(1) ಓ ಸತ್ಯವಿಶ್ವಾಸಿಗಳೇ, ನನ್ನ ಮತ್ತು ನಿಮ್ಮ ಶತ್ರುಗಳನ್ನು ನಿಮ್ಮ ಮಿತ್ರರನ್ನಾಗಿ ಮಾಡಿಕೊಳ್ಳಬೇಡಿರಿ. ನೀವು ಅವರೆಡೆಗೆ ಸ್ನೇಹ ಸಂದೇಶಗಳನ್ನು ಕಳುಹಿಸುತ್ತಿರುವಿರಿ, ವಾಸ್ತವದಲ್ಲಿ ಅವರು ನಿಮ್ಮೆಡೆಗೆ ಬಂದAತಹ ಸತ್ಯವನ್ನು ನಿಷೇಧಿಸುತ್ತಾರೆ. ಅವರು ಸಂದೇಶವಾಹಕರನ್ನೂ ಸ್ವತಃ ನಿಮ್ಮನ್ನೂ ಕೇವಲ ನೀವು ನಿಮ್ಮ ಪ್ರಭುವಾದ ಅಲ್ಲಾಹನಲ್ಲಿ ವಿಶ್ವಾಸವಿರಿಸಿದ್ದೀರಿ ಎಂಬ ಕಾರಣಕ್ಕೆ ಗಡಿಪಾರು ಮಾಡುತ್ತಾರೆ. ನೀವು ನನ್ನ ಮಾರ್ಗದಲ್ಲಿ ಹೋರಾಡಲಿಕ್ಕಾಗಿ ಮತ್ತು ನನ್ನ ಸಂತೃಪ್ತಿಯನ್ನು ಅರಸಲಿಕ್ಕಾಗಿ ಹೊರಟಿದ್ದೀರೆಂದಾದರೆ ನೀವು ಅವರೆಡೆಗೆ ಗುಪ್ತವಾಗಿ ಸ್ನೇಹ ಸಂದೇಶವನ್ನು ಏಕೆ ಕಳುಹಿಸುತ್ತಿರುವಿರಿ? ನೀವು ರಹಸ್ಯವಾಗಿಡುವುದನ್ನು, ಬಹಿರಂಗಗೊಳಿಸುವುದನ್ನು ನಾನು ಚೆನ್ನಾಗಿ ಬಲ್ಲೆನು. ನಿಮ್ಮ ಪೈಕಿ ಯಾರು ಈ ಕೃತ್ಯವನ್ನು ಮಾಡುತ್ತಾರೋ ಅವನು ಖಂಡಿತವಾಗಿಯೂ ನೇರ ಮಾರ್ಗದಿಂದ ಭ್ರಷ್ಟನಾಗುವನು.
(2) ಅವರು ನಿಮ್ಮ ಮೇಲೆ ನಿಯಂತ್ರಣ ಸಾಧಿಸಿದರೆ ನಿಮ್ಮ ವೈರಿಗಳಾಗಿ ಬಿಡುವರು ಮತ್ತು ತಮ್ಮ ಕೈಗಳನ್ನು ಹಾಗೂ ನಾಲಗೆಗಳನ್ನೂ ಕೆಟ್ಟ ಉದ್ದೇಶದಿಂದ ನಿಮ್ಮೆಡೆಗೆ ಚಾಚುವರು ನೀವೂ ಸಹ ಸತ್ಯನಿಷೇಧಿಗಳಾಗಲೆಂದು ಅವರು ಬಯಸುತ್ತಾರೆ.
(3) ಪುನರುತ್ಥಾನ ದಿನದಂದು ನಿಮ್ಮ ಕುಟುಂಬ ಸಂಬAಧವಾಗಲಿ ನಿಮ್ಮ ಸಂತಾನಗಳಾಗಲಿ ನಿಮಗೆ ಯಾವ ಪ್ರಯೋಜನಕ್ಕೂ ಬಾರದು, ಅಲ್ಲಾಹನು ನಿಮ್ಮ ನಡುವೆ ತೀರ್ಮಾನ ಮಾಡುವನು ಮತ್ತು ನೀವು ಮಾಡುತ್ತಿರುವುದನ್ನು ಅಲ್ಲಾಹನು ಚೆನ್ನಾಗಿ ನೋಡುವವನಾಗಿದ್ದಾನೆ.
(4) ನಿಮಗೆ ಪೈಗಂಬರ್ ಇಬ್ರಾಹೀಮರಲ್ಲೂ ಅವರ ಸಂಗಡಿಗರಲ್ಲೂ ಉತ್ತಮ ಮಾದರಿಯಿದೆ. ಅವರು ತಮ್ಮ ಜನಾಂಗದೊಡನೆ ಹೇಳಿದ ಸಂದರ್ಭ; ಖಂಡಿತ ನಾವು ನಿಮ್ಮಿಂದ ಮತ್ತು ನೀವು ಅಲ್ಲಾಹನ ಹೊರತು ಆರಾಧಿಸುತ್ತಿರುವ ವಸ್ತುಗಳಿಂದ ಸಂಬAಧ ಮುಕ್ತರಾಗಿದ್ದೇವೆ. ನೀವು ಏಕೈಕನಾದ ಅಲ್ಲಾಹನ ಮೇಲೆ ವಿಶ್ವಾಸವಿರಿಸುವ ತನಕ ನಮ್ಮ ಮತ್ತು ನಿಮ್ಮ ನಡುವೆ ಹಗೆತನ, ದ್ವೇಷ ಸದಾ ಕಾಲಕ್ಕೆ ಪ್ರಕಟಗೊಂಡಿದೆ. ಆದರೆ ಇಬ್ರಾಹೀಮರು ತಮ್ಮ ತಂದೆಯೊAದಿಗೆ ನಾನು ಖಂಡಿತಾ ನಿಮಗಾಗಿ ಕ್ಷಮೆ ಬೇಡುವೆನು ಮತ್ತು ಅಲ್ಲಾಹನ ಮುಂದೆ ನನಗೆ ನಿಮಗೋಸ್ಕರ ಯಾವುದೇ ವಸ್ತುವಿನ ಅಧಿಕಾರವಿಲ್ಲ ಎಂದು ಹೇಳಿದ ಮಾತಿನ ಹೊರತು. ಓ ನಮ್ಮ ಪ್ರಭು, ನಾವು ನಿನ್ನ ಮೇಲೆ ಭರವಸೆಯನ್ನಿರಿಸಿದ್ದೇವೆ ಮತ್ತೂ ನಿನ್ನೆಡೆಗೆ ಪಶ್ಚಾತ್ತಾಪದಿಂದ ಮರಳುತ್ತೇವೆ ಮತ್ತು ನಿನ್ನೆಡೆಗೇ ಮರಳಲಿಕ್ಕಿರುವುದು.
(5) ಓ ನಮ್ಮ ಪ್ರಭೂ, ನೀನು ನಮ್ಮನ್ನು ಸತ್ಯನಿಷೇಧಿಗಳ ಪಾಲಿಗೆ ಪರೀಕ್ಷಾ ಸಾಧನವನ್ನಾಗಿ ಮಾಡದಿರು, ಮತ್ತು ಓ ನಮ್ಮ ಪ್ರಭು. ನೀನು ನಮ್ಮ ಪಾಪಗಳನ್ನು ಕ್ಷಮಿಸಿಬಿಡು. ನಿಸ್ಸಂಶಯವಾಗಿಯೂ ನೀನು ಪ್ರಬಲನೂ ಸುಜ್ಞಾನಿಯೂ ಆಗಿರುವೆ.
(6) ನಿಜವಾಗಿಯೂ ನಿಮಗೆ (ಅಂದರೆ ನಿಮ್ಮಲ್ಲಿ) ಅಲ್ಲಾಹನ ಹಾಗೂ ಪುನರುತ್ಥಾನದ ದಿನದ ಭೇಟಿಯನ್ನು ನಿರೀಕ್ಷಿಸುವವನಿಗೆ ಇಬ್ರಾಹೀಮ್ ಮತ್ತು ಅವರ ಸಂಗಡಿಗರಲ್ಲಿ ಒಂದು ಉತ್ತಮ ಮಾದರಿ ಇದೆ. ಯಾರಾದರೂ ವಿಮುಖರಾದರೆ ಅಲ್ಲಾಹನು ನಿರಪೇಕ್ಷಕನು ಮತ್ತು ಸ್ತುತ್ಯಾರ್ಹನಾಗಿದ್ದಾನೆ.
(7) ಸದ್ಯದಲ್ಲೇ ಅಲ್ಲಾಹನು ನಿಮ್ಮ ಮತ್ತು ನಿಮ್ಮ ಶತ್ರುಗಳ ನಡುವೆ ಸ್ನೇಹವನ್ನು ಉಂಟುಮಾಡಬಹುದು. ಅಲ್ಲಾಹನು ಸರ್ವಸಾಮರ್ಥ್ಯನೂ ಮತ್ತು ಕ್ಷಮಾಶೀಲನೂ, ಕರುಣಾನಿಧಿಯೂ ಆಗಿದ್ದಾನೆ.
(8) ನಿಮ್ಮೊಂದಿಗೆ ಧರ್ಮದ ವಿಚಾರದಲ್ಲಿ ಯುದ್ಧ ಮಾಡದ ಮತ್ತು ನಿಮ್ಮನ್ನು ನಿಮ್ಮ ಮನೆಗಳಿಂದ ಗಡಿಪಾರುಗೊಳಿಸದವರೊಂದಿಗೆ ಉಪಕಾರ ಮಾಡುವುದರಿಂದಲೂ ಮತ್ತು ನ್ಯಾಯ ನೀತಿ ಪಾಲಿಸುವುದರಿಂದಲೂ ಅಲ್ಲಾಹನು ನಿಮ್ಮನ್ನು ತಡೆಯುವುದಿಲ್ಲ. ಖಂಡಿತವಾಗಿಯೂ ಅಲ್ಲಾಹನು ನ್ಯಾಯ ನೀತಿ ಪಾಲಿಸುವವರನ್ನು ಪ್ರೀತಿಸುತ್ತಾನೆ.
(9) ನಿಜವಾಗಿಯೂ ಅಲ್ಲಾಹನು ನಿಮಗೆ ನಿಮ್ಮೊಂದಿಗೆ ಧರ್ಮದ ವಿಚಾರದಲ್ಲಿ ಯುದ್ಧ ಮಾಡಿರುವ ನಿಮ್ಮನ್ನು ನಿಮ್ಮ ಮನೆಗಳಿಂದ ಗಡಿಪಾರುಗೊಳಿಸಿದ ಹಾಗೂ ನಿಮ್ಮನ್ನು ನಿಮ್ಮ ಮನೆಗಳಿಂದ ಗಡಿಪಾರುಗೊಳಿಸಲು ಸಹಾಯ ನೀಡಿದವರೊಂದಿಗೆ ಸ್ನೇಹ ಬೆಳೆಸುವುದನ್ನು ತಡೆದಿರುವನು. ಅವರೊಂದಿಗೆ ಗೆಳೆತನ ಬೆಳೆಸುವರೇ ಅಕ್ರಮಿಗಳಾಗಿರುತ್ತಾರೆ.
(10) ಓ ಸತ್ಯ ವಿಶ್ವಾಸವಿರಿಸಿದವರೇ, ನಿಮ್ಮ ಬಳಿಗೆ ಸತ್ಯವಿಶ್ವಾಸಿನಿ ಸ್ತ್ರೀಯರು ವಲಸೆ ಬಂದುಬಿಟ್ಟರೆ ನೀವು ಅವರನ್ನು ಪರೀಕ್ಷಿಸಿರಿ ವಾಸ್ತವದಲ್ಲಿ ಅವರ ವಿಶ್ವಾಸದ ಕುರಿತು ಅಲ್ಲಾಹನು ಚೆನ್ನಾಗಿ ಬಲ್ಲನು. ಆದರೆ ನೀವು ಅವರನ್ನು ಸತ್ಯವಿಶ್ವಾಸಿನಿಗಳೆಂದು ಅರಿತುಕೊಂಡಲ್ಲಿ ಅವರನ್ನು ಸತ್ಯನಿಷೇಧಿಗಳ ಬಳಿಗೆ ಹಿಂದಿರುಗಿಸಬೇಡಿರಿ. ಅವರು ಅವರಿಗೆ ಧರ್ಮಸಮ್ಮತವಲ್ಲ ಮತ್ತು ಸತ್ಯ ನಿಷೇಧಿಗಳೂ ಅವರಿಗೆ ಧರ್ಮಸಮ್ಮತರಲ್ಲ ಮತ್ತು ಅವರ ಸತ್ಯನಿಷೇಧಿ ಪತಿಯರು ಮಾಡಿರುವ ಖರ್ಚನ್ನು ನೀವು ಅವರಿಗೆ ಕೊಟ್ಟುಬಿಡಿ, ನೀವು ಆ ಸ್ತ್ರೀಯರನ್ನು ಅವರ ಮಹರ್(ವಧುಧನ) ಪಾವತಿಸಿರಿ, ಅವರೊಂದಿಗೆ ವಿವಾಹ ಮಾಡಿಕೊಳ್ಳುವುದರಲ್ಲಿ ನಿಮ್ಮ ಮೇಲೆ ಯಾವ ದೋಷವೂ ಇರುವುದಿಲ್ಲ, ನೀವು ಸತ್ಯನಿಷೆೆÃಧಿ ಸ್ತ್ರೀಯರನ್ನು ವಿವಾಹ ಬಂಧನದಲ್ಲಿರಿಸಿಕೊಳ್ಳಬೇಡಿರಿ. ಮತ್ತು ನೀವು ಖರ್ಚು ಮಾಡಿರುವುದನ್ನು ಕೇಳಿ ಪಡೆಯಿರಿ ಮತ್ತು ಅವರೂ ಸಹ ತಾವು ಖರ್ಚು ಮಾಡಿರುವುದನ್ನು ಕೇಳಿ ಪಡೆಯಲಿ. ಇದು ಅಲ್ಲಾಹನ ತೀರ್ಪು ಆಗಿದೆ. ಅವನು ನಿಮ್ಮ ನಡುವೆ ತೀರ್ಮಾನ ಮಾಡುತ್ತಾನೆ ಮತ್ತು ಅಲ್ಲಾಹನು ಮಹಾಜ್ಞಾನಿಯೂ ಯುಕ್ತಿಪೂರ್ಣನೂ ಆಗಿದ್ದಾನೆ.
(11) ಮತ್ತು ನಿಮ್ಮ ಪತ್ನಿಯರ ಪೈಕಿ ಯಾರಾದರೂ ನಿಮ್ಮನ್ನು ಬಿಟ್ಟು ಸತ್ಯನಿಷೇಧಿಗಳೆಡೆಗೆ ಹೋದರೆ ಆ ಬಳಿಕ ನಿಮಗೆ ಅದೇ ಪ್ರತಿಕಾರದ ಅವಕಾಶ ಸಿಕ್ಕಿದರೆ, ಆಗ ಯಾರ ಪತ್ನಿಯರು ಹೊರಟುಹೋಗಿದ್ದಾರೋ ಅವರಿಗೆ ಅವರು ಮಾಡಿರುವ ಖರ್ಚನ್ನು ನೀಡಿ ಬಿಡಿರಿ ಮತ್ತು ನೀವು ವಿಶ್ವಾಸವಿರಿಸಿರುವ ಅಲ್ಲಾಹನನ್ನು ಭಯಪಡಿರಿ.
(12) ಓ ಪೈಗಂಬರೇ ಸತ್ಯವಿಶ್ವಾಸಿನಿಯರು ನಿಮ್ಮ ಬಳಿಗೆ ಬಂದು ಅಲ್ಲಾಹನೊಂದಿಗೆ ಯಾರನ್ನು ಸಹಭಾಗಿಯನ್ನಾಗಿ ಮಾಡಲಾರೆವು, ನಾವು ಕಳ್ಳತನ ಮಾಡಲಾರೆವು, ವ್ಯಭಿಚಾರವೆಸಗಲಾರೆವು, ತಮ್ಮ ಮಕ್ಕಳನ್ನು ಕೊಲ್ಲಲಾರೆವು, ಉದ್ದೇಶಪೂರ್ವಕವಾಗಿ ಸುಳ್ಳಾರೋಪವನ್ನು ಹೊರಿಸಲಾರೆವು ಯಾವ ಒಳಿತಿನಲ್ಲೂ ನಿಮ್ಮನ್ನು ಧಿಕ್ಕರಿಸಲಾರೆವು ಎಂಬ ವಿಷಯಗಳ ಕುರಿತು ಅವರು 'ಬೈಅತ್'(ಪ್ರತಿಜ್ಞೆ) ಮಾಡಿದರೆ ನೀವು ಅವರಿಂದ ಬೈಅತ್ಅನ್ನು ಸ್ವೀಕರಿಸಿಕೊಳ್ಳಿರಿ. ಹಾಗೂ ಅವರಿಗಾಗಿ ಅಲ್ಲಾಹನಲ್ಲಿ ಕ್ಷಮೆಯಾಚಿಸಿರಿ. ನಿಶ್ಚಯವಾಗಿಯೂ ಅಲ್ಲಾಹನು ಕ್ಷಮಾಶೀಲನೂ, ಕರುಣಾನಿಧಿಯೂ ಆಗಿರುವನು.
(13) ಓ ಸತ್ಯವಿಶ್ವಾಸಿಗಳೇ, ಅಲ್ಲಾಹನ ಕ್ರೋಧಕ್ಕೆ ಪಾತ್ರರಾದ ಜನತೆಯೊಂದಿಗೆ ನೀವು ಸ್ನೇಹವನ್ನು ಬೆಳೆಸಬೇಡಿರಿ, ಸಮಾಧಿಗಳೊಳಗಿರುವವರ ಕುರಿತು ಸತ್ಯನಿಷೇಧಿಗಳು ನಿರಾಶರಾದಂತೆ ಪರಲೋಕದ ಕುರಿತು ಅವರೂ ನಿರಾಶರಾಗಿದ್ದಾರೆ.