8 - Al-Anfaal ()

|

(1) ಓ ಪೈಗಂಬರÀರೇ ಅವರು ನಿಮ್ಮೊಂದಿಗೆ ಸಮರಾರ್ಜಿತ ಸೊತ್ತಿನ ಬಗ್ಗೆ ಕೇಳುತ್ತಾರೆ. ನೀವು ಹೇಳಿರಿ: ಸಮರಾರ್ಜಿತ ಸೊತ್ತು ಅಲ್ಲಾಹ್ ಮತ್ತು ಸಂದೇಶವಾಹಕರದ್ದಾಗಿದೆ. ಆದ್ದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ಪರಸ್ಪರ ನಿಮ್ಮ ಸಂಬAಧಗಳನ್ನು ಸುಧಾರಣೆ ಮಾಡಿಕೊಳ್ಳಿರಿ ನೀವು ಸತ್ಯವಿಶ್ವಾಸಿಗಳಾಗಿದ್ದರೆ ಅಲ್ಲಾಹನನ್ನೂ ಮತ್ತು ಸಂದೇಶವಾಹಕÀರನ್ನೂ ಅನುಸರಿಸಿರಿ.

(2) ವಾಸ್ತವದಲ್ಲಿ ಸತ್ಯವಿಶ್ವಾಸಿಗಳು ಯಾರೆಂದರೆ ಅಲ್ಲಾಹನ ಪ್ರಸ್ತಾಪ ಅವರ ಮುಂದೆ ಬಂದಾಗ ಅವರ ಹೃದಯಗಳು ಕಂಪಿಸುತ್ತವೆ ಮತ್ತು ಅಲ್ಲಾಹನ ಸೂಕ್ತಿಗಳು ಅವರಿಗೆ ಪಠಿಸಲಾದರೆ ಅವು ಅವರ ವಿಶ್ವಾಸವನ್ನು ಅಧಿಕಗೊಳಿಸುತ್ತವೆ ಮತ್ತು ಅವರೇ ತಮ್ಮ ಪ್ರಭುವಿನ ಮೇಲೆ ಭರವಸೆಯಿಡುವವರು.

(3) ಅವರು ನಮಾಝನ್ನು ಸಂಸ್ಥಾಪಿಸುವವರು ಮತ್ತು ನಾವು ಅವರಿಗೆ ನೀಡಿರುವವುಗಳಿಂದ ಖರ್ಚು ಮಾಡುವವರು ಆಗಿದ್ದಾರೆ.

(4) ಅವರೇ ನಿಜವಾದ ಸತ್ಯವಿಶ್ವಾಸಿಗಳು. ಅವರಿಗೆ ತಮ್ಮ ಪ್ರಭುವಿನ ಬಳಿ ಪದವಿಗಳಿವೆ ಮತ್ತು ಪಾಪವಿಮೋಚನೆಯಿದೆ ಹಾಗೂ ಗೌರವಾರ್ಹವಾದ ಅನ್ನಾಧಾರವಿದೆ.

(5) ಇದು ಸತ್ಯವಿಶ್ವಾಸಿಗಳ ಒಂದು ಪಂಗಡಕ್ಕೆ ಭಾರವೆನಿಸಿದರೂ ನಿಮ್ಮ ಪ್ರಭುವು ನಿಮ್ಮನ್ನು (ಪೈಗಂಬರರನ್ನು) ನಿಮ್ಮ ಮನೆಯಿಂದ ಸತ್ಯದೊಂದಿಗೆ ಹೊರಡಿಸಿದ.

(6) ಅವರು ನೋಡುತ್ತಿರುವಂತೆ ಅವರನ್ನು ಮರಣದೆಡೆಗೆ ಕೊಂಡೊಯ್ಯುತ್ತಿರುವರು ಎಂಬAತೆ ಸತ್ಯವು ಸ್ಪಷ್ಟವಾದ ನಂತರವೂ ಅವರು ಇದರ ಕುರಿತು ನಿಮ್ಮೊಂದಿಗೆ ತರ್ಕಿಸುತ್ತಿದ್ದಾರೆ.

(7) ಎರಡು ತಂಡಗಳ ಪೈಕಿ ಒಂದು ನಿಮ್ಮ ಪಾಲಾಗುವುದೆಂದು ಅಲ್ಲಾಹನು ನಿಮ್ಮೊಂದಿಗೆ ಮಾಡಿದ್ದ ವಾಗ್ದಾನವನ್ನು ಸ್ಮರಿಸಿರಿ ಮತ್ತು ನೀವು ನಿರಾಯುಧವಾದ ತಂಡವು ನಿಮ್ಮ ವಶಕ್ಕೆ ಬರಲೆಂದು ಆಶಿಸಿದ್ದಿರಿ ಮತ್ತು ಅಲ್ಲಾಹನು ತನ್ನ ಆಜ್ಞೆಗಳ ಮೂಲಕ ಸತ್ಯವನ್ನು ಸತ್ಯವನ್ನಾಗಿ ಮಾಡಲೆಂದೂ, ಸತ್ಯನಿಷೇಧಿಗಳನ್ನು ಬುಡಸಮೇತ ಕಿತ್ತೆಸೆಯಲೆಂದೂ ಇಚ್ಛಿಸಿದನು.

(8) ಇದು ಅಪರಾಧಿಗಳು ಅದೆಷ್ಟು ಅಸಹ್ಯಪಟ್ಟರು ಸತ್ಯವನ್ನು ಸತ್ಯವನ್ನಾಗಿಸಲು, ಮಿಥ್ಯವನ್ನು ಮಿಥ್ಯವನ್ನಾಗಿಸಲು ಆಗಿತ್ತು.

(9) ನೀವು ನಿಮ್ಮ ಪ್ರಭುವಿನೊಂದಿಗೆ ಬೇಡಿಕೊಳ್ಳುತ್ತಿದ್ದ ಸಂದರ್ಭವನ್ನು ಸ್ಮರಿಸಿರಿ. ಆಗ ಅವನು ನಿಮ್ಮ ಕರೆಗೆ ಓಗೊಟ್ಟು, ನಾನು ನಿಮಗೆ ನಿರಂತರವಾಗಿ ಒಂದು ಸಾವಿರ ಮಲಕ್‌ಗಳ ಮೂಲಕ ಸಹಾಯ ಮಾಡುವೆನು ಎಂದನು.

(10) ಮತ್ತು ಅಲ್ಲಾಹನ ಈ ಸಹಾಯವನ್ನು ನಿಮಗೆ ಶುಭವಾರ್ತೆಯಾಗಲೆಂದು ಮತ್ತು ನಿಮ್ಮ ಮನಸ್ಸುಗಳಿಗೆ ಶಾಂತಿ ಸಿಗಲೆಂದಾಗಿದೆ ಮತ್ತು ಸಹಾಯವು ಕೇವಲ ಅಲ್ಲಾಹನ ಕಡೆಯಿಂದಿರುತ್ತದೆ. ನಿಸ್ಸಂಶಯವಾಗಿಯು ಅಲ್ಲಾಹನು ಪ್ರತಾಪಶಾಲಿಯೂ, ಯುಕ್ತಿಪೂರ್ಣನೂ ಆಗಿದ್ದಾನೆ.

(11) ಅಲ್ಲಾಹನು ತನ್ನ ವತಿಯಿಂದ ನಿಮಗೆ ಮನಃ ಶಾಂತಿಯನ್ನು ನೀಡಲು ನಿಮ್ಮ ಮೇಲೆ ತೂಕಡಿಕೆಯನ್ನು ಇಳಿಸಿದ್ದನು ಮತ್ತು ನಿಮ್ಮನ್ನು ಶುದ್ಧೀಕರಿಸಲು, ಶೈತಾನಿನ ದುಷ್ಪೆçÃರಣೆಯನ್ನು ತಡೆಯಲು, ನಿಮ್ಮ ಹೃದಯಗಳನ್ನು ಸದೃಢಗೊಳಿಸಲು ಮತ್ತು ತನ್ಮೂಲಕ ನಿಮ್ಮ ಪಾದಗಳನ್ನು ಸ್ಥಿರಗೊಳಿಸಲು ಅವನು ನಿಮ್ಮ ಮೇಲೆ ಆಕಾಶದಿಂದ ನೀರು ಸುರಿಸಿದ್ದ ಸಂದರ್ಭವನ್ನು ಸ್ಮರಿಸಿರಿ.

(12) ನಿಮ್ಮ ಪ್ರಭು ದೇವಚರರಿಗೆ ಹೇಳಿದನು: ನಾನು ನಿಮ್ಮ ಜೊತೆಗಿದ್ದೇನೆ, ಆದ್ದರಿಂದ ನೀವು ಸತ್ಯವಿಶ್ವಾಸಿಗಳಿಗೆ ಧೈರ್ಯ ತುಂಬಿರಿ. ಸದ್ಯವೇ ನಾನು ಸತ್ಯನಿಷೇಧಿಗಳ ಹೃದಯಗಳಲ್ಲಿ ಭಯವನ್ನು ಹಾಕಲಿರುವೆನು. ಇನ್ನು ನೀವು ಅವರ ಕೊರಳುಗಳ ಮೇಲೆ ಹೊಡೆಯಿರಿ ಮತ್ತು ಅವರ ಪ್ರತಿಯೊಂದು ಕೀಲುಗಳ ಮೇಲೆ ಹೊಡೆಯಿರಿ ಎಂದು ಅಲ್ಲಾಹನು ದೇವಚರರಿಗೆ ಆದೇಶ ನೀಡಿದ್ದ ಸಂದರ್ಭವನ್ನು ಸ್ಮರಿಸಿರಿ.

(13) ಈ ಶಿಕ್ಷೆ ಅವರು ಅಲ್ಲಾಹ್ ಮತ್ತು ಅವನ ಸಂದೇಶವಾಹಕರನ್ನು ವಿರೋಧಿಸಿದುವುದರ ಫಲವಾಗಿದೆ. ಯಾರು ಅಲ್ಲಾಹನನ್ನೂ, ಅವನ ಸಂದೇಶವಾಹಕರನ್ನೂ ವಿರೋಧಿಸುತ್ತಾನೋ ನಿಸ್ಸಂಶಯವಾಗಿಯು ಅವರಿಗೆ ಅಲ್ಲಾಹನು ಕಠಿಣವಾಗಿ ಶಿಕ್ಷಿಸುವವನಾಗಿದ್ದಾನೆ.

(14) ಇದು ನಿಮ್ಮ ಐಹಿಕ ಶಿಕ್ಷೆ ಇದನ್ನು ಸವಿಯಿರಿ ಮತ್ತು ಸತ್ಯನಿಷೇಧಿಗಳಿಗೆ ನರಕದ ಶಿಕ್ಷೆಯು ನಿಶ್ಚಯವಾಗಿದೆ ಎಂಬುದನ್ನು ಅರಿತುಕೊಳ್ಳಿರಿ.

(15) ಓ ಸತ್ಯವಿಶ್ವಾಸಿಗಳೇ, ನೀವು ಸತ್ಯನಿಷೇಧಿಗಳನ್ನು ಮುಖಾಮುಖಿಯಾದರೆ ಅವರಿಂದ ಬೆನ್ನು ತಿರುಗಿಸಿ ಓಡಬೇಡಿರಿ.

(16) ಆದರೆ ಯುದ್ಧ ತಂತ್ರ ಬದಲಾವಣೆ ಮಾಡುವುದಕ್ಕಾಗಿ ಅಥವಾ (ತನ್ನ) ತಂಡವನ್ನು ಸೇರುವುದಕ್ಕಾಗಿ ವಿನಃ ಯಾರು ಆ ಸಂದರ್ಭದಲ್ಲಿ ಬೆನ್ನು ತಿರುಗಿಸಿ ಓಡುತ್ತಾನೋ ಅವನು ಅಲ್ಲಾಹನ ಕ್ರೋಧಕ್ಕೆ ಪಾತ್ರನಾಗುವನು ಮತ್ತು ಅವನ ವಾಸಸ್ಥಳವು ನರಕವಾಗಿರುವುದು. ಅದು ಅತ್ಯಂತ ನಿಕೃಷ್ಟ ತಾಣವಾಗಿದೆ!

(17) ನೀವು ಅವರನ್ನು ಕೊಂದಿಲ್ಲ. ವಾಸ್ತವದಲ್ಲಿ ಅವರನ್ನು ಕೊಂದಿದ್ದು ಅಲ್ಲಾಹನು, ನೀವು (ಬಾಣಗಳನ್ನು) ಎಸೆಯಲಿಲ್ಲ, ವಾಸ್ತವದಲ್ಲಿ ಅದನ್ನು ಎಸೆದಿದ್ದು ಅಲ್ಲಾಹನಾಗಿದ್ದಾನೆ. ಇದು ಆ ಮೂಲಕ ವಿಶ್ವಾಸಿಗಳಿಗೆ ಉತ್ತಮ ಪರೀಕ್ಷೆಗೊಳಪಡಿಸಲೆಂದಾಗಿದೆ. ನಿಸ್ಸಂಶಯವಾಗಿಯು ಅಲ್ಲಾಹನು ಚೆನ್ನಾಗಿ ಆಲಿಸುವವನೂ, ಸರ್ವವನ್ನು ಅರಿಯುವವನೂ ಅಗಿದ್ದಾನೆ.

(18) ಇದಾಯಿತು ಇದರ ನಂತರ ಅಲ್ಲಾಹನು ಸತ್ಯನಿಷೇಧಿಗಳ ತಂತ್ರವನ್ನು ದುರ್ಬಲಗೊಳಿಸುವವನಾಗಿದ್ದನು.

(19) ಓ ಸತ್ಯ ನಿಷೇಧಿ ಖುರೈಷರೇ, ನೀವು ಸತ್ಯ ಅಸತ್ಯದ ವಿಜಯವನ್ನು ಬೇಡುವುದಾದರೆ ಇಗೋ ಸತ್ಯದ ವಿಜಯವು ನಿಮ್ಮ ಮುಂದಿದೆ. ಮತ್ತು ನೀವು ಹಿಂದೆ ಸರಿಯುವುದಾದರೆ ಅದು ನಿಮ್ಮ ಪಾಲಿಗೆ ಅತ್ಯುತ್ತಮವಾಗಿದೆ. ನೀವು ಪುನಃ ಅದೇ ಕೃತ್ಯವನ್ನು ಮಾಡುವುದಾದರೆ ನಾವೂ ಸಹ ಅದನ್ನು ಪುನರಾವರ್ತಿಸುವೆವು ಮತ್ತು ನಿಮ್ಮ ಸಂಖ್ಯಾಬಲವು ಎಷ್ಟು ಅಧಿಕವಿದ್ದರು ನಿಮ್ಮ ಯಾವ ಪ್ರಯೋಜನಕ್ಕೂ ಬರಲಾರದು. ವಾಸ್ತವದಲ್ಲಿ ಅಲ್ಲಾಹನು ಸತ್ಯವಿಶ್ವಾಸಿಗಳ ಜೊತೆಗಿದ್ದಾನೆ.

(20) ಓ ಸತ್ಯವಿಶ್ವಾಸಿಗಳೇ, ನೀವು ಅಲ್ಲಾಹ್ ಮತ್ತು ಅವನ ಸಂದೇಶವಾಹಕರನ್ನು ಅನುಸರಿಸಿರಿ ಮತ್ತು ಸತ್ಯಸಂದೇಶವನ್ನು ಆಲಿಸುತ್ತಲೂ, ನೀವು ಅವರಿಂದ ವಿಮುಖರಾಗಬೇಡಿರಿ.

(21) (ಯಹೂದಿಗಳು) ಆಲಿಸದೇ ನಾವು ಆಲಿಸಿದ್ದೇವೆ ಎಂದು ವಾದಿಸುವವರಂತೆ ನೀವಾಗಬೇಡಿರಿ.

(22) ನಿಸ್ಸಂದೇಹವಾಗಿಯೂ ಅಲ್ಲಾಹನ ಬಳಿ ಅತ್ಯಂತ ನಿಕೃಷ್ಟ ಜೀವಿಗಳು ಚಿಂತಿಸಿ ಗ್ರಹಿಸದ ಕಿವುಡರೂ, ಮೂಕರು ಆಗಿದ್ದಾರೆ.

(23) ಮತ್ತು ಅಲ್ಲಾಹನು ಅವರಲ್ಲೇನಾದರೂ ಒಳಿತು ಕಂಡಿದ್ದರೆ ಅವರಿಗೆ ಆಲಿಸುವಂತೆ ಮಾಡುತ್ತಿದ್ದನು. ಇನ್ನು ಅವರಿಗೆ ಆಲಿಸುವಂತೆ ಮಾಡುತ್ತಿದ್ದರು ಅವರು ನಿರ್ಲಕ್ಷಿಸುತ್ತಾ ವಿಮುಖರಾಗುತ್ತಿದ್ದರು.

(24) ಓ ಸತ್ಯವಿಶ್ವಾಸಿಗಳೇ, ಅಲ್ಲಾಹ್ ಮತ್ತು ಸಂದೇಶವಾಹಕರು ನಿಮಗೆ ಜೀವಚೈತನ್ಯ ನೀಡುವ ವಿಷಯದೆಡೆಗೆ ನಿಮ್ಮನ್ನು ಕರೆದಾಗ ನೀವು ಅವರಿಗೆ ಓಗೊಡಿರಿ, ಮನುಷ್ಯನ ಮತ್ತು ಅವನ ಹೃದಯದ ನಡುವೆ ಅಲ್ಲಾಹು ಅಡ್ಡವಾಗಿ ಬಿಡುತ್ತನೆಂದು ನೀವು ಅಲ್ಲಾಹನ ಬಳಿಗೇ ಒಟ್ಟುಗೂಡಿಸಲಾಗುವಿರಿ ಎಂದು ಅರಿತುಕೊಳ್ಳಿರಿ.

(25) ಮತ್ತು ನಿಮ್ಮಲ್ಲಿರುವ ಪಾಪಿಗಳಿಗೆ ಮಾತ್ರ ಸೀಮಿತವಾಗಿರದ ವಿಪತ್ತನ್ನು ನೀವು ಭಯಪಡಿರಿ. ಮತ್ತು ಅಲ್ಲಾಹನು ಕಠಿಣವಾಗಿ ಶಿಕ್ಷಿಸುವವನೆಂಬುದನ್ನು ಅರಿತುಕೊಳ್ಳಿರಿ.

(26) ನೀವು ಭೂಮಿಯಲ್ಲಿ ಅಲ್ಪಸಂಖ್ಯಾತರು, ದುರ್ಬಲರೆಂದು ಪರಿಗಣಿಸಲಾಗು ತ್ತಿದ್ದಂತಹ ಸ್ಥಿತಿಯನ್ನು ಸ್ಮರಿಸಿರಿ. ಜನರು ನಿಮ್ಮನ್ನು ಅಪಹರಿಸಿ ಬಿಡುವರೇನೋ ಎಂಬ ಆಶಂಕೆಯಲ್ಲಿ ನೀವಿದ್ದಿರಿ. ನಂತರ ಅಲ್ಲಾಹನು ನಿಮಗೆ ನೆಲೆಯನ್ನು ಕೊಟ್ಟನು ಮತ್ತು ತನ್ನ ಸಹಾಯದಿಂದ ನಿಮಗೆ ಬೆಂಬಲ ನೀಡಿದನು ಮತ್ತು ನಿಮಗೆ ಉತ್ತಮ ವಸ್ತುಗಳನ್ನು ಕರುಣಿಸಿದನು. ಪ್ರಾಯಶಃ ನೀವು ಕೃತಜ್ಞತೆ ಸಲ್ಲಿಸಬಹುದು.

(27) ಓ ಸತ್ಯವಿಶ್ವಾಸಿಗಳೇ, ನೀವು ಅಲ್ಲಾಹನನ್ನು ಸಂದೇಶವಾಹಕರನ್ನು ವಂಚಿಸಬೇಡಿರಿ ಮತ್ತು ತಿಳಿದೂ ತಿಳಿದೂ ನಿಮ್ಮ ಅಮಾನತ್ತುಗಳಲ್ಲಿ ವಂಚನೆ ಮಾಡಬೇಡಿರಿ.

(28) ನಿಮ್ಮ ಸಂಪತ್ತುಗಳು ಮತ್ತು ನಿಮ್ಮ ಸಂತಾನಗಳು ಒಂದು ಪರೀಕ್ಷಾ ಸಾಧನಗಳೆಂಬುದನ್ನು ಮತ್ತು ಅಲ್ಲಾಹನ ಬಳಿ ಆಗಾಧ ಪ್ರತಿಫಲವಿದೆಯೆಂಬುದನ್ನು ಅರಿತುಕೊಳ್ಳಿರಿ.

(29) ಓ ಸತ್ಯವಿಶ್ವಾಸಿಗಳೇ, ನೀವು ಅಲ್ಲಾಹನನ್ನು ಭಯಪಡುವುದಾದರೆ ಅವನು ನಿಮಗೆ ಸತ್ಯಾಸತ್ಯತೆಯ ಮಾನದಂಡವನ್ನು ನೀಡುವನು, ನಿಮ್ಮ ಪಾಪಗಳನ್ನು ನಿಮ್ಮಿಂದ ದೂರ ಮಾಡುವನು ಮತ್ತು ನಿಮಗೆ ಕ್ಷಮೆ ನೀಡುವನು. ಅಲ್ಲಾಹನು ಮಹಾ ಔದಾರ್ಯವಂತನಾಗಿದ್ದಾನೆ.

(30) ನಿಮ್ಮನ್ನು ಬಂಧಿಸಲು ಅಥವಾ ವಧಿಸಲು ಅಥವಾ ನಿಮ್ಮನ್ನು ನಾಡಿನಿಂದ ಹೊರಗಟ್ಟಲು ನಿಮ್ಮ ವಿರುದ್ಧ ಸತ್ಯನಿಷೇಧಿಗಳು ತಂತ್ರಗಳನ್ನು ಹೂಡುತ್ತಿದ್ದ ಸಂದರ್ಭವನ್ನು ಸ್ಮರಿಸಿರಿ. ಅವರು ತಮ್ಮ ತಂತ್ರವನ್ನು ಹೂಡುತ್ತಿದ್ದರು ಮತ್ತು ಅಲ್ಲಾಹನು ತನ್ನ ತಂತ್ರವನ್ನು ಹೂಡುತ್ತಿದ್ದನು. ತಂತ್ರ ಹೂಡುವವರಲ್ಲಿ ಅಲ್ಲಾಹನು ಅತ್ಯುತ್ತಮನಾಗಿದ್ದಾನೆ.

(31) ಮತ್ತು ಅವರ ಮುಂದೆ ನಮ್ಮ ಸೂಕ್ತಿಗಳನ್ನು ಪಠಿಸಲಾದಾಗ ನಾವು ಆಲಿಸಿದೆವು ಮತ್ತು ನಾವು ಇಚ್ಛಿಸುವುದಾದರೆ ಇದರಂತಿರುವುದನ್ನು ರಚಿಸಿ ಹೇಳುತ್ತಿದ್ದೆವು. ಮತ್ತು ಇದು ಪೂರ್ವಿಕರಿಂದ ಬಂದ ಕಟ್ಟು ಕತೆಗಳಲ್ಲದೆ ಇನ್ನೇನೂ ಅಲ್ಲ ಎಂದು ಅವರು ಹೇಳುತ್ತಾರೆ.

(32) ಓ ಅಲ್ಲಾಹ್, ಈ ಖುರ್‌ಆನ್ ನಿಜವಾಗಿಯು ನಿನ್ನ ಬಳಿಯಿಂದಾಗಿದ್ದರೆ ನೀನು ನಮ್ಮ ಮೇಲೆ ಆಕಾಶದಿಂದ ಕಲ್ಲಿನ ಮಳೆಯನ್ನು ಸುರಿಸು ಅಥವಾ ನಮ್ಮ ಮೇಲೆ ವೇದನಾಜನಕ ಶಿಕ್ಷೆಯನ್ನು ಎರಗಿಸು ಎಂದು ಅವರು ಹೇಳಿದ ಸಂದರ್ಭ.

(33) ನೀವು ಅವರ ನಡುವೆಯಿರುವಾಗ, ಅಲ್ಲಾಹನು ಅವರನ್ನು ಶಿಕ್ಷಿಸುವುದಿಲ್ಲ. ಮತ್ತು ಅವರು ಪಾಪವಿಮೋಚನೆಯನ್ನು ಬೇಡುತ್ತಿರುವಾಗಲೂ ಅಲ್ಲಾಹನು ಅವರಿಗೆ ಶಿಕ್ಷಿಸುವುದಿಲ್ಲ.

(34) ಅಲ್ಲಾಹನು ಅವರಿಗೆ ಶಿಕ್ಷಿಸದಿರಲು ಅವರಲ್ಲಿ ಯಾವ ಅರ್ಹತೆಯಿದೆ? ವಸ್ತುತಃ ಅವರು ಮಸ್ಜಿದುಲ್ ಹರಾಮ್‌ನಿಂದ ಜನರನ್ನು ತಡೆಯುತ್ತಾರೆ. ಅವರು ಅದರ ಮೇಲ್ವಿಚಾರಕರೂ ಅಲ್ಲ. ಭಯಭಕ್ತಿಯುಳ್ಳವರ ಹೊರತು ಇನ್ನಾರೂ ಅದರ ಮೇಲ್ವಿಚಾರಕರಾಗಲಾರರು. ಆದರೆ ಅವರಲ್ಲಿ ಹೆಚ್ಚಿನವರು ಅರಿಯುವುದಿಲ್ಲ.

(35) ಮತ್ತು ಕಾಬಾದ ಬಳಿ ಅವರ ಪ್ರಾರ್ಥನೆಯು ಶಿಳ್ಳೆ ಹೊಡೆಯುವುದು ಮತ್ತು ಚಪ್ಪಾಳೆ ತಟ್ಟುವುದರ ಹೊರತು ಇನ್ನೇನೂ ಇಲ್ಲ. ಆದ್ದರಿಂದ ನೀವು ನಿಮ್ಮ ಸತ್ಯನಿಷೇಧದ ನಿಮಿತ್ತ ಈ ಶಿಕ್ಷೆಯನ್ನು ಸವಿಯಿರಿ.

(36) ನಿಸ್ಸಂಶಯವಾಗಿಯು ಸತ್ಯನಿಷೇಧಿಗಳು ತಮ್ಮ ಸಂಪತ್ತನ್ನು ಅಲ್ಲಾಹನ ಮಾರ್ಗದಿಂದ ತಡೆಯುವುದಕ್ಕಾಗಿ ಖರ್ಚು ಮಾಡುತ್ತಾರೆ. ಹಾಗೆಯೇ ಅವರು ತಮ್ಮ ಸಂಪತ್ತುಗಳನ್ನು ಖರ್ಚು ಮಾಡುತ್ತಲಿರುವರು. ಅನಂತರ ಆ ಸಂಪತ್ತು ಅವರ ಪಾಲಿಗೆ ಖೇದದ ವಸ್ತುವಾಗಿ ಪರಿಣಮಿಸಲಿರುವುದು. ತದನಂತರ ಅವರು ಪರಾಜಿತರಾಗುವರು ಮತ್ತು ಸತ್ಯನಿಷೇಧಿಗಳನ್ನು ನರಕದೆಡೆಗೇ ಒಟ್ಟುಗೂಡಿಸಲಾಗುವುದು.

(37) ಇದು ಅಲ್ಲಾಹನು ಅಶುದ್ಧತೆಯಿಂದ ಶುದ್ಧತೆಯನ್ನು ಬೇರ್ಪಡಿಸಲು, ಅಶುದ್ಧತೆಗಳನ್ನು ಪರಸ್ಪರ ಒಟ್ಟ್ಟಾಗಿಸಲು ಮತ್ತು ಅವರೆಲ್ಲರನ್ನೂ ಒಟ್ಟುಗೂಡಿಸಿ ಅನಂತರ ನರಕದಲ್ಲಿ ಹಾಕಲೆಂದಾಗಿದೆ. ಅವರೇ ನಷ್ಟ ಹೊಂದುವವರಾಗಿದ್ದಾರೆ.

(38) ಅವರು ಸತ್ಯನಿಷೇಧದಿಂದ ಹಿಂದೆ ಸರಿಯುವುದಾದರೆ ಅವರು ಮುಂಚೆ ಮಾಡಿರುವ ಪಾಪಗಳನ್ನು ಅವರಿಗೆ ಕ್ಷಮಿಸಿ ಬಿಡಲಾಗುವುದೆಂದು ನೀವು ಸತ್ಯನಿಷೇಧಿಗಳಿಗೆ ಹೇಳಿರಿ ಮತ್ತು ಅವರು ತಮ್ಮ ಅದೇ ಚಾಳಿಯನ್ನು ಮುಂದುವರಿಸಿದರೆ (ಸತ್ಯನಿಷೇಧಿ) ಪೂರ್ವಿಕರ ಪಾಲಿನ ಶಿಕ್ಷಾಕ್ರಮವು ಇವರ ಮೇಲೂ ಜಾರಿಯಾಗಿರುತ್ತದೆ.

(39) ಓ ಸತ್ಯವಿಶ್ವಾಸಿಗಳೇ ಕ್ಷೆÆÃಭೆಯು ಅಳಿಯುವ ತನಕ ಮತ್ತು ಧರ್ಮವು ಸಂಪೂರ್ಣವಾಗಿ ಅಲ್ಲಾಹನದೇ ಆಗುವ ತನಕ ನೀವು ಅವರೊಂದಿಗೆ ಯುದ್ಧ ಮಾಡಿರಿ. ಇನ್ನು ಅವರು ಸ್ಥಗಿತಗೊಳಿಸುವುದಾದರೆ ಅವರ ಕರ್ಮಗಳನ್ನು ಅಲ್ಲಾಹನು ಚೆನ್ನಾಗಿ ನೋಡುತ್ತಿದ್ದಾನೆ.

(40) ಮತ್ತು ಇನ್ನು ಅವರು ವಿಮುಖತೆ ತೋರುವುದಾದರೆ ಅಲ್ಲಾಹನು ನಿಮ್ಮ ಕಾರ್ಯಸಾಧಕನೆಂಬುದನ್ನು ಖಚಿತವಾಗಿ ಅರಿತುಕೊಳ್ಳಿರಿ. ಅವನು ಉತ್ತಮ ಕಾರ್ಯಸಾಧಕನು ಮತ್ತು ಉತ್ತಮ ಸಹಾಯಕನಾಗಿದ್ದಾನೆ.

(41) ಮತ್ತು ನೀವು ಪಡೆದ ಯಾವುದೇ ಸಮರಾರ್ಜಿತ ಸೊತ್ತಿನ ಐದನೇ ಒಂದAಶವು ಅಲ್ಲಾಹನಿಗಾಗಿ, ಅವರ ಸಂದೇಶವಾಹಕರಿಗಾಗಿ, ನಿಕಟ ಸಂಬAಧಿಕರಿಗಾಗಿ, ಅನಾಥರಿಗಾಗಿ, ನಿರ್ಗತಿಕರಿಗಾಗಿ ಮತ್ತು ಯಾತ್ರಿಕರಿಗಾಗಿ ರುವುದೆಂಬುದನ್ನು ಅರಿತುಕೊಳ್ಳಿರಿ; ನೀವು ಅಲ್ಲಾಹನಲ್ಲೂ, ಸತ್ಯಾಸತ್ಯತೆಗಳ ಇತ್ಯಾರ್ಥದ ದಿನದಲ್ಲೂ ಅರ್ಥಾತ್ ಎರಡು ಬಣಗಳು ಎದುರುಗೊಂಡ ದಿನ ನಾವು ನಮ್ಮ ದಾಸನ ಮೇಲೆ ಅವತೀರ್ಣಗೊಳಸಿರುವುದರಲ್ಲೂ (ಆದೇಶಗಳಲ್ಲೂ) ವಿಶ್ವಾಸವಿಡುವುದಾದರೆ ಅಲ್ಲಾಹನು ಸರ್ವ ಸಂಗತಿಗಳ ಮೇಲೆ ಸಾಮಥÀ್ರ್ಯವುಳ್ಳವನಾಗಿದ್ದಾನೆ.

(42) ನೀವು (ಬದ್ರ್ ಕಣಿವೆಯ) ಸಮೀಪದ ಬದಿಯಲ್ಲಿದ್ದಿರಿ, ಅವರು ದೂರದ ಭಾಗದಲ್ಲಿದ್ದರು ಮತ್ತು ವರ್ತಕ ತಂಡವು ನಿಮಗಿಂತ ಕೆಳಗೆ ಕಡಲ ತೀರದಲ್ಲಿದ್ದಂತಹ ಸಂದರ್ಭ, ನೀವು ಪರಸ್ಪರ ಹೋರಾಟ ಮಾಡಲು ನಿರ್ಧರಿಸುತ್ತಿದ್ದರೆ ಖಂಡಿತವಾಗಿಯು ನೀವು ನಿಶ್ಚಿತ ಸಮಯಕ್ಕೆ ತಲುಪುವುದರಲ್ಲಿ ಭಿನ್ನಾಭಿಪ್ರಾಯ ಹೊಂದುತ್ತಿದ್ದಿರಿ. ಆದರೆ ಅಲ್ಲಾಹನಿಗೆ ನಿಶ್ಚಿತವಾದ ಸಂಗತಿಯನ್ನು ಮಾಡಿಯೇ ಬಿಡಬೇಕಿತ್ತು. ಇದು ನಾಶಹೊಂದಿರುವವರು ಸತ್ಯಾಸತ್ಯೆತೆಯ ಆಧಾರಗಳನ್ನು ನೋಡಿ ನಾಶಹೊಂದಲೆAದೂ, ಬದುಕಿರುವವರು ಸತ್ಯಾಸತ್ಯತೆಗಳ ಆಧಾರಗಳನ್ನು ನೋಡಿ ಬದುಕಲೆಂದಾಗಿದೆ. ಖಂಡಿತವಾಗಿಯು ಅಲ್ಲಾಹನು ಚೆನ್ನಾಗಿ ಆಲಿಸುವವನೂ, ಎಲ್ಲವನ್ನು ಅರಿಯುವವನೂ ಆಗಿದ್ದಾನೆ.

(43) ಓ ಪೈಗಂಬರÀರೇ ಅಲ್ಲಾಹನು ನಿಮಗೆ ನಿಮ್ಮ ಕನಸಿನಲ್ಲಿ ಅವರ ಸಂಖ್ಯೆಯನ್ನು ಕಡಿಮೆ ತೋರಿಸಿದ ಸಂದರ್ಭವನ್ನು ಸ್ಮರಿಸಿರಿ. ಅವರನ್ನು ಬಹುಸಂಖ್ಯಾತರನ್ನಾಗಿ ತೋರಿಸುತ್ತಿದ್ದರೆ ನೀವು ಧೈರ್ಯಗುಂದುತ್ತಿದ್ದಿರಿ ಮತ್ತು ಕಾರ್ಯನಿರ್ವಹಣೆಯಲ್ಲಿ ಪರಸ್ಪರ ಭಿನ್ನಾಭಿಪ್ರಾಯ ತೋರಿಸುತ್ತಿದ್ದಿರಿ. ಆದರೆ ಅಲ್ಲಾಹನು ಕಾಪಾಡಿದನು. ಅವನು ಹೃದಯಗಳಲ್ಲಿರುವ ರಹಸ್ಯಗಳನ್ನು ಚೆನ್ನಾಗಿ ಅರಿಯುವವನಾಗಿದ್ದಾನೆ.

(44) ನೀವು ಪರಸ್ಪರ ಎದುರುಗೊಂಡಾಗ ಅವನು ಅವರನ್ನು ನಿಮ್ಮ ದೃಷ್ಟಿಯಲ್ಲಿ ಅತ್ಯಲ್ಪಸಂಖ್ಯೆಯಲ್ಲಿ ಮತ್ತು ನಿಮ್ಮನ್ನು ಅವರ ದೃಷ್ಟಿಯಲ್ಲಿ ಅಲ್ಪಸಂಖ್ಯೆಯಲ್ಲಿ ತೋರಿಸಿದ ಸಂದರ್ಭವನ್ನು ಸ್ಮರಿಸಿರಿ. ಇದು ಮಾಡಲೇಬೇಕಾದ ಒಂದು ಕಾರ್ಯವನ್ನು ಅಲ್ಲಾಹನು ನೆರವೇರಿಸಲೆಂದಾಗಿತ್ತು. ಮತ್ತು ಸಕಲ ಕಾರ್ಯಗಳು ಅಲ್ಲಾಹುವಿನೆಡೆಗೇ ಮರಳಿಸಲಾಗುವುದು.

(45) ಓ ಸತ್ಯವಿಶ್ವಾಸಿಗಳೇ, ನೀವು ಯಾವುದಾದರೂ ಸೈನ್ಯವನ್ನು ಎದುರುಗೊಂಡರೆ ನೀವು ಸ್ಥಿರವಾಗಿ ನಿಲ್ಲಿರಿ ಮತ್ತು ಅಲ್ಲಾಹನನ್ನು ಅತ್ಯಧಿಕ ಸ್ಮರಿಸಿರಿ ಪ್ರಾಯಶಃ ನೀವು ಯಶಸ್ಸು ಪಡೆಯಬಹುದು.

(46) ನೀವು ಅಲ್ಲಾಹನನ್ನೂ, ಅವನ ಸಂದೇಶವಾಹಕರನ್ನೂ ಅನುಸರಿಸಿರಿ. ಪರಸ್ಪರ ಭಿನ್ನತೆಯನ್ನು ತೋರದಿರಿ. ಅನ್ಯಥಾ ನೀವು ಧೈರ್ಯಗುಂದುವಿರಿ ಮತ್ತು ನಿಮ್ಮ ಸ್ಪೂರ್ತಿಯು ಕಳೆದು ಹೋಗುವುದು ಮತ್ತು ನೀವು ಸಹನೆ ವಹಿಸಿರಿ. ಖಂಡಿತವಾಗಿಯು ಅಲ್ಲಾಹನು ಸಹನಶೀಲರೊಂದಿಗಿದ್ದಾನೆ.

(47) ದುರಹಂಕಾರದೊAದಿಗೂ, ಜನರಿಗೆ ತೋರಿಸುವ ಸಲುವಾಗಿಯೂ ತಮ್ಮ ಮನೆಗಳಿಂದ ಹೊರಟವರಂತೆ ನೀವಾಗಬೇಡಿರಿ. ಅವರು ಜನರನ್ನು ಅಲ್ಲಾಹನ ಮಾರ್ಗದಿಂದ ತಡೆಯುತ್ತಿದ್ದರು. ಅವರು ಮಾಡುತ್ತಿರುವುದೆಲ್ಲವನ್ನು ಅಲ್ಲಾಹನು ಆವರಿಸಿದ್ದಾನೆ

(48) 'ಇಂದು ನಿಮ್ಮ ಮೇಲೆ ಜಯ ಸಾಧಿಸುವವನು ಯಾರೂ ಇಲ್ಲ ಮತ್ತು ನಾನು ನಿಮ್ಮ ಬೆಂಬಲಿಗನಾಗಿರುವೆನು' ಎಂದು ಶೈತಾನನು ಅವರ ಕರ್ಮಗಳನ್ನು ಸುಂದರವಾಗಿ ತೋರಿಸಿಕೊಟ್ಟ ಸಂದರ್ಭವನ್ನು ಸ್ಮರಿಸಿರಿ. ಆದರೆ ಎರಡು ಬಣಗಳು ಎದುರುಗೊಂಡಾಗ ಅವನು ಹಿಮ್ಮೆಟ್ಟಿ ಓಡಿ ಹೋದನು. ಮತ್ತು ಹೇಳಿದನು: ನಾನು ನಿಮ್ಮಿಂದ ಸಂಬAಧ ಮುಕ್ತನಾಗಿದ್ದೇನೆ. ನೀವು ಕಾಣದ್ದನ್ನು ನಾನು ಕಾಣುತ್ತಿದ್ದೇನೆ, ನಾನು ಅಲ್ಲಾಹನನ್ನು ಭಯಪಡುತ್ತೇನೆ ಮತ್ತು ಅಲ್ಲಾಹನು ಕಠಿಣವಾಗಿ ಶಿಕ್ಷಿಸುವವನಾಗಿದ್ದಾನೆ.

(49) ಇವರ ಧರ್ಮವು ಇವರನ್ನು ಮೋಸಗೊಳಿಸಿಬಿಟ್ಟಿದೆ ಎಂದು ಕಪಟವಿಶ್ವಾಸಿಗಳು ಹಾಗೂ ಹೃದಯದಲ್ಲಿ ರೋಗವಿರುವವರು ಹೇಳಿದ ಸಂದರ್ಭವನ್ನು ಸ್ಮರಿಸಿರಿ. ಯಾರಾದರೂ ಅಲ್ಲಾಹನ ಮೇಲೆ ಭರವಸೆಯಿಡುವುದಾದರೆ ನಿಸ್ಸಂದೇಹವಾಗಿಯು ಅಲ್ಲಾಹನು ಪ್ರತಾಪಶಾಲಿಯೂ ಯುಕ್ತಿಪೂರ್ಣನೂ ಆಗಿದ್ದಾನೆ.

(50) ಮಲಕ್‌ಗಳು ಸತ್ಯನಿಷೇಧಿಗಳ ಆತ್ಮಗಳನ್ನು ವಶಪಡಿಸಿಕೊಳ್ಳುವಾಗ ನೀವು ನೋಡಿರುತ್ತಿದ್ದರೆ! ಅವರು ಅವರ ಮುಖಗಳಿಗೂ, ಬೆನ್ನುಗಳಿಗೂ ಹೊಡೆಯುತ್ತಾ ನೀವು ಸುಡುವ ಶಿಕ್ಷೆಯನ್ನು ಸವಿಯಿರಿ. (ಎಂದು ಹೇಳಿದರು)

(51) ಇದು ನಿಮ್ಮ ಕೈಗಳು ಮುಂಚೆಯೇ ಮಾಡಿಟ್ಟ ಆ ಕರ್ಮಗಳ ಕಾರಣದಿಂದಾಗಿದೆ. ನಿಸ್ಸಂಶಯವಾಗಿಯು ಅಲ್ಲಾಹನು ತನ್ನ ದಾಸರ ಮೇಲೆ ಅಕ್ರಮವೆಸಗುವವನಲ್ಲ.

(52) ಇವರ ಸ್ಥಿತಿ ಫಿರ್‌ಔನ್‌ನ ಜನಾಂಗ ಮತ್ತು ಅವರ ಪೂರ್ವಿಕರ ಸ್ಥಿತಿಯಂತೆಯೇ ಅವರು ಅಲ್ಲಾಹನ ದೃಷ್ಟಾಂತಗಳನ್ನು ನಿಷೇಧಿಸಿದರು. ಆಗ ಅಲ್ಲಾಹನು ಅವರ ಪಾಪಗಳ ನಿಮಿತ್ತ ಅವರನ್ನು ಹಿಡಿದುಬಿಟ್ಟನು. ಖಂಡಿತವಾಗಿಯು ಅಲ್ಲಾಹನು ಪ್ರಬಲನೂ, ಕಠಿಣವಾಗಿ ಶಿಕ್ಷಿಸುವವನೂ ಆಗಿದ್ದಾನೆ.

(53) ಇದೇಕೆಂದರೆ, ಒಂದು ಜನತೆಗೆ ಯಾವುದಾದರೂ ಅನುಗ್ರಹವನ್ನು ಕರುಣಿಸಿದ ನಂತರ ಅವರು ತಮ್ಮ ಧಾರ್ಮಿಕ ಸ್ಥಿತಿಯನ್ನು ಸ್ವತಃ ಬದಲಾಯಿಸುವವರೆಗೆ ಅಲ್ಲಾಹನು ಬದಲಾಯಿಸುವುದಿಲ್ಲ ಮತ್ತು ಖಂಡಿತವಾಗಿಯು ಅಲ್ಲಾಹನು ಆಲಿಸುವವನೂ, ಅರಿಯುವವನೂ ಆಗಿದ್ದಾನೆ.

(54) ಫಿರ್‌ಔನ್‌ನ ಜನಾಂಗ ಮತ್ತು ಅವರ ಪೂರ್ವಿಕರ ಸ್ಥಿತಿಯಂತೆಯೇ ಅವರು ತಮ್ಮ ಪ್ರಭುವಿನ ದೃಷ್ಟಾಂತಗಳನ್ನು ನಿರಾಕರಿಸಿದರು. ಆಗ ಅವರ ಪಾಪಗಳ ನಿಮಿತ್ತ ನಾವು ಅವರನ್ನು ನಾಶಗೊಳಿಸಿದೆವು. ಮತ್ತು ಫಿರ್‌ಔನ್‌ನ ಜನರನ್ನು ಮುಳುಗಿಸಿಬಿಟ್ಟೆವು. ಅವರೆಲ್ಲರೂ ಅಕ್ರಮಿಗಳಾಗಿದ್ದರು.

(55) ಖಂಡಿತವಾಗಿಯು ಅಲ್ಲಾಹನ ಬಳಿ ಭೂಮಿಯಲ್ಲಿ ಚಲಿಸುವ ಸಕಲ ಜೀವಿಗಳ ಪೈಕಿ ನಿಕೃಷ್ಟರು ಸತ್ಯವನ್ನು ನಿಷೇಧಿಸುವವರಾಗಿದ್ದಾರೆ. ಅವರು ಸತ್ಯವಿಶ್ವಾಸವಿಡುವವರಲ್ಲ.

(56) ನೀವು ಯಹೂದರೊಂದಿಗೆ ಅನೇಕ ಬಾರಿ ಕರಾರು ಪಡೆದುಕೊಂಡಿರುವಿರಿ. ಆದರೆ ಪ್ರತಿ ಬಾರಿಯೂ ಅವರು ತಮ್ಮ ಕರಾರನ್ನು ಉಲ್ಲಂಘಿಸಿರುವರು. ಅವರು ಜಾಗೃತೆ ವಹಿಸುವುದಿಲ್ಲ.

(57) ನಿಮಗೆ ಕರಾರು ಉಲ್ಲಂಘನೆ ಮಾಡಿದವರು ಯುದ್ಧದಲ್ಲಿ ಸೆರೆ ಸಿಕ್ಕರೆ ಅವರ ಹಿಂದೆ ಹುರಿದುಂಬಿಸುವ ಬೆಂಬಲಿಗರೂ ಸಹ ಪಾಠ ಕಲಿಯುವಂತೆ ತಕ್ಕ ಶಿಕ್ಷೆ ಕೊಡಿ.

(58) ಮತ್ತು ನಿಮಗೆ ಯಾವುದಾದರು ಜನತೆಯಿಂದ ವಂಚನೆಯ ಭಯವಿದ್ದರೆ ಬಹಿರಂಗವಾಗಿ ಅವರ ಕರಾರು ಪತ್ರವನ್ನು ಎಸೆದುಬಿಡಿರಿ. ಅಲ್ಲಾಹನು ವಂಚಕರನ್ನು ಇಷ್ಟಪಡುವುದಿಲ್ಲ.

(59) ತಾವು ಪಾರಾಗಿಬಿಟ್ಟೇವೆಂದು ಸತ್ಯನಿಷೇಧಿಗಳು ಎಂದೂ ಭಾವಿಸದಿರಲಿ. ಖಂಡಿತವಾಗಿಯು ಅವರು ಅಲ್ಲಾಹನನ್ನು ಎಂದಿಗೂ ಸೋಲಿಸಲಾರರು.

(60) ನೀವು ಅವರನ್ನು ಎದುರಿಸಲಿಕ್ಕಾಗಿ ನಿಮ್ಮ ಸಂಪೂರ್ಣ ಶಕ್ತಿಯನ್ನು ಮತ್ತು ಅಶ್ವಸೇನೆಯನ್ನು ಸಿದ್ಧಗೊಳಿಸಿರಿ. ತನ್ಮೂಲಕ ನೀವು ಅಲ್ಲಾಹನ ಶತ್ರುವನ್ನೂ, ನಿಮ್ಮ ಶತ್ರುವನ್ನೂ ಅವರ ಹೊರತು ನಿಮಗೆ ಅರಿವಿಲ್ಲದ ಮತ್ತು ಅಲ್ಲಾಹನಿಗೆ ಅರಿವಿರುವ ಶತ್ರುಗಳನ್ನು ಭಯಭೀತರನ್ನಾಗಿಸಲೆಂದಾಗಿದೆ. ನೀವು ಅಲ್ಲಾಹನ ಮಾರ್ಗದಲ್ಲಿ ಯಾವುದೇ ವಸ್ತುವನ್ನು ವ್ಯಯಿಸಿದರೂ ನಿಮಗೆ ಪರಿಪೂರ್ಣವಾಗಿ ನೀಡಲಾಗುವುದು ಮತ್ತು ನಿಮ್ಮ ಮೇಲೆ ಅನ್ಯಾಯವೆಸಗಲಾಗದು.

(61) ಪೈಗಂಬರರೇ, ಇನ್ನು ಅವರು ಒಪ್ಪಂದದೆಡೆಗೆ ಒಲವು ತೋರುವುದಾದರೆ ನೀವು ಸಹ ಒಪ್ಪಂದದೆಡೆಗೆ ಒಲವು ತೋರಿಸಿರಿ. ಮತ್ತು ಅಲ್ಲಾಹನ ಮೇಲೆ ಭರವಸೆಯಿಡಿರಿ. ಖಂಡಿತವಾಗಿಯು ಅವನು ಚೆನ್ನಾಗಿ ಆಲಿಸುವವನೂ, ಎಲ್ಲವನ್ನು ಅರಿಯುವವನು ಆಗಿದ್ದಾನೆ.

(62) ಇನ್ನು ಅವರು ನಿಮ್ಮನ್ನು ವಂಚಿಸಲು ಬಯಸಿದರೆ ನಿಮಗೆ ಅಲ್ಲಾಹನೇ ಸಾಕು. ಅವನು ತನ್ನ ಸಹಾಯದಿಂದ ಮತ್ತು ವಿಶ್ವಾಸಿಗಳಿಂದ ನಿಮಗೆ ಬೆಂಬಲವನ್ನು ನೀಡಿರುವನು.

(63) ಅವನು ಅವರ ಹೃದಯಗಳನ್ನು ಪರಸ್ಪರ ಬೆಸೆದನು. ಭೂಮಿಯಲ್ಲಿ ಇರುವುದೆಲ್ಲವನ್ನೂ ವ್ಯಯಿಸಿದರೂ ನಿಮಗೆ ಅವರÀ ಹೃದಯಗಳನ್ನು ಪರಸ್ಪರ ಬೆಸೆಯಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಅಲ್ಲಾಹನು ತನ್ನ ಕೃಪೆಯಿಂದ ಅವರ ಹೃದಯಗಳನ್ನು ಪರಸ್ಪರ ಬೆಸೆದನು. ಖಂಡಿತವಾಗಿಯು ಅವನು ಪ್ರತಾಪಶಾಲಿಯು, ಯುಕ್ತಿವಂತನು ಆಗಿದ್ದಾನೆ.

(64) ಓ ಪೈಗಂಬರರೇ, ನಿಮಗೆ ಮತ್ತು ನಿಮ್ಮನ್ನು ಅನುಸರಿಸಿದ ವಿಶ್ವಾಸಿಗಳಿಗೆ ಅಲ್ಲಾಹನೇ ಸಾಕು.

(65) ಓ ಪೈಗಂಬರರೇ, ನೀವು ಸತ್ಯವಿಶ್ವಾಸಿಗಳನ್ನು ಯುದ್ಧಕ್ಕೆ ಹುರಿದುಂಬಿಸಿರಿ. ನಿಮ್ಮ ಪೈಕಿ ಸಹನಾಶೀಲರಾದ ಇಪ್ಪತ್ತು ಮಂದಿ ಇದ್ದರೆ ಅವರು ಇನ್ನೂರು ಮಂದಿಯ ಮೇಲೆ ಜಯ ಸಾಧಿಸುವರು. ಇನ್ನು ನಿಮ್ಮ ಪೈಕಿ ನೂರು ಮಂದಿಯಿದ್ದರೆ ಅವರು ಒಂದು ಸಾವಿರ ಸತ್ಯನಿಷೇಧಿಗಳ ಮೇಲೆ ಜಯ ಸಾಧಿಸುವರು. ಇದೇಕೆಂದರೆ ಅವರು ಅರಿವಿಲ್ಲದ ಜನರಾಗಿದ್ದಾರೆ.

(66) ಇದೀಗ ಅಲ್ಲಾಹನು ನಿಮ್ಮ ಭಾರವನ್ನು ಹಗುರಗೊಳಿಸಿರುವನು. ನಿಮ್ಮಲ್ಲಿ ಬಲಹೀನತೆಯಿದೆಯೆಂಬುದನ್ನು ಅವನು ಚೆನ್ನಾಗಿ ಅರಿತಿದ್ದಾನೆ. ಇನ್ನು ನಿಮ್ಮ ಪೈಕಿ ನೂರು ಮಂದಿ ಸಹನಾಶೀಲರಿದ್ದರೆ ಅವರು ಇನ್ನೂರು ಮಂದಿಯ ಮೇಲೆ ಜಯಸಾಧಿಸುವರು. ಇನ್ನು ನಿಮ್ಮಲ್ಲಿ ಒಂದು ಸಾವಿರ ಜನರಿದ್ದರೆ ಅವರು ಅಲ್ಲಾಹನ ಅಪ್ಪಣೆಯಿಂದ ಎರಡು ಸಾವಿರ ಮಂದಿಯ ಮೇಲೆ ಜಯಸಾಧಿಸುವರು. ಅಲ್ಲಾಹನು ಸಹನಾಶೀಲರೊಂದಿಗಿದ್ದಾನೆ.

(67) ನಾಡಿನಲ್ಲಿ ಮಹಾ ಕ್ರಾಂತಿಯ ಯುದ್ಧ ನಡೆಯುವವರೆಗೂ ಪೈಗಂಬರರ ವಶದಲ್ಲಿ ಕೈದಿಗಳಿರುವುದು ಶೋಭಿಸುವುದಿಲ್ಲ. ನೀವು ಇಹಲೋಕವನ್ನು ಬಯಸುತ್ತೀರಿ ಮತ್ತು ಅಲ್ಲಾಹನು ಪರಲೋಕವನ್ನು ಬಯಸುತ್ತಾನೆ ಮತ್ತು ಅಲ್ಲಾಹನು ಪ್ರತಾಪಶಾಲಿಯೂ, ಯುಕ್ತಿವಂತನೂ ಆಗಿದ್ದಾನೆ.

(68) ಅಲ್ಲಾಹನ ಕಡೆಯಿಂದ ಮೊದಲೇ ಕ್ಷಮೆ ದಾಖಲಾಗಿಲ್ಲದಿರುತ್ತಿದ್ದರೆ ನೀವು ಪಡೆದ ಪರಿಹಾರಧನದ ನಿಮಿತ್ತ ನಿಮಗೆ ಭೀಕರ ಶಿಕ್ಷೆಯು ಸಿಗುತ್ತಿತ್ತು.

(69) ಆದ್ದರಿಂದ ನೀವು ಪಡೆದಿರುವ ಧರ್ಮಸಮ್ಮತ ಹಾಗೂ ಶುದ್ಧವಾದ ಯುದ್ಧಾರ್ಜಿತ ಸೊತ್ತನ್ನು ತಿನ್ನಿರಿ ಮತ್ತು ಅಲ್ಲಾಹನನ್ನು ಭಯಪಡಿರಿ ಖಂಡಿತವಾಗಿಯು ಅಲ್ಲಾಹನು ಅತ್ಯಧಿಕ ಕ್ಷಮಿಸುವವನೂ ಕರುಣಾನಿಧಿಯೂ ಆಗಿದ್ದಾನೆ.

(70) ಓ ಪೈಗಂಬರರೇ ನಿಮ್ಮ ವಶದಲ್ಲಿರುವ ಕೈದಿಗಳೊಂದಿಗೆ ಹೇಳಿರಿ: ಅಲ್ಲಾಹನು ನಿಮ್ಮ ಹೃದಯಗಳಲ್ಲಿ ಒಳಿತೇನಾದರು ಕಂಡರೆ ನಿಮ್ಮಿಂದ ಪಡೆಯಲಾದ ಧನಕ್ಕಿಂತಲೂ ಉತ್ತಮವಾದುದನ್ನು ನಿಮಗೆ ಕರುಣಿಸುವನು ಅನಂತರ ಅವನು ನಿಮ್ಮ ಪಾಪವನ್ನು ಕ್ಷಮಿಸಿಬಿಡುವನು ಮತ್ತು ಅಲ್ಲಾಹನು ಅತ್ಯಧಿಕ ಕ್ಷಮಿಸುವವನೂ ಕರುಣಾನಿಧಿಯೂ ಆಗಿದ್ದಾನೆ.

(71) ಇನ್ನು ಅವರು ನಿಮ್ಮನ್ನು ವಂಚಿಸಲು ಬಯಸಿದ್ದರೆ ಇದಕ್ಕೆ ಮೊದಲು ಅವರು ಅಲ್ಲಾಹನನ್ನು ವಂಚಿಸಿದ್ದಾರೆ. ಅದ್ದರಿಂದ ಅವನು ಅವರನ್ನು ಬಂಧನಕ್ಕೊಳಗಾಗಿಸಿದನು ಮತ್ತು ಅಲ್ಲಾಹನು ಸರ್ವಜ್ಞಾನಿಯೂ, ಯುಕ್ತಿವಂತನೂ ಆಗಿದ್ದಾನೆ.

(72) ಯಾರು ವಿಶ್ವಾಸವಿಟ್ಟು ವಲಸೆ ಹೋದರೋ ಮತ್ತು ತಮ್ಮ ಸಂಪತ್ತುಗಳಿAದ ಹಾಗೂ ತಮ್ಮ ಶರೀರಗಳಿಂದ ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಿದರೋ ಮತ್ತು ಯಾರು ಅವರಿಗೆ ಆಶ್ರಯವನ್ನೂ, ಸಹಾಯವನ್ನೂ ನೀಡಿದರೋ ಅವರೇ ಪರಸ್ಪರ ಆಪ್ತಮಿತ್ರರಾಗಿದ್ದಾರೆ. ಮತ್ತು ಯಾರು ವಿಶ್ವಾಸವಿಟ್ಟರೋ ಆದರೆ ವಲಸೆ ಹೋಗಲಿಲ್ಲವೋ ಅವರು ವಲಸೆ ಹೋಗುವವರೆಗೆ ನಿಮ್ಮ ಮೇಲೆ ಅವರ ಯಾವುದೇ ಹೊಣೆ ಇರುವುದಿಲ್ಲ. ಆದರೆ ಧರ್ಮದ ವಿಷಯದಲ್ಲಿ ಅವರು ನಿಮ್ಮೊಂದಿಗೆ ಸಹಾಯ ಬೇಡಿದರೆ ಅವರಿಗೆ ಸಹಾಯ ನೀಡಬೇಕಾದುದು ನಿಮ್ಮ ಮೇಲೆ ಹೊಣೆಯಾಗಿದೆ. ಆದರೆ ನಿಮ್ಮೊಂದಿಗೆ ಒಪ್ಪಂದ ಮಾಡಿಕೊಂಡವರ ಹೊರತು. ನೀವು ಮಾಡುತ್ತಿರುವುದನ್ನೆಲ್ಲಾ ಅಲ್ಲಾಹನು ಚೆನ್ನಾಗಿ ನೋಡುತ್ತಿದ್ದಾನೆ.

(73) ಸತ್ಯನಿಷೇಧಿಗಳು ಪರಸ್ಪರ ಆಪ್ತಮಿತ್ರರಾಗಿದ್ದಾರೆ. ನೀವೂ ಹಾಗೆಯೇ ಮಾಡದಿದ್ದರೆ (ಪರಸ್ಪರ ಒಂದಾಗದಿದ್ದರೆ) ನಾಡಿನಲ್ಲಿ ಕ್ಷೆÆÃಭೆ ಹಾಗೂ ಭೀಕರ ನಷ್ಟ ಉಂಟಾಗುವುದು.

(74) ಯಾರು ಸತ್ಯವಿಶ್ವಾಸವಿಟ್ಟು ವಲಸೆ ಹೋದರೋ ಮತ್ತು ಅಲ್ಲಾಹನ ಮಾರ್ಗದಲ್ಲಿ ಯುದ್ಧಮಾಡಿರುವರೋ ಮತ್ತು ಯಾರು ವಲಸೆ ಬಂದವರಿಗೆ ಆಶ್ರಯ ಹಾಗೂ ಸಹಾಯ ನೀಡಿರುವರೋ ಅವರೇ ನಿಜವಾದ ಸತ್ಯವಿಶ್ವಾಸಿಗಳಾಗಿದ್ದಾರೆ. ಅವರಿಗೆ ಪಾಪವಿಮೋಚನೆ ಮತ್ತು ಗೌರವಯುತವಾದ ಜೀವನಾಧರ ಇರುವುದು.

(75) ತರುವಾಯ ಯಾರು ವಿಶ್ವಾಸವಿಟ್ಟು ವಲಸೆ ಹೋದರೋ ಮತ್ತು ನಿಮ್ಮ ಜೊತೆಗೆ ಸೇರಿ ಯುದ್ಧ ಮಾಡಿದರೋ ಇವರು ಸಹ ನಿಮ್ಮವರೇ ಆಗಿದ್ದಾರೆ. ಮತ್ತು ಅಲ್ಲಾಹನ ಆದೇಶದಲ್ಲಿ ರಕ್ತ ಸಂಬAಧವಿರುವವರು ಹೆಚ್ಚು ಹಕ್ಕುದಾರರಾಗಿದ್ದಾರೆ. ನಿಸ್ಸಂದೇಹವಾಗಿಯು ಅಲ್ಲಾಹನು ಪ್ರತಿಯೊಂದು ವಿಷಯವನ್ನು ಅರಿಯುವವನಾಗಿದ್ದಾನೆ.