬಳಿಗೆ ಏನೂ ಇಲ್ಲದಿದ್ದರೆ ನಿಸ್ಸಂಶಯವಾಗಿಯೂ ಅಲ್ಲಾಹನು ಕ್ಷಮಾಶೀಲನೂ ಕರುಣಾನಿಧಿಯೂ ಆಗಿದ್ದಾನೆ.

(13) ಗೂಢಾಲೋಚನೆಯ ಮೊದಲು ದಾನವನ್ನು ನೀಡುವುದರಿಂದ ನೀವು ಭಯಪಟ್ಟಿರಾ ? ಇನ್ನು ನೀವು ಅದನ್ನು ಮಾಡದಿದ್ದಾಗ ಅಲ್ಲಾಹನು ನಿಮ್ಮ ಪಶ್ಚಾತ್ತಾಪವನ್ನು ಸ್ವೀಕರಿಸಿಕೊಂಡನು. ಇನ್ನು ನೀವು ನಮಾಜ್ ಸಂಸ್ಥಾಪಿಸಿರಿ ಹಾಗೂ ಝಕಾತನ್ನು ಪಾವತಿಸಿರಿ ಮತ್ತು ಅಲ್ಲಾಹನನ್ನು, ಅವನ ಸಂದೇಶವಾಹಕರನ್ನು ಅನುಸರಿಸಿರಿ, ನೀವು ಮಾಡುತ್ತಿರುವುದರ ಕುರಿತು ಅಲ್ಲಾಹನು ಚೆನ್ನಾಗಿ ಬಲ್ಲನು.

(14) ಅಲ್ಲಾಹನ ಕ್ರೋಧಕ್ಕೊಳಗಾಗಿರುವ ಒಂದು(ಯಹೂದಿ) ಸಮೂಹದೊಂದಿಗೆ ಮೈತ್ರಿ ಮಾಡಿಕೊಂಡ ಕಪಟ ವಿಶ್ವಾಸಿಗಳೆಡೆಗೆ ನೀವು ನೋಡಲಿಲ್ಲವೇ? ಅವರು ನಿಮ್ಮವರೂ ಅಲ್ಲ ಅಥವ ಅವರಕಡೆಯವರೂ ಅಲ್ಲ, ಅವರು ತಿಳಿದೂ ತಿಳಿದೂ ಸುಳ್ಳು ಆಣೆ ಹಾಕುತ್ತಾರೆ.

(15) ಅಲ್ಲಾಹನು ಅವರಿಗಾಗಿ ಕಠಿಣಯಾತನೆಯನ್ನು ಸಿದ್ಧಪಡಿಸಿಟ್ಟಿರುವನು. ನಿಜವಾಗಿಯೂ ಅವರು ಮಾಡುತ್ತಿರುವುದೆಲ್ಲವೂ ಅತಿ ನಿಕೃಷ್ಟವಾದುದು.

(16) ಅವರು ತಮ್ಮ ಆಣೆಗಳನ್ನು ಗುರಾಣಿಯನ್ನಾಗಿ ಮಾಡಿಕೊಂಡಿದ್ದಾರೆ ಮತ್ತು ಅಲ್ಲಾಹನ ಮಾರ್ಗದಿಂದ ಜನರನ್ನು ತಡೆಯುತ್ತಾರೆ, ಅವರಿಗೆ ಅಪಮಾನಕರ ಯಾತನೆ ಇದೆ.

(17) ಅವರ ಸಂಪತ್ತುಗಳಾಗಲಿ ಅವರ ಸಂತಾನಗಳಾಗಲಿ ಅಲ್ಲಾಹನ ಶಿಕ್ಷೆಯಿಂದ ಸ್ವಲ್ಪವೂ ಪ್ರಯೋಜನವನ್ನು ನೀಡಲಾರವು. ಅವರು ನರಕವಾಸಿಗಳಾಗಿದ್ದಾರೆ ಮತ್ತು ಅದರಲ್ಲಿ ಅವರು ಶಾಶ್ವತವಾಗಿರುವರು.

(18) ಅಲ್ಲಾಹನು ಅವರೆಲ್ಲರನ್ನೂ ಜೀವಂತಗೊಳಿಸಿ ಎಬ್ಬಿಸುವ ದಿನ ಅವರು ನಿಮ್ಮ ಮುಂದೆ ಆಣೆಹಾಕುವಂತೆ ಅಲ್ಲಾಹನ ಮುಂದೆಯೂ ಆಣೆ ಹಾಕಲಿದ್ದಾರೆ ಮತ್ತು ಅವರು ತಾವು ಯಾವುದೊ ಕಾರ್ಯ ಸಾಧಿಸಿಬಿಡುವೆವೆಂದು ಭಾವಿಸಿಕೊಳ್ಳುವರು ನಿಜವಾಗಿಯೂ ಅವರು ಸುಳ್ಳುಗಾರರಾಗಿದ್ದಾರೆ.

(19) ಶೈತಾನನು ಅವರ ಮೇಲೆ ಹಿಡಿತವನ್ನು ಸಾಧಿಸಿದ್ದಾನೆ ಮತ್ತು ಅವರಿಂದ ಅಲ್ಲಾಹನ ಸ್ಮರಣೆಯನ್ನು ಮರೆಸಿದ್ದಾನೆ ಅವರು ಶೈತಾನನ ಪಕ್ಷದವರಾಗಿದ್ದಾರೆ ನಿಸ್ಸಂದೇಹವಾಗಿಯೂ ಶೈತಾನನ ಪಕ್ಷವೇ ನಷ್ಟಹೊಂದುವAತಹದ್ದಾಗಿದೆ.

(20) ಖಂಡಿತವಾಗಿಯೂ ಅಲ್ಲಾಹನನ್ನು ಮತ್ತು ಅವನ ಸಂದೇಶವಾಹಕರನ್ನು ವಿರೋಧಿಸುವವರೇ ಅತ್ಯಂತ ನಿಂದ್ಯರಲ್ಲಿ ಸೇರಿದವರಾಗಿದ್ದಾರೆ.

(21) ನಾನು ಮತ್ತು ನನ್ನ ಸಂದೇಶವಾಕರೇ ವಿಜಯ ಸಾಧಿಸುವೆವೆಂದು ಅಲ್ಲಾಹನು ದಾಖಲಿಸಿದ್ದಾನೆ. ವಾಸ್ತವದಲ್ಲಿ ಅಲ್ಲಾಹನು ಸರ್ವಶಕ್ತನು ಪ್ರತಾಪಶಾಲಿಯು ಆಗಿದ್ದಾನೆ.

(22) ಅಲ್ಲಾಹನಲ್ಲೂ ಅಂತ್ಯದಿನದಲ್ಲೂ ವಿಶ್ವಾಸವಿಡುವ ಜನರನ್ನು ಅಲ್ಲಾಹನನ್ನೂ ಅವನ ಸಂದೇಶವಾಹಕರನ್ನೂ ವಿರೋಧಿಸುವವರೊಂದಿಗೆ ಸ್ನೇಹ ಹೊಂದಿರುವುದಾಗಿ ನೀವು ಎಂದಿಗೂ ಕಾಣಲಾರಿರಿ. ಅವರು ಅವರ ತಂದೆಯAದಿರು ಇಲ್ಲವೇ, ಅವರ ಪುತ್ರರುಇಲ್ಲವೇ, ಅವರ ಸಹೋದರರು ಇಲ್ಲವೇ, ಅವರ ಆಪ್ತ ಕುಟುಂಬಿಕರು ಆಗಿದ್ದರೂ ಸರಿಯೇ, ಅವರ ಹೃದಯಗಳಲ್ಲಿ ಅಲ್ಲಾಹನು ಸತ್ಯ ವಿಶ್ವಾಸವನ್ನು ದಾಖಲಿಸಿರುತ್ತಾನೆ, ಮತ್ತು ಅವನು ತನ್ನ ಪ್ರಕಾಶದ ಮೂಲಕ ಅವರನ್ನು ಪ್ರಬಲಗೊಳಿಸಿದ್ದಾನೆ. ಹಾಗೂ ಅವನು ಅವರನ್ನು ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವ ಸ್ವರ್ಗೊದ್ಯಾನಗಳಲ್ಲಿ ಪ್ರವೇಶಗೊಳಿಸುವನು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು, ಅಲ್ಲಾಹನು ಅವರಿಂದ ಸಂತುಷ್ಟನಾದನು ಹಾಗೂ ಅವರೂ ಅವರಿಂದ ಸಂತುಷ್ಟರಾಗಿದ್ದಾರೆ, ಅವರೇ ಅಲ್ಲಾಹನ ಪಕ್ಷದವರು ತಿಳಿದುಕೊಳ್ಳಿರಿ! ಅಲ್ಲಾಹನ ಪಕ್ಷದವರೇ ಯಶಸ್ಸು ಪಡೆಯುವವರಾಗಿದ್ದಾರೆ,