6 - Al-An'aam ()

|

(1) ಆಕಾಶಗಳನ್ನು, ಭೂಮಿಯನ್ನು ಸೃಷ್ಟಿಸಿದ ಹಾಗೂ ಅಂಧಕಾರಗಳನ್ನು ಮತ್ತು ಪ್ರಕಾಶವನ್ನು ಉಂಟುಮಾಡಿದ ಅಲ್ಲಾಹನಿಗೆ ಸರ್ವಸ್ತುತಿಗಳು ಹಾಗಿದ್ದೂ ಸತ್ಯನಿಷೇಧಿಗಳು ಇತರರನ್ನು ತಮ್ಮ ಪರಿಪಾಲಕ ಪ್ರಭುವಿಗೆ ಸಮಾನರೆಂದು ನಿರ್ಣಯಿಸುತ್ತಾರೆ.

(2) ಅವನು ನಿಮ್ಮನ್ನು (ಮೊದಲಬಾರಿ) ಮಣ್ಣಿನಿಂದ ಸೃಷ್ಟಿಸಿದನು. ನಂತರ (ಮರಣದ) ಒಂದು ಅವಧಿಯನ್ನು ನಿಶ್ಚಯಿಸಿದನು ಮತ್ತು ಅವನ ಬಳಿ (ಪುನಃ ಜೀವಂತಗೊಳಿಸುವ) ನಿಶ್ಚಿತಾವಧಿಯಿದೆ. ಹಾಗಿದ್ದೂ ನೀವು ಸಂದೇಹಪಡುತ್ತಿರುವಿರಾ.

(3) ಆಕಾಶಗಳಲ್ಲೂ, ಭೂಮಿಯಲ್ಲೂ ಇರುವ ನೈಜ ಆರಾಧ್ಯನು ಅಲ್ಲಾಹನಾಗಿದ್ದಾನೆ. ನಿಮ್ಮ ರಹಸ್ಯ ಸ್ಥಿತಿಗತಿಗಳನ್ನೂ, ಬಹಿರಂಗ ಸ್ಥಿತಿಗಳನ್ನೂ ಅವನು ಅರಿಯುತ್ತಾನೆ ಮತ್ತು ನೀವು ಮಾಡುತ್ತಿರುವ ಕರ್ಮಗಳನ್ನು ಅವನು ಅರಿಯುತ್ತಾನೆ.

(4) ಮತ್ತು ಅವರ ಪ್ರಭುವಿನ ದೃಷ್ಟಾಂತಗಳಿAದ ಯಾವುದೇ ದೃಷ್ಟಾಂತ ಅವರ ಬಳಿಗೆ ಬಂದರೂ ಅವರದನ್ನು ಕಡೆಗಣಿಸದೇ ಇರಲಿಲ್ಲ.

(5) ಸತ್ಯ (ಕುರ್‌ಆನ್) ಅವರ ಬಳಿಗೆ ಬಂದಾಗ ಅದನ್ನು ತಿರಸ್ಕರಿಸಿಬಿಟ್ಟರು. ಅದ್ದರಿಂದ ಸದ್ಯದಲ್ಲೇ ಅವರು ಯಾವುದನ್ನು ಅಪಹಾಸ್ಯ ಮಾಡುತ್ತಿದ್ದರೋ ಅದರ ಸುದ್ದಿಗಳು ಅವರಿಗೆ ತಲುಪಲಿವೆ.

(6) ಅವರಿಗಿಂತ ಮೊದಲು ನಾವು ಅದೆಷ್ಟೋ ತಲೆಮಾರುಗಳನ್ನು ನಾಶಗೊಳಿಸಿದ್ದೇವೆಂಬುದನ್ನು ಅವರು ನೋಡಲಿಲ್ಲವೇ? ನಾವು ಅವರಿಗೆ ನಿಮಗೆ ನೀಡಿರದಂತಹ ಶಕ್ತಿ ಸಾಮರ್ಥ್ಯವನ್ನು ನೀಡಿದ್ದೆವು. ನಾವು ಅವರ ಮೇಲೆ ಧಾರಾಕಾರವಾಗಿ ಮಳೆಯನ್ನು ಸುರಿಸಿದೆವು ಮತ್ತು ಅವರ ತಳಭಾಗದಿಂದ ಕಾಲುವೆಗಳನ್ನು ಹರಿಸಿದೆವು. ನಂತರ ನಾವು ಅವರನ್ನು ಅವರ ಪಾಪಗಳ ನಿಮಿತ್ತ ನಾಶಗೊಳಿಸಿ ಬಿಟ್ಟೆವು ಮತ್ತು ಅವರ ನಂತರ ಬೇರೆ ತಲೆಮಾರುಗಳನ್ನು ಸೃಷ್ಟಿಸಿದೆವು.

(7) (ಓ ಪೈಗಂಗರರೇ) ನಾವು ನಿಮ್ಮ ಮೇಲೆ ಕಾಗದದಲ್ಲಿ ಬರೆದಿರುವ ಯಾವುದದರೂ ಒಂದು ಗ್ರಂಥವನ್ನು ಅವತೀರ್ಣಗೊಳಿಸಿ ನಂತರ ಅವರು ಅದನ್ನು ಸ್ವತಃ ತಮ್ಮ ಕೈಗಳಿಂದ ಸ್ಪರ್ಶಿಸಿ ನೋಡಿದರೂ ‘ಇದು ಸ್ಪಷ್ಟವಾದ ಜಾದುವಲ್ಲದೆ ಇನ್ನೇನೂ ಅಲ್ಲ' ಎಂದೇ ಸತ್ಯನಿಷೇಧಿಗಳು ಹೇಳುವರು.

(8) ಅವರೊಂದಿಗೆ (ಪೈಗಂಬರರೊAದಿಗೆ) ಓರ್ವ ದೇವಚರನನ್ನು ಏಕೆ ಇಳಿಸಲಾಗಿಲ್ಲ ಎಂದು ಅವರು ಹೇಳುತ್ತಾರೆ ಮತ್ತು ನಾವು ದೇವಚರರನ್ನು ಇಳಿಸುತ್ತಿದ್ದರೆ ಅವರ ಕಥೆಯೇ ಮುಗಿಸಲಾಗುತ್ತಿತ್ತು. ನಂತರ ಅವರಿಗೆ ಸ್ವಲ್ಪವೂ ಕಾಲಾವಧಿಯನ್ನು ನೀಡಲಾಗುತ್ತಿರಲಿಲ್ಲ.

(9) ಇನ್ನು ನಾವು ದೇವಚರರÀನ್ನು ಇಳಿಸುತ್ತಿದ್ದರೂ ಮನುಷ್ಯನನ್ನಾಗಿಯೇ ರೂಪಿಸುತ್ತಿದ್ದೆವು ಮತ್ತು ಈಗವರು ಸಿಲುಕಿರುವಂತಹ ಗೊಂದಲದಲ್ಲಿ ಆಗಲೂ ನಾವು ಅವರನ್ನು ಸಿಲುಕಿಸುತ್ತಿದ್ದೆವು.

(10) ಓ ಪೈಗಂಬರರೇ ವಾಸ್ತವದಲ್ಲಿ ನಿಮಗಿಂತ ಮೊದಲು ಅನೇಕ ಸಂದೇಶವಾಹಕರು ಅಪಹಾಸ್ಯಕ್ಕೊಳಗಾಗಿದ್ದರು. ನಂತರ ಅವರನ್ನು ಗೇಲಿ ಮಾಡುತ್ತಿದ್ದವರಿಗೆ ಅವರು ಅಪಹಾಸ್ಯ ಮಾಡುತ್ತಿದ್ದಂತಹ ಶಿಕ್ಷೆಯು ಆವರಿಸಿಬಿಟ್ಟಿತು.

(11) ಹೇಳಿರಿ: ನೀವು ಭೂಮಿಯಲ್ಲಿ ಸಂಚರಿಸಿರಿ. ಅನಂತರ ಸತ್ಯನಿಷೇಧಿಗಳ ಅಂತ್ಯವು ಹೇಗಾಯಿತೆಂಬುದನ್ನು ನೋಡಿರಿ.

(12) ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿ ಇರುವುದೆಲ್ಲವೂ ಯಾರದ್ದೆಂದು ಕೇಳಿರಿ. ನೀವು ಹೇಳಿರಿ: ಎಲ್ಲವೂ ಅಲ್ಲಾಹನದ್ದಾಗಿದೆ. ಅವನು ಸ್ವತಃ ತನ್ನ (ಸೃಷ್ಟಿಗಳ) ಮೇಲೆ ಕಾರುಣ್ಯ ತೋರುವುದನ್ನು ಕಡ್ಡಾಯವಾಗಿಸಿದ್ದಾನೆ. ಪುನರುತ್ಥಾನದ ದಿನ ಅವನು ನಿಮ್ಮನ್ನು ಖಂಡಿತವಾಗಿಯು ಒಟ್ಟುಗೂಡಿಸುವನು. ಇದರಲ್ಲಿ ಯಾವುದೇ ಸಂದೇಹವಿಲ್ಲ. ಯಾರು ಸ್ವತಃ ತಮ್ಮನ್ನು ನಷ್ಟಕ್ಕೀಡು ಮಾಡಿದ್ದಾರೋ ಅವರು ಸತ್ಯವಿಶ್ವಾಸವಿಡಲಾರರು.

(13) ರಾತ್ರಿಯಲ್ಲೂ, ಹಗಲಿನಲ್ಲೂ ಇರುವುದೆಲ್ಲವೂ ಅವನದ್ದು. ಅವನು ಚೆನ್ನಾಗಿ ಅಲಿಸುವವನು, ಮಹಾ ಜ್ಞಾನಿಯು ಆಗಿದ್ದಾನೆ.

(14) ರಾತ್ರಿಯಲ್ಲೂ, ಹಗಲಿನಲ್ಲೂ ಇರುವುದೆಲ್ಲವೂ ಅವನದ್ದು. ಅವನು ಚೆನ್ನಾಗಿ ಅಲಿಸುವವನು, ಮಹಾ ಜ್ಞಾನಿಯು ಆಗಿದ್ದಾನೆ.

(15) ಹೇಳಿರಿ: ನಾನು ನನ್ನ ಪ್ರಭುವಿನ ಆಜ್ಞೋಲ್ಲಂಘನೆ ಮಾಡಿದರೆ ಒಂದು ಭಯಾನಕ ದಿನದ ಶಿಕ್ಷೆಯಿಂದ ಭಯಪಡುತ್ತೇನೆ.

(16) ಆ ದಿನ ಯಾರನ್ನು ಆ ಶಿಕ್ಷೆಯಿಂದ ಪಾರುಗೊಳಿಸಲಾಗುವುದೋ ಅಲ್ಲಾಹನು ಅವನ ಮೇಲೆ ಮಹಾ ಕರುಣೆಯನ್ನು ತೋರಿಸಿದನು. ಮತ್ತು ಇದು ಸ್ಪಷ್ಟ ಯಶಸ್ಸಾಗಿದೆ.

(17) ಪೈಗಂಬರರೇ ನಿಮಗೆ ಅಲ್ಲಾಹನು ಯಾವುದಾದರೂ ಹಾನಿಯನ್ನುಂಟು ಮಾಡಿದರೆ ಅದನ್ನು ನೀಗಿಸಲು ಅವನ ಹೊರತು ಬೇರಾರೂ ಇಲ್ಲ ಮತ್ತು ಅಲ್ಲಾಹನು ನಿಮಗೆ ಯಾವುದಾದರೂ ಒಳಿತನ್ನುಂಟು ಮಾಡುವುದಾದರೆ ಅವನು ಸಕಲ ಕಾರ್ಯಗಳ ಮೇಲೂ ಸಂಪೂರ್ಣ ಸಾಮರ್ಥ್ಯವುಳ್ಳವನಾಗಿದ್ದಾನೆ.

(18) ಮತ್ತು ಅವನು ತನ್ನ ದಾಸರ ಮೇಲೆ ಪ್ರಾಬಲ್ಯವುಳ್ಳವನೂ, ಉನ್ನತನೂ ಆಗಿದ್ದಾನೆ ಮತ್ತು ಅವನು ಯುಕ್ತಿವಂತನೂ, ಸಂಪೂರ್ಣ ಅರಿವುಳ್ಳವನೂ ಆಗಿದ್ದಾನೆ.

(19) ಹೇಳಿರಿ: (ಓ ಪೈಗಂಬರರೇ) ಯಾರ ಸಾಕ್ಷö್ಯವು ಎಲ್ಲಕ್ಕಿಂತ ದೊಡ್ಡ ಸಾಕ್ಷö್ಯವಾಗಿದೆ? ಹೇಳಿರಿ: ನನ್ನ ಮತ್ತು ನಿಮ್ಮ ನಡುವೆ ಅಲ್ಲಾಹನು ಸಾಕ್ಷಿಯಾಗಿದ್ದಾನೆ. ಈ ಕುರ್‌ಆನನ್ನು ನನಗೆ ದಿವ್ಯ ಸಂದೇಶವಾಗಿ ನೀಡಲ್ಪಟ್ಟಿರುವುದು ಇದರ ಮೂಲಕ ನಿಮಗೂ, ಈ ಕುರ್‌ಆನ್ ತಲುಪುವ ಸರ್ವರಿಗೂ ನಾನು ಮುನ್ನೆಚ್ಚರಿಕೆ ನೀಡಲೆಂದಾಗಿದೆ. ನಿಜವಾಗಿಯು ಅಲ್ಲಾಹನೊಂದಿಗೆ ಇತರೆ ಆರಾಧ್ಯರೂ ಇರುವರೆಂದು ನೀವು ಸಾಕ್ಷö್ಯ ವಹಿಸುತ್ತೀರಾ? ಹೇಳಿರಿ: ನಾನು ಸಾಕ್ಷö್ಯ ವಹಿಸುವುದಿಲ್ಲ. ನೀವು ಹೇಳಿರಿ: ಅವನು ಕೇವಲ ಏಕೈಕ ಆರಾಧ್ಯನಾಗಿದ್ದಾನೆ. ಮತ್ತು ನಾನು ನೀವು ಮಾಡುತ್ತಿರುವ ದೇವ ಸಹಭಾಗಿತ್ವದಿಂದ ಸಂಬAಧಮುಕ್ತನಾಗಿದ್ದೇನೆ.

(20) ನಾವು ಯಾರಿಗೆ ಗ್ರಂಥವನ್ನು ನೀಡಿದ್ದೇವೆಯೋ (ಯಹೂದಿಯರು) ಅವರು ತಮ್ಮ ಮಕ್ಕಳನ್ನು ಗುರುತಿಸುವಂತೆ ಸಂದೇಶವಾಹಕ (ಮುಹಮ್ಮದ್(ಸ) ರವರನ್ನು ಗುರುತಿಸುತ್ತಾರೆ. ಆದರೆ ಸ್ವತಃ ತಮ್ಮನ್ನು ನಷ್ಟಕ್ಕೀಡು ಮಾಡಿದವರು ಸತ್ಯವಿಶ್ವಾಸವಿಡುವುದಿಲ್ಲ.

(21) ಅಲ್ಲಾಹನ ಮೇಲೆ ಸುಳ್ಳು ಹೆಣೆದವನಿಗಿಂತ ಅಥವಾ ಅಲ್ಲಾಹನ ದೃಷ್ಟಾಂತಗಳನ್ನು ಸುಳ್ಳೆಂದು ಹೇಳಿದವನಿಗಿಂತ ದೊಡ್ಡ ಅಕ್ರಮಿ ಇನ್ನಾರಿದ್ದಾನೆ? ಇಂತಹ ಅಕ್ರಮಿಗಳು ಯಶಸ್ವಿಯಾಗಲಾರರು.

(22) ನಾವು ಇವರೆಲ್ಲರನ್ನು ಒಟ್ಟುಗೂಡಿಸುವ ದಿನ ಬಹುದೇವಾರಾಧಕರೊಂದಿಗೆ ಕೇಳುವೆವು: ನೀವು ಆರಾಧ್ಯರೆಂದು ವಾದಿಸುತ್ತಿದ್ದ ನಿಮ್ಮ ಸಹಭಾಗಿಗಳು ಎಲ್ಲಿದ್ದಾರೆ?

(23) ಅನಂತರ ಅವರಿಗೆ “ನಮ್ಮ ಪ್ರಭುವಾದ ಅಲ್ಲಾಹನಾಣೆ! ನಾವು ಬಹುದೇವಾರಾಧಕರಾಗಿರಲಿಲ್ಲ” ಎಂದು ಹೇಳುವುದರ ವಿನಃ ಇನ್ನೇನೂ ನೆಪವಿರಲಾರದು.

(24) ಆಗ ಅವರು ಸ್ವತಃ ತಮ್ಮ ಮೇಲೆಯೇ ಹೇಗೆ ಸುಳ್ಳು ಹೇಳಿದ್ದಾರೆಂಬುದನ್ನು ನೋಡಿರಿ? ಮತ್ತು ಅವರು ಸುಳ್ಳು ಸುಳ್ಳಾಗಿ ಹೇಳುತ್ತಿದ್ದ ಮಿಥ್ಯರಾಧ್ಯರು ಮಾಯವಾಗಿಬಿಟ್ಟವು .

(25) ಮತ್ತು ಅವರಲ್ಲಿ ಕೆಲವರು ಮೇಲ್ನೋಟಕ್ಕೆ ನಿಮ್ಮ ಮಾತನ್ನು ಕಿವಿಗೊಟ್ಟು ಕೇಳುತ್ತಾರೆ. ಮತ್ತು ನಾವು (ಅಲ್ಲಾಹ್) ಅವರದನ್ನು ಗ್ರಹಿಸದಂತೆ ಅವರ ಹೃದಯಗಳ ಮೇಲೆ ಪರದೆಯನ್ನು ಹಾಕಿದ್ದೇವೆ ಮತ್ತು ಅವರ ಕಿವಿಗಳಲ್ಲಿ ತಡೆÀಯನ್ನಿಟ್ಟಿದ್ದೇವೆ. ಮತ್ತು ಅವರು ಸಕಲ ದೃಷ್ಟಾಂತಗಳನ್ನು ಕಂಡರೂ ಅವುಗಳ ಮೇಲೆ ವಿಶ್ವಾಸವಿಡುವುದಿಲ್ಲ. ಇನ್ನು ಅವರು ನಿಮ್ಮ ಬಳಿಗೆ ಬಂದರೆ ತರ್ಕ ಮಾಡುತ್ತಾರೆ. ಇವು ಪೂರ್ವಿಕರ ಕಟ್ಟು ಕಥೆಗಳಲ್ಲದೇ ಇನ್ನೇನೂ ಅಲ್ಲ ಎಂದು ಸತ್ಯನಿಷೇಧಿಗಳು ಹೇಳುತ್ತಾರೆ.

(26) ಅವರು ಇದರಿಂದ (ಕುರ್‌ಆನಿನಿಂದ) ಜನರನ್ನು ತಡೆಯುತ್ತಾರೆ ಮತ್ತು ಸ್ವÀತಃ ಅವರೂ ಇದರಿಂದ ದೂರವಿರುತ್ತಾರೆ ಮತ್ತು ಅವರು ಸ್ವತಃ ತಮ್ಮನ್ನೇ ನಾಶ ಮಾಡುತ್ತಿದ್ದಾರೆ. ಹಾಗೂ ಒಂದಿಷ್ಟೂ ಭೋಧವನ್ನು ಹೊಂದಿರುವುದಿಲ್ಲ.

(27) ಅವರನ್ನು ನರಕದ ಬಳಿ ನಿಲ್ಲಿಸಲಾಗುವಾಗ ಅವರ ಅವಸ್ಥೆಯನ್ನು ನೋಡಲು ನಿಮಗೆ ಸಾಧ್ಯವಾಗುತ್ತಿದ್ದರೆ ಆಗ ಅವರು ಹೇಳುವರು: ಅಕಟ ನಮ್ಮನ್ನು ಪುನಃ (ಭೂಲೋಕಕ್ಕೆ) ಕಳುಹಿಸಲಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಮತ್ತು ಹಾಗೇನಾದರೂ ಆದರೆ ನಾವು ನಮ್ಮ ಪ್ರಭುವಿನ ದೃಷ್ಟಾಂತಗಳನ್ನು ಸುಳ್ಳಾಗಿಸುತ್ತಿರಲಿಲ್ಲ. ಮತ್ತು ಸತ್ಯವಿಶ್ವಾಸಿಗಳೊಂದಿಗೆ ಸೇರಿದವರಾಗುತ್ತಿದ್ದೇವು.

(28) ವಾಸ್ತವದಲ್ಲಿ ಅವರು ಈ ಮೊದಲು ಯಾವುದನ್ನು ಮರೆಮಾಚುತ್ತಿದ್ದರೋ ಅದು ಅವರ ಮುಂದೆ ಬಹಿರಂಗಗೊAಡಿದೆ ಮತ್ತು ಅವರನ್ನು ಪುನಃ ಕಳುಹಿಸಲಾದರೂ ಯಾವುದರಿಂದ ಅವರನ್ನು ತಡೆಯಲಾಗಿತ್ತೋ ಅದೇ ಕೃತ್ಯವನ್ನು ಅವರು ಮಾಡುವರು. ಖಂಡಿತವಾಗಿಯು ಅವರು ಸುಳ್ಳುಗಾರರಾಗಿದ್ದಾರೆ.

(29) ಮತ್ತು ಅವರು ಹೇಳುತ್ತಾರೆ: 'ನಮ್ಮ ಜೀವನವೆಂದರೆ ಕೇವಲ ಈ ಇಹಲೋಕ ಜೀವನವಲ್ಲದೆ ಇನ್ನೇನೂ ಇಲ್ಲ ಮತ್ತು ನಾವು (ಮರಣದ ನಂತರ) ಪುನರ್ಜೀವಗೊಳಿಸಲ್ಪಡುವವರಲ್ಲ.

(30) ಮತ್ತು ಅವರು ತಮ್ಮ ಪ್ರಭುವಿನ ಮುಂದೆ ನಿಲ್ಲಿಸಲಾಗುವ ಸಂದರ್ಭವನ್ನು ತಾವು ಕಂಡಿರುತ್ತಿದ್ದರೆ! ಅಲ್ಲಾಹನು ಕೇಳುವನು: ಈ ಸಂಗತಿಯು ವಾಸ್ತವಿಕತೆಯಲ್ಲವೇ? ಅವರು ಹೇಳುವರು: ನಿಸ್ಸಂಶಯವಾಗಿಯೂ, ನಮ್ಮ ಪ್ರಭುವಿನ ಮೇಲಾಣೆ. ಅಲ್ಲಾಹನು ಹೇಳುವನು: ನೀವು ನಿಮ್ಮ ಸತ್ಯನಿಷೇಧದ ಫಲವಾಗಿ ಈ ಶಿಕ್ಷೆಯನ್ನು ಸವಿಯಿರಿ.

(31) ನಿಸ್ಸಂಶಯವಾಗಿಯು ಅಲ್ಲಾಹನೊಂದಿಗೆ ಭೇಟಿಯಾಗುವುದನ್ನು ಸುಳ್ಳಾಗಿಸಿದವರು ನಷ್ಟಕ್ಕೀಡಾದರು. ಕೊನೆಗೆ ಆ ಘಳಿಗೆಯು (ಪ್ರಳಯವು) ಹಠಾತ್ತನೆ ಬಂದೆರಗಿದರೆ ಅವರು ಹೇಳುವರು: 'ಅಯ್ಯೋ ನಮ್ಮ ದುರ್ಗತಿಯೆ ನಾವು ಈ ವಿಷಯದ ಕುರಿತು ಪ್ರಮಾದವೆಸಗಿದೆವಲ್ಲಾ'. ಅವರು ತಮ್ಮ ಪಾಪಗಳ ಭಾರವನ್ನು ತಮ್ಮ ಬೆನ್ನುಗಳಲ್ಲಿ ಹೊತ್ತಿರುವರು. ಎಚ್ಚರಿಕೆ! ಅವರು ಹೊರುವ ಭಾರವು ಅದೆಷ್ಟು ನಿಕೃಷ್ಟವಾದದ್ದು!

(32) ಐಹಿಕ ಜೀವನವು ಆಟ ಮತ್ತು ವಿನೋದವಲ್ಲದೆ ಇನ್ನೇನೂ ಅಲ್ಲ ಮತ್ತು ಭಯಭಕ್ತಿ ಪಾಲಿಸುವವರಿಗೆ ಪರಲೋಕವೇ ಉತ್ತಮವಾಗಿದೆ. ನೀವು ಚಿಂತಿಸುವುದಿಲ್ಲವೇ?

(33) ಅವರ ಮಾತುಗಳು ಖಂಡಿತವಾಗಿ ನಿಮ್ಮನ್ನು ದುಃಖಕ್ಕೀಡು ಮಾಡುತ್ತಿವೆಯೆಂದು ನಾವು ಅರಿತಿದ್ದೇವೆ. ವಾಸ್ತವದಲ್ಲಿ ಅವರು ನಿಮ್ಮನ್ನು ಸುಳ್ಳಾಗಿಸುತ್ತಿಲ್ಲ ಈ ಅಕ್ರಮಿಗಳಂತು ಅಲ್ಲಾಹನ ದೃಷ್ಟಾಂತಗಳನ್ನು ಧಿಕ್ಕರಿಸುತ್ತಿದ್ದಾರೆ.

(34) ಖಂಡಿತವಾಗಿಯು ನಿಮಗಿಂತ ಮುಂಚೆ ಅದೆಷ್ಟೋ ಸಂದೇಶವಾಹಕರು ಧಿಕ್ಕರಿಸಲ್ಪಟ್ಟಿದ್ದಾರೆ. ಆದರೆ ಅವರು ತಮ್ಮನ್ನು ನಿರಾಕರಿಸಿದ್ದನ್ನು ಹಿಂಸಿಸಲಾಗಿದ್ದನ್ನು ಸಹಿಸಿಕೊಂಡರು. ಕೊನೆಗೆ ನಮ್ಮ ಸಹಾಯವು ಅವರಿಗೆ ತಲುಪಿತು. ಅಲ್ಲಾಹನ ನಿರ್ಣಯಗಳನ್ನು ಬದಲಾಯಿಸುವವನಾರಿಲ್ಲ. ಮತ್ತು ನಿಮ್ಮ ಬಳಿಗೆ ಕೆಲವು ಸಂದೇಶವಾಹಕರ ವೃತ್ತಾಂತಗಳು ತಲುಪಿರುತ್ತವೆ.

(35) ಮತ್ತು ಅವರ ವಿಮುಖತೆಯು ನಿಮಗೆ ಅಸಹನೀಯವಾಗಿ ತೋರುವುದಾದರೆ ನಿಮಗೆ ಸಾಧ್ಯವಿದ್ದರೆ ಭೂಮಿಯಲ್ಲಿ ಒಂದು ಸುರಂಗವನ್ನು ತೋಡಿರಿ ಅಥವಾ ಆಕಾಶದಲ್ಲಿ ಒಂದು ಏಣಿಯನ್ನು ಹುಡುಕಿ ಅನಂತರ ಅವರಿಗೆ ದೃಷ್ಟಾಂತವೊAದನ್ನು (ಕುರುಹನ್ನು) ತಂದು ಕೊಡಲಿಕ್ಕಾಗುವುದಾದರೆ ಹಾಗೆ ಮಾಡಿರಿ.ಅಲ್ಲಾಹನು ಇಚ್ಛಿಸುತ್ತಿದ್ದರೆ ಅವರೆಲ್ಲರನ್ನು ಸನ್ಮಾರ್ಗದಲ್ಲಿ ಒಟ್ಟುಗೂಡಿಸುತ್ತಿದ್ದನು. ಆದುದರಿಂದ ನೀವು ಅವಿವೇಕಿಗಳ ಪೈಕಿ ಸೇರದಿರಿ.

(36) ಮನಃ ಪೂರ್ವಕವಾಗಿ ಆಲಿಸುವವರು ಮಾತ್ರ ಓಗೊಡುತ್ತಾರೆ ಮತ್ತು ಮೃತರನ್ನು ಅಲ್ಲಾಹನು ಜೀವಂತಗೊಳಿಸಿ ಎಬ್ಬಿಸುವನು. ನಂತರ ಎಲ್ಲರೂ ಅವನೆಡೆಗೇ ಮರಳಿಸಲಾಗುವರು.

(37) ಇವರ ಮೇಲೆ ಇವರ ಪ್ರಭುವಿನ ವತಿಯಿಂದ ಯಾವುದಾದರೂ ದೃಷ್ಟಾಂತವೇಕೆ ಇಳಿಸಲಾಗುವುದಿಲ್ಲ ಎಂದು ಅವರು ಕೇಳುತ್ತಾರೆ. ನೀವು ಹೇಳಿರಿ: ನಿಸ್ಸಂಶಯವಾಗಿಯು ದೃಷ್ಟಾಂತವನ್ನು (ಕುರುಹು) ಇಳಿಸಲು ಅಲ್ಲಾಹನು ಸರ್ವ ಸಮರ್ಥನಿದ್ದಾನೆ. ಆದರೆ ಅವರ ಪೈಕಿ ಹೆಚ್ಚಿನವರು ಅರಿತುಕೊಳ್ಳುವುದಿಲ್ಲ.

(38) ಭೂಮಿಯಲ್ಲಿ ಚಲಿಸುತ್ತಿರುವ ಜೀವಿಗಳು, ಎರಡು ರೆಕ್ಕೆಗಳಿಂದ ಹಾರಾಡುತ್ತಿರುವ ಹಕ್ಕಿಗಳು ನಿಮ್ಮಂತಹ ವರ್ಗಗಳಾಗಿವೆ. ಗ್ರಂಥದಲ್ಲಿ ನಾವು ಯಾವುದನ್ನೂ ದಾಖಲಿಸದೇ ಬಿಟ್ಟಿಲ್ಲ. ನಂತರ ಅವರೆಲ್ಲರೂ ತಮ್ಮ ಪ್ರಭುವಿನೆಡೆಗೆ ಒಟ್ಟುಗೂಡಿಸಲಾಗುವರು.

(39) ಮತ್ತು ಯಾರು ನಮ್ಮ ದೃಷ್ಟಾಂತಗಳನ್ನು ಸುಳ್ಳಾಗಿಸುವರೋ ಅವರು ಕಿವುಡರೂ, ಮೂಕರೂ ಮತ್ತು ಅಂಧಕಾರಗಳಲ್ಲಿ ಅಲೆದಾಡುತ್ತಿದ್ದಾರೆ. ಅಲ್ಲಾಹನು ತಾನು ಇಚ್ಛಿಸುವವರನ್ನು ದಾರಿಗೆಡಿಸುತ್ತಾನೆ ಮತ್ತು ತಾನಿಚ್ಛಿಸುವವರನ್ನು ಸನ್ಮಾರ್ಗದಲ್ಲಿ ಸೇರಿಸುತ್ತಾನೆ.

(40) ಹೇಳಿರಿ: ಒಂದಿಷ್ಟು ಆಲೋಚಿಸಿದ್ದೀರಾ? ಅಲ್ಲಾಹನ ಶಿಕ್ಷೆಯು ನಿಮ್ಮ ಮೇಲೆರಗಿದರೆ ಅಥವಾ ಕೊನೆ ಘಳಿಗೆ (ಪ್ರಳಯ) ನಿಮ್ಮ ಮೇಲೆ ಬಂದೆರಗಿದರೆ ಅಲ್ಲಾಹನ ಹೊರತು ಇತರರನ್ನೇ ನೀವು ಕರೆದು ಪ್ರಾರ್ಥಿಸುವಿರಾ? ನೀವು ಸತ್ಯಸಂಧರಾಗಿದ್ದರೆ ಹೇಳಿರಿ.

(41) ಇಲ್ಲ, ನೀವು ಅವನನ್ನು ಮಾತ್ರ ಕರೆದು ಪ್ರಾರ್ಥಿಸುವಿರಿ. ನಂತರ ನೀವು ಯಾವುದಕ್ಕಾಗಿ ಪ್ರಾರ್ಥಿಸುವಿರೋ ಅವನಿಚ್ಛಿಸಿದರೆ ಅದನ್ನು ನೀಗಿಸಬಹುದು ಮತ್ತು ಆಗ ನೀವು ಅಲ್ಲಾಹನ ಸಹಭಾಗಿಗಳನ್ನಾಗಿ ನಿಶ್ಚಯಿಸುತ್ತಿದ್ದವರನ್ನೆಲ್ಲಾ ಮರೆತುಬಿಡುವಿರಿ.

(42) ನಿಮಗಿಂತ ಮುಂಚೆ ಗತಸಮುದಾಯಗಳೆಡೆಗೂ ನಾವು ಸಂದೇಶವಾಹಕರನ್ನು ನಿಯೋಗಿಸಿದ್ದೇವೆ. ಅವರು ದೈನ್ಯತೆಯನ್ನು ತೋರಲೆಂದು ನಾವು (ಅವರ ಪಾಪಗಳ ನಿಮಿತ್ತ) ಅವರನ್ನು ಸಂಕಷ್ಟ ಮತ್ತು ರೋಗರುಜಿನಗಳಿಗೆ ಸಿಲುಕಿಸಿದೆವು.

(43) ಹಾಗೆಯೇ ಅವರಿಗೆ ನಮ್ಮ ಶಿಕ್ಷೆಯು ಬಂದಾಗ ಅವರೇಕೆ ದೈನ್ಯತೆ ತೋರಿಸಲಿಲ್ಲ? ಆದರೆ ಅವರ ಹೃದಯಗಳು ಕಠೋರಗೊಂಡವು ಮತ್ತು ಶೈತಾನನು ಅವರ ಕರ್ಮಗಳನ್ನು ಅವರಿಗೆ ಮನಮೋಹಕಗೊಳಿಸಿದನು.

(44) ಅನಂತರ ಅವರು ತಮಗೆ ಉಪದೇಶ ನೀಡಲಾಗುತ್ತಿದ್ದಂತಹ ವಿಚಾರಗಳನ್ನು ಮರೆತು ಬಿಟ್ಟಾಗ ನಾವು ಅವರಿಗೆ ಸರ್ವ ಶ್ರೇಯಸ್ಸಿನ ದ್ವಾರಗಳನ್ನು ತೆರೆದು ಕೊಟ್ಟೆವು. ಅವರು ತಮಗೆ ನೀಡಲಾದುದರಲ್ಲಿ ಆನಂದ ತುಂದಿಲರಾಗಿ ಮೆರೆಯುತ್ತಿರುವಾಗ ಹಠಾತ್ತನೆ ನಾವು ಅವರನ್ನು ಹಿಡಿದು ಬಿಟ್ಟವು. ನಂತರ ಅವರು ನಿರಾಶರಾದರು.

(45) ಅಕ್ರಮಿಗಳಾದ ಆ ಜನತೆಯ ಬುಡವನ್ನೇ ಕತ್ತರಿಸಿ ಬಿಡಲಾಯಿತು. ಸರ್ವಲೋಕಗಳ ಪ್ರಭುವಾದ ಅಲ್ಲಾಹನಿಗೆ ಸರ್ವಸ್ತುತಿ.

(46) ಹೇಳಿರಿ: ನೀವೊಮ್ಮೆ ಆಲೋಚಿಸಿರಿ, ಅಲ್ಲಾಹನು ನಿಮ್ಮ ಕಿವಿಯನ್ನು, ಕಣ್ಣನ್ನು ಕಸಿದುಕೊಂಡು ನಿಮ್ಮ ಹೃದಯಗಳ ಮೇಲೆ ಮುದ್ರೆಯೊತ್ತಿ ಬಿಟ್ಟರೆ ಅಲ್ಲಾಹನ ಹೊರತು ಇನ್ನಾವ ಆರಾಧ್ಯನು ನಿಮಗದನ್ನು ಮರಳಿ ಕೊಡುತ್ತಾನೆ? ನಾವು ಅವರಿಗೆ ಹೇಗೆಲ್ಲಾ ದೃಷ್ಟಾಂತಗಳನ್ನು ವಿವರಿಸಿ ಕೊಡುತ್ತೇವೆಂಬುದನ್ನು ನೋಡಿರಿ. ಅದಾಗ್ಯೂ ಅವರು ವಿಮುಖರಾಗುತ್ತಾರೆ.

(47) ಹೇಳಿರಿ: ನೀವು ಒಮ್ಮೆ ಆಲೋಚಿಸಿದ್ದೀರಾ? ಅಲ್ಲಾಹನ ಶಿಕ್ಷೆಯು ನಿಮಗೆ ಹಠಾತ್ತನೆ ಅಥವಾ ಪ್ರತ್ಯಕ್ಷ(ಸೂಚಿತವಾಗಿ) ಬಂದು ಬಿಟ್ಟರೆ ಅಕ್ರಮಿಗಳಾದ ಜನತೆಯ ಹೊರತು ಇನ್ನಾರಾದರೂ ನಾಶಗೊಳಿಸಲ್ಪಡುತ್ತಾರೆಯೇ?

(48) (ಸಜ್ಜನರಿಗೆ) ಶುಭವಾರ್ತೆ ನೀಡಲೆಂದೂ, (ದುರ್ಜನರಿಗೆ) ಮುನ್ನೆಚ್ಚರಿಕೆ ನೀಡಲೆಂದೂ ಮಾತ್ರ ನಾವು ಸಂದೇಶವಾಹಕರನ್ನು ನಿಯೋಗಿಸುತ್ತೇವೆ. ಅನಂತರ ಯಾರು ವಿಶ್ವಾಸವಿಡುತ್ತಾರೋ ಮತ್ತು ಸುಧಾರಣೆ ಮಾಡಿಕೊಳ್ಳುತ್ತಾರೋ ಅವರ ಮೇಲೆ ಯಾವುದೇ ಭಯವಿರುವುದಿಲ್ಲ ಮತ್ತು ಅವರು ದುಃಖಿತರೂ ಆಗಲಾರರು.

(49) ಮತ್ತು ಯಾರು ನಮ್ಮ ದೃಷ್ಟಾಂತಗಳನ್ನು ಸುಳ್ಳಾಗಿಸುತ್ತಾರೋ ಅವರ ಧಿಕ್ಕಾರದ ನಿಮಿತ್ತ ಅವರು ಶಿಕ್ಷೆಗೆ ಗುರಿಯಾಗುವರು.

(50) ಹೇಳಿರಿ: ನಾನು ನಿಮಗೆ ಅಲ್ಲಾಹನ ಭಂಡಾರಗಳು ನನ್ನ ಬಳಿಯಿವೆಯೆಂದು ದಾವೆ ಮಾಡುವುದಿಲ್ಲ ಮತ್ತು ಅಗೋಚರ ಜ್ಞಾನವನ್ನು ನಾನು ಅರಿಯುವುದೂ ಇಲ್ಲ ಮತ್ತು ನಾನು ಒಬ್ಬ ದೇವಚರನಾಗಿದ್ದೇನೆಂದು ನಿಮ್ಮೊಂದಿಗೆ ಹೇಳುವುದಿಲ್ಲ. ನಾನಂತೂ ನನ್ನ ಬಳಿಗೆ ದಿವ್ಯ ಸಂದೇಶ ನೀಡಲಾಗುವುದನ್ನೇ ಅನುಸರಿಸುತ್ತೇನೆ. ಹೇಳಿರಿ: ಕುರುಡನು, ದೃಷ್ಟಿಯುಳ್ಳವನು ಸಮಾನರೇ? ಹಾಗೆಯೇ ನೀವು ಚಿಂತಿಸುವುದಿಲ್ಲವೇ?

(51) ಅಲ್ಲಾಹನ ಹೊರತು ಅವರಿಗೆ ಯಾವೊಬ್ಬ ಸಹಾಯಕನಾಗಲೀ, ಯಾವೊಬ್ಬ ಶಿಫಾರಸ್ಸುಗಾರನಾಗಲೀ ಇರದಂತಹ ಸ್ಥಿತಿಯಲ್ಲಿ ಅವರನ್ನು ತಮ್ಮ ಪ್ರಭುವಿನೆಡೆಗೆ ಒಟ್ಟುಗೂಡಿಸಲ್ಪಡುವೆವೆಂದು ಭಯಪಡುವವರಿಗೆ ನೀವು ಇದರ ಮೂಲಕ (ಕುರ್‌ಆನ್) ಮುನ್ನೆಚ್ಚರಿಕೆ ನೀಡಿರಿ. ಅವರು ಭಯಪಡಬಹುದು.

(52) ತಮ್ಮ ಪ್ರಭುವಿನ ಸಂತೃಪ್ತಿಯನ್ನು ಬಯಸಿ ಮುಂಜಾನೆಯಲ್ಲೂ, ಮುಸ್ಸಂಜೆಯಲ್ಲೂ, ಅವನನ್ನು ಕರೆದು ಪ್ರಾರ್ಥಿಸುವವರನ್ನು ನೀವು ದೂರಕ್ಕಟ್ಟಬೇಡಿರಿ. ಅವರ ವಿಚಾರಣೆಯ ಹೊಣೆ ನಿಮ್ಮ ಮೇಲಿಲ್ಲ. ನಿಮ್ಮ ವಿಚಾರಣೆಯ ಹೊಣೆ ಅವರ ಮೇಲಿಲ್ಲ. ಆದುದರಿಂದ ನೀವು ಅವರನ್ನು ದೂರಗಟ್ಟಿದರೆ ಅಕ್ರಮಿಗಳಲ್ಲಿ ಸೇರಿ ಬಿಡುವಿರಿ.

(53) ಹೀಗೆ ನಾವು ಕೆಲವರನ್ನು ಇತರ ಕೆಲವರ ಮೂಲಕ ಪರೀಕ್ಷೆಗೊಳಪಡಿಸಿದೆವು. ಇದು ನಮ್ಮೆಲ್ಲರ ನಡುವೆ ಅಲ್ಲಾಹನು ಅನುಗ್ರಹಿಸಿದ್ದು ಇವರ ಮೇಲೆಯೇ? ಎಂದು ಸರದಾರರು ಹೇಳಲೆಂದಾಗಿದೆ. ಕೃತಜ್ಞತೆ ತೋರುವವರನ್ನು ಅಲ್ಲಾಹನು ಬಹಳ ಚೆನ್ನಾಗಿ ಅರಿಯುವನಲ್ಲವೇ?

(54) ಮತ್ತು ನಮ್ಮ ದೃಷ್ಟಾಂತಗಳಲ್ಲಿ ವಿಶ್ವಾಸವಿಡುವವರು ನಿಮ್ಮ ಬಳಿಗೆ ಬಂದರೆ ಹೇಳಿರಿ: ನಿಮ್ಮ ಮೇಲೆ ಶಾಂತಿಯಿರಲಿ. ನಿಮ್ಮ ಪ್ರಭು ಕರುಣೆತೋರುವುದನ್ನು ತನ್ನ ಮೇಲೆ ಕಡ್ಡಾಯಗೊಳಿಸಿದ್ದಾನೆ. ಅಂದರೆ ನಿಮ್ಮ ಪೈಕಿ ಯಾರಾದರೂ ಅಜ್ಞಾನದಿಂದ ದುಷ್ಕೃತ್ಯವನ್ನು ಮಾಡಿದರೆ, ತರುವಾಯ ಅವನು ಅದರ ಬಳಿಕ ಪಶ್ಚಾತ್ತಾಪ ಪಟ್ಟರೆ ಮತ್ತು ಸುಧಾರಣೆ ಮಾಡಿಕೊಂಡರೆ ಅಲ್ಲಾಹನು ಅತ್ಯಧಿಕ ಕ್ಷಮಿಸುವವನು, ಕರುಣಾನಿಧಿÀಯು ಆಗಿದ್ದಾನೆ.

(55) ಹೀಗೆ ಅಪರಾಧಿಗಳ ಮಾರ್ಗವು (ವರ್ತನೆ) ಬಹಿರಂಗವಾಗಲೆAದು ನಾವು ದೃಷ್ಟಾಂತಗಳನ್ನು ವಿವರಿಸಿಕೊಡುತ್ತೇವೆ.

(56) ಹೇಳಿರಿ: ಅಲ್ಲಾಹನ ಹೊರತು ನೀವು ಕರೆದು ಪ್ರಾರ್ಥಿಸುತ್ತಿರುವವರನ್ನು ಆರಾಧಿಸುವುದನ್ನು ನನಗೆ ನಿಷೇಧಿಸಲಾಗಿದೆ. ಹೇಳಿರಿ: ನಾನು ನಿಮ್ಮ ಸ್ವೇಚ್ಛೆಗಳನ್ನು ಅನುಸರಿಸುವುದಿಲ್ಲ. ಹಾಗೆ ಮಾಡಿದರೆ ನಾನು ಮಾರ್ಗ ಭ್ರಷ್ಟನಾಗುವೆನು ಮತ್ತು ಸನ್ಮಾರ್ಗ ಪ್ರಾಪ್ತರಲ್ಲಿ ಸೇರಿದವನಾಗಲಾರನು.

(57) ಹೇಳಿರಿ: ಖಂಡಿತವಾಗಿಯು ನಾನು ನನ್ನ ಪ್ರಭುವಿನ ಕಡೆಯ ಸ್ಪಷ್ಟ ಆಧಾರದ ಮೇಲಿರುವೆನು. ನೀವದನ್ನು ನಿರಾಕರಿಸುವಿರಿ. ನೀವು ಯಾವುದಕ್ಕಾಗಿ (ಯಾತನೆಗಾಗಿ) ಆತುರಪಡುತ್ತೀರೋ ಅದು ನನ್ನ ಬಳಿಯಿಲ್ಲ. ಆಜ್ಞಾಧಿಕಾರವು ಅಲ್ಲಾಹನಿಗೆ ಮಾತ್ರವಿದೆ. ಅವನು ಸತ್ಯವನ್ನು ವಿವರಿಸಿ ಕೊಡುತ್ತಾನೆ. ಮತ್ತು ಅವನು ತೀರ್ಪು ನೀಡವವರಲ್ಲಿ ಅತ್ಯುತ್ತಮನಾಗಿದ್ದಾನೆ.

(58) ಹೇಳಿರಿ: ನೀವು ಆತುರಪಡುತ್ತಿರುವ ಆ ಯಾತನೆಯು ನನ್ನ ಬಳಿಯಿರುತ್ತಿದ್ದರೆ ನನ್ನ ಮತ್ತು ನಿಮ್ಮ ಮಧ್ಯೆ ಈಗಾಗಲೇ ತೀರ್ಪು ಆಗಿಬಿಡುತ್ತಿತ್ತು ಮತ್ತು ಅಲ್ಲಾಹನು ಅಕ್ರಮಿಗಳನ್ನು ಚೆನ್ನಾಗಿ ಬಲ್ಲವನಾಗಿದ್ದಾನೆ.

(59) ಮತ್ತು ಅಗೋಚರದ ಕೀಲಿ ಕೈಗಳು ಅಲ್ಲಾಹನ ಬಳಿ ಮಾತ್ರವಿದೆ. ಅಲ್ಲಾಹನ ಹೊರತು ಇನ್ನಾರೂ ಅವುಗಳನ್ನು ಅರಿಯಲಾರರು. ನೆಲ, ಜಲದಲ್ಲಿರುವ ಸಕಲ ವಸ್ತುಗಳನ್ನು ಅವನು ಅರಿಯುತ್ತಾನೆ. ಅವನು ಅರಿಯದೆ ಒಂದು ಎಲೆಯು ಉದುರದು ಮತ್ತು ಭೂಮಿಯ ಅಂಧಕಾರಗಳಲ್ಲಿ ಹುದುಗಿರುವ ಒಂದು ಧಾನ್ಯವಾಗಿರಿಲಿ, ಹಸಿಯೋ ಒಣವೋ ಆಗಿರುವ ವಸ್ತುವಾಗಿರಲಿ ಅವನ ಬಳಿ ಇರುವ ಸ್ಪಷ್ಟವಾದ ಒಂದು ಗ್ರಂಥದಲ್ಲಿ ಉಲ್ಲೇಖವಿದೆ.

(60) ಮತ್ತು ಅವನೇ ರಾತ್ರಿಯಲ್ಲಿ ನಿಮ್ಮ ಆತ್ಮಗಳನ್ನು ವಶಪಡಿಸಿಕೊಳ್ಳುತ್ತಾನೆ. ಮತ್ತು ಹಗಲಿನಲ್ಲಿ ನೀವು ಮಾಡಿದ್ದನ್ನೆಲ್ಲ ಅವನು ಅರಿಯುತ್ತಾನೆ. ನಂತರ ಅವನು ನೀವು (ಆಯಸ್ಸಿನ) ನಿಶ್ಚಿತಾವಧಿ ಪೂರ್ತಿಗೊಳಿಸಲೆಂದು ನಿಮ್ಮನ್ನು ಮರುದಿನ ಹಗಲಿನಲ್ಲಿ ಎಚ್ಚರಗೊಳಿಸುತ್ತಾನೆ. ನಂತರ ಅವನೆಡೆಗೇ ನಿಮ್ಮ ಮರಳುವಿಕೆಯಿದೆ. ಅನಂತರ ಅವನು ನೀವು ಮಾಡುತ್ತಿದ್ದುದೆಲ್ಲವನ್ನು ನಿಮಗೆ ತಿಳಿಸಿ ಕೊಡುವನು.

(61) ಅವನು ತನ್ನ ದಾಸರ ಮೇಲೆ ಪರಮಾಧಿಕಾರವುಳ್ಳವನಾಗಿದ್ದಾನೆ. ನಿಮ್ಮ ಮೇಲೆ ಅವನು ದೂತರನ್ನು ಕಾವಲುಗಾರರನ್ನಾಗಿ ಕಳುಹಿಸುತ್ತಾನೆ. ನಿಮ್ಮೊಲ್ಲಬ್ಬನಿಗೆ ಮರಣಾಸನ್ನವಾದಾಗ ನಮ್ಮಿಂದ ನಿಯೋಗಿಸಲಾದ ದೂತರು ಅವನ ಅತ್ಮವನ್ನು ವಶಪಡಿಸಿಕೊಳ್ಳುವರು ಮತ್ತು ಅವರು ಸ್ವಲ್ಪವೂ ಕರ್ತವ್ಯಲೋಪ ಮಾಡಲಾರರು.

(62) ನಂತರ ಅವರೆಲ್ಲರು ತಮ್ಮ ನೈಜ ಒಡೆಯನಾದ ಅಲ್ಲಾಹನೆಡೆಗೆ ಮರಳಿಸಲಾಗುವರು. ಕೇಳಿರಿ: ಆಜ್ಞಾಧಿಕಾರವು ಅಲ್ಲಾಹನದ್ದಾಗಿದೆ ಮತ್ತು ಅವನು ಅತೀ ಶೀಘ್ರವಾಗಿ ಲೆಕ್ಕ ವಿಚಾರಣೆ ನಡೆಸುವವನಾಗಿದ್ದಾನೆ.

(63) ಹೇಳಿರಿ: ನಿಮ್ಮನ್ನು ನೆಲ, ಜಲಗಳ ಅಂಧÀಕಾರಗಳಿAದ ರಕ್ಷಿಸುವವನು ಯಾರು? 'ನೀನು ನಮ್ಮನ್ನು (ಈ ಕಷ್ಟಕಾಲದಲ್ಲಿ) ರಕ್ಷಿಸಿದರೆ ಖಂಡಿತ ನಾವು ಕೃತಜ್ಞತೆ ಸಲ್ಲಿಸುವವರೊಂದಿಗೆ ಸೇರುವೆವು' ಎಂದು ದೈನ್ಯತೆಯಿಂದ, ರಹಸ್ಯವಾಗಿ ಅವನನ್ನು ನೀವು ಕರೆದು ಬೇಡುತ್ತೀರಿ.

(64) ಹೇಳಿರಿ: ಅಲ್ಲಾಹನೇ ನಿಮ್ಮನ್ನು ಅವುಗಳಿಂದ ಮತ್ತು ಇತರೆಲ್ಲಾ ವಿಪತ್ತುಗಳಿಂದ ರಕ್ಷಿಸುತ್ತಾನೆ. ಆದರೂ ನೀವು ಸಹಭಾಗಿಗಳನ್ನು ಕಲ್ಪಿಸುತ್ತೀರಿ.

(65) ಹೇಳಿರಿ: ನಿಮ್ಮ ಮೇಲ್ಭಾಗದಿಂದ ಅಥವಾ ನಿಮ್ಮ ಪಾದಗಳ ತಳಭಾಗದಿಂದ ನಿಮ್ಮ ಮೇಲೆ ಶಿಕ್ಷೆಯನ್ನು ಎರಗಿಸಲು ಅಥವಾ ನಿಮ್ಮನ್ನು ಹಲವು ಗುಂಪುಗಳನ್ನಾಗಿ ಮಾಡಿ ಮತ್ತು ನಿಮ್ಮಲ್ಲಿ ಕೆಲವರ ದೌರ್ಜನ್ಯವನ್ನು ಇನ್ನೂ ಕೆಲವರು ಅನುಭವಿಸುವಂತೆ ಮಾಡಲೂ ಅವನು ಸಾಮರ್ಥ್ಯವುಳ್ಳವನಾಗಿದ್ದಾನೆ. ನಾವು ದೃಷ್ಟಾಂತಗಳನ್ನು ವಿವಿಧ ರೂಪಗಳಲ್ಲಿ ಹೇಗೆ ವಿವರಿಸಿ ಕೊಡುತ್ತಿದ್ದೇವೆಂಬುದನ್ನು ನೋಡಿರಿ. ಪ್ರಾಯಶಃ ಅವರು ಗ್ರಹಿಸಿಕೊಳ್ಳಬಹುದು.

(66) ಮತ್ತು ಪೈಗಂಬರರೇ ಇದು (ಕುರ್‌ಆನ್) ಸತ್ಯವಾಗಿದ್ದರೂ ನಿಮ್ಮ ಸಮುದಾಯವು ಅದನ್ನು ಸುಳ್ಳಾಗಿಸುತ್ತಿದೆ. ಹೇಳಿರಿ: ನಾನು ನಿಮ್ಮ ಜವಾಬ್ದಾರಿ ಹೊತ್ತವನಲ್ಲ.

(67) ಪ್ರತಿಯೊಂದು ಬರುವ ಘಟನೆಗೆ ಒಂದು ನಿಶ್ಚಿತ ಸಮಯವಿದೆ. ಸದ್ಯದಲ್ಲೇ ನೀವು ಮನಗಾಣುವಿರಿ.

(68) ಮತ್ತು ನಮ್ಮ ದೃಷ್ಟಾಂತಗಳನ್ನು ಅಪಹಾಸ್ಯ ಮಾಡುವವರನ್ನು ನೀವು ಕಂಡರೆ ಅವರು ಬೇರಾವುದಾದರೂ ವಿಚಾರದಲ್ಲಿ ತೊಡಗುವ ತನಕ ಅವರಿಂದ ದೂರವಿರಿ. ಒಂದುವೇಳೆ ಶೈತಾನನು ತಮ್ಮನ್ನು ಮರೆಯುವಂತೆ ಮಾಡಿದರೆ ಜ್ಞಾಪಕವಾದ ಬಳಿಕ ಅಕ್ರಮಿ ಜನರೊಂದಿಗೆ ಕುಳಿತುಕೊಳ್ಳಬೇಡಿರಿ.

(69) ಭಯಭಕ್ತಿ ಪಾಲಿಸುವವರಿಗೆ ಅವರ (ಅಕ್ರಮಿಗಳ) ವಿಚಾರಣೆಯ ಹೊಣೆಯಿಲ್ಲ. ಆದರೆ ಅವರ ಮೇಲೆ ಸದುಪದೇಶದ ಹೊಣೆಯಿರುತ್ತದೆ. ಪ್ರಾಯಶಃ ಅವರು ಭಯಭಕ್ತಿಯುಳ್ಳವರಾಗಬಹುದು.

(70) ಮತ್ತು ತಮ್ಮ ಧರ್ಮವನ್ನು ಆಟ ಮತ್ತು ವಿನೋದವನ್ನಾಗಿ ಮಾಡಿರುವವರನ್ನು ಹಾಗೂ ಐಹಿಕ ಜೀವನಕ್ಕೆ ಮೋಸ ಹೋದವರನ್ನು ನೀವು ಬಿಟ್ಟುಬಿಡಿರಿ. ಯಾವೊಬ್ಬ ವ್ಯಕ್ತಿಯು ತಾನು ಮಾಡಿ ಬಿಟ್ಟಿರುವುದರ ಫಲವಾಗಿ ನಾಶ ಕೋಪಕ್ಕೆ ತಳ್ಳಲ್ಪಡದಿರಲೆಂದು ನೀವು ಈ ಕುರ್‌ಆನಿನ ಮೂಲಕ ಸದುಪದೇಶ ಮಾಡುತ್ತಿರಿ. ಆಗ ಅವನಿಗೆ ಅಲ್ಲಾಹನ ಹೊರತು ಯಾವೊಬ್ಬ ಸಹಾಯಕನಾಗಲೀ, ಶಿಫಾರಸ್ಸುಗಾರನಾಗಲೀ ಇರಲಾರನು ಮತ್ತು ಅಂದು ಅವನು ಸಕಲ ವಿಧದ ಪ್ರಾಯಶ್ಚಿತ್ತವನ್ನು ನೀಡಿದರೂ ಅವನಿಂದ ಅದನ್ನು ಸ್ವೀಕರಿಸಲಾಗದು. ಸ್ವತಃ ತಾವು ಮಾಡಿಟ್ಟಿರುವುದರ ಫಲವಾಗಿ ನಾಶಕೋಪಕ್ಕೆ ತಳ್ಳಲ್ಪಡುವವರು ಇವರೇ ಆಗಿದ್ದಾರೆ. ಅವರಿಗೆ ನರಕದಲ್ಲಿ ಕುಡಿಯಲು ಕುದಿಯುವ ನೀರು ಇರುವುದು ಮತ್ತು ವೇದನಾಜನಕ ಶಿಕ್ಷೆಯಿರುವುದು. ಇದು ಅವರ ಸತ್ಯನಿಷೇಧದ ನಿಮಿತ್ತವಾಗಿದೆ.

(71) ಹೇಳಿರಿ: ಅಲ್ಲಾಹನ ಹೊರತು ನಮಗೆ ಲಾಭವನ್ನಾಗಲಿ, ಹಾನಿಯನ್ನಾಗಲಿ ಉಂಟು ಮಾಡದ ವಸ್ತುಗಳನ್ನು ನಾವು ಆರಾಧಿಸಬೇಕೇ? ಅಲ್ಲಾಹನು ನಮ್ಮನ್ನು ಸನ್ಮಾರ್ಗಕ್ಕೆ ಸೇರಿಸಿದ ನಂತರ ನಾವು ಹಿಂದಕ್ಕೆ ಮರಳಬೇಕೇ? ಒಬ್ಬ ವ್ಯಕ್ತಿಯು ಮರುಭೂಮಿಯಲ್ಲಿ ಶೈತಾನನಿಂದ ದಾರಿ ತಪ್ಪಿಸಲ್ಪಟ್ಟು ಅವನನ್ನು 'ನಮ್ಮ ಬಳಿಗೆ ಬಾ' ಎಂದು ಅವನ ಗೆಳೆಯರು ಕರೆಯುತ್ತಿದ್ದರೂ ನೇರದಾರಿಗೆ ಬರದೆ ದಿಗ್ಭಾçಂತನಾಗಿ ಅಲೆದಾಡುವಂತೆ ನಾವಾಗಬೇಕೇ?. ಹೇಳಿರಿ: ಅಲ್ಲಾಹನ ಮಾರ್ಗದರ್ಶನವೇ ನೈಜ ಮಾರ್ಗದರ್ಶನವಾಗಿದೆ. ಮತ್ತು ನಾವು ಜಗದೊಡೆಯನಿಗೆ ಸಂಪೂರ್ಣ ವಿಧೇಯರಾಗಬೇಕೆಂದು ನಮ್ಮೊಂದಿಗೆ ಆಜ್ಞಾಪಿಸಲಾಗಿದೆ.

(72) ಹಾಗೂ ನಮಾಝನ್ನು ಸಂಸ್ಥಾಪಿಸಿರಿ ಮತ್ತು ಅವನನ್ನು ಭಯಪಡಿರಿ. (ಎಂದು ಆಜ್ಞಾಪಿಸಲಾಗಿದೆ) ನಿಮ್ಮೆಲ್ಲರನ್ನೂ ಅವನೆಡೆಗೇ (ಅಲ್ಲಾಹನೆಡೆಗೆ) ಒಟ್ಟುಗೂಡಿಸಲಾಗುವುದು.

(73) ಮತ್ತು ಆಕಾಶಗಳನ್ನು ಮತ್ತು ಭೂಮಿಯನ್ನು ಸತ್ಯವಾಗಿ ಸೃಷ್ಟಿಸಿದವನು ಅವನೇ ಹಾಗೂ ಅವನು ಉಂಟಾಗು ಎಂದು ಹೇಳುವ ದಿನ ಅದು (ಪ್ರಳಯ) ಉಂಟಾಗಲಿದೆ. ಅವನ ಮಾತು ಪರಮ ಸತ್ಯ. ಕಹಳೆಯನ್ನು ಊದಲ್ಪಡುವ ದಿನ ಅಧಿಪತ್ಯವು ಅವನಿಗೆ ಮಾತ್ರವಿರುವುದು. ಗೋಚರ, ಅಗೋಚರಗಳ ಜ್ಞಾನಿಯವನು. ಮತ್ತು ಅವನು ಯುಕ್ತಿವಂತನೂ, ಸೂಕ್ಷö್ಮ ಜ್ಞಾನಿಯೂ ಆಗಿದ್ದಾನೆ.

(74) ಮತ್ತು ಇಬ್ರಾಹೀಮ್ ತಮ್ಮ ತಂದೆ ಅಝರ್‌ನೊಂದಿಗೆ ನೀವು ವಿಗ್ರಹಗಳನ್ನು ಆರಾಧ್ಯರನ್ನಾಗಿ ಮಾಡಿಕೊಂಡಿರುವಿರಾ? ನಿಸ್ಸಂದೇಹವಾಗಿಯು ನಾನು ನಿಮ್ಮನ್ನೂ, ನಿಮ್ಮ ಸಮುದಾಯವನ್ನೂ ಸ್ಪಷ್ಟ ಮಾರ್ಗ ಭ್ರಷ್ಟತೆಯಲ್ಲಿರುವುದಾಗಿ ಕಾಣುತ್ತಿದ್ದೇನೆಂದು ಹೇಳಿದ ಸಂದರ್ಭವನ್ನು ಸ್ಮರಿಸಿರಿ.

(75) ಹೀಗೆ ಇಬ್ರಾಹೀಮರಿಗೆ ದೃಢವಿಶ್ವಾಸವಾಗಲೆಂದು ನಾವು ಆಕಾಶಗಳ ಮತ್ತು ಭೂಮಿಯ ಅಧಿಪತ್ಯವನ್ನು ತೋರಿಸಿಕೊಟ್ಟೆವು.

(76) ತರುವಾಯ ರಾತ್ರಿಯ ಅಂಧಕಾರವು ಅವರನ್ನು ಆವರಿಸಿದಾಗ ಅವರು ಒಂದು ನಕ್ಷತ್ರವನ್ನು ಕಂಡು ( ವಾಸ್ತವಿಕತೆಯನ್ನು ತಿಳಿಸಲು) ಹೇಳಿದರು: ಇದು ನನ್ನ ಪ್ರಭು, ಆದರೆ ಅದು ಅಸ್ತಮಿಸಿದಾಗ ಅಸ್ತಮಿಸುವವರನ್ನು ನಾನು ಪ್ರೀತಿಸುವುದಿಲ್ಲ ಎಂದರು.

(77) ಅನಂತರ ಹೊಳೆಯುತ್ತಿರುವ ಚಂದ್ರನನ್ನು ಕಂಡಾಗ ಹೇಳಿದರು: ಇದು ನನ್ನ ಪ್ರಭು, ಆದರೆ ಅದು ಅಸ್ತಮಿಸಿದಾಗ (ತಮ್ಮ ಜನರಿಗೆ) ನನ್ನ ಪ್ರಭು ನನಗೆ ಸನ್ಮಾರ್ಗವನ್ನು ತೋರಿಸಿ ಕೊಡದಿದ್ದರೆ ಖಂಡಿತವಾಗಿಯು ನಾನು ಪಥಭ್ರಷ್ಟ ಜನರಲ್ಲಿ ಸೇರಿಬಿಡುವೆನು ಎಂದರು.

(78) ನಂತರ ಹೊಳೆಯುತ್ತಿರುವ ಸೂರ್ಯನನ್ನು ಕಂಡಾಗ ಅವರು (ತಮ್ಮ ಜನಾಂಗದವರಿಗೆ) ಹೇಳಿದರು: ಇದು ನನ್ನ ಪ್ರಭು, ಇದು ಅತ್ಯಂತ ದೊಡ್ಡದಿದೆ, ಅನಂತರ ಅದು ಕೂಡ ಅಸ್ತಮಿಸಿದಾಗ ನನ್ನ ಸಮುದಾಯವೆ, ನಿಸ್ಸಂದೇಹವಾಗಿಯೂ ನೀವು ಮಾಡುತ್ತಿರುವ ಬಹುದೇವಾರಾಧನೆಯಿಂದ ನಾನು ಸಂಬAಧ ಮುಕ್ತನಾಗಿದ್ದೇನೆಂದು ಹೇಳಿದರು.

(79) ನಾನು ಮಿಥ್ಯವನ್ನು ತೊರೆದು ಸತ್ಯದಲ್ಲಿ ನೆಲೆ ನಿಂತು ಆಕಾಶಗಳನ್ನೂ, ಭೂಮಿಯನ್ನೂ ಸೃಷ್ಟಿಸಿರುವವನ ಕಡೆಗೆ ನನ್ನ ಮುಖವನ್ನು ತಿರುಗಿಸಿದ್ದೇನೆ ಮತ್ತು ನಾನು ಬಹುದೇವ ವಿಶ್ವಾಸಿಗಳಲ್ಲಿ ಸೇರಿದವನಲ್ಲ.

(80) ಅವರ ಜನತೆಯು ಅವರೊಂದಿಗೆ ತರ್ಕಿಸತೊಡಗಿತು. ಅವರು ಹೇಳಿದರು: ನೀವು ಅಲ್ಲಾಹನ ವಿಷಯದಲ್ಲಿ ನನ್ನೊಂದಿಗೆ ತರ್ಕಿಸುತ್ತಿರುವಿರಾ? ವಸ್ತುತಃ ಅವನು ನನಗೆ ಸನ್ಮಾರ್ಗವನ್ನು ತೋರಿಸಿ ಕೊಟ್ಟಿದ್ದಾನೆ ಮತ್ತು ನೀವು ಅಲ್ಲಾಹನೊಂದಿಗೆ ಸಹಭಾಗಿಗಳನ್ನಾಗಿ ನಿಶ್ಚಯಿಸಿರುವ ವಸ್ತುಗಳನ್ನು ನಾನು ಭಯಪಡುವುದಿಲ್ಲ. ಆದರೆ ನನ್ನ ಪ್ರಭು ಏನನ್ನಾದರೂ (ಹಾನಿಯನ್ನು) ಇಚ್ಛಿಸಿದರೆ ಹೊರತು. ನನ್ನ ಪ್ರಭುವು ತನ್ನ ಜ್ಞಾನದಿಂದ ಎಲ್ಲಾ ವಸ್ತುಗಳನ್ನು ಆವರಿಸಿದ್ದಾನೆ. ಹಾಗಿದ್ದೂ ನೀವು ಚಿಂತಿಸುವುದಿಲ್ಲವೇ?.

(81) ಮತ್ತು ನೀವು ಸಹಭಾಗಿಗಳನ್ನಾಗಿ ನಿಶ್ಚಯಿಸಿರುವ ವಸ್ತುಗಳನ್ನು ನಾನು ಹೇಗೆ ಭಯಪಡಲಿ ? ವಸ್ತುತಃ ನೀವು ಅಲ್ಲಾಹನು ನಿಮ್ಮ ಮೇಲೆ ಯಾವುದೇ ಪುರಾವೆಯನ್ನು ಇಳಿಸದ ವಸ್ತುಗಳನ್ನು ಅವನೊಂದಿಗೆ ಸಹಭಾಗಿಯನ್ನಾಗಿ ಮಾಡುವುದರ ಬಗ್ಗೆ ಭಯಪಡುವುದಿಲ್ಲ. ಹಾಗಾದರೆ ಉಭಯ ಪಕ್ಷಗಳಲ್ಲಿ ಸುರಕ್ಷತೆಗೆ ಹೆಚ್ಚು ಅರ್ಹರು ಯಾರು ? ನೀವು ಅರಿಯುವವರಾಗಿದ್ದರೆ!

(82) ಸತ್ಯವಿಶ್ವಾಸವಿಟ್ಟು ಮತ್ತು ತಮ್ಮ ವಿಶ್ವಾಸದಲ್ಲಿ ದೇವ ಸಹಭಾಗಿತ್ವವನ್ನು ಬೆರೆಸದವರಿಗೆ ಸುರಕ್ಷತೆಯಿದೆ. ಮತ್ತು ಅವರೇ ಸನ್ಮಾರ್ಗದಲ್ಲಿ ಮುನ್ನಡೆಯುತ್ತಿದ್ದಾರೆ.

(83) ಇದು ನಾವು ಇಬ್ರಾಹೀಮರಿಗೆ ಅವರ ಜನತೆಗೆ ವಿರುದ್ಧವಾಗಿ ನೀಡಿದ (ಏಕದೇವತ್ವದ) ನಮ್ಮ ಪುರಾವೆಯಾಗಿದೆ. ನಾವು ಇಚ್ಛಿಸುವವರಿಗೆ ಪದವಿಗಳನ್ನು ಉನ್ನತಗೊಳಿಸುತ್ತೇವೆ. ನಿಸ್ಸಂಶಯವಾಗಿಯು ನಿಮ್ಮ ಪ್ರಭುವು ಯುಕ್ತಿವಂತನೂ, ಸರ್ವಜ್ಞಾನಿಯೂ ಆಗಿದ್ದಾನೆ.

(84) ಮತ್ತು ನಾವು ಅವರಿಗೆ (ಇಬ್ರಾಹೀಮರಿಗೆ) ಇಸ್‌ಹಾಕ್ ಮತ್ತು ಯಾಕೂಬ್(ಪುತ್ರ)ರನ್ನು ನೀಡಿದೆವು. ಪ್ರತಿಯೊಬ್ಬರನ್ನು ಸನ್ಮಾರ್ಗಕ್ಕೆ ಸೇರಿಸಿದೆವು ಮತ್ತು ಅದಕ್ಕೆ ಮೊದಲು ನೂಹ್‌ರನ್ನು ನಾವು ಸನ್ಮಾರ್ಗಕ್ಕೆ ಸೇರಿಸಿದ್ದೆವು ಮತ್ತು ಅವರ ಸಂತತಿಗಳ ಪೈಕಿ ದಾವೂದ್, ಸುಲೈಮಾನ್, ಅಯ್ಯೂಬ್, ಯೂಸೂಫ್, ಮೂಸಾ ಮತ್ತು ಹಾರೂನ್‌ರನ್ನು (ಸನ್ಮಾರ್ಗಕ್ಕೆ ಸೇರಿಸಿದೆವು) ಮತ್ತು ಹೀಗೆ ಸತ್ಕರ್ಮಿಗಳಿಗೆ ನಾವು ಪ್ರತಿಫಲವನ್ನು ನೀಡುತ್ತೇವೆ.

(85) ಮತ್ತು ಝಕರಿಯ್ಯ, ಯಹ್ಯಾ, ಈಸಾ, ಇಲ್ಯಾಸ್‌ರನ್ನೂ (ಸನ್ಮಾರ್ಗಕ್ಕೆ ಸೇರಿಸದೆವು) ಅವರೆಲ್ಲರೂ ಸಜ್ಜನರಲ್ಲಾಗಿದ್ದರು.

(86) ಮತ್ತು ಇಸ್ಮಾಯೀಲ್, ಇಸ್‌ಹಾಕ್, ಯೂನುಸ್, ಲೂತ್‌ರನ್ನೂ ಸಹ (ಸನ್ಮಾರ್ಗಕ್ಕೆ ಸೇರಿಸಿದೆವು) ಮತ್ತು ಅವರೆಲ್ಲರಿಗೂ ನಾವು ಸರ್ವಲೋಕದವರ ಮೇಲೆ ಶ್ರೇಷ್ಠತೆಯನ್ನು ನೀಡಿದೆವು.

(87) ಮತ್ತು ಅವರ ಕೆಲವು ಪೂರ್ವಿಕರನ್ನೂ, ಕೆಲವು ಸಂತತಿಗಳನ್ನೂ ಹಾಗೂ ಕೆಲವು ಸಹೋದರರನ್ನೂ (ಸನ್ಮಾರ್ಗಕ್ಕೆ ಸೇರಿಸಿದೆವು) ಮತ್ತು ಅವರನ್ನು ನಾವು ಆರಿಸಿಕೊಂಡೆವು ಮತ್ತು ಸತ್ಯಮಾರ್ಗದೆಡೆಗೆ ಮಾರ್ಗದರ್ಶನ ನೀಡಿದೆವು.

(88) ಇದು ಅಲ್ಲಾಹನ ಮಾರ್ಗದರ್ಶನವಾಗಿದೆ. ತನ್ಮೂಲಕ ಅವನು ತನ್ನ ದಾಸರ ಪೈಕಿ ತಾನಿಚ್ಛಿಸುವವರನ್ನು ಸತ್ಯ ಮಾರ್ಗದೆಡೆಗೆ ಮುನ್ನಡೆಸುತ್ತಾನೆ. ಇನ್ನು ಅವರು (ಆ ಪೈಗಂಬರರು) ಅಲ್ಲಾಹನಿಗೆ ಸಹಭಾಗಿಗಳನ್ನು ನಿಶ್ಚಯಿಸಿರುತ್ತಿದ್ದರೆ ಅವರ ಕರ್ಮಗಳೆಲ್ಲವೂ ನಿಷ್ಫಲವಾಗಿ ಬಿಡುತ್ತಿದ್ದವು.

(89) ನಾವು (ಅಲ್ಲಾಹ್) ಗ್ರಂಥ, ಸುಜ್ಞಾನ ಮತ್ತು ಪ್ರವಾದಿತ್ವವನ್ನು ನೀಡಿದ್ದು ಇವರೇ ಆಗಿದ್ದಾರೆ. ಇನ್ನು ಇವರು (ಬಹುದೇವಾರಾಧಕರು) ಪ್ರವಾದಿತ್ವವನ್ನು ನಿಷೇಧಿಸಿದರೆ ನಾವು ಅದಕ್ಕಾಗಿ ಅವುಗಳನ್ನು ನಿಷೇಧಿಸದಂತಹ ಒಂದು ಜನತೆಯನ್ನು ನಿಶ್ಚಯಿಸಿದ್ದೇವೆ.

(90) ಅಲ್ಲಾಹನು ಸನ್ಮಾರ್ಗದಲ್ಲಿ ಸೇರಿಸಿದ್ದು ಇವರನ್ನೇ ಆಗಿದೆ. ಆದ್ದರಿಂದ ನೀವೂ ಇವರ ಮಾರ್ಗವನ್ನೇ ಅನುಸರಿಸಿ. ಮತ್ತು ಹೇಳಿರಿ: ಈ ಸಂದೇಶ ತಲುಪಿಸುವುದಕ್ಕಾಗಿ ನಾನು ನಿಮ್ಮಿಂದ ಯಾವುದೇ ಪ್ರತಿಫಲವನ್ನು ಬಯಸುವುದಿಲ್ಲ. ಇದು ಸರ್ವಲೋಕದವರೆಗೆ ಒಂದು ಉಪದೇಶವಾಗಿದೆ.

(91) ಅಲ್ಲಾಹನು ಯಾವೊಬ್ಬ ಮನುಷ್ಯನಿಗೂ ಏನನ್ನು ಅವತೀರ್ಣಗೊಳಿಸಿಲ್ಲ ಎಂದು ಅವರು ಹೇಳಿದ ಸಂದರ್ಭವನ್ನು ಸ್ಮರಿಸಿರಿ ಅವರು ಅಲ್ಲಾಹನ ಮಹತ್ವವನ್ನು ಗ್ರಹಿಸುವಂತೆ ಗ್ರಹಿಸಲಿಲ್ಲ. ಹೇಳಿರಿ: ಹಾಗಾದರೆ ಜನರಿಗೆ ಪ್ರಕಾಶ ಮತ್ತು ಸನ್ಮಾರ್ಗವಾಗಿ ಮೂಸಾ ತಂದ ಗ್ರಂಥವನ್ನು ಅವತೀರ್ಣಗೊಳಿಸಿದ್ದು ಯಾರು? ಅದನ್ನು ನೀವು ವಿಭಿನ್ನ ಹಾಳೆಗಳಲ್ಲಿಟ್ಟು ಬಿಟ್ಟರಿ. ಅವುಗಳಲ್ಲಿ ಕೆಲವನ್ನು ಬಹಿರಂಗಪಡಿಸುತ್ತೀರಿ ಮತ್ತು ಹೆಚ್ಚಿನ ವಿಷಯಗಳನ್ನು ಬಚ್ಚಿಡುತ್ತೀರಿ. ಅದರ ಮೂಲಕ ನೀವಾಗಲೀ, ನಿಮ್ಮ ಪೂರ್ವಿಕರಾಗಲೀ ಅರಿತಿರದಂತಹ ವಿಚಾರಗಳನ್ನು (ಆ ಗ್ರಂಥದ ಮೂಲಕ) ನಿಮಗೆ ಕಲಿಸಿಕೊಡಲಾಗಿದೆ. ಹೇಳಿರಿ: ಅಲ್ಲಾಹನೇ ಅದನ್ನು ಅವತೀರ್ಣಗೊ ಳಿಸಿರುವನು. ನಂತರ ಅವರನ್ನು ಅವರ ವ್ಯರ್ಥಮಾತುಗಳಲ್ಲಿ ಆಟವಾಡುತ್ತಿರಲು ಬಿಟ್ಟು ಬಿಡಿರಿ.

(92) ಮತ್ತು ಇದು ನಾವು ಅವತೀರ್ಣಗೊಳಿಸಿರುವ ಸಮೃದ್ಧಪೂರ್ಣ (ಮತ್ತೊಂದು) ಗ್ರಂಥವಾಗಿದೆ. ಹಾಗೂ ತನಗಿಂತ ಮುಂಚಿನ ಗ್ರಂಥಗಳನ್ನು ಸತ್ಯವೆಂದು ದೃಢೀಕರಿಸುತ್ತದೆ. ಇದು ನೀವು ಮಕ್ಕಾನಿವಾಸಿಗಳಿಗೆ ಮತ್ತು ಅದರ ಸುತ್ತ ಮುತ್ತಲಿನಲ್ಲಿರುವವರಿಗೆ ಮುನ್ನೆಚ್ಚರಿಕೆ ನೀಡಲೆಂದಾಗಿದೆ. ಮತ್ತು ಪರಲೋಕದಲ್ಲಿ ವಿಶ್ವಾಸ ವಿಡುವವರು ಇದರಲ್ಲಿ ವಿಶ್ವಾಸ ಇಡುತ್ತಾರೆ ಮತ್ತು ಅವರು ತಮ್ಮ ನಮಾಝ್‌ಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ.

(93) ಮತ್ತು ಅಲ್ಲಾಹನ ಮೇಲೆ ಸುಳ್ಳು ಹೆಣೆದವನಿಗಿಂತ ಅಥವಾ ಅವನಿಗೆ ಯಾವ ದಿವ್ಯ ಸಂದೇಶÀ ನೀಡದಿದ್ದರೂ ತನಗೆ ದಿವ್ಯಸಂದೇಶ ನೀಡಲ್ಪಟ್ಟಿದೆಂದು ಹೇಳಿದವನಿಗಿಂತ ಮತ್ತು ಅಲ್ಲಾಹನು ಅವತೀರ್ಣಗೊಳಿಸಿದಂತಿರುವುದನ್ನು ತಾನೂ ಅವತೀರ್ಣಗೊಳಿಸುವೆನೆಂದು ಹೇಳಿದವನಿಗಿಂತ ದೊಡ್ಡ ಅಕ್ರಮಿ ಇನ್ನಾರಿದ್ದಾನೆ? ಅಂತಹ ಅಕ್ರಮಿಗಳು ಪ್ರಾಣಸಂಕಟದಲ್ಲಿರುವ ಸಂದರ್ಭದಲ್ಲಿ ಮತ್ತು ಮಲಕ್‌ಗಳು ತಮ್ಮ ಕೈಗಳನ್ನು ಚಾಚಿ “ನೀವು ನಿಮ್ಮ ಪ್ರಾಣಗಳನ್ನು ಹೊರತೆಗೆಯಿರಿ ನೀವು ಅಲ್ಲಾಹನ ಮೇಲೆ ಸುಳ್ಳಾರೋಪ ಹೊರಿಸುತ್ತಿದ್ದುದರ ನಿಮಿತ್ತ ಮತ್ತು ಅಲ್ಲಾಹನ ದೃಷ್ಟಾಂತಗಳೊAದಿಗೆ ಅಹಂಕಾರ ತೋರಿಸುತ್ತಿದ್ದುದರ ನಿಮಿತ್ತ ಇಂದು ನಿಮಗೆ ನಿಂದ್ಯತೆಯ ಯಾತನೆಯನ್ನು ನೀಡಲಾಗುವುದೆಂದು (ಮಲಕ್‌ಗಳು) ಹೇಳುತ್ತಿರುವ ಸಂಧರ್ಭವನ್ನು ನೀವು ಕಂಡಿದ್ದರೆ (ಅದೂ ಭಯಾನಕ ದೃಶ್ಯವಾಗಿತ್ತು)

(94) (ಅಲ್ಲಾಹನು ಹೇಳುವನು) ನಾವು ನಿಮ್ಮನ್ನು ಪ್ರಥಮ ಬಾರಿ ಸೃಷ್ಟಿಸಿರುವಂತೇ ನೀವು ನಮ್ಮ ಬಳಿಗೆ ಒಬ್ಬಂಟಿಯಾಗಿ ಬಂದಿರುವಿರಿ; ನಿಮಗೆ ನಾವು ನೀಡಿರುವುದನ್ನೆಲ್ಲಾ ನೀವು ನಿಮ್ಮ ಬೆನ್ನ ಹಿಂದೆಯೇ ಬಿಟ್ಟು ಬಂದಿರುವಿರಿ ಮತ್ತು ನೀವು ನಿಮ್ಮ ವಿಚಾರದಲ್ಲಿ ಸಹಭಾಗಿಗಳೆಂದು ವಾದಿಸುತ್ತಿದ್ದ ನಿಮ್ಮ ಶಿಫಾರಸ್ಸುಗಾರರನ್ನು ನಾವು ನಿಮ್ಮೊಂದಿಗೆ ಕಾಣುತ್ತಿಲ್ಲ. ವಾಸ್ತವದಲ್ಲಿ ನಿಮ್ಮ ನಡುವಿನ ಸಂಬAಧಗಳು ಮುರಿದು ಹೋಗಿವೆ ಮತ್ತು ನೀವು ವಾದಿಸುತ್ತಿದ್ದವುಗಳೆಲ್ಲವೂ ನಿಮ್ಮಿಂದ ಕಣ್ಮರೆಯಾಗಿ ಬಿಟ್ಟಿವೆ.

(95) ನಿಸ್ಸಂಶಯವಾಗಿಯು ಅಲ್ಲಾಹನೇ ಧಾನ್ಯ ಮತ್ತು ಬೀಜವನ್ನು ಮೊಳಕೆಯೊ ಡೆಸುವವನಾಗಿದ್ದಾನೆ. ಅವನು ನಿರ್ಜೀವಿಯಿಂದ ಜೀವಿಯನ್ನು ಹೊರತರುತ್ತಾನೆ ಮತ್ತು ನಿರ್ಜೀವಿಯನ್ನು ಜೀವಿಯಿಂದ ಹೊರತರುವವನಾಗಿದ್ದಾನೆ. ಅವನೇ ಅಲ್ಲಾಹನಾಗಿದ್ದಾನೆ. ಹಾಗಿದ್ದೂ ನೀವು ಎಲ್ಲಿ ಅಲೆದಾಡುತ್ತಿರುವಿರಿ?

(96) ಅವನು ಪ್ರಭಾತವನ್ನು ಹೊರತರುವವನಾಗಿದ್ದಾನೆ. ರಾತ್ರಿಯನ್ನು ಅವನು ವಿಶ್ರಾಂತಿಗಾಗಿ ಮಾಡಿದನು ಮತ್ತು ಸೂರ್ಯ, ಚಂದ್ರರನ್ನು ಕಾಲಗಣನೆಗಾಗಿ ನಿಶ್ಚಯಿಸಿರುವನು. ಇದು ಪ್ರತಾಪಶಾಲಿಯು, ಮಹಾಜ್ಞಾನಿಯು ಆದವನ ವ್ಯವಸ್ಥೆಯಾಗಿದೆ.

(97) ಅವನೇ ನಿಮಗೆ ನಕ್ಷತ್ರಗಳನ್ನು ನೀವು ಅವುಗಳ ಮೂಲಕ ನೆಲ, ಜಲದ ಅಂಧಕಾರಗಳಲ್ಲಿ, ದಾರಿಯನ್ನು ಕಂಡುಕೊಳ್ಳಲೆAದು ಉಂಟು ಮಾಡಿದನು. ನಿಸ್ಸಂಶಯವಾಗಿಯು ಅರಿವುಳ್ಳಜನರಿಗಾಗಿ ನಾವು ದೃಷ್ಟಾಂತಗಳನ್ನು ವಿವರಿಸಿಕೊಟ್ಟಿದ್ದೇವೆ.

(98) ಮತ್ತು ಅವನು ನಿಮ್ಮನ್ನು ಒಂದೇ ಜೀವÀದಿಂದ ಸೃಷ್ಟಿಸಿದವನಾಗಿದ್ದಾನೆ. ನಂತರ ಒಂದು ವಾಸಸ್ಥಳವು, ಇನ್ನೊಂದು ಒಪ್ಪಿಸಲ್ಪಡದ ಸ್ಥಳವಿದೆ. ನಿಸ್ಸಂಶಯವಾಗಿಯು ಗ್ರಹಿಸುವ ಜನರಿಗಾಗಿ ನಾವು ದೃಷ್ಟಾಂತಗಳನ್ನು ವಿವರಿಸಿ ಕೊಟ್ಟಿದ್ದೇವೆ.

(99) ಅವನೇ (ಅಲ್ಲಾಹನೇ) ಆಕಾಶದಿಂದ ನೀರನ್ನು ಸುರಿಸಿದವನು. ನಂತರ ನಾವು ಆ ನೀರಿನಿಂದ ಸಕಲ ವಿಧದ ವನಸ್ಪತಿ ಮೊಳಕೆಗಳನ್ನು ಹೊರತರುತ್ತೇವೆ. ಆ ಬಳಿಕ ಅದರಿಂದ ಹಸಿರಾದ ಸಸ್ಯಗಳನ್ನು ಹೊರತರುತ್ತೇವೆ. ಮತ್ತು ಅದರಿಂದ ಹುಲುಸಾಗಿ ತುಂಬಿ ತುಳುಕುವ ಧಾನ್ಯಗಳನ್ನು ಹೊರತರುತ್ತೇವೆ, ಮತ್ತು ಖರ್ಜೂರದ ಮರದಿಂದ ಅಥವಾ ಅದರ ಮೊಗ್ಗುಗಳಿಂದ ತೂಗಿ ನಿಲ್ಲುವ ಗೊನೆಗಳು ಹೊರಬರುತ್ತವೆ. ದ್ರಾಕ್ಷೆ ತೋಟಗಳನ್ನು ಝೈತೂನ್ (ಆಲಿವ್) ಅನ್ನು, ದಾಳಿಂಬೆಗಳನ್ನು ಸಾದೃಶ್ಯವಿರುವ ಮತ್ತು ಪರಸ್ಪರ ಸಾದೃಶ್ಯವಿರದಂತವುಗಳನ್ನು ಉಂಟು ಮಾಡುತ್ತೇವೆ. ಅವು ಫಲಭರಿತವಾಗುವಾಗ ಮತ್ತು ಪಕ್ವವಾಗುವಾಗ ಅವುಗಳ ಕಡೆಗೆ ನೋಡಿರಿ. ಅವುಗಳಲ್ಲಿ ಸತ್ಯವಿಶ್ವಾಸಗಳಿಗೆ ದೃಷ್ಟಾಂತಗಳಿವೆ.

(100) ಮತ್ತು ಜನರು ಯಕ್ಷಗಳನ್ನು ಅಲ್ಲಾಹನಿಗೆ ಸಹಭಾಗಿಗಳನ್ನಾಗಿ ನಿಶ್ಚಯಿಸಿ ಕೊಂಡಿದ್ದಾರೆ. ವಸ್ತುತಃ ಅವರನ್ನು ಅಲ್ಲಾಹನೇ ಸೃಷ್ಟಿಸಿದ್ದಾನೆ ಮತ್ತು ಅವರು ಅಲ್ಲಾಹನಿಗೆ ಯಾವುದೇ ಆಧಾರವಿಲ್ಲದೆ ಪುತ್ರರು ಮತ್ತು ಪುತ್ರಿಯರಿದ್ದಾರೆಂದು ಆರೋಪಿಸಿದ್ದಾರೆ ಹಾಗೂ ಅವನು ಅವರು ಹೇಳುತ್ತಿರುವ ಮಾತುಗಳಿಂದ ಅದೆಷ್ಟೋ ಪಾವನನೂ ಉನ್ನತನೂ ಆಗಿದ್ದಾನೆ.

(101) ಅವನು (ಪೂರ್ವ ಮಾದರಿಯಿಲ್ಲದೆ) ಆಕಾಶಗಳ ಮತ್ತು ಭೂಮಿಯ ಕರ್ತನಾಗಿದ್ದಾನೆ. ಅವನಿಗೆ ಸಂಗಾತಿಯೇ ಇಲ್ಲದಿರುವಾಗ ಅವನಿಗೆ ಸಂತಾನವುAಟಾಗುವುದಾದರು ಹೇಗೆ? ಅವನು ಸಕಲ ವಸ್ತುಗಳನ್ನು ಸೃಷ್ಟಿಸಿದ್ದಾನೆ. ಅವನು ಎಲ್ಲಾ ವಿಷಯಗಳ ಕುರಿತು ಅರಿವುಳ್ಳವನಾಗಿದ್ದಾನೆ.

(102) ಅವನೇ ನಿಮ್ಮ ಪ್ರಭುವಾದ ಅಲ್ಲಾಹನು. ಅವನ ಹೊರತು ಅನ್ಯ ಆರಾಧ್ಯನಿಲ್ಲ. ಅವನು ಸಕಲ ವಸ್ತುಗಳ ಸೃಷ್ಟಿಕರ್ತನಾಗಿದ್ದಾನೆ. ಅದ್ದರಿಂದ ಅವನನ್ನೇ ಆರಾಧಿಸಿರಿ. ಅವನು ಸಕಲ ವಿಷಯಗಳ ಮೇಲ್ವಿಚಾರಕನಾಗಿದ್ದಾನೆ.

(103) ದೃಷ್ಟಿಗಳು ಅವನನ್ನು ಗ್ರಹಿಸಲಾರವು ಮತ್ತು ಅವನು ಸಕಲ ದೃಷ್ಟಿಗಳನ್ನು ಗ್ರಹಿಸಿಕೊಳ್ಳುತ್ತಾನೆ. ಅವನು ಸೂಕ್ಷö್ಮ ದೃಷ್ಟಿಯುಳ್ಳವನೂ, ಸೂಕ್ಷö್ಮ ಜ್ಞಾನಿಯೂ ಆಗಿದ್ದಾನೆ.

(104) ನಿಮ್ಮ ಬಳಿಗೆ ನಿಮ್ಮ ಪ್ರಭುವಿನ ವತಿಯಿಂದ ಕಣ್ಣು ತೆರೆಸುವಂತಹ ಪ್ರಕಾಶಗಳು ಬಂದಿವೆ. ಆದ್ದರಿಂದ ಯಾರು ಅದನ್ನು ನೋಡುತ್ತಾನೋ ಅದರ ಪ್ರಯೋಜನ ಅವನಿಗೇ ಸಿಗುವುದು ಮತ್ತು ಯಾರು ಕುರುಡನಾಗುತ್ತಾನೋ ಅದರ ನಷ್ಟ ಅವನಿಗೇ ಅಗುವುದು. ನಾನು ನಿಮ್ಮ ಕಾವಲುಗಾರನಲ್ಲ.

(105) ಇದೇ ಪ್ರಕಾರ ನಾವು ನಾನಾ ವಿಧದಲ್ಲಿ ದೃಷ್ಟಾಂತಗಳನ್ನು ವಿವರಿಸಿ ಕೊಡುತ್ತೇವೆ. ಇದೇಕೆಂದರೆ ನೀವು ಯಾರಿಂದಲೋ ಕಲಿತು ಬಂದಿರುವಿರೆAದು ಬಹುದೇವಾರಾದಕರು ಹೇಳಲೆಂದು, ಮತ್ತು ಅರಿವು ಹೊಂದಿರುವ ಜನರಿಗೆ ನಾವಿದನ್ನು ವಿವರಿಸಿಕೊಡಲೆಂದಾಗಿದೆ.

(106) ನಿಮಗೆ ನಿಮ್ಮ ಪ್ರಭುವಿನ ವತಿಯಿಂದ ದಿವ್ಯ ಸಂದೇಶ ನೀಡಲಾಗಿರುವುದನ್ನು ಅನುಸರಿಸಿರಿ. ಅಲ್ಲಾಹನ ಹೊರತು ಅನ್ಯ ಆರಾಧ್ಯನಿಲ್ಲ ಮತ್ತು ಬಹುದೇವಾರಾಧಕರಿಂದ ನೀವು ವಿಮುಖರಾಗಿರಿ.

(107) ಅಲ್ಲಾಹನು ಬಲವಂತವಾಗಿ ತಡೆಯಲು ಬಯಸಿದ್ದರೆ ಅವರು ಅವನಿಗೆ ಸಹಭಾಗಿಗಳನ್ನು ನಿಶ್ಚಯಿಸುತ್ತಿರಲಿಲ್ಲ ಮತ್ತು ನಾವು ನಿಮ್ಮನ್ನು ಅವರ ಕಾವಲುಗಾರನನ್ನಾಗಿ ಮಾಡಿಲ್ಲ ಮತ್ತು ನೀವು ಅವರ ಹೊಣೆ ಹೊತ್ತವರೂ ಅಲ್ಲ.

(108) ಮತ್ತು ಅಲ್ಲಾಹನ ಹೊರತು ಅವರು ಕರೆದು ಪ್ರಾರ್ಥಿಸುತ್ತಿರುವವರನ್ನು ನೀವು ತೆಗಳಬೇಡಿರಿ. ಬಳಿಕ ಅವರು ಅಜ್ಞಾನವಿಲ್ಲದೆ ವೈರತ್ವದಿಂದ ಅಲ್ಲಾಹನನ್ನು ತೆಗಳುವರು. ಇದೇ ರೀತಿ ನಾವು ಪ್ರತಿಯೊಂದು ಸಮುದಾಯದವರಿಗೂ ಅವರ ಪ್ರವೃತ್ತಿಗಳನ್ನು ಅಕರ್ಷಕಗೊಳಿಸಿದ್ದೇವೆ. ನಂತರ ಅವರ ಮರಳುವಿಕೆಯು ಅವರ ಪ್ರಭುವಿನೆಡೆಗೇ ಆಗಿದೆ. ಆಗ ಅವನು ಅವರು ಮಾಡುತ್ತಿರುವುದರ ಕುರಿತು ಅವರಿಗೆ ತಿಳಿಸಿಕೊಡುವನು.

(109) ಅಂದರೆ “ತಮ್ಮ ಬಳಿಯೇನಾದರೂ ದೃಷ್ಟಾಂತವು ಬಂದರೆ ನಾವು ಅದರಲ್ಲಿ ವಿಶ್ವಾಸವಿಡುವೆವೆಂದು ಅವರು ತಮಗೆ ಸಾಧ್ಯವಿರುವಷ್ಟರ ಮಟ್ಟಿಗೆ ಬಲವಾಗಿ ಅಲ್ಲಾಹನ ಆಣೆ ಹಾಕುತ್ತಾರೆ. ದೃಷ್ಟಾಂತಗಳೆಲ್ಲವೂ ಅಲ್ಲಾಹನ ವಶದಲ್ಲಿವೆ. (ಸತ್ಯವಿಶ್ವಾಸಿಗಳೇ) ನಿಮಗೇನು ಗೊತ್ತು? ದೃಷ್ಟಾಂತಗಳು ಬಂದರೂ ಅವರು ವಿಶ್ವಾಸವಿಡಲಾರರು.

(110) ಅವರು ಮೊದಲ ಬಾರಿ ಇದರ ಮೇಲೆ ವಿಶ್ವಾಸವಿಡದಂತೆ ಈಗಲೂ ನಾವು ಸಹ ಅವರ ಹೃದಯಗಳನ್ನೂ, ಕಣ್ಣುಗಳನ್ನೂ ತಿರುಗಿಸಿ ಬಿಡುವೆವು. ಅವರು ತಮ್ಮ ಧಿಕ್ಕಾರದಲ್ಲಿ ಅಲೆದಾಡುವಂತೆ ನಾವು ಅವರನ್ನು ಬಿಟ್ಟು ಬಿಡುವೆವು.

(111) ನಾವು ಅವರೆಡೆಗೆ ದೂತರನ್ನು ಕಳುಹಿಸಿದರೂ, ಮೃತಪಟ್ಟವರು ಅವರೊಂದಿಗೆ ಮಾತನಾಡಿದರೂ ಸರ್ವ ವಸ್ತುಗಳನ್ನೂ ನಾವು ಅವರ ಕಣ್ಮುಂದೆ ತಂದು ಒಟ್ಟುಗೂಡಿಸಿದರೂ ಅವರು ವಿಶ್ವಾಸವಿಡಲಾರರು. ಆದರೆ ಅಲ್ಲಾಹನು ಇಚ್ಛಿಸಿದರೆ ಬೇರೆ ವಿಚಾರ. ಆದರೆ ಅವರ ಪೈಕಿ ಹೆಚ್ಚಿನವರು ಅಜ್ಞಾನಿಗಳಾಗಿದ್ದಾರೆ.

(112) ಮತ್ತು ಇದೇ ರೀತಿ ನಾವು ಪ್ರತಿಯೊಬ್ಬ ಪೈಗಂಬರರಿಗೆ ಮನುಷ್ಯರ ಮತ್ತು ಯಕ್ಷಗಳ ಪೈಕಿ ಶೈತಾನರನ್ನು ಶತ್ರುಗಳನ್ನಾಗಿ ಮಾಡಿದ್ದೇವೆ. ಅವರನ್ನು ವಂಚಿಸಲೆAದು ಅವರಲ್ಲಿ ಕೆಲವರು ಇನ್ನು ಕೆಲವರಿಗೆ ಆಕರ್ಷಕ ಮಾತುಗಳ ದುರ್ಬೋಧನೆಯನ್ನು ಮಾಡುತ್ತಿದ್ದಾರೆ. ಮತ್ತು ಅಲ್ಲಾಹನು ಇಚ್ಛಿಸುತ್ತಿದ್ದರೆ ಅವರು ಅಂತಹ ಕೃತ್ಯವನ್ನು ಮಾಡುತ್ತಿರಲಿಲ್ಲ. ಆದ್ದರಿಂದ ಅವರನ್ನೂ, ಅವರು ಹೆಣೆಯುತ್ತಿರುವುದನ್ನೂ ನೀವು ಬಿಟ್ಟು ಬಿಡಿರಿ.

(113) ಪರಲೋಕದ ಮೇಲೆ ವಿಶ್ವಾಸವಿಡದವರ ಹೃದಯಗಳು ಅದರೆಡೆಗೆ ವಾಲಿಬಿಡಲೆಂದೂ, ಮತ್ತು ಅದರಿಂದ ತೃಪ್ತರಾಗಲೆಂದೂ, ಮತ್ತು ಅವರು ಮಾಡುತ್ತಿದ್ದ ಕಾರ್ಯಗಳನ್ನೆಲ್ಲ ಮಾಡಿಕೊಂಡಿರಲೆAದಾಗಿದೆ.

(114) ಏನು ನಾನು ಅಲ್ಲಾಹನ ಹೊರತು ಇತರರನ್ನು ತೀರ್ಪುಗಾರರನ್ನಾಗಿ ಅರಸಬೇಕೆ? ವಸ್ತುತಃ ಅವನು ಒಂದು ವಿವರ ಪೂರ್ಣ ಗ್ರಂಥವನ್ನು ನಿಮ್ಮೆಡೆಗೆ ಅವತೀರ್ಣಗೊಳಿಸಿದ್ದಾನೆ. ಮತ್ತು ಗ್ರಂಥ ನೀಡಲಾದವರು ಇದು ನಿಮ್ಮ ಪ್ರಭುವಿನ ಕಡೆಯಿಂದ ಸತ್ಯದೊಂದಿಗೆ ಅವತೀರ್ಣಗೊಳಿಸಲಾಗಿದೆ ಎಂದು ಅರಿತು ಕೊಂಡಿದ್ದಾರೆ. ಆದ್ದರಿಂದ ನೀವು ಸಂದೇಹಪಡುವವರಲ್ಲಿ ಸೇರಬೇಡಿರಿ.

(115) ನಿಮ್ಮ ಪ್ರಭುವಿನ ವಚನ ಸತ್ಯ ಹಾಗೂ ನ್ಯಾಯದ ಮಟ್ಟಿಗೆ ಪರಿಪೂರ್ಣವಾದುದಾಗಿದೆ. ಅವನ ವಚನಗಳನ್ನು ಬದಲಾಯಿಸುವವನಾರೂ ಇಲ್ಲ. ಅವನು ಚೆನ್ನಾಗಿ ಆಲಿಸುವವನೂ, ಎಲ್ಲವನ್ನು ಅರಿಯುವವನೂ ಆಗಿದ್ದಾನೆ.

(116) ಮತ್ತು ಭೂಮಿಯಲ್ಲಿರುವ ಹೆಚ್ಚಿನವರನ್ನು ನೀವು ಅನುಸರಿಸುವುದಾದರೆ ಅವರು ನಿಮ್ಮನ್ನು ಅಲ್ಲಾಹನ ಮಾರ್ಗದಿಂದ ಭ್ರಷ್ಟಗೊಳಿಸಿಬಿಡುವರು. ಅವರು ಕೇವಲ ಊಹಾಪೋಹಗಳನ್ನು ಅನುಸರಿಸುತ್ತಿದ್ದಾರೆ ಮತ್ತು ಅವರು ಅನುಮಾನದ ಮಾತುಗಳನ್ನಾಡುತ್ತಾರೆ.

(117) ಖಂಡಿತವಾಗಿಯು ನಿಮ್ಮ ಪ್ರಭುವು ತನ್ನ ಮಾರ್ಗದಿಂದ ವ್ಯತಿಚಲಿಸುವವನು ಯಾರೆಂದು ಚೆನ್ನಾಗಿ ಅರಿತಿರುವನು ಮತ್ತು ಸನ್ಮಾರ್ಗದಲ್ಲಿ ಚಲಿಸುವವರನ್ನು ಅವನು ಚೆನ್ನಾಗಿ ಅರಿತಿದ್ದಾನೆ.

(118) ನೀವು ಅವನ ನಿಯಮಗಳಲ್ಲಿ ವಿಶ್ವಾಸವಿಡುವವರಾಗಿದ್ದರೆ, ಅಲ್ಲಾಹನ ನಾಮವನ್ನು ಉಚ್ಛರಿಸಿದ ಪ್ರಾಣಿಯನ್ನು ತಿನ್ನಿರಿ.

(119) ಮತ್ತು ಅಲ್ಲಾಹನ ನಾಮವನ್ನು ಉಚ್ಛರಿಸಿ ಕೊಯ್ಯಲಾದ ಪ್ರಾಣಿಯನ್ನು ತಿನ್ನದಿರಲು ನಿಮಗೇನಾಗಿದೆ? ನೀವು ಅನಿವಾರ್ಯಕ್ಕೊಳಗಾಗುವುದರ ಹೊರತು ಅಲ್ಲಾಹನು ನಿಮ್ಮ ಮೇಲೆ ನಿಷಿದ್ಧಗೊಳಿಸಲಾಗಿರುವುದನ್ನು ನಿಮಗೆ ವಿವರಿಸಿಕೊಟ್ಟಿದ್ದಾನೆ. ಮತ್ತು ಹೆಚ್ಚಿನವರು ತಮ್ಮ ಇಷ್ಟಾನುಸಾರ ಯಾವುದೇ ಆಧಾರವಿಲ್ಲದೆ ಜನರನ್ನು ದಾರಿಗೆಡಿಸುತ್ತಿದ್ದಾರೆ. ನಿಮ್ಮ ಪ್ರಭು ಹದ್ದು ಮೀರುವವರನ್ನು ಚೆನ್ನಾಗಿ ಅರಿಯುತ್ತಾನೆ.

(120) ಮತ್ತು ನೀವು ಪ್ರತ್ಯಕ್ಷ ಹಾಗೂ ಪರೋಕ್ಷವಾದ ಪಾಪಗಳನ್ನೂ ಬಿಟ್ಟು ಬಿಡಿರಿ. ನಿಸ್ಸಂಶಯವಾಗಿಯು ಪಾಪ ಮಾಡುತ್ತಿರುವವರು ತಮ್ಮ ಪಾಪಕ್ಕೆ ತಕ್ಕ ಪ್ರತಿಫಲವನ್ನು ಸದ್ಯದಲ್ಲೇ ಪಡೆಯಲಿರುವರು.

(121) ಓ ಸತ್ಯವಿಶ್ವಾಸಿಗಳೇ, ಅಲ್ಲಾಹನ ನಾಮವನ್ನು ಉಚ್ಛರಿಸದೇ ಕೊಯ್ಯಲಾದ ಪ್ರಾಣಿಗಳನ್ನು ನೀವು ತಿನ್ನ ಬೇಡಿರಿ. ಇದು ಧಿಕ್ಕಾರವಾಗಿದೆ, ಖಂಡಿತವಾಗಿಯು ನಿಮ್ಮೊಂದಿಗೆ ತರ್ಕಿಸುವುದಕ್ಕಾಗಿ ಶೈತಾನರು ತಮ್ಮ ಮಿತ್ರರಿಗೆ ದುರ್ಬೋಧನೆ ನೀಡುತ್ತಿರುವರು ಮತ್ತು ನೀವೇನಾದರೂ ಅವರನ್ನು ಅನುಸರಿಸಿದರೆ ಖಂಡಿತವಾಗಿಯು ನೀವು (ಅಲ್ಲಾಹನೊಂದಿಗೆ) ಸಹಭಾಗಿಗಳನ್ನು ನಿಶ್ಚಯಿಸಿದವರಾಗುವಿರಿ.

(122) (ಸತ್ಯವಿಶ್ವಾಸದಿಂದ ವಂಚಿತನಾಗಿದ್ದ) ಮೃತ ವ್ಯಕ್ತಿಯೊಬ್ಬನನ್ನು ನಾವು (ಸತ್ಯವಿಶ್ವಾಸವನ್ನು ನೀಡಿ) ಜೀವಂತಗೊಳಿಸಿ ಮತ್ತು ಅವನಿಗೆ ಒಂದು ಪ್ರಕಾಶವನ್ನು ನೀಡಿದೆವು. ಅವನು (ಪ್ರಕಾಶವನ್ನು ತಲುಪಿಸಲು) ಜನರ ನಡುವೆ ಓಡಾಡಿಕೊಂಡಿದ್ದಾನೆ. ಅಂತಹ ವ್ಯಕ್ತಿಯು, ಅಂಧಕಾರಗಳಿAದ ಹೊರಬರಲು ಸಾಧ್ಯವಾಗದಂತಹ ವ್ಯಕ್ತಿಯಂತಾಗುವನೇ? ಹೀಗೆ ಸತ್ಯನಿಷೇಧಿಗಳಿಗೆ ಅವರ ಕರ್ಮಗಳನ್ನು ಮನಮೋಹಕಗೊಳಿಸಲಾಗಿದೆ.

(123) ಇದೇ ಪ್ರಕಾರ ನಾವು ಪ್ರತಿಯೊಂದು ನಾಡಿನಲ್ಲೂ, ಅಪರಾಧಿಗಳನ್ನೇ ಅಲ್ಲಿನ ನಾಯಕರನ್ನಾಗಿ ಮಾಡುತ್ತೇವೆ. ಇದೇಕೆಂದರೆ ಅವರು ಅಲ್ಲಿ ಕುತಂತ್ರಗಳನ್ನು ಹೂಡಲೆಂದಾಗಿದೆ ಮತ್ತು ಅವರು ಸ್ವತಃ ತಮ್ಮ ವಿರುದ್ಧವೆ ಕುತಂತ್ರಗಳನ್ನು ಹೂಡುತ್ತಿದ್ದಾರೆ. ಆದರೆ ಅವರಿಗೆ ಪ್ರಜ್ಞೆಯಿಲ್ಲ.

(124) ಮತ್ತು ಅವರ (ಮಕ್ಕಾಃದ ಖುರೈಷರ) ಬಳಿ ಯಾವ ದೃಷ್ಟಾಂತವು ಬಂದರೂ ಅಲ್ಲಾಹನ ಸಂದೇಶವಾಹಕರಿಗೆ ನೀಡಲಾಗಿರುವ ದಿವ್ಯ ಬೋಧನೆ ನಮಗೂ ನೀಡುವವರೆಗೆ ನಾವು ವಿಶ್ವಾಸವಿಡಲಾರೆವು. ಎಂದು ಅವರು ಹೇಳುತ್ತಾರೆ. ಆದರೆ ತನ್ನ ಸಂದೇಶವಾಹಕತ್ವವನ್ನು ಎಲ್ಲಿ ಒಪ್ಪಿಸಬೇಕೆಂಬುದನ್ನು ಅಲ್ಲಾಹನು ಚೆನ್ನಾಗಿ ಅರಿತಿದ್ದಾನೆ. ಸದ್ಯದಲ್ಲೇ ಅಪರಾಧವೆಸಗಿದವರು ತಮ್ಮ ದುಷ್ಕೃತ್ಯಗಳ ಫಲವಾಗಿ ಅಲ್ಲಾಹನ ಬಳಿ ನಿಂದ್ಯತೆಯನ್ನು, ಕಠಿಣವಾದ ಶಿಕ್ಷೆಯನ್ನು ಅನುಭವಿಸುವರು.

(125) ಆದರೆ ಯಾರನ್ನು ಸನ್ಮಾರ್ಗದಲ್ಲಿ ಮುನ್ನಡೆಸಲು ಅಲ್ಲಾಹನು ಇಚ್ಛಿಸುತ್ತಾನೋ ಅವನ ಹೃದಯವನ್ನು ಇಸ್ಲಾಮಿಗಾಗಿ ವಿಶಾಲಗೊಳಿಸುವನು. ಯಾರನ್ನು ಅಲ್ಲಾಹನು ಪಥಭ್ರಷ್ಟಗೊಳಿಸಲು ಇಚ್ಛಿಸುತ್ತಾನೋ ಅವನ ಹೃದಯವನ್ನು ಇಕ್ಕಟ್ಟುಗೊಳಿಸುತ್ತಾನೆ. ಒಬ್ಬನನ್ನು ಬಲವಂತವಾಗಿ ಆಕಾಶದಲ್ಲಿ ಏರಿ ಹೋಗಲು ವಿವಷಗೊಳಿಸಲಾಗಿರುವಂತೆ. ಇದೇ ರೀತಿ ಅಲ್ಲಾಹನು ವಿಶ್ವಾಸವಿಡದವರ ಮೇಲೆ ಅಶುದ್ಧತೆಯನ್ನು ಹೇರಿ ಬಿಡುತ್ತಾನೆ.

(126) ಇದು ನಿಮ್ಮ ಪ್ರಭುವಿನ ನೇರ ಮಾರ್ಗವಾಗಿದೆ. ಉಪದೇಶ ಸ್ವೀಕರಿಸುವ ಜನರಿಗೆ ನಾವು ದೃಷ್ಟಾಂತಗಳನ್ನು ವಿವರಿಸಿಕೊಟ್ಟಿದ್ದೇವೆ.

(127) ಅವರಿಗೆ ಅವರ ಪ್ರಭುವಿನ ಬಳಿ ಶಾಂತಿ ಧಾಮವಿದೆ. ಅವರು ಮಾಡುತ್ತಿದ್ದ ಸತ್ಕರ್ಮಗಳ ನಿಮಿತ್ತ ಅವನು ಅವರ ಮಿತ್ರನಾಗಿದ್ದಾನೆ.

(128) ಮತ್ತು ಅವರೆಲ್ಲರನ್ನು ಅಲ್ಲಾಹನು ಒಟ್ಟುಗೂಡಿಸುವ ದಿನ (ಹೇಳುವನು): ಓ ದುಷ್ಟ ಯಕ್ಷ ಸಮೂಹವೇ, ಮನುಷ್ಯರ ಪೈಕಿ ಅನೇಕ ಜನರನ್ನು ನೀವು ಪಥಭ್ರಷ್ಟಗೊಳಿಸಿ ನಿಮ್ಮ ಅನುಯಾಯಿಗಳನ್ನಾಗಿ ಮಾಡಿಕೊಂಡಿರುವಿರಿ. ಮನುಷ್ಯರ ಪೈಕಿ ಅವರ ಮಿತ್ರರಾಗಿದ್ದವರು ಹೇಳುವರು: ನಮ್ಮ ಪ್ರಭು, ನಮ್ಮಲ್ಲಿ ಕೆಲವರು ಇತರ ಕೆಲವರಿಂದ ಪ್ರಯೋಜನವನ್ನು ಪಡೆದಿದ್ದಾರೆ. ನೀನು ನಮಗೆ ನಿಶ್ಚಯಿಸಿದ ಅವಧಿಯನ್ನು ನಾವು ತಲುಪಿದ್ದೇವೆ. ಆಗ ಅವನು ಹೇಳುವನು: ನಿಮ್ಮೆಲ್ಲರ ವಾಸಸ್ಥಳವು ನರಕವಾಗಿದೆ; ಅದರಲ್ಲಿ ನೀವು ಶಾಶ್ವತವಾಗಿರುವಿರಿ. ಆದರೆ ಅಲ್ಲಾಹನು ಇಚ್ಛಿಸುವುದರ ಹೊರತು ನಿಸ್ಸಂಶಯವಾಗಿಯು ನಿಮ್ಮ ಪ್ರಭು ಮಹಾ ಯುಕ್ತಿವಂತನೂ, ಸರ್ವಜ್ಞನೂ ಆಗಿದ್ದಾನೆ.

(129) ಇದೇ ರೀತಿ ದುಷ್ಕರ್ಮಿಗಳ ಕರ್ಮಗಳ ನಿಮಿತ್ತ ನಾವು ಅವರ ಪೈಕಿ ಕೆಲವರನ್ನು ಕೆಲವರ ಆಪ್ತರನ್ನಾಗಿ ಮಾಡುವೆವು.

(130) ಓ ಯಕ್ಷ ಮತ್ತು ಮನುಷ್ಯ ಸಮೂಹವೇ, ನಿಮಗೆ ನನ್ನ ನಿಯಮ ಶಾಸನಗಳನ್ನು ವಿವರಿಸಿ ಕೊಡುವ ಮತ್ತು ನಿಮ್ಮ ಈ ದಿನದ ಬೇಟೆಯ ಎಚ್ಚರಿಕೆ ನೀಡುವಂತಹ ಸಂದೇಶವಾಹಕರು ನಿಮ್ಮ ಬಳಿಗೆ ಬಂದಿರಲಿಲ್ಲವೇ? ಅವರು ಹೇಳುವರು: ನಾವು ನಮ್ಮ ವಿರುದ್ಧವೇ ಸಾಕ್ಷಿಯಾಗಿದ್ದೇವೆ ಮತ್ತು ಐಹಿಕ ಜೀವನವು ಅವರನ್ನು ಮರಳುಗೊಳಿಸಿತು. ಅವರು ತಾವು ಸತ್ಯನಿಷೇಧಿ ಗಳಾಗಿದ್ದೇವೆಂದು ಸ್ವತಃ ತಮ್ಮ ವಿರುದ್ಧವೇ ಸಾಕ್ಷö್ಯವಹಿಸುವರು.

(131) ಇದು (ಸಂದೇಶವಾಹಕರನ್ನು ನಿಯೋಗಿಸುವುದು) ನಿಮ್ಮ ಪ್ರಭುವು ಯಾವುದೇ ನಾಡನ್ನು ಅದರ ನಿವಾಸಿಗಳು ಅಜ್ಞರಾಗಿರುವ ಸ್ಥಿತಿಯಲ್ಲಿ ಅವರ ಸತ್ಯನಿಷೇಧದ ನಿಮಿತ್ತ ನಾಶ ಮಾಡುವವನಲ್ಲ ಎಂಬುದರಿAದಾಗಿದೆ.

(132) ಪ್ರತಿಯೊಬ್ಬರಿಗೂ ತಮ್ಮ ಕರ್ಮಗಳ ಪ್ರತಿಫಲವಾಗಿ ಪದವಿಗಳಿವೆ ಮತ್ತು ನಿಮ್ಮ ಪ್ರಭು ಅವರ ಕರ್ಮಗಳ ಕುರಿತು ಅಲಕ್ಷö್ಯನಲ್ಲ.

(133) ನಿಮ್ಮ ಪ್ರಭು ನಿರಪೇಕ್ಷನು, ಕರುಣೆಯುಳ್ಳವನು ಆಗಿದ್ದಾನೆ. ಅವನಿಚ್ಛಿಸಿದರೆ ನಿಮ್ಮನ್ನು ತೊಲಗಿಸಿ ಬೇರೆ ಜನತೆಯ ಸಂತಾನಗಳಿAದ ನಿಮ್ಮನ್ನು ಉಂಟುಮಾಡಿದAತೆ ನಿಮ್ಮ ನಂತರ ತಾನಿಚ್ಛಿಸುವವರನ್ನು ನಿಮ್ಮ ಉತ್ತರಾಧಿಕಾರಿಗಳನ್ನಾಗಿ ಮಾಡುವನು.

(134) ನಿಮಗೆ ಎಚ್ಚರಿಗೆ ನೀಡಲಾಗುತ್ತಿರುವುದು ನಿಸ್ಸಂದೇಹವಾಗಿಯು (ಪ್ರಳಯವು) ಬರಲಿದೆ ಮತ್ತು ಅಲ್ಲಾಹನನ್ನು ಮಣಿಸಲು ನಿಮಗೆ ಸಾಧ್ಯವಿಲ್ಲ.

(135) ಹೇಳಿರಿ: ನನ್ನ ಜನತೆಯೇ, ನೀವು ನಿಮ್ಮ ಕ್ರಮಕ್ಕನುಗುಣವಾಗಿ ಕರ್ಮವೆಸಗಿರಿ. ನಾನೂ ಕರ್ಮವೆಸಗುತ್ತಿರುವೆನು. ನೀವು ಸಧ್ಯದಲ್ಲೇ ತಿಳಿಯುವಿರಿ. ಪರಲೋಕ ನಿಲಯವು (ಸ್ವರ್ಗ) ಯಾರ ಪಾಲಿಗಿದೆ. ಖಂಡಿತವಾಗಿಯು ಅಕ್ರಮಿಗಳು ಯಶಸ್ಸು ಪಡೆಯಲಾರರು.

(136) ಅಲ್ಲಾಹನು ಸೃಷ್ಟಿಸಿದ ಕೃಷಿಯಿಂದ ಮತ್ತು ಜಾನುವಾರುಗಳಿಂದ ಅವನಿಗಾಗಿ ಒಂದು ಪಾಲನ್ನು ನಿಶ್ಚಯಿಸಿದ್ದಾರೆ ಮತ್ತು ತಮ್ಮ ಭ್ರಮೆಯಿಂದ ಇದು ಅಲ್ಲಾಹನದ್ದು ಮತ್ತು ಇನ್ನೊಂದು ಪಾಲನ್ನು ಇದು ತಮ್ಮ ಆರಾಧ್ಯರದ್ದು ಎಂದು ಹೇಳುತ್ತಾರೆ. ನಂತರ ಅವರ ಸಹಭಾಗಿಗಳಿರುವಂತಹದ್ದು ಅಲ್ಲಾಹನಿಗೆ ತಲುಪುವುದಿಲ್ಲ. ಹಾಗೂ ಅಲ್ಲಾಹನಿಗಿರುವುದು ಅವರ ಆರಾಧ್ಯರಿಗೆ ತಲುಪುತ್ತದೆ ಎಂದು ವಾದಿಸುತ್ತಾರೆ. ಅವರು ಮಾಡುತ್ತಿರುವ ತೀರ್ಪು ಅದೆಷ್ಟು ಕೆಟ್ಟದ್ದಾಗಿದೆ!

(137) ಮತ್ತು ಅದೇ ರೀತಿ ಅನೇಕ ಬಹುದೇವವಿಶ್ವಾಸಿಗಳ ಮನಸ್ಸಿನಲ್ಲಿ ಅವರ ದೇವತೆಗಳು ಅವರ ಮಕ್ಕಳನ್ನು ಕೊಲ್ಲುವುದನ್ನು (ಅವರ ದೃಷ್ಟಿಯಲ್ಲಿ) ಸುಂದರವಾಗಿಸಿದ್ದಾರೆ. ಇದು ಅವರ ಸಂತಾನವನ್ನು ನಾಶಗೊಳಿಸಲೆಂದು, ಅವರ ಧರ್ಮವನ್ನು ಅವರಿಗೆ ಗೊಂದಲಕ್ಕೀಡು ಮಾಡಲೆಂದಾಗಿದೆ ಮತ್ತು ಅವರು ಹೇಳುತ್ತಾರೆ: ಅಲ್ಲಾಹನು ಇಚ್ಛಿಸುತ್ತಿದ್ದರೆ ಅವರು ಅಂತಹ ಕೃತ್ಯವನ್ನು ಮಾಡುತ್ತಿರಲಿಲ್ಲ. ಆದ್ದರಿಂದ ನೀವು ಅವರನ್ನೂ, ಅವರು ಹೆಣೆಯುತ್ತಿರುವ ವಿಚಾರಗಳನ್ನೂ ಬಿಟ್ಟು ಬಿಡಿರಿ.

(138) ಇವು ನಿಷೇಧಿಸಲಾದ ಜಾನುವಾರುಗಳು ಮತ್ತು ಕೃಷಿಗಳು ಇವುಗಳನ್ನು ನಾವು ಇಚ್ಛಿಸುವವರ ಹೊರತು ಇನ್ನಾರೂ ತಿನ್ನುವಂತಿಲ್ಲ ಎಂದು ಅವರು ತಮ್ಮ ಸ್ವೇಚ್ಛೆಯಂತೆ ಹೇಳುತ್ತಾರೆ. ಮತ್ತು ಕೆಲವು ಜಾನುವಾರುಗಳ ಮೇಲೆ ಸವಾರಿ ಮಾಡುವುದನ್ನು ನಿಷಿದ್ಧಗೊಳಿಸಲಾಗಿದೆ ಮತ್ತು ಅಲ್ಲಾಹನ ನಾಮವನ್ನು ಉಚ್ಛರಿಸಿದ ಕೆಲವು ಜಾನುವಾರುಗಳೂ ಇವೆ. ಇವೆಲ್ಲವೂ ಅಲ್ಲಾಹನ ಮೇಲೆ ಸುಳ್ಳಾರೋಪ ಮಾಡಿರುವುದಾಗಿದೆ. ಶೀಘ್ರವೇ ಅಲ್ಲಾಹನು ಅವರು ಮಾಡಿರುವುದಕ್ಕೆ ತಕ್ಕ ಪ್ರತಿಫಲವನ್ನು ಅವರಿಗೆ ನೀಡಲಿರುವನು.

(139) ಮತ್ತು ಅವರು ಹೇಳುತ್ತಾರೆ: ಈ ಜಾನುವಾರುಗಳ ಗರ್ಭಾಶಯಗಳಲ್ಲಿರುವುದು ನಮ್ಮ ಪೈಕಿ ಪುರುಷರಿಗೆ ಮಾತ್ರವಿರುವುದು ಮತ್ತು ಅವು ನಮ್ಮ ಸ್ತಿçÃಯರಿಗೆ ನಿಷಿದ್ಧವಾಗಿದೆ. ಅದು ಸತ್ತದ್ದಾಗಿದ್ದರೆ ಅದರಲ್ಲಿ ಅವರೆಲ್ಲರೂ ಪಾಲುದಾರರಾಗುವರು. ಅವರ ಈ ಮಿಥ್ಯವಾದದ ಶಿಕ್ಷೆಯನ್ನು ಅವನು ಸದ್ಯದಲ್ಲೇ ಅವರಿಗೆ ನೀಡುವನು. ನಿಸ್ಸಂಶಯವಾಗಿಯು ಅವನು ಯುಕ್ತಿಪೂರ್ಣನೂ, ಮಹಾ ಜ್ಞಾನಿಯೂ ಆಗಿದ್ದಾನೆ.

(140) ವಾಸ್ತವದಲ್ಲಿ ತಮ್ಮ ಮಕ್ಕಳನ್ನು ಯಾವುದೇ ಜ್ಞಾನವಿಲ್ಲದೆ ಮೂರ್ಖತನದಿಂದ ಕೊಂದವರು ಮತ್ತು ಅಲ್ಲಾಹನು ಅವರಿಗೆ ನೀಡಿದ್ದನ್ನು ಅಲ್ಲಾಹನ ಮೇಲೆ ಸುಳ್ಳಾರೋಪ ಹೊರಿಸಿ ನಿಷಿದ್ಧಗೊಳಿಸಿದವರು ಖಂಡಿತವಾಗಿಯು ನಷ್ಟದಲ್ಲಿ ಬಿದ್ದು ಬಿಟ್ಟರು ಮತ್ತು ಅವರು ಮಾರ್ಗ ಭ್ರಷ್ಟರಾದರು. ಅವರು ಸನ್ಮಾರ್ಗ ಹೊಂದಿದವರಾಗಲಿಲ್ಲ.

(141) ಚಪ್ಪರಗಳಲ್ಲಿರುವ ಮತ್ತು ಚಪ್ಪರಗಳಿಲ್ಲದ ತೋಟಗಳನ್ನು ಮತ್ತು ಖರ್ಜೂರದ ಮರಗಳನ್ನೂ, ವೈವಿದ್ಯಮಯ ಫಲಗಳಿರುವ ಹೊಲಗಳನ್ನೂ, ಒಂದಕ್ಕೊAದು ಸಾದೃಶ್ಯವಿರುವಂತಹ ಸಾದೃಶ್ಯವಿಲ್ಲದಂತಹ ಓಲಿವ್ ಮತ್ತು ದಾಳಿಂಬೆಗಳನ್ನು ಉಂಟು ಮಾಡಿದವನು ಅವನೇ, ಫಲ ಬಿಡುವಾಗ ಅವುಗಳ ಫಲಗಳನ್ನು ತಿನ್ನಿರಿ ಮತ್ತು ಅವುಗಳ ಫಸಲುಗಳನ್ನು ಕೊಯ್ಯುವ ದಿನ ಅವುಗಳ ಹಕ್ಕನ್ನು(ಕಡ್ಡಾಯ ದಾನ) ನೀಡಿರಿ ಮತ್ತು ನೀವು ದುರ್ವ್ಯಯ ಮಾಡಬೇಡಿರಿ. ಖಂಡಿತವಾಗಿಯು ಅಲ್ಲಾಹನು ದುರ್ವ್ಯಯ ಮಾಡುವವರನ್ನು ಇಷ್ಟಪಡುವುದಿಲ್ಲ.

(142) ಮತ್ತು ಜಾನುವಾರುಗಳ ಪೈಕಿ ಭಾರ ಹೊರುವವುಗಳನ್ನೂ, ಗಿಡ್ಡ ಕಾಲುಗಳಿರುವವುಗಳನ್ನೂ (ಸೃಷ್ಟಿಸಿದ್ದಾನೆ) ಅಲ್ಲಾಹನು ನಿಮಗೆ ನೀಡಿರುವುದನ್ನು ತಿನ್ನಿರಿ. ಶೈತಾನನ ಹೆಜ್ಜೆಗಳನ್ನು ಅನುಸರಿಸಬೇಡಿರಿ. ನಿಸ್ಸಂದೇಹವಾಗಿಯು ಅವನು ನಿಮ್ಮ ಪ್ರತ್ಯಕ್ಷ ಶತ್ರುವಾಗಿದ್ದಾನೆ.

(143) ಜಾನುವಾರುಗಳ ಪೈಕಿ ಎಂಟು ಜೋಡಿಗಳನ್ನು (ಸೃಷ್ಟಿಸಿದ್ದಾನೆ). ಕುರಿಗಳಿಂದ ಎರಡು ಮತ್ತು ಆಡುಗಳಿಂದ ಎರಡು, ನೀವು ಕೇಳಿರಿ: ಅಲ್ಲಾಹನು ನಿಷಿದ್ಧಗೊಳಿಸಿರುವುದು ಆ ಎರಡು ಗಂಡುಗಳನ್ನೋ ಅಥವಾ ಆ ಎರಡರ ಹೆಣ್ಣುಗಳನ್ನೋ ಅಥವಾ ಆ ಎರಡು ಹೆಣ್ಣು ತಮ್ಮ ಗರ್ಭಾಶಯಗಳಲ್ಲಿ ಹೊತ್ತುಕೊಂಡಿರುವುದನ್ನೋ? ನೀವು ಸತ್ಯವಂತರಾಗಿದ್ದರೆ ನನಗೆ ಆಧಾರದೊಂದಿಗೆ ಹೇಳಿರಿ;

(144) ಒಂಟೆಯಿAದ ಎರಡು ವರ್ಗ ಮತ್ತು ಹಸುವಿನಿಂದ ಎರಡು ವರ್ಗವನ್ನು (ಸೃಷ್ಟಿಸಿದ್ದಾನೆ). ನೀವು ಕೇಳಿರಿ: ಅಲ್ಲಾಹನು ನಿಷಿದ್ಧಗೊಳಿಸಿರುವುದು ಆ ಎರಡು ಗಂಡು ವರ್ಗಗಳನ್ನೇ ಅಥವಾ ಆ ಎರಡು ಹೆಣ್ಣು ವರ್ಗಗಳನ್ನೇ ಅಥವಾ ಆ ಎರಡು ಹೆಣ್ಣು ವರ್ಗಗಳು ಗರ್ಭಾಶಯಗಳಲ್ಲಿ ಹೊತ್ತುಕೊಂಡಿರುವುದನ್ನೇ? ಅಲ್ಲಾಹನು ನಿಮಗಿದನ್ನು ಆದೇಶಿಸುವಾಗ ನೀವಲ್ಲಿ ಹಾಜರಿದ್ದಿರಾ? ಹೀಗಿರುವಾಗ ಯಾವುದೇ ಜ್ಞಾನವಿಲ್ಲದೆ ಜನರನ್ನು ದಾರಿಗೆಡಿಸಲು ಅಲ್ಲಾಹನ ಮೇಲೆ ಸುಳ್ಳಾರೋಪ ಹೊರಿಸಿದವನಿಗಿಂತ ದೊಡ್ಡ ಅಕ್ರಮಿ ಇನ್ನಾರಿದ್ದಾನೆ? ಖಂಡಿತವಾಗಿಯು ಅಲ್ಲಾಹನು ಅಕ್ರಮಿಗಳಾದ ಜನರಿಗೆ ಸನ್ಮಾರ್ಗವನ್ನು ತೋರಿಸುವುದಿಲ್ಲ.

(145) ಹೇಳಿರಿ: ನನ್ನ ಬಳಿ ಬಂದಿರುವ ದಿವ್ಯ ಸಂದೇಶದಲ್ಲಿ ತಿನ್ನುವವನಿಗೆ ತಿನ್ನಲು ನಿಷಿದ್ಧವಾಗಿರುವುದನ್ನು ನಾನು ಕಾಣುತ್ತಿಲ್ಲ. ಆದರೆ ಅದು ಶವ ಅಥವ ಹರಿಯುವ ರಕ್ತ ಅಥವಾ ಹಂದಿ ಮಾಂಸವಾಗಿರುವುದರ ಹೊರತು. ಏಕೆಂದರೆ ಅದು ಅಶುದ್ಧವಾದುದಾಗಿದೆ ಅಥವಾ ಅಲ್ಲಾಹನ ಹೊರತು ಇತರರ ಹೆಸರಲ್ಲಿ ಬಿಡಲಾದುದ್ದು. ಇನ್ನು ಯಾರಾದರೂ (ಅದನ್ನು ತಿನ್ನಲು) ನಿರ್ಬಂಧಿತನಾದರೆ ಅವನು ಆಜ್ಞೋಲ್ಲಂಘನೇ ಮಾಡುವವನು, ಮಿತಿಮೀರುವವನು ಆಗಿರದಿದ್ದರೆ ಖಂಡಿತವಾಗಿಯು ನಿಮ್ಮ ಪ್ರಭು ಅತ್ಯಧಿಕ ಕ್ಷಮಿಸುವವನು ಕರುಣಾನಿಧಿಯು ಆಗಿದ್ದಾನೆ.

(146) ಮತ್ತು ನಾವು ಯಹೂದರ ಮೇಲೆ ಉಗುರುಳ್ಳ ಎಲ್ಲಾ ಪ್ರಾಣಿಗಳನ್ನು ನಿಷಿದ್ಧಗೊಳಿಸಿದ್ದೆವು. ಹಸು, ಆಡು ಮುಂತಾದವುಗಳ ಕೊಬ್ಬುಗಳನ್ನು ನಾವು ಅವರ ಮೇಲೆ ನಿಷಿದ್ಧಗೊಳಿಸಿದ್ದೆವು. ಆದರೆ ಅವುಗಳ ಬೆನ್ನಿನ ಮೇಲಿರುವ ಅಥವಾ ಕರುಳಿನಲ್ಲಿರುವ ಅಥವಾ ಮೂಳೆಗಳಿಗೆ ಅಂಟಿಕೊAಡಿರುವುದರ ಹೊರತು. ಅವರ ದುಷ್ಟತನದ ನಿಮಿತ್ತ ನಾವು ಅವರಿಗೆ ಈ ಶಿಕ್ಷೆಯನ್ನು ನೀಡಿದೆವು. ಮತ್ತು ಖಂಡಿತವಾಗಿಯು ನಾವು ಸತ್ಯವಂತರಾಗಿದ್ದೇವೆ.

(147) ಇನ್ನು ಅವರು ನಿಮ್ಮನ್ನು ನಿರಾಕರಿಸುವುದಾದರೆ ಹೇಳಿರಿ: ನಿಮ್ಮ ಪ್ರಭು ವಿಶಾಲವಾದ ಕರುಣೆಯುಳ್ಳವನಾಗಿದ್ದಾನೆ ಮತ್ತು ಅವನ ಶಿಕ್ಷೆಯನ್ನು ಅಕ್ರಮಿಗಳಾದ ಜನರಿಂದ ಸರಿಸಲಾಗದು.

(148) ಬಹುದೇವಾರಾಧಕರು ಹೇಳುವರು: ಅಲ್ಲಾಹನು ಇಚ್ಛಿಸುತ್ತಿದ್ದರೆ ನಾವಾಗಲೀ, ನಮ್ಮ ಪೂರ್ವಿಕರಾಗಲೀ ದೇವಸಹಭಾಗಿತ್ವ ಮಾಡುತ್ತಿರಲಿಲ್ಲ ಮತ್ತು ನಾವು ಯಾವ ವಸ್ತುವನ್ನು ನಿಷಿದ್ಧವೆಂದು ಹೇಳುತ್ತಿರಲಿಲ್ಲ. ಇದೇ ರೀತಿ ಇವರ ಮುಂಚಿನವರು ನಿರಾಕಸಿದ್ದರು ಹಾಗೆಯೇ ನಮ್ಮ ಶಿಕ್ಷೆಯನ್ನು ಅವರು ಆಸ್ಪಾದಿಸಿಕೊಂಡರು. ಹೇಳಿರಿ: ನಿಮ್ಮ ಬಳಿ ಯಾವುದಾದರೂ ಪುರಾವೆಯಿದೆಯೇ? ಹಾಗಿದ್ದರೆ ಅದನ್ನು ನಮ್ಮೆದುರಿಗೆ ಪ್ರಕಟಗೊಳಿಸಿರಿ. ನೀವು ಊಹಾಪೋಹಗಳನ್ನು ಮಾತ್ರ ಅನುಸರಿಸುತ್ತಿರುವಿರಿ ಮತ್ತು ಸುಳ್ಳು ಹೇಳುತ್ತಿರುವಿರಿ.

(149) ಹೇಳಿರಿ: ನಿಮ್ಮ ನೆಪಗಳ ಎದುರು ಪರಿಪೂರ್ಣ ಪುರಾವೆಯು ಅಲ್ಲಾಹನದ್ದಾಗಿದೆ. ಅವನು ಇಚ್ಛಿಸುತ್ತಿದ್ದರೆ ನಿಮ್ಮೆಲ್ಲರನ್ನು ಸನ್ಮಾರ್ಗಕ್ಕೆ ಸೇರಿಸುತ್ತಿದ್ದನು (ಇದು ಅವನ ಯುಕ್ತಿಗೆ ವಿರುದ್ಧವಾಗಿದೆ).

(150) ಹೇಳಿರಿ: ಅಲ್ಲಾಹನು ಇವೆಲ್ಲವನ್ನು ನಿಷಿದ್ಧಗೊಳಿಸಿದ್ದಾನೆ ಎಂಬುದಕ್ಕೆ ಸಾಕ್ಷö್ಯವಹಿಸುವ ನಿಮ್ಮ ಸಾಕ್ಷಿಗಳನ್ನು ತನ್ನಿರಿ. ಇನ್ನು ಅವರು ಸಾಕ್ಷö್ಯವಹಿಸಿದರೆ ನೀವು ಅವರೊಂದಿಗೆ ಸಾಕ್ಷö್ಯವನ್ನು ನೀಡಬೇಡಿರಿ ಮತ್ತು ನಮ್ಮ ದೃಷ್ಟಾಂತಗಳನ್ನು ಸುಳ್ಳಾಗಿಸುವ ಪರಲೋಕದಲ್ಲಿ ವಿಶ್ವಾಸವಿಡದವರ ಮತ್ತು ನಿಮ್ಮ ಪ್ರಭುವಿನೊಂದಿಗೆ ಇತರರನ್ನು ಸಮಾನರನ್ನಾಗಿ ನಿಶ್ಚಯಿಸುವವರ ಸ್ವೇಚ್ಛೆಗಳನ್ನು ಅನುಸರಿಸಬೇಡಿರಿ.

(151) ಹೇಳಿರಿ ಬನ್ನಿರಿ ನಿಮ್ಮ ಪ್ರಭು ನಿಮ್ಮ ಮೇಲೆ ನಿಷಿದ್ಧಗೊಳಿಸಿರುವುದನ್ನು ನಾನು ನಿಮಗೆ ಓದಿ ತಿಳಿಸುತ್ತೇನೆ. ನೀವು ಅಲ್ಲಾಹನೊಂದಿಗೆ ಯಾರನ್ನೂ ಸಹಭಾಗಿಯನ್ನಾಗಿ ನಿಶ್ಚಯಿಸಬಾರದು, ಮಾತಾಪಿತರೊಂದಿಗೆ ಸದ್ವರ್ತನೆ ತೋರಬೇಕು. ದಾರಿದ್ರö್ಯದಿಂದಾಗಿ ನಿಮ್ಮ ಮಕ್ಕಳನ್ನು ಕೊಲ್ಲಬಾರದು. ನಿಮಗೂ, ಅವರಿಗೂ ಆಹಾರ ನೀಡುವವರು ನಾವಾಗಿದ್ದೇವೆ ಮತ್ತು ಪ್ರತ್ಯಕ್ಷವಾದ, ಪರೋಕ್ಷವಾದ ನಿರ್ಲಜ್ಜೆಯ ಕೃತ್ಯಗಳ ಬಳಿ ಸುಳಿಯಬೇಡಿರಿ. ಅಲ್ಲಾಹನು ಕೊಲ್ಲುವುದನ್ನು ನಿಷಿದ್ಧಗೊಳಿಸಿರುವ ಜೀವವನ್ನು ನ್ಯಾಯಬದ್ಧವಾಗಿಯಲ್ಲದೇ ಕೊಲ್ಲಬೇಡಿರಿ. ಅವನು ನಿಮಗೆ ನೀವು ಅರಿತುಕೊಳ್ಳಲೆಂದು ಈ ಆದೇಶವನ್ನು ನೀಡಿದ್ದಾನೆ.

(152) ಮತ್ತು ಅನಾಥನು ಪ್ರಬುದ್ಧನಾಗುವ ತನಕ ಅತ್ಯುತ್ತಮವಾದ ಮಾರ್ಗದಿಂದಲೇ ಹೊರತು ಅವನ ಸಂಪತ್ತಿನ ಹತ್ತಿರ ಸುಳಿಯ ಬೇಡಿರಿ. ನೀವು ಅಳತೆ ಮತ್ತು ತೂಕವನ್ನು ನ್ಯಾಯಪೂರ್ವಕವಾಗಿ ಪೂರ್ತಿ ನೀಡಿರಿ. ನಾವು ಯಾವೊಬ್ಬ ವ್ಯಕ್ತಿಗೂ ಅವನ ಸಾಮರ್ಥ್ಯಕ್ಕಿಂತ ಮಿಗಿಲಾಗಿ ಹೊಣೆಯನ್ನು ಹೊರಿಸುವುದಿಲ್ಲ. ನೀವು ಮಾತನಾಡುವಾಗ ನ್ಯಾಯ ಪಾಲಿಸಿರಿ. ಅವನು ನಿಕಟ ಬಂಧುವಾಗಿದ್ದರು ಸರಿಯೇ. ಅಲ್ಲಾಹನೊಂದಿಗೆ ಮಾಡಿಕೊಂಡಿರುವ ಕರಾರನ್ನು ಈಡೇರಿಸಿರಿ. ನೀವು ಸ್ಮರಿಸಿಕೊಳ್ಳಲೆಂದು ಅಲ್ಲಾಹನು ನಿಮಗೆ ಈ ಆದೇಶವನ್ನು ನೀಡಿದ್ದಾನೆ.

(153) ಮತ್ತು ಖಂಡಿತವಾಗಿಯೂ ಇದೇ ಧರ್ಮ ನನ್ನ ಋಜುವಾದ ಮಾರ್ಗ, ಆದ್ದರಿಂದ ನೀವು ಅದನ್ನು ಅನುಸರಿಸಿರಿ. ಇತರ ಮಾರ್ಗಗಳನ್ನು ಅನುಸರಿಸಬೇಡಿರಿ. ಅವು ನಿಮ್ಮನ್ನು ಅಲ್ಲಾಹನ ಮಾರ್ಗದಿಂದ ಬೇರ್ಪಡಿಸಿ ಬಿಡುತ್ತವೆ. ನೀವು ಭಯಭಕ್ತಿ ಪಾಲಿಸಲೆಂದು ಅವನು ನಿಮಗೆ ಈ ಆದೇಶವನ್ನು ನೀಡಿರುತ್ತಾನೆ.

(154) ಅನಂತರ ನಾವು ಮೂಸಾರವರಿಗೆ ಇಂತಹ ಗ್ರಂಥವನ್ನು ದಯಪಾಲಿಸಿದೆವು ಅದು ಸನ್ಮಾರ್ಗದಲ್ಲಿ ನಡೆಯುವವರಿಗೆ ಸಂಪೂರ್ಣವಾಗಿತ್ತು ಹಾಗೂ ಅದರಲ್ಲಿ ಅವಶ್ಯವಿರುವ ಪ್ರತಿಯೊಂದರ ವಿವರಣೆಯಿತ್ತು. ಹಾಗೂ ಆ ಗ್ರಂಥವು ಅನುಗ್ರಹವೂ, ಕಾರುಣ್ಯವೂ ಆಗಿತ್ತು. ಏಕೆಂದರೆ ಅವರು ತಮ್ಮ ಪ್ರಭುವನ್ನು ಭೇಟಿಯಾಗುವುದನ್ನು ದೃಢವಾಗಿ ನಂಬಲೆAದಾಗಿದೆ.

(155) ಈಗ ನಾವು ನಿಮಗಾಗಿ ಅನುಗ್ರಹಪೂರ್ಣ ಗ್ರಂಥ (ಕುರ್‌ಆನ್‌ನÀನ್ನು) ಅವತೀರ್ಣಗೊಳಿಸಿದೆವು. ಆದ್ದರಿಂದ ನೀವು ಇದನ್ನು ಅನುಸರಿಸಿರಿ ಮತ್ತು ಭಯಭಕ್ತಿಯನ್ನು ಪಾಲಿಸಿರಿ. ನಿಮಗೆ ಕಾರುಣ್ಯವು ಲಭಿಸಬಹುದು.

(156) ನಮಗಿಂತ ಮೊದಲಿದ್ದಂತಹ ಎರಡು ಸಮುದಾಯಗಳಿಗೆ ಮಾತ್ರ (ಯಹೂದಿಯರು ಮತ್ತು ಕ್ರೆöÊಸ್ತರು) ಗ್ರಂಥ ಅವತೀರ್ಣಗೊಳಿಸಲಾಗಿತ್ತು ಮತ್ತು ಅದನ್ನು ಕಲಿಯುವ ಅರಿವು ನಮಗಿರಲಿಲ್ಲ ಎಂದು ನೀವು ಹೇಳಬಾರದೆಂದು (ಕುರ್‌ಆನ್‌ನ್ನು ಅವರ್ತೀಣಗೊಳಿಸಲಾಗಿದೆ.)

(157) ನಮ್ಮ ಮೇಲೆ ಗ್ರಂಥವು ಅವತೀರ್ಣಗೊಳಿಸಿರುತ್ತಿದ್ದರೆ ನಾವು ಅವರಿಗಿಂತಲೂ ಹೆಚ್ಚು ಸನ್ಮಾರ್ಗಿಗಳಾಗಿರುತ್ತಿದ್ದೆವು ಎಂದು ನೀವು ನೆಪ ಹೂಡದಿರಲು ನಿಮ್ಮೆಡೆಗೆ ನಿಮ್ಮ ಪ್ರಭುವಿನ ಬಳಿಯಿಂದ ಒಂದು ಸ್ಪಷ್ಟ ಗ್ರಂಥವು, ಮಾರ್ಗದರ್ಶನವು ಮತ್ತು ಕಾರಣ್ಯವು ಬಂದಿದೆ. ಅದಾಗ್ಯೂ ನಮ್ಮ ದೃಷ್ಟಾಂತಗಳನ್ನು ನಿಷೇಧಿಸುವವನಿಗಿಂತ ಮತ್ತು ಅದರಿಂದ ವಿಮುಖನಾಗುವವನಿಗಿಂತ ದೊಡ್ಡ ಅಕ್ರಮಿ ಇನ್ನಾರಿದ್ದಾನೆ? ನಾವು ಸದ್ಯದಲ್ಲೇ ನಮ್ಮ ದೃಷ್ಟಾಂತಗಳಿAದ ವಿಮುಖರಾಗುವವರಿಗೆ ಅವರ ವಿಮುಖತೆಯ ನಿಮಿತ್ತ ಕಠಿಣ ಶಿಕ್ಷೆಯನ್ನು ನೀಡಲಿರುವೆವು.

(158) ಅವರು ತಮ್ಮ ಬಳಿಗೆ ದೂತರು ಬರುವುದನ್ನು ಅಥವಾ ತಮ್ಮ ಪ್ರಭು ಅವರ ಬಳಿಗೆ ಬರುವುದನ್ನು ಅಥವಾ ತಮ್ಮ ಪ್ರಭುವಿನ ಯಾವುದಾದರೂ (ದೊಡ್ಡ) ದೃಷ್ಟಾಂತವು ಬರುವುದನ್ನೇ ಕಾಯುತ್ತಿದ್ದಾರೆಯೇ? ತಮ್ಮ ಪ್ರಭುವಿನ ಯಾವುದಾದರೂ ಒಂದು ದೃಷ್ಟಾಂತವು ಬರುವ ದಿನದಂದು ಮೊದಲಿಂದಲೇ ವಿಶ್ವಾಸವಿದ್ದವನ ಅಥವ ತನ್ನ ವಿಶ್ವಾಸದೊಂದಿಗೆ ಯಾವ ಒಳಿತನ್ನು ಮಾಡಿಲ್ಲದವನ ವಿಶ್ವಾಸವು ಅವನಿಗೆ ಯಾವ ಪ್ರಯೋಜನಕ್ಕೂ ಬಾರದು. ಹೇಳಿರಿ: ನೀವು ಕಾಯುತ್ತಿರಿ. ನಾವೂ ಕಾಯುತ್ತಿದ್ದೇವೆ.

(159) (ಓ ಪೈಗಂಬರರೇ) ನಿಸ್ಸಂಶಯವಾಗಿಯು ತಮ್ಮ ಧರ್ಮವನ್ನು ವಿಭಜಿಸಿ ವಿವಿಧ ಪಂಗಡಗಳಾಗಿ ಬೇರ್ಪಟ್ಟವರೊಡನೆ ನಿಮಗೆ ಯಾವುದೇ ಸಂಬAಧವಿಲ್ಲ. ಅವರ ಪ್ರಕರಣ ಅಲ್ಲಾಹನ ಬಳಿಯಲ್ಲಿದೆ. ಅನಂತರ ಅವನು ಅವರಿಗೆ ಅವರ ಕೃತ್ಯಗಳನ್ನು ತಿಳಿಸಿಕೊಡಲಿದ್ದಾನೆ.

(160) ಯಾರು ಒಳಿತು ಮಾಡುತ್ತಾನೋ ಅವನಿಗೆ ಅದರ ಹತ್ತು ಪಟ್ಟು ಪ್ರತಿಫಲವಿದೆ. ಯಾರು ಕೆಡುಕನ್ನು ಮಾಡುತ್ತಾನೋ ಅವನಿಗೆ ಅದರಷ್ಟೇ ಶಿಕ್ಷೆಯು ಸಿಗುವುದು ಮತ್ತು ಅವರ ಮೇಲೆ ಅನ್ಯಾಯವೆಸಗಲಾರದು.

(161) ಹೇಳಿರಿ: ನನಗೆ ನನ್ನ ಪ್ರಭುವು ಋಜುವಾದ ಮಾರ್ಗವನ್ನು ತೋರಿಸಿಕೊಟ್ಟಿದ್ದಾನೆ. ಅದು ವಕ್ರತೆಯಿಲ್ಲದ ಧರ್ಮ. ಅಲ್ಲಾಹನಿಗೆ ಏಕನಿಷ್ಠನಾದ ಇಬ್ರಾಹೀಮರ ಧರ್ಮವಾಗಿದೆ ಮತ್ತು ಅವರು ದೇವಸಹಭಾಗಿತ್ವ ನಿಶ್ಚಯಿಸುವವರಲ್ಲಿ ಸೇರಿರಲಿಲ್ಲ.

(162) ಹೇಳಿರಿ: ಖಂಡಿತವಾಗಿಯು ನನ್ನ ನಮಾಝ್, ನನ್ನ ಸಕಲ ಆರಾಧನೆಗಳು, ನನ್ನ ಜೀವನ ಮತ್ತು ನನ್ನ ಮರಣ ಎಲ್ಲವೂ ಸರ್ವಲೋಕಗಳ ಒಡೆಯನಾದ ಅಲ್ಲಾಹನಿಗಾಗಿದೆ.

(163) ಅವನಿಗೆ ಯಾರೂ ಸಹಭಾಗಿಗಳಿಲ್ಲ ಮತ್ತು ನನಗೆ ಇದನ್ನೇ ಆಜ್ಞಾಪಿಸಲಾಗಿದೆ ಮತ್ತು ವಿಧೇಯರಾಗುವವರ ಪೈಕಿ ನಾನು ಮೊದಲಿಗನಾಗಿರುವೆನು.

(164) ಹೇಳಿರಿ: ಅಲ್ಲಾಹನೇ, ಸರ್ವ ವಸ್ತುಗಳ ಒಡೆಯನಾಗಿರುವಾಗ ಅವನ ಹೊರತು ಇತರರನ್ನು ನಾನು ಪ್ರಭುವನ್ನಾಗಿ ಅರಸುವುದೇ? ಪ್ರತಿಯೊಬ್ಬನೂ ತಾನು ಮಾಡಿರುವುದಕ್ಕೆ ತಾನೇ ಹೊಣೆಗಾರನಾಗಿದ್ದಾನೆ. ಮತ್ತು ಯಾವೊಬ್ಬ ಭಾರ ಹೊರುವವನು ಇನ್ನೊಬ್ಬನ ಭಾರವನ್ನು ಹೊರಲಾರನು. ಅನಂತರ ನಿಮೆಲ್ಲರಿಗೂ ನಿಮ್ಮ ಪ್ರಭುವಿನೆಡೆಗೆ ಮರಳಲಿಕ್ಕಿದೆ. ತರುವಾಯ ಅವನು ನೀವು ಭಿನ್ನಾಭಿಪ್ರಾಯ ಹೊಂದಿದ್ದ ವಿಷಯಗಳ ಕುರಿತು ನಿಮಗೆ ತಿಳಿಸಿಕೊಡುವನು.

(165) ಮತ್ತು ಅವನೇ ನಿಮ್ಮನ್ನು ಭೂಮಿಯಲ್ಲಿ (ಪೂರ್ವಿಕರ) ಉತ್ತರಾಧಿಕಾರಿಗಳನ್ನಾಗಿ ಮಾಡಿದವನು ಮತ್ತು ಅವನು ನಿಮಗೆ ಅನುಗ್ರಹ (ಅರ್ಹತೆಗಳನ್ನು) ನೀಡುವುದರಲ್ಲಿ ಪರೀಕ್ಷಿಸಲೆಂದು ನಿಮ್ಮಲ್ಲಿ ಕೆಲವರಿಗೆ ಬೇರೆ ಕೆಲವರಿಗಿಂತ ಉನ್ನತ ಪದವಿಗಳನ್ನು ನೀಡಿದನು. ಖಂಡಿತವಾಗಿಯು ನಿಮ್ಮ ಪ್ರಭು ಶೀಘ್ರವಾಗಿ ಶಿಕ್ಷಿಸುವವನಾಗಿದ್ದಾನೆ ಮತ್ತು ಖಂಡಿತವಾಗಿಯು ಅವನು ಅತ್ಯಧಿಕವಾಗಿ ಕ್ಷಮಿಸುವವನು, ಕರುಣಾನಿಧಿಯು ಆಗಿದ್ದಾನೆ.